ಭಾರತದಲ್ಲಿನ ಜಾತಿ ಪದ್ದತಿ

ಮೂಲ ಕ್ಷತ್ರಿಯರು ಎಂದರೆ ಸೂರ್ಯವಂಶಿ ಸಾಮ್ರಾಟ್ ಸಗರ ಚಕ್ರವರ್ತಿ ಹಾಗೂ ರಾಜ ಮಹರ್ಷಿ ಭಗೀರಥ,Od ಒಡ್ ವಂಶಸ್ಥರು

ಭಾರತೀಯ ಜಾತಿ ಪದ್ದತಿ ಯು ಸಾಮಾಜಿಕ ಶ್ರೇಣೀಕರಣವನ್ನು ವಿವರಿಸುತ್ತದೆ.ಅದಲ್ಲದೇ ಸಾಮಾಜಿಕ ನಿರ್ಭಂಧಗಳಡಿ ಭಾರತ ಉಪಖಂಡದ ಸಾವಿರಾರು ಪಂಗಡದ ಪ್ರವರ್ಗಗಳನ್ನು, ವಂಶವಾಹಿನಿಗಳ ಸಮೂಹವನ್ನು ವ್ಯಾಖ್ಯಾನಿಸುತ್ತದೆ.ಇದನ್ನೇ ಜಾತಿ ಗಳು ಅಥವಾ ಕೋಮು ಗಳೆಂದು ಹೇಳಲಾಗುತ್ತದೆ. ಈ ಜಾತಿಯಲ್ಲಿಯೇ ಅನ್ಯಗೋತ್ರ ಗುಂಪುಗಳ ಅಸ್ತಿತ್ವ ಇದೆ,ಇದನ್ನು ಗೋತ್ರಗಳು,ವಂಶವಾಹಿನಿ ಅಥವಾ ಕುಟುಂಬದ ಕುಲಗೋತ್ರವನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಲಾಗುತ್ತದೆ. ಹಲವಾರು ಉಪ-ಜಾತಿಗಳಲ್ಲಿ ಶಾಕಾದ್ವಿಪಿ,ಕೂಡಾ ಒಂದು,ಒಂದೇ ಗೋತ್ರದಲ್ಲಿ ವಿವಾಹ ಅನುಮತಿಸಿದ್ದರೂ ಅದನ್ನು ಪರ್ಯಾಯ ನಿರ್ಭಂದಿತ ಸಗೋತ್ರ ವಿವಾಹಕ್ಕೆ ಪರಿಗಣಿಸಲಾಗುತ್ತದೆ.(ಉದಾಹರಣೆಗೆ ಅಡ್ಡಹೆಸರುಗಳು ಒಂದೇ ಆಗಿದ್ದರೆ ಅಲ್ಲಿ ವಿವಾಹ ನಿಷಿದ್ದದ ನಿಯಮ ಉಂಟು)

ಹಿಂದುತ್ವದೊಂದಿಗೆ ಗುರುತಿಸಿಕೊಂಡಿರುವ ಇತರ ಮುಸ್ಲಿಮರ ಕೆಲವು ಗುಂಪುಗಳು ಮತ್ತು ಕ್ರಿಶ್ಚನ್ ರು ಕೂಡಾ ಇದೇ ತೆರನಾದ ಗುಂಪು ಪ್ರಭೇದವನ್ನು ಹೊಂದಿರುವುದು ಭಾರತದ ಉಪಖಂಡದಲ್ಲಿ [೧] ಕಾಣುತ್ತದೆ. ಆದರೆ ದೊಡ್ಡ ದೊಡ್ಡ [೨] ನಗರಗಳಲ್ಲಿ ಜಾತಿಯ ನಿರ್ಭಂಧಗಳು ಅಷ್ಟೊಂದು ಬಿಗಿಯಾಗಿಲ್ಲ;ಇದು ಗ್ರಾಮೀಣ ವಲಯದಲ್ಲಿ ಕಟ್ಟು ನಿಟ್ಟಿನ ಕ್ರಮದಲ್ಲಿ ಚಾಲ್ತಿಯಲ್ಲಿದೆ.ಆದರೆ ಭಾರತದ 72% ರಷ್ಟು ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸಿಸುತ್ತದೆ. ಹಿಂದು ಧರ್ಮದ ಯಾವುದೇ ಗ್ರಂಥವು ಜಾತಿ-ಆಧಾರದ[೩][೪][೫][೬] ಭೇದಭಾವವನ್ನು ಅನುಮೋದಿಸುವುದಿಲ್ಲ,ಅಲ್ಲದೇ ಭಾರತದ ಸಂವಿಧಾನ ಕೂಡಾ ಜಾತಿ-ಆಧಾರದ ಭೇದಭಾವವನ್ನು ಪುಷ್ಟಿಕರಿಸಲಾರದು,ಅದು ಸಮಗ್ರ ಜಾತ್ಯಾತೀತತೆಯನ್ನು ಪ್ರಜಾಪ್ರಭುತ್ವದ ತತ್ವಗಳ ಮೇಲೆ ದೇಶದ ಆಡಳಿತಕ್ಕೆ [೭] ಮಾರ್ಗದರ್ಶಿಯಾಗಿದೆ. ಏನೇಯಾದರೂ ಆಧುನಿಕ ಭಾರತದಲ್ಲಿ ಜಾತಿ ಪದ್ದತಿಯು ವಿವಿಧ ಸ್ತರಗಳಲ್ಲಿ ಮುಂದುವರೆದಿದೆ ಎನ್ನಬಹುದು;ಯಾಕೆಂದರೆ ಇದಕ್ಕೆ ರಾಜಕೀಯ ಕಾರಣಗಳು ಮತ್ತು ಸಾಮಾಜಿಕ ಗ್ರಹಿಕೆಗಳು ಮತ್ತು ನಡವಳಿಕೆಗಳು ಬಹು ಮುಖ್ಯ ಪಾತ್ರ [೮][೯] ವಹಿಸುತ್ತವೆ.

ಇತಿಹಾಸ ಬದಲಾಯಿಸಿ

ಆದರೆ ಭಾರತೀಯ ಜಾತಿ ಪದ್ದತಿಗೆ ಯಾವುದೇ ರೀತಿಯಾದ ಸಾರ್ವತ್ರಿಕವಾಗಿ ಒಪ್ಪಿದ ನಿಯಮಗಳಿಲ್ಲ. ಭಾರತೀಯ ವರ್ಗೀಕರಣವು ಪ್ರಾಚೀನ ಇರಾನಿನ ವರ್ಗೀಕರಣವನ್ನು ಹೋಲುತ್ತದೆ.("ಪಿಸ್ತ್ರಾಗಳು ")ಅಂದರೆ ಅರ್ಚಕವರ್ಗವು ಬ್ರಾಹ್ಮಣರಾದರೆ,ಯೋಧರು ಕ್ಷತ್ರಿಯರೆನಿಸುತ್ತಾರೆ,ವ್ಯಾಪಾರಿಗಳು ವೈಶ್ಯರು ಅಥವಾ ವಸ್ತ್ರಿಯಾ ಮತ್ತು ಇನ್ನಿತರ ಕುಶಲಕರ್ಮಿಗಳ ವರ್ಗ ಹ್ಯುತಿಗಳೆಂದು [೧೦][೧೧][೧೨] ಪರಿಗಣಿಸಲಾಗಿದೆ.

ವರ್ಣ ಮತ್ತು ಜಾತಿ ಬದಲಾಯಿಸಿ

ಪ್ರಾಚೀನ ಹಿಂದು ಗ್ರಂಥಗಳ ಪ್ರಕಾರ ಇಲ್ಲಿ ನಾಲ್ಕು "ವರ್ಣ"ಗಳಿವೆ. ಭಗವದ್ಗೀತೆ ಹೇಳುವಂತೆ ವರ್ಣಗಳನ್ನು ಗುಣ ಮತ್ತು ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮನುಸ್ಮೃತಿ ಮತ್ತು ಇನ್ನುಳಿದ ಶಾಸ್ತ್ರಗಳಲ್ಲಿ ನಾಲ್ಕು ವರ್ಣಗಳನ್ನು ಉಲ್ಲೇಖಿಸಲಾಗಿದೆ:ಬ್ರಾಹ್ಮಣ (ಶಿಕ್ಷಕ ಮತ್ತು ಅರ್ಚಕರು),ಕ್ಷತ್ರಿಯ (ರಾಜರು ಮತ್ತು ಯೋಧರು),ವೈಶ್ಯ (ಕೃಷಿಕರು ಮತ್ತು ವ್ಯಾಪಾರಿಗಳು)ಮತ್ತು ಶೂದ್ರ (ಕುಶಲ ಕಲೆಗಾರರು,ಸೇವಾಕರ್ತರು ಮತ್ತು ಕಾರ್ಮಿಕರು)

ಈ ಉಲ್ಲೇಖಿತ ಪದ್ದತಿಯು ವರ್ಣಗಳನ್ನು ಶ್ರೇಣೀಕರಿಸಿ ಅದನ್ನು ಮಾದರಿ ತಾರ್ಕಿಕ ಆಧಾರವನ್ನಾಗಿ ಪಡೆದು, ಸಾವಿರಾರು ಜಾತಿಗಳ ಆಧಾರಿತ ವಿವಾಹಗಳಿಗೆ ನಾಂದಿಯಾಗಿದೆ.ಇತಿಹಾಸದುದ್ದಕ್ಕೂ ಈ ವರ್ಣಗಳ ಮಿಶ್ರಣ ಮತ್ತು ವರ್ಣಸಂಕರ ದ ಬದಲಾವಣೆಗಳಿಗೆ ತನ್ನನ್ನು ತಾನು ಒಡ್ಡಿಕೊಂಡಿದೆ.ಇಲ್ಲಿ "ಶುದ್ಧ" ವರ್ಣಗಳ ವಿವರವೂ ಇದೆ. ಹಿಂದು ಸಮಾಜದ ನೀತಿ-ನಿಯಮಗಳಿಗೆ ಬದ್ದರಾಗಿಲ್ಲದ ವಿದೇಶಿಯರು,ಬುಡಕಟ್ಟಿನವರು ಮತ್ತು ಅಲೆಮಾರಿಗಳನ್ನು ಪರಕೀಯರು ಹಾಗು ಅಸ್ಪೃಶ್ಯರೆಂದು ಅದು ಪರಿಗಣಿಸುತ್ತದೆ. ಸಾಮಾಜಿಕ ಮುಖ್ಯವಾಹಿನಿಯಿಂದ ಹೊರಗಿರುವವರನ್ನು ಪರಜನ್ಯ(ನ) ಅಥವಾ ಅಂತ್ಯಜರು ಎನ್ನಲಾಗುವುದು. ಈ ಕೊನೆಯಲ್ಲಿನ ಅಸ್ಪೃಶ್ಯರ ಗುಂಪನ್ನು ದಲಿತರು ಎನ್ನುತ್ತಿದ್ದು ಇವರು ಶೂದ್ರರಲ್ಲಿಯೇ ಕೊನೆಯ ಸಾಲಿನವರು ಅಥವಾ ವರ್ಣ ಪದ್ದತಿಯಿಂದ ಹೊರಗಿರುವವರು ಎನ್ನಲಾಗುತ್ತದೆ. ಮನುಸ್ಮೃತಿಯ ಪ್ರಕಾರ ವರ್ಣ ಪದ್ದತಿಯು ಮೂಲತಃ [೧೩] ವಂಶಪಾರಂಪರಿಕವಾದುದಲ್ಲ.

ಹಲವಾರು ಹಿಂದುತ್ವದ ವಿಮರ್ಶಕರ ಪ್ರಕಾರ ಪ್ರಾಚೀನ ಹಿಂದು ಗ್ರಂಥಗಳಲ್ಲಿ ಸೂಚಿಸುರುವಂತೆ ಈ ಜಾತಿ ಪದ್ದತಿಯು ವರ್ಣ ಪದ್ದತಿಯಲ್ಲೇ ತನ್ನ ಬೇರುಗಳನ್ನು [೧೪] ಕಂಡುಕೊಂಡಿದೆ. ಹಲವಾರು ಗುಂಪುಗಳು ಅಂದರೆ ಇಸ್ಕಾನ್ ISKCONದಂತಹವುಗಳು ಆಧುನಿಕ (ಅಂತಾರಾಷ್ಟ್ರೀಯ ಶ್ರೀ ಕೃಷ್ಣ ಸಮಾಜ)ಭಾರತೀಯ ಜಾತಿ ಪದ್ದತಿ ಮತ್ತು ವರ್ಣ ಪದ್ದತಿಯನ್ನು ಎರಡು ಬೇರೆ ಬೇರೆ ಪರಿಕಲ್ಪನೆಗಳಾಗಿ [೧೫][೧೬] ಪರಿಗಣಿಸುತ್ತದೆ. ವಸಾಹತು ಶಾಹಿಯ ಯುಗದ ಹಲವಾರು ಯುರೊಪಿಯನ್ ಆಡಳಿತಗಾರರು ಮನುಸ್ಮೃತಿಯನ್ನು ಹಿಂದುಗಳ "ಕಾನೂನು ಗ್ರಂಥ" ಎಂದು ತಪ್ಪಾಗಿ ಅರ್ಥೈಸಿದ್ದರು.ಇದರಿಂದಾಗಿ ಜಾತಿ ಪದ್ದತಿಯು ಒಂದು ಭಾಗವೆಂದು ಪರಿಗಣಿಸಲಾಗಿತ್ತು;ಆದರಿಂದು ಹಲವಾರು ವಿದ್ವಾಂಸರು,ಇದನ್ನು ಸಾಮಾಜಿಕ ಆಚರಣೆಯೇ ಹೊರತೇ ಧಾರ್ಮಿಕ ನಂಬುಗೆಯಲ್ಲ ಎಂದು [೩][೪][೫][೬] ಪ್ರತಿಪಾದಿಸುತ್ತಾರೆ.. ಮನುಸ್ಮೃತಿಯು ವಿಶೇಷವಾಗಿ ಉತ್ತರ ಭಾರತದ ಬ್ರಾಹ್ಮಣರಿಗಾಗಿರುವ ಒಂದು ಉಲ್ಲೇಖನಾ ಕೃತಿ,ಪ್ರಮುಖವಾಗಿ ಬೆಂಗಾಲಿಗಳಿಗೆ,ಆದರೆ ಇದರ ಬಗ್ಗೆ ದಕ್ಷಿಣ ಭಾರತದಲ್ಲಿ ತಿಳಿವಳಿಕೆ ಕಡಿಮೆ.

ಆದರೆ ಹಲವಾರು ಹಿಂದು ಗ್ರಂಥ ಸೂಚಿಗಳ ಪ್ರಕಾರ ಜಾತಿ ಪದ್ದತಿಯು ಹಿಂದು ಧರ್ಮದ ಅನಿವಾರ್ಯ ಭಾಗವಲ್ಲ. ವೇದಗಳಲ್ಲಿ ಜಾತಿ ಪದ್ದತಿಗೆ ಮಹತ್ವವನ್ನೇ ನೀಡಿಲ್ಲ ಆದರೆ (ಪುರುಷ ಸೂಕ್ತ)ದಲ್ಲಿ ಸಾವಿರಾರು ಅಸಂಖ್ಯಾತ ಶ್ಲೋಕಗಳಲ್ಲಿ ಒಂದೇ ಒಂದು ಬಾರಿ ಪ್ರಸ್ತಾಪಿಸಲಾಗಿದೆ. ಹಲವಾರು ವೇದ ವಿದ್ವಾಂಸರ ಪ್ರಕಾರ ಇದರ ಪ್ರಸ್ತಾಪವು ಉಪವಿಷಯವಾಗಿದ್ದು ಮತ್ತು ಕೃತಕವೆಂದು ಹೇಳಿದ್ದಾರೆ;ಬಿ.ಆರ್ ಅಂಬೇಡ್ಕರ್ ಅವರೂ ಕೂಡ ವಿವರ ಅಧ್ಯಯನದ ಬಳಿಕ ಇದನ್ನೂ ಕೂಡಾ ಮಧ್ಯದಲ್ಲಿ ಸೇರಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಆದರೆ ವೇದದ ಕಾಲದಲ್ಲಿ ಯಾರಿಗೂ ಯಾರ ಬಗ್ಗೆ ನಿಷೇಧವಿರಲಿಲ್ಲ,ಶೂದ್ರರನ್ನೊಳಗೊಂಡಂತೆ ವೇದಗಳನ್ನು ಕೇಳಲು ಅಥವಾ ಯಾವುದೇ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಲು ಯಾವುದೇ ನಿಷಿದ್ದ [೧೭] ಇರಲಿಲ್ಲ.

ದಕ್ಷಿಣ ಭಾರತದಲ್ಲಿನ ಜಾತಿ ಪದ್ದತಿ ಬಗೆಗಿನ ಪುರಾವೆ ಎಂದರೆ,ಜಾರ್ಜ್ ಎಲ್ ಹಾರ್ಟ್ ಹೇಳಿಕೆಯಂತೆ "ಆರಂಭಿಕ ತಮಿಳು ಗ್ರಂಥಗಳಲ್ಲಿ ಕಾಣಿಸಿರುವಂತೆ ಅಲ್ಲಿ ಜಾತಿಯ ಅಸ್ತಿತ್ವ ಇದೆ;ಆದರೆ ಅಲ್ಲಿನ ಕಥೆಗಳ ಪ್ರಕಾರ ಬ್ರಾಹ್ಮಣರ ಮತ್ತು ಹಿಂದು ಕಟ್ಟುನಿಟ್ಟಿನ ಆಚರಣೆಗಳು" ಕಾಣುತ್ತವೆ. ಆತ ನಂಬುವಂತೆ ಜಾತಿ ಪದ್ದತಿಯ ಮೂಲವು "ಕೃಷಿಕ ನಾಗರಿಕತೆಯ ಅಭಿವೃದ್ಧಿಯೊಂದಿಗೆ ಈ ಪದ್ದತಿ ಬೆಳೆಯಿತು."ನಂತರ ಬ್ರಾಹ್ಮಣರ ಮತ್ತು ಬ್ರಾಹ್ಮಣ್ಯದ ಧಾರ್ಮಿಕತೆಗಳು ಅದನ್ನು ಪ್ರಭಾವಿಸಿದವು." ಆರಂಭಿಕ ತಮಿಳು ಗ್ರಂಥಗಳಲ್ಲಿ ಸಮಾನತೆಯ ಪರಿಕಲ್ಪನೆ ಇದೆ. ಸಂತ ವಲ್ಲುವರ್ ಅವರ ಪ್ರಕಾರ "ಪಿರಾಪೊಕ್ಕುಮ್ ಎಲ್ಲಾ ಉಯಿರ್ಕುಮ್ "ಅಂದರೆ ಹುಟ್ಟಿನಲ್ಲಿ ಎಲ್ಲರೂ ಸಮಾನರು." ಇದೇ ತೆರನಾಗಿ ಸಂತ ಔವೈಯಾರ್ ಕೂಡಾ ತಮ್ಮ ವಿಚಾರ ಮಂಡಿಸಿದ್ದಾರೆ. ಜಗತ್ತಿನಲ್ಲಿ ಎರಡೇ ಎರಡು ಜಾತಿಗಳಿವೆ,ಅವೆಂದರೆ ಸಮಾಜಕ್ಕೆ ಉತ್ತಮಕೊಡುಗೆ ನೀಡುವ ಮತ್ತು ಋಣಾತ್ಮಕವಾಗಿ ಕೊಡುಗೆ ನೀಡುವ ಎನ್ನಬಹುದು. ಈ ಹೇಳಿಕೆಗಳಿಂದ ನಾವು ತೀರ್ಮಾನಕ್ಕೆ ಬರುವುದೆಂದರೆ ಜಾತಿ ಪದ್ದತಿಯು ಒಂದು ಸಾಮಾಜಿಕ-ಆರ್ಥಿಕ ಶ್ರೇಣಿಯ ವರ್ಗೀಕರಣವಾಗಿದೆ.

ಜಾತಿ ಮತ್ತು ಸಾಮಾಜಿಕ ಸ್ಥಾನಮಾನ ಬದಲಾಯಿಸಿ

ಸಾಂಪ್ರದಾಯಿಕವಾಗಿ ರಾಜಕೀಯ ಅಧಿಕಾರವು ಕ್ಷತ್ರಿಯರ ಕೈಯಲ್ಲಿತ್ತು,ಇತಿಹಾಸಕಾರರ ಪ್ರಕಾರ ಬ್ರಾಹ್ಮಣರು ಇದರ ರಕ್ಷಾಕವಚವಾಗಿದ್ದಾರೆ.ಅವರು ಧರ್ಮವನ್ನು ಅರ್ಥೈಸುವ ಕಾರ್ಯ ವೃತ್ತಿಯಿಂದ ಸಮಾಜದಲ್ಲಿ ಹೆಚ್ಚು ಸ್ಥಾನ-ಮಾನ [೧೮] ಪಡೆದವರಾಗಿದ್ದಾರೆ.

ಚೀನಾಬೌದ್ದ ಮತಫಾ ಹಿಯನ್ ಎಂಬ ಧರ್ಮಯಾತ್ರಿಕ ಸುಮಾರು 400 AD ಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ."ಆತ ಬಹು ಸಂಖ್ಯಾತ ಬಹಿಷ್ಕೃತ ಚಾಂಡಾಲಗಳ ವರ್ಗವನ್ನು ಕಂಡ,ಅವರು ತಮ್ಮ ಕೆಲಸಗಳಿಂದಾಗಿ ಸ್ಥಾನಮಾನಗಳಿಂದ ವಂಚಿತರಾದವರು.ಶವ ಸಾಗಿಸುವಂತಹ ಕೆಲಸಗಳನ್ನು ಅವರು ಮಾಡುತ್ತಿದ್ದರಿಂದ ಅವರನ್ನು ಸಾಮಾಜಿಕವಾಗಿ ಸಾರ್ವತ್ರಿಕವಾಗಿ ದೂರಿಡಲಾಗಿತ್ತು... ಆದರೆ ಸಮಾಜದ ಇತರ ಸ್ತರದ ಜನರಲ್ಲಿ ಯಾವ ಕುಂದು ಇತ್ತೆಂಬುದನ್ನು ಆತ ಗುರುತಿಸಲು ಅಸಮರ್ಥನಾದ.ಇದಲ್ಲದೇ ಇನ್ಯಾವದೇ ತುಳಿತಕ್ಕೊಳಗಾದ 'ಜಾತಿ ಪದ್ದತಿ'ಯ ಜನಾಂಗ ಆ ಯಾತ್ರಿಯ ಕಣ್ಣಿಗೆ ಬೀಳದಿದ್ದುದು ಆಶ್ಚರ್ಯಕರ [೧೯] ವಿಷಯ.. ಈ ಅವಧಿಯಲ್ಲಿ ಶೂದ್ರ ಮತ್ತು ಬ್ರಾಹ್ಮಣ ಮೂಲದವರೂ ರಾಜರಾಗಿದ್ದರು,ಇದು ಕ್ಷತ್ರಿಯವರ್ಣ ದವರದಾದರೂ ಆಗ ಒಟ್ಟಾರೆ ಜಾತಿ ಪದ್ದತಿ ನಿಷೇಧವಾಗಿರಲಿಲ್ಲ ಅಲ್ಲದೇ [೨೦] ದಮನಕಾರಿಯಾಗಿರಲಿಲ್ಲ.

ಜಾತಿ ಪದ್ದತಿಯು ವೃತ್ತಿಪರತೆಯ ಮೇಲೆ ನಿರ್ಧಾರವಾಗಲಾರದು ಅಥವಾ ಸಾಮಾಜಿಕ ಗುಂಪಿನ ಸ್ಥಾನಮಾನವನ್ನು ಪಡೆಯಲಾರದು. ಬ್ರಿಟಿಶ್ ಸಮಾಜ ಹೇಗೆ ವರ್ಗಗಳ ಆಧಾರದ ಮೇಲೆ ವಿಭಜನೆಗೊಂಡಿತೋ ಹಾಗೆಯೇ ಬ್ರಿಟಿಶರು ತಮ್ಮ ಅನುಕೂಲಕ್ಕಾಗಿ ಭಾರತದ ಜಾತಿ ಪದ್ದತಿಯನ್ನು ವಿಭಜಿಸಲು ಯೋಚಿಸಿದರು. ಜಾತಿಯು ವೃತ್ತಿಯ ಸೂಚಕವಾಗಿದೆ ಎಂದು ಅವರು ಕಂಡುಕೊಂಡರು. ಸಮಾಜದ ಸ್ಥಾನ-ಮಾನ ಮತ್ತು ಬುದ್ದಿಮತ್ತೆಯ ಸಾಮರ್ಥ್ಯವನ್ನು ಅವರು [೨೧] ಮನಗಂಡರು. ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಿತವಾಗಿ ಬ್ರಿಟಿಶ್ ರಾಜ್ ಕಾಲದಲ್ಲಿ ಜಾತಿ ಪದ್ದತಿಯು ಬಹಳಷ್ಟು ಕಠಿಣವಾಗಿತ್ತು.ಯಾವಾಗ ಬ್ರಿಟಿಶ್ ರು ಹತ್ತು ವರ್ಷಗಳ ಜನಗಣತಿ ಮಾಡಿದರೋ ಆಗ ಈ ಜಾತಿಗಳ ಬಗ್ಗೆ ಒಂದು ಸಂಹಿತೆಯನ್ನು ತಮ್ಮ ಆಡಳಿತಕ್ಕೆ ಅನುಕೂಲವಾಗುವಂತೆ ಬದಲಿಸಿದರು.ಹರಿಜನರು ಅಥವಾ ಜಾತಿ ಪದ್ದತಿಯಿಂದ ಹೊರಗಿದ್ದ ಜನರು ಸಮಾಜದಲ್ಲಿ ಅತ್ಯಂತ ಕೀಳು ದರ್ಜೆಯನ್ನು ಪಡೆದಿದ್ದರು. ಆರಂಭದಲ್ಲಿ ಹರಿಜನರನ್ನು ಅಸ್ಪೃಶ್ಯರು ಎಂದು ಕೆಲವರು ಉಲ್ಲೇಖಿಸುತ್ತಿದ್ದರು.ಇವರು ಅನಾರೋಗ್ಯ ವಾತಾವರಣದಲ್ಲಿ ಅಥವಾ ಮಾಲಿನ್ತ್ಯದ ಕೆಲಸಗಳನ್ನು ಮಾಡುತ್ತಿದ್ದರು. ಈ ಹಿಂದೆ ಹರಿಜನರು ಸಾಮಾಜಿಕ ವಿಭಜನೆ ಮತ್ತು ನಿರ್ಭಂದಗಳಿಂದ ಬಹಳಷ್ಟು ತೊಂದರೆ ಅನುಭವಿಸಿದರು;ಇದರೊಂದಿಗೆ ಬಡತನವೂ ಅವರಿಗೆ ಶತ್ರುವಾಗಿತ್ತು. ಅವರಿಗೆ ದೇವಸ್ಥಾನಗಳಲ್ಲಿ ಇತರರೊಂದಿಗೆ ಪೂಜೆ ಮಾಡಲು ಬಿಡುತ್ತಿರಲಿಲ್ಲ ಅಲ್ಲದೇ ಸಾರ್ವಜನಿಕವಾಗಿ ನೀರು ಕೂಡಾ ತೆಗೆದುಕೊಳ್ಳಲು ಬಿಡುತ್ತಿರಲಿಲ್ಲ. ಉನ್ನತ ಜಾತಿಯವರು ಇವರೊಂದಿಗೆ ಮಾತನಾಡುತ್ತಿರಲಿಲ್ಲ. ಉನ್ನತ ಜಾತಿಯವನೊಬ್ಬ ಇವರೊಂದಿಗೆ ಶಾರೀರಿಕ ಅಥವಾ ಸಾಮಾಜಿಕ ಸಂಪರ್ಕಕ್ಕೆ ಬಂದರೆ ಆತ ಅಥವಾ ಆಕೆ ಮೈಲಿಗೆಯಾದಂತೆ ಮತ್ತು ಸ್ವಚ್ಚವಾಗಿ ಸ್ನಾನ ಮಾಡಿ ಶುದ್ದೀಕರಿಸಬೇಕು ಇದಲ್ಲದೇ ಹರಿಜನರಲ್ಲಿಯೂ ಸಾಮಾಜಿಕ ತಾರತಮ್ಯಗಳು ಬೆಳೆದವು;ಉಪಜಾತಿಗಳು ಅದರಲ್ಲಿ ಧೋಬಿ ಮತ್ತು ನಾಯಿದ ರು(ಸವಿತಾ ಸಮಾಜ) ಇತರ ಕೀಳು ಅಂದರೆ ಭಂಗಿಗಳ ಜಾತಿಯವರೊಂದಿಗೆ ಮಾತನಾಡುತ್ತಿರಲಿಲ್ಲ.ಇವರು ಹರಿಜನರಲ್ಲಿಯೇ "ಅತ್ಯಂತ ಕೀಳು ಎಂದು ಪರಿಗಣಿಸಲಾಗುತಿತ್ತು".ಸಮಾಜವಿಜ್ಞಾನಿಗಳು ಇದರ ಬಗ್ಗೆ ಹಲವಾರು ವಿಮರ್ಶಾತ್ಮಕ ಅಭಿಪ್ರಾಯಗಳನ್ನು ನೀಡಿದ್ದಾರೆ,ಸಾಮಾಜಿಕ ಅತ್ಯಂತ ಕಟ್ಟಳೆಬದ್ದ ನಿಯಮಗಳ ಬಗ್ಗೆ ಅದರ ದೋಷಗಳ ಬಗ್ಗೆಯೂ ವ್ಯಾಖ್ಯಾನಿಸಿದ್ದಾರೆ. ಆದರೆ ಜಾತಿ ಪದ್ದತಿಯು ಆಯಾ ಕಾಲದಲ್ಲಿ ತನ್ನ ಪ್ರಭಾವ ತೋರಿದ್ದಲ್ಲದೇ ಸಮಾಜದಲ್ಲಿ ಜಾತಿ ಪದ್ದತಿಯನ್ನು ಪರಸ್ಪರ ಒಪ್ಪಿಗೆ ಇಲ್ಲದೇ ಈ ಜಾತಿ ಆಧಾರ [೨೨] ಪರಿಗಣಿಸಿ ಮಾಡಲಾಗುತಿತ್ತು;ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸುವಿಕೆ,ಆರ್ಥಿಕ ಸ್ಥಿತಿ,ಸಂಬಂಧಗಳ ಕುರಿತ ವಿಚಾರಗಳು ಉಪಜಾತಿಗಳ ಮಟ್ಟದಲ್ಲಿ ಚರ್ಚೆಗೆ ಬರುತ್ತಿದ್ದವು,ಯಾವ ವ್ಯಕ್ತಿ ಯಾವ ಜಾತಿಯಲ್ಲಿ ಜನಿಸಿದ ಮತ್ತು ಯಾವ ಜನಾಂಗದ ಸಾಮಾಜಿಕ ಸಂಬಂಧ ಪಡೆದ ಎಂಬುದು ಆತನ ಬದುಕಿನ ಪರ್ಯಂತ ಇರುವ ವಿಷಯವಾಗಿತ್ತು.ಅಂತರ್ಜಾತೀಯ ಮತ್ತು ಅಂತರ್ದರ್ಮೀಯ ಸಂಬಂಧಗಳ ಬಗ್ಗೆ ಅಸಮಾನತೆ ಮತ್ತು ಕಾಲಾನುಕ್ರಮಕ್ಕಾಗುವ ಬದಲಾವಣೆಗಳು ಈ ನಿಟ್ಟಿನಲ್ಲಿ ತಮ್ಮ ಪ್ರಭಾವ ಬೀರುತ್ತವೆ. ನಿಶ್ಚಿತವಾಗಿ ವ್ಯಾಖ್ಯಾನಿಸಲ್ಪಟ್ಟ ಈ ಪದ್ದತಿಯು ಪರಸ್ಪರ ಅವಲಂಬನೆಯು ಸಮೂದಾಯದ ಒಟ್ಟಾರ್ಥದಲ್ಲಿ ಒಂದು ಭದ್ರತೆಯನ್ನು [೨೨][೨೩] ನೀಡುತ್ತದೆ. ಅದಲ್ಲದೇ ಶ್ರಮಿಕ ವರ್ಗದ ವಿಭಜನೆ ನಂತರ ಆಯಾ ಪದ್ದತಿಯ ಆಧಾರ ಮೂಲದ ಮೇಲೆ ವಲಸೆಗಾರರು ಮತ್ತು ವಿದೇಶಿಯರು ತಮ್ಮ ತಮ್ಮ ಜಾತಿಗಳಿಗೆ [೨೪] ಅಂಟಿಕೊಂಡರು. ಆರ್ಥಿಕ [೨೫] ಚಟುವಟಿಕೆಗಳನ್ನು ಬಹುಮಟ್ಟಿಗೆ ಜಾತಿ ಪದ್ದತಿಯು ತನ್ನ ಪ್ರಭಾವದಿಂದ ಆವರಿಸಿದೆ,ಇದು ಯುರೊಪಿಯನ್ ನ ಮಧ್ಯಮ ಕೂಟಗಳನ್ನು ನಿರ್ಮಿಸಲು ಸಾಧ್ಯವಾಗಿಸಿತು.ಈ ಮೂಲಕ ಶ್ರಮಿಕ ವರ್ಗೀಕರಣಕ್ಕೆ ದಾರಿಯಾಯಿತು.ಕುಶಲ ಕೆಲಸಗಳಿಗಾಗಿ ತರಬೇತಿ,ತಾಂತ್ರಿಕ ಸಹಾಯ ಅಲ್ಲದೇ ಇನ್ನಿತರ ಉತ್ಪಾದನಾ ಕೆಲಸಗಳಿಗೆ ನಿಗದಿತ ತರಬೇತನ್ನು ನೀಡಲಾಯಿತು. ಉದಾಹರಣೆಗೆ ಕೆಲವು ಪ್ರದೇಶಗಳಲ್ಲಿ ಇಂತಹ ಉಪಜಾತಿಯ ಜನಾಂಗ ಅತ್ಯುತ್ತಮ ನೇಯ್ಗೆಯ ಬಟ್ಟೆ ತಯಾರಿಸುತ್ತಾರೆ. ಇನ್ನೂ ಹೆಚ್ಚೆಂದರೆ ಕೆಲವು[who?]ತತ್ವಶಾಸ್ತ್ರಜ್ಞರ ಪ್ರಕಾರ ಬಹಳಷ್ಟು ಜನರು ತಮ್ಮ ಗುಂಪಿನಲ್ಲಿನ ಸಗೋತ್ರ ವಿವಾಹ ಹಾಗು ಇನ್ನಿತರ ಶ್ರೇಣೀಕೃತ ವ್ಯವಸ್ಥೆಯಲ್ಲಿ ಆರಾಮವಾಗಿರುತ್ತಾರೆ.ಅವರು ಈ ಮೊದಲು ಪ್ರಾಚೀನ ಯುಗದಲ್ಲಿ ಹೇಗಿದ್ದರೋ ಈಗಲೂ ಹಾಗೆಯೇ ಮುಂದುವರಿಯಲು [೨೬] ಇಷ್ಟಪಡುತ್ತಾರೆ.

ಜಾತಿಯ ಸ್ಥಳಾಂತರ ಅಥವಾ ಚಲನಶೀಲತೆ ಬದಲಾಯಿಸಿ

ಕೆಲವು ವಿದ್ವಾಂಸರ ಪ್ರಕಾರ ಇನ್ನುಳಿದ ಜಾತಿಗಳ ಜನರು ತಮ್ಮ ವರ್ಗೀಕೃತ ಜಾತಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ನೋಡುತ್ತಾರೆ.ಇದು ಬ್ರಿಟಿಶರ ಆಗಮನದಕ್ಕಿಂತಲೂ ಮೊದಲು ಈ ಪ್ರವೃತ್ತಿ [೨೭] ಇತ್ತು. ಕೆಲವು ಸಮಾಜಶಾಸ್ತ್ರಜ್ಞರ ಅಭಿಪ್ರಾಯದಂತೆ ಜಾತಿ ಪದ್ದತಿಯ ಗ್ರಹಿಕೆಯು ಅಲ್ಲಿನ ನೀತಿ-ನಿಯಮ ಮತ್ತು ಆ ಪದ್ದತಿಯ ಆಚರಣೆಗಳ ಬಗ್ಗೆ ಶ್ರೇಣೀಕೃತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ.ಇಲ್ಲಿ ಜಾತಿ ಪದ್ದತಿಯು ಅತಿ ಹೆಚ್ಚು ಸೂಕ್ತವೆನಿಸುವ ಕಾರ್ಯಕ್ಕೆ ಸಜ್ಜಾಗುತ್ತದೆ. ಇನ್ನುಳಿದ ಸಮಾಜಶಾಸ್ತ್ರಜ್ಞರಾದ ವೈ.ಬಿ ದಾಮಲೆಯಂತವರು ಭಾರತದ ಜಾತಿ ಪದ್ದತಿಯ ಚಲನಶೀಲತೆ ಮತ್ತು ಅದರ ಸ್ಥಿತಿಸ್ಥಾಪಕತ್ವದ ಸಾಮರ್ಥ್ಯವನ್ನು [೨೮] ವಿವರಿಸಿದ್ದಾರೆ. ಈ ವಿದ್ವಾಂಸರ ಪ್ರಕಾರ ಕೆಳಜಾತಿಗೆ ಸಂಬಂಧಿಸಿದ ಜನರು ಉನ್ನತ ಜಾತಿಯವರ ಆಚರಣೆಗಳನ್ನು ಅಳವಡಿಸಿದರೆ ಅದೂ ಕೂಡಾ ಮಾನ್ಯತೆಗೆ ಪಾತ್ರವಾಗುತ್ತದೆ. ಜಾತಿಯಲ್ಲಿನ ನಿಯಮಗಳಲ್ಲಿ ಉದಾರತೆ ತೋರಿದ್ದರಿಂದಲೇ ವಾಲ್ಮಿಕಿಯಂತಹ ಸಂತರ ಗ್ರಂಥಗಳು ಇಂದು ಹಿಂದು ಸಂಸ್ಕೃತಿಯ ಪವಿತ್ರ ಗ್ರಂಥ ರಾಮಾಯಣವನ್ನು ಬರೆಯಲು ಮತ್ತು ಅದನ್ನು ಎಲ್ಲರೂ ಒಪ್ಪಿಕೊಳ್ಳುವಂತಾಯಿತು. ದಕ್ಷಿಣ ಭಾರತದ ಶ್ರೀ ವೈಷ್ಣವ ದೇವಾಲಯಗಳಲ್ಲಿ ಕೆಲವು ಶೂದ್ರ ಕುಟುಂಬಗಳು ಉನ್ನತ ಜಾತಿಯವರೊಂದಿಗೂಡಿ ತಮ್ಮ ಜಾತಿಯನ್ನು ಉನ್ನತಕ್ಕೇರಿಸಿಕೊಂಡ [೨೮] ಉದಾಹರಣೆಗಳಿವೆ.

ಮನಃಶಾಸ್ತ್ರಜ್ಞರ ಪ್ರಕಾರ ವಿಶಾಲ ವ್ಯಾಪ್ತಿಯ ಜನಾಂಗದ ಜಾತಿಯ ಚಲನಶೀಲತೆ ಕಡಿಮೆ ಆದರೆ ಉಪಜಾತಿಗಳಲ್ಲಿ (ಕೋಮುಗಳು)ಇದು ಹೆಚ್ಚಾಗಿ ಕಾಣುತ್ತದೆ.ಇವುಗಳಲ್ಲಿ ಹಲವರು ಸಾಮಾಜಿಕ ಸ್ಥಾನಮಾನವನ್ನೂ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಅವರಿರುವ ಸ್ಥಳದ ಪುನಃ ಬದಲಾವಣೆ ಹಾಗು ಜಾತಿಗಳಲ್ಲಿ ವಿದಳನ ಉಂಟಾಗುತ್ತದೆ.ಹೊಸ ಆಚರಣೆಗಳ ಅಳವಡಿಕೆ ಅಲ್ಲದೇ ವಿಶಿಷ್ಟತೆಯನ್ನು ತಮ್ಮ ಉಪಪಂಗಡಕ್ಕೆ ಅಳವಡಿಸಿಕೊಳ್ಳುವ ಸಾಧ್ಯತೆಗಳೂ [೨೯] ಇವೆ.

ಸಮಾಜಶಾಸ್ತ್ರಜ್ಞ ಎಂ.ಎನ್ ಶ್ರೀನಿವಾಸ್ ಅವರ ಕೃತಿಗಳಲ್ಲಿ ಜಾತಿಗಳಲ್ಲಿನ ಕಠಿಣ ನಿಯಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ನಾಟಕಕೂರ್ಗ್ ದ ಜನಾಂಗೀಯ ಅಧ್ಯಯನಗಾರರ ಪ್ರಕಾರ ಈ ಜಾತಿಯಲ್ಲಿ ಸಾಕಷ್ಟು ಉದಾರತೆ ಮತ್ತು ಚಲನಶೀಲತೆ ಇದೆ ಎಂದು ಇತಿಹಾಸಕಾರರು [೩೦][೩೧] ಅಭಿಪ್ರಾಯಪಡುತ್ತಾರೆ. ಅಧ್ಯಯನಗಾರರ ಅಭಿಪ್ರಾಯದಂತೆ ಈ ಜನಾಂಗೀಯ ಜಾತಿಗಳಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಅಂತಹ ಕಟ್ಟಳೆಗಳ ಪ್ರಮಾಣ ಕಡಿಮೆ,ಈ ಜಾತಿಯ ಚಲನಶೀಲತೆಯೂ ಒಂದು ಸರಳ ವಿಧಾನದಲ್ಲಿರುವುದನ್ನು ಜನಾಂಗೀಯ ಅಧ್ಯಯನಗಾರರು ಗಮನಿಸಿದ್ದಾರೆ.ಬಹುಮುಖ್ಯವಾಗಿ ಮಧ್ಯ ಭಾಗದಲ್ಲಿನ ಶ್ರೇಣಿಗಳಲ್ಲಿ ಇದು ಕಾಣುತ್ತದೆ. ಕೀಳು ಜಾತಿಯಲ್ಲಿ ಜನಿಸಿದ ಜನರು ಉನ್ನತ ಜಾತಿಗಳ "ಸಸ್ಯಾಹಾರ ಪದ್ದತಿ ಮತ್ತು ಯಾವುದೇ ದುಶ್ಚಟಗಳನ್ನು ರೂಢಿಸದೇ" ತಮ್ಮ ಸ್ಥಾನಮಾನವನ್ನು ಸಮಾಜದಲ್ಲಿ ಏರಿಸಿಕೊಳ್ಳಬಹುದು.ಉದಾಹರಣೆಗೆ ಉನ್ನತ ಜಾತಿಯ ನಿಯಮಗಳ ಅಳವಡಿಕೆ. ಸಾಮಾನ್ಯವಾಗಿ "ನಿಷೇಧಿತ" ಈ ಆಚರಣೆಯು ಎಲ್ಲರಲ್ಲೂ ಸಹಜವಾಗಿ ಕಾಣಸಿಗುತ್ತದೆ. ಸಂಕರಿತೈಜೇಶನ್ (ಸಂಕರಣದ ಪ್ರಕ್ರಿಯೆ)ಅಥವಾ ಉನ್ನತ ಜಾತಿಯ ನಿಯಮಗಳ ಅಳವಡಿಕೆಯು ಸಣ್ಣ ಜಾತಿಗಳಲ್ಲಿ ಬದಲಾವಣೆ, ಚಲನಶೀಲತೆ ಹೆಚ್ಚಿಸಬಹುದು.ಹಲವಾರು ಆಳ್ವಿಕೆಗಳು ಮೂಲ ಸಾಮಾಜಿಕ ಆಚರಣೆಗೆ ತಮ್ಮನ್ನು ತೊಡಗಿಸಿಕೊಂಡಿವೆ.ಆಯಾ ವ್ಯಕ್ತಿಗಳ ಜಾತಿ ಸಮೂದಾಯ,ಸಾಮಾಜಿಕ ವ್ಯವಸ್ಥೆ,ಕೆಲವೊಮ್ಮೆ ರಾಜಕೀಯ ಅಧಿಕಾರ ಪಡೆದ ನಂತರ ಕೆಳಸ್ತರದವರು ಕ್ಷತ್ರಿಯರಾಗಿ ಬದಲಾವಣೆಗೆ ಮುಂದಾಗಬಹುದು.ಹೀಗೆ ಕೀಳು ಜಾತಿಯ ಪ್ರಭಾವಿ ವ್ಯಕ್ತಿಗಳಲ್ಲಿ ಇದು ಸಾಮಾನ್ಯವಾಗಿ ಪಲ್ಲಟತೆ ತರಬಹುದಾಗಿದೆ. ಈ ಸಂದರ್ಭದಲ್ಲಿ ಹೊಸ ಜಾತಿಗಳು ಉಗಮ ಕಂಡವು.ಉದಾಹರಣೆಗೆ ಕಾಯಸ್ಥ (ಬರಹಗಾರರು)ಮತ್ತು ಖತ್ರಿಗಳು (ವ್ಯಾಪಾರಿಗಳು) ಇದರಲ್ಲಿ ಹೊಸ ಕಾಯಕಲ್ಪ ಕಂಡವು. ಬ್ರಾಹ್ಮಣ ವಲಯದ ಮಾಹಿತಿಯಂತೆ,ಅವರು ಅಂತರಜಾತೀಯ ವಿವಾಹದ ಮೂಲಕ ತಮ್ಮ ಮೂಲ ಕಂಡುಕೊಂಡರೆಂದು ಹೇಳಲಾಗುತ್ತದೆ.ಆದರೆ ಇದು ಸಾಮಾಜಿಕ ಸ್ತರದಲ್ಲಿ ತಮ್ಮ ಸ್ಥಾನಮಾನದ ಕುರಿತಾದ ಅಸ್ಪಷ್ಟ ವಿವರವೆಂದೂ ಹೇಳಲಾಗಿದೆ. ಖತ್ರಿಯರು ಮಾತ್ರ ಸಂಸ್ಕೃತದಲ್ಲಿನ ಕ್ಷತ್ರಿಯರೆಂದು ಹೇಳುವ ವರ್ಗಕ್ಕೆ ಸೇರಿದವರೆಂದೂ ಅವರನ್ನು ವಿಂಗಡಣೆ[೩೨] ಮಾಡಲಾಗುತ್ತಿದೆ.(ಪ್ರಕ್ರಿತಿಸೈಡ್ ) ಇಂಥ ಹೊಸ ಜಾತಿಗಳು ಸಮಾಜದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಇಂತಹ ಶ್ರೇಣೀಕೃತ ಜಾತಿಗಳ ವರ್ಗವು ದೇಶಾದ್ಯಂತ ಸಮರೂಪದಲ್ಲಿ [೩೩] ಕಾಣುವುದಿಲ್ಲ.

ಸುಧಾರಣೆಗಳು ಬದಲಾಯಿಸಿ

ಈ ಜಾತಿ ಪದ್ದತಿಗೆ [೩೪] ಬುದ್ದ[34] ಬುದ್ದ[34] ಬುದ್ದ,ಮಹಾವೀರ ಮತ್ತು ಗೊಸಾಲಾ ಮಸ್ಕರಿನ್ ನ ಕಾಲದಿಂದಲೂ ಒಂದು ಸವಾಲನ್ನು ಎದುರಿಸಬೇಕಾಯಿತು.ಇದರಲ್ಲಿ ವರ್ಣ ಪದ್ದತಿಗೆ ಯೋಗ ಉಪನಿಶಿತ್ ಗಳಲ್ಲಿ ಅಷ್ಟಾಗಿ ಬೆಂಬಲ ದೊರಕಿಲ್ಲ,ಇದು ಚೀನಾ-ಆಕಾರದ(ಕ್ರಾಂತಿ) ತಂತ್ರಗಾರಿಕೆಗೆ ನಿರಂತರವಾಗಿ ತನ್ನ ಲಕ್ಷಣ ತೋರಿದೆ.ಇದು ಚೀನಾದ ಕ್ರಾಂತಿ ಆಸಾಮ್ ನಲ್ಲಿ ಪ್ರಾರಂಭಗೊಂಡದ್ದನ್ನು ಸೂಚಿಸುತ್ತದೆ.ಇದು ಬಹುತೇಕ ಮಧ್ಯಯುಗದಲ್ಲಿ ಕಾಣಸಿಗುತ್ತದೆ. ನಾಥ ಭಕ್ತಿ ಪಂಥವು ಮತ್ಸ್ಯ-ಇಂದ್ರ ನಾಥ ಮತ್ತು ಗೊ-ರಕ್ಷಾ ನಾಥ ಪಂಥದಿಂದ ಅದೇ ಯುಗದಲ್ಲಿ ಹುಟ್ಟಿಕೊಂಡಿತು.ಇದು ನಂತರದ ಅವಧಿಯಲ್ಲಿ ದೇಶಾದ್ಯಂತ ಹಬ್ಬಿತಲ್ಲದೇ ವರ್ಣ ಪದ್ದತಿಗೆ ತೀವ್ರ ವಿರೋಧ ವ್ಯಕ್ತಪಡಿಸಿತು.ಹಲವಾರು ಭಕ್ತಿ ಪಂಥದ ಕಾಲದ ಸಂತರು ಈ ಜಾತಿ ತಾರತಮ್ಯವನ್ನು ನಿರಾಕರಿಸಿದರಲ್ಲದೇ ಅಸ್ಪೃಶ್ಯರನ್ನೊಳಗೊಂಡಂತೆ ಎಲ್ಲರನ್ನೂ ತಮ್ಮ ವಲಯದೊಳಗೆ ಸೇರಿಸಿಕೊಂಡರು. ಇದು ಬ್ರಿಟಿಶ್ ರಾಜ್ ಕಾಲದಲ್ಲಿ ಹೊಸ ಆಯಾಮ ಪಡೆದು ಹಲವಾರು ಹಿಂದು ಸುಧಾರಣೆ ಕ್ರಾಂತಿಗಳು ಕಾಣಿಸಿದವು;ಉದಾಹರಣೆಗೆ ಬ್ರಹ್ಮೊ ಸಮಾಜ ಮತ್ತು ಆರ್ಯ ಸಮಾಜದಂತಹುಗಳು ಈ ಜಾತಿ ಪದ್ದತಿಗೆ ಕೊನೆ ಹಾಡಲು ಯತ್ನಿಸಿದವು. ಅಸ್ಪೃಶ್ಯರು ಎಂದು ಹೇಳಲಾಗುವವರನ್ನು ಮುಖ್ಯವಾಹಿನಿಗೆ ಸೇರಿಸುವ ಈ ಚಳವಳಿಗಳು ಹಲವಾರು ಸುಧಾರಣಾ ವಾದಿಗಳಿಂದ ಟೀಕೆ,ವಿಮರ್ಶೆಗೆ ಒಳಗಾದವು.(ಇದಕ್ಕಾಗಿ ನೋಡಿ ಐತಿಹಾಸಿಕ ವಿಮರ್ಶೆ,ಕೆಳಗಿರುವಂತೆ,) ಮಹಾತ್ಮಾ ಗಾಂಧಿ ಇವರನ್ನು "ಹರಿಜನರು"(ದೇವರ ಮಕ್ಕಳು)ಎಂದು ಕರೆದರು,ಸದ್ಯ ಆ ಪದವು ಒಂದು ಪ್ರೊತ್ಸಾಹಕರ,ಪೋಷಕ ಎಂದು ಪರಿಗಣಿಸಲಾಯಿತು.ಸದ್ಯ ದಲಿತ (ತುಳಿತಕ್ಕೊಳಗಾದ ) ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಗಾಂಧಿಯವರ ಈ ಕೊಡುಗೆಯು ಅಸ್ಪೃಶ್ಯರ ಬಗೆಗಿರುವ ಕಾಳಜಿ ಬಗ್ಗೆ ಇನ್ನೂ ಚರ್ಚೆಗೆ ಒಳಗಾಗುತ್ತಿದೆ,ಬಹುಮುಖ್ಯವಾಗಿ ಅವರ ಸಮಕಾಲೀನ ಡಾ.ಬಿ.ಆರ್ ಅಂಬೇಡ್ಕರ್ ಅವರ ವಾದವು ಗಾಂಧಿಯವರು ಅಸ್ಪೃಶ್ಯರಿಗಾಗಿ ಮಾಡಿದ ಚಟುವಟಿಕೆಗಳು ತಮ್ಮ ಈ ಜನರನ್ನು ಮೇಲೆತ್ತಲು ಅಷ್ಟಾಗಿ ಕೆಲಸ ಮಾಡಿಲ್ಲ ಎಂಬ ವಾದವೂ[ಸೂಕ್ತ ಉಲ್ಲೇಖನ ಬೇಕು]ಇದೆ.

ಅಸ್ಪೃಶ್ಯತೆಯ ಆಚರಣೆಯ ಬಗ್ಗೆ 1950 ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತ ಸಂವಿಧಾನದಲ್ಲಿ ಕಾನೂನು ಬಾಹಿರ ಎಂದು ವಿವರಿಸಲಾಗಿದೆ,ಅಂದಿನಿಂದಲೂ ಈ ಆಚರಣೆಯನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ತಳ್ಳಿಹಾಕುತ್ತದೆ. ಹಿಂದೆ 1997ರಲ್ಲಿ ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಕೆ.ಆರ್ ನಾರಾಯಣನ್ ಮತ್ತು ಕೆ.ಜಿ ಬಾಲಕೃಷ್ಣನ್ (ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ)ಇವರುಗಳು ಈ ಹಿಂದೆ ಕರೆಯಲಾಗುತ್ತಿದ್ದ ಅಸ್ಪೃಶ್ಯ ವರ್ಗಕ್ಕೆ ಸೇರಿದವರೆಂದು[ಸೂಕ್ತ ಉಲ್ಲೇಖನ ಬೇಕು]ಹೇಳಲಾಗುತ್ತದೆ.

ಬ್ರಿಟಿಶ್ ಆಡಳಿತ ಬದಲಾಯಿಸಿ

ಬ್ರಿಟಿಶ್ ರು ಭಾರತಕ್ಕೆ ಬಂದ ನಂತರ ಜಾತಿ ಪದ್ದತಿಯ ಪ್ರಕ್ರಿಯೆಗೆ ಕೆಲಮಟ್ಟಿಗೆ ವ್ಯತಿರಿಕ್ತ ಪರಿಣಾಮ ಉಂಟಾಯಿತು ಅದಕ್ಕಿಂತ ಮುಂಚೆ ಜಾತಿವರ್ಗಗಳ ಶ್ರೇಣಿಕರಣವು ಪ್ರದೇಶದಿಂದ ಪ್ರದೇಶಕ್ಕೆ [೩೫] ಭಿನ್ನವಾಗಿತ್ತು. ಜಾತಿಗಳು ವೃತ್ತಿಪರತೆಯನ್ನು ಅಷ್ಟಾಗಿ ಪ್ರಭಾವಿಸಿರಲಿಲ್ಲ ಅಥವಾ ಸಾಮಾಜಿಕ ಸ್ಥಾನಮಾನದ ಗುಂಪುಗಳನ್ನು ಸೃಷ್ಟಿಸಿರಲಿಲ್ಲ. ಭಾರತದ ಜಾತಿ ಪದ್ದತಿಯನ್ನು ತಮ್ಮ ವರ್ಗದ ಶ್ರೇಣಿಗೆ ಬದಲಾಯಿಸಲು ಬ್ರಿಟಿಶ್ ರು ಯತ್ನಿಸಿದರು,ಜಾತಿಯು ಅವರ ವೃತ್ತಿ ಸೂಚಕವಾಗಿರಲಿ ಎಂದು ಅವರು ಭಾವಿಸಿದರು.ವೃತ್ತಿಯು ಸಾಮಾಜಿಕ ದರ್ಜೆ ಮತ್ತು ಬುದ್ದಿಮತ್ತೆಯನ್ನು ಸಾಮರ್ಥ್ಯ ತೋರಲಿ ಎಂದು ಅವರು [೨೧] ವಿವರಿಸುತ್ತಿದ್ದರು. ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿ ಆರಂಭಿಕವಾಗಿ ಜಾತಿಯು ಸೂಚಕಗಳು ಮತ್ತು ಆಚರಣೆಗಳಿಗೆ ಅವರು ಒತ್ತು ನೀಡಿದರು.ಆದರೆ ಕೆಳದರ್ಜೆಯ ಜಾತಿಗಳೊಂದಿಗಿನ ತಾರತಮ್ಯವನ್ನು ಬ್ರಿಟಿಶ್ ಕಾನೂನು [೩೬] ಒಪ್ಪಲಿಲ್ಲ. ಹೇಗೆಯಾದರೂ ಬ್ರಿಟಿಶ್ ರ ಒಡೆದು ಆಳುವ ನೀತಿಯೊಂದಿಗೆ ಜನರನ್ನು ಜಾತಿ ಕಟ್ಟಳೆಗೆ ಈಡು ಮಾಡಿದ್ದ ಬಗ್ಗೆ ಬ್ರಿಟಿಶ್ ರ 10 ವರ್ಷಗಳ ಜನಗಣತಿಯ ಆಧಾರವು [೩೭] ತೋರ್ಪಡಿಸುತ್ತದೆ.

ಬ್ರಿಟಿಶ್ ಆಡಳಿತ ವೇಳೆಯಲ್ಲಿ ಭಾರತದಲ್ಲಿ ಹಲವಾರು ಕೆಳದರ್ಜೆಯ ಜಾತಿ ಜನಾಂಗವು ಸಿಡಿದೆದ್ದಿತು.ಬಹುಮುಖ್ಯವಾಗಿ ಬುಡಕಟ್ಟು ಜನಾಂಗದವರು ಬ್ರಿಟಿಶ್ ಆಡಳಿತದ ವಿರುದ್ದ ತಿರುಗಿ ಬಿದ್ದರು. ಅವೆಂದರೆ:[೩೮]

  1. ಹಲ್ಬಾ ಬಂಡುಕೋರರು (1774–79)
  2. ಭೂಪಾಲ್ ಪಟ್ನಮ್ ಹೋರಾಟ(1795)
  3. ಭಿಲ್ ಬಂಡುಕೋರರು(1822–1857)[೩೯]
  4. ಪರಾಲ್ ಕೋಟ್ ಬಂಡುಕೋರರು (1825)
  5. ತಾರಾಪುರ್ ಬಂಡುಕೋರರು (1842–54)
  6. ಮರಿಯಾ ಬಂಡುಕೋರರು (1842–63)
  7. ಮೊದಲ ಸ್ವಾತಂತ್ರ್ಯ ಹೋರಾಟ (1856–57)
  8. ಭಿಲ್ ಬಂಡುಕೋರರು, ಬನ್ಸವಾರಾದಲ್ಲಿ ತಾಂತ್ಯಾ ಟೋಪಿ ನೇತೃತ್ವದಲ್ಲಿ ಹೋರಾಟ ಆರಂಭಿಸಿದರು.(1858)[೪೦]
  9. ಕೊಯಿ ದಂಗೆ (1859)
  10. ಗೊಂಡ್ ಬಂಡುಕೋರರು,ಅದಿಲಾಬಾದ್ ನಲ್ಲಿ ರಾಮ್ ಜಿ ನೇತೃತ್ವದಲ್ಲಿ ದಂಗೆ ಎದ್ದರು.(1860)[೪೧]
  11. ಮುರಿಯಾ ಬಂಡುಕೋರರು (1876)
  12. ರಾಣಿ ಬಂಡುಕೋರರು (1878–82)
  13. ಭೂಮ್ಕಾಲ್(1910)

ಜಾತಿ ಪದ್ದತಿಯ ಆಧುನಿಕ ಸ್ಥಾನ-ಮಾನ ಬದಲಾಯಿಸಿ

ಗ್ರಾಮೀಣ ಪ್ರದೇಶ ಮತ್ತು ಸಣ್ಣ ಪಟ್ಟಣಗಳಲ್ಲಿ ಜಾತಿ ಪದ್ದತಿಯು ಇನ್ನೂ ಪ್ರಬಲವಾಗಿದೆ. ಭಾರತದ ರಾಜಕಾರಣದಲ್ಲಿ ಜಾತಿಯು ಪ್ರಮುಖ ಅಂಶವಾಗಿದೆ ಭಾರತ ಸರ್ಕಾರವು ಜಾತಿ ಮತ್ತು ಉಪಜಾತಿಗಳನ್ನು ಅಧಿಕೃತವಾಗಿ ದಾಖಲಿಸಿ ಅದರ ಮೂಲಕ ಪ್ರಾಥಮಿಕವಾಗಿ ಶಿಕ್ಷಣ ಮತ್ತು ಉದ್ಯೋಗಳಲ್ಲಿ ಮೀಸಲಾತಿ ನೀಡಲು (ಧನಾತ್ಮಕ ತಾರತಮ್ಯ-ವಿಭಜನೆ)ಮಾಡಿ ಜನಗಣತಿಯನ್ನು ಮೂಲಾಧಾರವಾಗಿಸಿದೆ. ಭಾರತದ ಮೀಸಲಾತಿ ಪದ್ದತಿಯ ವ್ಯಾಪ್ತಿ ಸೀಮಿತವಾಗಿದ್ದರೂ ಅದು ಸಂಪೂರ್ಣವಾಗಿ ಹಕ್ಕುಳ್ಳ ಪಾಲನ್ನು ಅವಲಂಬಿಸಿದೆ. ಸರ್ಕಾರವು ಪರಿಶಿಷ್ಟ ಜಾತಿಗಳು,ಪರಿಶಿಷ್ಟ ಪಂಗಡಗಳು ಮತ್ತು ಇನ್ನಿತರ ಹಿಂದುಳಿದ ವರ್ಗಗಳನ್ನು ಅವಲಂಬಿಸಿದೆ:

ಪರಿಶಿಷ್ಟ ಜಾತಿಗಳು (ಎಸ್ .ಸಿ)
ಪರಿಶಿಷ್ಟ ಜಾತಿಗಳು ಬಹುತೇಕವಾಗಿ ಹಿಂದಿನ"ಅಸ್ಪೃಶ್ಯರನ್ನು"ಒಳಗೊಂಡಿದೆ.(ಸದ್ಯ "ದಲಿತ" ಎಂಬ ಪದವನ್ನು ಪರಿಗಣಿಸಲಾಗುತ್ತದೆ) ಸದ್ಯದ ಜನಸಂಖ್ಯೆಯು ಭಾರತದಲ್ಲಿ 16% ರಷ್ಟಿದ್ದು (ಸುಮಾರು 160 ದಶಲಕ್ಷ) ಉದಾಹರಣೆಗಾಗಿ ದೆಹಲಿ ರಾಜ್ಯದಲ್ಲಿ 49 ಜಾತಿಗಳನ್ನು ಎಸ.ಸಿ ಎಂದು ಪಟ್ಟಿ [೪೨] ಮಾಡಲಾಗಿದೆ.
ಪರಿಶಿಷ್ಟ ಪಂಗಡಗಳು(ಎಸ್ .ಟಿ)
ಪರಿಶಿಷ್ಟ ಪಂಗಡಗಳು ಸಾಮಾನ್ಯವಾಗಿ ಬುಡಕಟ್ಟು ಜನಾಂಗದ ಗುಂಪನ್ನು ಹೊಂದಿವೆ. ಸದ್ಯ ಭಾರತದ ಒಟ್ಟು ಜನಸಂಖ್ಯೆಯ 7% ರಷ್ಟು ಇದೆ,ಅಂದರೆ 70 ದಶಲಕ್ಷದಷ್ಟು.
ಇನ್ನಿತರ ಹಿಂದುಳಿದ ವರ್ಗಗಳು (ಒಬಿಸಿ)
ಮಂಡಲ್ ಆಯೋಗವು ಸುಮಾರು 3000ಕಿಂತಲೂ ಅಧಿಕ ಜಾತಿಗಳನ್ನು ಒಬಿಸಿಗಳೆಂದು ಪರಿಗಣಿಸಿದೆ.ಒಟ್ಟು ಜನಸಂಖ್ಯೆಯ 52% ರಷ್ಟನ್ನು ಇದು ಒಳಗೊಂಡಿದೆ. ಆದರೆ ರಾಷ್ಟ್ರೀಯ ಮಾದರಿ ಸರ್ವೇಕ್ಷಣೆಯು ಇದನ್ನು 32% ಎಂದು [೪೩] ತೋರಿಸಿದೆ. ಭಾರತದಲ್ಲಿ ಎಷ್ಟು ಒಬಿಸಿಗಳಿದ್ದಾರೆಂಬ ಬಗ್ಗೆ ವ್ಯಾಪಕ ಚರ್ಚೆಗಳಿವೆ;ಇದು ಸುಮಾರಾಗಿ ಹೆಚ್ಚೇ ಇದೆ ಆದರೆ ಇನ್ನು ಕೆಲವರು ಇದು ಕಡಿಮೆ ಪ್ರಮಾಣ ಎನ್ನುತ್ತಾರೆ.ಮಂಡಲ್ ಆಯೋಗ ಮತ್ತು ರಾಷ್ಟ್ರೀಯ ಸರ್ವೇಕ್ಷಣಾ ವರದಿಗಳ ನೀಡಿರುವ ಪ್ರಕಾರ ಇದು ಸಮಂಜಸ ಸಂಖ್ಯಾಬಲವಲ್ಲ ಎಂಬ ವಾದವೂ [೪೪] ಇದೆ.

ಭಾರತದಲ್ಲಿನ ಜಾತಿ ಆಧಾರಿತ ಮೀಸಲಾತಿಗಳು ವ್ಯಾಪಕ ವಿರೋಧವನ್ನು ಪಡೆದಿವೆ.ಉದಾಹರಣೆಗೆ 2006 ರಲ್ಲಿನ ಮೀಸಲಾತಿ ವಿರೋಧಿ ಪ್ರತಿಭಟನೆಗಳು,ಇದರಿಂದಾಗಿ ಮುಂದುವರೆದ ಜಾತಿಗಳ ವಿರುದ್ದದ ಭೇದಭಾವ ಇದು ಹಿಮ್ಮುಖ ತಾರತಮ್ಯ ಎಂಬ ವಾದವೂ ಇದೆ.(ಮೀಸಲಾತಿಗೆ ಒಳಪಡದ ಜಾತಿಗಳು) ಹಲವರ ಪ್ರಕಾರ ಮುಂದುವರೆದ ಜಾತಿಗಳ ಬಗೆಗೆ ಸಾಮಾಜಿಕ ವಿಭಜನೆಯು ಋಣಾತ್ಮಕವಲ್ಲದೇ ಇದರೊಂದಿಗೆ ಸಮನಾಗಿ ತಪ್ಪು ಅರ್ಥ ಹೊಂದಿದೆ ಎನ್ನಲಾಗುತ್ತಿದೆ.

ಹಿಂದುಯೇತರರಲ್ಲಿನ ಜಾತಿ ಪದ್ದತಿ ಬದಲಾಯಿಸಿ

ಭಾರತದ ಕೆಲವು ಭಾಗಗಳಲ್ಲಿ ಕ್ರಿಶ್ಚಿಯನ್ ರನ್ನು ವಿಭಾಗ,ಸ್ಥಳೀಯತೆ ಮತ್ತು ಅವರ [೪೫] ಹಿಂದಿನವರ ಜಾತಿ ಆಧಾರದ ಮೇಲೆ ವಿಂಗಡಿಸಲಾಗುತ್ತಿದೆ;ಉನ್ನತ ವರ್ಗ ಸಿರಿಯನ್ ಮಲ್ಬಾರ್ ನಸ್ರಾನಿಗಳ ಉಲ್ಲೇಖದೊಂದಿಗೆ ಇದನ್ನು ವಿಭಜಿಸಲಾಗುತ್ತದೆ. ಕೇರಳದಲ್ಲಿನ ಕ್ರಿಶ್ಚಿಯನ್ ರನ್ನು ಕೆಲವು ಸಮೂದಾಯಗಳಲ್ಲಿ ವಿಭಜಿಸಲಾಗಿದೆ;ಉದಾಹರಣೆಗೆ ಸಿರಿಯನ್ ಕ್ರಿಶ್ಚಿಯನ್ಸ್,ಮತ್ತು "ಲ್ಯಾಟಿನ್ "ಅಥವಾ "ನಿವ್ ರೈಟ್ "ಕ್ರಿಶ್ಚಿಯನ್ಸ್ ಎಂದು ಹೆಸರಿಸಲಾಗುತ್ತದೆ.

ಸಿರಿಯನ್ ಕ್ರಿಶ್ಚಿಯನ್ ರು ಸಾಂಪ್ರದಾಯಿಕ ಜಾತಿ ವ್ಯವಸ್ಥೆಯ ಪದ್ದತಿಯಿಂದ ಮತಾಂತರಗೊಂಡ ನಂಬೂದ್ರಿಗಳೆಂದು ಮತ್ತು ಜಿವ್ಸ್ ,ಇವರು ಸೇಂಟ್ .ಥಾಮಸ್ ಅವರಿಂದ ದೀಕ್ಷೆಗೊಳಪಟ್ಟರೆಂಬ ಉಲ್ಲೇಖವು [೪೬] ಇದೆ. ಬರಹಗಾರರಾದ "Caste among Syrian Christians". Encyclopedia Britannica.ಆರುಂಧತಿ ರಾಯ್ ಮತ್ತು "Caste among Syrian Christians". Encyclopedia Britannica.ಆನಂದ್ ಕುರಿಯನ್ ಅವರು ತಮ್ಮ ಸಮೂದಾಯದಲ್ಲಿನ ಜಾತಿ ಪದ್ದತಿಯ ವೈಯಕ್ತಿಕ ವಿವರಗಳನ್ನು ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ.<ಉಲ್ಲೇಖ ಹೆಸರು="ಬ್ರಿಟಾನಿಕಾ">"Caste among Syrian Christians". Encyclopedia Britannica.|ಪಡೆದ ದಿನಾಂಕ=19 ಮಾರ್ಚ್ 2010}}</ಉಲ್ಲೇಖ>[೪೭][೪೮]<ಉಲ್ಲೇಖ ಹೆಸರು="ಹಿಂದುತ್ವ">"Nambudiri origin". www.hindutva.org. Archived from the original on 2007-08-15. Retrieved 2010-07-27. |ಪಡೆದ ದಿನಾಂಕ=19 ಮಾರ್ಚ್ 2010}}</ಉಲ್ಲೇಖ> ಸಿರಿಯನ್ ಕ್ರಿಶ್ಚಿಯನ್ ರು,ಇಲ್ಲಿ ಪ್ರಮುಖವಾಗಿ ಕ್ನಾನಯಾ ಕ್ರಿಶ್ಚಿಯನ್ಸ್ ರು ತಮ್ಮ ತಮ್ಮೊಳಗೇ ವಿವಾಹ ಬಂಧನಕ್ಕೊಳಗಾಗುತ್ತಾರಲ್ಲದೇ ಇನ್ನುಳಿದ ಕ್ರಿಶ್ಚಿಯನ್ ಜಾತಿಗಳೊಂದಿಗೆ ಅಂತರ್ ವಿವಾಹಕ್ಕೆ [೪೯] ಸಮ್ಮತಿಸುವುದಿಲ್ಲ.

ಕೇರಳದ ಕರಾವಳಿಯಲ್ಲಿ ಮೂಲಭೂತವಾಗಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ಲ್ಯಾಟಿನ್ ರೈಟ್ ಕ್ರಿಶ್ಚಿಯನ್ ರನ್ನು ಪರಿಶಿಷ್ಟ ಜಾತಿಗಳ ವರ್ಗಕ್ಕೆ ಸೇರಿಸಲಾಗುತ್ತದೆ. ಅವರು 16 ನೆಯ ಮತ್ತು 19 ನೆಯ ಶತಮಾನದಲ್ಲಿ ಮಿಶನರಿಗಳಿಂದ ಮತಾಂತರಗೊಂಡವರು ಈ ಮಿಶನರಿ ಚಟುವಟಿಕೆಗಳು ಪಾಶ್ಚಿಮಾತ್ಯ ಲ್ಯಾಟಿನ್ ರೈಟ್ ಮಿಶನರಿಗಳಿಂದ ನಡೆಸಲ್ಪಟ್ಟಿದ್ದು ಅವರಿಗೆ ನಿಜವಾಗಿ ಭಾರತದಲ್ಲಿನ ಜಾತಿ ಪದ್ದತಿ ಬಗೆಗೆ ಸರಿಯಾದ ಅರಿವಿರಲಿಲ್ಲ;ಆದರೆ ಭಾರತದಲ್ಲಿನ ಪರಿಶಿಷ್ಟ ಜಾತಿಗಳ ಬಗ್ಗೆ ಗೊತ್ತಿದ್ದ ಸಿರಿಯನ್ ಚರ್ಚ್ ಗಳು ಇಲ್ಲಿನ ಜಾತಿಗಳೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ.ಭಾರತದಲ್ಲಿನ ಜಾತಿ ಕುರಿತಾದ ಪೂರ್ವಾಗ್ರಹ ಪೂರಿತ ನಡವಳಿಕೆಗಳು ಅವರಿಗೆ ಅರಿವಿಗೆ[ಸೂಕ್ತ ಉಲ್ಲೇಖನ ಬೇಕು]ಬಂದಿದ್ದವು. ಭಾರತ ಸರ್ಕಾರವು ನಂತರ ಈ ಗುಂಪಿಗೆ ಒಬಿಸಿ (OBC) ಮಾನ್ಯತೆ ನೀಡಿತು. ಸಿರಿಯನ್ ಕ್ರಿಶ್ಚಿಯನ್ ರು ಮತ್ತು ಲ್ಯಾಟಿನ್ ರೈಟ್ ನಡುವಿನ ವಿವಾಹ ಬಂಧನಗಳು ಅತ್ಯಂತ ವಿರಳ ಎಂದೇ ಹೇಳಬಹುದು.ಮಾನವಶಾಸ್ತ್ರಜ್ಞರ ಪ್ರಕಾರ ಕೇರಳದ ಕ್ರಿಶ್ಚಿಯನ್ ರು ಹಿಂದು ಆಚರಣೆಗಳಿಗಿಂತ ಹೆಚ್ಚು ವಿಭಿನ್ನ ಬದಲಾವಣೆಗಳಿಗೆ ಒಡ್ಡಿಕೊಂಡಿದ್ದಾರೆ,ಯಾಕೆಂದರೆ ಇಲ್ಲಿ ಜಾತಿಗಳ ಬಗ್ಗೆ ಅಂತಹ ಮಹತ್ವದ ಪರಿಕಲ್ಪನೆ ಸಾಧ್ಯವಾಗಿಲ್ಲ. ಇವರಲ್ಲಿ ಜಾತಿ ಸ್ಥಾನಮಾನವನ್ನು ಸಹ ಧರ್ಮದೊಂದಿಗೆ ಅದರ ಪಂಥನಿಷ್ಟೆಯು (ಉದಾಹರಣೆಗೆ ಸಿರಿಯನ್ ಕ್ಯಾಥೊಲಿಕ್ ದಿಂದ ಸಿರಿಯನ್ ಸಂಪ್ರದಾಯವನ್ನು [೫೦] ಅಪ್ಪಿಕೊಂಡಿದೆ.)

ಭಾರತದ ರಾಜ್ಯವಾದ ಗೋವಾದಲ್ಲಿ 16 ನೆಯ ಶತಮಾನದಲ್ಲಿ ಪೊರ್ಚ್ ಗೀಸ ಲ್ಯಾಟಿನ್ ಮಿಶನರಿಗಳಿಂದ ಬೃಹತ್ ಪ್ರಮಾಣದ ಮತಾಂತರ ಸಂಭವಿಸಿತು. ಆದರೆ ಹಿಂದು ಮತಾಂತರಿಗಳು ತಮ್ಮ ಜಾತಿ ಆಚರಣೆಗಳನ್ನು ಜೀವಂತವಾಗಿಟ್ಟರು. ಗೋವಾದಲ್ಲಿನ ಜಾತಿ ಪದ್ದತಿಯನ್ನು ನಿರಂತರವಾಗಿ ಇಟ್ಟಿದ್ದರಿಂದ ಹಳ್ಳಿಗೇ ಹಳ್ಳಿಯನ್ನೇ ಸಾಮೂಹಿಕವಾಗಿ ಮತಾಂತರಗೊಳಿಸುವುದು ಸಾಧ್ಯವಾಯಿತು,ಆದರೆ ಇದರಿಂದ ಅವರನ್ನು ಸಾಮಾಜಿಕ ಶ್ರೇಣಿಕರಣ ಮತ್ತು ಆಚರಣೆಗಳಿಂದ ದೂರವಿಡಲಿಲ್ಲ. ಆದರೆ ಪೊರ್ಚ್ ಗೀಸ್ ವಸಾಹತುಶಾಹಿಗಳು ಗೋವಾದವರ ಸಂಶೋಧನೆ ಸಂದರ್ಭದಲ್ಲಿ ಕೂಡಾ ಜಾತಿ ಪದ್ದತಿಯನ್ನು ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ಹೀಗೆ ಗೋವಾದಲ್ಲಿನ ಮೂಲ ಹಿಂದು ಬ್ರಾಹ್ಮಣರು ಕ್ರಿಶ್ಚಿಯನ್ ಬಾಮೊನ್ಸ್ ಆದರೆ ಕ್ಷತ್ರಿಯರು ಕ್ರಿಶ್ಚಿಯನ್ ಚಾರ್ಡೊಸ್ ಎಂದು ಕ್ರಿಸ್ಚಿಯನ್ ಉನ್ನತ ವ್ಯಕ್ತಿಗಳಿಂದ ಕರೆಯಲ್ಪಟ್ಟರು. ಹೀಗೆ ಕ್ರಿಶ್ಚಿಯನ್ ಪುರೋಹಿತ ವರ್ಗ ಪೂರ್ಣವಾಗಿ ಬ್ರಾಹ್ಮಣಮಯವಾಯಿತು. ಕ್ರಿಶ್ಚಿಯನ್ ಗೆ ಮತಾಂತರವಾದ ವೈಶ್ಯರು ಗೌಡ್ಡೊಸ್ ಆದರೆ ಶೂದ್ರರು ಸುದೀರ್ ರಾಗಿ ನಾಮಕರಣ ಹೊಂದಿದರು. ಕೊನೆಯದಾಗಿ ಮತಾಂತರಗೊಂಡ ದಲಿತರು ಅಥವಾ "ಅಸ್ಪೃಶ್ಯರಿಗೆ"ಕ್ರಿಶ್ಚಿಯನ್ ರು ಮಹಾರ್ಸ್ ಮತ್ತು ಚಮಾರ್ಸ್ ಎಂದು ಕರೆಯಲಾಯಿತು,ನಂತರ ಚಮಾರ ಬಗ್ಗೆ ದಲಿತ ವಿರೋಧಿ ಎಂಬ ದೋಷಾರೋಪಣವನ್ನೂ ಮಾಡಿದ ಪ್ರಸಂಗ ನಡೆಯಿತು.

ಸಾಮಾಜಿಕ ಶ್ರೇಣೀಕೃತ "ಜಾತಿಗಳು" ತಮ್ಮ ಘಟಕಗಳ ಮೂಲಕ ಮುಸ್ಲಿಮ್ ರಲ್ಲೂ ಈ ತೆರನಾದ ಬದಲಾವಣೆಗೆ ಕಾರಣವಾದ ಸಂಗತಿ ದಕ್ಷಿಣ ಏಷ್ಯಾದಲ್ಲಿ [೫೧][೫೨] ನಡೆಯಿತು. ಮೂಲಗಳ ಪ್ರಕಾರ ಹಿಂದುಗಳೊಂದಿಗಿನ ನಿಕಟ ಸಂಬಂಧ ಮತ್ತು ಇಸ್ಲಾಮ್ ಗೆ ಮತಾಂತರಗೊಂಡ ಹಿಂದುಗಳ ಸಂಪರ್ಕದಿಂದಾಗಿ ಮುಸ್ಲಿಮ್ ರಲ್ಲಿ ಜಾತಿಯ ಜಾಗೃತಿ [೫೧][೫೨][೫೩][೫೪] ಬೆಳೆಯಿತು. ಭಾರತ ಸರ್ಕಾರ ನೇಮಿಸಿದ ಸಾಚಾರ್ ಸಮಿತಿಯ ವರದಿ 2006 ರಲ್ಲಿ ಬಿಡುಗಡೆಗೊಂಡು ಮುಸ್ಲಿಮ್ ರಲ್ಲಿನ ಸಾಮಾಜಿಕ ಶ್ರೇಣಿಕರಣಕ್ಕೆ ಕಾರಣವಾಯಿತು.

ಮುಸ್ಲಿಮ್ ರಲ್ಲಿ ಆಶ್ರಫ್ಸ್ ಎಂಬ ಪಂಗಡವು ತಾವು ಅರಬ್ ನ [೫೫][೫೬] ಪ್ರಾಚೀನತೆಗೆ ಸೇರಿದವರು, ಅಲ್ಲದೇ ಉನ್ನತ ಸ್ಥಾನ-ಮಾನ ತಮಗಿದೆ ಎಂದು ಉಲ್ಲೇಖಿಸುತ್ತಾರೆ.ಅದೇ ರೀತಿ ಅಜ್ಲಫ್ಸ್ ಗಳು ಹಿಂದುತ್ವದಿಂದ ಮತಾಂತರಗೊಂಡವರಲ್ಲದೇ ಕೆಳದರ್ಜೆಯವರು ಎನ್ನಲಾಗುತ್ತದೆ. ಅದಲ್ಲದೇ ಅರ್ಜಲ್ ಜಾತಿಯು ಮುಸ್ಲಿಮ್ ರಲ್ಲಿ ಅಸ್ಪೃಶ್ಯರಿಗೆ ಹೋಲಿಸಲಾಗುತ್ತದೆಯಲ್ಲದೇ ಇದರಲ್ಲಿ ಜಾತಿ ವಿರೋಧಿ ಕಾರ್ಯಕರ್ತರು ಇರುವುದನ್ನು ಗಮನಿಸಬಹುದು. ಇಲ್ಲಿ ಅಂಬೇಡ್ಕರ್ ಅವರ ಹಿಂದುಳಿದ ಜನಾಂಗವೆಂಬಂತೆ [೫೭][೫೮] ಚಿತ್ರಿಸಲಾಗುತ್ತದೆ. ಭಾರತದ ಬಂಗಾಳ ಪ್ರದೇಶದಲ್ಲಿನ ಕೆಲವು ಮುಸ್ಲಿಮ್ ರನ್ನು ಅವರ ಸಾಮಾಜಿಕ ಶ್ರೇಣಿ ಪ್ರಕಾರ 'ಕೋಮ್ಸ್ 'ಎನ್ನಲಾಗುತ್ತದೆ.ದಕ್ಷಿಣ ಏಷ್ಯಾ ಮೂಲದ ಇವರನ್ನು ಸಮಾಜದಲ್ಲಿ ಅತ್ಯಂತ ಕಡಿಮೆ ವಿಭಾಗವೆನ್ನಲಾಗುತ್ತಿದ್ದು ಅವರದೇ ಬೇರೆ ವರ್ಗಗಳೊಂದಿಗೆ ವಿವಾಹ ಕೂಡಾ [೫೯] ಅಪರೂಪವೆನ್ನಬಹುದು. ಆದರೆ ಹಲವಾರು ವಿದ್ವಾಂಸರ ಪ್ರಕಾರ [೫೪]"ಹಿಂದು ವರ್ಗದಲ್ಲಿರುವ ಕಟ್ಟಳೆಗಳನ್ನು ಇಲ್ಲಿ ಕಾಣಲಾಗದು".ಅಂಬೇಡ್ಕರ್ ರಂತಹ [೬೦] ಕೆಲವರು ವಾದ ಮಂಡಿಸುವಂತೆ ಮುಸ್ಲಿಮ್ ರಲ್ಲಿ ಹಿಂದುಗಳಿಗಿಂತ ಹೆಚ್ಚಿನ ಜಾತಿ ಕಟ್ಟುಪಾಡುಗಳಿವೆ ಎಂದೂ [೫೭][೫೮] ವ್ಯಾಖ್ಯಾನಿಸಲಾಗುತ್ತದೆ.

ನಾಸ್ತಿಕ ಬೌದ್ದರೂ ಕೂಡಾ ಜಾತಿ ಪದ್ದತಿ ಹೊಂದಿದ್ದಾರೆ. ಶ್ರೀಲಂಕಾದಲ್ಲಿನ ರೊಡಿಸ್ ವರ್ಗದವರು ಬೌದ್ದ ಧರ್ಮೀಯರಿಂದ ದೂರ ಉಳಿಯುತ್ತಾರೆ,ಯಾಕೆಂದರೆ ಶ್ರೀಲಂಕನ್ ಬೌದ್ದರಲ್ಲಿರುವ ಅಹಿಂಸಾ (ಅಹಿಂಸಾ ಆಚರಣೆ )ಬುದ್ದನ ಅತ್ಯಂತ ಮುಖ್ಯ ತತ್ವಗಳ ನಂಬಿಕೆಯಲ್ಲಿ ಒಂದಾಗಿದ್ದು ಇದರಲ್ಲಿ ಅದೃಶ್ಯವಾಗಿದೆ. ಬರಹಗಾರ ರಾಘವನ್ ಅವರ ಪ್ರಕಾರ "ಪೂಜಾ ವಿಧಿಗಳಲ್ಲಿ ಮನುಷ್ಯರ ಕುರಿತ ಬೇಡಿಕೆಗಳಲ್ಲಿ ಬಹುಮುಖ್ಯವಾದ ಆಚರಣೆಯು ಬೌದ್ದರಲ್ಲಿದೆ.ಆದರೆ ಈ ವರ್ಗವು ಅಷ್ಟಾಗಿ ಗಮನ ಹರಿಸುವುದಿಲ್ಲ.ಬದುಕಿನ ಎಲ್ಲಾ ಆಯಾಮಗಳಲ್ಲಿ ಬೌದ್ದ ಆಚರಣೆಗಳನ್ನು ತರಬೇಕಾಗುತ್ತದೆ;ಈ ವರ್ಗದ ಜನರಲ್ಲಿ ಈ ಆಚರಣೆ ಉಳಿದುಕೊಳ್ಳುವ ಯಾವ ಲಕ್ಷಣಗಳಿಲ್ಲ.ಸಂಘದವರಿಂದ ವ್ಯಾಖ್ಯಾನಿಸಲ್ಪಟ್ಟ (ಅಂದರೆ ಬೌದ್ದ ಧರ್ಮಗುರುಗಳ ವ್ಯಾಖ್ಯಾನ)ಇವರನ್ನು ಸಾಮಾಜಿಕ ಸ್ತರದಿಂದ ದೂರ ಇಡಲಾಗಿದೆ) ಸಾವರ್ಕರ್ ಅವರ ಪ್ರಕಾರ ಹಿಂದುಳಿದ ಜಾತಿಗಳಲ್ಲಿ (ಉದಾಹರಣೆಗೆ ಚಮ್ಮಾರರು ಅಹಿಂಸೆಯನ್ನು ಆಚರಿಸಿದರೂ ಅದು ಸಮಂಜಸ [clarification needed][೬೧] ರೂಪದಲ್ಲಿರದು) ಯಾನ್ ಚಾಂಗ್ ದಕ್ಷಿಣ ಭಾರತದಲ್ಲಿನ ಚಾಲುಕ್ಯ ಸಾಮ್ರಾಜ್ಯಕ್ಕೆ ಭೇಟಿ ನೀಡಿದಾಗ ಬೌದ್ದರು ಮತ್ತು ಜೈನ್ ರಲ್ಲಿ ಜಾತಿ ಪದ್ದತಿ ಇತ್ತೆಂದು [೬೨] ಹೇಳಿದ್ದಾನೆ.ಜೈನ್ ರೂ ಕೂಡಾ ಬಿಹಾರ್ ನಂತಹ ಪ್ರದೇಶಗಳಲ್ಲಿ ಜಾತಿ ಪದ್ದತಿಯನ್ನು ಆಚರಿಸುತ್ತಿದ್ದರು. ಉದಾಹರಣೆಗೆ ಬಂಡೆಲಾ ಗ್ರಾಮವೊಂದರಲ್ಲಿ ಹಲವಾರು "ಜಾತ್ ಗಳು "(ಜೈನ್ ನರಲ್ಲಿನ ಗುಂಪುಗಳು ) ಒಂದು "ಜಾತ್ " ಗೆ ಸೇರಿದ ವ್ಯಕ್ತಿಯೊಬ್ಬ ಇನ್ನೊಂದು ಜೈನ್ ನೊಂದಿಗೆ ಅಥವಾ ಮತ್ತೊಂದು "ಜಾತ್ "ನೊಂದಿಗೆ ಸೇರಲಾರ. ಅದಲ್ಲದೇ ಇನ್ನೊಬ್ಬ "ಜಾತ್ "ನೊಂದಿಗೆ ಅವರು ಕುಳಿತು ಭೋಜನವನ್ನೂ [೬೩] ಮಾಡಲಾರರು.

ಆದರೆ ಸಿಖ್ ಗುರುಗಳು ಜಾತಿ ಪದ್ದತಿಯ ಆಚರಣೆಯನ್ನು ತೀವ್ರವಾಗಿ ಟೀಕಿಸಿದರು. ಆದರೆ ಕೆಲವು ಜಾತಿಗಳು ತಾವು ಇತರರಿಗಿಂತ ಹೆಚ್ಚು ಅಥವಾ ಮೇಲ್ಮಟ್ಟದವರೆಂದು ತಿಳಿಯುತ್ತಾರೆ.(ಉದಾಹರಣೆಗೆ ಬ್ರಾಹ್ಮಣರು ಎಲ್ಲರಿಗಿಂತ ಮೇಲ್ವರ್ಗದವರು)ಆದರೆ ಅವರ ಭೋದನೆ ಪ್ರಕಾರ ಸಮಾಜದ ಎಲ್ಲಾ ಸ್ತರಗಳು ಮೌಲ್ಯಯುತವಾದವುಗಳೇ ಅಲ್ಲಿ ಪ್ರತಿಭಾವಂತಿಕೆ ಮತ್ತು ಪರಿಶ್ರಮದ ಕೆಲಸ ಬದುಕಿನಲ್ಲಿ ಮಹತ್ವದಾಗಿದೆ. ಶಿರೊಮಣಿ ಗುರುದ್ವಾರಾ ಪ್ರಬಂಧಕ ಕಮೀಟಿಯಲ್ಲಿನ 140 ಸ್ಥಾನಗಳಲ್ಲಿ 20ನ್ನು ಕೆಳಜಾತಿಗೆ ಮೀಸಲಾಗಿವೆ. ಆದರೆ ಈ ಮೀಸಲಾತಿ ಪದ್ದತಿಯು ಪ್ರತಿಭಾವಂತಿಕೆಯ ಕೊರತೆಯಿಂದ ಬಳಲುತ್ತಿದೆ ಎಂದು ಹಲವರು ಟೀಕಿಸುತ್ತಾರೆ.ಅದಲ್ಲದೇ ಯಾವುದೇ ಸ್ಥಾನವನ್ನು ಪಡೆಯಬೇಕಾದರೆ ಪ್ರತಿಭೆಯು ಅತ್ಯಂತ ಮಹತ್ವದ [೬೪] ಅಂಶವಾಗಿದೆ.

ಬಹಾ'ಇ ಪಂಥವು ಅದರ ಮಾನವೀಯ ಒಗ್ಗಟ್ಟಿನ ತತ್ವವನ್ನು ಪ್ರತಿಪಾದಿಸುವುದರಿಂದ ಹಲವಾರು ಕೆಳಜಾತಿಗಳನ್ನು ತನ್ನೆಡೆಗೆ [೬೫] ಆಕರ್ಷಿಸಿತು.

ಜಾತಿ ಆಧಾರಿತ ಹಿಂಸಾಚಾರ ಬದಲಾಯಿಸಿ

ಸ್ವತಂತ್ರ ಭಾರತವು ಬಹಳಷ್ಟು ದ್ವೇಷದ ಅಪರಾಧಗಳನ್ನು ಜಾತಿಯಿಂದಾಗಿ ಮಾಡಲಾಗಿರುವುದನ್ನು ಕಂಡಿದೆ. ಹಲವಾರು ಹಿಂಸಾಚಾರಗಳು ದಲಿತರ ವಿರುದ್ದ ನಡೆದಿದ್ದು ಉದಾಹರಣೆಗೆ ಖೆರಲಾಂಜಿ ನರಮೇಧ ಪ್ರಕರಣಗಳಂತವು ಭಾರತದ ಹಲವು ಭಾಗಗಳಿಂದ ವರದಿಯಾಗಿವೆ. ದಲಿತರಿಂದ ಕೂಡಾ ಹಲವಾರು ಹಿಂಸಾತ್ಮಕ ಪ್ರತಿಭಟನೆಗಳು 2006 ರ ಮಹಾರಾಷ್ಟ್ರದಲ್ಲಿನ ದಲಿತರ ಪ್ರತಿಭಟನೆಗಳು ವರದಿಯಾಗಿವೆ.ತನ್ನಷ್ಟಕ್ಕೆ ತಾನೇ ಅಗ್ರ ಜಾತಿ ಎಂದು ಭಾವಿಸುವ ಬಿಹಾರರಣ್ ವೀರ್ ಸೇನಾವು ತನ್ನ ಸೈನಿಕರೊಂದಿಗೆ ಸೇರಿ ದಲಿತರ ಮತ್ತು ಇನ್ನಿತರ ಪರಿಶಿಷ್ಟ ಜಾತಿಗಳ ವಿರುದ್ದ ಹಿಂಸಾತ್ಮಕ ದಾಳಿ ಮಾಡಿದ್ದನ್ನು ನೆನಪಿಸಬಹುದು.

ಫೂಲನ್ ದೇವಿ ಕೂಡಾ ಮಲ್ಹಾ ಎಂಬ ಕೀಳು ಜಾತಿಗೆ ಸೇರಿದ್ದವಳೆಂದು ಅವಳ ಮೇಲೆ ಮೇಲ್ಜಾತಿಯವರೆಂದು ಹೇಳಿಕೊಳ್ಳುವ ಠಾಕುರಗಳು ಆಕೆಯ ಯುವತಿಯಾಗಿದ್ದಾಗ ಅವಳ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆಯಿತು. ನಂತರ ಆಕೆ ದರೋಡೆಕೋರಳಾಗಿ ಮಾರ್ಪಟ್ಟು ಮೇಲ್ಜಾತಿಯವರ ಮೇಲೆ ತನ್ನ ಕೃತ್ಯವನ್ನು ಎಸಗಿದಳು. ಅದೇ 1981 ರ ಸುಮಾರಿಗೆ ಆಕೆಯ ತಂಡ ಇಪ್ಪತ್ತೆರಡು ಠಾಕುರ್ ಗಳನ್ನು ಹತ್ಯೆ ಮಾಡಿತು,ಆದರೆ ಇವರಾರೂ ಅವಳ ಅತ್ಯಾಚಾರ ಅಥವಾ ಅಪಹರಣದ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ನಂತರ ಆಕೆ ರಾಜಕಾರಣಿಯಾದಳಲ್ಲದೇ ಸಂಸತ್ ಸದಸ್ಯಳಾಗಿ ಆಯ್ಕೆಯಾಗಿದ್ದಳು.

ಜಾತಿ ರಾಜಕಾರಣ ಬದಲಾಯಿಸಿ

ಬಿ.ಆರ್ ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರೂ ಅವರ ನಡುವೆ ಜಾತಿ ಬಗೆಗಿನ ತತ್ವದ ಬಗ್ಗೆ ತಾತ್ವಿಕ ಅಂತರ ಮೂಡಿತ್ತು.ವಿಶೇಷವಾಗಿ ಸಾಂವಿಧಾನಿಕ ರಾಜಕೀಯ ಮತ್ತು ಅಸ್ಪೃಶ್ಯತೆ ಸ್ಥಾನ-ಮಾನದ ಬಗ್ಗೆ ಭಿನ್ನಾಭಿಪ್ರಾಯ [೬೬] ಬಂತು. ಸುಮಾರು 1980 ರ ವರೆಗೆ ಜಾತಿಯು ಭಾರತದ ರಾಜಕಾರಣದಲ್ಲಿ ಪ್ರಮುಖ [೬೬] ವಿಷಯವಾಯಿತು.

ಇದೇ ಕಾರಣಕ್ಕಾಗಿ 1979ರಲ್ಲಿ ಮಂಡಲ್ ಕಮೀಶನ್ (ಆಯೋಗ)ಸ್ಥಾಪನೆಯಾಗಿ "ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸ್ಥಾನ ಮೀಸಲಾತಿ ಮತ್ತು ಕೋಟಾಗಳ ನಿಗದಿ ಮಾಡಿ ಆ ಜನರ ಜಾತಿ ತಾರತಮ್ಯವನ್ನು ನಿವಾರಿಸುವಲ್ಲಿ [೬೭] ಸಫಲವಾಯಿತು. ಮುಂದೆ 1980 ರಲ್ಲಿ ಈ ಆಯೋಗದ ವರದಿಯು ಭಾರತೀಯ ಕಾನೂನಿನನ್ವಯ ಸಮರ್ಥನಾ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತು.ಇದರಿಂದ ಕೆಳದರ್ಜೆಯ ಜಾತಿಯ ಜನರಿಗೆ ಮೀಸಲಾದ ಸರ್ಕಾರಿ ಕೆಲಸಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಸ್ಥಳ ಕಾಯ್ದಿರಿಸುವ ಕ್ರಮವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲಾಯಿತು. ವಿ.ಪಿ ಸಿಂಗ್ ಅವರ ಆಡಳಿತಾವಧಿಯ 1989ರಲ್ಲಿ ಮಂಡಲ್ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಯತ್ನಿಸಿದಾಗ ದೇಶಾದ್ಯಂತ ವ್ಯಾಪಕ ವಿರೋಧ ಕಂಡುಬಂತು. ರಾಜಕಾರಣಿಗಳು ಜಾತಿ ಮೂಲದ ಮೇಲೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಹಲವರು ಟೀಕಿಸಿದರು,ಇದು ಚುನಾವಣಾ ಉದ್ದೇಶದಿಂದ ಕೈಗೊಂಡ ನಿರ್ಧಾರವೆಂದು ವಾದ ಮಂಡಿಸಲಾಯಿತು.

ಭಾರತದಲ್ಲಿನ ಹಲವಾರು ಪಕ್ಷಗಳು ಬಹಿರಂಗವಾಗಿಯೇ ಜಾತಿ ಆಧಾರದ ಮತ ಬ್ಯಾಂಕ್ ಗಳ ಮೇಲೆ ಅವಲಂಬಿತವಾದವು. ಉದಾಹರಣೆಗೆ ಬಹುಜನ ಸಮಾಜ ಪಕ್ಷ (ಬಿ.ಎಸ್ .ಪಿ),ಸಮಾಜವಾದಿ ಪಕ್ಷ ಮತ್ತು ಜನತಾ ದಳ ಪಕ್ಷಗಳು ತಾವು ಹಿಂದುಳಿದ ಜಾತಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡವಲ್ಲದೇ ಆಗಿದ್ದಾಗೆ ದಲಿತರು ಮತ್ತು ಮುಸ್ಲಿಮ್ ರ ಬೆಂಬಲದೊಂದಿಗೆ ಗೆದ್ದು ಬರುತ್ತಿರುವುದಾಗಿ ಹೇಳಲು [೬೮] ಆರಂಭಿಸಿದವು. ಭಾರತದ ಇತಿಹಾಸದಲ್ಲೇ ಕಂಡರಿಯದ ಬೆಳವಣಿಗೆಯೊಂದು ಚುನಾವಣಾ ಇತಿಹಾಸದಲ್ಲಿ ಸಂಭವಿಸಿತು,ಅದೆಂದರೆ ಭಾರತದ ಬಹುದೊಡ್ಡ ರಾಜ್ಯ [[ಉತ್ತರ ಪ್ರದೇಶ|[by whom?]ಉತ್ತರ ಪ್ರದೇಶ]]ದಲ್ಲಿ ಬಹುಜನ ಸಮಾಜ ಪಕ್ಷವು ಬ್ರಾಹ್ಮಣ ಸಮಾಜದ ಬೆಂಬಲದೊಂದಿಗೆ ರಾಜ್ಯ ಶಾಸಕಾಂಗದಲ್ಲಿ ಬಹುಮತ ಪಡೆಯಲು ಸಮರ್ಥವಾಯಿತು..

ಟೀಕೆಗಳು ಬದಲಾಯಿಸಿ

ಭಾರತದ ಒಳಗೆ ಮತ್ತು ಹೊರಗೆ ಕೂಡಾ ಈ ಜಾತಿ ಪದ್ದತಿಯು [೬೯] ಟೀಕೆಗೊಳಗಾಯಿತು. ಈ ಜಾತಿ ಪದ್ದತಿ ಬಗೆಗಿನ ಟೀಕೆಗಳು ಹಿಂದು ಸಮೂದಾಯ ಮತ್ತು ದಲಿತ ಸಮೂದಾಯದಿಂದಲೂ ಕೇಳಿ ಬಂತು.

ಚಾರಿತ್ರಿಕ ಟೀಕೆ ಬದಲಾಯಿಸಿ

ಹಲವಾರು ಭಕ್ತಿ ಪಂಥದ ಸಂತರು, ನಾನಕ್, ಕಬೀರ್, ಚೈತನ್ಯ, ಜ್ಞಾನೇಶ್ವರ್ , ಏಕನಾಥ್, ರಾಮಾನುಜ,ತುಕಾರಾಮ ಮತ್ತು ಮಹಾತ್ಮ ಬಸವೇಶ್ವರರು ಜಾತಿ ಆಧಾರಿತ ತಾರತಮ್ಯಗಳನ್ನು ಸಾರಾಸಗಟಾಗಿ ನಿರಾಕರಿಸಿದರಲ್ಲದೇ ಎಲ್ಲಾ ಜಾತಿ ವರ್ಗದ ಜನರ ಶಿಷ್ಯತ್ವವನ್ನು ಸಮ್ಮತಿಸಿದರು. ಹಲವಾರು ಹಿಂದು ಧರ್ಮ ಸುಧಾರಕರು ಉದಾಹರಣೆಗೆ ಸ್ವಾಮಿ ವಿವೇಕಾನಂದ ರಂತವರು ಹಿಂದು ಧರ್ಮದಲ್ಲಿ ಜಾತಿ ಪದ್ದತಿಗೆ ಯಾವುದೇ ಸ್ಥಾನವಿಲ್ಲ ಎಂದು ನಂಬಿದ್ದರು. ಆಗಿನ 15ನೆಯ ಶತಮಾನದ ಸಂತ ರಮಾನಂದ ಅವರು ಅಸ್ಪೃಶ್ಯರನ್ನೊಳಗೊಂಡಂತೆ ಎಲ್ಲಾ ಜಾತಿ ಜನರನ್ನು ತಮ್ಮ ಪಂಥದೊಳಕ್ಕೆ ತೆಗೆದುಕೊಂಡಿದ್ದರು. ಹಲವಾರು ಇಂಥ ಸಂತರು ಹಿಂದು ಧರ್ಮದಲ್ಲಿನ ಭಕ್ತಿ ಚಳವಳಿಗಳಿಗೆ ಬದ್ದರಾಗಿ ಆಗಿನ ಮಧ್ಯಯುಗೀನ ಜಾತಿ ನಿರಾಕರಣೆಗೆ ಒತ್ತು ನೀಡಿದ್ದರು. ನಂದನಾರ್ ಎಂಬ ಕೆಳಜಾತಿಯ ಸಂತನೊಬ್ಬ ಈ ಜಾತಿ ಪದ್ದತಿಯನ್ನು ನಿರಾಕರಿಸಿ ದಲಿತರನ್ನು ತನ್ನೆಡೆಗೆ ಸೆಳೆದುಕೊಂಡ ಉದಾಹರಣೆ [೭೦] ಇದೆ.

ಹಿಂದು ಧರ್ಮದಲ್ಲಿನ ಇನ್ನುಳಿದ ಚಳವಳಿಗಳು ಕೆಳಜಾತಿಯವರನ್ನು ತಮ್ಮೊಳಗೆ ಸೇರಿಸಿಕೊಂಡವು.ಆರಂಭಿಕ ಭಕ್ತಿ ಚಳವಳಿಗಳು ಮಧ್ಯಯುಗೀನ ಕಾಲಕ್ಕೆ ಇದಕ್ಕೆ ಪೂರಕವಾದವು. ಆರಂಭಿಕ ದಲಿತ ರಾಜಕಾರಣವು ಹಲವಾರು ಸುಧಾರಣಾ ಚಳವಳಿಗಳನ್ನೊಳಗೊಂಡಿತ್ತು.ಭಾರತದಲ್ಲಿ ಆಗ ಕ್ರಿಶ್ಚಿಯನ್ ಮಿಶನರಿಗಳು ತಮ್ಮ ಗಟ್ಟಿ ಪಾದ ಊರಲು ಆರಂಭಿಸಿದ ಕಾಲ ಅದಾಗಿತ್ತು,ಅವರು ದಲಿತರನ್ನು ಮತಾಂತರಗೊಳಿಸುವ ಹುನ್ನಾರದಲ್ಲಿದ್ದರು,ಇದೇ ಸಂದರ್ಭದಲ್ಲಿ ದಲಿತರು ಈ ಜಾತಿ ಪದ್ದತಿ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಅದರೆಡೆಗೆ ಆಕರ್ಷಿತರಾದರು.

ಆಗಿನ 19ನೆಯ ಶತಮಾನದ ಬ್ರಹ್ಮೊ ಸಮಾಜವು ರಾಜಾರಾಮ್ ಮೋಹನ್ ರಾಯ್ ಅವರ ನೇತೃತ್ವದಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯತೆಯ ವಿರುದ್ದ ಪ್ರಚಾರಾಂದೋಲನ ಕೈಗೊಂಡಿತು. ಸ್ವಾಮಿ ದಯಾನಂದರಿಂದ ಸ್ಥಾಪಿತ ಆರ್ಯ ಸಮಾಜ ಕೂಡಾ ದಲಿತರೊಂದಿಗಿನ ತಾರತಮ್ಯವನ್ನು ತೀವ್ರವಾಗಿ ವಿರೋಧಿಸಿತು. ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಅವರ ಶಿಷ್ಯ ಅನುಯಾಯಿ ಸ್ವಾಮಿ ವಿವೇಕಾನಂದ ಅವರು ದಲಿತರ ವಿಮೋಚನೆಗಾಗಿ ರಾಮಕೃಷ್ಣ ಮಿಶನ್ ಸ್ಥಾಪಿಸಿ ಈ ಸಮಾನತೆಯ ಕಾರ್ಯದಲ್ಲಿ ತಾವೂ ಪಾಲ್ಗೊಂಡರು. ಹಿಂದುಗಳಲ್ಲಿನ ಮೇಲ್ಜಾತಿಯವರೆನಿಸಿದ್ದ ಮನ್ನಥು ಪದ್ಮನಾಭನ್ ಅವರೂ ಕೂಡಾ ಈ ಚಳವಳಿಯಲ್ಲಿ ಭಾಗವಹಿಸಿ ದಲಿತರ,ಅಸ್ಪೃಶ್ಯತೆಯನ್ನು ಪ್ರತಿಭಟಿಸಿ ತಮ್ಮದೇ ಕುಟುಂಬದ ದೇವಸ್ಥಾನಗಳಲ್ಲಿ ದಲಿತರಿಗೆ ಅರ್ಚನೆಗೆ ಅವಕಾಶ ಮಾಡಿಕೊಟ್ಟರು. ಹಿಂದು ಧರ್ಮದ ಶೃದ್ಧಾಳು ನಾರಾಯಣ ಗುರು ಅವರು ವೇದಗಳಲ್ಲಿ ಪಾರಂಗತೆ ಪಡೆದಿದ್ದರಲ್ಲದೇ ಜಾತಿ ಪದ್ದತಿಯನ್ನು ತೀವ್ರವಾಗಿ ಟೀಕಿಸಿ ಹಿಂದುಗಳಲ್ಲಿನ ಕೆಳ ಜಾತಿಯವರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು.

ಮೇಲ್ವರ್ಗದವರ ದೇವಾಲಯ ಲಕ್ಷ್ಮಿನಾರಾಯಣ ದೇವಸ್ಥಾನವು ಮೊದಲ ಬಾರಿಗೆ ವಾರ್ಧಾದಲ್ಲಿ ದಲಿತರನ್ನು ಮುಕ್ತವಾಗಿ ಸ್ವಾಗತಿಸಿತು.ಈ ಕಾರ್ಯವು 1928ರಲ್ಲಿ ಸಮಾಜ ಸುಧಾರಕ ಜಮನಾಲಾಲ್ ಬಜಾಜ್ ಅವರ ನೇತೃತ್ವದಲ್ಲಿ[ಸೂಕ್ತ ಉಲ್ಲೇಖನ ಬೇಕು]ನಡೆಯಿತು.ಭಾರತದ ಹಲವಾರು ಸಮಾಜ ಸುಧಾರಕರಿಂದ ಈ ಜಾತಿ ಪದ್ದತಿ ಟೀಕೆಗೊಳಗಾಯಿತು. ಕೆಲವು ಸಮಾಜ ಸುಧಾರಕರು ಉದಾಹರಣೆಗೆಜ್ಯೋತಿರಾವ್ ಫುಲೆ ಮತ್ತು ಐಥೀ ಠಾಸ್ ಅವರ ಪ್ರಕಾರ ಕೆಳಜಾತಿಯ ಜನರೇ ಭಾರತದ ಮೂಲ ನಿವಾಸಿಗಳು. ಪ್ರಾಚೀನ ಕಾಲದಲ್ಲಿ "ಬ್ರಾಹ್ಮಣ ದಾಳಿಕೋರರಿಂದ "ಇದು ಗೆಲ್ಲಲ್ಪಟ್ಟಿತು ಎಂದು ಅವರು ವಾದ ಮಂಡಿಸಿದ್ದಾರೆ. ಮಹಾತ್ಮಾ ಗಾಂಧಿಯವರು ಅಸ್ಪೃಶ್ಯರಿಗಾಗಿ ಹರಿಜನ ಎಂಬ ಸೌಮ್ಯೋಕ್ತಿಯನ್ನು ಬಳಸಿದರು,ಇದರರ್ಥ ದೇವರ ಮಕ್ಕಳು . ಹಿಂದು ದಲಿತ ಸಮಾಜದಲ್ಲಿ ಜನಿಸಿದ ಬಿ.ಆರ್ ಅಂಬೇಡ್ಕರ್ ಅವರು ಜಾತಿ ಪದ್ದತಿಯನ್ನು ಅತ್ಯಂತ ಕಟುವಾಗಿ ಟೀಕಿಸಿದರು. ಅವರು ಭಾರತದಲ್ಲಿ ದಲಿತ ಬೌದ್ದ ಚಳವಳಿಯನ್ನು ಹುಟ್ಟುಹಾಕಿ ತಮ್ಮ ಅನುಯಾಯಿಗಳು ಹಿಂದುತ್ವ ಬಿಟ್ಟು ಬೌದ್ದ ಮತಕ್ಕೆ ಮತಾಂತರಗೊಳ್ಳುವಂತೆ ಕರೆ ನೀಡಿದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ದಲಿತ ಸಮಾಜ ಸುಧಾರಕ ಅಂಬೇಡ್ಕರ್ ಅವರೊಂದಿಗೆ ಕೈಜೋಡಿಸಿ ಅಸ್ಪೃಶ್ಯತೆ ನಿವಾರಣೆಗೆ ಬೆಂಬಲಿಸಿ ದಲಿತ ಸಮಾಜದ ಅನುಕೂಲಕ್ಕೆ ನೆರವಾದರು. ಆಗಿನ ಮಹಾರಾಜಾ 1936 ರಲ್ಲಿ ಒಂದು ಸೂಚನೆ ಹೊರಡಿಸಿ "ಜಾತಿಯ ಹೊರಗಿರುವವರನ್ನು ಹಿಂದು ನಂಬಿಗೆಗಳಿಂದ ದೂರವಿಡಬೇಡಿ" ಎಂದು ಹೇಳಿದರು ಇಂದೂ ಕೂಡಾ ಕೇರಳದಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ಮೊದಲ ಬಾರಿಗೆ ದಲಿತರ ಪ್ರವೇಶಕ್ಕೆ ಅವಕಾಶ ನೀಡಿದ್ದು ಪ್ರಸ್ತುದಲ್ಲಿಯೂ ಹಿಂದು ದಲಿತರ ಸಮಾಜದ ಸುಪರ್ದಿಯಲ್ಲಿದೆ.

ಸಮಕಾಲೀನ ಟೀಕೆಗಳು ಬದಲಾಯಿಸಿ

ಕಾಂಚಾ ಇಲ್ಹೈ ಎಂಬ ಕ್ರಿಶ್ಚಿಯನ್ ಒಸ್ಮಾನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್.ಇವರು ಈ ಮೊದಲು ಆಂಧ್ರದಲ್ಲಿನ ಕುರುಬ ಜನಾಂಗಕ್ಕೆ ಸೇರಿದವರು;ಹಿದುತ್ವದ ಕಟು ವಿಮರ್ಶಕರಲ್ಲದೇ ಈ ಜಾತಿ ಪದ್ದತಿಗೆ ತೀವ್ರ ವಿರೋಧಿಗಳಾಗಿದ್ದವರು.ತಮ್ಮ ಹಿಂದು ವಿರೋಧಿ ಟೀಕೆಗಳಿಂದ ಅವರು[ಸೂಕ್ತ ಉಲ್ಲೇಖನ ಬೇಕು]ಪ್ರಖ್ಯಾತರಾಗಿದ್ದಾರೆ. ಅದೇ ತೆರನಾಗಿ ದಲಿತರ ಹಕ್ಕುಗಳ ಕಾರ್ಯಕರ್ತರು ಉದಾಹರಣೆಗೆ [[ಉದಿತ್ ರಾಜ್|[ಸೂಕ್ತ ಉಲ್ಲೇಖನ ಬೇಕು]ಉದಿತ್ ರಾಜ್]] ಅವರಂತವರು ಇನ್ನೂ ಜಾತಿಯತೆಯನ್ನು ಆಚರಿಸುವ ಹಿಂದುಗಳನ್ನು ಕಟುವಾಗಿ ಟೀಕಿಸುತ್ತಾರೆ.ಅದರಲ್ಲೂ ಮತಾಂತರಗೊಂಡ[ಸೂಕ್ತ ಉಲ್ಲೇಖನ ಬೇಕು]ಕ್ರಿಶ್ಚಿಯನ್ ಗುಂಪುಗಳ ಬಗ್ಗೆ ಜಾತಿಯತೆ ತೋರುವುದನ್ನುದಲಿತ ಸ್ವತಂತ್ರ ಜಾಲದ ಮೂಲಕ ತಮ್ಮ ಕಡುವಿರೋಧವನ್ನು ವ್ಯಕ್ತಪಡಿಸುತ್ತಾರೆ.

ಹಲವಾರು ಹಿಂದುಗಳ ಪ್ರಕಾರ ಈ ಜಾತಿ ಪದ್ದತಿಯು ಭಾರತೀಯ ಸಮಾಜಕ್ಕೆ ಸಂಬಂಧಿಸಿದೆ,ಆದರೆ ಹಿಂದುತ್ವದಲ್ಲಿಲ್ಲ;ಯಾಕೆಂದರೆ ಭಾರತದಲ್ಲಿರುವ ಕ್ರಿಶ್ಚಿಯನ್ ರು ಮತ್ತು ಮುಸ್ಲಿಮ್ ರಲ್ಲಿ ಕೂಡಾ ಜಾತಿ ಪದ್ದತಿ ಆಳವಾಗಿ[ಸೂಕ್ತ ಉಲ್ಲೇಖನ ಬೇಕು]ಬೇರೂರಿದೆ. ಬ್ರಾಹ್ಮಣರ ಸಂಘಟನೆಗಳೆಂದು ಹೇಳಲಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡಾ ಈ ಜಾತಿ ಪದ್ದತಿಯನ್ನು [೭೧] ಟೀಕಿಸುತ್ತದೆ.

ಕೆಲವು ಪ್ರತಿಪಾದಕರು ಜಾತಿ ಪದ್ದತಿಯನ್ನು ಒಂದು ವರ್ಣಭೇದ ನೀತಿ [೭೨] ಎನ್ನುತ್ತಾರೆ ಮಾರ್ಚ್ 2001ರಲ್ಲಿ ದಕ್ಷಿಣ ಆಫ್ರಿಕೆಡರ್ಬನ್ ನಲ್ಲಿ ನಡೆದ ಯುನೈಟೆಡ್ ನೇಶನ್ಸ್ ಸಮಾವೇಶದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತೀವ್ರವಾಗಿ ವಿರೋಧಿಸಲಾಯಿತು.ಈ ಜಾತಿ ಪದ್ದತಿಯು ವಿಭಜನೆಯನ್ನುಂಟು ಮಾಡುವುದಲ್ಲದೇ ಇದು ಪ್ರತ್ಯೇಕತಾ ನೀತಿಯನ್ನು ಪ್ರತಿಪಾದಿಸುತ್ತದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಆದರೆ ಯಾವುದೇ ರೀತಿಯ ಔಚಿತ್ಯಪೂರ್ಣ ತೀರ್ಮಾನ [೭೩] ಕೈಗೊಳ್ಳಲಾಗಲಿಲ್ಲ.

ಭಾರತದಲ್ಲಿನ ದಲಿತರನ್ನು ಕೀಳಾಗಿ ಕಾಣುವುದನ್ನು ಕೆಲವು ಲೇಖಕರು "ಭಾರತದ ತೆರೆ ಹಿಂದಿನ ಪ್ರತ್ಯೇಕತಾ ನೀತಿ"ಎಂದು [೭೪][೭೫] ಬಣ್ಣಿಸಿದ್ದಾರೆ. ಟೀಕಾಕಾರರ ಅಭಿಪ್ರಾಯಗಳನ್ನು ಹಿಂದಕ್ಕೆ ಹಾಕಿದ ಕೆಲವರು ಭಾರತದ ಸ್ವಾತಂತ್ರ್ಯಾ ನಂತರ ದೇಶದಲ್ಲಿನ ದಲಿತರ ಸ್ಥಿತಿ ಸಾಕಷ್ಟು ಸುಧಾರಿಸಿದ್ದು,ಭಾರತ ಸಂವಿಧಾನದಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.ನಾಗರಿಕ ಹಕ್ಕುಗಳ ಕಾಯ್ದೆಯ 1955ರ ಸಂಪೂರ್ಣ ಜಾರಿಯಾಗಿದೆ ಎಂದು ಹಲವರು [೭೬] ಅಭಿಪ್ರಾಯಪಡುತ್ತಾರೆ. ಅವರು ಟಿಪ್ಪಣಿ ಮಾಡುವಂತೆ ಭಾರತವು ದಲಿತ ಸಮೂದಾಯದ ರಾಷ್ಟ್ರಪತಿ ಕೆ.ಆರ್ .ನಾರಾಯಣನ್ ಅವರನ್ನು ನೀಡಿದೆ.ಅದಲ್ಲದೇ ನಗರ ಮಟ್ಟದಲ್ಲಿ ಈ ಪದ್ದತಿಯು ಸಂಪೂರ್ಣ [೭೭] ನಿರ್ನಾಮಗೊಂಡಿದೆ.

ವಿಲಿಯಮ್ ಎ. ಹವಿಲ್ಯಾಂಡ್ ರ ಪ್ರಕಾರ, ಹೇಗೆಯಾದರೂ:

ಭಾರತದ ಸಂವಿಧಾನ 1950 ರಲ್ಲಿ ಜಾರಿಯಾಗಿದ್ದರೂ ಅದು ಜಾತಿ ಪದ್ದತಿಯನ್ನು ರದ್ದುಪಡಿಸುವಂತೆ ಸೂಚಿಸಿದರೂ ಇನ್ನೂ ಅಸ್ಪೃಶ್ಯತೆ ದಕ್ಷಿಣ ಏಷ್ಯಾದಲ್ಲಿ ಆಚರಣೆಯಲ್ಲಿದೆ.ಹಿಂದು ಸಂಸ್ಕೃತಿಯಲ್ಲಿ ಜಾತಿ ಪದ್ದತಿ ಅದರಲ್ಲೂ ಗ್ರಾಮೀಣ ಭಾರತದಲ್ಲಿ ಆಳವಾಗಿ ಬೇರೂರಿದೆ, ಅದನ್ನು "ಗೌಪ್ಯ ಪ್ರತ್ಯೇಕತಾ ನೀತಿ"ಎಂದು ಕರೆಯುವಂತೆ ಭಾರತೀಯ ರಾಜ್ಯಗಳಲ್ಲಿನ ಕೆಲವು ಹಳ್ಳಿಗಳು ಇಂದೂ ಕೂಡಾ ಸಂಪೂರ್ಣವಾಗಿ ಜಾತಿ ಆಧಾರದ ಮೇಲೆ ವಿಭಜಿಸಲ್ಪಟಿವೆ. ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟು ಅಥವಾ 160 ದಶಲಕ್ಷ ಜನರು ದಲಿತ ಸಮೂದಾಯದವರಾಗಿದ್ದು,ಇಂದಿಗೂ ಸಾಮಾಜಿಕ ಬಹಿಷ್ಕೃತೆ,ತೇಜೋವಧೆ ಮತ್ತು ತಾರತಮ್ಯಗಳನ್ನು ತಮ್ಮ ಹುಟ್ಟಿನ ಸ್ಥಾನ-ಮಾನದ ಮೇಲೆಯೇ ಪಡೆಯುತ್ತಾರೆ. ಓರ್ವ ದಲಿತನ ನೆರಳು ಕೂಡಾ ಮೇಲ್ಜಾತಿಯವನನ್ನು ಮೈಲಿಗೆಯಾಗಿಸುತ್ತದೆ ಎಂಬ ನಂಬಿಗೆ ಇದೆ. ಮೇಲ್ಜಾತಿಯವರು ಹಾಕಿದ ಗೆರೆ ದಾಟಬಾರದು ಎಂಬ ನಿರ್ಭಂದವಿದೆ.ಸಾರ್ವಜನಿಕ ಬಾವಿಗಳಿಂದ ನೀರು ಕುಡಿಯಲಾಗದು,ಅಥವಾ ಮೇಲ್ವರ್ಗದವರು ಹೋಗುವ ದೇವಸ್ಥಾನಗಳಿಗೆ ಅವರು ಭೇಟಿ ನೀಡಬಾರದು. ಶಾಲೆಗಳಲ್ಲಿ ದಲಿತರ ಮಕ್ಕಳು ಹಿಂದೆ ಕುಳಿತುಕೊಳ್ಳುವಂತೆ [೭೮] ಹೇಳಲಾಗುತ್ತದೆ.

ಆದರೆ ಸಮಾಜಶಾಸ್ತ್ರಜ್ಞರಾದ ಕೆವಿನ್ ರೆಲ್ಲಿ,ಸ್ಟಿಫೆನ್ ಕೌಫ್ ಮ್ಯಾನ್ ಮತ್ತು ಎಂಜಿಲಾ ಬೊಡಿನೊ ಅವರ ಪ್ರಕಾರ ಜಾತಿ ಪದ್ದತಿ ಬಗ್ಗೆ ಅವರು ಟೀಕೆ ಮಾಡುವರಲ್ಲದೇ,ಆಧುನಿಕ ಭಾರತದಲ್ಲಿ ಯಾವುದೇ ವರ್ಣಭೇದ ನೀತಿ ಅಥವಾ ಪ್ರತ್ಯೇಕತಾ ಧೋರಣೆ ಮಾಯವಾಗಿದೆ [೭೯] ಎಂದಿದ್ದಾರೆ. ಸದ್ಯ ಭಾರತದಲ್ಲಿನ ಜಾತಿಯತೆಗೆ "ಪ್ರತ್ಯೇಕತಾ ನೀತಿ"ಯಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅಸ್ಪೃಶ್ಯರು,ಬುಡಕಟ್ಟು ಜನಾಂಗದವರು ಮತ್ತು ಕೆಳಜಾತಿಯವರು ವ್ಯಾಪಕ ವಿಶಾಲ ತಳಹದಿಯ ಸರ್ಕಾರಿ ಯೋಜನೆಗಳಡಿ ಸಾಕಷ್ಟು ಸವಲತ್ತುಗಳನ್ನು ಪಡೆಯುತ್ತಿದ್ದಾರಲ್ಲದೇ ಅತ್ಯುನ್ನತ ರಾಜಕೀಯ ಅಧಿಕಾರವನ್ನೂ ಪಡೆದಿದ್ದಾರೆ.ಭಾರತದ ಸಂವಿಧಾನವು ಜಾತಿ ತಾರತಮ್ಯಕ್ಕೆ ಕಡಿವಾಣ ಹಾಕಿದೆ.ಈಗ ಅಸ್ಪೃಶ್ಯತೆಯ ಅಚರಣೆ [೮೦] ಅದೃಶ್ಯವಾಗಿದೆ. ಅಷ್ಟೇ ಅಲ್ಲದೇ ಭಾರತದ ಪೀನಲ್ ಕೋಡ್ ಕೂಡಾ ಜಾತಿ ಆಧಾರದ ಮೇಲೆ ಮಾಡುವ ತಾರತಮ್ಯವನ್ನು ಕಠಿಣ ಶಿಕ್ಷೆಗೆ ಒಳಪಡಿಸುತ್ತದೆ. ದಲಿತ-ವಿರೋಧಿ ಮತ್ತು ಭೇದಭಾವವು ಪ್ರಾಥಮಿಕವಾಗಿ ಗ್ರಾಮೀಣ ಭಾಗದಲ್ಲಿತ್ತು.ಚಿಕ್ಕ ಸಮಾಜದಲ್ಲಿ ಈ ಭೇದಭಾವವನ್ನು ಪತ್ತೆ ಹಚ್ಚಬಹುದಾಗಿತ್ತು.ಇದು ವೈಯಕ್ತಿಕ ಆಸಕ್ತಿಗೆ[ಸೂಕ್ತ ಉಲ್ಲೇಖನ ಬೇಕು]ಒಳಪಡುತ್ತಿತ್ತು.

ಜಾತಿ ಮತ್ತು ಜನಾಂಗ ಬದಲಾಯಿಸಿ

ಜಾತಿ ಭೇದಭಾವವು ಜನಾಂಗೀಯ ಭೇದವನ್ನು ಹುಟ್ಟುಹಾಕುತ್ತದೆ ಎಂಬುದನ್ನು ದಲಿತರ ಹಕ್ಕಿಗಾಗಿ ಹೋರಾಡಿದ ಬಿ.ಆರ್ ಅಂಬೇಡ್ಕರ್ ಈ ಅಸ್ಪೃಶ್ಯತೆಯ ವಿರುದ್ದ ಸಮರ ಸಾರಿದರು. ಅವರು ಬರೆಯುವ ಪ್ರಕಾರ ಪಂಜಾಬದ ಬ್ರಾಹ್ಮಣನು ವಂಶೀಯವಾಗಿ ಅದೇ ಜನಾಂಗದ ಪಂಜಾಬ್ ನ ಚಮ್ಮಾರನಾಗಿಯೂ ಪರಿಗಣಿತನಾಗುತ್ತಾನೆ. ಈ ಜಾತಿ ಪದ್ದತಿಯು ಜನಾಂಗೀಯ ಗಡಿಯನ್ನು ಗುರುತಿಸಿ ವಿಭಜಿಸದು. ಈ ಜಾತಿ ಪದ್ದತಿಯು ಒಂದೇ ಜನಾಂಗದ ಸಾಮಾಜಿಕ [೮೧] ವಿಭಜನೆಯಾಗಿದೆ.

ಈ ತೆರನಾದ ಖಂಡನೆಯನ್ನು ಆಂಡ್ರೆ ಬೆಟಿಲ್ಲೆಯಂತಹ ಸಮಾಜಶಾಸ್ತ್ರಜ್ಞರು ನಿರಾಕರಿಸುತ್ತಾರೆ.ಅವರ ಪ್ರಕಾರ ಜಾತಿಯನ್ನು ಒಂದು ಜನಾಂಗೀಯತೆಗೆ ಹೋಲಿಸುವುದು "ರಾಜಕೀಯವಾಗಿ ಕುಚೋದ್ಯದ"ವಿಷಯವಾಗಿದೆ.ಅಲ್ಲದೇ ಅತ್ಯಂತ ಕಳಪೆ ಮಟ್ಟದ್ದಾಗಿದೆ;ಯಾಕೆಂದರೆ ಬ್ರಾಹ್ಮಣರು ಮತ್ತು ಪರಿಶಿಷ್ಟ ಜಾತಿಗಳ ಮಧ್ಯೆ ಯಾವುದೇ ಅಂತರ ಕಾಣದು. ಅವರ ಪ್ರಕಾರ"ಪ್ರತಿ ಸಾಮಾಜಿಕ ಗುಂಪೊಂದು ಕೇವಲ ಪೂರ್ವಾಗ್ರಹ ಪೀಡಿತ ಮತ್ತು ತಾರತಮ್ಯ"ವೆಸಗುವದರ ವಿರುದ್ಧ ಇದನ್ನು ಜನಾಂಗೀಯ ವಾದ ಎಂದು ವ್ಯಾಖ್ತ್ಯಾನಿಸುವುದು [೮೨] ಸಮಂಜಸವಲ್ಲ.

ಭಾರತ ಸರ್ಕಾರ ಕೂಡ ಇಂತಹ ವಾದಗಳನ್ನು ನಿರಾಕರಿಸುತ್ತದೆ,ಜಾತಿಯತೆ ಮತ್ತು ಜನಾಂಗೀಯ ಭೇದವನ್ನು ಅದು ಸಮೀಕರಿಸುವುದಿಲ್ಲ.ಯಾಕೆಂದರೆ ಜಾತಿ ವಿಷಯಗಳು ಯಾವಾಗಲೂ ಜನಾಂಗದೊಳಗಿನ ಹಾಗು ಸಂಸ್ಕೃತಿಯೊಳಗಿನವಾಗಿವೆ. ಭಾರತದ ಆಟಾರ್ನಿ ಜನರಲ್ ಸೊಲಿ ಸೊರ್ಬ್ಜಿ ಅವರ ಪ್ರಕಾರ ಈ ಜಾತಿ ಪದ್ದತಿಯನ್ನು ಅದರ ಭೇದಭಾವಕ್ಕೆ ಸೀಮಿತಗೊಳಿಸಲಾಗಿದೆಯೇ ವಿನಹ ಅದನ್ನು ಜನಾಂಗದ ಪ್ರಮುಖ ವಿಷಯವನ್ನಾಗಿಸಿಲ್ಲ. ಭಾರತದಲ್ಲಿನ ಜಾತಿ ತಾರತಮ್ಯವನ್ನು ತಿರಸ್ಕರಿಸಲಾಗದು ಆದರೆ ಜಾತಿ ಮತ್ತು ಜನಾಂಗೀಯತೆಯು [೭೨] ವಿಭಿನ್ನವಾಗಿದೆ.

ಹಲವಾರು ವಿದ್ವಾಂಸರು ಈ ಜಾತಿಯತೆಯು ಜನಾಂಗೀಯ ಭೇದಕ್ಕೆ ಚರ್ಮದ ಹೊದಿಕೆ ಎಂಬ ವಾದವನ್ನೂ ಮಂಡಿಸುತ್ತಾರೆ. ಸಮಾಜಶಾಸ್ತ್ರಜ್ಞ ಎಂ.ಎನ್ ಶ್ರೀನಿವಾಸ್ ಜಾತಿ ವ್ಯವಸ್ಥೆಯಲ್ಲಿನ ಕಾಠಿಣ್ಯತೆ ಬಗ್ಗೆ [೩೦][೩೧] ಚರ್ಚಿಸಿದ್ದಾರೆ. ಇನ್ನುಳಿದವರು ಭಾರತದಲ್ಲಿನ ಜಾತಿ ಪದ್ದತಿಯಲ್ಲಿನ ಸರಳತೆ ಮತ್ತು ಉದಾರತೆಯನ್ನೂ ಕೆಲ ಮಾದರಿಗಳಿಗೆ [೨೮] ಹೋಲಿಸಿದ್ದಾರೆ. ಈ ವಿದ್ವಾಂಸರ ಪ್ರಕಾರ ಕೆಳಜಾತಿಯವರು ಮೇಲ್ಜಾತಿಯವರ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿ ತಮ್ಮ ಜನರನ್ನು ಮೇಲೆತ್ತಬೇಕೆಂಬ ವಾದ ಮಂಡಿಸುತ್ತಾರೆ.

ಪಾಕಿಸ್ತಾನಿ-ಅಮೆರಿಕನ್ ಮೂಲದ ಲೇಖಕಿ ಆಯೇಶಾ ಜಲಾಲ್ ಅವರ ಕೃತಿ ಡೆಮಾಕ್ರಸಿ ಅಂಡ್ ಅಥಾರಿಟರಿಯನಿಸಮ್ ನಲ್ಲಿ ದಕ್ಷಿಣ ಏಷ್ಯಾದಲ್ಲಿನ ಪದ್ದತಿಗಳನ್ನು ವಿವರಿಸಿದ್ದಾರೆ.ವಿಶೇಷವಾಗಿ "ಹಿಂದು ಧರ್ಮವನ್ನು ಪರಿಗಣಿಸಿದರೆ ಬ್ರಾಹ್ಮಣ ತತ್ವಗಳ ಬಗ್ಗೆ ಯಾವಾಗಲೂ ಹಿಂದು ಧರ್ಮದ ಒಳಪಂಗಡಳಲ್ಲೇ ವ್ಯತ್ಯಾಸಗಳಿವೆ.ಆದರೆ ಸಾಮಾಜಿಕವಾಗಿ ಆಯಾ ಮೌಲ್ಯಗಳು ಆಯಾ ಕಾಲಕ್ಕೆ ಬದಲಾವಣೆ [೮೩] ಕಂಡಿವೆ".

ಕೆಲವು ನೀರೀಕ್ಷಕರ ಪ್ರಕಾರ ಭಾರತದಲ್ಲಿನ ಜಾತಿ ಪದ್ದತಿಯು ಮೇಲ್ವರ್ಗದವರು ಕೆಳಗಿನ ಜಾತಿಯವರನ್ನು ಶೋಷಣೆ ಮಾಡುತ್ತಾರೆ,ಇಲ್ಲಿ ಗುಂಪುಗಳ ವ್ಯತ್ಯಾಸ ಮಾತ್ರ ನಿಚ್ಚಳವಾಗಿದೆ,ಎಂಬ [೮೪] ಅಭಿಪ್ರಾಯವಿದೆ. ಭಾರತದ ಹಲವು ಭಾಗಗಳಲ್ಲಿ ಮೇಲ್ವರ್ಗದವರಿಂದಲೇ ದೊಡ್ಡ ಪ್ರಮಾಣದಲ್ಲಿ ಭೂ ಒಡೆತನವಿದೆ,ಇನ್ನುಳಿದ ಕೆಳ ಜಾತಿಯ ಭೂರಹಿತರನ್ನು ಇವರು ಶೋಷಿಸುತ್ತಾರೆ.ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ಜನರು ಮತ್ತು ಕುಶಲಕರ್ಮಿಗಳು ಈ ಪದ್ದತಿಗೆ[ಸೂಕ್ತ ಉಲ್ಲೇಖನ ಬೇಕು]ಈಡಾಗುತ್ತಾರೆ.

ಮ್ಯಾಟ್ ಚೆರ್ರಿಯ ಪ್ರಕಾರ ಕರ್ಮ ಎಂಬುದು ಜಾತಿ ಪದ್ದತಿಯನ್ನು ನಿರ್ಮಿಸಿ ಸಾಂಪ್ರದಾಯಿಕವಾಗಿ ಹಿಂದು ಸಮಾಜದಲ್ಲಿ ಆ ವ್ಯಕ್ತಿಯ ಸ್ಥಾನ ಮತ್ತು ಪಾತ್ರವನ್ನು ನಿರ್ಧರಿಸುತ್ತದೆ. ಜಾತಿಯೇ ಸಮಾಜದಲ್ಲಿ ಆತನ ವ್ಯಕ್ತಿತ್ವ,ಆತ ಅಥವಾ ಆಕೆ ಮಾಡುವ ಕೆಲಸ ಮತ್ತು ಆಕೆ ಅಥವಾ ಆತ ಯಾರನ್ನು ಮದುವೆಯಾಗಬೇಕೆಂಬುದನ್ನು ತೀರ್ಮಾನಿಸಲಾಗುತ್ತದೆ. ಆತನ ಪ್ರಕಾರ ಹಿಂದಿನ ಜನ್ಮದ ಕರ್ಮದಿಂದ ಆತ ಯಾವ ಜಾತಿಯಲ್ಲಿ (ಮರು)ಹುಟ್ಟು ಪಡೆಯಬೇಕೆಂಬುದು [೮೫] ನಿರ್ಧಾರವಾಗಿರುತ್ತದೆ.ಮಾರ್ಚ್ 29,2007ರಲ್ಲಿ ಭಾರತದ ಸರ್ವೋಚ್ಕ ನ್ಯಾಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಇತರ ಹಿಂದುಳಿದ ಜಾತಿಗಳಿಗೆ 27% ಮೀಸಲಾತಿ ನೀಡುವ ಬಗ್ಗೆ ತನ್ನ ಮಧ್ಯಂತರ ತೀರ್ಪಿನಲ್ಲಿ ತಡೆಯಾಜ್ಞೆ ನೀಡಿತ್ತು. ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲಿಸಿದ್ದ ಅಶೋಕ ಕುಮಾರ ಠಾಕುರ್ ಮತ್ತು ಯುನಿಯನ್ ಆಫ್ ಇಂಡಿಯಾದ ನಡುವಿನ ವ್ಯಾಜ್ಯದ ಸಂಬಂಧದಲ್ಲಿ ನೀಡಲಾಗಿತ್ತು. ನ್ಯಾಯಾಲಯದ ಪ್ರಕಾರ 1931 ರ ಜನಗಣತಿಯನ್ನು ಪರಿಗಣಿಸಿ ಈ ಮೀಸಲಾತಿ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು.OBCs ಗಳನ್ನು ಈ ಉದ್ದೇಶಕ್ಕೆ ಪರಿಗಣಿತ ಮಾಡಲಾಗದೆಂದು ಅದು ಹೇಳಿತ್ತು. ನ್ಯಾಯಾಲಯದ ಪ್ರಕಾರ "ಮೀಸಲಾತಿ ಶಾಶ್ವತವಾಗಲು ಸಾಧ್ಯವಿಲ್ಲ ಮತ್ತು ಇದು ಹಿಂದುಳಿಯುವಿಕೆಯನ್ನು ಮುಂದುವರೆಸುವ ಕ್ರಮವಾಗಬಾರದು ಎಂಬುದನ್ನು ಅದು [೮೬] ಹೇಳಿತು. ಹೇಗೆಯಾಗಲಿ ತರುವಾಯ ಸರ್ವೋಚ್ಚ ನ್ಯಾಯಾಲಯವು ಈ ಮೀಸಲಾತಿಯನ್ನು ಎತ್ತಿ [೮೭] ಹಿಡಿಯಿತು..

ವಂಶಾವಳಿಯ ವಿಶ್ಲೇಷಣೆ ಬದಲಾಯಿಸಿ

ಹಲವಾರು ಅಧ್ಯಯನಗಳ ಪ್ರಕಾರ ಜಾತಿಯ ಸದಸ್ಯರನ್ನು ಆ ಜನಸಂಖ್ಯೆಯನ್ನು ಪರಿಗಣಿಸಿದರೆ,ಪರಿಶೀಲಿಸಿದರೆ ಅವರ ಪ್ರಾಚೀನತೆಗೆ ವಿವಿಧ ಅಂತರ ವ್ಯತ್ಯಾಸಗಳು ಕಾಣಸಿಗುತ್ತವೆ. ಟಿ.ಕಿವಿಸಿಲ್ಡ್ ಅವರ 2002-03 ರ ಸಮಗ್ರ ಅಧ್ಯಯನದ ಪ್ರಕಾರ "ಭಾರತದ ಬುಡಕಟ್ಟಿನವರು ಮತ್ತು ಜಾತಿ ಜನಾಂಗಗಳು ಒಂದೇಭೂ ಪ್ರದೇಶಕ್ಕೆ ಸೇರಿದವುಗಳಾಗಿವೆ.ದಕ್ಷಿಣ ಮತ್ತು ಪಶ್ಚಿಮ ಏಷ್ಯನ್ ರಲ್ಲಿ ಬೇರೆ ವಂಶಾವಳಿಗಳ ಪ್ರವೇಶವು ಮಾನವ ಕುಲಕೋಟಿ ಅಳಿದ ನಂತರದ ಅವಧಿಯಲ್ಲಿ ತುಂಬಾ ಕಡಿಮೆ,[೮೮] ಎಂದಿದ್ದಾರೆ ಈ ಅಧ್ಯಯನದ ಪ್ರಕಾರ ಭಾರತದ ಜಾತಿಗಳು ಇಲ್ಲಿನ [೮೯] ಮೂಲವನ್ನು ಹೊಂದಿದ್ದು ದಕ್ಷಿಣ ಏಷ್ಯಾದಿಂದ ಹೊರಭಾಗದ ವಂಶಗಳು ಬಂದಿದ್ದು ಕಡಿಮೆ [೮೯] ಎನ್ನಲಾಗಿದೆ. ಯಾಕೆಂದರೆ ಈ ಅಧ್ಯಯನದ ನಮೂನೆಗಳನ್ನು ಏಕೈಕ ಪ್ರದೇಶದಿಂದ ಪಡೆಯಲಾಗಿದ್ದು,ಇದರ ಸತ್ಯಾಸತ್ಯತೆ ಬಗ್ಗೆ ಸಂಶೋಧನೆ [೯೦] ಮಾಡಬೇಕಾಗಿದೆ.

ಸ್ಟ್ಯಾನ್ ಫೊರ್ಡ್ ವಿಶ್ವವಿದ್ಯಾಲಯದ ಜೊನ್ನಾ ಎಲ್ .ಮೌಂಟೇನ್ ಅವರ 1995ರ ಆರಂಭಿಕ ಅಧ್ಯಯನದ ಪ್ರಕಾರ "ಇಲ್ಲಿ ಮೂರು ವಿಂಗಡಣೆಗಳಲ್ಲಿ ಯಾವುದೇ ವಿಭಾಗ ಕಾಣುತ್ತಿಲ್ಲ,ವಿವಿಧ ಗುಂಪುಗಳ ಬಗ್ಗೆ ಅಂತಹ ವಂಶಾವಳಿಯ ವ್ಯತ್ಯಾಸಗಳಿಲ್ಲ"ಇವುಗಳ ವಂಶವೃಕ್ಷದ ಶಾಖೆಗಳ ಮೂಲಕ ನೋಡಿದರೆ ಜಾತಿಯ ಸಂಬಂಧ [೯೧] ಗೋಚರಿಸುತ್ತದೆ. ಸೆಂಟರ್ ಫಾರ್ ಸೆಲ್ಲುಲರ್ ಅಂಡ್ ಮೊಲೆಕುಲರ್ ಬಯೊಲಜಿ (ಇಂಡಿಯ)ದ ಇಸ್ಮೇಲ್ ಥಾನ್ಸೀಮ್ ಅವರ 2006ರ ಸಮಗ್ರ ಅಧ್ಯಯನದ ಪ್ರಕಾರ "ಕೆಳ ದರ್ಜೆಯ ಜಾತಿ ಪ್ರಭೇದಗಳು ಅದರಲ್ಲಿನ ಬುಡಕಟ್ಟು ಜನಾಂಗದಿಂದಲೇ ಮೂಲ ಪಡೆದ ಪೀಳಿಗೆಯಾಗಿದ್ದು,ಇದು ನವಯುಗದ ಕೃಷಿ ವಲಯದ ಜನರಿಂದಲೇ ಪ್ರವರ್ಧಮಾನಕ್ಕೆ ಬಂದದ್ದು ಕಾಣಬರುತ್ತದೆ.ಇವರು ಆರ್ಯನ್ ರು ಬರುವ ತುಂಬಾ ಮುಂಚೆಯೇ ಈ ಸಂತತಿಯ ಮೂಲಬೇರುಗಳು ಕಾಣುತ್ತವೆ.ಅಲ್ಲದೇ "ಆಗ ಬಂದ ಇಂಡೊ-ಯುರೊಪಿಯನ್ ರು ತಾವೇ ಮೇಲ್ವರ್ಗದವರೆಂದು ಇಲ್ಲಿನ ಜಾತಿ ಪದ್ದತಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಉನ್ನತ ಶ್ರೇಣಿಯನ್ನು [೯೨] ಪ್ರತಿಷ್ಟಾಪಿಸಿದರು. ಅಧ್ಯಯನದ ಪ್ರಕಾರ ಭಾರತದ ಜಾತಿ ಪದ್ದತಿಯು ಇಂಡೊ-ಆರ್ಯನ್ಸ್ ಗಳು ಬರುವ ಮುಂಚೆಯೇ ಆಚರಣೆಯಲ್ಲಿತ್ತು;ಹೀಗೆ ಬರಬರುತ್ತಾ ಜಾತಿ ಪದ್ದತಿಯು ಕೃಷಿ ಪದ್ದತಿ ಮತ್ತು ವಾಸಸ್ಥಾನಗಳ ಪ್ರತಿಷ್ಟಾಪನೆಗಿಂತ ಮೊದಲು ತನ್ನ ಬೇರು ಬಿಟ್ಟಿತ್ತು.ಅದರ ನಂತರ ಇಂಡೊ-ಅರ್ಯನ್ಸ್ ಬಂದ ಮೇಲೆ ಈ ಜಾತಿ ವಿಂಗಡನೆ ಇನ್ನಷ್ಟು ತೀವ್ರಾವಾಗಿ [೯೩] ಬೆಳೆಯಿತೆನ್ನಬಹುದು.

ಸುಮಾರು 2006ರಲ್ಲಿ ನಡೆದ ವಂಶಾವಳಿಯ ಬಗೆಗೆ ನ್ಯಾಶನಲ್ ಇನ್ ಸ್ಟಿಟೂಟ್ ಆಫ್ ಬಯೊಲಜಿಕಲ್ಸ್ ಇನ್ ಇಂಡಿಯಾದ ಅಧ್ಯಯನದಲ್ಲಿ 32 ಬುಡಕಟ್ಟು ಜನಾಂಗದ ಪುರುಷರು ಮತ್ತು 45 ಜಾತಿ ಗುಂಪುಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು.ಇದರ ಪ್ರಕಾರ ಕೆಲವೇ ಕೆಲವು ಮಾತ್ರ ಇಂಡೊ-ಯುರೊಪಿಯನ್ ನಿಂದ [೯೪] ಬಂದವುಗಳಾಗಿದ್ದವು. ಆದರೆ ಬ್ರಿಟಿಶ್ ರು ಹೇಳಿರುವಂತೆ ಆರ್ಯನ್ಸ್ ಮತ್ತು ದ್ರಾವಿಡರ ನಡುವೆ ಜನಾಂಗೀಯ ಭೇದ ಇತ್ತೆಂಬುದನ್ನು ಇತ್ತೀಚಿನ ಅಧ್ಯಯನಗಳು ಅಲ್ಲಗಳೆದಿವೆ. ಸೆಂಟರ್ ಫಾರ್ ಸೆಲ್ಲುಲರ್ ಅಂಡ್ ಮೊಲೆಕುಲರ್ ಬಯೊಲಜಿ ಗಾಗಿ ಒಂದು ಅಧ್ಯಯನವನ್ನು 2009ರಲ್ಲಿ ಕೈಗೊಳ್ಳಲಾಯಿತು.(ಸಹಯೋಗ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ,ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ಥ್ ಮತ್ತು ಬ್ರಾಡ್ ಇನ್ ಸ್ಟಿಟೂಟ್ ಆಫ್ ಹಾರ್ವರ್ಡ್ ಅಲ್ಲದೇ MIT)ಇದು ಭಾರತಾದಾದ್ಯಂತದ ಒಂದು ದಶಲಕ್ಷ ವಂಶಾವಳಿಯ ಸೂಚ್ಯಂಕಗಳು ಸುಮಾರು ಭಾರತದಲ್ಲಿನ 13 ರಾಜ್ಯಗಳಲ್ಲಿನ 25 ಜನಾಂಗೀಯ ಗುಂಪುಗಳ 132 ವ್ಯಕ್ತಿಗಳ ನಮೂನೆಗಳನ್ನು ವಿವಿಧ ಜಾತಿಯ ವೈವಿಧ್ಯಗಳನ್ನು ಸಂಗ್ರಹಿಸಿ ಅಭ್ಯಸಿಸಲಾಯಿತು. ಈ ಅಧ್ಯಯನದ ಪ್ರಕಾರ ಯಾವುದೇ ವಂಶಾವಳಿಯು ಜಾತಿಯ ಮೂಲಾಧಾರವನ್ನು ಪರಿಗಣಿಸದೇ ಒಟ್ಟಾರೆ ಫಲಿತಾಂಶದೊಂದಿಗೆ ದಕ್ಷಿಣ ಏಷ್ಯಾದ ಜನಾಂಗ ಪ್ರಗತಿ ಕಂಡಿದೆ.ಇದು ತಮ್ಮದೇ ಆದ ಬುಡಕಟ್ಟು ಮೂಲದೊಂದಿಗೆ ಬೆಳೆದಿದೆಯೇ ವಿನಹಃ ಯಾವುದೇ ಜನಾಂಗೀಯತೆಯ ಕಾರಣವಲ್ಲ ಎಂಬುದನ್ನು ಸಾಬೀತುಗೊಳಿಸಿದೆ.ಸಾಂಪ್ರದಾಯಕವಾಗಿ ಭಾರತದ ಸಮಾಜ ನಿರ್ಮಾಣ ಸಹ ಇವುಗಳ ಮೇಲೆ ಆಗಿದೆ.ಇಲ್ಲಿ ಯಾವುದೇ ತೆರನಾದ ಆರ್ಯನ್ ಆಕ್ರಮಣವಾಗಲೀ ಅಥವಾ ದ್ರಾವಿಡ್ ಜನರ ಬಗೆಗಿನ ಯಾವುದೇ ನಿಂದನೆ, ಉಪೇಕ್ಷೆಗೆ [೯೫] ಸಂಬಂಧಿಸಿದಲ್ಲ.

ಇವನ್ನೂ ನೋಡಿ ಬದಲಾಯಿಸಿ

ಟಿಪ್ಪಣಿಗಳು ಬದಲಾಯಿಸಿ

  1. ಫ್ರಾನ್ಸಿಸ್ ಬುಚನನ್, ಇಂಡಿಯನ್ ಸೆನ್ಸಸ್ ರೆಕಾರ್ಡ್, 1883
  2. BBC, ರಿಲಿಜನ್ ಅಂಡ್ ಎಥಿಕ್ಸ್, ಹಿಂದುಯಿಸಮ್
  3. ೩.೦ ೩.೧ ಎಕ್ಸೆಲ್ ಮೈಕೆಲ್ಸ್Axel Michaels, ಹಿಂದುಯಿಸಮ್: ಪಾಸ್ಟ್ ಅಂಡ್ ಪ್ರಸೆಂಟ್ 188-97 (ಪ್ರಿನ್ಸ್ ಟೊನ್ 2004) ISBN 0-691-08953-1
  4. ೪.೦ ೪.೧ "Hindu Wisdom: The Caste System". Retrieved 2006-12-08.
  5. ೫.೦ ೫.೧ Nitin Mehta (2006-12-08). "Caste prejudice has nothing to do with the Hindu scriptures". The Guardian. Retrieved 2006-12-08.
  6. ೬.೦ ೬.೧ M V Nadkarni (2003-11-08). "Is Caste System Intrinsic to Hinduism? Demolishing a Myth". Economic and Political Weekly. Archived from the original on 2007-03-12. Retrieved 2006-12-08.
  7. BBC ಪ್ರೊಫೈಲ್ , ಇಂಡಿಯಾ
  8. Bayly, Susan (1999). Caste, Society and Politics in India from the Eighteenth Century to the Modern Age. Cambridge University Press. doi:10.2277/0521264340. ISBN 9780521264341. Archived from the original on 2007-10-13. Retrieved 2010-07-27. {{cite book}}: Unknown parameter |month= ignored (help)
  9. "Caste-Based Parties". Retrieved 2007-05-17.
  10. ದಿ ಕ್ಯಾಂಬ್ರಿಜ್ ಹಿಸ್ಟರಿ ಆಫ್ ಇರಾನ್ ಬೈ ಇಲ್ಯಾ ಗೆರ್ಶ್ವಿಸವಿಕ್ , p. 651.
  11. ದಿ ವರ್ಲ್ಡ್ ಇಯರ್ ಬುಕ್ ಆಫ್ ಎಜುಕೇಶನ್ ಬೈ ಕೊಲಂಬಿಯಾ ಯುನ್ವಸಿಟಿ. ಟೀಚಫ್ರ್ ಕಾಲೇಜ್, ಯುನ್ವರ್ಸಿಟಿ ಆಫ್ ಲಂಡನ್ ಇನ್ ಸ್ಟಿಟುಟ್ ಆಫ್ ಎಜುಕೇಶನ್, p. 226.
  12. ಒರಿಜಿನ್ ಅಂಡ್ ಗ್ರೊತ್ ಆಫ್ ಕಾಸ್ಟ್ ಇನ್ ಇಂಡಿಯಾ ಬೈ ನೃಪೇಂದ್ರಕುಮಾರ ದತ್ತ, p. 39.
  13. ಮನುಸ್ಮೃತಿ X:65 : "ಶೂದ್ರನ ಪುತ್ರನಾಗಿ ಬ್ರಾಹ್ಮಣ ಜನಿಸಬಹುದು,ಬ್ರಾಹ್ಮಣನ ಪುತ್ರ ಶೂದ್ರನ ರೂಪದಲ್ಲಿಯೂ ಜನಿಸಬಹುದು." ಹೀಗಾದರೆ ವೈಶ್ಯ ಅಥವಾ ಕ್ಷತ್ರಿಯರು ಯಾರಲ್ಲಿ ಜನಿಸುವರು."
  14. David Haslam (2006-11-18). "Face to faith". The Guardian. Retrieved 2006-12-08.
  15. "Varnashrama-dharma and Caste". ISKCON. Archived from the original on 2010-05-24. Retrieved 2007-04-12.
  16. "The Varnasrama Social System". Hare Krishna News Network. Archived from the original on 2007-02-08. Retrieved 2007-04-12.
  17. ವೈಟ್ ಯಜುರ್ವೇದಾ 26.2
  18. "Brahman". Encyclopædia Britannica. Retrieved 2007-04-24.
  19. ಜಾನ್ ಕಿಯೆ, ಇಂಡಿಯಾ: ಎ ಹಿಸ್ಟರಿ , ಹಾರ್ಪರ್ ಕೊಲಿನ್ಸ್ ಪಬ್ಲಿಕೇಶನ್ಸ್ ಲಿ, ಲಂಡನ್, 2000. p. 145.
  20. ಜಾನ್ ಕಿಯೆ, ಇಂಡಿಯಾ: ಎ ಹಿಸ್ಟರಿ , ಹಾರ್ಪರ್ ಕೊಲಿನ್ಸ್ ಪಬ್ಲಿಕೇಶನ್ಸ್ ಲಿ, ಲಂಡನ್, ' 2000. p. 189.
  21. ೨೧.೦ ೨೧.೧ Kevin Hobson. "The Indian Caste System and The British: Ethnographic Mapping and the Construction of the British Census in India". Retrieved 2007-05-04.
  22. ೨೨.೦ ೨೨.೧ ಡಬ್ಲು. ಕ್ಲಾಟ್, ಕಾಸ್ಟ್,ಕ್ಲಾಸ್ ಅಂಡ್ ಕಮುನಿಸಮ್ ಇನ್ ಕೇರಳ, ಏಷಿಯನ್ ಅಫೇರ್ಸ್, Volume 3, Issue 3 ಅ.1972, pp. 275–287, DOI: 10.1080/03068377208729634.
  23. ದಿ ವರ್ಣಾ ಅಂಡ್ ಜಾತಿ ಸಿಸ್ಟೆಮ್ಸ್ Archived 2010-08-01 ವೇಬ್ಯಾಕ್ ಮೆಷಿನ್ ನಲ್ಲಿ. ಬೈ ಟ್ರೆನ್ಸ್ ಕಾಲ್ ಹ್ಯಾಮ್ ಅಂಡ್ ರೊಕ್ಸಾನಾ ಪವಿಚ್.
  24. ನೆಹರೂ,ಜೆ "ಡಿಸ್ಕವರಿ ಆಫ್ ಇಂಡಿಯಾ", ಆಕ್ಸ್ಫರ್ಡ್ ಇಂಡಿಯಾ ಪೇಪರ್ ಬ್ಯಾಕ್ಸ್.
  25. Sankaran, S (1994). "3". Indian Economy: Problems, Policies and Development. Margham Publications. p. 50. ISBN.
  26. ಒರಿಯಂಟಲ್ ಫಿಲಾಸಫಿ,lander.edu .
  27. "Govind Sadashiv Ghurye: Ghurye's Views about Indian Society" (PDF). Retrieved 2007-05-04.
  28. ೨೮.೦ ೨೮.೧ ೨೮.೨ James Silverberg (1969). "Social Mobility in the Caste System in India: An Interdisciplinary Symposium". The American Journal of Sociology. 75 (3): 443–444. {{cite journal}}: Unknown parameter |month= ignored (help)
  29. ಸೊಸಿಯಲ್ ಸ್ಟ್ರಕ್ಚರ್ಸ್ & ಮೊಬಿಲಿಟಿ ಇನ್ ಎಕಾನೊಮಿಕ್ ಡೆವಲಪ್ ಮೆಂಟ್ , ಬೈನೇಲ್ ಜೆ. ಸ್ಮೆಲ್ಸರ್, ಸೆಯ್ ಮೌರ್ ಮಾರ್ಟಿನ್ ಲಿಪ್ ಸೆಟ್, ಪಬ್ಲಿಶಡ್ 2005.
  30. ೩೦.೦ ೩೦.೧ ಶ್ರೀನಿವಾಸ್, ಎಂ.ಎನ್, ರಿಲಿಜನ್ ಅಂಡ್ ಸೊಸೈಟಿ ಅಮಂಗ್ ದಿ ಕೂರ್ಗಾಸ್ ಆಫ್ ಸೌತ್ ಇಂಡಿಯಾ ಬೈ ಬೈ}ಶ್ರೀನಿವಾಸ್, ಎಂ.ಎನ್ , p. 32 (ಆಕ್ಸಫರ್ಡ್, 1952).
  31. ೩೧.೦ ೩೧.೧ ಕಾಸ್ಟ್ ಇನ್ ಮಾಡೆರ್ನ್ ಇಂಡಿಯಾ; ಅಂಡ್ ಅದರ್ ಎಸ್ಸೆಸ್: p. 48. (ಮಿಡಿಯಾ ಪ್ರೊಮೊಟರ್ಸ್ ಅಂಡ್ ಪಬ್ಲಿಶರ್ಸ್ ಪ್ರೈ ಲಿ., ಬೊಂಬೆ; ಫಸ್ಟ್ ಪಬ್ಲಿಶ್ಡ್ : 1962, 11ನೆ ಮರುಮುದ್ರಣ: 1994).
  32. "ಗ್ಲಾಸರಿ ಆಫ್ ದಿ ಟ್ರೈಬ್ಸ್ ಅಂಡ್ ಕಾಸ್ಟ್ಸ್ ಆಫ್ ದಿ ಪಂಜಾಬ್ ಅಂಡ್ ಎನ್ ಡಬ್ಲು ಫ್ರಂಟೀಯರ್ ಪ್ರೊವಿನ್ಸ್." vol. 2, p. 501, ಬೈ ಎಚ್ .ಎ.ರೊಸ್, ಫಸ್ಟ್ ed. 1911.
  33. [60] ಒನ್ ಇಂಡಿಯಾ ಬ್ರಿಟಾನಿಕಾ ವಿಶ್ವಕೋಶ 2008. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಆನ್‌ಲೈನ್. 4 ಜೂನ್ 2008
  34. ದಿ ಬುದ್ದ- ಕಾಸ್ಟ್ ಪ್ರಾಬಲಮ್ .
  35. "Govind Sadashiv Ghurye: Ghurye's Views about Indian Society" (PDF). Retrieved 2007-05-04.
  36. Alavi, Seema (1998). Sepoys And The Company Tradition and transition in Northern India 1770–1830. Oxford University Press India. p. 5. ISBN 0-195-63484-5.
  37. Corbridge, Staurt (2000). Reinventing India: Liberalization, Hindu Nationalism and Popular Democracy. Polity press. p. 8. {{cite book}}: Unknown parameter |coauthors= ignored (|author= suggested) (help)
  38. ""ಟ್ರೈಬಲ್ ಪ್ರೊಟೆಸ್ಟ್ಸ್ ಅಂಡ್ ಬಂಡುಕೋರರು'". Archived from the original on 2008-03-04. Retrieved 2010-07-27.
  39. ದಿ ಫ್ರೀಡಮ್ ಸ್ಟ್ರಗಲ್ ಇನ್ ಹೈದರಾಬಾದ : ಎ ಕನೆಕ್ಟೆಡ್ ಅಕೌಂಟ್ಸ್ ಬೈ ಹೈದರಾಬಾದ , (India : State), p. 111.
  40. ಸೊಸಿಯಲ್ ಅಂಡ್ ಪೊಲಿಟಿಕಲ್ ಅವೇಕನಿಂಗ್ ಅಮಂಗ್ ದಿ ಟ್ರೈಬಲ್ಸ್ ಆಫ್ ರಾಜಸ್ಥಾನ್ ಬೈ ಗೋಪಿನಾಥ್ ಶರ್ಮಾ, p. 32.
  41. ಹೂ ಈಸ್ ಹು ಆಫ್ ಫ್ರೀಡಮ್ ಸ್ಟ್ರಗಲ್ ಇನ್ ಆಂಧ್ರಾ ಪ್ರದೇಶ ಬೈ ಸರೋಜನಿ ರಿಗಾನಿ, p. 420.
  42. ಲಿಸ್ಟ್ ಆಫ್ ಶೆಡ್ಯುಲ್ಡ್ ಕಾಸ್ಟ್ಸ್ Archived 2009-09-24 ವೇಬ್ಯಾಕ್ ಮೆಷಿನ್ ನಲ್ಲಿ. ಡೆಲ್ಲಿ ಗ.
  43. ರಿಪ್ಲೈ ಟು ಡಾಂಟಿಂಗ್ ಟಾಸ್ಕ್ ಫಾರ್ ಗವರ್ನ್ ಮೆಂಟ್ SC , ಟ್ರಿಬೂನ್ ಇಂಡಿಯಾ .
  44. ವಾಟ್ ಈಸ್ ಇಂಡಿಯಾಸ್ ಪಪುಲೇಶನ್ ಆಫ್ ಅದರ್ ಬ್ಯಾಕ್ ವರ್ಡ್ ಕ್ಲಾಸಿಸ್?,ಯಾಹೂ ನಿವ್ಸ್ .
  45. [೧] Archived 2006-11-29 ವೇಬ್ಯಾಕ್ ಮೆಷಿನ್ ನಲ್ಲಿ.ಕ್ರಿಸ್ಚೇಯನ್ ಕಾಸ್ಟ್ಸ್ Archived 2006-11-29 ವೇಬ್ಯಾಕ್ ಮೆಷಿನ್ ನಲ್ಲಿ. ಎನ್ ಸೈಕ್ಲೊಪಿಡಿಯಾ ಬ್ರಿಟಾನಿಕಾ.
  46. ಫುಲ್ಲರ್ ಸಿ.ಜೆ.ಇಂಡಿಯನ್ ಕ್ರಿಶ್ಚಿಯನ್ಸ್: ಪೊಲುಶನ್ಸ್ ಅಂಡ್ ಒರಿಜಿನ್ಸ್.ಮ್ಯಾನ್ , ನಿವ್ ಸಿರೀಸ್,, Vol. 12, No. 3/4. (Dec., 1977), pp. 528–529.
  47. "Racing on the fast track". Hindustan Times. Archived from the original on 2010-06-20. Retrieved 2010-07-27.
  48. ಫುಲ್ಲರ್ ಸಿ.ಜೆ.ಇಂಡಿಯನ್ ಕ್ರಿಶ್ಚಿಯನ್ಸ್: ಪೊಲುಶನ್ಸ್ ಅಂಡ್ ಒರಿಜಿನ್ಸ್.ಮ್ಯಾನ್ , ನಿವ್ ಸಿರೀಸ್, Vol. 12, No. 3/4. (Dec., 1977), pp. 528–529.
  49. ರಾವ್ ಬಬಾದುರ್ ಎಲ್ .ಕೆ.ಅನಂತಕೃಷ್ಣನ್ ಅಯ್ಯರ್, ಆಂಥ್ರೊಪೊಲಾಜಿ ಆಫ್ ದಿ ಸಿರಿಯನ್ ಕ್ರಿಶ್ಚಿಯನ್ಸ್ . ಕೋಚಿನ್ ಗವರ್ನ್ ಮೆಂಟ್ ಪ್ರೆಸ್ 1926
  50. ಕೇರಳಾ ಕ್ರಿಶ್ಚಿಯನ್ಸ್ ಅಂಡ್ ದಿ ಕಾಸ್ಟ್ ಸಿಸ್ಟೆಮ್ ಸಿ.ಜೆ ಫುಲ್ಲರ್. ಮ್ಯಾನ್ , ನಿವ್ ಸಿರೀಸ್ , Vol. 11, No. 1. (Mar., 1976), pp. 53–70.
  51. ೫೧.೦ ೫೧.೧ "ಇಸ್ಲಾಮಿಕ್ ಕಾಸ್ಟ್." ಬ್ರಿಟಾನಿಕಾ ವಿಶ್ವಕೋಶ 2006. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಆನ್‌ಲೈನ್. 18 ಅ. 2006.
  52. ೫೨.೦ ೫೨.೧ ಬರ್ಟನ್ -ಪೇಜ್, ಜೆ. "[ಶಾಶ್ವತವಾಗಿ ಮಡಿದ ಕೊಂಡಿ]ಹಿಂದು."[ಶಾಶ್ವತವಾಗಿ ಮಡಿದ ಕೊಂಡಿ] ಎನ್ ಸೈಕ್ಲೊಪಿಡಿಯಾ ಆಫ್ ಇಸ್ಲಾಮ್. ಎಡಿಟೆಡ್ ಬೈ : ಪಿ. ಬಿಯರ್ ಮನ್, . ಬಿಯಂಕಿಸ್, ಸಿ.ಇ. ಬೊಸ್ ವರ್ತ್, E. van ಡೊಂಜಿಲಾ ಲ್ಯಾಂಡ್ ಡಬ್ಲು.ಪಿ.ಹೆನ್ರಿಚಿಸ್. ಬ್ರಿಲ್, 2006. ಬ್ರಿಲ್ ಆನ್‌ಲೈನ್.
  53. ಮುಸ್ಲಿಮ್ ಕಾಸ್ಟ್ ಇನ್ ಉತ್ತರ ಪ್ರದೇಶ್ (ಎ ಸ್ಟಡಿ ಆಫ್ ಕಲ್ಚರ್ ಕಾಂಟಾಕ್ಟ್ ), ಘೌಸ್ ಅನ್ಸಾರಿ , ಲಖನೌ, 1960, p. 66.
  54. ೫೪.೦ ೫೪.೧ Singh Sikand, Yoginder. "Caste in Indian Muslim Society". Hamdard University. Archived from the original on 2011-08-11. Retrieved 2006-10-18.
  55. Aggarwal, Patrap (1978). Caste and Social Stratification Among Muslims in India. Manohar.
  56. ಸೊಸಿಯಲ್ ಸ್ಟ್ರಾಟಿಫಿಕೇಶನ್ ಅಮಂಗ್ ಮುಸ್ಲಿಮ್ಸ್ ಇನ್ ಇಂಡಿಯಾ Archived 2007-03-12 ವೇಬ್ಯಾಕ್ ಮೆಷಿನ್ ನಲ್ಲಿ. ಬೈ ಝರೀನಾ ಭಾಟ್ಟಿ.
  57. ೫೭.೦ ೫೭.೧ Ambedkar, Bhimrao. Pakistan or the Partition of India. Thackers Publishers.
  58. ೫೮.೦ ೫೮.೧ ವೆಬ್ ರಿಸೊರ್ಸ್ ಫಾರ್ ಪಾಕಿಸ್ತಾನ್ ಆರ್ ದಿ ಪಾರ್ಟಿಶನ್ ಆಫ್ ಇಂಡಿಯಾ .
  59. Leach, Edmund Ronald (1971-11-24). Aspects of Caste in South India, Ceylon and North-West Pakistan (p. 113). Cambridge University Press.
  60. ಮುಸ್ಲಿಮ್ ಕಮುನಿಟೀಸ್ ಆಫ್ ಸೌತ್ ಏಷ್ಯಾ: ಕಲ್ಚರ್ ಅಂಡ್ ಸೊಸೈಟಿ ಐಡಿಟೆಡ್ ಬೈ ಟಿ.ಎನ್ ಮದನ್. ನಿವ್ ಡೆಲ್ಹಿ: ವಿಕಾಸ ಪಬ್ಲಿಶಿಂಗ್ ಹೌಸ್, 1976 p. 114.
  61. "ಆರ್ ನಿಯೊ ಬುದ್ಧಿಸ್ಟ್ಸ್ ಹಿಂದೂಸ್ ?" ಬೈ ಕೊನೆರಾಡ್ ಎಲ್ಸ್ಟ್.
  62. ದುರ್ಗಾ ಪ್ರಸಾದ , p. 115, ಹಿಸ್ಟರಿ ಆಫ್ ದಿ ಆಂಧ್ರಾಸ್ ಅಪ್ ಟು 1565 A. D. .
  63. ಮಾರ್ಟಿನ್ ರಾಬರ್ಟ್ ಮೊಂಟೆಗ್ಬರಿ, p. 216, ದಿ ಹಿಸ್ತರಿ ಎಂಟಿಕುಟೀಸ್ ಟೊಪೊಗ್ರಫಿ,ಅಂಡ್ ಸ್ಟಾಟಿಟಿಕ್ಸ್ ಆಫ್ ಈಸ್ಟರ್ನ್ ಇಂಡಿಯಾ .
  64. Dr. Sewa Singh Kalsi. "Problems of Defining Authority in Sikhism". DISKUS Vol.3 No.2 (1995) pp. 43–58. Archived from the original on 2007-06-05. Retrieved 2007-04-24.
  65. ನೋಟ್ಸ್ ಆನ್ ಬಹಾಯಿ ಪಾಪುಲೇಶನ್ ಇನ್ ಇಂಡಿಯಾ ಬೈ ಚಾರ್ಲ್ಸ್ ನೊಲ್ಲಿ ಅಂಡ್ ವಿಲಿಯಮ್ ಗಾರ್ಲಿಂಗ್ಟನ್, 1997-03
  66. ೬೬.೦ ೬೬.೧ Danny Yee. "Book review of Caste, Society and Politics in India: From the Eighteenth Century to the Modern Age". Retrieved 2006-12-11.
  67. ಭಟ್ಟಾಚಾರ್ಯ ಅಮಿತ್, . ""Who are the OBCs?"". Archived from the original on 2006-06-27. Retrieved 2006-04-19. ಟೈಮ್ಸ್ ಆಫ್ ಇಂಡಿಯಾ , ಏಪ್ರಿಲ್ 8, 2006.
  68. "Caste-Based Parties". Country Studies US. Retrieved 2006-12-12.
  69. ಇಂಡಿಯಾಸ್ ಕಾಸ್ಟ್ ಸಿಸ್ಟೆಮ್ ಡಿಸ್ಕ್ರಿಮಿನೇಟ್ಸ್ Archived 2006-04-20 ವೇಬ್ಯಾಕ್ ಮೆಷಿನ್ ನಲ್ಲಿ..
  70. Shaivam.org Archived 2021-02-14 ವೇಬ್ಯಾಕ್ ಮೆಷಿನ್ ನಲ್ಲಿ..
  71. http://www.sanghparivar.org/wiki/rashtriya-swayamsevak-sangh
  72. ೭೨.೦ ೭೨.೧ ಆನ್ ಅನ್ ಟಚೇಬಲ್ ಸಬ್ಜೆಕ್ಟ್ ?
  73. ಫೈನಲ್ ಡಿಕ್ಲೇರೇಶನ್ ಆಫ್ ಗ್ಲೊಬಲ್ ಕಾನ್ ಫೆರೆನ್ಸ್ ಅಗೇನಸ್ಟ್ ರೇಸಿಸಮ್ ಅಂಡ್ ಕಾಸ್ಟ-ಬೇಸ್ಡ್ ಡಿಸ್ಕ್ರಿಮಿನೇಶನ್ Archived 2008-03-04 ವೇಬ್ಯಾಕ್ ಮೆಷಿನ್ ನಲ್ಲಿ..
  74. ಗೋಪಾಲ್ ಗುರು ಉಯಿತ್ ಸಿರಾಜ್ ಸಿದ್ವಾ. ಇಂಡಿಯಾಸ್ "ಹಿಡನ್ ಅಪರ್ಥೈಡ್" .
  75. ರಾಜೀವ್ ಧವನ್. ಇಂಡಿಯಾಸ್ ಅಪರ್ಥೈಡ್ Archived 2008-02-15 ವೇಬ್ಯಾಕ್ ಮೆಷಿನ್ ನಲ್ಲಿ..
  76. ದಿ ಕಾನ್ ಸ್ಟಿಟುಶನ್ ಆಫ್ ಇಂಡಿಯಾ ಬೈ ಪಿ.ಎಂ.ಬಕ್ಷಿ ಯುನ್ವರ್ಸಲ್ ಲಾ ಪಬ್ಲಿಶಿಂಗ್ ಕಂ, ISBN 81-7534-500-4.
  77. ಮೆಂಡೆಲ್ ಸೊಹನ್, ಆಲಿವರ್& ವಿಸ್ಜೈನಿ, ಮಾರಿಯಾ, "ದಿ ಅನ್ ಟಚೇಬಲ್ಸ್, ಸಬಾರ್ಡಿನೇಶನ್, ಪಾವರ್ಟಿ ಅಂಡ್ ದಿ ಸ್ಟೇಟ್ ಇನ್ ಮೊಡೆರ್ನ್ ಇಂಡಿಯಾ", ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್, 1998.[page needed]
  78. ವಿಲಿಯಮ್ ಎ. ಹವಿಲ್ಯಾಂಡ್, ಆಂಥ್ರೊಪೊಲಾಜಿ: ದಿ ಹುಮನ್ ಚಾಲೇಂಜ್ , 10th ಸಂಪುಟ, ಥಾಮ್ಸನ್ ವಡ್ಸ್ ವರ್ತ್, 2005, ISBN 0-534-62361-1, p. 575.
  79. ಕೆವಿನ್ ರೆಲ್ಲಿ, ಸ್ಟೆಫೆನ್ ಕೌಫ್ ಮ್ಯಾನ್, ಎಂಜಿಲಾ ಬೊಡಿನೊ, ರೇಸಿಸಮ್: ಎ ಗ್ಲೊಬಲ್ ರೀಡರ್ P21, M.E. ಶರ್ಪೆ, 2003 ISBN 0-7656-1060-4.
  80. ಎಕ್ಸಸರ್ಪ್ಟ್ಸ್ರ್ ಫ್ರಾಮ್ ದಿ ಕಾನ್ ಸ್ಟಿಟುಶನ್ ಆಫ್ ಇಂಡಿಯಾ.
  81. ಅಂಬೇಡ್ಕರ್, ದಿ ಅನ್ನಿಹಿಲೇಶನ್ ಅಫ್ ಕಾಸ್ಟ್. p. 49 ಆಫ್ ಹೀಸ್ ರೈಟಿಂಗ್ಸ್ ಅಂಡ್ ಸ್ಪೀಚಿಸ್, vol.1, ಎಜುಕೇಶನ್ ಡಿಪಾ. Dpt., ಗವರ್ನ್ ಮೆಂಟ್ ಆಫ್ ಮಹಾರಾಷ್ಟ್ರ 1979.
  82. ರೇಸ್ ಅಂಡ್ ಕಾಸ್ಟ್ ಬೈಅಂಡ್ರೆ ಬೆಟಿಲ್ಲೆ.
  83. ಎ. ಜಲಾಲ್,ಡೆಮಾಕ್ರಸಿ ಅಂಡ್ ಅಥಾರಿಟೇರಿಯನಿಸಮ್ ಇನ್ ಸೌತ್ ಏಷ್ಯಾ: ಎ ಕಂಪೇರೇಟಿವ್ ಅಂಡ್ ಹಿಸ್ಟಾರಿಕಲ್ ಪರಸ್ಪೆಕ್ಟಿವ್(ಕಾಂಟೆಂಪೊರರಿ ಸೌತ್ ಏಷ್ಯಾ), ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್(ಮೇ 26, 1995), ISBN 0-521-47862-6.
  84. ಇಂಡಿಯಾ– ಎ ಕಂಟ್ರಿ ಸ್ಟಡಿ, USA ಲೈಬ್ರರಿ ಆಫ್ ಕಾಂಗ್ರೆಸ್, 1995, ಚಾಪ್ಟರ್ 5.
  85. ಮ್ಯಾಟ್ ಚೆರ್ರಿ, "ಹುಮ್ಯಾನಿಸಮ್ ಇನ್ ಇಂಡಿಯಾ", ಫ್ರೀ ಇಂಕ್ವೈರಿ ಮ್ಯಾಗ್ಜಿನ್, Vol 16 Num 4.
  86. "Supreme Court stays OBC quota in IITs, IIMs". rediff.com. Rediff.com India Limited. 2007-03-29. Retrieved 2007-04-01.
  87. http://sify.com/news/sc-upholds-27-pc-obc-quota-news-national-jegnGRdgjda.html
  88. Kivisild, T. (2003). "The Genetic Heritage of the Earliest Settlers Persists Both in Indian Tribal and Caste Populations". American Journal of Human Genetics. 72 (2): 313–332. doi:10.1086/346068. PMC 379225. PMID 12536373. Retrieved 2007-09-09. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  89. ೮೯.೦ ೮೯.೧ "ಆರ್ಕೈವ್ ನಕಲು" (PDF). Archived from the original (PDF) on 2014-01-04. Retrieved 2010-07-27.
  90. Basu, Analabha (2003). "Ethnic India: A Genomic View, With Special Reference to Peopling and Structure". Genome Research. 13 (10): 2277–2290. doi:10.1101/gr.1413403. PMC 403703. PMID 14525929. Retrieved 2007-09-09. {{cite journal}}: Unknown parameter |coauthors= ignored (|author= suggested) (help)
  91. Mountain, Joanna L. (1995). "Demographic history of India and mtDNA-sequence diversity". American Journal of Human Genetics. 56 (4): 979–992. ISSN 0002-9297. PMC 1801212. PMID 7717409. Retrieved 2007-09-09. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  92. Thanseem, Ismail (2006). "Genetic affinities among the lower castes and tribal groups of India: inference from Y chromosome and mitochondrial DNA" (PDF). BMC Genetics. 7: 42. doi:10.1186/1471-2156-7-42. PMC 1569435. PMID 16893451. Retrieved 2007-09-09. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)CS1 maint: unflagged free DOI (link)
  93. G.S. Mudur (2007-01-01). "Caste in the genes". The Telegraph, Calcutta. Archived from the original on 2007-09-30. Retrieved 2007-08-31.
  94. Brian Handwerk (2006-01-10). "India Acquired Language, Not Genes, From West, Study Says". National Geographic News. Retrieved 2006-12-08.
  95. ಆರ್ಯನ್ -ದ್ರಾವಿಡಿಯನ್ ಡಿವೈಡ್ ಒಂದು ಮಿಥ್ಯ: ಸ್ಟಡಿ, ಟೈಮ್ಸ್ ಆಫ್ ಇಂಡಿಯಾ

ಆಕರಗಳು ಬದಲಾಯಿಸಿ

  • ಅಗ್ರವಾಲ್, ಪ್ಯಾಟ್ರಾಪ್. ಭಾರತದ ಮುಸ್ಲಿಮ್ ರಲ್ಲಿನ ಜಾತಿ ಮತ್ತು ಸಾಮಾಜಿಕ ವರ್ಗೀಕರಣ . ಮನೋಹರ್. 1978.
  • ಅಂಬೇಡ್ಕರ್, ಭೀಮರಾವ್. ಪಾಕಿಸ್ತಾನ್ ಅಥವಾ ದಿ ಪಾರ್ಟಿಶನ್ ಆಫ್ ಇಂಡಿಯಾ . ಥ್ಯಾಕರ್ಸ್ ಪಬ್ಲಿಶರ್ಸ್.
  • ಅನ್ಸಾರಿ, ಘೌಸ್. ಮುಸ್ಲಿಮ್ ಕಾಸ್ಟ್ ಇನ್ ಉತ್ತರ ಪ್ರದೇಶ್: ಎ ಸ್ಟಡಿ ಆಫ್ ಕಲ್ಚರ್ ಕಾಂಟಾಕ್ಟ್ . ಲಖನೌ, 1960.
  • ಬೈಲಿ, ಸುಸನ್. ಕಾಸ್ಟ್, ಸೊಸೈಟಿ ಅಂಡ್ ಪಾಲಿಟಿಕ್ಸ್ ಇನ್ ಇಂಡಿಯಾ ಫ್ರಾಮ್ ದಿ ಎಟೀನ್ ಸೆಂಚುರಿ ಟು ದಿ ಮಾಡೆರ್ನ್ ಏಜ್ . ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್. 1999. DOI:10.2277/0521264340. ISBN 978-0-521-26434-1.
  • ಮೈಕೆಲ್ಸ್, ಎಕ್ಸೆಲ್, ಹಿಂದುಯಿಸಮ್: ಪಾಸ್ಟ್ ಅಂಡ್ ಪ್ರಸೆಂಟ್ 188-97 (ಪ್ರಿನ್ಸ್ಟೊನ್ 2004) ISBN 0-691-08953-1.
  • ಶ್ರೀನಿವಾಸ್, ಎಂ. ಎನ್. ರಿಲಿಜನ್ ಅಂಡ್ ಸೊಸೈಟಿ ಅಮಂಗ್ ದಿ ಕೂರ್ಗ್ಸ್ ಆಫ್ ಸೌತ್ ಇಂಡಿಯಾ . ಆಕ್ಸ್ಫರ್ಡ್, 1952.

ಹೆಚ್ಚಿನ ಓದಿಗಾಗಿ ಬದಲಾಯಿಸಿ

  • ಸ್ವಾಮಿ ಸಹಜಾನಂದ ಸರ್ಸ್ವತಿ ರಚ್ನವಾಲಿ (ಸೆಲೆಕ್ಟೆಡ್ ವರ್ಕ್ಸ್ ಆಫ್ ಸ್ವಾಮಿ ಸಹಜಾನಂದ ಸರಸ್ವತಿ), ಪ್ರಕಾಶನ ಸಂಸ್ಥಾನ, ದೆಲ್ಹಿ, 2003.
  • ಬಲದೇವ ಉಪಾಧ್ಯಾಯ, ಕಾಶಿ ಕಿ ಪಾಂಡಿತ್ಯ ಪರಂಪರಾ, ಶಾರದಾ ಸಂಸ್ಥಾನ, ವಾರಾಣಸಿ, 1985.
  • ಎಂ.ಎ. ಷೆರಿಂಗ್, ಹಿಂದೂ ಟ್ರೈಬ್ಸ್ ಎಂಡ್ ಕ್ಯಾಸ್ಟ್ಸ್ ಆಸ್ ರಿಪ್ರೊಡ್ಯೂಸ್ಡ್ ಇನ್ ಬನಾರಸ್, ಏಷ್ಯನ್ ಎಜುಕೇಷನಲ್ ಸರ್ವೀಸಸ್, ನವದೆಹಲಿ, ಮೊದಲನೆಯ ಆವೃತ್ತಿ 1872, ಹೊಸ ಆವೃತ್ತಿ 2008.
  • ಜೊಗೆಂದ್ರನಾಥ ಭಟ್ಟಾಚಾರ್ಯ, ಹಿಂದು ಕಾಸ್ಟ್ಸ್ ಅಂಡ್ ಸೆಕ್ಟ್ಸ್, ಮುನಶಿರಾಮ್ ಮನೋಹರಲಾಲ್, ಡೆಲ್ಹಿ, ಫಸ್ಟ್ ಎಡಿಶನ್ 1896, ನಿವ್ ಎಡಿಶನ್ 1995.
  • ಈ.ಎ.ಎಚ್.ಬ್ಲಂಟ್, ದಿ ಕಾಸ್ಟ್ ಸಿಸ್ಟೆಮ್ ಆಫ್ ನಾರ್ತ್ ಇಂಡಿಯಾ, ಫಸ್ಟ್ ಎಡಿಶನ್ ಇನ್ 1931 ಬೈ ಆಕ್ಸಫರ್ಡ್ ಯುನ್ವರ್ಸಿಟಿ ಪ್ರೆಸ್, ನಿವ್ ಎಡಿಶನ್ ಬೈ ಎಸ್.ಚಾಂದ್ ಪಬ್ಲಿಶರ್ಸ್, 1969.
  • ಕ್ರಿಸ್ಟೊಫರ್ ಅಲನ್ ಬಯಲಿ, ರೂಲರ್ಸ್, ಟೌನ್ಸ್ ಮೆನ್, ಅಂಡ್ ಬಜಾರ್ಸ: ನಾರ್ತ್ ಇಂಡಿಯನ್ ಸೊಸೈಟಿ ಇನ್ ದಿ ಏಜ್ ಆಫ್ ಬ್ರಿಟಿಶ್ ಎಕ್ಸಾಪಾನ್ಸನ್, 1770–1870, ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್, 1983.
  • ಆನಂದ್ ಎ. ಯಾಂಗ್, ಬಝಾರ್ ಇಂಡಿಯಾ: ಮಾರ್ಕೆಟ್ಸ್, ಸೊಸೈಟಿ, ಎಂಡ್ ದ ಕಾಲೋನಿಯಲ್ ಸ್ಟೇಟ್ ಇನ್ ಬಿಹಾರ್, ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಮುದ್ರಣಾಲಯ, 1999.
  • ಆಚಾರ್ಯ ಹಝಾರಿ ಪ್ರಸಾದ್ ದ್ವಿವೇದಿ ರಚನಾವಳಿ, ರಾಜ್ ಕಮಲ್ ಪ್ರಕಾಶನ, ದೆಹಲಿ.
  • ಬಿಭಾ ಝಾ ಅವರ Ph.ಡಿ ವಿಷಯ ಭೂಮಿಹಾರ್ ಬ್ರಾಹ್ಮಣರು: ಒಂದು ಸಾಮಾಜಿಕ ಅಧ್ಯಯನ, ಪಾಟ್ನಾ ವಿಶ್ವವಿದ್ಯಾಲಯಕ್ಕೆ ಸಮರ್ಪಿತ.
  • ಅರವಿಂದ ನಾರಾಯಣ ದಾಸ್, ಅಗ್ರೆರೇರಿಯನ್ ಮೂಮೆಂಟ್ಸ್ ಇನ್ ಇಂಡಿಯಾ: ಸ್ಟಡೀಸ್ ಆಬ್ನ್ 20 ಥ ಸೆಂಚುರಿ ಬಿಹಾರ್(ಲೈಬ್ರರಿ ಆಫ್ ಪೀಜಂಟ್ ಸ್ಟಡೀಸ್), ರೂಟ್ ಲೆಜ್, ಲಂಡನ್, 1982.
  • ಎಂ.ಎನ್.ಶ್ರೀನಿವಾಸ್, ಆಧುನಿಕ ಭಾರತದಲ್ಲಿ ಸಾಮಾಜಿಕ ಬದಲಾವಣೆ, ಓರಿಯೆಂಟ್ ಲಾಂಗ್ ಮನ್, ದೆಹಲಿ, 1995.
  • ಮಹಾವೀರ್ ಪ್ರಸಾದ ದ್ವಿವೇದಿ ಎಸ್ಸೇಸ್.
  • ಅಂಬೇಡ್ಕರ್, ಬಿ.ಆರ್. (1946). ದಿ ಅನ್ ಟಚೇಬಲ್ಸ್: ಹು ವೇರ್ ದೆ ಅಂಡ್ ವೈ ದೆ ಬಿಕೇಮ್ ಅನ್ ಟಚೇಬಲ್ಸ್ ? ಆಸ್ ರಿಪ್ರಿಂಟೆಡ್ ಇನ್ ವ್ಯಾಲೂಮ್ 7 ಆಫ್ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರೈಟಿಂಗ್ಸ್ ಅಂಡ್ ಸ್ಪೀಚಿಸ್ , ಪಬ್ಲಿಶಡ್ ಬೈ ಗವರ್ನ್ ಮೆಂಟ್ ಆಫ್ ಆಫ್ ಮಹಾರಾಷ್ಟ್ರಾ 1990; ಕಂಪ್ಲೀಟ್ ರೈಟಿಂಗ್ಸ್.
  • Ambedkar, B.R. (1946) ಹೂ ವೇರ್ ದಿ ಶೂದ್ರಾಸ್ (ರೀಡ್ ಆನ್ ಲೈನ್).
  • ಅಟಲ್, ಯೋಗೇಶ್ (1968) "ದಿ ಚೇಂಜಿಂಗ್ ಫ್ರಂಟೀಯರ್ಸ್ ಆಫ್ ಕಾಸ್ಟ್ " ಡೆಲ್ಹಿ, ನ್ಯಾಶನಲ್ ಪಬ್ಲಿಶಿಂಗ್ ಹೌಸ್.
  • ಅಟಲ್, ಯೋಗೇಶ್ , (2006) "ಚೇಂಜಿಂಗ್ ಇಂಡಿಯನ್ ಸೊಸೈಟಿ " ಚಾಪ್ಟರ್ ಆನ್ ವರ್ಣಾ ಅಂಡ್ ಜಾತಿ. ಜೈಪುರ್, ರಾವತ್ ಪಬ್ಲಿಕೇಶನ್ಸ್.
  • ಬೇನ್ಸ್, ಜೆರ್ವೈಸ್ ಅಥೆಲ್ಸ್ಟೇನ್ (1893). ಜನರಲ್ ರಿಪೊರ್ಟ್ ಆನ್ ದಿ ಸೆನ್ಸಸ್ ಆಫ್ ಇಂಡಿಯಾ, 1891 , ಲಂಡನ್, ಹರ್ ಮೆಜೆಸ್ಟೀಸ್ ಸ್ಟೇಶನರಿ ಆಫೀಸ್.
  • ಬ್ಲಂಟ್, ಇ. ಎ. ಎಚ್. (1931). ದಿ ಕಾಸ್ಟ್ ಸಿಸ್ಟೆಮ್ ಆಫ್ ನಾದರ್ನ್ ಇಂಡಿಯಾ , ರಿಪಬ್ಲಿಶಡ್ 1964, ಎಸ್. ಚಾಂದ್, ಡೆಲ್ಹಿ.
  • ಕ್ರೂಕ್, ವಿಲಿಯಮ್(1896). ಟ್ರೈಬ್ಸ್ ಅಂಡ್ ಕಾಸ್ಟ್ಸ್ ಆಫ್ ದಿ ನಾರ್ತ್ -ವೆಸ್ಟರ್ನ್ ಪ್ರೊವಿನ್ಸಿಸ್ ಅಂಡ್ ಔಧ್ , 4 vols.
  • ಡುಕೆರ್/ಸ್ಪಿಲ್ವೊಗಲ್. ದಿ ಎಸೆನ್ಸ್ಸಿಯಲ್ ವರ್ಲ್ಡ್ ಹಿಸ್ಟರಿ Vol I: to 1800 . 2nd ಎಡಿಶನ್ 2005.
  • ಡುಮೊಂಟ್, ಲೂಯಿಸ್. ಹೊಮೊ ಹಿರಾಚಿಯಸ್Homo: ದಿ ಕಾಸ್ಟ್ ಸಿಸ್ಟೆಮ್ ಅಂಡ್ ಇಟ್ಸ್ ಇಂಪ್ಲಿಕೇಶನ್ಸ್ . ಕಂಪ್ಲೀಟ್ ಇಂಗ್ಲಿಷ್ ಎಡಿಶನ್, ರಿವೈಸ್ಡ್. 540 p. 1970, 1980 ಸಿರೀಸ್: (ನೇಚರ್ ಆಫ್ ಹುಮನ್ ಸೊಸೈಟಿ ).
  • ಘುರೆ, ಜಿ. ಎಸ್. (1961). ಕಾಸ್ಟ್, ಕ್ಲಾಸ್ ಅಂಡ್ ಆಕುಪೇಶನ್ . ಪಾಪ್ಯುಲರ್ ಬುಕ್ ಡಿಪೊಟ್ . ಬಾಂಬೆ.
  • ಘುರೆ, ಜಿ. ಎಸ್. (1969). ಕಾಸ್ಟ್ ಅಂಡ್ ರೇಸ್ ಇನ್ ಇಂಡಿಯಾ, ಪಾಪುಲರ್ ಪ್ರಕಾಶನ, ಮುಂಬಯಿ 1969 (1932).
  • ಜಾಫರ್ಲೊಟ್, ಕ್ರಿಸ್ಟೊಫೆ (2003). ಇಂಡಿಯಾಸ್ ಸೈಲೆಂಟ್ ರೆವುಲುಶನ್: ದಿ ರೈಸ್ ಆಫ್ ದಿ ಲೊವರ್ ಕಾಸ್ಟ್ಸ್ , C. ಹರ್ಸ್ಟ್& ಸಿ ಕಂ.
  • ಕಾನೆ, ಪಾಂಡುರಂಗ್ ವಾಮನ್ : ಹಿಸ್ಟ್ರಿ ಆಫ್ ಧರ್ಮಶಾಸ್ತ್ರ: (ಎನ್ಸಿಯಂಟ್ ಅಂಡ್ ಮೆಡಿಯವಲ್, ರಿಲಿಜಿಯಸ್ ಅಂಡ್ ಸಿವಿಲ್ ಲಾ)  — ಪೂನಾ: ಭಂಡಾರ್ಕರ್ ಒರಿಯಂಟಲ್ ರಿಸರ್ಚ್ ಇನ್ ಸ್ಟಿಟುಟ್, 1962–1975.
  • ಲಾಲ್ , ಕೆ. ಎಸ್. ಗ್ರೊತ್ ಆಫ್ ಶೆಡುಲ್ಸ್ಡ್ ಟ್ರೈಬ್ಸ್ ಅಂಡ್ ಕಾಸ್ಟ್ಸ್ ಇನ್ ಮಿಡಿವಲ್ ಇಂಡಿಯಾ (1995).
  • ಮುರೆ ಮಿಲ್ನರ್ , ಜೂ. (1994). ಸ್ಟೇಟ್ಸ್ ಅಂಡ್ ಸೆಕ್ರೆಡ್ ನೆಸ್ : ಎ ಜನರಲ್ ಥಿಯರಿ ಆಫ್ ಸ್ಟೇಟಸ್ ರಿಲೇಶನ್ಸ್ ಅಂಡ್ ಆನ್ ಅನಲ್ಲೈಸಿಸ್ ಆಫ್ ಇಂಡಿಯನ್ ಕಲ್ಚರ್ , ನಿವ್ ಯಾರ್ಕ್: ಆಕ್ಸ್ಫರ್ಡ್ ಯುನ್ವರ್ಸಿಟಿ ಪ್ರೆಸ್.
  • ರಾಜ್, ಪಪಿಯಾ& ಆದಿತ್ಯ್ ರಾಜ್ (2004) "ಕಾಸ್ಟ್ ವೇರಿಯೇಶನ್ ಇನ್ ರಿಪ್ರೊಡಕ್ಟಿವ್ ಹೆಲ್ತ್ ಆಫ್ ಉಮೆನ್ ಇನ್ ಈಸ್ಟರ್ನ್ ರೀಜನ್ ಆಫ್ ಇಂಡಿಯಾ: ಎ ಸ್ಟ್ಡಿ ಬೇಸ್ಡ್ ಆನ್ NFHS ಡಾಟಾ" ಸೊಸಿಯಾಲಾಜಿಕಲ್ ಬುಲೆಟಿನ್ 53 (3): 326–346.
  • ರಂಗನಾಯಕಮ್ಮಾ (2001). ಫಾರ್ ದಿ ಸಾಲುಶನ್ ಆಫ್ ದಿ "ಕಾಸ್ಟ್ "ಕೊಶ್ಚೆನ್, ಬುದ್ದಾ ಈಸ್ ನಾಟ್ ಇನಫ್ ಈಸ್ ನಾಟ್ ಇನಫ್ ಅಂಬೇಡ್ಕರ್ ,ಮಾರ್ಕ್ಸ್ ಈಸ್ ಮಸ್ಟ್ , ಹೈದರಾಬಾದ್: ಸ್ವೀಟ್ ಹೋಮ್ ಪಬ್ಲಿಕೇಶನ್ಸ್.
  • ರಸೆಲ್, ಆರ್.ವಿ. ಅಂಡ್ ಆರ್.ಬಿ. ಹೀರಾ ಲಾಲ್ (1916). ದಿ ಟ್ರೈಬ್ಸ್ ಅಂಡ್ ಕಾಸ್ಟ್ಸ್ ಆಫ್ ದಿ ಸೆಂಟ್ರಲ್ ಪ್ರೊವಿನ್ಸ್ ಆಫ್ ಇಂಡಿಯಾ , 4 vols., ಲಂಡನ್.
  • ಲಿಜ್ ಸ್ಟೌರ್ಟ್, ಇನ್ ಗಟಾಡಿಯನ್ ವೀಕ್ಲಿ, ಜನವರಿ 10, 2002

ಹೊರಗಿನ ಕೊಂಡಿಗಳು ಬದಲಾಯಿಸಿ