ಅಮಿರಬಾಯಿ ಕರ್ನಾಟಕಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಅಮಿರಬಾಯಿ ಕರ್ನಾಟಕಿ (ಸನ್ ೧೯೦೬ -ಮಾರ್ಚ್ ೩,,೧೯೬೬)ಯವರು ಹಿನ್ನಲೆಗಾಯಕಿ, ಚಲನಚಿತ್ರ ನಟಿಯರಾಗಿದ್ದರು.ಇವರಿಗೆ ಕನ್ನಡ ಕೋಗಿಲೆ" ಎಂಬ ಬಿರುದಿತ್ತು.ಇವರು ಹಾಡಿದ "ವೈಷ್ಣವ ಜನತೋ" ಹಾಡು ಗಾಂಧೀಜಿ ಯವರ ಅಚ್ಚುಮೆಚ್ಚಿನ ಗೀತೆಯಾಗಿತ್ತು.
Amirbai Karnataki | |
---|---|
ಜನನ | Bijapur, India |
ಮರಣ | ಮಾರ್ಚ್ 3, 1965 India |
ಶೈಲಿ/ಗಳು | Playback singing |
ವೃತ್ತಿಗಳು | Singer |
ವಾಧ್ಯಗಳು | Vocalist |
ಸಕ್ರಿಯ ವರುಷಗಳು | 1935–1961 |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಬದುಕುಸಂಪಾದಿಸಿ
ಅಮಿರಬಾಯಿ ಕರ್ನಾಟಕಿ ಬಿಜಾಪುರ ಜಿಲ್ಲೆಯ ಬೀಳಗಿ ಯಲ್ಲಿ ಮದ್ಯಮ ವರ್ಗದ ಒಂದು ಕುಟುಂಬದಲ್ಲಿ ಜನಿಸಿದರು. ಅವರ ಐದು ಜನ ಸಹೋದರಿಯರಲ್ಲಿ ಇವರ ಅಕ್ಕ ಗೌಹರ್ ಬಾಯಿ ಕೂಡಾ ಪ್ರಸಿದ್ಧರಾಗಿದ್ದಾರೆ. ಮೆಟ್ರಿಕುಲೇಶನ್ ನಂತರ ಮುಂಬಯಿ ಸೇರಿದ ಇವರು ಹಿಂದಿ ಚಲನ ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ, ನಟಿಯಾಗಿ ಆ ಕಾಲದಲ್ಲಿ ಪ್ರಸಿದ್ಧರಾದರು.ಮುಂದೆ ಬದ್ರಿ ಕಾಂಚವಾಲ ಎಂಬವರನ್ನು ಮದುವೆಯಾದರು. ೧೯೬೬ ,ಮಾರ್ಚ್ ೩ ರಂದು ಪಾರ್ಶವಾಯುವಿನಿಂದ ಕೊನೆಯುಸಿರೆಳೆದರು.
ವೃತ್ತಿಸಂಪಾದಿಸಿ
ಮುಂಬೈಯಲ್ಲಿ ಗಾಯಕಿಯಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮುಂದೆ ಗಾಯಕಿ-ತಾರೆಯಾಗಿ ಬೆಳೆದರು.೧೯೪೩ರಲ್ಲಿ ತಯಾರಾದ ಕಿಸ್ಮತ್ ಎಂಬ ಸಿನೇಮಾ ಇವರಿಗೆ ಖ್ಯಾತಿಯ ಉತ್ತುಂಗವನ್ನು ತೋರಿಸಿತು.೧೯೪೮ರವರೇಗೆ ಇವರು ಖ್ಯಾತಿಯ ಶಿಖರದಲ್ಲಿದ್ದ್ದ ಇವರು ಮುಂದೆ ಗಾಯಕಿಯಾಗಿ, ಚರಿತ್ರ ನಟಿಯಾಗಿ ತನ್ನ ಹಿಂದಿ ಚಿತ್ರರಂಗದ ವೃತ್ತಿ ಬದುಕನ್ನು ಮುಗಿಸಿದರು. ಮುಂದೆ ಗುಜರಾಥಿ, ಮರ್ವಾರಿ ಬಾಷೆಯ ಚಿತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡರು.
ಬಾಹ್ಯ ಸಂಪರ್ಕಗಳುಸಂಪಾದಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |