ವಿಜಯಾಪುರ
ವಿಜಯಪುರವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯ ಜಿಲ್ಲಾಡಳಿತ ಮತ್ತು ಪ್ರಮುಖ ನಗರ ವಿಜಯಪುರ. ವಿಜಯಪುರ ನಗರವು ಬೆಂಗಳೂರಿನಿಂದ ಉತ್ತರ - ಪಶ್ಚಿಮಕ್ಕೆ 520 ಕಿ.ಮೀ. ದೂರದಲ್ಲಿದೆ.
ವಿಜಯಪುರ | |
ರಾಜ್ಯ - ಜಿಲ್ಲೆ |
ಕರ್ನಾಟಕ - ವಿಜಯಪುರ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
33.05 km² - 553 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2011) - ಸಾಂದ್ರತೆ |
3,27,427 - 265/ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 586101 - +08352 - KA-28 |
ಚರಿತ್ರೆ
ಬದಲಾಯಿಸಿವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ ಬೀದರನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.
ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.
ಕ್ರಿ.ಶ. 1724ರಲ್ಲಿ ವಿಜಯಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು.
ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲಾದಗಿ ಜಿಲ್ಲೆಗೆ ಈಗಿನ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕಲಾದಗಿ ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು.
ತದನಂತರ ಕ್ರಿ.ಶ. 1956 ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು ಕರ್ನಾಟಕ ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು ಕರ್ನಾಟಕ ರಾಜ್ಯ ಸರ್ಕಾರವು 2013ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ.
ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.
ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ.
ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಪ್ರಮುಖರು.
ವಿಜಯನಗರ ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಶ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು.
ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ.
ಈ ಕಿರು ಬರೆಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರೆಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 20-30 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ.
ಕೋಟೆಯನ್ನು, ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ(ಬ್ಯಾಸ್ಟಿಯನ್)(ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ.
ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ.
ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುತ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ.
ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ.
ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ದೊಡ್ಡ ಗುಮ್ಮಟ. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ.
ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು.
ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು.
ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಏಳ ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.
ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ.
ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು ಕರ್ನಾಟಕದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ.
ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ.
ಚಾರಿತ್ರಿಕ ಘಟನೆಗಳು
ಬದಲಾಯಿಸಿ- 1650 - ವಿಶ್ವ ಪ್ರಖ್ಯಾತ ಗೋಲ ಗುಂಬಜ್ ನಿರ್ಮಾಣ.
- 1884 - ರೈಲು ಚಾಲನೆ ಪ್ರಾರಂಭವಾಯಿತು.
- 1884 - ಜಿಲ್ಲಾ ಕೇಂದ್ರ ಕಲಾದಗಿಯನ್ನು ವಿಜಯಪುರಕ್ಕೆ ಸ್ಥಳಾಂತರಿಸಲಾಯಿತು.
- 1910 - ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಯಿತು.
- 1925 - ವಿಜಯಪುರ ನಗರವು ವಿದ್ಯುತ ಶಕ್ತಿಯನ್ನು ಹೊಂದಿತು.
- 1963 - ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಪ್ರಾರಂಭವಾಯಿತು.
- 1963 - ವಿಜಯಪುರದಲ್ಲಿ ಸೈನಿಕ ಶಾಲೆಯ ಸ್ಥಾಪನೆ.
- 1964 - ಆಲಮಟ್ಟಿ ಆಣೆಕಟ್ಟುಯ ಅಡಿಗಲ್ಲನ್ನು ಅಂದಿನ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರೀಯವರಿಂದ ನೆರವೇರಿಸಲಾಯಿತು.
- 1982 - ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಸ್ಥಾಪನೆಯಾಯಿತು.
- 1984 - ಅಲ್ - ಅಮೀನ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ.
- 1986 - ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ.
- 1987 - ಆಲಮಟ್ಟಿಯಲ್ಲಿ ಜವಾಹರ ನವೋದಯ ವಿದ್ಯಾಲಯಯ ಸ್ಥಾಪನೆ.
- 1991 - ಹಿಟ್ಟಿನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯದ ಸ್ಥಾಪನೆ.
- 1997 - ವಿಜಯಪುರದಲ್ಲಿ ಕೇಂದ್ರೀಯ ವಿದ್ಯಾಲಯವು ಪ್ರಾರಂಭವಾಯಿತು.
- 1997 - ವಿಜಯಪುರ ಜಿಲ್ಲೆಯಲ್ಲಿ ವಿಭಾಗಿಸಿ ಬಾಗಲಕೋಟ ಜಿಲ್ಲೆಯನ್ನು ಮಾಡಲಾಯಿತು.
- 1999 - ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ಸ್ಥಾಪನೆಯಾಯಿತು.
- 2003 - ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು.
- 2004 - ಕರ್ನಾಟಕ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ವಿಭಾಗದಲ್ಲಿ ಶರಣಪ್ಪ ಈಜೇರಿ ಪ್ರಥಮ ಮತ್ತು ವೈದ್ಯಕೀಯ ವಿಭಾಗದಲ್ಲಿ ದ್ವಿತೀಯ ಸ್ಥಾನ.
- 2004 - ಅಮೇರಿಕಾದ ಮೈಕ್ರೋಸಾಪ್ಟ್ ಕಂಪನಿಯ ಒಡೆಯ ಬೀಲ್ ಗೇಟ್ರವರ ತಂದೆಯವರು ವಿಜಯಪುರ ಜಿಲ್ಲೆಯ ಭೇಟಿ.
- 2005 - ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಂದ ಆಲಮಟ್ಟಿ ಆಣೆಕಟ್ಟು ಲೋಕಾರ್ಪಣೆ.
- 2006 - ವಿಜಯಪುರ - ಬಾಗಲಕೋಟ ರೈಲನ್ನು ಮೀಟರ್ ಗೇಜದಿಂದ ಬ್ರಾಡ್ ಗೇಜಗೆ ಪರಿವರ್ತನೆ.
- 2008 - ಕರ್ನಾಟಕ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ಸುನಿಲ ಬಾದಾಮಿ ಪ್ರಥಮ ಸ್ಥಾನ.
- 2010 - ಕೇಂದ್ರೀಯ ಬಸ್ ನಿಲ್ದಾಣದ ಉದ್ಘಾಟನೆ.
- 2010 - ವಿಜಯಪುರ ವಿಮಾನ ನಿಲ್ದಾಣದ ಸ್ಥಾಪನೆ.
- 2010 - ಬಿ.ಎಲ್.ಡಿ.ಈ. ಡೀಮ್ಡ್ ವಿಶ್ವವಿದ್ಯಾಲಯದ ಪ್ರಾರಂಭ.
- 2010 - ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆ.
- 2012 - ಎನ್.ಎಚ್. - 13 ರಾಷ್ತ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥವಾಗಿ ವಿಸ್ತರಣೆ.
- 2013 - ನಗರ ಬಸ್ ಸೇವೆ ಪ್ರಾರಂಭವಾಯಿತು.
- 2013 - ಕರ್ನಾಟಕ ರಾಜ್ಯ ಸರ್ಕಾರದಿಂದ 7 ಹೊಸ ತಾಲ್ಲೂಕುಗಳ ರಚನೆ.
- 2013 - ಸೈನಿಕ ಶಾಲೆಯ ಸುವರ್ಣ ಮಹೋತ್ಸವವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಉದ್ಘಾಟನೆ.
- 2013 - ಕರ್ನಾಟಕ ರಾಜ್ಯ ಸರ್ಕಾರದಿಂದ ವಿಜಯಪುರ ನಗರಸಭೆಯನ್ನು ವಿಜಯಪುರ ಮಹಾನಗರ ಪಾಲಿಕೆಯಾಗಿ ರಚನೆ.
- 2018 - ಕರ್ನಾಟಕ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ಮತ್ತು ವೈದ್ಯಕೀಯ ವಿಭಾಗದಲ್ಲಿ ಶ್ರೀಧರ ದೊಡ್ಡಮನಿ ಪ್ರಥಮ ಸ್ಥಾನ.
ಧಾರ್ಮಿಕ ಕೇಂದ್ರಗಳು
ಬದಲಾಯಿಸಿ- ಅರಕೇರಿ - ಪ್ರಸಿದ್ಧ ಶ್ರೀ ಅಮೋಘ ಸಿದ್ದೇಶ್ವರ ದೇವಾಲಯವಿದೆ
- ಆಲಮೇಲ - ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ.
- ಬಬಲಾದಿ - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ವಂಶ ಪಾರಂಪರ್ಯ ಗದ್ದುಗೆಗಳು ಮತ್ತು ಭವ್ಯವಾದ ಚಂದ್ರಗಿರಿ ಮಠವಿದೆ.
- ಹಣಮಸಾಗರ - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶಾಖಾ ಮಠವಿದೆ.
- ಬಬಲೇಶ್ವರ - ಮಹಾನ್ ತಪಶ್ವಿ ಶ್ರೀ ಗುರುಪಾದೇಶ್ವರ ಮಠವಿದೆ.
- ಬಸವನ ಬಾಗೇವಾಡಿ - ಬಸವಣ್ಣನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
- ಬಂಥನಾಳ - ಸಂಗನ ಬಸವೇಶ್ವರ ಮಠವು ಬಂಥನಾಳ ಶಿವಯೋಗಿಗಳ ಮಠವಿದೆ.
- ಬಸರಕೋಡ - ಅಮರ ಶಿಲ್ಪಿ ಜಕನಾಚಾರಿಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ ಎನ್ನುತ್ತಾರೆ.
- ದೇವರ ಗೆಣ್ಣೂರ - ಶ್ರೀ ಮಹಾಲಕ್ಷ್ಮಿ ದೇವಾಲಯ ಸಕಲ ಭಕ್ತರ ಧಾರ್ಮಿಕ ಸ್ಥಾನವಾಗಿದೆ.
- ಚಡಚಣ - ಶ್ರೀ ಸಂಗಮೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.
- ಹೊರ್ತಿ - ಶ್ರೀ ರೇವಣ ಸಿದ್ಧೇಶ್ವರ ದೇವಾಲಯವು ಪ್ರಸಿದ್ಧ ಮತ್ತು ಭಕ್ತಿ ಸ್ಥಾನವಾಗಿದೆ
- ಹಲಗಣಿ - ಶ್ರೀ ಹಲಗಣೇಶ (ಹನುಮಾನ) ದೇವಾಲಯವು ಭಕ್ತಿಯ ಪರಾಕಾಷ್ಟೆಯಾಗಿದೆ.
- ಕಂಬಾಗಿ - ಶ್ರೀ ಹನುಮಾನ ದೇವಾಲಯವಿದೆ.
- ಯಲಗೂರ - ಶ್ರೀ ಹನುಮಾನ ದೇವಾಲಯವಿದೆ.
- ಇಂಚಗೇರಿ - ಶ್ರೀ ಗುರುಲಿಂಗ ಮಹಾರಾಜರ ಮಠವಿದೆ.
- ಇಂಗಳೇಶ್ವರ - ಬಸವಣ್ಣನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
- ಕಾಖಂಡಕಿ - ದಾಸ ಸಾಹಿತ್ಯದ ಮಹಿಪತಿದಾಸರು ಇಲ್ಲಿ ನೆಲೆಸಿದ್ದರು.
- ಲಚ್ಯಾಣ - ಶ್ರೀ ಸಿದ್ಧಲಿಂಗ ಮಹಾರಾಜರ ಮಠವಿದೆ.
- ನಾಲತವಾಡ - ಮಹಾ ದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ ವಿದೆ.
- ತಾಳಿಕೋಟೆ - ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠವಿದೆ.
- ಉಪ್ಪಲದಿಣ್ಣಿ - ಪ್ರಖ್ಯಾತ ಸಂಗಮನಾಥ ದೇವಾಲಯವಿದೆ.
- ಬೆಳ್ಳುಬ್ಬಿ - ಪ್ರಖ್ಯಾತ ಹಾಗೂ ಐತಿಹಾಸಿಕ ಶ್ರೀ ಮಳೇಮಲ್ಲೇಶ್ವರ ದೇವಾಲಯವಿದೆ.
- ಅಥರ್ಗಾ - ಶ್ರೀ ಕುಲಂಕಾರೇಶ್ವರ ದೇವಾಲಯ ಹಾಗೂ ಶಿಕ್ಷಕರಾದ ಶ್ರೀ ರೇವಣಸಿದ್ದರ ದೇವಾಲಯವಿದೆ.
- ಕನ್ನೂರ - ಸ.ಸ. ಶ್ರೀ ಗಣಪತರಾವ ಮಹಾರಾಜರು ಸ್ಥಾಪಿಸಿರುವ ಶಾಂತಿ ಕುಟೀರ ಆಶ್ರಮವಿದೆ.
- ಸಾರವಾಡ - ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯವಿದೆ.
ಭೌಗೋಳಿಕ ಲಕ್ಷಣಗಳು
ಬದಲಾಯಿಸಿವಿಜಯಪುರ ಜಿಲ್ಲೆಯ ವಿಸ್ತೀರ್ಣ 10541 ಚದರ ಕಿಲೋಮಿಟರಗಳು. ವಿಜಯಪುರ ಜಿಲ್ಲೆಯು ಕಲಬುರಗಿ ಜಿಲ್ಲೆ (ಪುರ್ವಕ್ಕೆ), ರಾಯಚೂರು ಜಿಲ್ಲೆ (ದಕ್ಷಿಣಕ್ಕೆ), ಬಾಗಲಕೋಟೆ ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), ಬೆಳಗಾವಿ ಜಿಲ್ಲೆ (ಪಶ್ಚಿಮಕ್ಕೆ), ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು ಸೋಲ್ಲಾಪುರ ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ.
ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಕೃಷ್ಣಾ ಮತ್ತು ಭೀಮಾ. ವಿಜಯಪುರ ಪಟ್ಟಣವು
|
|
ಈ ಜಿಲ್ಲೆಯು ಕರ್ನಾಟಕ ರಾಜ್ಯದ 5.49% ವಿಸ್ತೀರ್ಣವನ್ನು ಹೊಂದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ 15.50* ಉತ್ತರ ಅಕ್ಷಾಂಶ , 74.54* ಪುರ್ವ ಅಕ್ಷಾಂಶ ಮತ್ತು 17.x 28* ಉತ್ತರ ರೇಖಾಂಶ , 76*x 28 ಪುರ್ವ ರೇಖಾಂಶದಲ್ಲಿ ಬರುತ್ತದೆ. ವಿಜಯಪುರ ಜಿಲ್ಲೆಯ ಸರಾಸರಿ ಸಮುದ್ರ ಮಟ್ಟಕ್ಕಿಂತ 606ಮೀ (1988 ಅಡಿ) ಎತ್ತರವಿದೆ.
ಜಿಲ್ಲೆಯು ಭೌಗೋಳಿವಾಗಿ 10541 ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದೆ.
ಹವಾಮಾನ
ಬದಲಾಯಿಸಿ- ಬೇಸಿಗೆ-ಚಳಿಗಾಲ - ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆ ಕಾಲ - 35 °C - 42 °C.
- ಚಳಿಗಾಲ ಮತ್ತು ಮಳೆಗಾಲ - 18 °C - 32 °C.
- ಮಳೆಗಾಲ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ.
- ಗಾಳಿ - ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ) ಹಾಗೂ 17 ಕಿಮಿ/ಗಂ (ಅಗಸ್ಟ್) ತಿಂಗಳಲ್ಲಿ ಇರುತ್ತದೆ.
- ವಿಜಯಪುರ ಜಿಲ್ಲೆಯ ಉಷ್ಣತೆ ಮತ್ತು ಮಳೆಯ ಪ್ರಮಾಣವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ.
ತಿಂಗಳು | ಜನವರಿ | ಫೆಬ್ರುವರಿ | ಮಾರ್ಚ | ಏಪ್ರಿಲ್ | ಮೇ | ಜೂನ್ | ಜೂಲೈ | ಆಗಷ್ಟ | ಸೆಪ್ಟೆಂಬರ | ಅಕ್ಟೋಬರ | ನವೆಂಬರ | ಡಿಸೆಂಬರ | ಸರಾಸರಿ |
ಸರಾಸರಿ ಹೆಚ್ಚು *C (*F) | 30 (87) | 34 (93) | 37 (100) | 39 (103) | 39 (103) | 34 (93) | 31 (88) | 31 (88) | 32 (89) | 32 (89) | 31 (88) | 30 (87) | 33 (92) |
ಸರಾಸರಿ ಕಡಿಮೆ *C (*F) | 16 (61) | 18 (64) | 22 (72) | 25 (77) | 25 (77) | 23 (73) | 22 (72) | 21 (71) | 22 (72) | 20 (69) | 18 (65) | 16 (61) | 21 (71) |
ಮಳೆ ಮಿಮಿ (Inches) | 8.6 (0.3) | 3.1 (0.1) | 6.1 (0.2) | 10.1 (0.3) | 16.2 (0.6) | 61.1 (2.4) | 77.1 (3.1) | 74.5 (2.9) | 62.1 (2.4) | 51.6 (2.1) | 27.2 (1.1) | 3.5 (0.1) | 400.5 (15.78) |
ಮಳೆ ಮಾಪನ ಕೇಂದ್ರಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 34ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ.
ಸಾಂಸ್ಕೃತಿಕ
ಬದಲಾಯಿಸಿಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ವಿಜಯಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
ಆಹಾರ
ಬದಲಾಯಿಸಿಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಸಾಕ್ಷರತೆ
ಬದಲಾಯಿಸಿವಿಜಯಪುರ ಜಿಲ್ಲೆಯ ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು 7 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 12 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ.
ಕ್ರ.ಸಂ. | ವಿವರಣೆ | 2011 | 2001 |
1 | ಒಟ್ಟು ಜನಸಂಖ್ಯೆ | 2,177,331 | 1,806,918 |
2 | ಪುರುಷರು | 1,111,022 | 926,424 |
3 | ಮಹಿಳೆಯರು | 1,066,309 | 880,494 |
4 | ಪ್ರದೇಶ (ಚ. ಕಿ.ಮೀ) | 10,498 | 10,498 |
5 | ಜನಸಾಂದ್ರತೆ /(ಚ. ಕಿ.ಮೀ) | 207 | 172 |
6 | ಕರ್ನಾಟಕ ಜನಸಂಖ್ಯೆ ಅನುಪಾತದಲ್ಲಿ | 3.56% | 3.42% |
7 | ಸರಾಸರಿ ಸಾಕ್ಷರತೆ | 67.15% | 57.01% |
8 | ಪುರುಷರ ಸಾಕ್ಷರತೆ | 77.21% | 69.94% |
9 | ಮಹಿಳಾ ಸಾಕ್ಷರತೆ | 56.72% | 43.47% |
10 | ಅಕ್ಷರಸ್ಥರು | 1,248,268 | 866,561 |
11 | ಪುರುಷ ಅಕ್ಷರಸ್ಥರು | 730,566 | 543,869 |
12 | ಮಹಿಳಾ ಅಕ್ಷರಸ್ಥರು | 517,702 | 322,692 |
ಪ್ರವಾಸ
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಯಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಶಿಲ್ಪಕಲೆಗೆ ಹೆಸರಾದ ನಮ್ಮ ನಾಡು ದೇಶ - ವಿದೇಶಗಳ ಪ್ರವಾಸಿರನ್ನೂ ನಿರಂತರವಾಗಿ ಆಕರ್ಷಿಸುತ್ತಲಿದೆ. ವಿಶ್ವದ ಅದ್ಭುತಗಳಲ್ಲಿ ಒಂದಾದ ಗೋಲ ಗುಮ್ಮಟ.
ಇದರೊಂದಿಗೆ ಇಸ್ಲಾಂ ವಾಸ್ತುಶಿಲ್ಪ ವೈಭವದ ಭವ್ಯಸ್ಮಾರಕಗಳಾದ ಅರಮನೆಗಳು, ಮಸೀದಿಗಳು, ಕೋಟೆ, ಗಗನ ಮಹಲ್, ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ನೀಡಿದ ಇಬ್ರಾಹಿಮ್ ರೋಜಾ, ಬಾರಾ ಕಮಾನ್, ಸಂಗೀತ ಮಹಲ್, ಆಸರ್ ಮಹಲ್, ಆನಂದ ಮಹಲ್, ಮೆಹತರ ಮಹಲ್, ಜೋಡ ಗುಮ್ಮಟ, ಜುಮ್ಮಾ ಮಸೀದಿ, ಮಲಿಕ್ - ಎ - ಮೈದಾನ ತೋಪು, ಉಪ್ಪಲಿ ಬುರುಜ್, ತಾಜ್ ಬೌಡಿ, ಚಾಂದ ಬೌಡಿ, ಜಲ ಮಂಜಿಲ್.
ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಶಿಲ್ಪಕಲೆಯ ಪುರಾತನ ಕಟ್ಟಡ ಗಳು ಮತ್ತು ಶ್ರೀ ಸಿದ್ದೇಶ್ವರ ದೇವಾಲಯ, 770 ಲಿಂಗಗಳ ಗುಡಿ, ಶಿವಗಿರಿ, ರುಕ್ಮಾಂಗದ ಪಂಡಿತರ ಸಮಾಧಿ, ತೊರವಿ ಲಕ್ಷ್ಮಿ ನರಶಿಂಹ ದೇವಾಲಯ, ಸಹಸ್ರಫಣಿ ಪಾಶ್ವನಾಥಮೂರ್ತಿ ದೇವಾಲಯ ಮುಂತಾದವುಗಳು ವಿಜಯಪುರ ನಗರದಲ್ಲಿ ಉಂಟು.
- ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಗಳು
ಇದು ಮಹಮದ್ ಆದಿಲ್ ಶಾ (ಆಳ್ವಿಕೆ: 1627-1657)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಯಾದ ದಾಬೋಲ್ನ ಯಾಕುತ್ ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ 50 ಮೀ, ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (124 ಅಡಿ) ವ್ಯಾಸ ಹೊಂದಿದೆ. ಅದರಂತೆ 8 ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್).
ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇದರ ಹತ್ತಿರ ವಿಜಯಪುರ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಾಹಾಲಯವು ಇದೆ. ವಿಜಯಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು 'ಗೋಲಗುಮ್ಮಟ'ವೆಂದು ಕೂಡ ಕರೆಯುವರು.
ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ. ವಿಜಯಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. 1490 ರಿಂದ ಕ್ರಿ.ಶ.1696 ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. 44 ಮೀಟರ್ ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸ ದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ.
ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ. ಈ ಮಸೀದಿಯು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸೆ.ಮೀ.ವಿಸ್ತೀರ್ಣ ಹೊಂದಿದೆ. 51 ಮೀಟರ್ ಎತ್ತರವಿದೆ.
- ಇಬ್ರಾಹಿಮ್ ರೋಜಾ
ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: 1580-1627) ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು 1627 ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ ತಾಜ್ ಮಹಲ್ ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ.
ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ಅದರ ಸಂಗಡವೇ ಒಂದು ಮಸೀದಿಯಿದೆ. ತಾಜಮಹಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ, ತಾಜಮಹಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಕ್ರಿ.ಶ.1580ರಿಂದ ಕ್ರಿ.1627 ರ ಕಾಲದಲ್ಲಿ ಮೊಘಲರ ದೊರೆ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ.
ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ.
- ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)
ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನು ಮಹಮದ್ ಬಿನ್ ಹುಸ್ಸೇನ್ ರುಮಿವು 1632 ರಲ್ಲಿ ನಿರ್ಮಿಸಿದ್ದಾನೆ. ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು 14 (4.2 ಮೀಟರ) ಅಡಿ ಉದ್ದ , 1.5 ಮೀಟರ ವ್ಯಾಸ, 55 ಟನ್ ತೂಕ ಹೊಂದಿದೆ. ಇದನ್ನು 17 ನೇ ಶತಮಾನದಲ್ಲಿ ಅಮ್ಮದ ನಗರದಿಂದ 10 ಆನೆಗಳು, 400 ಎತ್ತುಗಳು ಮತ್ತು ನೂರಾರು ಮನುಷ್ಯರು ಎಳೆದು ತಂದಿದ್ದಾರೆ.
ಈ ಫಿರಂಗಿಯನ್ನು ಯುದ್ದಕ್ಕಾಗಿ ಬಳಸಲಾಗುತ್ತಿತ್ತು. ಮಾಲಿಕ್ ಎ ಮೈದಾನ್ ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ. ಇದರ ತೂಕ 55 ಟನ್ನುಗಳು. ಇದರ ಹೊರ ದ್ವಾರವು ಸಿಂಹದ ಆಕಾರದಲ್ಲಿದೆ. ಬಹಳ ನುಣುಪಾದ ಇದರ ಹೊರ ಮೇಲ್ಮೆಯಲ್ಲಿ ಪರ್ಶಿಯನ್ ಮತ್ತ ಅರಾಬಿಕ್ ಭಾಷೆಗಳಲ್ಲಿರುವ ಶಾಸನಗಳಿವೆ.
ವಿಜಯಪುರ ನಗರದಿಂದ 3 ಕಿ.ಮೀ. ದೂರದಲ್ಲಿರುವ ಮಲಿಕ್ ಎ ಮೈದಾನವು ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈ ಮೈದಾನದ ಬಳಿ ಇರುವ ಶೇರಝಾ ಬುರ್ಜ್ ಮೇಲೆ ಇರುವ ಫಿರಂಗಿ ಪ್ರವಾಸಿಗರು ನೋಡಬಹುದು. ಈ ಫಿರಂಗಿಯು ಆ ಕಾಲದ ಮಹತ್ವದ ಕುರುಹಾಗಿದೆ ಎನ್ನಬಹುದು.
ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ. ಈ ದವಡೆ ಹಲ್ಲಿನ ಚಿಕ್ಕ ಆನೆಮರಿಯೊಂದು ಇದ್ದು ಅದನ್ನು ಸಿಂಹವು ತಿನ್ನುತ್ತಿರುವಂತೆ ಕಾಣುತ್ತದೆ. ಈ ಫಿರಂಗಿ ಮೇಲ್ಭಾಗದಲ್ಲಿ ಔರಂಗಜೇಬನ ಕುರಿತು ಕೆತ್ತಲಾಗಿದೆ. 55 ಟನ್ ಗಳಷ್ಟು ತೂಕ ಹೊಂದಿರುವ ಈ ಫಿರಂಗಿಯು 1.5 ಮೀ.ವ್ಯಾಸವನ್ನು ಹೊಂದಿ, 4.45 ಮೀಟರ್ ಉದ್ದವಿದೆ.
ಈ ಫಿರಂಗಿ ಎಂತಹ ಬಿಸಿಲಿದ್ದರೂ ಶಾಖವನ್ನು ಹೀರಿಕೊಳ್ಳದೇ ತಂಪಾಗಿಯೇ ಇರುತ್ತದೆ. ಅಲ್ಲದೇ ಈ ಫಿರಂಗಿಗೆ ಯಾವುದಾದರೂ ವಸ್ತುವಿನಿಂದ ಜೋರಾಗಿ ತಟ್ಟಿದರೆ ಗಂಟೆಯ ಶಬ್ದ ಕೇಳುತ್ತದೆ.
- ಜುಮ್ಮಾ ಮಸೀದಿ
ಜುಮ್ಮಾ ಮಸೀದಿಯನ್ನು 1576ರಲ್ಲಿ ನಿರ್ಮಿಸಿದ್ದಾರೆ. ಇದರ ವಿಸ್ತೀರ್ಣ 10,800 ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ 2500 ಜನ ಪ್ರಾರ್ಥನೆ ಮಾಡ ಬಹು ದಾಗಿದೆ. ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು. ಈ ಮಸೀದಿ ಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ. ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ವಿಜಯಪುರದಲ್ಲಿ ಕ್ರಿ.ಶ.1557-1580 ರಲ್ಲಿ ಐತಿಹಾಸಿಕ ಜುಮ್ಮಾ ಮಸೀದಿಯನ್ನು ಕಟ್ಟಿಸಿದನು.
ತಾಳಿಕೋಟೆಯ ಕದನವನ್ನು ಗೆದ್ದ ಸಂಭ್ರಮಾಚ ರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು. ಸುಮಾರು 10.810 ಸೆ. ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಬೃಹತ್ತಾದ ಮಸೀದಿಯು ಸುಂದರವಾದ ಗುಮ್ಮಟದೊಂದಿಗೆ ಕಮಾನುಗಳನ್ನು ಹೊಂದಿದೆ. ಸುಮಾರು 2250 ಕ್ಕೂ ಹೆಚ್ಚು ಕಪ್ಪು ಕಲ್ಲಿನ ಹೊದಿಕೆಯನ್ನು ನೆಲದ ಮೇಲೆ ಹೊಂದಿ ಸಲಾಗಿದೆ. ಸುಮಾರು 45 ಕ್ಕೂ ಹೆಚ್ಚು ತೊಲೆಗಳ ಸಹಾಯದಿಂದ ನಿರ್ಮಿಸಿ, ಈರುಳ್ಳಿ ಆಕಾರದ ಗುಮ್ಮಟವಿರುವ ಈ ಮಸೀದಿಯಲ್ಲಿ ಬಂಗಾರದ ಹಾಳೆಯಲ್ಲಿ ಬರೆದ ಕುರಾನ್ ನನ್ನು ನೋಡಬಹುದಾಗಿದೆ.
ಇದರಲ್ಲಿ ಒಟ್ಟು 33 ಗುಮ್ಮಟಗಳಿದ್ದು ಮಧ್ಯದ ಮಸೀದಿಯಲ್ಲಿ ನೀರಿನ ಚಿಲುಮೆ ಇದೆ. ಒಟ್ಟು ಇಲ್ಲಿ 12 ಕಮಾನುಗಳಿದ್ದು, ನಂತರ ಮೊಘಲ ದೊರೆ ಔರಂಗಜೇಬನು ಇದಕ್ಕೆ ದೊಡ್ಡ ದ್ವಾರಬಾಗಿಲನ್ನು ನಿರ್ಮಿಸಿದನು.
- ಬಾರಾ ಕಮಾನ್
ಬಾರಾ ಕಮಾನ್ನನ್ನು ಅಲಿ ರೋಜಾ 1672 ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ , ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ. ಈಗಿನ ಕರ್ನಾಟಕ ರಾಜ್ಯ ದಲ್ಲಿರುವ ವಿಜಯಪುರ ಪಟ್ಟಣವು ಈಗ ಜಿಲ್ಲಾ ಪ್ರದೇಶವಾಗಿದೆ.
ಹಿಂದೆ ಮೊಘಲರ್ ದೊರೆ ಎರಡನೇ ಅಲಿ ಆದಿಲ್ ಶಾಹ ನೆನಪಿಗಾಗಿ ಇಲ್ಲಿ ವಿಶಿಷ್ಟ ಬಾರಾಕಮಾನ್ ಎಂಬ ಅದ್ಭುತ ವಾಸ್ತುಶೈಲಿಯನ್ನೊಳಗೊಂಡ ಕಟ್ಟಡವನ್ನು ಕಟ್ಟಿಸಲಾಗಿದೆ. ಅದು ಅರ್ಧ ಕಾಮಗಾರಿಯಿಂದ ಇಂದಿಗೂ ಮುಕ್ತಾಯಗೊಂಡಿಲ್ಲ. ಮೊಘಲ್ ಸಾಮ್ರಾಜ್ಯದ ದೊರೆ ಅಲಿ ಆದಿಲ್ ಶಾಹ ಸಮಾಧಿಯಾಗಿರುವ ಈ ಬಾರಾಕಮಾನ್ 12 ಕಮಾನ್ ನನ್ನು ಸಮಾಧಿ ಸುತ್ತಲೂ ಕಟ್ಟಲಾಗಿದೆ.
ಆದಿಲ್ ಶಾಹ ನ ಸಮಾಧಿಯನ್ನು ವಿಶಿಷ್ಟ 12 ಕಮಾನ್ ಗಳಿಂದ ನಿರ್ಮಿಸಲಾಗಿರುವುದರಿಂದಲೇ ಇದಕ್ಕೆ ಬಾರಾಕಮಾನ್ ಎಂದು ಹೆಸರು ಬಂದಿದೆ. ಈ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಟ್ಟಡದ ನೆರಳು ಗೋಲ ಗುಂಬಜ್ ಮೇಲೆ ಬೀಳುತ್ತದೆ ಎಂಬ ಕಾರಣದಿಂದ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಬಾರಾಕಮಾನ್ ನ ಉಸ್ತುವಾರಿ ನೋಡಿಕೊಳ್ಳುತ್ತಿದೆ.
- ಅಸರ ಮಹಲ್
ಅಸರ ಮಹಲ್ನ್ನು 1646ರಲ್ಲಿ ಮಹಮದ್ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ನ್ಯಾಯಾಲಯದ ಸಂಕೀರ್ಣವಾಗಿ ಉಪಯೋಗಿಸುತ್ತಿದ್ದರು. ಇದರ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸುತ್ತಲೂ 3 ಸಣ್ಣ ಕೆರೆಗಳಿವೆ. ವಿಜಯಪುರ ಪ್ರವಾಸ ಮಾಡುವಾಗ ಮಿಠಾರಿ ಮತ್ತು ಅಸಾರ ಮಹಲ್ ಗಳನ್ನು ಕೂಡ ಪ್ರವಾಸಿಗರು ನೋಡಬಹುದು. ಈ ಸುಂದರ ಮಹಲ್ ಗಳ ಸೌಂದರ್ಯ ಕಣ್ಣಾರೆ ನೋಡಿಯೇ ಸವಿಯಬೇಕು.
ಈ ಸುಂದರ ಕಟ್ಟಡಗಳು ಪ್ರವಾಸಿಗರ ಮನಸೆಳೆಯುತ್ತವೆ. ಈ ಐತಿಹಾಸಿಕ ಕಟ್ಟಡಗಳನ್ನು ಪರ್ಶಿಯನ್ ರ ಶೈಲಿಯಲ್ಲಿ ಕಟ್ಟಿಸಲಾಗಿದ್ದು ಇದರಲ್ಲಿ ನ್ಯಾಯಸ್ಥಾನವನ್ನೂ ಕೂಡ ನಿರ್ಮಿಸಲಾಗಿದೆ. ಬೃಹತ್ತಾದ ನಾಲ್ಕುಗೋಡೆಗಳಿರುವ ಈ ಮಹಲ್ ಗಳಿಗೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಕಟ್ಟಡದ ಒಳಗಡೆ ಮೂರು ಟ್ಯಾಂಕ್ ಗಳಿದ್ದು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಚಿತ್ರಿಸಲಾಗಿದೆ.
ಈ ಕಟ್ಟಡದ ಒಳಗಿರುವ ಒಂದು ಟ್ಯಾಂಕ್ 15 ಅಡಿ ಆಳವಿದೆ. ಉಳಿದೆರಡೂ ಕೂಡ ಅಷ್ಟೇ ಪ್ರಮಾಣದ ಆಳ ಹೊಂದಿವೆ ಎನ್ನಲಾಗಿದೆ. ಪ್ರತಿ ವರ್ಷ ಇಲ್ಲಿ ಉರುಸ್ ಜರುಗುತ್ತದೆ. ಈ ಸಮಯದಲ್ಲಿ ಹಲವಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
- ಗಗನ್ ಮಹಲ್
ಗಗನ್ ಮಹಲ್ನ್ನು 1560 ರಲ್ಲಿ ಅಲಿ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ಸ್ವರ್ಗದ ಅರಮನೆ ಅಥವಾ ದರ್ಬಾರ್ ಹಾಲ್ ಎಂದು ಕರೆಯುತ್ತಿದ್ದರು. ಒಂದು ದೊಡ್ಡದಾದ ಕಮಾನು 20 ಮೀಟರ್ ಉದ್ದವಾಗಿದ್ದು , 17 ಮೀಟರ್ ಎತ್ತರವಾದ ಮತ್ತು ಎರಡು ಚಿಕ್ಕದಾದ ಕಮಾನುಗಳನ್ನು ಮಾಡಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲು ಉಪಯೋಗಿಸುತ್ತಿದ್ದರು.
ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ವಿಜಯಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು.
ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ವಿಜಯಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ.
ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ.
- ಸಂಗೀತ ಮಹಲ್
ಸಂಗೀತ ಮಹಲ್ವು ವಿಜಯಪುರ ನಗರದ ಹೊರ ವಲಯದ ತೊರವಿ ಗ್ರಾಮದಲ್ಲಿದ್ದು ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಕಮಾನ ದ ರಚನೆ ಹೊಂದಿದ ಭವ್ಯ ಕಟ್ಟಡದ ಅವಶೇಷಗಳಿರುವ ಮಹಲ್. ಇದನ್ನು ಎರಡನೇ ಇಬ್ರಾಹಿಮ್ ಆದಿಲ್ಶಾಹಿಯು ಸಂಗೀತ ಕಚೇರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಲುವಾಗಿ ನಿರ್ಮಿಸಿದ್ದ.
ಈಗಲೂ ಜಿಲ್ಲಾಡಳಿತ ನವರಸಪುರ ಸಂಗೀತ ಉತ್ಸವ ಎಂಬ ಜಿಲ್ಲಾ ಮಟ್ಟದ ಉತ್ಸವವನ್ನು ನಡೆಸುತ್ತದೆ. ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ ತೊರವಿ ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ.
ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ವಿಜಯಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ.
- ಉಪ್ಪಲಿ ಬುರಜ್
ಉಪ್ಪಲಿ ಬುರಜ್ನ್ನು 1584 ರಲ್ಲಿ ಹೈದರ ಖಾನ್ನು ನಿರ್ಮಿಸಿದ್ದಾನೆ. ಇದು 24 ಮೀಟರ್ ಎತ್ತರವಾಗಿದ್ದು ಇದರ ಮೇಲೆ 9 ಅಡಿ ಮತ್ತು 8.5 ಅಡಿ ಉದ್ದವಿರುವ ಎರಡು ಫಿರಂಗಿಗಳಿವೆ. ಇದಕ್ಕೆ ಹೈದರ ಬುರಜ್ ಎಂತಲೂ ಕರೆಯುತ್ತಾರೆ. ಇದು 80 ಪುಟ್ ಎತ್ತರವಿರುವ ವಿಶಿಷ್ಟ ಶೈಲಿಯ ಮಿನಾರ್ ಆಗಿದೆ.
ಬೃಹದಾಕಾರದ ಕಲ್ಲುಗಳಿಂದ ನಿರ್ಮಿಸಲಾದ ಈ ಉಪಲಿ ಬುರ್ಜ್ ನ್ನು ಹಳೆಯ ಯುದ್ಧ ಸಾಮಗ್ರಿಗಳನ್ನು ಇಡಲು ಬಳಸಲಾಗುತ್ತಿತ್ತಂತೆ. ಮೊಘಲರು ಇಲ್ಲಿ ಗುಂಡು, ಮದ್ದು, ತೋಪು, ತುಪಾಕಿ ಮತ್ತಿತರ ಯುದ್ಧ ಸಾಮಗ್ರಿಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು.
ಉಪಲಿ ಬುರ್ಜ್ ಹತ್ತಲು ಕಲ್ಲಿನಲ್ಲಿ ನಿರ್ಮಿಸಲಾದ ಮೆಟ್ಟಿಲುಗಳಿದ್ದು, ಮೇಲಿನಿಂದ ಇಡೀ ವಿಜಯಪುರ ಪಟ್ಟಣದ ಸುಂದರ ನೋಟ ಕಾಣುತ್ತದೆ. ಮೊಘಲರು ಹಿಂದೆ ತಮ್ಮ ಪ್ರದೇಶದ ಮೇಲೆ ಬರುವ ವೈರಿಗಳನ್ನು ದೂರದಿಂದಲೇ ಗುರುತಿಸಲು ಉಪಲಿ ಬುರ್ಜನ್ನು ಬಳಸಿಕೊಳ್ಳುತ್ತಿದ್ದರಂತೆ.
- ಚಾಂದ್ (ತಾಜ್) ಬೌಡಿ
ಇದು 20 ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪುರೈಸಲಾಗುತ್ತಿತ್ತು. ಇದನ್ನು ಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದ ಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ. ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾಂದ ಬಾವಡಿ ಎಂದು ಕರೆಯಲಾಗುವ ಸುಂದರ ನೀರಿನ ಬಾವಿ ನೋಡಬಹುದು.
ಕ್ರಿ.ಶ.1557 -1580 ರ ಮೊಘಲ ದೊರೆ ಅಲಿ ಆದಿಲ್ ಶಾಹ್ ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ನೀರಿನ ಬಾವಿ ವಿಜಯಪುರ ಪಟ್ಟಣದ ಪುರ್ವಕ್ಕಿದೆ. ಆದಿಲ್ ಶಾಹನು ತನ್ನ ಹೆಂಡತಿ ಚಾಂದ್ ಬೀಬಿ ಹೆಸರಿನಲ್ಲಿ ನಿರ್ಮಿಸಲಾದ ಈ ನೀರಿನ ಬಾವಿ ಸುಂದರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ.
ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ವಿಜಯಪುರ ನಗರಕ್ಕೆ ವಲಸೆ ಬಂದರು. ಆಗ ಸಾಕಷ್ಟು ಸಂಖ್ಯೆಯಲ್ಲಿ ಬಂದ ವಲಸಿಗರ ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಆದಲಿ ಶಾಹನು ಅನುಕೂಲ ಮಾಡಿಕೊಟ್ಟನು. ಇದೇ ಸಮಯದಲ್ಲಿ 200 ಲಕ್ಷ ಮಿ.ಲೀ. ನೀರು ಸಂಗ್ರಹ ಜನರಿಗೆ ಅನುಕೂಲವಾಗಲೆಂದು 200 ಲಕ್ಷ ಮಿ.ಲೀ. ಸಾಮರ್ಥ್ಯವುಳ್ಳ ದೊಡ್ಡದಾದ ನೀರಿನ ಬಾವಿಯನ್ನು ಕಟ್ಟಿಸಿದನು.
ಈ ನೀರನ ಟ್ಯಾಂಕ್ ನ ಉಸ್ತುವಾರಿ ನೋಡಿಕೊಳ್ಳಲೆಂದೇ ಹಲವಾರು ಆಳುಗಳನ್ನು ನೇಮಿಸಿ ಅವರಿಗೆ ವಸತಿಗೆ ಕೂಡ ಬಾವಿ ಹತ್ತಿರವೇ ವ್ಯವಸ್ಥೆ ಮಾಡಿದ್ದ ಕುರುಹುಗಳು ಇಂದಿಗೂ ಇಲ್ಲಿವೆ. ನಂತರದ ದಿನಗಳಲ್ಲಿ ಇದೇ ತರಹದ ಹಲವಾರು ನೀರು ಸಂಗ್ರಹ ಬಾವಿಗಳನ್ನು ವಿಜಯಪುರ ನಗರದಲ್ಲಿ ನಿರ್ಮಿಸಲಾಯಿತು. ಇಂದಿನ ದಿನಗಳಲ್ಲಿ ಈ ಚಾಂದ ಬಾವಡಿ ಹಲವಾರು ಗಣ್ಯರು ಮತ್ತು ಪ್ರವಾಸಿಗರಿಗೆ ವಿಜಯಪುರದಲ್ಲಿ ವಿಶಿಷ್ಟ ಸುಂದರ ತಾಣವಾಗಿದೆ.
- ಜೋಡ ಗುಮ್ಮಟ
ಇವು ಎರಡು ಅವಳಿ ಗುಮ್ಮಟದ ಆಕಾರದಲ್ಲಿರುವ ಅಷ್ಟಭುಜಾಕೃತಿಯ ಸಮಾಧಿಗಳಾಗಿವೆ. ಇದನ್ನು ಸೇನಾಧಿಕಾರಿಯಾದ ಖಾನ್ ಮಹಮ್ಮದ್ ಮತ್ತು ಅವನ ಆಧ್ಯಾತ್ಮಿಕ ಸಲಹೆಗಾರನಾದ ಅಬ್ದುಲ್ ರಜಾಕ್ ಖಾದ್ರಿ ನಿನಪಿಗಾಗಿ ನಿರ್ಮಿಸಲಾಗಿದೆ.
- ಮೆಹತರ ಮಹಲ್
ಈ ಮಹಲನ್ನು 1620ರಲ್ಲಿ ಮಹಮದ್ ಆದಿಲ್ ಶಾನು ಕಸಗೂಡಿಸುವರಿಗಾಗಿ ನಿರ್ಮಿಸಿದ್ದನು. ಈ ಮಹಲನ್ನು ಇಂಡೋ - ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.
- ಸಾತ್ ಮಂಜಿಲ್
ಹೆಸರೆ ಹೇಳವಂತೆ ಏಳು ಅಂತಸ್ತುಗಳ್ಳುಳ್ಳ ಕಟ್ಟಡವಾಗಿದ್ದು ನೋಡಲು ಸುಂದರವಾಗಿದೆ.
- ಜಲ ಮಂಜಿಲ್
ಜಲ ಮಂಜಿಲ್ನ್ನು ರಾಣಿಯರ ಸ್ನಾನದ ಗೃಹವಾಗಿ ಉಪಯೋಗಿಸುತ್ತಿದ್ದರು.
- ಆನಂದ ಮಹಲ್
ಆನಂದ ಮಹಲ್ನ್ನು ಇಬ್ರಾಹಿಮ್ ಆದಿಲ್ ಷಾರವರು ಕಟ್ಟಿಸಿದ್ದಾರೆ.
- ಬೇಸಿಗೆ ಅರಮನೆ, ಕುಮಟಗಿ
ವಿಜಯಪುರ ನಗರದಿಂದ 20 ಕಿಮೀ ದೂರದ ಕುಮಟಗಿ ಗ್ರಾಮದ ಕೆರೆಯ ಸಮೀಪ ಎರಡು ಮತ್ತು ಕೆರೆಯ ಮಧ್ಯದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಬೇಸಿಗೆ ಅರಮನೆಯಿದೆ.
- ವಿಜಯಪುರ ಕೋಟೆ
ವಿಜಯಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿ ಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ.
ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.ಸುಂದರ ವಾಸ್ತುಶೈಲಿಯಲ್ಲಿ ಕಟ್ಟಿರುವ ಇಲ್ಲಿನ ಕೋಟೆಯನ್ನು ಜನರು ಅರಕಿಲ್ಲಾ ಎಂದೇ ಕರೆಯುತ್ತಾರೆ. ಕ್ರಿ.ಶ. 1556 ರಲ್ಲಿ ಯೂಸೂಫ್ ಆದಿಲ್ ಶಾಹನು ಈ ಕೋಟೆಯನ್ನು ಕಟ್ಟಿಸಿದನು. ಈ ಕೋಟೆಯ ಸುತ್ತಲೂ 100 ಯಾರ್ಡ್ ಗಳಷ್ಟು ಅಗಲವಾದ ಕಂದಕವೊಂದು ನಿರ್ಮಿಸಲಾಗಿದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಕಟ್ಟಿಸಲಾದ ಈ ಕಂದಕವು ಸದ್ಯ ನೀರಿನ ಸಂಗ್ರಹ ಕ್ಕೆ ಬಳಸಲಾಗುತ್ತದೆ.
ಈ ಕೋಟೆಯಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಲವಾರು ಹಿಂದೂ ದೇವಾಲಯಗಳಿವೆ. ಕೋಟೆ ಗೋಡೆಯ ಎತ್ತರವು 30ರಿಂದ 50 ಅಡಿ ಇದೆ. ಕೋಟೆಗುಂಟ ದೊಡ್ಡದಾದ 96 ಬುರ್ಜ್ ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದು 25 ಅಡಿ ಅಗಲವಾಗಿವೆ. ವೈರಿಗಳ ಆಕ್ರಮಣದ ಸಮಯದಲ್ಲಿ ವಿಜಯಪುರದ ಮೊಘಲರು ಈ ಕೋಟೆಯನ್ನು ಬಳಸುತ್ತಿದ್ದರು.
ಹಲವಾರು ಪಾಳುಬಿದ್ದ ಸ್ಮಾರಕಗಳು ಈ ಕೋಟೆಯಲ್ಲಿದ್ದು, ಹಳೆಯ ಕಾಲದ ವೈಭವವನ್ನು ನೆನಪಿಗೆ ತರಿಸುತ್ತವೆ. ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಹತ್ವದ ಪಟ್ಟಣವಾಗಿ ವಿಜಯಪುರ ಗುರುತಿಸಿಕೊಂಡಿದೆ. ಆದ್ದರಿಂದಲೇ ಹಲವಾರು ಪ್ರವಾಸಿಗರು ವಿಜಯಪುರದಲ್ಲಿನ ಗಗನ ಮಹಲ್ ಅರಮನೆ, ಸಾತ ಮಂಜಿಲ್, ಬಾರಾ ಕಮಾನ್ ಮತ್ತು ಜಲ ಮಂಜಿಲ್ ಸೇರಿದಂತೆ ಇನ್ನಿತರ ಐತಿಹಾಸಿಕ ಕಟ್ಟಡಗಳನ್ನು ನೋಡಲು ಆಗಮಿಸುತ್ತಾರೆ.
- ನೋಡಬೇಕಾದ ಸ್ಥಳಗಳು
ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಚಾಂದ ಬೌಡಿ, ತಾಜ್ ಬೌಡಿ ಹಾಗೂ ಇಬ್ರಾಹಿಂ ರೋಜಾ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ.
- ಹಿಂದೂ ಶೈಲಿಯ ದೇವಾಲಯಗಳು / ವಾಸ್ತುಶಿಲ್ಪಗಳು
- ಶಿವಗಿರಿ (ಶಿವನ ಬೃಹತ ಪ್ರತಿಮೆ)
ಭಾರತ ದೇಶದ ಮೂರನೇಯ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇದನ್ನು ಶಿವಗಿರಿ ಎಂತಲೂ ಕರೆಯುತ್ತಾರೆ. ಪ್ರತಿಮೆಯು 85(26 ಮೀಟರ್) ಅಡಿ ಎತ್ತರವಾಗಿದ್ದು ಮತ್ತು 1500 ಟನ್ ತೂಕ ಇದ್ದು ಟಿ.ಕೆ.ಪಾಟೀಲ ಬೆನಕಟ್ಟಿ ಚಾರಿಟೇಬಲ್ ಟ್ರಸ್ಟ್, ವಿಜಯಪುರ ವತಿಯಿಂದ ನಿರ್ಮಿಸಲಾಗಿದೆ.
ಇದನ್ನು ಶಿವಮೊಗ್ಗ ಮೂಲದ ಬೆಂಗಳೂರಿನ ವಾಸ್ತುಶಿಲ್ಪಿಗಳಾದ ಪ್ರಶಾಂತ, ಆಚಾರ್ಯ, ರಾಜಶೇಖರ ರಾಜುರವರು ನೀಲನಕ್ಷೆಯನ್ನು ತಯಾರಿಸಿ ಕೇವಲ 13 ತಿಂಗಳಿನಲ್ಲಿ ನಿರ್ಮಿಸಿದ್ದಾರೆ. ಪ್ರತಿಮೆಯ ಕೆಳಗಡೆ ಚಿಕ್ಕ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಒಳಗಡೆ ಗೋಡೆಯ ಮೇಲೆ ಶಿವನ ಚರಿತ್ರೆಯನ್ನು ಬರೆಸಲಾಗಿದೆ.
ಪಕ್ಕದಲ್ಲಿ 18 ಎಕರೆಯಲ್ಲಿ ಅನಾಥಾಲಯ, ವಸತಿ ಶಾಲೆ ಮತ್ತು ಬಸಂತ ಉದ್ಯಾನವನವನ್ನು ನಿರ್ಮಿಸಲಾಗಿದೆ. ಟ್ರಸ್ಟನ ಅಧ್ಯಕ್ಷರಾದ ಶ್ರೀ ಬಸಂತಕುಮಾರ ಪಾಟೀಲರು ಅವರ ತಾಯಿಯ ತುಲಾಭಾರವನ್ನು ಚಿನ್ನದಲ್ಲಿ ಮಾಡಿ(55 ಕೆ.ಜಿ ಚಿನ್ನವು 4.5 ಕೋಟಿ ಬೆಲೆಯಾಗಿತ್ತು) ಅದರಿಂದ ಬಂದ ಹಣದಲ್ಲಿ ಶಿವನ ಬೃಹತ ಪ್ರತಿಮೆಯನ್ನು ನಿರ್ಮಿಸಿ ಅಭಿವೃದ್ದಿಪಡಿಸುತ್ತಿದ್ದಾರೆ.
- ಶ್ರೀ ಸಿದ್ದೇಶ್ವರ ದೇವಾಲಯ
ವಿಜಯಪುರ ನಗರದ ಹೃದಯ ಭಾಗದಲ್ಲಿ ಸ್ಥಾಪಿತವಾಗಿದ್ದು ಪವಿತ್ರ ಹಿಂದೂ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಆಚರಿಸುತ್ತಾರೆ. ಇದೇ ಜಾತ್ರೆಯಲ್ಲಿ ದನಗಳ ಜಾತ್ರೆಯು ಕೂಡ ಜರಗುತ್ತದೆ. ಮಕರ ಸಂಕ್ರಾಂತಿಯ ರಾತ್ರಿಯಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ದು ಸುಡುವುದು ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ದೇವಾಲಯವನ್ನು ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ (ಬಸವಾದಿ ಶರಣರು) ನೆನಪಿಗಾಗಿ ನಿರ್ಮಿಸಲಾಗಿದೆ.
- ತೊರವಿ ಶ್ರೀ ನರಸಿಂಹ ದೇವಾಲಯ
ವಿಜಯಪುರ ನಗರದ ಹೊರಭಾಗದ ತೊರವಿ ಗ್ರಾಮದಲ್ಲಿ ತೊರವಿ ನರಸಿಂಹ ದೇವಾಲಯವಿದೆ. ಕುಮಾರ ವಾಲ್ಮೀಕಿಯು ಇದೇ ದೇವಾಲಯ ದಲ್ಲಿ ತೊರವಿ ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದಾನೆ. ತೊರವಿ ರಾಮಾಯಣ ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ.
ತೊರವಿ ಗ್ರಾಮವು ವಿಜಯಪುರದಿಂದ ಪಶ್ಚಿಮಕ್ಕೆ 6 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಪ್ರಾಚೀನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ದೇವಸ್ಥಾನ ಗುಹಾಂತರ ದೇವಾಲಯದಂತೆ ಗೋಚರಿಸುತ್ತದೆ. ಆಕರ್ಷಕವಾದ ನರಸಿಂಹ ವಿಗ್ರಹ ಗಮನ ಸೆಳೆ ಯುತ್ತದೆ. 15 ನೇ ಶತಮಾನದಲ್ಲಿ ನರಹರಿ ಎಂಬ ಕವಿ, ಕುಮಾರ ವಾಲ್ಮೀಕಿ ಎಂಬ ಹೆಸರಿನಿಂದ ನರಸಿಂಹ ದೇವಸ್ಥಾನದಲ್ಲಿಯೇ ಕುಳಿತು ತೊರವಿ ರಾಮಾಯಣವನ್ನು ರಚಿಸಿದ ಎಂಬ ಪ್ರತೀತಿ ಇದೆ.
- ಸಹಸ್ರ ಫಣಿ ಜೈನಮಂದಿರ
ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿ ಕ್ರಿ.ಶ. 5ನೇ ಶತಮಾನಕ್ಕೆ ಸೇರಿದ ಸಹಸ್ರಫಣಿ ಪಾರ್ಶ್ವನಾಥ ಬಸದಿ ಆಕರ್ಷಕವಾಗಿದೆ. ಈ ಬಸದಿಯು ಚೌಕಾಕಾರವಾಗಿದ್ದು, ಅರೆಮೆರಗುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ.
ದಕ್ಷಿಣದ ಸಣ್ಣ ಪ್ರವೇಶದ್ವಾರವು ಆಯತಾಕಾರದ ಸಭಾಂಗಣಕ್ಕೆ ಒಯ್ದು ಅದು ದೇವಸ್ಥಾನದ ಪಶ್ಚಿಮ ಗೋಡೆಯುದ್ದಕ್ಕೂ ಇರುವ ದೇವಾಲಯದ ಬಾಗಿಲುಗಳವರೆಗೂ ಚಾಚಿಕೊಂಡಿದೆ. ಇಲ್ಲಿ ಮೂರು ಜಿನ ಮೂರ್ತಿಗಳಿದ್ದು, ಮಧ್ಯದಲ್ಲಿಯ ಮೂರ್ತಿ ಸಹಸ್ರಫಣಿ ಪಾರ್ಶ್ವನಾಥರದಾಗಿದೆ. ಪಾರ್ಶ್ವನಾಥನ ತುದಿಯ ಹೆಡೆಗೆ ಹಾಲು ಎರೆದರೆ ಆ ಹಾಲು 1008 ಹೆಡೆಗಳ ಮುಖಾಂತರ ಹರಿದು ಬಂದು, ಪಾರ್ಶ್ವನಾಥನ ಮಸ್ತಕ ಮತ್ತು ಭುಜಗಳ ಮೇಲೆ ಬೀಳುವ ರೀತಿ ವಿಸ್ಮಯವಾಗಿದೆ.
- ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ
ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳವು ವಿಜಯಪುರದಿಂದ ಅಗ್ನೇಯಕ್ಕೆ ೪ ಕಿ.ಮೀ. ಅಂತರದಲ್ಲಿ ಉಕ್ಕಲಿಗೆ ಹೋಗುವ ಮಾರ್ಗದಲ್ಲಿರುವ ಇದೆ. ರುಕ್ಮಾಂಗದ ಪಂಡಿತರು ಆದಿಲ್ ಶಾಹಿ ರಾಜನ ಮಾರ್ಗದರ್ಶಕರು ಮತ್ತು ಗುರುಗಳಾಗಿದ್ದರು.
- ಸಮೀಪದ ಪ್ರವಾಸಿ / ಪ್ರೇಕ್ಷಣೀಯ ಸ್ಥಳಗಳು
ಜನಸಂಖ್ಯೆ
ಬದಲಾಯಿಸಿವಿಜಯಪುರ ಜಿಲ್ಲೆಯ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ಇದೆ. 11 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ವಿಜಯಪುರ ನಗರದ ಜನಸಂಖ್ಯೆಯು 3 ಲಕ್ಷಕ್ಕೂ ಅಧಿಕವಾಗಿದೆ. ಪ್ರತಿಶತ 70%ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 960 ಜನ ಮಹಿಳೆಯರಿದ್ದಾರೆ. ಕರ್ನಾಟಕದಲ್ಲಿ 3.56% ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಾಂದ್ರತೆಯು 2011ನೇ ಜನಗಣತಿಯ ಪ್ರಕಾರ 207 ಜನ ಪ್ರ.ಚ.ಕಿ.ಮೀ. ವಿಜಯಪುರ ಜಿಲ್ಲೆಯು ಒಟ್ಟಾರೆಯಾಗಿ 10,498 ಚ.ಕಿ.ಮೀ ಪ್ರದೇಶವನ್ನು ಹೊಂದಿದೆ.
ಕ್ರ.ಸಂ. | ವಿವರಣೆ | 2011 | 2001 |
1 | ಒಟ್ಟು ಜನಸಂಖ್ಯೆ | 21,77,331 | 18,06,918 |
2 | ಪುರುಷರು | 11,11,022 | 9,26,424 |
3 | ಮಹಿಳೆಯರು | 10,66,309 | 8,80,494 |
4 | ಜನಸಂಖ್ಯಾ ಬೆಳವಣಿಗೆ | 20.50% | 17.51% |
5 | ಪ್ರದೇಶ(ಚ.ಕಿ.ಮೀ) | 10,498 | 10,498 |
6 | ಜನಸಾಂದ್ರತೆ/(ಚ.ಕಿ.ಮೀ) | 207 | 172 |
7 | ಕರ್ನಾಟಕ ಜನಸಂಖ್ಯೆಯ ಅನುಪಾತ | 3.56% | 3.42% |
8 | ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) | 960 | 950 |
9 | ಮಕ್ಕಳ ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) | 931 | 928 |
10 | ಸರಾಸರಿ ಸಾಕ್ಷರತೆ | 67.15% | 57.01% |
11 | ಪುರುಷರ ಸಾಕ್ಷರತೆ | 77.21% | 69.94% |
12 | ಮಹಿಳಾ ಸಾಕ್ಷರತೆ | 56.72% | 43.47% |
13 | ಒಟ್ಟು ಮಕ್ಕಳ ಜನಸಂಖ್ಯೆ (1-6 ವರ್ಷ) | 3,18,406 | 2,86,831 |
14 | ಗಂಡು ಮಕ್ಕಳ ಜನಸಂಖ್ಯೆ (1-6 ವರ್ಷ) | 1,64,856 | 1,48,750 |
15 | ಹೆಣ್ಣು ಮಕ್ಕಳ ಜನಸಂಖ್ಯೆ (1-6 ವರ್ಷ) | 1,53,550 | 1,38,081 |
16 | ಅಕ್ಷರಸ್ಥರು | 12,48,268 | 8,66,561 |
17 | ಪುರುಷ ಅಕ್ಷರಸ್ಥರು | 7,30,566 | 5,43,869 |
18 | ಮಹಿಳಾ ಅಕ್ಷರಸ್ಥರು | 5,17,702 | 3,22,692 |
19 | ಒಟ್ಟು ಮಕ್ಕಳ ಪ್ರಮಾಣ(1-6 ವರ್ಷ) | 14.62% | 15.87% |
20 | ಗಂಡು ಮಕ್ಕಳ ಪ್ರಮಾಣ(1-6 ವರ್ಷ) | 14.84% | 16.06% |
21 | ಹೆಣ್ಣು ಮಕ್ಕಳ ಪ್ರಮಾಣ(1-6 ವರ್ಷ) | 14.40% | 15.68% |
ಧರ್ಮಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ.
ಕ್ರ.ಸಂ. | ಧರ್ಮ | ಪ್ರತಿಶತ |
1 | ಹಿಂದೂ | 65 % |
2 | ಮುಸ್ಲಿಂ | 29 % |
3 | ಜೈನ | 4.6 % |
4 | ಕ್ರೈಸ್ತ | 0.6 % |
5 | ಇತರೆ | 0.4 % |
ಭಾಷೆಗಳು
ಬದಲಾಯಿಸಿವಿಜಯಪುರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ.
ಪ್ರಮುಖ ವ್ಯಕ್ತಿಗಳು
ಬದಲಾಯಿಸಿ
|
|
|
ಸಂಸ್ಕೃತಿ
ಬದಲಾಯಿಸಿಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ.
ಕಲೆ
ಬದಲಾಯಿಸಿಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
ಹಣಕಾಸು
ಬದಲಾಯಿಸಿಜಿಲ್ಲೆಯಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ವಿಜಯಪುರ ನಗರದ ಬಸವನ ಬಾಗೇವಾಡಿ ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ.
ಆರ್ಥಿಕತೆ
ಬದಲಾಯಿಸಿಜಿಲ್ಲೆಯಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.
ವ್ಯಾಪಾರ
ಬದಲಾಯಿಸಿವಿಜಯಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.
ಉದ್ಯೋಗ
ಬದಲಾಯಿಸಿಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬ್ಯಾಂಕುಗಳು
ಬದಲಾಯಿಸಿಜಿಲ್ಲೆಯಲ್ಲಿ ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ
ರಾಷ್ತ್ರೀಕೃತ ಬ್ಯಾಂಕುಗಳು
- ಎಸ್.ಬಿ.ಐ.ಬ್ಯಾಂಕ್ - ವಿಜಯಪುರ(ಆದರ್ಶ ನಗರ, ಜಲನಗರ, ಟ್ರೇಜರಿ ಶಾಖೆ, ಚಾಲುಕ್ಯ ನಗರ, ಬಿ.ಎಲ್.ಡಿ.ಎ. ಆವರಣ, ತೊರವಿ, ರೈಲ್ವೆ ನಿಲ್ದಾಣ), ಆಲಮಟ್ಟಿ ಡ್ಯಾಮ್ ಸೈಟ್, ಬಸರಕೋಡ, ದೇವರ ಹಿಪ್ಪರಗಿ, ಕನ್ನೂರ, ಇಂಡಿ, ಸಿಂದಗಿ, ಬಸವನ ಬಾಗೇವಾಡಿ, ಚಡಚಣ, ಕೊಲ್ಹಾರ,ಚಿತ್ತಾಪುರ, ಮುದ್ದೇಬಿಹಾಳ, ನಿಡಗುಂದಿ, ಕೊಡಗಾನೂರ, ನಿಡೋಣಿ, ತೊರವಿ, ಹಿಟ್ನಳ್ಳಿ, ಕೂಡಗಿ
- ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ - ವಿಜಯಪುರ, ಇಟಗಿ, ಬಸವನ ಬಾಗೇವಾಡಿ, ಕೊಲ್ಹಾರ, ಮಸೂತಿ, ಮುಳವಾಡ, ಮುತ್ತಗಿ, ಉಕ್ಕಲಿ, ನಿಡಗುಂದಿ, ಅರ್ಜುಣಗಿ, ಹೊನವಾಡ, ಹೊನ್ನುಟಗಿ, ಕನಮಡಿ, ಜೈನಾಪುರ, ನಾಗಠಾಣ, ಸಾರವಾಡ, ತಿಕೋಟಾ, ಜಂಬಗಿ, ಬಬಲೇಶ್ವರ, ಸಿಂದಗಿ, ಮಲಘಾಣ, ಭತಗುಣಕಿ, ಧೂಳಖೇಡ, ಇಂಡಿ, ಜಿಗಜಿವಣಿ, ಲೋಣಿ ಬಿ.ಕೆ., ನಾದ ಬಿ.ಕೆ., ಚಡಚಣ, ಆಲೂರ,ಮಿಣಜಗಿ, ತಾಳಿಕೋಟಿ, ಆಲಮೇಲ, ಅಸ್ಕಿ , ಬಳಗಾನೂರ, ಚಾಂದಕವಟೆ,ಚಿಕ್ಕ ರೂಗಿ , ದೇವಣಗಾಂವ, ದೇವರ ನಾವದಗಿ, ಗಬಸಾವಳಗಿ, ಗುಬ್ಬೆವಾಡ, ಗೊಲಗೇರಿ, ಜಲವಾಡ, ಕನ್ನೊಳ್ಳಿ , ಕೊಂಡಗುಳಿ, ಯಂಕಂಚಿ, ಯರಗಲ್ಲ ಬಿ.ಕೆ., ದೇವರಗೆಣ್ಣೂರ, ಮೊರಟಗಿ, ತೊರವಿ, ಗುಣದಾಳ.
- ಸಿಂಡಿಕೇಟ್ ಬ್ಯಾಂಕ್ - ವಿಜಯಪುರ, ಅಥರ್ಗಾ, ಅಗರಖೇಡ, ಬಿಜ್ಜರಗಿ, ಚಡಚಣ, ದೇವರ ಹಿಪ್ಪರಗಿ, ದೇವರ ನಿಂಬರಗಿ, ಹರನಾಳ, ಹಿರೇಮುರಾಳ, ಹೊಸೂರ, ಕಾಳಗಿ, ಹೂವಿನ ಹಿಪ್ಪರಗಿ, ಢವಳಗಿ, ಗೊಳಸಂಗಿ, ಹೊನಗನಹಳ್ಳಿ , ಹೊರ್ತಿ, ಇಂಡಿ, ಕೊರವಾರ, ಲಚ್ಯಾಣ, ಮಮದಾಪುರ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಾಲತವಾಡ, ನಿಂಬಾಳ ಕೆ.ಡಿ., ರೋಣಿಹಾಳ,ಸಿಂದಗಿ, ತಾಳಿಕೋಟಿ, ವಂದಾಲ, ಯಲಗೂರ, ಯಾಳವಾರ, ಕೋಳೂರ, ತೊರವಿ, ಯರಝರಿ.
- ಐ.ಡಿ.ಐ.ಬಿ.ಬ್ಯಾಂಕ್ - ವಿಜಯಪುರ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ
- ಎಸ್.ಬಿ.ಎಮ್.ಬ್ಯಾಂಕ್ - ವಿಜಯಪುರ, ಮುದ್ದೇಬಿಹಾಳ, ಸಿಂದಗಿ, ಬಸವನ ಬಾಗೇವಾಡಿ, ತಾಳಿಕೋಟ
- ಎಸ್.ಬಿ.ಎಚ್.ಬ್ಯಾಂಕ್ - ವಿಜಯಪುರ
- ಕೆನರಾ ಬ್ಯಾಂಕ್ - ವಿಜಯಪುರ, ಮನಗೂಳಿ, ತೆಲಗಿ, ಬಸವನ ಬಾಗೇವಾಡಿ, ಆಲಮೇಲ, ಮುದ್ದೇಬಿಹಾಳ, ಮಸಬಿನಾಳ
- ಕಾರ್ಪೋರೇಶನ್ ಬ್ಯಾಂಕ್ - ವಿಜಯಪುರ, ಸಿಂದಗಿ, ನಿಡಗುಂದಿ, ಕನ್ನೂರ
- ವಿಜಯ ಬ್ಯಾಂಕ್ - ವಿಜಯಪುರ, ಬಬಲೇಶ್ವರ, ಕಲಕೇರಿ, ಬಳ್ಳೊಳ್ಳಿ, ಬೆಳ್ಳುಬ್ಬಿ, ನಿವರಗಿ, ಆಲೂರ
- ಬ್ಯಾಂಕ್ ಆಫ್ ಮಹಾರಾಷ್ಟ್ರ - ವಿಜಯಪುರ, ಮೊರಟಗಿ
- ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ - ವಿಜಯಪುರ, ಸಿಂದಗಿ, ಹಲಸಂಗಿ, ಶಿವಣಗಿ, ತಾಳಿಕೋಟಿ, ಕಾಖಂಡಕಿ
- ಪಂಜಾಬ್ ನ್ಯಾಶನಲ್ ಬ್ಯಾಂಕ್ - ವಿಜಯಪುರ
- ಆಕ್ಸಿಸ್ ಬ್ಯಾಂಕ್ - ವಿಜಯಪುರ
- ಬ್ಯಾಂಕ್ ಆಫ್ ಇಂಡಿಯಾ - ವಿಜಯಪುರ, ಕಂಬಾಗಿ, ಕೊಲ್ಹಾರ, ಮಲಘಾಣ
- ಬ್ಯಾಂಕ್ ಆಫ್ ಬರೋಡ - ವಿಜಯಪುರ, ಆಲಮೇಲ
- ಇಂಡಿಯನ್ ಬ್ಯಾಂಕ್ - ವಿಜಯಪುರ, ಹೊಸೂರ
- ಇಂಡಿಯನ್ ಒವರಸೀಸ್ ಬ್ಯಾಂಕ್ - ವಿಜಯಪುರ
- ದೇನಾ ಬ್ಯಾಂಕ್ - ವಿಜಯಪುರ
- ಆಂಧ್ರ ಬ್ಯಾಂಕ್ - ವಿಜಯಪುರ
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ - ವಿಜಯಪುರ, ಸಾಲೋಟಗಿ, ತಂಗಡಗಿ
- ಅಲಹಾಬಾದ್ ಬ್ಯಾಂಕ್ - ವಿಜಯಪುರ
ಖಾಸಗಿ ಬ್ಯಾಂಕುಗಳು
- ಐ.ಸಿ.ಐ.ಸಿ.ಐ.ಬ್ಯಾಂಕ್ - ವಿಜಯಪುರ, ತಿಕೋಟಾ, ಸಿಂದಗಿ
- ಐ.ಎನ್.ಜಿ ವೈಶ್ಯ ಬ್ಯಾಂಕ್ - ವಿಜಯಪುರ, ಬಸವನ ಬಾಗೇವಾಡಿ, ಇಂಗಳೇಶ್ವರ, ತಡವಲಗಾ, ತಾಂಬಾ, ಇಂಡಿ
- ಎಚ್.ಡಿ.ಎಪ್.ಸಿ.ಬ್ಯಾಂಕ್ - ವಿಜಯಪುರ
- ಇಂಡಸಲ್ಯಾಂಡ್ ಬ್ಯಾಂಕ್ - ವಿಜಯಪುರ
- ಕ್ಯಾತೋಲಿಕ್ ಸಿರಿಯನ್ ಬ್ಯಾಂಕ್ - ವಿಜಯಪುರ
- ಕರ್ನಾಟಕ ಬ್ಯಾಂಕ್ - ವಿಜಯಪುರ, ಆಲಮೇಲ, ತಾಳಿಕೋಟಿ, ಸಿಂದಗಿ
ಸಹಕಾರಿ ಬ್ಯಾಂಕುಗಳು
|
|
ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು
* ಡಿ.ಸಿ.ಸಿ.ಬ್ಯಾಂಕ, ವಿಜಯಪುರ.(ಮುಖ್ಯ ಕಚೇರಿ)
ಅದರಂತೆ 25ಕ್ಕೂ ಹೆಚ್ಚು ಶಾಖಾ ಡಿ.ಸಿ.ಸಿ.ಬ್ಯಾಂಕಗಳು ವಿಜಯಪುರಜಿಲ್ಲೆಯಲ್ಲಿವೆ. ಅವು ಕೆಳಗಿನಂತಿವೆ.
|
ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.)ದ ಕಚೇರಿಗಳು
- ವಿಜಯಪುರ
- ಬಸವನ ಬಾಗೇವಾಡಿ
ಖಜಾನೆ ಕಚೇರಿಗಳು
ವಿಜಯಪುರನಗರದಲ್ಲಿ ಮುಖ್ಯ ಖಜಾನೆ ಕಚೇರಿಯಿದೆ. ಅದರಂತೆ ಉಪಖಜಾನೆ ಕಚೇರಿಗಳು ಈ ಕೆಳಗಿನಂತಿವೆ.
ಆಡಳಿತ
ಬದಲಾಯಿಸಿವಿಜಯಪುರ ಜಿಲ್ಲೆಯೂ ಕರ್ನಾಟಕದ ಬೆಳಗಾವಿ ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಒಳಗೊಂಡಿದೆ. ಇಂಡಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಆಯುಕ್ತರನ್ನು ಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ.
ವಿಜಯಪುರ ಜಿಲ್ಲೆಯ ತಾಲೂಕುಗಳು
ಬದಲಾಯಿಸಿವಿಜಯಪುರ ನಗರಸಭೆ Archived 2016-04-22 ವೇಬ್ಯಾಕ್ ಮೆಷಿನ್ ನಲ್ಲಿ.
ಇಂಡಿ ಪುರಸಭೆ Archived 2016-04-07 ವೇಬ್ಯಾಕ್ ಮೆಷಿನ್ ನಲ್ಲಿ.
ಸಿಂದಗಿ ಪುರಸಭೆ Archived 2017-04-22 ವೇಬ್ಯಾಕ್ ಮೆಷಿನ್ ನಲ್ಲಿ.
ಬಸವನ ಬಾಗೇವಾಡಿ ಪುರಸಭೆ Archived 2016-01-10 ವೇಬ್ಯಾಕ್ ಮೆಷಿನ್ ನಲ್ಲಿ.
ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 7 ಹೊಸ ತಾಲ್ಲೂಕುಗಳನ್ನು ರಚಿಸಿದೆ.
ಹೊಸ ತಾಲ್ಲೂಕುಗಳು
ತಾಳಿಕೋಟ ಪುರಸಭೆ Archived 2016-04-23 ವೇಬ್ಯಾಕ್ ಮೆಷಿನ್ ನಲ್ಲಿ.
ಜಿಲ್ಲೆ | ತಾಲೂಕು | ನಗರ ಸ್ಥಿತಿ |
---|---|---|
ವಿಜಯಪುರ | ||
ವಿಜಯಪುರ | ಮಹಾನಗರ ಪಾಲಿಕೆ | |
ಇಂಡಿ | ಪುರ ಸಭೆ | |
ಮುದ್ದೇಬಿಹಾಳ | ಪುರ ಸಭೆ | |
ಸಿಂದಗಿ | ಪುರ ಸಭೆ | |
ಬಸವನ ಬಾಗೇವಾಡಿ | ಪುರ ಸಭೆ | |
ತಾಳಿಕೋಟಿ | ಪುರ ಸಭೆ | |
ಬಬಲೇಶ್ವರ | ಪಟ್ಟಣ ಪಂಚಾಯಿತಿ | |
ಕೊಲ್ಹಾರ | ಪಟ್ಟಣ ಪಂಚಾಯಿತಿ | |
ನಿಡಗುಂದಿ | ಪಟ್ಟಣ ಪಂಚಾಯಿತಿ | |
ದೇವರ ಹಿಪ್ಪರಗಿ | ಪಟ್ಟಣ ಪಂಚಾಯಿತಿ | |
ಚಡಚಣ | ಪಟ್ಟಣ ಪಂಚಾಯಿತಿ | |
ತಿಕೋಟಾ | ಪಟ್ಟಣ ಪಂಚಾಯಿತಿ |
ಪಟ್ಟಣ ಪಂಚಾಯತಿಗಳು
ಮೀಸಲಾತಿ ವಿವರ
ವಾರ್ಡ ಸಂಖ್ಯೆ | ಮುದ್ದೇಬಿಹಾಳ ಪುರಸಭೆ | ಸಿಂದಗಿ ಪುರಸಭೆ | ತಾಳಿಕೋಟೆ ಪುರಸಭೆ | ಇಂಡಿ ಪುರಸಭೆ | ಬ.ಬಾಗೇವಾಡಿ ಪುರಸಭೆ |
1 | ಹಿಂದುಳಿದ ವರ್ಗ(ಎ)-ಮಹಿಳೆ | ಹಿಂದುಳಿದ ವರ್ಗ(ಎ)-ಮಹಿಳೆ | ಪರಿಶಿಷ್ಟ ಪಂಗಡ | ||
2 | ಸಾಮಾನ್ಯ- ಮಹಿಳೆ | ಪರಿಶಿಷ್ಟ ಜಾತಿ-ಮಹಿಳೆ | ಹಿಂದುಳಿದ ವರ್ಗ(ಎ)-ಮಹಿಳೆ | ||
3 | ಪರಿಶಿಷ್ಟ ಜಾತಿ | ಸಾಮಾನ್ಯ | ಸಾಮಾನ್ಯ | ||
4 | ಹಿಂದುಳಿದ ವರ್ಗ(ಎ) | ಸಾಮಾನ್ಯ ಮಹಿಳೆ | ಹಿಂದುಳಿದ ವರ್ಗ(ಬಿ)-ಮಹಿಳೆ | ||
5 | ಪರಿಶಿಷ್ಟ ಪಂಗಡ | ಹಿಂದುಳಿದ ವರ್ಗ(ಎ) | ಸಾಮಾನ್ಯ | ||
6 | ಸಾಮಾನ್ಯ-ಮಹಿಳೆ | ಸಾಮಾನ್ಯ | |||
7 | ಸಾಮಾನ್ಯ-ಮಹಿಳೆ | ಹಿಂದುಳಿದ ವರ್ಗ(ಎ) | |||
8 | ಪರಿಶಿಷ್ಟ ಜಾತಿ | ಹಿಂದುಳಿದ ವರ್ಗ(ಎ)-ಮಹಿಳೆ | |||
9 | ಹಿಂದುಳಿದ ವರ್ಗ(ಬಿ) | ಸಾಮಾನ್ಯ | |||
10 | ಪರಿಶಿಷ್ಟ ಜಾತಿ-ಮಹಿಳೆ | ಸಾಮಾನ್ಯ ಮಹಿಳೆ | |||
11 | ಹಿಂದುಳಿದ ವರ್ಗ(ಎ)-ಮಹಿಳೆ | ಸಾಮಾನ್ಯ ಮಹಿಳೆ | |||
12 | ಸಾಮಾನ್ಯ | ಹಿಂದುಳಿದ ವರ್ಗ(ಬಿ) | |||
13 | ಸಾಮಾನ್ಯ | ಸಾಮಾನ್ಯ | |||
14 | ಸಾಮಾನ್ಯ | ಸಾಮಾನ್ಯ | |||
15 | ಸಾಮಾನ್ಯ-ಮಹಿಳೆ | ಪರಿಶಿಷ್ಟ ಜಾತಿ ಮಹಿಳೆ | |||
16 | ಹಿಂದುಳಿದ ವರ್ಗ(ಎ)-ಮಹಿಳೆ | ಹಿಂದುಳಿದ ವರ್ಗ(ಎ) | |||
17 | ಸಾಮಾನ್ಯ | ಪರಿಶಿಷ್ಟ ಜಾತಿ | |||
18 | ಸಾಮಾನ್ಯ | ಪರಿಶಿಷ್ಟ ಜಾತಿ | |||
19 | ಸಾಮಾನ್ಯ-ಮಹಿಳೆ | ಸಾಮಾನ್ಯ ಮಹಿಳೆ | |||
20 | ಹಿಂದುಳಿದ ವರ್ಗ(ಎ) | ಸಾಮಾನ್ಯ ಮಹಿಳೆ | |||
21 | ಸಾಮಾನ್ಯ | ಸಾಮಾನ್ಯ | |||
22 | ಹಿಂದುಳಿದ ವರ್ಗ(ಎ) | ಪರಿಶಿಷ್ಟ ಪಂಗಡ | |||
23 | ಸಾಮಾನ್ಯ-ಮಹಿಳೆ | ಸಾಮಾನ್ಯ-ಮಹಿಳೆ |
ತಾಳಿಕೋಟೆ ಪುರಸಭೆ
ವಾರ್ಡ್ ಸಂಖ್ಯೆ 1–, 2–, 3–, 4–, 5–, 6–ಹಿಂದುಳಿದ ವರ್ಗ (ಎ) ಮಹಿಳೆ, 7–ಪರಿಶಿಷ್ಟ ಜಾತಿ, 8–ಸಾಮಾನ್ಯ ಮಹಿಳೆ, 9–ಹಿಂದುಳಿದ ವರ್ಗ (ಬಿ), 10–ಸಾಮಾನ್ಯ ಮಹಿಳೆ, 11–ಸಾಮಾನ್ಯ, 12–13–ಸಾಮಾನ್ಯ ಮಹಿಳೆ. ವಾರ್ಡ್ ಸಂಖ್ಯೆ 14–ಹಿಂದುಳಿದ ವರ್ಗ (ಎ) ಮಹಿಳೆ, 15–ಸಾಮಾನ್ಯ, 16–ಹಿಂದುಳಿದ ವರ್ಗ (ಎ), 17– ಸಾಮಾನ್ಯ, 18–ಹಿಂದುಳಿದ ವರ್ಗ (ಎ), 19–ಪರಿಶಿಷ್ಟ ಜಾತಿ ಮಹಿಳೆ, 20–ಸಾಮಾನ್ಯ ಮಹಿಳೆ, 21–ಸಾಮಾನ್ಯ, 22–ಹಿಂದುಳಿದ ವರ್ಗ (ಎ), 23–ಸಾಮಾನ್ಯ ಮಹಿಳೆ.
ಇಂಡಿ ಪುರಸಭೆ
ವಾರ್ಡ್ ಸಂಖ್ಯೆ 1–ಹಿಂದುಳಿದ ವರ್ಗ (ಬಿ), 2–ಸಾಮಾನ್ಯ ಮಹಿಳೆ, 3–ಪರಿಶಿಷ್ಟ ಜಾತಿ ಮಹಿಳೆ, 4–ಸಾಮಾನ್ಯ ಮಹಿಳೆ, 5, 6–ಹಿಂದುಳಿದ ವರ್ಗ (ಎ) ಮಹಿಳೆ, 7–ಪರಿಶಿಷ್ಟ ಪಂಗಡ, 8–ಸಾಮಾನ್ಯ ಮಹಿಳೆ, 9–ಸಾಮಾನ್ಯ, 10–ಸಾಮಾನ್ಯ ಮಹಿಳೆ, 11–ಸಾಮಾನ್ಯ, 12–ಸಾಮಾನ್ಯ ಮಹಿಳೆ, 13, 14–ಸಾಮಾನ್ಯ. ವಾರ್ಡ್ ಸಂಖ್ಯೆ 15–ಹಿಂದುಳಿದ ವರ್ಗ (ಎ), 16, 17–ಸಾಮಾನ್ಯ, 18, 19, 20–ಪರಿಶಿಷ್ಟ ಜಾತಿ, 21–ಪರಿಶಿಷ್ಟ ಜಾತಿ ಮಹಿಳೆ, 22–ಸಾಮಾನ್ಯ ಮಹಿಳೆ, 23–ಹಿಂದುಳಿದ ವರ್ಗ (ಎ).
ಬಸವನಬಾಗೇವಾಡಿ ಪುರಸಭೆ
ವಾರ್ಡ್ ಸಂಖ್ಯೆ 1–ಹಿಂದುಳಿದ ವರ್ಗ (ಎ) ಮಹಿಳೆ, 2–ಸಾಮಾನ್ಯ, 3–ಹಿಂದುಳಿದ ವರ್ಗ (ಎ) ಮಹಿಳೆ, 4–ಸಾಮಾನ್ಯ, 5–ಹಿಂದುಳಿದ ವರ್ಗ (ಬಿ), 6–ಹಿಂದುಳಿದ ವರ್ಗ (ಎ), 7–ಸಾಮಾನ್ಯ ಮಹಿಳೆ, 8, 9–ಸಾಮಾನ್ಯ, 10–ಹಿಂದುಳಿದ ವರ್ಗ (ಎ), 11–ಸಾಮಾನ್ಯ, 12, 13–ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 14, 15–ಪರಿಶಿಷ್ಟ ಜಾತಿ, 16–ಸಾಮಾನ್ಯ, 17–ಸಾಮಾನ್ಯ ಮಹಿಳೆ, 18–ಪರಿಶಿಷ್ಟ ಪಂಗಡ, 19, 20 ಸಾಮಾನ್ಯ ಮಹಿಳೆ, 21–ಪರಿಶಿಷ್ಟ ಜಾತಿ, 22, 23–ಸಾಮಾನ್ಯ ಮಹಿಳೆ.
ಹಳ್ಳಿಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಗ್ರಾಮ ಮತ್ತು ಹಳ್ಳಿಗಳಿವೆ.
ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು
|
ವಿಜಯಪುರ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು
|
ಇಂಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು
|
ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು
|
ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು
|
ಗ್ರಾಮ ಪಂಚಾಯತಿಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 200ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿವೆ.
ಇಂಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು
|
ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು
|
ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು
|
ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು
|
ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು
|
ನೆಮ್ಮದಿ (ಹೋಬಳಿ) ಕೇಂದ್ರಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹೋಬಳಿ ಕೇಂದ್ರದಲ್ಲಿ ನೆಮ್ಮದಿ ಕೇಂದ್ರಗಳಿವೆ.
- ಮನಗೂಳಿ, ಹೂವಿನ ಹಿಪ್ಪರಗಿ, ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ.
- ಬಬಲೇಶ್ವರ, ವಿಜಯಪುರ, ತಿಕೋಟಾ, ನಾಗಠಾಣ, ಮಮದಾಪುರ.
- ಬಳ್ಳೊಳ್ಳಿ, ಚಡಚಣ, ಇಂಡಿ, ಅಥರ್ಗಾ.
- ಢವಳಗಿ, ತಾಳಿಕೋಟಿ, ಮುದ್ದೇಬಿಹಾಳ, ನಾಲತವಾಡ.
- ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ.
ನಾಡ ಕಚೇರಿಗಳು
ಬದಲಾಯಿಸಿಕಂದಾಯ ಕಚೇರಿಗಳು
ಬದಲಾಯಿಸಿ- ಹೂವಿನ ಹಿಪ್ಪರಗಿ, ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ.
- ಬಬಲೇಶ್ವರ, ವಿಜಯಪುರ, ತಿಕೋಟಾ, ನಾಗಠಾಣ, ಮಮದಾಪುರ.
- ಬಳ್ಳೊಳ್ಳಿ, ಚಡಚಣ, ಇಂಡಿ.
- ಢವಳಗಿ, ತಾಳಿಕೋಟಿ, ಮುದ್ದೇಬಿಹಾಳ, ನಾಲತವಾಡ.
- ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ.
ತಾಲ್ಲೂಕು ಪಂಚಾಯತಿಗಳು
ಬದಲಾಯಿಸಿವಿಜಯಪುರ ಜಿಲ್ಲೆಯ ಸರಳ ಆಡಳಿತಕ್ಕಾಗಿ ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯತ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 144 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ತಾಲ್ಲೂಕು ಪಂಚಾಯತಿಗಳು
- ತಾಲ್ಲೂಕು ಪಂಚಾಯತ, ಇಂಡಿ
ಇಂಡಿ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ಇಂಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು
|
- ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ
ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು 28 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು
|
- ತಾಲ್ಲೂಕು ಪಂಚಾಯತ, ವಿಜಯಪುರ
ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ವಿಜಯಪುರ ತಾಲ್ಲೂಕು ಐತಿಹಾಸಿಕ ಹಿನ್ನಲೆಯುಳ್ಳ ತಾಲ್ಲೂಕಾಗಿದ್ದು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುತ್ತದೆ. ಸ್ಮಾರಕಗಳ ಪೈಕಿ ವಿಜಯಪುರ ನಗರದಲ್ಲಿರುವಂತಹ ಗೋಲಗುಮ್ಮಟವು ಜಗತ್ಪ್ರಸಿದ್ಧವಾಗಿದೆ. ವಿಜಯಪುರ ತಾಲೂಕು 119 ಕಂದಾಯ ಗ್ರಾಮಗಳನ್ನು ಹೊಂದಿದ್ದು 46 ಗ್ರಾಮ ಪಂಚಾಯಿತಿಗಳು ಇರುತ್ತವೆ. ಕರ್ನಾಟಕ ಪಂಚಾಯತರಾಜ್ ಅಧಿನಿಯಮ 1993 ಎಂದು ನೂತನ ಶಾಸನವನ್ನು ಜಾರಿಗೆ ತರಲಾಗಿದೆ.ಅದು 1993ರ ಏಪ್ರೀಲ್ 30 ರಂದು ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆಯುವ ಮೂಲಕ ಕರ್ನಾಟಕ ಪಂಚಾಯತರಾಜ್ ಕಾಯ್ದೆ [(1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)]ಪ್ರಕಾರ ಜಾರಿಗೆ ಬಂದಿದೆ. ಅದರಂತೆ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೋಳ್ಳುವಂತೆ ಮಾಡುವ ಮತ್ತು ಗ್ರಾಮೀಣಾಭೀವೃದ್ಧಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ ಮತ್ತು ಸ್ಥಳೀಯ ಸ್ವಯಂ ಸರ್ಕಾರದ ಘಟಕಗಳಂತೆ ಕಾರ್ಯ ನಿರ್ವಹಿಸುವದಕ್ಕಾಗಿ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ ತಿದ್ದುಪಡಿಗೆ ಅನುಸಾರವಾಗಿ ರಾಜ್ಯದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾಯಿತ ಸಂಸ್ಥೆಗಳು ಇರುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಸದರಿ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸದರಿ ಅಧಿನಿಯಮದ ಸೆಕ್ಷೆನ್ 119 ರ ಮತ್ತು 120 ರ ಪ್ರಕಾರ ವಿಜಯಪುರದ ತಾಲೂಕು ಪಂಚಾಯತಿಯನ್ನು ಸ್ಥಾಪಿಸಿ ರಚನೆ ಮಾಡಲಾಗಿದೆ. ತಾಲೂಕು ಪಂಚಾಯತಿಯಲ್ಲಿ ಅಧಿನಿಯಮದ ಸೆಕ್ಷೆನ್ 121 ರ ಪ್ರಕಾರ ನಿರ್ಧರಿಸಿದಂತೆ ಒಟ್ಟು 33 ಜನ ಚುನಾಯಿತ ಸದಸ್ಯರಿರುತ್ತಾರೆ. ಹಾಗೂ ಸೆಕ್ಷೆನ್ 138 ರ ಪ್ರಕಾರ ಚುನಾಯಿತರಾದ ಒಬ್ಬ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿರುತ್ತಾರೆ. ಈ ಸಂಸ್ಥೆಯು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷೆನ್ 119(1) ಮತ್ತು (2) ರ ಪ್ರಕಾರ ವಿಜಯಪುರ ತಾಲ್ಲೂಕು ಪಂಚಾಯತ ಎಂಬ ಹೆಸರಿನ ನಿಗಮಿತ ನಿಕಾಯವಾಗಿರುತ್ತದೆ.
ವಿಜಯಪುರ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು
|
- ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ
ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 20 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ಮುದ್ದೇಬಿಹಾಳ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು
|
- ತಾಲ್ಲೂಕು ಪಂಚಾಯತ, ಸಿಂದಗಿ
ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು 30 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು
ಜಿಲ್ಲಾ ಪಂಚಾಯತ
ಬದಲಾಯಿಸಿವಿಜಯಪುರ ಜಿಲ್ಲೆಯ ಸಂಪುರ್ಣ ಮತ್ತು ವ್ಯವಸ್ಥಿತ ಆಡಳಿತಕ್ಕಾಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯತ ಕಚೇರಿಯು 1998ರಲ್ಲಿ ಹೊಸದಾಗಿ ಮನಗೂಳಿ ರಸ್ತೆಯ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಇದೆ. ಜಿಲ್ಲೆಯ ಐದು ತಾಲ್ಲೂಕಿನಿಂದ 32 ಜನ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಜಿಲ್ಲಾ ಪಂಚಾಯತ್ ಕಾರ್ಯಾಲಯವು 27 ವಿವಿಧ ಇಲಾಖೆಯ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಲೋಕಸೇವಾ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಗಳು ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಮುಖ್ಯಸ್ಥರಾಗಿರುತ್ತಾರೆ.
ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 43 ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ಇಂಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು
ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು
ವಿಜಯಪುರ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು
ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 10 ಜಿಪಂ ಕ್ಷೇತ್ರಗಳಿವೆ. ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಿಕೋಟಾ, ಕನಮಡಿ, ಅರಕೇರಿ, ಕಾಖಂಡಕಿ, ಬಬಲೇಶ್ವರ, ಮಮದಾಪುರ ಹಾಗೂ ಸಾರವಾಡ ಜಿಪಂ ಕ್ಷೇತ್ರಗಳಿವೆ. ನಾಗಠಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಣಗಿ, ನಾಗಠಾಣ ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕನ್ನೂರ ಜಿಪಂ ಕ್ಷೇತ್ರಗಳು ಸೇರಿವೆ.
ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು
ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು
ವಸತಿ ನಿಲಯಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಸುಮಾರು 100 ಕ್ಕೂ ಅಧಿಕ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ (ಹಾಸ್ಟೇಲ್/ಬೋರ್ಡಿಂಗ್)ಗಳಿವೆ.
ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು
ವಿಜಯಪುರ, ಅರ್ಜುಣಗಿ, ಹೊನವಾಡ, ಕಳ್ಳಕವಟಗಿ, ಬಿಜ್ಜರಗಿ, ನಿಡೋಣಿ, ಅರ್ಜುಣಗಿ, ಮಮದಾಪುರ, ತಿಕೋಟಾ, ನಾಗಠಾಣ, ಶಿವಣಗಿ, ಭುರಣಾಪುರ, ಕನ್ನೂರ, ಬೊಮ್ಮನಳ್ಳಿ, ಲೋಹಗಾಂವ, ಬಬಲೇಶ್ವರ, ಹೊನ್ನಳ್ಳಿ, ಐನಾಪುರ, ಕತಕನಹಳ್ಳಿ, ಬಾಬಾನಗರ, ಕಾಖಂಡಕಿ, ಕಗ್ಗೋಡ, ಹೊನ್ನುಟಗಿ.
ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು
ವಿಜಯಪುರ, ತಿಕೋಟಾ, ನಾಗಠಾಣ, ಹೊನ್ನುಟಗಿ.
- ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ವಿಜಯಪುರ
ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು
- ಆದಿನಾಥ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ವಿಜಯಪುರ
- ಸಜ್ಜನ ಗಾಣಿಗೇರ ಉಚಿತ ಪ್ರಸಾದ ನಿಲಯ, ವಿಜಯಪುರ
- ಕಾಳಿದಾಸ ಉಚಿತ ಪ್ರಸಾದ ನಿಲಯ, ವಿಜಯಪುರ
- ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ವಿಜಯಪುರ
- ಶ್ರೀ ಶಾಂತವೀರ ಉಚಿತ ಪ್ರಸಾದ ನಿಲಯ, ಬಬಲೇಶ್ವರ
- ಸಲಫಿಯಾ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ಐನಾಪುರ
- ಮಾತೋಶ್ರೀ ಶೆಂಕ್ರಮ್ಮ ತಾಯಿ ಉಚಿತ ಪ್ರಸಾದ ನಿಲಯ, ಕತಕನಹಳ್ಳಿ
- ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊನ್ನಳ್ಳಿ
- ಸತಿ ಸಾಮಕಾ ಮಾತಾ ಉಚಿತ ಪ್ರಸಾದ ನಿಲಯ, ಮಿಂಚನಾಳ ಎಲ್ಟಿ
- ಜೈ ಹನುಮಾನ ಉಚಿತ ಪ್ರಸಾದ ನಿಲಯ, ಕನ್ನಾಳ
- ವಿನೋಬಾ ಭಾವೆ ಉಚಿತ ಪ್ರಸಾದ ನಿಲಯ, ಯೋಗಾಪುರ, ವಿಜಯಪುರ
- ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ವಿಜಯಪುರ
- ಶ್ರೀ ಮಂಗಮ್ಮಾದೇವಿ ಉಚಿತ ಪ್ರಸಾದ ನಿಲಯ, ಹೊನಗನಹಳ್ಳಿ
- ಶ್ರೀ ರೇಣುಕಾ ಉಚಿತ ಪ್ರಸಾದ ನಿಲಯ, ಹಡಗಲಿ
- ಶ್ರೀ ಅಮೋಘ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಜಾಲಗೇರಿ ಎಲ್ಟಿ
- ಶ್ರೀ ಗಣಪತಿ ಮಹಾರಾಜ ಉಚಿತ ಪ್ರಸಾದ ನಿಲಯ, ಶಾಂತಿ ಕುಟೀರ, ಕನ್ನೂರ
- ಶ್ರೀ ಸಿದ್ದಾರ್ಥ ಉಚಿತ ಪ್ರಸಾದ ನಿಲಯ, ವಿಜಯಪುರ
- ಬಂಜಾರಾ ಉಚಿತ ಪ್ರಸಾದ ನಿಲಯ, ವಿಜಯಪುರ
ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು
ಬಸವನ ಬಾಗೇವಾಡಿ, ಭೈರವಾಡಗಿ, ಗಣಿ, ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿ, ಕೂಡಗಿ, ಮನಗೂಳಿ, ನರಸಲಗಿ, ನಿಡಗುಂದಿ, ಸಾಸನೂರ, ಯರನಾಳ, ಹೆಬ್ಬಾಳ, ತೆಲಗಿ, ವಡವಡಗಿ, ಸಿದ್ದನಾಥ
ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು
ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ
ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು
- ಮಾತೋಶ್ರೀ ಗಂಗಮ್ಮ ಗಂಗಾಧರಪ್ಪ ಹಳ್ಳೂರ ಬಾಲಕರ ವಸತಿ ನಿಲಯ, ಹೂವಿನ ಹಿಪ್ಪರಗಿ
- ಶಿವಪ್ಪ ಮುತ್ಯಾನವರ ಬಾಲಕರ ವಸತಿ ನಿಲಯ, ಜಾಯವಾಡಗಿ
- ಶ್ರೀ ಮಡಿವಾಳೇಶ್ವರ ಬಾಲಕರ ವಸತಿ ನಿಲಯ, ಕಣಕಾಲ
- ಶ್ರೀ ಬಸವೇಶ್ವರ ಬಾಲಕರ ವಸತಿ ನಿಲಯ, ಉಕ್ಕಲಿ
- ಶಾಕಭಾವಿ ಬಾಲಕರ ವಸತಿ ನಿಲಯ, ವಂದಾಲ
- ಶ್ರೀ ಕಲ್ಮೇಶ್ವರ ಬಾಲಕರ ವಸತಿ ನಿಲಯ, ಬಸನಾಳ
- ಬಿ.ಎಸ್.ಪವಾರ ಬಾಲಕರ ವಸತಿ ನಿಲಯ, ಗೊಳಸಂಗಿ
- ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಲಕರ ವಸತಿ ನಿಲಯ, ನಿಡಗುಂದಿ
ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು
ಅಥರ್ಗಾ, ಬರಡೋಲ, ಮಸಳಿ ಬಿ.ಕೆ., ತದ್ದೇವಾಡಿ, ಝಳಕಿ, ಚಡಚಣ, ಇಂಡಿ, ತಾಂಬಾ, ಸಾಲೋಟಗಿ, ತಡವಲಗಾ, ನಿಂಬಾಳ, ನಿವರಗಿ, ದೇವರ ನಿಂಬರಗಿ, ಹೊರ್ತಿ, ಹಲಸಂಗಿ, ಧೂಳಖೇಡ, ಲಚ್ಯಾಣ, ಹಿರೇಬೇವನೂರ, ಹಳಗುಣಕಿ, ಲೋಣಿ ಬಿ.ಕೆ.
ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು
ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು
- ಶ್ರೀ ಶಂಕರಲಿಂಗೇಶ್ವರ ಉಚಿತ ಪ್ರಸಾದ ನಿಲಯ, ಇಂಡಿ
- ಡಾ.ಬಿ.ಆರ್.ಅಂಬೇಡ್ಕರ ಉಚಿತ ಪ್ರಸಾದ ನಿಲಯ, ಚಡಚಣ
- ಶ್ರೀ ಕವದೇಶ್ವರ ಉಚಿತ ಪ್ರಸಾದ ನಿಲಯ, ಜಿಗಜೇವಣಿ
- ಶ್ರೀ ಶಿವಪ್ರಭು ಉಚಿತ ಪ್ರಸಾದ ನಿಲಯ, ಇಂಚಗೇರಿ
- ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊರ್ತಿ
- ಶ್ರೀ ಕಲ್ಮೇಶ್ವರ ಉಚಿತ ಪ್ರಸಾದ ನಿಲಯ, ಚವಡಿಹಾಳ
- ಈರಪ್ಪ ಗುರಪ್ಪ ಬಿರಾದಾರ ಉಚಿತ ಪ್ರಸಾದ ನಿಲಯ, ಇಂಡಿ
- ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ
- ಶ್ರೀ ಸಂಗಮೇಶ್ವರ ಉಚಿತ ಪ್ರಸಾದ ನಿಲಯ, ಚಡಚಣ
- ಬಿ.ಕೆ. ಉಚಿತ ಪ್ರಸಾದ ನಿಲಯ, ಲೋಣಿ ಕೆ.ಡಿ
- ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ
- ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ
- ಎಸ್.ಬಿ.ಸಂಯುಕ್ತ ಉಚಿತ ಪ್ರಸಾದ ನಿಲಯ, ಬೊಳಗಾಂವ-ರೂಗಿ
ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು
ಮುದ್ದೇಬಿಹಾಳ, ಇಂಗಳಗೇರಿ, ನಾಲತವಾಡ, ತಾಳಿಕೋಟ, ತುಂಬಗಿ, ಢವಳಗಿ, ಕೊಡಗಾನೂರ, ಕೊಣ್ಣೂರ, ರಕ್ಕಸಗಿ, ಕೋಳೂರ
ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು
ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು
- ಬಾಲಕರ ವಸತಿ ನಿಲಯ, ಕುಂಟೋಜಿ
ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು
ಸಿಂದಗಿ, ಆಲಮೇಲ, ನಾಗಾವಿ ಬಿ.ಕೆ., ಬಾಗಲೂರ, ತಿಳಿಗೂಳ, ದೇವಣಗಾಂವ, ದೇವರಹಿಪ್ಪರಗಿ, ಗೋಲಗೇರಿ, ಗುಬ್ಬೇವಾಡ, ಕಡಣಿ, ಸುಂಗಠಾಣ, ಯಂಕಂಚಿ, ಬಳಗಾನೂರ, ಮಲಘಾಣ, ಬಿ.ಬಿ.ಇಂಗಳಗಿ, ಅಸ್ಕಿ, ಕಲಕೇರಿ, ಮುಳಸಾವಳಗಿ, ಹಿಟ್ಟಿನಹಳ್ಳಿ ಎಲ್.ಟಿ
ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು
ಸಿಂದಗಿ, ಆಲಮೇಲ, ಜಾಲವಾದ, ಹಿಟ್ಟಿನಹಳ್ಳಿ ಎಲ್.ಟಿ
ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು
- ತಾಯಿ ಈರವ್ವ ನಂದಿ ಉಚಿತ ಪ್ರಸಾದ ನಿಲಯ, ಸಿಂದಗಿ
- ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ
- ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ಕಲಕೇರಿ
- ಶ್ರೀ ಜಗದಂಬಾ ಉಚಿತ ಪ್ರಸಾದ ನಿಲಯ, ಹಿಟ್ಟಿನಹಳ್ಳಿ ತಾಂಡಾ
- ಎಚ್.ಜಿ. ಉಚಿತ ಪ್ರಸಾದ ನಿಲಯ, ಸಿಂದಗಿ
- ನೂತನ ಉಚಿತ ಪ್ರಸಾದ ನಿಲಯ, ಸಿಂದಗಿ
ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು
ವಿಜಯಪುರ(7), ಬಸವನ ಬಾಗೇವಾಡಿ, ಕೂಡಗಿ, ಮುದ್ದೇಬಿಹಾಳ , ಸಿಂದಗಿ, ಇಂಡಿ(2), ನಿಡಗುಂದಿ, ತಾಳಿಕೋಟೆ.
- ಮಿಲಿಟರಿ ಬಾಲಕರ ವಸತಿ ನಿಲಯ, ವಿಜಯಪುರ
ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು
ವಿಜಯಪುರ(9), ನಾಗಠಾಣ, ಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ, ಮನಗೂಳಿ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ, ತಾಳಿಕೋಟ, ಇಂಡಿ, ಝಳಕಿ, ಚಡಚಣ, ತಾಂಬಾ, ಸಿಂದಗಿ, ದೇವರಹಿಪ್ಪರಗಿ, ಆಲಮೇಲ.
ಗ್ರಂಥಾಲಯಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಂಥಾಲಯಗಳಿವೆ.
|
|
|
ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಸಂಕೇತಗಳು ಈ ಕೆಳಗಿನಂತಿವೆ.
|
|
|
|
|
ದೂರವಾಣಿ ವಿನಿಮಯ ಕೇಂದ್ರಗಳು
ವಿಜಯಪುರ ಜಿಲ್ಲೆಯಲ್ಲಿ ದೂರವಾಣಿ ವಿನಿಮಯ ಕೇಂದ್ರಗಳು ಈ ಕೆಳಗಿನಂತಿವೆ.
ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು
|
ವಿಜಯಪುರ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು
|
ಇಂಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು
|
ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು
|
ಸಿಂದಗಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು
ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಪ್ರಧಾನ ಅಂಚೆ ಕಚೇರಿಯು ವಿಜಯಪುರ ನಗರದ ಎಮ್.ಜಿ. ರಸ್ತೆಯಲ್ಲಿದೆ.
ಉಪ ಮತ್ತು ಶಾಖಾ ಅಂಚೆ ಕಚೇರಿಗಳು
ವಿಜಯಪುರ ನಗರ ಭಾಗದ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು
|
|
|
|
ವಿಜಯಪುರ ಜಿಲ್ಲೆಯ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು
ಬಬಲೇಶ್ವರ - 586113
|
ಕನ್ನೂರ - 586119
ಸಾರವಾಡ - 586125
|
ಶಿವಣಗಿ - 586127
ಅಗರಖೇಡ - 586111
ಅಥರ್ಗಾ - 586112
ಢವಳಗಿ - 586116
ಹೊರ್ತಿ - 586117
|
ಕಲಕೇರಿ - 586118
ಕೊರವಾರ - 586120
ಮೊರಟಗಿ - 586123
ನಾಲತವಾಡ - 586124
ಸಿಂದಗಿ - 586128
|
ತಂಗಡಗಿ- 586129
|
ತಿಕೋಟಾ- 586130
ಆಲಮೇಲ - 586202
ಬಸವನ ಬಾಗೇವಾಡಿ - 586203
|
ಬರಡೋಲ - 586204
ಚಡಚಣ - 586205
ಹೂವಿನ ಹಿಪ್ಪರಗಿ - 586208
ಕೊಲ್ಹಾರ - 586210
|
ಲಚ್ಯಾಣ - 586211
ಮುದ್ದೇಬಿಹಾಳ - 586212
|
|
ನಿಡಗುಂದಿ - 586213
ತಾಳಿಕೋಟಿ - 586214
|
|
ತಾಂಬಾ - 586215
ತೆಲಗಿ - 586216
ಸಾಲೋಟಗಿ - 586217
ಬಿಜ್ಜರಗಿ - 586114 - ಗೋಣಸಗಿ, ಹುಬನೂರ, ಕನಮಡಿ, ಸೋಮದೇವರಹಟ್ಟಿ, ಬಾಬಾನಗರ
ಕೂಡಗಿ - 586121 - ಕಲಗುರ್ಕಿ, ಮಲಘಾಣ, ಮಸೂತಿ, ತಳೇವಾಡ
ಮನಗೂಳಿ - 586122 - ನಂದಿಹಾಳ, ಯರನಾಳ, ಹತ್ತರಕಿಹಾಳ, ಹಿಟ್ಟಿನಹಳ್ಳಿ, ಜುಮನಾಳ
ದೇವಣಗಾಂವ - 586206 - ಬೊಮ್ಮನಹಳ್ಳಿ, ದೇವರನಾವದಗಿ, ಕಡ್ಲೇವಾಡ ಪಿ.ಎ., ಕುಮಸಗಿ
ಹಲಸಂಗಿ - 586207 - ಅರ್ಜನಾಳ, ಬೈರುಣಗಿ, ಭತಗುಣಕಿ, ಚಣೇಗಾಂವ, ಧೂಳಖೇಡ, ಹಿಂಗಣಿ
ಇಂಡಿ - 586209 - ಇಂಡಿ, ಇಂಡಿ ಬಜಾರ
ಮೀನುಗಾರಿಕೆ ಸಹಕಾರ ಸಂಘಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರ ಸಂಘಗಳಿವೆ
ನೇಕಾರರ ಸಹಕಾರ ಸಂಘಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ನೇಕಾರರ ಸಹಕಾರ ಸಂಘಗಳಿವೆ
ಕಟ್ಟಡ ನಿರ್ಮಾಣ ಸಹಕಾರ ಸಂಘಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಸಹಕಾರ ಸಂಘಗಳಿವೆ
ನೀರು ಬಳಕೆದಾರರ ಸಹಕಾರ ಸಂಘಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘಗಳಿವೆ
|
|
|
ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳಿವೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು
ಬದಲಾಯಿಸಿಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ
ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)
|
ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು
|
ಇಂಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು
|
ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು
|
ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು
|
ಸರ್ಕಾರೇತರ ಸಂಸ್ಥೆಗಳು
ಬದಲಾಯಿಸಿಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ.
|
|
ನೀರಾವರಿ
ಬದಲಾಯಿಸಿಜಿಲ್ಲೆಯಲ್ಲಿ ಕೇವಲ 15% ಭಾಗ ಮಾತ್ರ ನೀರಾವರಿಯಾಗಿದೆ. ನದಿ, ಕಾಲುವೆ, ಕೊಳವೆ ಬಾವಿ, ತೆರದ ಬಾವಿ ಹಾಗೂ ಕೆರೆಗಳು ನೀರಾವರಿಯ ಮೂಲಗಳಾಗಿವೆ. ಜಿಲ್ಲೆಯಲ್ಲಿ ಜೀವನದಿಗಳಾದ ಕೃಷ್ಣಾ, ಭೀಮಾ ನದಿಗಳ ನೀರು ಬೇರೆ ರಾಜ್ಯಗಳ ಪಾಲಾಗಿದೆ.
ಕೆರೆಗಳು
ಬದಲಾಯಿಸಿಜಿಲ್ಲೆಯಲ್ಲಿ ಅಂದಾಜು 150ಕ್ಕೂ ಅಧಿಕ ಕೆರೆಗಳಿವೆ. ಇವುಗಳು ಕೂಡ ನೀರಾವರಿಯ ಮೂಲಗಳಾಗಿವೆ.
ಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು
|
ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು
|
|
ವಿಜಯಪುರ ತಾಲ್ಲೂಕಿನ ಕೆರೆಗಳು
|
|
ವಿಜಯಪುರ ತಾಲ್ಲೂಕಿನ ಜಿನುಗು ಕೆರೆಗಳು
|
ಇಂಡಿ ತಾಲ್ಲೂಕಿನ ಕೆರೆಗಳು
|
ಇಂಡಿ ತಾಲ್ಲೂಕಿನ ಜಿನುಗು ಕೆರೆಗಳು
|
ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು
|
ಮುದ್ದೇಬಿಹಾಳ ತಾಲ್ಲೂಕಿನ ಜಿನುಗು ಕೆರೆಗಳು
ಜಲಪುರ, ವನಹಳ್ಳಿ, ಬಳಗಾನೂರ, ಕೋಳೂರ, ಮಲಗಾಲದಿನ್ನಿ.
ಸಿಂದಗಿ ತಾಲ್ಲೂಕಿನ ಕೆರೆಗಳು
ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು
|
|
ಆಣೆಕಟ್ಟುಗಳು
ಬದಲಾಯಿಸಿ- ಆಲಮಟ್ಟಿ ಆಣೆಕಟ್ಟು (ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಬಳಿ ಕಟ್ಟಲಾಗಿದೆ.
ಪೀಠಿಕೆ
ಆಲಮಟ್ಟಿ ಆಣೆಕಟ್ಟುನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲುಕಿನ ಆಲಮಟ್ಟಿ ಗ್ರಾಮದ ಸಮೀಪ ನಿರ್ಮಿಸಲಾಗಿದೆ. ಆಲಮಟ್ಟಿಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272 ft (೨೮೫೮.೬೫ ? )ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ.
ವಿವಿಧೋದ್ದೇಶ ಯೋಜನೆ
- ಆಲಮಟ್ಟಿ ಅಣೆಕಟ್ಟು ಕೃಷ್ಣಾನದಿಗೆ ಅಡ್ಡಲಾಗಿರುವ ಕಟ್ಟಲಾಗಿರುವ ಒಂದು ದೊಡ್ಡ ನೀರಾವರಿ ಮತ್ತು ವಿದ್ಯುತ್ ಯೋಜನೆ. ಇದು ಕರ್ನಾಟಕದ ಉತ್ತರದಲ್ಲಿರುವ ಬಾಗಲಕೋಟೆ , ವಿಜಯಪುರ ಜಿಲ್ಲೆಗಳ ಅಂಚಿನಲ್ಲಿರುವ ಕೃಷ್ಣಾ -ಮೇಲುಭಾಗದ (ಅಪ್ಪರ್-ಕೃಷ್ಣಾ) ಯೋಜನೆ , ವಿಜಯಪುರ ಜಿಲ್ಲೆಯಲ್ಲಿದೆ. ಇದು (ಅಪ್ಪರ್-ಕೃಷ್ಣಾ) ಯೋಜನೆಯಲ್ಲಿ ಪ್ರಮುಖವಾದ ಅಣೆಕಟ್ಟು.
- ಈ ಅಣೆಕಟ್ಟಿ ಜಲವಿದ್ಯತ್ ಯೋಜನೆಯಳ್ಲಿ ೨೯೦ ಮೆಗಾ ವ್ಯಾಟ್ (ಯೂನಿಟ್) ವಿದ್ಯತ್ ಉತ್ಪತ್ತಿಯಾಗುತ್ತದೆ; ಉತ್ಪದನಾ ಗುರಿ /ಸಾಮರ್ಥ್ಯ - ೫೬೦ ಎಮ್ ಯು -ಜಿಡಬ್ಲಯು) ಇದರಲ್ಲಿ ಲಂಬ ಕಪ್ಲಾನ್ ಟರ್ಬೈನ್ ಗಳನ್ನು ಉಪಯೋಗಿಸಿ ವಿದ್ಯುತ್ ಉತ್ಪಾದನೆ ಮಾಡಲಗುತ್ತದೆ. ಅಣೆಕಟ್ಟೆಯ ಬಲಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.
- ಇದರಲ್ಲಿ ೫೫ಮೆ.ವ್ಯಾ. ನ ಐದು ಜನರೇಟರುಗಳೂ ,೧೫ ಮೆವ್ಯಾ.ನ ಒಂದು ಜನರೇಟರೂ-ವಿದ್ಯುತ್ ಉತ್ಪಾದನ ಘಟಕವೂ ಇವೆ. ಹೀಗೆ ವಿದ್ಯುತ್ ಉತ್ಪಾದನೆಯಾಗಲು ಉಪಯೋಗಿಸಿದ ನೀರು ಕೆಳಭಾಗದಲ್ಲಿರುವ ಆಂದ್ರ ಪ್ರದೇಶದ ನಾರಾಯಣಪುರದ ಜಲಾಶಯಕ್ಕೆ ಹೋಗುತ್ತದೆ.
ವೆಚ್ಚ
- ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃಭಾಜನಿನಿ), ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು (ಯು.ಕೆ.ಪಿ) ಕಾರ್ಯಗತಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994 ರ ಆಗಸ್ಟ್ 19 ರಂದು ನಿಗಮಗಳ ಕಾಯ್ದೆ 1956 ರ ಅನುಸಾರ ಪ್ರಾರಂಭಿಸಲಾಗಿದೆ.
- ಈ ನಿಗಮವು ಕೃಷ್ಣಾ ಮೇಲ್ದಂಡೆ ಯೋಜನೆಯ ಕೆಳಗಿರುವ ಎಲ್ಲಾ ನೀರಾವರಿ ಯೋಜನೆಗಳ ರಚನಾ ಕ್ರಮ, ತನಿಖೆ, ಅಂದಾಜು, ನೆರವೇರಿಕೆ, ಕಾರ್ಯಚರಣೆ ಮತ್ತು ನಿರ್ವಹಣೆಯ ಹೊಣೆಯಾಗಿರುತ್ತದೆ. ಭಾರತ ಸರ್ಕಾರದಿಂದ ಅನುಮತಿ ಪಡೆದು ಕೃಷ್ಣಾ ಮೇಲ್ದಂಡೆ ಯೋಜನೆಯ ನಿರ್ವಹಣೆ ಮಾಡಬೇಕಾಗಿದೆ.
- ಈ ಅಣೆ ಕಟ್ಟು ಮೊದಲು ಆರಂಭದಲ್ಲಿ (೧೯೬೪) ೧೪೭೦ ಕೋಟಿರೂಪಾಯಿಗಳಯೋಜನೆಯಾಗಿತ್ತು ; ಇದನ್ನು ಕರ್ನಾಟಕದ ಪವರ್ ಕಾರ್ಪೋರೇಶನ್ ಲಿ. ಇದರ ಮೇಲುಸ್ತುವಾರಿಗೆ ವಹಿಸಿದಾಗ ಅದು ಮೂಲ ಯೋಜನೆಗಿಂತ ಶೇಕಡಾ ೫೦ ರಷ್ಟು ಯೋಜನಾ ವೆಚ್ಚವನ್ನು ೬೭೪ ಕೋಟಿಗೆ ಕಡಿತ ಗೊಳಿಸಿತು. ನಂತರ ಅದನ್ನು ಇನ್ನೂ ಕಡಿತಗೊಳಿಸಿ ರೂ.೫೨೦ ಕೋಟಿಗೇ ,ಕೇವಲ ೪೦ ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮುಗಿಸಿತು.
- ಆಂದ್ರಕ್ಕೂ ಕರ್ನಾಟಕಕ್ಕೂ ಈ ಅಣೆ ಕಟ್ಟನ ನೀರಿನ ಮತ್ತು ಎತ್ತರದ ವಿಚಾರದಲ್ಲಿ ವಿವಾದ ಉಂಟಾಗಿ, ಆಲಮಟ್ಟಿ ಅಣೆಕಟ್ಟಿನ ಎತ್ತರವು ಸಮುದ್ರ ಮಟ್ಟದಿಂದ ೫೧೯ ಮೀಟರಿಗೆ (1705.3272 ಅಡಿ) ಸುಪ್ರೀಮ ಕೋರ್ಟಿನ ಆಜ್ಞೆಯಂತೆ ನಿಗದಿಯಾಗಿತ್ತು.೩೦೯೧.ಸಿ ಅಡಿ ನೀರು ಸಂಗ್ರಹವಾಗುವುದು.
- ಈ ಅಣೆಕಟ್ಟು ವಿಜಯಪುರ ಜಿಲ್ಲೆಯಲ್ಲಿದ್ದರೂ ವಿಜಯಪುರ ಜಿಲ್ಲೆಯದಕ್ಕಿಂತಲೂ ಬಾಗಿಲಕೋಟೆ ಜಿಲ್ಲೆಯ ಬಹಳಷ್ಟು ಭೂ ಪ್ರದೇಶ ಮುಳುಗಡೆಯಾಗಿದೆ. ಮುಳುಗಡೆಯಿಂದ ನೊಂದ ಜನರಿಗೆ ಇನ್ನೂ ಅನೇಕರಿಗೆ ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ.
ವಿವಾದ ಮತ್ತು ನೀರು ಹಂಚಿಕೆ
- ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರಿನ ಹಂಚಿಕೆ ಬಗ್ಗೆ ಆಂಧ್ರ , ಕರ್ನಾಟಕ, ಮಹಾರಾಷ್ಟ್ರಗಳನಡುವೆ ವಿವಾದ ಬಗೆಹರಿಸಲು ಸುಪ್ರೀಮ್ ಕೋಟಿ೯ಗೆ ಈ ಮೂರೂ ರಾಜ್ಯಗಳು ಅರ್ಜಿ ಸಲ್ಲಿಸಿದ್ದವು.
- ಸುಪ್ರೀಮ್ ಕೋರ್ಟಿನಲ್ಲಿ ವಾದ ವಿವಾದ ನಡೆದು , ಆಂಧ್ರ, ಕರ್ನಾಟಕ, ಮಹಾರಾಷ್ತ್ರ ಗಳ ನೀರಿನ ಹಂಚಿಕೆಯ ವಿವಾದ ಪರಿಹಾರ ಕಂಡುಕೊಳ್ಳಲು ಸುಪ್ರೀಮ್ ಕೋರ್ಟ ಆದೇಶದಂತೆ ಬ್ರಿಜೇಶ್ ಕುಮಾರ್ ಪಟೇಲ್ ಅವರ ಟ್ತಿಬ್ಯೂನಲ್ ( ಕೃಷ್ಣಾ ನ್ಯಾಯ ಮಂಡಳಿ) ರಚಿಸಲಾಯಿತು.ಅದು ತನ್ನ ೧ ಮತ್ತು ೨ರ ತೀರ್ಪಿನಲ್ಲಿ ಕರ್ನಾಟಕ ರಾಜ್ಯಕ್ಕೆ ೯೧೧ (911) ಟಿಎಮ್.ಸಿ ಅಡಿ ನೀರು ಹಂಚಿಕೆ ಆಗಿತ್ತು. ಅದು ನವೆಂಬರ್ ೨೯;೨೦೧೩ ರಂದು ಅಂತಿಮ ತೀರ್ಪು ನೀಡಿತು. ಜಲಾಶಯದ ಒಟ್ಟು ಸಂಗ್ರಹ ೨೫೭೮ ಟಿ.ಎಮ್. ಸಿ. ಅಡಿ, ನೀರನ್ನು ಮಳೆಯ ಶೇ.೭೫ರ ಆಧಾರದಮೆಲೆ ಮೂರೂ ರಾಜ್ಯಗಳಿಗೆ ಹಂಚಿಕೆ ಮಾಡಿತು. ಇಷ್ಟು ನೀರನ್ನು ಹಂಚಿಕೆ ಮಾಡಿದ ಮೇಲೂ ಹೆಚ್ಚುವರಿಯಾಗಿ ೫೧೩ ಟಿ,ಎಮ್,ಸಿ.ಅಡಿ ನೀರು ಹೆಚ್ಚುವರಿಯಾಗಿ ಸಿಗುತ್ತದೆ.ಈ ಹೆಚ್ಚುವರಿ ನೀರಿನ ಬಗ್ಗೆ ಸೂಕ್ತ ಕಾಲದಲ್ಲಿ ಪುನಹ ಹಂಚಿಕೆ ಮಾಡಲು ಸೂಕ್ತ ವೇದಿಕೆಯಲ್ಲಿ ಮೂರು ರಾಜ್ಯಗಳ ಕೇಳಿಕೊಳ್ಳಬಹುದೆಂದು ಹೇಳಿದೆ. (ಕೃಷ್ಣಾ ಮೊದಲನೇ ನ್ಯಾಯ ಮಂಡಳಿ ಕರ್ನಾಟಕಕ್ಕೆ ೭೩೪ ಟಿ.ಎಮ್.ಸಿ.ಅಡಿ ನೀರು ಕೊಟ್ಟಿತ್ತು ).
- ದಿ.೨ - ೧೧- ೨೦೧೩(2-11-2013) ರ ತೀರ್ಪು
- ಈಗ ಕೃಷ್ಣಾನ್ಯಾಯಮಂಡಳಿ ತೀರ್ಪು ಕರ್ನಾಟಕಕ್ಕೆ ೯೦೭(907) ಟಿ.ಎಮ್,ಸಿ.ಅಡಿ ;
- ಮಹಾರಾಷ್ಟ್ರಕ್ಕೆ --- ೬೬೬ (666) ಟಿ.ಎಮ. ಸಿ.ಅಡಿ ;
- ಆಂಧ್ರಕ್ಕೆ --- ೧೦೦೫ (1005) ,ಇಎಮ.ಸ ಸಿ,ಅಡಿ ನೀರನ್ನು ಹಂಚಿಕೆ ಮಾಡಿದೆ.
- (ಒಟ್ಟು ಹಂಚಿಕೆ ಮಾಡಿದ ನೀರು ೨೫೭೮ ಟಿ,ಎಮ್,ಸಿ. ಅಡಿ; ಅದಕ್ಕೂ ಹೆಚ್ಚುವರಿ ಉಳಿಯುವ ನೀರು ೫೧೩ ಟಿ,ಎಮ್.ಸಿ ಅಡಿ ಅಂದರೆ ಸಂಗ್ರಹವಾಗಬಹುದಾದ (2578+503) =3091ನೀರು ೨೫೭೮+೫೧೩ = ೩೦೯೧ ಟಿ,ಎಮ್ ಸಿ ಅಡಿ ನೀರು ?).
- ಆ ಮಂಡಳಿಯು, ದಿ. ೩೦-೧೨-೨೦೧೩ ರಂದು ಪುನಹ ಎತ್ತಿದ ಆಕ್ಷೇಪಕ್ಕೆ ಆಂದ್ರಕ್ಕೆ ೪ ಟಿ.ಎಮ್.ಸಿ ಅಡಿ ಹೆಚ್ಚು ಮಂಜೂರುಮಾಡಿ ಕೈತೊಳೆದು ಕೊಂಡಿದೆ.
- ಆಂಧ್ರವು ಇಷ್ಟೆಲ್ಲಾ ತಕರಾರು ಮಾಡಲು ಕಾರಣ ಕರ್ನಾಟಕ ತನ್ನ ಪಾಲಿನ ನೀರನ್ನು ಪೂರ್ಣ ಉಪಯೋಗಿಸದೆ ಆಂದ್ರಕ್ಕೆ ಬಿಡುತ್ತಿದೆ ಅದನ್ನು ಅದು ಉಪಯೋಗಿಸಿಕೊಂಡು ಸಾವಿರಾರು ಎಕರೆ ಹೆಚ್ಚು ನೀರಾವರಿ ಬೇಸಾಯ ಮಾಡುತ್ತಿದೆ. ಅಲ್ಲದೆ ಮಳೆ ಹೆಚ್ಚಾದಾಗ ಬರುವ ನೀರನ್ನೂ ಉಪಯೋಗಿಸುತ್ತದೆ ಅಥವಾ ಸಮುದ್ರಕ್ಕೆ ಬಿಡುತ್ತದೆ. ಕನಾ೯ಟಕ ತನ್ನ ನೀರನ್ನು ಉಪಯೋಗಿಸಿಕೊಂಡರೆ ಅನಧಿಕೃತವಾಗಿ ಹೆಚ್ಚುವರಿ ನೀರಾವರಿ ಬೇಸಾಯ ಮಾಡುವ ಸಾವಿರಾರು ಎಕರೆ ಜಮೀನಿಗೆ ನೀರಿನ ಕೊರತೆ ಆಗುವುದೆಂಬ ಭಯದಿಂದ ಅದು ತಕರಾರುಮಾಡುತ್ತಿದೆ.
ಅಣೆಕಟ್ಟೆ ಎತ್ತರ
- ಕೊನೆಗೆ ಜಲಾಶಯದ ಮಟ್ಟವನ್ನು 519. 6 (1705.33 ಅಡಿ) ರಿಂದ 524 .256 ಮೀಟರ್ ಮಟ್ಟಕ್ಕೆ ಎತ್ತರಿಸಬಹುದೆಂದು (ಸಮುದ್ರ ಮಟ್ಟದಿಂದ ಎತ್ತರ ; 1705.//್ಠ/3272ಅಡಿ = 519.6 ಮೀ x1.094ಗಜ*3ಅಡಿ=1705.33 ಅಡಿ) ನ್ಯಾಯಂಗ ಸಮಿತಿ 29 ನವೆಂಬರ್ 2013 ರಲ್ಲಿ ತೀರ್ಮಾನ ಕೊಟ್ಟಿತು. ಆದರೆ ಆಂದ್ರವು ಅದನ್ನು ಪುನಹ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿ ವಿರೋಧಿಸಿತು. ಅಕಸ್ಮಾತ್ ಎತ್ತರಿಸಿದಲ್ಲಿ ತನಗೆ ಅದರಲ್ಲಿ ಸಂಗ್ರಹವಾಗುವ ಹೆಚ್ಚುವರಿ 200 ಟಿ ಎಮ್ ಸಿ ನೀರಿನಲ್ಲಿ ಹೆಚ್ಚು ಭಾಗ ಕೊಡಬೇಕೆಂದು ಕೇಳಿತು . ಆದರೆ ನ್ಯಾಯ ಮಂಡಳಿ ಮಳೆಯ-ಸರಾಸರಿ ಶೇ. 65 ಅಂದಾಜು ಹಿಡಿದು ಹೀದೆ ನವೆಂಬರ್ 29, 2013 ರ ತೀರ್ಪಿನಲ್ಲಿ ಕೊಟ್ಟ 1005 ಟಿಎಮ್ ಸಿ ನೀರಿನ ಜೊತೆಗೆ ಆಂದ್ರಕ್ಕೆ 2 ರ ಐ-ತೀರ್ಪು ನೀಡಿ 4 ಟಿ ಎಮ್ ಸಿ ಯಷ್ಟು ಹೆಚ್ಚುವರಿ ನೀರು ಕೊಡಲು ತೀರ್ಮಾನ ಕೊಟ್ಟಿದೆ. ನಿಗದಿಮಾಡಿದೆ . ಅಣೆ ಕಟ್ಟೆ ಎತ್ತರಿಸಿದ ನಂತರ ಸಿಗವ- ಆ ಹೆಚ್ಚುವರಿ ನೀರನ್ನು ಕರ್ನಾಟಕವೇ ಉಪಯೋಗಿಸಬಹುದು ಎಂದು ನಿರ್ಣಯಿಸಿದ್ದಾರೆ. (ಆಗಸ್ಟ್ 2013 ಕ್ಕೆ ಅದರಲ್ಲಿ 90.91 ಟಿ.ಎಮ್ ಸಿ ನೀರು ಸಂಗ್ರಹವಿರುವುದಾಗಿ ವರದಿಯಾಗಿದೆ. (ಇಂಗ್ಲಿಷ್ ವಿಕಿ- ಆಲಮಟ್ಟಿ ಜಲಾಶಯ) ಒಟ್ಟು ಧಾಮಾಶಾ 200 ಟಿಎಮ್ ಸಿ ನೀರು ಅದರಲ್ಲಿ ಸಂಗ್ರಹವಾಗುವುದಾಗಿ ಹೇಳಲಾಗಿದೆ.)
- ಆಲಮಟ್ಟಿಯ ಗರಿಷ್ಟ ಮಟ್ಟ 519.6 ಮೀಟರ್ ಆದರೆ ಅದರ ಬಳಕೆ ಕನಿಷ್ಟ ಮಟ್ಟ(ಡೆಡ್ ಸ್ಟೋರೇಜ್ ) 506.87 ಮೀಟರ್. ಇದಕ್ಕಿಂತ ಕಡಿಮೆಯಾದಲ್ಲಿ ಕಾಲುವೆಗೆ ನೀರು ಬಿಡಲು ಆಗುವುದಿಲ್ಲ. ಈ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಈ ಅಣೆಕಟ್ಟು ಸುಮಾರು 6 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವುದು.
ನೀರಾವರಿ ಪ್ರದೇಶ
- ಕೃಷ್ಣಾ ವಿವಿದೋದ್ದೇಶ ಯೋಜನೆಯಲ್ಲಿ ಮುಖ್ಯವಾಗಿ ಎರಡು ಅಣೆಕಟ್ಟುಗಳು ಘಟಪ್ರಭಾ ನದಿ, ಕೃಷ್ಣಾ ನದಿಗಳು ಸಂಗಮದ ಹತ್ತಿರ ಕಟ್ಟಲಾಗಿದೆ. ಕೆಳ ಭಾಗದ ಆಂದ್ರದಲ್ಲಿ ಮಲಪ್ರಭಾ ನದಿ ಕೃಷ್ಣಾ ನದಿ ಸೇರುವಲ್ಲಿ ಕಟ್ಟಲಾಗಿದೆ.
- ಈಯೋಜನೆಯು ಎರಡು -ಮೂರು ಹಂತಗಳಲ್ಲಿ ಪೂರ್ಣಗೊಳಿಸುವ ಯೋಜನೆ ಯಾಗಿತ್ತು.. ಮೊದಲ ಹಂತದಲ್ಲಿ, ಈ ಯೋಜನೆಯಿಂದ ೧೧೯ ಟಿ.ಎಮ್,ಸಿ ನೀರನ್ನು ಉಪಯೋಗಿಸಿಕೊಂಡು ೪,೨೫,೦೦೦ ಹೆಕ್ಟೇರು ಜಮೀನನ್ನು ನೀರಾವರಿಕೃಷಿಗೆ ಒಳಪಡಿಸುವುದು; ಎರಡನೇ ಹಂತದ ಯೋಜನೆಯಲ್ಲಿ , ೫೪ ಟಿಎಮ್.ಸಿ. ನೀರನ್ನು ಉಪಯೋಗಿಸಿಕೊಂಡು ೧,೯೭,೧೨೦ ಹೆಕ್ಟೇರು ಜಮೀನಿಗೆ ನೀರು ಒದಗಿಸುವುದು.
- ೧ ನೇ ಮತ್ತು ೨ ನೇ ಹಂತದ ಈ ನೀರಾವರಿ ಯೋಜನೆಯಿಂದ , ಬರದ ನಾಡು /ಜಿಲ್ಲೆ ಗಳಾದ ಉತ್ತರ ಕರ್ನಾಟಕದ, ಗುಲ್ಬರ್ಗಾ , ಯಾದಗಿರಿ, ರಾಯಚೂರು, ಬೀಜಾಪುರ, ಬಾಗಿಲಕೋಟೆ ಈ ಪ್ರದೇಶಗಳನ್ನು ನೀರಾವರಿ ಯೋಜನೆ ಗೆ ಒಳಪಡಿಸುವುದು. ಇದಕ್ಕಾಗಿ ಮೊದಲ ೧ ಮತ್ತು ೨ನೇ ಹಂತದ ಯೋಜನೆಗಳು ಪೂರ್ಣಗೊಂಡು ೬.೦೮ ಲಕ್ಷ ಹೆಕ್ಟೇರು ಪ್ರದೇಶ ನೀರಾವರಿ ಪಡೆಯಲು ಸಿದ್ಧವಾಗಿದೆ. ಇದಕ್ಕಾಗಿ ೧೭೩ ಟಿ.ಎಮ್.ಸಿ ನೀರು ಉಪಯೋಗಿಸಲು ಸಿದ್ಧವಾಗಿದೆ . (೧ ಹೆಕ್ಟೇರು = ೨.೫ ಎಕರೆ.)
- ದಿ. ೩೦-೧೨-೨೦೧೦ ರಲ್ಲಿ ಕೃಷ್ಣಾ ನೀರು ಹಂಚಿಕೆ ವಿವಾದ ನ್ಯಾಯ ಮಂಡಳಿ-೨, ಆಂಧ್ರ, ಕರ್ನಾಟಕ. ಮಹಾರಾಷ್ತ್ರಗಳ ನಡುವೆ, ಹೆಚ್ಚುವರಿ ನೀರನ್ನು, ಈ ರೀತಿ ಹಂಚಿಕೆ ಮಾಡಿತು.
- ಮಹಾರಾಷ್ರಕ್ಕೆ ೮೧ ಟಿ.ಎಮ್.ಸಿ. ; (ಮೀಟರ್)
- ಕರ್ನಾಟಕಕ್ಕೆ ೧೭೭ ಟಿ,ಎಮ್,ಸಿ; (ಮೀಟರ್)
- ಆಂಧ್ರ ಪ್ರದೇಶಕ್ಕೆ ೧೯೦ ಟಿಎಮ್ ಸಿ. ; (ಮೀಟರ್)
- ಕರ್ನಾಟಕಕ್ಕೆ ಕೊಡಮಾಡಿದ ೧೭೭ ಟಿ.ಎಮ್.ಸಿ. (ಮೀಟರ್)ನೀರಿನಲ್ಲಿ ೧೩೦.೯೦ ಟಿಎಮ್ ಸಿ (ಮೀಟರ್)ಮೂರನೇಹಂತದ ಯೋಜನೆಯಿಂದ ದೊರಕುವ ಭಾಗ.
ಉದ್ಯಾನವನ
ಅಣೆಕಟ್ಟಿನ ಪ್ರದೇಶದಲ್ಲಿ ಏಳು ತಾರಸಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ .ಅದರಲ್ಲಿ ದೋಣಿ ವಿಹಾರ (ಬೋಟಿಂಗ್), ಸಂಗೀತ ಕಾರಂಜಿ., ಮತ್ತು ನಿಂತ ಕಾರಂಜಿಗಳು ಇವೆ. ಅಣೆಕಟ್ಟಿನ ಒಂದು ಬದಿಯಲ್ಲಿ, "ರಾಕ್ ಹಿಲ್" ಎಂಬ ಕೃತಕ ಅರಣ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ. ,ಅದರಲ್ಲಿ ಸೆರಾಮಿಕ್ ಕಾಡುಪ್ರಾಣಿಗಳ ಹಾಗೂ ಪಕ್ಷಿಗಳ ಪ್ರತಿರೂಪಗಳಿವೆ ಮತ್ತು ಭಾರತದ ಹಳ್ಳಿಯ ಜೀವನವನ್ನು ಪ್ರತಿನಿಧಿಸುವ ಅನೇಕ ವಿಗ್ರಹಗಳನ್ನು ಹೊಂದಿದೆ.
ಅಣೆಕಟ್ಟೆ ಎತ್ತರದ ಬಗೆಗೆ 2014 ರ ಬೆಳವಣಿಗೆ
- ಜಲಾಶಯದ ಮಟ್ಟವನ್ನು 519. 6 (1705.33 ಅಡಿ)ಸಮುದ್ರ ಮಟ್ಟದಿಂದ ರಿಂದ 524 .256 ಮೀಟರ್ ಮಟ್ಟಕ್ಕೆ ಎತ್ತರಿಸಬಹುದೆಂದು ನ್ಯಾಯಂಗ ಸಮಿತಿ ೨೯ ನವೆಂಬರ್ ೨೦೧೩ ರಲ್ಲಿ ತೀರ್ಮಾನ ಕೊಟ್ಟಿದೆ.
- ಆದರೆ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್ಗೆ ಹೆಚ್ಚಿಸುವುದರಿಂದ ಮತ್ತೆ 22 ಗ್ರಾಮಗಳು ಮುಳುಗಡೆಯಾಗಲಿವೆ. ‘ನಾರ್ವೆ’(ಮಾದರಿ) ತಡೆಗೋಡೆ ನಿರ್ಮಿಸುವ ಮೂಲಕ ಈ ಪೈಕಿ 12 ಗ್ರಾಮಗಳನ್ನು ರಕ್ಷಿಸಿ, ಮುಳುಗಡೆ ವ್ಯಾಪ್ತಿಯನ್ನು ತಗ್ಗಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ವಿಭಾಗ ಮುಂದಾಗಿದೆ.
- ಆದರೆ ‘ಯಾವುದೇ ಕಾರಣಕ್ಕೂ ತಡೆಗೋಡೆ ಬೇಡ, ಎಲ್ಲ 22 ಹಳ್ಳಿಗಳನ್ನು ಮುಳುಗಡೆ ವ್ಯಾಪ್ತಿಗೆ ಸೇರಿಸಿ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿ’ ಎಂಬುದು ಸಂತ್ರಸ್ತರ ಆಗ್ರಹ. ಅವರು ಈ ಕುರಿತು ಪುನರ್ವಸತಿ ಆಯುಕ್ತರಿಗೆ ಮನವಿ ಮಾಡಿದ್ದಾರೆ.
- ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ನಾರ್ವೆ ದೇಶದ ಮಾದರಿಯಂತೆ ತಡೆಗೋಡೆ ನಿರ್ಮಿಸುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಹಕಾರದೊಂದಿಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಆಯುಕ್ತ ತಿಳಿಸಿದರು.
- ತಡೆಗೋಡೆ ನಿರ್ಮಾಣದಿಂದ ಆಲಮಟ್ಟಿ ಜಲಾಶಯದಲ್ಲಿ ರಾಜ್ಯದ ಪಾಲಿನ ನೀರಿನ ಸಂಗ್ರಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಬಾಗಲಕೋಟೆ ಜಿಲ್ಲೆಯ ಗೋವಿಂದಕೊಪ್ಪ, ಗದ್ದನಕೇರಿ, ಉದಗಟ್ಟಿ, ಕಲಾದಗಿ, ಅಲಗುಂಡಿ, ಕಾತರಕಿ, ಬಾವಲತ್ತಿ, ಕೊಪ್ಪ ಎಸ್ಕೆ, ಹಿರೇಪಡಸಲಗಿ, ಕುಂಬಾರಹಳ್ಳ, ಸನಾಳ ಹಾಗೂ ವಿಜಯಪುರ ಜಿಲ್ಲೆಯ ವಂದಾಲ ಗ್ರಾಮವನ್ನು ಹಿನ್ನೀರಿನಲ್ಲಿ ಮುಳುಗಡೆಯಾಗದಂತೆ ರಕ್ಷಿಸಬಹುದಾಗಿದೆ’ ಎಂದು ಅವರು ವಿವರಿಸಿದರು.
- ಮನೆ, ಹೊಲ ಮುಳುಗಡೆಯಾಗುವುದಕ್ಕೆ ಸಂತ್ರಸ್ತರಿಂದ ವಿರೋಧ ವ್ಯಕ್ತವಾಗುವುದು ಸಹಜ. ಆದರೆ, ಅವಳಿ ಜಿಲ್ಲೆಯ 12 ಗ್ರಾಮಗಳ ಸಂತ್ರಸ್ತರು ‘ನಮ್ಮೂರನ್ನು ಹಿನ್ನೀರಿನಲ್ಲಿ ಮುಳುಗಿಸಿ, ಪರಿಹಾರ ನೀಡಿ....’ ಎಂದು ದುಂಬಾಲು ಬಿದ್ದಿರುವು ದರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
- ಸಂತ್ರಸ್ತರ ಭಾವನೆ ಏನೇ ಇರಲಿ, ಮುಳುಗಡೆಯಾ ಗುವುದನ್ನು ತಪ್ಪಿಸಲು ಮತ್ತು ಯೋಜನಾ ವೆಚ್ಚ ತಗ್ಗಿಸಲು ಇರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ, ಈ ಸಂಬಂಧ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಿ’ ಎಂದು ಸಚಿವ ಎಸ್.ಆರ್.ಪಾಟೀಲ ಅವರು ಪುನರ್ವಸತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
- ಬಾಗಲಕೋಟೆ: ಬೃಹತ್ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಹಿನ್ನೀರು ಗ್ರಾಮಗಳಿಗೆ ಮತ್ತು ಕೃಷಿಭೂಮಿಗೆ ವ್ಯಾಪಿಸದಂತೆ ತಡೆಯುವ ಉದ್ದೇಶದಿಂದ ಮೊಟ್ಟಮೊದಲ ಬಾರಿಗೆ ನಾರ್ವೆ ದೇಶದಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಪ್ರಯೋಗ ನಡೆಯಿತು.
- ಈ ಪ್ರಯೋಗ ಯಶಸ್ವಿಯಾದುದರಿಂದ ‘ನಾರ್ವೆ ತಡೆಗೋಡೆ’ ಮಾದರಿ ಎಲ್ಲೆಡೆ ಪ್ರಸಿದ್ಧಿಯಾಯಿತು. ಇಂದು ವಿಶ್ವದ ಹಲವು ರಾಷ್ಟ್ರಗಳು ಬೃಹತ್ ನೀರಾವರಿ ಯೋಜನೆಗಳಲ್ಲಿನ ಮುಳುಗಡೆ ಪ್ರಮಾಣ ತಗ್ಗಿಸಲು ‘ನಾರ್ವೆ ತಡೆಗೋಡೆ ಮಾದರಿ’ಯನ್ನು ಅಳವಡಿಸಿಕೊಳ್ಳುತ್ತಿವೆ’ ಎಂದು ಶಿವಯೋಗಿ ಕಳಸದ ತಿಳಿಸಿದರು.
ತಡೆಗೋಡೆ ನಿರ್ಮಿಸಿದರೆ ಲಾಭ
- 12 ಹಳ್ಳಿಗಳ ಮುಳುಗಡೆ ತಡೆಯಬಹುದು.
- ಇದರಿಂದ ₨ 5600 ಕೋಟಿ ಉಳಿತಾಯ.
- 5 ಸಾವಿರ ಎಕರೆ ಫಲವತ್ತಾದ ಕೃಷಿ ಭೂಮಿ ಉಳಿಯಲಿದೆ.
- 47,500 ಜನರ ಸ್ಥಳಾಂತರ ತಪ್ಪಿಸಬಹುದು.
- 12 ಪುನರ್ವಸತಿ ಕೇಂದ್ರ ನಿರ್ಮಾಣದ ಅಗತ್ಯ ಇರುವುದಿಲ್ಲ.
- ಪುನರ್ವಸತಿ ಕೇಂದ್ರಕ್ಕೆ ಬೇಕಾದ 2900 ಎಕರೆ ಭೂಮಿ ಉಳಿಯಲಿದೆ.
೨೦೧೬ ರ ವರೆಗಿನ ಬೆಳವಣಿಗೆ
- ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟುಗಳಿಂದ ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಹಂಚಿಕೆಯಾದ ಒಟ್ಟು 173 ಟಿಎಂಸಿ ಪೂರ್ಣ ಪ್ರಮಾಣದ ನೀರನ್ನು ಬಲಸಿಕೊಳ್ಳಲಾಗುತ್ತಿದೆ.
- ಕೃಷ್ಣ ಮೇಲ್ದಂಡೆ ಯೋಜನೆ ಹಂತ–1 ಮತ್ತು 2ರ ಅಡಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮುಳವಾಡ ಏತ ನೀರಾವರಿ ಯೋಜನೆ ಹಂತ–2, ಆಲಮಟ್ಟಿ ಎಡದಂಡೆ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ಇಂಡಿ ಶಾಖಾ ಕಾಲುವೆ, ಇಂಡಿ ಏತನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು 1.95 ಲಕ್ಷ ಹೆಕ್ಟೇರ್ ಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
- ಮುಳವಾಡ ಏತ ನೀರಾವರಿ ಯೋಜನೆಯಡಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 4 ಹಂತಗಳಲ್ಲಿ ನೀರನ್ನು ಎತ್ತಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ವಿಜಯಪುರ, ಸಿಂಧಗಿ ಮತ್ತು ಇಂಡಿ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಮೂರನೇ ಹಂತದ ಯೋಜನೆಯ ಅಂದಾಜು ವೆಚ್ಚ ₹ 4610.89 ಕೋಟಿಯಾಗಿದ್ದು ಈಗಾಗಲೇ ₹ 1031.50 ಕೋಟಿ ವೆಚ್ಚ ಮಾಡಲಾಗಿದೆ.
- ಆಲಮಟ್ಟಿ ಎಡದಂಡೆ ಕಾಲುವೆ ಜಾಲದ ಮೂಲಕ 4.60 ಟಿಎಂಸಿ ನೀರನ್ನು ಮುದ್ದೇಬಿಹಾಳ ಮತ್ತು ಬಸವನಬಾಗೇವಾಡಿ ತಾಲ್ಲೂಕಿನ 20,235 ಹೆಕ್ಟೇರ್ ಪ್ರದೇಶಕ್ಕೆ ಒದಗಿಸಲಾಗುತ್ತಿದೆ. ಇದಕ್ಕಾಗಿ ₹232.67 ಕೋಟಿ ಖರ್ಚು ಮಾಡಲಾಗಿದೆ. ಇದಲ್ಲದೆ ಚಿಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೂ ಕ್ರಮ ಕೈಗೊಳ್ಳಲಾಗಿದೆ.
- ಭೂಸ್ವಾಧೀನ ಪಡಿಸಿಕೊಳ್ಳಬೇಕಾದ 1,34,107 ಎಕರೆ ಪೈಕಿ 60 ಸಾವಿರ ಎಕರೆ ಪ್ರದೇಶದ ಭೂಸ್ವಾಧೀಣಕ್ಕೆ 11(1) ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್ವಸತಿಗೆ ತಗಲುವ ವೆಚ್ಚ ₹ 31,894 ಕೋಟಿ ಎಂದೂ ಅಂದಾಜಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕ್ರಿಯಾ ಯೋಜನೆ ಪರಿಶೀಲನಾ ಸಮಿತಿ ರಚಿಸಲಾಗಿದೆ. ಮುಳುಗಡೆ ಹೊಂದುವ 20 ಗ್ರಾಮಗಳ ಪೈಕಿ 11 ಗ್ರಾಮಗಳ ಮುಳುಗಡೆ ತಡೆಯಲು ವಿನೂತನ ತಾಂತ್ರಿಕ ಪರಿಹಾರ ಕಂಡುಕೊಳ್ಳಲೂ ಯತ್ನಿಸಲಾಗುತ್ತಿದೆ.
ತೆಲಂಗಾಣಾ ಉದಯದ ನಂತರದ ಸಮಸ್ಯೆ
- ಆಂಧ್ರ ಪ್ರದೇಶವು, ಆಂದ್ರ ಮತ್ತು ತೆಲಂಗಾಣಾ ಎಂದು ವಿಭಝಿತವಾದ ಮೇಲೆ ಕೃಷ್ಣಾನದಿನೀರು ಹಂಚಿಕೆ ಸಮಸ್ಯೆ ಎದುರಾಗಿ ಕೃಷ್ಣಾ ನದಿ ನ್ಯಾಯಾಧಿಕರಣದಮುಂದೆ ತೆಂಗಾಣಾ ಆಂದ್ರ ಗಳ ನೀರಿನ ಹಂಚಿಕೆಯ ಅರ್ಜಿ ವಿಚಾರಣೆಗೆ ಬಂದಿತ್ತು. ಕೃಷ್ಣಾನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿದಿದ್ದು, ಯೋಜನಾವಾರು ನೀರು ಹಂಚಿಕೆ ಸಾಧ್ಯವಿಲ್ಲ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ ಮಹತ್ವದ ತೀರ್ಪು ನೀಡಿದೆ. ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕು. ಕೃಷ್ಣಾ ನದಿ ನೀರಿನ ಬಗ್ಗೆ ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬೃಜೇಶ್ ಕುಮಾರ್ ನೇತೃತ್ವದ ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ ನೀಡಲಾಗಿರುವ ನೀರನ್ನೇ ತೆಲಂಗಾಣವು ಹಂಚಿಕೊಳ್ಳಬೇಕು ಎಂದು ತೀರ್ಪು ನೀಡಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಮಾತ್ರ ನೀರು ಹಂಚಿಕೆ ಸಾಧ್ಯ ಎಂದು ಹೇಳಿದೆ.
- ಕೃಷ್ಣಾ ನ್ಯಾಯಾಧಿಕರಣವು 2010ರಲ್ಲಿ ಅಂತಿಮ ಐ ತೀರ್ಪು ಮತ್ತು 2013ರ ಸ್ಪಷ್ಟತಾ ತೀರ್ಪುಗಳ ಮೂಲಕ ಕೃಷ್ಣಾ ಕೊಳ್ಳದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದರನ್ವಯ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರನ್ನು ಹಂಚಿಕೆಯಾಗಿದೆ. ಆದರೆ ಆಂಧ್ರಪ್ರದೇಶ ಪುನರ್ ರಚನೆ ಕಾಯ್ದೆ-2014ರ ಅಡಿಯಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಂಗಡಣೆಯಾದ ಕಾರಣ ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕೆಂದು ತೆಲಂಗಾಣ ಕೋರಿತ್ತು, ಈ ಕೋರಿಕೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ವಿರೋಧ ಸೂಚಿಸಿತ್ತು.[೧]
ಆಲಮಟ್ಟಿ ಉದ್ಯಾನವನದ ಚಿತ್ರಗಳು
- ನಾರಾಯಣಪುರ ಜಲಾಶಯ(ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಕಟ್ಟಲಾಗಿದೆ.
ನಾರಾಯಣಪುರ ಜಲಾಶಯ(ಬಸವ ಸಾಗರ)ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.[೨] ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ.
ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಕಾಲುವೆಗಳು
ಬದಲಾಯಿಸಿಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟು ಹಾಗೂ ನಾರಾಯಣಪುರ ಆಣೆಕಟ್ಟುಗಳಿಂದಾದ ಕಾಲುವೆಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರುಣಿಸುತ್ತಿವೆ.
- ನಾರಾಯಣಪುರ ಎಡದಂದೆ ಕಾಲುವೆ
- ಮುಳವಾಡ ಏತ ನೀರಾವರಿ ಕಾಲುವೆ
- ಆಲಮಟ್ಟಿ ಎಡದಂದೆ ಕಾಲುವೆ
ನೀರಾವರಿ ಯೋಜನೆಗಳು
|
|
ಕೃಷಿ
ಬದಲಾಯಿಸಿಜಿಲ್ಲೆಯ ಪ್ರಮುಖ ಉದ್ಯೋಗವೇ ಕೃಷಿಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಕೇವಲ 15% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ 85% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಕ್ರ.ಸಂ. | ಪ್ರದೇಶದ ಹೆಸರು | ಲೆಕ್ಕಾಚಾರ | ಘಟಕ |
1 | ಒಟ್ಟು ಪ್ರದೇಶ | 10,53,471 | ಹೆಕ್ಟೆರ್ |
2 | ಕೃಷಿಯೊಗ್ಯ ಭೂಮಿ | 7,87,593 | ಹೆಕ್ಟೆರ್ |
3 | ಕಾಡು ಪ್ರದೇಶ | 1,977 | ಹೆಕ್ಟೆರ್ |
4 | ಕೃಷಿಯೊಗ್ಯವಲ್ಲದ ಭೂಮಿ | 16,383 | ಹೆಕ್ಟೆರ್ |
5 | ಕೃಷಿಗೆ ಲಭ್ಯವಿಲ್ಲದ ಭೂಮಿ | 64,906 | ಹೆಕ್ಟೆರ್ |
6 | ಪಾಳು ಭೂಮಿ | 2,52,952 | ಹೆಕ್ಟೆರ್ |
ತೋಟಗಾರಿಕೆ
ಬದಲಾಯಿಸಿತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ.
ಕೃಷಿ ಮಾರುಕಟ್ಟೆಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ.
ವಿಜಯಪುರ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು |
ಸಿಂದಗಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು
|
ಬಾಗೇವಾಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು
|
ಮುದ್ದೇಬಿಹಾಳ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು
|
ಇಂಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು
ರೈತ ಸಂಪರ್ಕ ಕೇಂದ್ರಗಳು
ಬದಲಾಯಿಸಿವಿಜಾಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ರೈತ ಸಂಪರ್ಕ ಕೇಂದ್ರಗಳಿವೆ.
- ವಿಜಯಪುರ - ಮಮದಾಪುರ, ಬಬಲೇಶ್ವರ, ತಿಕೋಟಾ, ನಾಗಠಾಣ.
- ಮುದ್ದೇಬಿಹಾಳ - ತಾಳಿಕೋಟ, ನಾಲತವಾಡ, ಢವಳಗಿ.
- ಸಿಂದಗಿ - ಆಲಮೇಲ, ದೇವರಹಿಪ್ಪರಗಿ.
- ಬಸವನ ಬಾಗೇವಾಡಿ - ಕೊಲ್ಹಾರ, ಹೂವಿನ ಹಿಪ್ಪರಗಿ.
- ಇಂಡಿ - ಬಳ್ಳೊಳ್ಳಿ, ಚಡಚಣ.
ಬೀಜ ಉತ್ಪಾದಕ ಕಂಪನಿಗಳು
ಬದಲಾಯಿಸಿ- ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., ವಿಜಯಪುರ.
- ಮಿತ್ರ ಅಗ್ರೊ ಕಾರ್ಪೊರೇಶನ್, ವಿಜಯಪುರ.
ಆಹಾರ ಸಂಸ್ಕರಣೆ ಘಟಕಗಳು
ಬದಲಾಯಿಸಿ- ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, ವಿಜಯಪುರ
ಮದ್ಯ ಘಟಕಗಳು
ಬದಲಾಯಿಸಿಅರಣ್ಯ
ಬದಲಾಯಿಸಿಅರಣ್ಯ ಇಲಾಖೆಯ ಖಾಸಗಿ ನರ್ಸರಿಗಳು
- ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ , ತಾ||ಜಿ|| ವಿಜಯಪುರ
- ಜಿ. ಆರ್. ನರ್ಸರಿ ಮತ್ತು ಫಾರ್ಮಸ್, ಜುಮನಾಳ, ತಾ||ಜಿ|| ವಿಜಯಪುರ
- ಭಾವಿಕಟ್ಟಿ ನರ್ಸರಿ, ಮಹಲ ಭಾಗಯತ, ತಾ||ಜಿ|| ವಿಜಯಪುರ
- ಶ್ರೀ ಬಸವೇಶ್ವರ ನರ್ಸರಿ, ತಿಗಣಿ ಬಿದರಿ, ತಾ||ಜಿ|| ವಿಜಯಪುರ
- ಗೀರ್ ನರ್ಸರಿ, ಹೀರೂರ, ತಾ||ಮುದ್ದೇಬಿಹಾಳ, ಜಿ|| ವಿಜಯಪುರ
ಅರಣ್ಯ ಇಲಾಖೆಯ ನರ್ಸರಿಗಳು
- ಭೂತನಾಳ ನರ್ಸರಿ, ಭೂತನಾಳ, ತಾ||ಜಿ|| ವಿಜಯಪುರ
- ಮದರಿ ನರ್ಸರಿ, ಮದರಿ, ತಾ|| ಮುದ್ದೇಬಿಹಾಳ, ವಿಜಯಪುರ
- ಸಂಕನಾಳ ನರ್ಸರಿ, ಸಂಕನಾಳ, ತಾ|| ಬಸವನ ಬಾಗೇವಡಿ, ಜಿ|| ವಿಜಯಪುರ
ವಿಜಯಪುರ ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳು
ಅಡವಿ ಸೋಮನಾಳ, ಆಲಕೊಪ್ಪರ, ಅಂಜುಟಗಿ, ಬಬಲಾದ, ಬಾಬಾನಗರ, ಬಬಲೇಶ್ವರ, ಬಸ್ತಿಹಾಳ, ಭೂತನಾಳ, ಬೆಕಿನಾಳ, ಬೂದಿಹಾಳ, ಚಿಕ್ಕಬೇವನೂರ, ದೇವರನಿಂಬರಗಿ, ಧುಮಕನಾಳ, ಗುಂದವಾನ, ಹಡಗಲಿ, ಹಡಲಸಂಗ, ಹಡಗಿನಾಳ, ಹಳಗುಣಕಿ, ಹಂದಿಗನೂರ, ಹರನಾಳ, ದೇವರ ಹುಲಗಬಾಳ, ಇಂಚಗೇರಿ, ಇಂಗಳೇಶ್ವರ, ಇಟ್ಟಂಗಿಹಾಳ, ಜಕ್ಕೇರಾಳ, ಜಾಲವಾದ, ಜಂಬಲದಿನ್ನಿ, ಜೇವೂರ, ಕಂಬಾಗಿ, ಕಣಕಾಲ, ಕನ್ನಾಳ, ಕವಡಿಮಟ್ಟಿ,ಕೇಸಾಪುರ, ಕ್ಯಾತನಡೋಣಿ, ಮಧಬಾವಿ, ಮಣ್ಣೂರ, ಮುಳವಾಡ, ಮುತ್ತಗಿ, ಮುತ್ತಲದಿನ್ನಿ, ನಾಗರಬೆಟ್ಟ, ನಿಡೋಣಿ, ಸಂಗಾಪುರ(ಎಸ್.ಹೆಚ್), ಸಂಕನಾಳ, ಸಾವಳಸಂಗ, ಶಿವಾಪುರ, ತಡವಲಗಾ, ಉಪ್ಪಲದಿಣ್ಣಿ, ವರ್ಕನಹಳ್ಳಿ.
ಸಸ್ಯಾಗಾರದ ಹೆಸರ
- ಬಸವವನ ಸಸ್ಯಾಗಾರ, ವಿಜಯಪುರ
- ಸಸ್ಯಾಗಾರ, ವಿಜಯಪುರ
- ವಿಜಯಪುರ ಕ್ಷೇತ್ರ, ವಿಜಯಪುರ
- ಇಂಡಿ ಸಸ್ಯಾಗಾರ, ಇಂಡಿ
- ದೇವರ ಹಿಪ್ಪರಗಿ ಸಸ್ಯಾಗಾರ, ದೇವರ ಹಿಪ್ಪರಗಿ
- ಆಲಮೇಲ ಸಸ್ಯಾಗಾರ, ಆಲಮೇಲ
- ಆಲಮಟ್ಟಿ ಸಸ್ಯಾಗಾರ, ಆಲಮಟ್ಟಿ
ಶೀತಲಿಕರಣ ಘಟಕಗಳು
ಬದಲಾಯಿಸಿ
|
|
- ಕರ್ನಾಟಕ ರಾಜ್ಯ ಕೃಷಿ ಉತ್ಪಾದಕ ಪ್ರಕ್ರಿಯ ಮತ್ತು ರಫ್ತು ನಿಗಮ ಶೀತಲಿಕರಣ ಘಟಕ, ವಿಜಯಪುರ
ಹಾಲು ಉತ್ಪಾದಕ ಘಟಕಗಳು
ಬದಲಾಯಿಸಿಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.
ಹಾಲು ಉತ್ಪಾದಕ ಸಹಕಾರಿ ಸಂಘಗಳು
ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು
|
ವಿಜಯಪುರ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು
|
ಇಂಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು
|
ಮುದ್ದೇಬಿಹಾಳ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು
ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ
ಬದಲಾಯಿಸಿಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆ ವಿಜಯಪುರದಲ್ಲಿದೆ.
ಬೆಳೆಗಳು
ಬದಲಾಯಿಸಿಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯಗಳು
ಬದಲಾಯಿಸಿಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿಗಳು
ಬದಲಾಯಿಸಿತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ವಿದ್ಯುತ್ ಪರಿವರ್ತನಾ ಕೇಂದ್ರಗಳು
ಬದಲಾಯಿಸಿವಿಜಯಪುರ ಜಿಲ್ಲೆಯ ವಿದ್ಯುತ್ ಕೇಂದ್ರಗಳು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯ ವಾಪ್ತಿಯಲ್ಲಿ ಬರುತ್ತವೆ.
- ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ , ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ
- ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ
ಇದು ಭಾರತ ಸರಕಾರದ ಉಷ್ಣ ವಿದ್ಯುತ್ ಯೋಜನೆಯಾಗಿದ್ದು ಎನ್.ಟಿ.ಪಿ.ಸಿ.ಯು 20,000 ಕೋಟಿ ರೂಪಾಯಿಯ ಬಂಡವಾಳ ಹೊಡಿದೆ. 4,000 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ.
ವಿಜಯಪುರ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು
|
ಇಂಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು
|
ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು
|
ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು
|
ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು
|
ಪವನ ವಿದ್ಯುತ್ ಘಟಕಗಳು
|
ಪಾಸ್ ಪೋರ್ಟ್ ಕೇಂದ್ರ
ಬದಲಾಯಿಸಿಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ, ವಿಜಯಪುರ
- ಕರ್ನಾಟಕದಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳು
ನ್ಯಾಯಾಲಯಗಳು
ಬದಲಾಯಿಸಿವಿಜಯಪುರ ಜಿಲ್ಲಾ ಹಾಗೂ ಸೇಶನ್ಸ್ ನ್ಯಾಯಾಲಯವು 1904ರಲ್ಲಿ ಸ್ಥಾಪನೆಯಾಯಿತು.
- ವಿಜಯಪುರ ಜಿಲ್ಲಾ ನ್ಯಾಯಾಲಯ, ವಿಜಯಪುರ
- ಟಿ.ಎಫ್.ಸಿ. ನ್ಯಾಯಾಲಯ, ವಿಜಯಪುರ
- ಕಾರ್ಮಿಕರ ನ್ಯಾಯಾಲಯ, ವಿಜಯಪುರ
- ಕುಟುಂಬ ನ್ಯಾಯಾಲಯ, ವಿಜಯಪುರ
- ಜೆ.ಎಮ್.ಎಫ್.ಸಿ. ನ್ಯಾಯಾಲಯ, ವಿಜಯಪುರ
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ನ್ಯಾಯಾಲಯವಿದೆ.
- ತಾಲೂಕು ಸಿವಿಲ್ ನ್ಯಾಯಾಲಯ, ಇಂಡಿ
- ತಾಲೂಕು ಸಿವಿಲ್ ನ್ಯಾಯಾಲಯ, ಬಸವನ ಬಾಗೇವಾಡಿ
- ತಾಲೂಕು ಸಿವಿಲ್ ನ್ಯಾಯಾಲಯ, ಸಿಂದಗಿ
- ತಾಲೂಕು ಸಿವಿಲ್ ನ್ಯಾಯಾಲಯ, ಮುದ್ದೇಬಿಹಾಳ
ಪೋಲಿಸ್(ಆರಕ್ಷಕ) ಠಾಣೆಗಳು
ಬದಲಾಯಿಸಿವಿಜಯಪುರ ನಗರದಲ್ಲಿರುವ ಎಸ್.ಪಿ. ಆಫೀಸ್ ಕೇಂದ್ರ ಕಚೇರಿಯೊಂದಿಗೆ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸುತ್ತವೆ.
ವಿಜಯಪುರ ನಗರದಲ್ಲಿರುವ ಪೋಲಿಸ್ ಠಾಣೆಗಳು
|
ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು
|
ಬಸವನ ಬಾಗೇವಾಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು
|
ವಿಜಯಪುರ ತಾಲ್ಲೂಕಿನ ಪೋಲಿಸ್ ಠಾಣೆಗಳು
|
ಇಂಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು
|
ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು
|
ವಿಶೇಷ ಪೋಲಿಸ್ ಠಾಣೆಗಳು
- ಅಬಕಾರಿ ಪೋಲಿಸ್ ಠಾಣೆ, ವಿಜಯಪುರ
- ವಿಶೇಷ ಅಬಕಾರಿ ಪೋಲಿಸ್ ಠಾಣೆ, ವಿಜಯಪುರ
- ಕೆಪಿಟಿಸಿಎಲ್ ಪೋಲಿಸ್ ಠಾಣೆ, ವಿಜಯಪುರ
- ರೈಲ್ವೆ ಪೋಲಿಸ್ ಠಾಣೆ, ವಿಜಯಪುರ
- ಲೋಕಾಯುಕ್ತ ಪೋಲಿಸ್ ಠಾಣೆ, ವಿಜಯಪುರ
ಅಗ್ನಿಶಾಮಕ ಠಾಣೆಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಸುಮಾರ 5 ಅಗ್ನಿಶಾಮಕ ಠಾಣೆಗಳಿವೆ.
- ಅಗ್ನಿಶಾಮಕ ಠಾಣೆ, ವಿಜಯಪುರ
- ಅಗ್ನಿಶಾಮಕ ಠಾಣೆ, ಸಿಂದಗಿ
- ಅಗ್ನಿಶಾಮಕ ಠಾಣೆ, ಮುದ್ದೇಬಿಹಾಳ
- ಅಗ್ನಿಶಾಮಕ ಠಾಣೆ, ಬಸವನ ಬಾಗೇವಾಡಿ
- ಅಗ್ನಿಶಾಮಕ ಠಾಣೆ, ಇಂಡಿ
ನದಿಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಹರಿಯುವ ನದಿಗಳೆಂದರೆ ಕೃಷ್ಣಾ , ಭೀಮಾ ಮತ್ತು ಡೋಣಿ.
ಉಗಮ ಸ್ಥಾನ
ಕೃಷ್ಣಾ ನದಿಯು ಮಹಾರಾಷ್ಟ್ರ ರಾಜ್ಯದ ಮಹಾಬಳೇಶ್ವರ ಸಮೀಪದ ಸಹ್ಯಾದ್ರಿ ಬೆಟ್ಟ ಪ್ರದೇಶದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ದೂರ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಹರಿಯುತ್ತದೆ. ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಮಲಪ್ರಭಾ, ಘಟಪ್ರಭಾ ಮತ್ತು ಡೋಣಿ ನದಿಗಳು ಕೃಷ್ಣಾ ನದಿಯ ಉಪನದಿಗಳಾಗಿವೆ.
ನದಿಗೆ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಬಳಿ ಹಿಪ್ಪರಗಿ ಆಣೆಕಟ್ಟು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಹತ್ತಿರ ಆಲಮಟ್ಟಿ ಆಣೆಕಟ್ಟು ಮತ್ತು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಬಾಚಿಹಾಳ - ಸಿದ್ದಾಪುರ ಹತ್ತಿರ ನಾರಾಯಣಪುರ ಆಣೆಕಟ್ಟುನ್ನು ಕಟ್ಟಲಾಗಿದೆ. ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದುರು ಕಿ.ಮಿ. ಇರುತ್ತದೆ.
ಕೃಷ್ಣಾ ನದಿಗೆ ಅಡ್ಡಲಾಗಿ ಸುಮಾರು 10ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ಹಿರಿ ಹೊಳಿಯಂತಲು ಕರೆಯುತ್ತಾರೆ. ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. ಈ ನದಿಯು ಉತ್ತರ ಕರ್ನಾಟಕದ ಜೀವ ನದಿಯಾಗಿದೆ. ರಾಯಚೂರ ಜಿಲ್ಲೆಯ ಕುಡ್ಲು ಎಂಬಲ್ಲಿ ಭೀಮಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ.
ಶಿಲಾನ್ಯಾಸ
1962ರಲ್ಲಿ ಭಾರತದ ಪ್ರಧಾನ ಮಂತ್ರಿಯಾದ ಶ್ರೀ ಲಾಲ ಬಹಾದ್ದೂರ ಶಾಸ್ತ್ರಿಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು 70 ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು ಮಲಪ್ರಭಾ ಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. 1994ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಆಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪುರ್ಣಪ್ರಮಾಣದ ಎತ್ತರವಾದ 524 ಮೀಟರುಗಳ ಬದಲಾಗಿ 519.60 ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ.
ಮುಳುಗಡೆ ಪ್ರದೇಶ
ಆಲಮಟ್ಟಿಯಿಂದ ಹಿಪ್ಪರಗಿವರೆಗೆ 136 ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು 201 ಗ್ರಾಮಗಳು ಹಾಗು ಬಾಗಲಕೋಟೆಯ ಬಹುತೇಕ ಭಾಗ ಮುಳುಗಡೆಯಾಗಿವೆ.
ಜಲ ಸಂಗ್ರಹ
ಹಿಪ್ಪರಗಿಯಲ್ಲಿ 13 ಟಿ.ಎಮ್.ಸಿ., ಆಲಮಟ್ಟಿಯಲ್ಲಿ 123 ಟಿ.ಎಮ್.ಸಿ. (519.60 ಮೀಟರವರೆಗೆ) ಹಾಗು ನಾರಾಯಣಪುರದಲ್ಲಿ 37 ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ 173 ಟಿ.ಎಮ್.ಸಿ. ನೀರಿನ ಪುರ್ಣ ಸಂಗ್ರಹವಾದಂತಾಗಿದೆ.
ನೀರಾವರಿ ಪ್ರದೇಶ
ಪ್ರಥಮ ಘಟ್ಟದಲ್ಲಿ 119 ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು 6,22,000 ಹೆಕ್ಟೇರ್ ಜಮೀನಿಗೆ ಹಾಗು ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ 3,97,000 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ.
ವಿದ್ಯುತ್ ಉತ್ಪಾದನೆ
15 ಮೆಗಾವ್ಯಾಟ್ ಉತ್ಪಾದಿಸುವ 1 ಹಾಗು 55 ಮೆಗಾವ್ಯಾಟ್ ಉತ್ಪಾದಿಸುವ 3 ಘಟಕಗಳನ್ನು ಸ್ಥಾಪಿಸಲಾಗಿದೆ.
ವೆಚ್ಚ
ಜಲಾಶಯ ನಿರ್ಮಾಣಕ್ಕಾಗಿ 5500 ಕೋಟಿ, ಸಂಪರ್ಕ ವ್ಯವಸ್ಥೆಗಾಗಿ 400 ಕೋಟಿ ಹಾಗು ಪುನರ್ವಸತಿಗಾಗಿ 2100 ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ.
ಉದ್ಘಾಟನೆ
21 ಆಗಸ್ಟ್ 2006ರಂದು ಭಾರತದ ಆಗಿನರಾಷ್ಟ್ರಪತಿಯಾಗಿದ್ದ ಶ್ರೀ ಅಬ್ದುಲ್ ಕಲಾಂ ಅವರು ಲಾಲ ಬಹಾದ್ದೂರ ಶಾಸ್ತ್ರಿ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು.
ಉಗಮ ಮತ್ತು ಸಂಗಮ
ಭೀಮಾ ನದಿಯು ಮಹಾರಾಷ್ಟ್ರದಲ್ಲಿ ಪುಣೆಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಭೀಮಾ ನದಿಯು ಕೃಷ್ಣಾ ನದಿಯ ಉಪನದಿಯಾಗಿದೆ. ವಿಜಯಪುರ ಜಿಲ್ಲೆಯ ದೆಸೂರ ಎಂಬಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತದೆ.
ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯ ಕಡ್ಲೂರು ಊರ ಹತ್ತಿರ, ಆಂಧ್ರಪ್ರದೇಶದ ಗಡಿಗೆ ಸಮೀಪವಾಗಿ ಈ ನದಿಯು ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು 300 ಕಿ.ಮೀ.ಗಳಷ್ಟು ಹರಿದಿದೆ.
ಉಪನದಿಗಳು
ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು.
ಡೋಣಿ ನದಿಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು ಗುಲ್ಬರ್ಗಾ ಜಿಲ್ಲೆಯ ಕೋಡೆ ಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. ಡೋಣಿ ಬೆಳೆದರೆ ಓಣಿಲ್ಲ ಜೋಳಯಂಎಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ ವಿಜಯಪುರ ಜೋಳ ಎಂದು ಪ್ರಸಿದ್ದವಾಗಿದೆ.
ಕೈಗಾರಿಕೆಗಳು
ಬದಲಾಯಿಸಿಸಕ್ಕರೆ ಕಾರ್ಖಾನೆಗಳು
ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯುದರಿಂದ ದಶಕಗಳ ಹಿಂದೆಯೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಪ್ರಮುಖವಾಗಿ
|
|
ಕೈಗಾರಿಕಾ ಪ್ರದೇಶಗಳು
ಬದಲಾಯಿಸಿಕರ್ನಾಟಕ ವಸತಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಈ ಕೆಳಗಿನ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದೆ.
ಕೈಗಾರಿಕಾ ಪ್ರದೇಶಗಳು
- ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 1
- ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 2
- ಮಹಲ ಬಾಗಾಯತ್ ಕೈಗಾರಿಕಾ ಪ್ರದೇಶ
ಕೈಗಾರಿಕಾ ಎಸ್ಟೇಟುಗಳು
|
|
|
|
|
ಆಸ್ಪತ್ರೆಗಳು
ಬದಲಾಯಿಸಿವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ.
ಸಾಮಾನ್ಯ ಆಸ್ಪತ್ರೆಗಳು
|
|
|
ಆಯುರ್ವೇದ ಆಸ್ಪತ್ರೆಗಳು
ಹೋಮೊಯೋಪತಿ ಆಸ್ಪತ್ರೆಗಳು
|
ದಂತ ಚಿಕಿತ್ಸಾಲಯಗಳು
|
ಯಶಸ್ವಿನಿ ಯೋಜನೆ ಹೊಂದಿರುವ ಆಸ್ಪತ್ರೆಗಳು
|
|
ವಾಜಪೇಯಿ ಆರೋಗ್ಯಶ್ರೀ ಯೋಜನೆ ಹೊಂದಿರುವ ಆಸ್ಪತ್ರೆಗಳು
|
|
ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.
ಕ್ರ.ಸಂ. | ಆರೋಗ್ಯ ಕೇಂದ್ರಗಳು | ಸಂಖ್ಯೆ |
1 | ಜಿಲ್ಲಾ ಆಸ್ಪತ್ರೆ | 1 |
2 | ಸಮುದಾಯ ಆರೋಗ್ಯ ಕೇಂದ್ರಗಳು | 9 |
3 | ಪ್ರಾಥಮೀಕ ಆರೋಗ್ಯ ಕೇಂದ್ರಗಳು | 63 |
4 | ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7 | 42 |
5 | ಪ್ರಾಥಮೀಕ ಆರೋಗ್ಯ ಉಪ ಕೇಂದ್ರಗಳು | 298 |
6 | ಅಲೋಪತಿ ಆಸ್ಪತ್ರೆಗಳು | 74 |
7 | ಆಯುರ್ವೇದ ಆಸ್ಪತ್ರೆಗಳು | 4 |
8 | ಖಾಸಗಿ ಆಸ್ಪತ್ರೆಗಳು | 81 |
ಸಮುದಾಯ ಆರೋಗ್ಯ ಕೇಂದ್ರಗಳು
ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7
|
ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು
|
ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು
|
ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಪಶು ಆಸ್ಪತ್ರೆಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಪಶು ಆಸ್ಪತ್ರೆಗಳು, 60 ಪಶು ಚಿಕಿತ್ಸಾಲಯಗಳು ಹಾಗೂ 50 ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಲ್ಲದೆ 5 ಕೃತಕ ಗರ್ಭಧಾರಣೆ ಕೇಂದ್ರಗಳಿವೆ.
ಪಶು ಆಸ್ಪ ತ್ರೆಗಳು
ಪಶು ಕೃತಕ ಗರ್ಭಧಾರಣಾ ಕೇಂದ್ರಗಳು
ಕವಲಗಿ, ಹೊನಗನಹಳ್ಳಿ , ನಾಗಠಾಣ, ತೊರವಿ, ಹಿಟ್ನಳ್ಳಿ , ಸಾರವಾಡ
ಪಶು ಚಿಕಿತ್ಸಾಲಯಗಳು
|
ಪ್ರಾಥಮಿಕ ಪಶು ಚಿಕಿತ್ಸಾಲಯಗಳು
|
ಆಕಾಶವಾಣಿ ಕೇಂದ್ರ
ಬದಲಾಯಿಸಿವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. 101.8 ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು ಮಹಾತ್ಮ ಗಾಂಧಿ ವೃತ್ತದಿಂದ 4 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ.
ಕೇಂದ್ರ ಸರಕಾರವು ಸ್ಥಾಪಿಸಿದ 'ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : 18-09-1997 ರಂದು ಎಫ್.ಎಮ್. ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ. ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವುದರೊಂದಿಗೆ ದೆಹಲಿ, ಬೆಂಗಳೂರು, ಮುಂಬಯಿ ವಿವಿಧ ಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ.
2x*3 ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು 80. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ.
ವಾಹನ ಸಾರಿಗೆ
ಬದಲಾಯಿಸಿವಿಜಯಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ.
ನಗರ ಸಾರಿಗೆ ವಾಹನ ಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ ಮತ್ತು ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳು ರಾಜ್ಯ, ಅಂತರಾಜ್ಯ ಮತ್ತು ಜಿಲ್ಲಾದ್ಯಂತ ಸಂಚರಿಸುತ್ತವೆ.
ವಿಜಯಪುರದಿಂದ ಮುಂಬಯಿ, ಪುನಾ, ಬೆಂಗಳೂರು, ಹೈದರಾಬಾದುಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ (ಗೋವಾ ಮತ್ತು ಮಹಾರಾಷ್ಟ್ರ) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ - ಕೆ ಎ - 28 ಆಗಿದೆ. ವಿಜಯಪುರ ನಗರದ ಬಾಗಲಕೋಟ ರಸ್ತೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಹೊಂದಿದೆ.
ರೈಲು ಸಾರಿಗೆ
ಬದಲಾಯಿಸಿವಿಜಯಪುರದಿಂದ ಹೊರಡುವ ರೈಲುಗಳು
ವಿಜಯಪುರ ರೈಲು ವಿಭಾಗವು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುತ್ತದೆ. ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿದೆ.
ಕ್ರ.ಸಂ. | ರೈಲಿನ ಸಂಖ್ಯೆ | ಆರಂಭ ಸ್ಥಳ | ಅಂತಿಮ ಸ್ಥಳ | ರೈಲಿನ ಹೆಸರು | ದಿನಗಳು(ವಾರಕ್ಕೆ) |
1 | 19405/19406 | ಬೆಂಗಳೂರು | ಅಮದಾಬಾದ್ | ಯಶವಂತಪುರ ಎಕ್ಸಪ್ರೆಸ್ | ಒಂದು ಸಲ |
2 | 16217/16202 | ಶಿರಡಿ | ಮೈಸೂರ | ಮೈಸೂರ - ಸಾಯಿನಗರ ಶಿರಡಿ ಎಕ್ಸಪ್ರೆಸ್ | ಒಂದು ಸಲ |
3 | 16201/16202 | ಬೆಂಗಳೂರು | ಜೈಪುರ | ಯಶವಂತಪುರ ಗರೀಬ್ ರಥ ಸ್ಪೇಶಲ್ ಎಕ್ಸಪ್ರೆಸ್ | ಒಂದು ಸಲ |
4 | 06511/06512 | ಮುಂಬಯಿ | ವಿಜಯಪುರ | ವಿಜಯಪುರ - ಮುಂಬಯಿ ಪಾಸ್ಟ್ ಪ್ಯಾಸೆಂಜರ | ನಾಲ್ಕು ದಿನ |
5 | 16535/16536 | ಸೊಲ್ಲಾಪುರ | ಮೈಸೂರ | ಗೋಳಗುಂಬಜ್ ಎಕ್ಸಪ್ರೆಸ್ | ಪ್ರತಿದಿನ |
6 | 17307/17308 | ಬಾಗಲಕೋಟ | ಮೈಸೂರ | ಬಸವ ಎಕ್ಸಪ್ರೆಸ್ | ಪ್ರತಿದಿನ |
7 | 11423/11424 | ಸೊಲ್ಲಾಪುರ | ಹುಬ್ಬಳ್ಳಿ | ಸೊಲ್ಲಾಪುರ ಎಕ್ಸಪ್ರೆಸ್ | ಪ್ರತಿದಿನ |
8 | 01493/01494 | ಹುಬ್ಬಳ್ಳಿ | ವಿಜಯಪುರ | ವಿಜಯಪುರ ಇಂಟರಸಿಟಿ ಎಕ್ಸಪ್ರೆಸ್ | ಪ್ರತಿದಿನ |
9 | 57641/57642 | ಸೊಲ್ಲಾಪುರ | ಗದಗ | ಗದಗ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |
10 | 56903/56904 | ಧಾರವಾಡ | ಸೊಲ್ಲಾಪುರ | ಧಾರವಾಡ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |
11 | 56905/56906 | ಸೊಲ್ಲಾಪುರ | ಹುಬ್ಬಳ್ಳಿ | ಹುಬ್ಬಳ್ಳಿ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |
12 | 57685/57686 | ವಿಜಯಪುರ | ಸೊಲ್ಲಾಪುರ | ವಿಜಯಪುರ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |
13 | 57133/57134 | ವಿಜಯಪುರ | ರಾಯಚೂರ | ವಿಜಯಪುರ - ರಾಯಚೂರ ಪ್ಯಾಸೆಂಜರ | ಪ್ರತಿದಿನ |
14 | 57129/57130 | ವಿಜಯಪುರ | ಹೈದರಾಬಾದ್ | ಬೊಳರಮ್ ಪ್ಯಾಸೆಂಜರ | ಪ್ರತಿದಿನ |
ವಿಜಯಪುರ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು
ದಕ್ಷಿಣದಿಂದ ಉತ್ತರದ ಕಡೆಗೆ
ವಿಮಾನಯಾನ ಸಾರಿಗೆ
ಬದಲಾಯಿಸಿವಿಮಾನ ನಿಲ್ದಾಣ
ವಿಜಯಪುರ ವಿಮಾನ ನಿಲ್ದಾಣವು ಪಟ್ಟಣದಿಂದ 5ಕಿ.ಮೀ (ಮಧಬಾವಿ-ಭುರಣಾಪುರ ಗ್ರಾಮದ ಹತ್ತಿರ) ದೂರವಿದೆ. ಇದಕ್ಕಾಗಿ ರಾಜ್ಯ ಸರಕಾರವು 725 ಎಕರೆ ಭೂಮಿಯನ್ನು ಖರೀದಿಸಿದೆ.
ಜಲಸಾರಿಗೆ
ಬದಲಾಯಿಸಿಬಂದರು
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು
ಬದಲಾಯಿಸಿರಾಷ್ಟ್ರೀಯ ಹೆದ್ದಾರಿಗಳು
ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - 13 ಮತ್ತು ರಾಷ್ಟ್ರೀಯ ಹೆದ್ದಾರಿ - 218
ರಾಷ್ಟ್ರೀಯ ಹೆದ್ದಾರಿ - 52 => ಅಂಕೋಲಾ - ಯಲ್ಲಾಪುರ - ಹುಬ್ಬಳ್ಳಿ - ಬಾಗಲಕೋಟ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸೋಲಾಪುರ.
ರಾಷ್ಟ್ರೀಯ ಹೆದ್ದಾರಿ - 50 => ಚಿತ್ರದುರ್ಗ - ಹೊಸಪೇಟೆ - ಇಲಕಲ್ಲ - ವಿಜಯಪುರ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ - ಬೀದರ.
ರಾಜ್ಯ ಹೆದ್ದಾರಿಗಳು
ಜಿಲ್ಲೆಯಲ್ಲಿ ಸುಮಾರು ೯ ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ,
ರಾಜ್ಯ ಹೆದ್ದಾರಿ - 12 => ವಿಜಯಪುರ - ತಿಕೋಟಾ - ಅಥಣಿ - ಕಾಗವಾಡ - ಅಂಕಲಿ - ಚಿಕ್ಕೋಡಿ - ನಿಡಸೋಸಿ - ಸಂಕೇಶ್ವರ.
ರಾಜ್ಯ ಹೆದ್ದಾರಿ - 16 => ಸಿಂದಗಿ - ಶಹಾಪುರ - ಯಾದಗಿರಿ - ಗುರಮಟ್ಕಲ್.
ರಾಜ್ಯ ಹೆದ್ದಾರಿ - 34 => ಅಫಜಲಪುರ - ಆಲಮೇಲ - ಇಂಡಿ - ವಿಜಯಪುರ - ಜಮಖಂಡಿ - ಮುಧೋಳ - ಲೋಕಾಪುರ - ರಾಮದುರ್ಗ - ಸವದತ್ತಿ - ಧಾರವಾಡ.
ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.
ರಾಜ್ಯ ಹೆದ್ದಾರಿ - 43 => ತಿಕೋಟಾ - ಕನಮಡಿ - ಜತ್ತ.
ರಾಜ್ಯ ಹೆದ್ದಾರಿ - 55 => ಬಬಲೇಶ್ವರ - ಕಂಬಾಗಿ - ಗಲಗಲಿ - ಅಮಲಝರಿ - ಮಂಟೂರ - ಮುಧೋಳ - ಯಾದವಾಡ - ಯರಗಟ್ಟಿ.
ರಾಜ್ಯ ಹೆದ್ದಾರಿ - 60 => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ.
ರಾಜ್ಯ ಹೆದ್ದಾರಿ - 61 => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ.
ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.
ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರ
ಬದಲಾಯಿಸಿವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ.
ಕ್ರ.ಸಂ. | ತಾಲ್ಲೂಕುಗಳು | ಬಸವನ ಬಾಗೇವಾಡಿ | ವಿಜಯಪುರ | ಇಂಡಿ | ಮುದ್ದೇಬಿಹಾಳ | ಸಿಂದಗಿ |
1 | ಬಸವನ ಬಾಗೇವಾಡಿ | 0 | 45 | 85 | 37 | 57 |
2 | ವಿಜಯಪುರ | 45 | 0 | 55 | 82 | 60 |
3 | ಇಂಡಿ | 85 | 55 | 0 | 100 | 50 |
4 | ಮುದ್ದೇಬಿಹಾಳ | 37 | 82 | 100 | 0 | 80 |
5 | ಸಿಂದಗಿ | 57 | 60 | 50 | 80 | 0 |
ಸರಕಾರಿ ವಾಹನ ನಿಲ್ದಾಣಗಳು
ಬದಲಾಯಿಸಿಸರಕಾರಿ ವಾಹನ ಘಟಕಗಳು
ಬದಲಾಯಿಸಿ- ಬಸವನ ಬಾಗೇವಾಡಿ
- ವಿಜಯಪುರ
- ಇಂಡಿ
- ಮುದ್ದೇಬಿಹಾಳ
- ಸಿಂದಗಿ
- ತಾಳಿಕೋಟ
ಸೇತುವೆಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಸುಮಾರು 20ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ , ಭೀಮಾ, ಡೋಣಿ ನದಿ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ.
ವಾಹನ ತರಬೇತಿ ಶಾಲೆಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ.
- ಹೆರಳಗಿ ವಾಹನ ತರಬೇತಿ ಶಾಲೆ, ವಿಜಯಪುರ.
- ಶ್ರೀ ಬಗಲಿ ವಾಹನ ತರಬೇತಿ ಶಾಲೆ, ವಿಜಯಪುರ.
- ಸಿಟಿ ವಾಹನ ತರಬೇತಿ ಶಾಲೆ, ವಿಜಯಪುರ.
- ಶ್ರೀ ಸಾಯಿ ವಾಹನ ತರಬೇತಿ ಶಾಲೆ, ವಿಜಯಪುರ.
ವಾಹನ ಮಾರಾಟ ಮಳಿಗೆಗಳು
ಬದಲಾಯಿಸಿ
ದ್ವಿಚಕ್ರ ವಾಹನ ಮಾರಾಟ ಮಳಿಗೆಗಳು
ಟಿವಿಎಸ್ ದ್ವಿಚಕ್ರ ವಾಹನ ಮಾರಾಟ ಮಳಿಗೆಗಳು
|
ಕಾರಿನ ವಾಹನ ಮಾರಾಟ ಮಳಿಗೆಗಳು
ವಾಣಿಜ್ಯ ವಾಹನ ಮಾರಾಟ ಮಳಿಗೆಗಳು
|
ಟ್ರಾಕ್ಟರಿನ ವಾಹನ ಮಾರಾಟ ಮಳಿಗೆಗಳು
|
ಕ್ರೀಡಾಂಗಣ
ಬದಲಾಯಿಸಿವಿಜಯಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣ ದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ.
ಕ್ರೀಡೆ
ಬದಲಾಯಿಸಿವಿಜಯಪುರ ಜಿಲ್ಲೆಯು ಸೈಕ್ಲಿಸ್ಟಗಳ ಕಣಜ. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ, ಲಕ್ಕಪ್ಪ ಕುರಣಿ, ಸಂತೋಷ್ ಕುರಣಿ, ರಾಜು ಭಾಟಿ, ಆರತಿ ಭಾಟಿ, ಆನಂದ ದಂಡಿನ, ಲಕ್ಷ್ಮಣ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ, ಆಸೀಫ್ ಅತ್ತಾರ, ಶಹೀರಾ ಅತ್ತಾರ, ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಗಂಗೂ ಬಿರಾದಾರ, ಸೀಮಾ ಅಡಗಲ್ಲ, ಸಂಜು ನಾಯಕ,ಶಾಹಿರಾಬಾನು ಲೋಧಿ,ಸಾವಿತ್ರಿ ಹೆಬ್ಬಾಳಟ್ಟಿ, ಶಿವಲಿಂಗಪ್ಪ ಯಳಮೇಲಿ,ಮಲಿಕ್ ಅತ್ತಾರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ , ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲೆಯವರಾದ ಕಿರಣ ಕಟ್ಟಿಮನಿಯವರು ಕರ್ನಾಟಕ ಪ್ರೀಮಿಯರ್ ಲೀಗ್ನ ವಿಜಯಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ.
- ಕ್ರೀಡಾ ನಿಲಯ, ವಿಜಯಪುರ
ಚಿತ್ರ ಮಂದಿರಗಳು
ಬದಲಾಯಿಸಿವಿಜಯಪುರ ಜಿಲ್ಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ. ವಿಜಯಪುರ ನಗರದಲ್ಲಿ 7 ಚಿತ್ರ ಮಂದಿರಗಳು ಇವೆ.
ವಿಜಯಪುರ
|
ಸಿಂದಗಿ
ತಾಳಿಕೋಟ
|
ಮುದ್ದೇಬಿಹಾಳ
ಇಂಡಿ
|
ಬಸವನ ಬಾಗೇವಾಡಿ
ಚಡಚಣ
|
ರಾಜಕೀಯ
ಬದಲಾಯಿಸಿವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆಗೆ (ಕೆಳಮನೆ), ಒಬ್ಬರು ಲೋಕಸಭೆಗೆ (ಸಂಸದರು) ಮತ್ತು 5 ಜನ ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ.
ವಿಜಯಪುರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರಗಳು
- ವಿಜಯಪುರ ನಗರ ವಿಧಾನಸಭಾ ಕ್ಷೇತ್ರ
- ಬಬಲೇಶ್ವರ ವಿಧಾನಸಭಾ ಕ್ಷೇತ್ರ
- ಇಂಡಿ ವಿಧಾನಸಭಾ ಕ್ಷೇತ್ರ
- ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ
- ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ
- ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ
- ಸಿಂದಗಿ ವಿಧಾನಸಭಾ ಕ್ಷೇತ್ರ
- ನಾಗಠಾಣ ವಿಧಾನಸಭಾ ಕ್ಷೇತ್ರ
- ವಿಜಯಪುರ ನಗರ ವಿಧಾನಸಭಾ ಕ್ಷೇತ್ರ
ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ವಿಜಯಪುರ ನಗರ ಮತಕ್ಷೇತ್ರ(2018)ದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಹಾಲದಾರ ಗೌಸ್ ಮೊಹಿದ್ದೀನ್ ಅವರನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿಯಾದ ಸರದಾರ ಡಾ||ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ.ರಾಠೋಡ ಗೆದ್ದಿದ್ದರು. 1978ರಲ್ಲಿ ಜೆಎನ್ಪಿ ಪಕ್ಷದ ಸೈಯದ್ ಹಬೀಬುದ್ದೀನ್ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ ಬಿಜೆಪಿಯ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್ನ ಎಮ್.ಎಲ್.ಉಸ್ತಾದ 1989ರಲ್ಲೂ ಆಯ್ಕೆಯಾಗಿದ್ದರು. 1994ರಲ್ಲಿ ಬಸನಗೌಡ ಪಾಟೀಲ(ಯತ್ನಾಳ) ಮೂಲಕ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ ಬಿಜೆಪಿಯ ಅಪ್ಪು ಪಟ್ಟಣಶೆಟ್ಟಿಯವರನ್ನು ಸೋಲಿಸಿ ಎಮ್.ಎಲ್.ಉಸ್ತಾದ್ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. 2013ರಲ್ಲಿ ಕಾಂಗ್ರೆಸ್ನ ಡಾ| ಎಂ.ಎಸ್. ಬಾಗವಾನ ಆಯ್ಕೆಯಾದರು.
ವಿಜಯಪುರ ನಗರ ಕ್ಷೇತ್ರ ಕಾಂಗ್ರೆಸ್ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ.
ಕ್ಷೇತ್ರದ ವಿಶೇಷತೆ
- ಕೆ.ಟಿ.ರಾಠೋಡರವರು ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು.
- ಎಮ್.ಎಲ್.ಉಸ್ತಾದರವರು ಎಸ್.ಎಮ್.ಕೃಷ್ಣ ಮಂತ್ರಿಮಂಡಳದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ಭಾರತೀಯ ವ್ಯವಸ್ಥೆಯ ಔಷಧಿ ಮತ್ತು ಹೋಮಿಯೋಪತಿ ಖಾತೆಯ ಸಚಿವರಾಗಿದ್ದರು.
- ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ಬಿ.ಎಸ್.ಯಡಿಯ್ಯರಪ್ಪರವರ ಮಂತ್ರಿಮಂಡಳದಲ್ಲಿ ಜವಳಿ ಖಾತೆಯ ಸಚಿವರಾಗಿದ್ದರು.
- ಎಮ್.ಎಲ್.ಉಸ್ತಾದ್ 3 ಬಾರಿ, ಬಸನಗೌಡ ಪಾಟೀಲ(ಯತ್ನಾಳ) ಹಾಗೂ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರನ್ನು 2 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ.
- ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಕೇಂದ್ರ ಸಚಿವರಾದ ಬಸನಗೌಡ ಪಾಟೀಲ(ಯತ್ನಾಳ)ರನ್ನು 2 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ.
- ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ 5 ಬಾರಿ ಮುಸ್ಲಿಂ ನಾಯಕರು ಆಯ್ಕೆಯಾಗಿದ್ದಾರೆ.
ಜನಪ್ರತಿನಿಧಿಗಳ ವಿವರ
ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತರು | ಪಕ್ಷ | ಮತಗಳು | ಉಪಾಂತ ವಿಜೇತರು | ಪಕ್ಷ | ಮತಗಳು |
ವಿಜಯಪುರ ನಗರ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2018 | ವಿಜಯಪುರ ನಗರ ವಿಧಾನಸಭಾ ಕ್ಷೇತ್ರ | ಬಸನಗೌಡ ಪಾಟೀಲ(ಯತ್ನಾಳ) | ಬಿ.ಜೆ.ಪಿ. | 76308 | ಅಬ್ದುಲ್ ಹಮೀದ್ ಮುಸ್ರೀಫ್ | ಕಾಂಗ್ರೇಸ್ | 69895 |
2013 | ವಿಜಯಪುರ ನಗರ ವಿಧಾನಸಭಾ ಕ್ಷೇತ್ರ | ಡಾ.ಮಕಬುಲ್ ಬಾಗವಾನ | ಕಾಂಗ್ರೇಸ್ | 48615 | ಬಸನಗೌಡ ಪಾಟೀಲ(ಯತ್ನಾಳ) | ಜೆ.ಡಿ.ಎಸ್ | 39235 |
2008 | ವಿಜಯಪುರ ನಗರ ವಿಧಾನಸಭಾ ಕ್ಷೇತ್ರ | ಅಪ್ಪಾಸಾಹೇಬ ಪಟ್ಟಣಶೆಟ್ಟಿ | ಬಿ.ಜೆ.ಪಿ. | 34217 | ಎಸ್.ಎ.ಹೊರ್ತಿ | ಕಾಂಗ್ರೇಸ್ | 16653 |
2004 | ವಿಜಯಪುರ ವಿಧಾನಸಭಾ ಕ್ಷೇತ್ರ | ಅಪ್ಪಾಸಾಹೇಬ ಪಟ್ಟಣಶೆಟ್ಟಿ | ಬಿ.ಜೆ.ಪಿ. | 70001 | ಎಮ್.ಎಲ್.ಉಸ್ತಾದ್ | ಕಾಂಗ್ರೇಸ್ | 45968 |
1999 | ವಿಜಯಪುರ ವಿಧಾನಸಭಾ ಕ್ಷೇತ್ರ | ಎಮ್.ಎಲ್.ಉಸ್ತಾದ್ | ಕಾಂಗ್ರೇಸ್ | 42902 | ಅಪ್ಪು ಪಟ್ಟಣಶೆಟ್ಟಿ | ಬಿ.ಜೆ.ಪಿ. | 39749 |
1994 | ವಿಜಯಪುರ ವಿಧಾನಸಭಾ ಕ್ಷೇತ್ರ | ಬಸನಗೌಡ ಪಾಟೀಲ(ಯತ್ನಾಳ) | ಬಿ.ಜೆ.ಪಿ. | 45286 | ಎಮ್.ಎಲ್.ಉಸ್ತಾದ್ | ಜೆ.ಡಿ.ಎಸ್. | 29158 |
1989 | ವಿಜಯಪುರ ವಿಧಾನಸಭಾ ಕ್ಷೇತ್ರ | ಎಮ್.ಎಲ್.ಉಸ್ತಾದ್ | ಕಾಂಗ್ರೇಸ್ | 45623 | ಎಸ್.ಆರ್.ಔರಂಗಾಬಾದ್ | ಜೆ.ಡಿ.ಎಸ್ | 34355 |
1985 | ವಿಜಯಪುರ ವಿಧಾನಸಭಾ ಕ್ಷೇತ್ರ | ಎಮ್.ಎಲ್.ಉಸ್ತಾದ್ | ಕಾಂಗ್ರೇಸ್ | 26829 | ಬಿ.ಆರ್.ಪಾಟೀಲ | ಜೆ.ಎನ್.ಪಿ. | 25914 |
1983 | ವಿಜಯಪುರ ವಿಧಾನಸಭಾ ಕ್ಷೇತ್ರ | ಚಂದ್ರಶೇಖರ ಗಚ್ಚಿನಮಠ | ಬಿ.ಜೆ.ಪಿ | 28795 | ಖಾಜಿಹುಸೇನ್ ಜಾಹಾಗೀರದಾರ | ಕಾಂಗ್ರೇಸ್ | 24974 |
1978 | ವಿಜಯಪುರ ವಿಧಾನಸಭಾ ಕ್ಷೇತ್ರ | ಹಬೀಬುದ್ದೀನ್ ಬಕ್ಷಿ | ಜೆ.ಎನ್.ಪಿ. | 26191 | ಕೆ.ಟಿ.ರಾಠೋಡ | ಕಾಂಗ್ರೇಸ್ | 16663 |
ವಿಜಯಪುರ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ವಿಜಯಪುರ ವಿಧಾನಸಭಾ ಕ್ಷೇತ್ರ | ಕೆ.ಟಿ.ರಾಠೋಡ | ಕಾಂಗ್ರೇಸ್ | 23205 | ವಿಷ್ಣು ಕೇಶವ ಪಂಡಿತ | ಎನ್.ಸಿ.ಓ. | 13970 |
1967 | ವಿಜಯಪುರ ವಿಧಾನಸಭಾ ಕ್ಷೇತ್ರ | ಬಸನಗೌಡ ಪಾಟೀಲ | ಕಾಂಗ್ರೇಸ್ | 18818 | ಮಲ್ಲಪ್ಪ ಕರಬಸಪ್ಪ ಸುರಪುರ | ಸ್ವತಂತ್ರ | 5396 |
1962 | ವಿಜಯಪುರ ವಿಧಾನಸಭಾ ಕ್ಷೇತ್ರ | ರೇವಣಸಿದ್ದಪ್ಪ ನಾವದಗಿ | ಕಾಂಗ್ರೇಸ್ | 13828 | ನಬೀಸಾಬ್ ಬಾಳಾಸಿಂಗ್ | ಸ್ವತಂತ್ರ | 4846 |
1957 | ವಿಜಯಪುರ ವಿಧಾನಸಭಾ ಕ್ಷೇತ್ರ | ಡಾ.ಬಸವರಾಜ ನಾಗೂರ | ಪಕ್ಷೇತರ | 11827 | ಮೊಹದ್ದಿನ್ ಮಹಾಲ್ದಾರ | ಕಾಂಗ್ರೇಸ್ | 7995 |
ವಿಜಯಪುರ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ವಿಜಯಪುರ ವಿಧಾನಸಭಾ ಕ್ಷೇತ್ರ | ಮಲ್ಲನಗೌಡ ಪಾಟೀಲ | ಕಾಂಗ್ರೇಸ್ | 10406 | ನಬೀಸಾಬ್ ಬಾಳಾಸಿಂಗ್ | ಸಿ.ಪಿ.ಐ. | 6069 |
ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಬಲೇಶ್ವರ ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಮಮದಾಪುರದಲ್ಲಿ ಆದಿಲ್ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಗುರು ಚಕ್ರವರ್ತಿ ಸದಾಶಿವ ಮಠ, ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ವಿಜಯಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದೆ.
ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.
ಬಬಲೇಶ್ವರ ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ ಎಂ.ಬಿ.ಪಾಟೀಲರು ನಾಲ್ಕು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ ಎಂ.ಬಿ.ಪಾಟೀಲಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ.
1994ರಲ್ಲಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲರು ಕಾಂಗ್ರೆಸ್ನ ಬಿ.ಎಂ.ಪಾಟೀಲ ಅವರ ಪುತ್ರ ಎಂ.ಬಿ.ಪಾಟೀಲರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್ನ ಎಂ.ಬಿ.ಪಾಟೀಲರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಎಂ.ಬಿ.ಪಾಟೀಲರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ. ಇದರಲ್ಲಿ ಎರಡು ಬಾರಿ ಜೆಡಿಎಸ್ ಪಕ್ಷದಿಂದ ಸೋತಿರುವ ಬಿಜೆಪಿಯ ವಿಜುಗೌಡ ಪಾಟೀಲರು ಶಿವಾನಂದ ಪಾಟೀಲ ಅವರ ಕಿರಿಯ ಸಹೋದರ ಎಂಬುದು ಗಣನೀಯ.
2008ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರವನ್ನು ಬಬಲೇಶ್ವರ ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ ಬಸವನಬಾಗೇವಾಡಿ ಕ್ಷೇತ್ರದಲ್ಲಿದ್ದ ಮಮದಾಪುರ ಹೋಬಳಿಯ 28 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ತಿಕೋಟಾ ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು ನಾಗಠಾಣ(ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು.
ಕ್ಷೇತ್ರದ ವಿಶೇಷತೆ