ಶೈಲಶ್ರೀ ೧೯೬೦-೧೯೭೦ರ ದಶಕದ ಕನ್ನಡದ ಜನಪ್ರಿಯ ತಾರೆ.[೧]

ಶೈಲಶ್ರೀ
ಉದ್ಯೋಗನಟಿ
ಸಕ್ರಿಯ ವರ್ಷಗಳು೧೯೬೫–ಪ್ರಸ್ತುತ
ಜೀವನ ಸಂಗಾತಿಸುದರ್ಶನ್

ವೃತ್ತಿಜೀವನಸಂಪಾದಿಸಿ

೧೯೬೬ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಚಿಕ್ಕ ಪಾತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಶೈಲಶ್ರೀ ಮುಂದೆ ಒಂದು ದಶಕದ ಕಾಲ ನಾಯಕಿ, ಪೋಷಕ ನಟಿ, ಹಾಸ್ಯ ನಟಿ, ಖಳನಾಯಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಪ್ರಸಿಧ್ಧ ನಟಿ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಾಜಾಶಂಕರ್, ರಾಜೇಶ್, ಸುದರ್ಶನ್, ರಮೇಶ್, ರಂಗ ಹೀಗೆ ಕನ್ನಡದಲ್ಲಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಬಹುತೇಕ ಎಲ್ಲ ನಟರೊಂದಿಗೆ ನಾಯಕಿಯಾಗಿ ಅಭಿನಯಿದ ಕೀರ್ತಿ ಇವರದ್ದು. ತಮಗೆ ಬಂದ ಎಲ್ಲ ತರಹದ ಪಾತ್ರಗಳನ್ನು ನಿಷ್ಠೆಯಿಂದ ನಿರ್ವಹಿಸಿದ ಪ್ರತಿಭಾವಂತ ನಟಿ. ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲು ಕಾಣಿಸಿಕೊಂಡಿದ್ದಾರೆ. ತಮಿಳಿನ ಶಿವಾಜಿ ಗಣೇಶನ್ ಅವರ ಚಿತ್ರ ಬದುಕಿನ ಮಹತ್ವದ ಚಿತ್ರವೆಂದೇ ಗುರುತಿಸಲ್ಪಡುವ 'ಮೋಟರ್ ಸುಂದರಂ ಪಿಳ್ಳೈ'ನಲ್ಲಿ ಶಿವಾಜಿಯವರ ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬರಾಗಿ ಜಯಲಲಿತ ಮತ್ತು ಕಾಂಚನಾರೊಂದಿಗೆ ನಟಿಸಿದ್ದರು. ಉತ್ತಮ ನರ್ತಕಿಯೂ ಆಗಿರುವ ಶೈಲಶ್ರೀ ಕೆಲವು ತಮಿಳು ಚಿತ್ರಗಳಲ್ಲಿ ನರ್ತಕಿಯಾಗಿ ಕಾಣಿಸಿಕೊಂಡಿದ್ದಾರೆ. ದರಿಶನಮ್, ತಿರುಮಲೈ ತೇನ್ ಕುಮಾರಿ, ಪಂದ್ಯಂ, ಐಂದು ಲಕ್ಷಂ ಇನ್ನೂ ಅನೇಕ ಚಿತ್ರಗಳಲ್ಲಿ ವಿಭಿನ್ನ ತರಹದ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ವೈಯಕ್ತಿಕ ಜೀವನಸಂಪಾದಿಸಿ

ಕಾಡಿನ ರಹಸ್ಯ ಚಿತ್ರೀಕರಣದ ಸಮಯದಲ್ಲಿ ಚಿತ್ರದ ನಾಯಕ ಸುದರ್ಶನ್ ಅವರ ಪ್ರಿತಿಯ ಬಲೆಗೆ ಬಿದ್ದ ಶೈಲಶ್ರೀ ನಾಯಕಿಯಾಗಿ ಬಹಳ ಬೇಡಿಕೆಯಲ್ಲಿದ್ದುದರಿಂದ ಸುಮಾರು ಐದು ವರ್ಷಗಳ ನಂತರ ೧೯೭೩ರ ಅಗಸ್ಟ್ ೩ರಂದು ಸುದರ್ಶನ್ ಅವರನ್ನು ವಿವಾಹವಾದರು. ಮಕ್ಕಳಿಲ್ಲದ ಈ ದಂಪತಿ ವಿವಾಹವಾಗಿ ನಾಲ್ಕು ದಶಕಗಳು ಕಳೆದಿದೆ. ಇಳಿವಯಸ್ಸಿನಲ್ಲೂ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿಕೊಂಡು ಸ್ವಾಭಿಮಾನದಿಂದ ಬದುಕುತ್ತಿರುವ ಈ ಕಲಾದಂಪತಿ ಇಂದಿನ ಸಮಾಜಕ್ಕೆ ಆದರ್ಶಪ್ರಾಯರು.[೨]

ಪ್ರಶಸ್ತಿ/ಪುರಸ್ಕಾರಸಂಪಾದಿಸಿ

  • ಜಯಮಾಲ ಎಚ್‌.ಎಂ.ರಾಮಚಂದ್ರ ಪ್ರಶಸ್ತಿ (ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ, ೨೦೧೫)[೩]

ಶೈಲಶ್ರೀ ನಟಿಸಿದ ಚಿತ್ರಗಳುಸಂಪಾದಿಸಿ

ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೬೬ ಸಂಧ್ಯಾರಾಗ ಕನ್ನಡ ರಾಜ್ ಕುಮಾರ್, ಭಾರತಿ, ಉದಯಕುಮಾರ್
೧೯೬೭ ದೇವರ ಗೆದ್ದ ಮಾನವ ಕನ್ನಡ ರಾಜ್ ಕುಮಾರ್, ಜಯಂತಿ, ನರಸಿಂಹರಾಜು
೧೯೬೭ ಬಂಗಾರದ ಹೂವು ಕನ್ನಡ ಬಿ.ಎ.ಅರಸು ಕುಮಾರ್ ರಾಜ್ ಕುಮಾರ್, ಕಲ್ಪನಾ
೧೯೬೭ ನಕ್ಕರೆ ಅದೇ ಸ್ವರ್ಗ ಕನ್ನಡ ಎಂ.ಆರ್.ವಿಠಲ್ ನರಸಿಂಹರಾಜು, ಜಯಂತಿ
೧೯೬೭ ಜಾಣರ ಜಾಣ ಕನ್ನಡ ರಾಜಶಂಕರ್, ವಾಣಿಶ್ರೀ
೧೯೬೮ ಜೇಡರ ಬಲೆ ಕನ್ನಡ ದೊರೈ-ಭಗವಾನ್ ರಾಜ್ ಕುಮಾರ್, ಜಯಂತಿ
೧೯೬೮ ಬೇಡಿ ಬಂದವಳು ಕನ್ನಡ ಕಲ್ಯಾಣ್ ಕುಮಾರ್, ಚಂದ್ರಕಲಾ
೧೯೬೮ ಮಂಕುದಿಣ್ಣೆ ಕನ್ನಡ ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್, ವಂದನಾ
೧೯೬೮ ಲಕ್ಷಾಧೀಶ್ವರ ಕನ್ನಡ ಎಸ್.ಎನ್.ಸಿಂಗ್ ದಿನೇಶ್
೧೯೬೮ ನಮ್ಮ ಊರು ಕನ್ನಡ ಸಿ.ವಿ.ಶಿವಶಂಕರ್ ರಾಜೇಶ್, ಕೃಷ್ಣಕುಮಾರಿ, ದಿನೇಶ್
೧೯೬೯ ಮಕ್ಕಳೇ ಮನೆಗೆ ಮಾಣಿಕ್ಯ ಕನ್ನಡ ಎ.ವಿ.ಶೇಷಗಿರಿ ರಾವ್ ಉದಯಕುಮಾರ್, ಬಿ.ವಿ.ರಾಧಾ, ರಂಗ
೧೯೬೯ ಬ್ರೋಕರ್ ಭೀಷ್ಮಾಚಾರಿ ಕನ್ನಡ ರಾಜಾಶಂಕರ್, ರಾಜೇಶ್, ಜಯಂತಿ
೧೯೬೯ ಕಾಡಿನ ರಹಸ್ಯ ಕನ್ನಡ ಗೀತಪ್ರಿಯ ಸುದರ್ಶನ್
೧೯೬೯ ಸುವರ್ಣ ಭೂಮಿ ಕನ್ನಡ ಸುದರ್ಶನ್, ರಾಜೇಶ್, ಉದಯಚಂದ್ರಿಕಾ
೧೯೭೦ ಕಳ್ಳರ ಕಳ್ಳ ಕನ್ನಡ ಎಂ.ಪಿ.ಶಂಕರ್ ಸುದರ್ಶನ್, ಉದಯಕುಮಾರ್
೧೯೭೦ ವಾಗ್ದಾನ ಕನ್ನಡ ಕಲ್ಪನಾ, ಸುದರ್ಶನ್, ರಾಜಾಶಂಕರ್
೧೯೭೦ ಅರಿಶಿನ ಕುಂಕುಮ ಕನ್ನಡ ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್, ಕಲ್ಪನಾ, ರಾಜೇಶ್
೧೯೭೧ ನಗುವ ಹೂವು ಕನ್ನಡ ಆರ್.ಎನ್.ಕೃಷ್ಣ ಪ್ರಸಾದ್ ಸುದರ್ಶನ್
೧೯೭೧ ಮಾಲತಿ ಮಾಧವ ಕನ್ನಡ ಬಿ.ಆರ್.ಪಂತುಲು ಗಂಗಾಧರ್, ಸುದರ್ಶನ್, ಜಯಂತಿ
೧೯೭೨ ಬಾಳ ಪಂಜರ ಕನ್ನಡ ಎಂ.ಆರ್.ವಿಠಲ್ ಕೆ.ಎಸ್.ಅಶ್ವಥ್, ಪಂಡರೀಬಾಯಿ, ರಂಗ
೧೯೭೩ ಕೌಬಾಯ್ ಕುಳ್ಳ ಕನ್ನಡ ದ್ವಾರಕೀಶ್
೧೯೭೩ ಕಾಣದ ಕೈ ಕನ್ನಡ ರಮೇಶ್, ಶ್ರೀನಾಥ್
೧೯೭೩ ಭಾರತ ರತ್ನ ಕನ್ನಡ ಜಯಂತಿ, ಲೀಲಾವತಿ, ರಂಗ
೧೯೭೫ ಜಾಗೃತಿ ಕನ್ನಡ ಉದಯಕುಮಾರ್

[೪]

ಉಲ್ಲೇಖಗಳುಸಂಪಾದಿಸಿ

  1. "ಶೈಲಶ್ರೀ, ಚಿಲೋಕ.ಕಾಮ್".
  2. "ಮಳೆ ನಿಂತ ಮೇಲೆ". ಕನ್ನಡಪ್ರಭ. Retrieved 20 Feb 2013.
  3. "ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ". http://www.udayavani.com/. ಉದಯವಾಣಿ. {{cite web}}: External link in |website= (help)[ಶಾಶ್ವತವಾಗಿ ಮಡಿದ ಕೊಂಡಿ]
  4. "ಶೈಲಶ್ರೀ ಅಭಿನಯದ ಚಿತ್ರಗಳು, ಚಿಲೋಕ.ಕಾಮ್".
"https://kn.wikipedia.org/w/index.php?title=ಶೈಲಶ್ರೀ&oldid=1058538" ಇಂದ ಪಡೆಯಲ್ಪಟ್ಟಿದೆ