ಈ ಲೇಖನವು ರಾಮಾಯಣದಲ್ಲಿ, ಉಪಯೋಗಿಸಿದ ವಾಹನವೊಂದರ ಬಗ್ಗೆ ಇದೆ; ಹಿಂದೂ ಪುರಾಣಗಳಲ್ಲಿ,; ಕಮಲ ಹಾಸನ್ ಅಭಿನಯದ ಕನ್ನಡ ಚಲನಚಿತ್ರ ಪುಷ್ಪಕ ವಿಮಾನದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ
The Celestial Chariot (6124515635).jpg

ರಾವಣನ ಪುಷ್ಪಕವಿಮಾನಸಂಪಾದಿಸಿ

  • ಹಿಂದೂಧರ್ಮೀಯರ ಪವಿತ್ರ ಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿ ಪುಷ್ಪಕ ವಿಮಾನದ ಪ್ರಸ್ತಾಪ ಬರುತ್ತದೆ. ಇದೊಂದು ವೈಶಿಷ್ಟಪೂರ್ಣವಾದ ವಿಮಾನ. ಇದರ ವಿಶೇಷತೆ ಏನೆಂದರೆ, ಈ ವಿಮಾನದಲ್ಲಿ ಇಷ್ಟೇ ಜನರನ್ನು ತುಂಬಿದರೂ (ಕುಳಿತಿದ್ದರೂ) ಅದು ಹಿಗ್ಗಿ ಮತ್ತೂ ಒಬ್ಬ ವ್ಯಕ್ತಿಗೆ ಸಾಲುವಷ್ಟು ಸ್ಥಳ ಇರುವುದು.[೧]
  • ಹಿಂದೂ ಪುರಾಣಗಳ ಪ್ರಕಾರ - ಈ ವಿಮಾನವನ್ನು ಧನಾಧಿಪತಿಯಾದ ಕುಬೇರ ತನಗಾಗಿ ಸೃಷ್ಟಿಸಿಕೊಂಡಿದ್ದನು. ನಂತರ ಇದನ್ನು ರಾವಣ ಅವನನ್ನು ಸೋಲಿಸಿ (ಕಳುವುಮಾಡಿ,?), ತನ್ನ ರಾಜ್ಯವಾದ ಲಂಕೆಯಲ್ಲಿ ಅದನ್ನು ಇಟ್ಟುಕೊಂಡಿರುತ್ತಾನೆ. ಅದರಲ್ಲಿವನು ಸ್ವರ್ಗ ಮತ್ತು ಇತರ ಲೋಕಗಳಿಗೂ ಹೋಗಿ ಧಾಳಿಮಾಡುತ್ತಿದ್ದ. ಮುಂದೆ ರಾವಣ ಕದ್ದೊಯ್ದಿದ್ದಸೀತೆಯನ್ನು, ರಾಮ, ಬಿಡಿಸಿಕೊಂಡು ಬರುವಾಗ ಇದೇ ಪುಷ್ಪಕ ವಿಮಾನದಲ್ಲಿ ಮೂವತ್ಮೋರು ಕೋಟಿ ವಅನರರು ಮತ್ತು ವಿಭೀಷಣರ ಜೊತೆ ಕುಳಿತು ತನ್ನ ದೇಶವಾದ ಕೋಸಲಕ್ಕೆ (ಭಾರತಕ್ಕೆ? -ಭಾರತ ಎಂಬ ಹೆಸರು ನಂತರ ಬಂದ ಹೆಸರು; ಕೃಷ್ಣಾವತಾರದ ಕಥೆಯಲ್ಲದೆ) ಹಿಂತಿರುಗಿದನೆಂದು ಹೇಳಲಾಗುತ್ತದೆ. ನಂತರ ರಾಮನು ಅದನ್ನು ಕುಬೇರನ ಬಳಿಗೆ ಹೋಗುವಂತೆ ಆ ವಿಮಾನದ ಅಧಿದೇವತೆಗೆ ಹೇಳಿದನು. ಅದು ಸ್ವಂಚಾಲಿತ; ಅದು ತನ್ನ ಯಜಮಾನನ ಆಜ್ಞೆಯನ್ನು ಪಾಲಿಸುತ್ತದೆ.
  • ಈ ಕಥೆಯಿಂದ ಭಾರತೀಯರಲ್ಲಿ ವಿಮಾನದ ಪರಿಕಲ್ಪನೆ (ಬಯಕೆ) ಬಹಳ ಹಿಂದಿನಿಂದಲೇ ಇತ್ತೆಂದು ತಿಳಿಯಲಾಗಿದೆ. ಭೂಮಿಯಲ್ಲಿ ನೆಡೆಯುವ ಯುದ್ಧವನ್ನು ನೋಡಲು ದೇವತೆಗಳು ವಿಮಾನದಲ್ಲಿ ಬರುತ್ತಿದ್ದರು ಎಂದು ಪುರಾಣಗಳಲ್ಲು ರಾಮಾಯಣ ಮಹಾಭಾರತದಲ್ಲೂ ಹೇಳಿದೆ. ಮನುಷ್ಯನಾದ ರಾವಣ ಮಾತ್ರಾ ವರಬಲದಿಂದ ಯುದ್ಧದಲ್ಲಿ ದೇವತೆಗಳನ್ನು ಸೋಲಿಸಿ (ಅಣ್ಣ) ಕುಬೇರನ ವಿಮಾನವನ್ನು ತಾನು ತಂದಿಟ್ಟುಕೊಂಡಿದ್ದ.[೨]

ಉಲ್ಲೇಖಗಳುಸಂಪಾದಿಸಿ

  1. "ಪುಷ್ಪಕ ವಿಮಾನ". Archived from the original on 2015-02-26. Retrieved 2021-08-10.
  2. ರಾಮಾಯಣ ಉತ್ತರಕಾಂಡ
ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |