ಕೇರಳ

ದಕ್ಷಿಣ ಭಾರತದ ಒಂದು ರಾಜ್ಯ

ಕೇರಳ (ಮಲಯಾಳಂ:കേരളം) - ನೈರುತ್ಯ ಭಾರತದ ಕರಾವಳಿಯಲ್ಲಿರುವ ಒಂದು ರಾಜ್ಯ. ಇದು ಪೂರ್ವ ಮತ್ತು ಈಶಾನ್ಯಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕಗಳಿಂದಲೂ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದಲೂ ಸುತ್ತುವರಿಯಲ್ಪಟ್ಟಿದೆ. ಇದು ಭಾಷಾ ಸಾಂಸೃತಿಕ ಪ್ರದೇಶವೆಂದು ಕರೆಯಲ್ಪಡುವ ದಕ್ಷಿಣ ಭಾರತದ ರಾಜ್ಯಗಲ್ಲಿ ಒಂದು. ಮಲಯಾಳಂ ಇಲ್ಲಿನ ಪ್ರಧಾನ ಆಡುಭಾಷೆ. ವಿಸ್ತೀರ್ಣದಲ್ಲಿ ೨೧ನೇ ಸ್ಥಾನವನ್ನು ಪಡೆದಿರುವ ಕೇರಳವು ಜನಸಂಖ್ಯೆಯಲ್ಲಿ ೧೨ನೇ ಸ್ಥಾನವನ್ನು ಪಡೆದಿದೆ. ಮಲಯಾಳಂ ಭಾಷೆ ಮಾತನಾಡುವ ಜನರು ವಾಸಿಸುವ (ನಾಗರ ಕೊವಿಲ್, ಕನ್ಯಾಕುಮಾರಿ ತಾಲೂಕುಗಳನ್ನು ಹೊರತುಪಡಿಸಿ ) ತಿರುವಿದಾಕೂಂರು, ಕೊಚ್ಚಿ, ಮಲಬಾರ್, ದಕ್ಷಿಣ ಕನ್ನಡ ಜಿಲ್ಲೆಯಾದ ಕಾಸರಗೋಡು ತಾಲೂಕು ಎಂಬೀ ಪ್ರದೇಶಗಳನ್ನು ಸೇರಿಸಿ 1956ರಲ್ಲಿ ಭಾಷಾವಾರು ಪ್ರಾಂತ್ಯವಾಗಿ ಕೇರಳಂ ರಾಜ್ಯ ರಚನೆಯಾಯಿತು.

ಕೇರಳ
Map of India with the location of ಕೇರಳ highlighted.
Map of India with the location of ಕೇರಳ highlighted.
ರಾಜಧಾನಿ
 - ಸ್ಥಾನ
ತಿರುವನಂತಪುರಂ
 - 8.48° N 76.95° E
ಅತಿ ದೊಡ್ಡ ನಗರ ತಿರುವನಂತಪುರಂ
ಜನಸಂಖ್ಯೆ (2001)
 - ಸಾಂದ್ರತೆ
31,838,619 (12th)
 - 819/km²
ವಿಸ್ತೀರ್ಣ
 - ಜಿಲ್ಲೆಗಳು
38,863 km² (21st)
 - 14
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧,೧೯೫೬
 - ಆರೀಫ್ ಮೊಹಮ್ಮದ್ ಖಾನ್
 - ಪಿಣರಾಯಿ ವಿಜಯನ್ (ಸಿಪಿಐ (ಎಂ))
 - Unicameral (141)
ಅಧಿಕೃತ ಭಾಷೆ(ಗಳು) ಮಲಯಾಳಂ
Abbreviation (ISO) IN-KL
ಅಂತರ್ಜಾಲ ತಾಣ: www.kerala.gov.in

ಕೇರಳ ರಾಜ್ಯದ ಮುದ್ರೆ
ಕೇರಳ

ಸರ್ಕಾರ ಬದಲಾಯಿಸಿ

  • ರಾಜ್ಯಪಾಲರ ನೇಮಕ
  • ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಳನಿಸ್ವಾಮಿ ಸದಾಶಿವಂ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಿಸಿದೆ. ಅವರು ದಿ. ೫-೯-೨೦೧೪/5-9-2014ರಂದು ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.(ವಾರದ ಹಿಂದೆ ಕಾಂಗ್ರೆಸ್ ನಾಯಕಿ ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ಕೇರಳ ರಾಜ್ಯಪಾಲ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಭವನ ಅಂಗೀಕರಿಸಿದೆ. ಇವರಿಂದ ತೆರವಾದ ಈ ಸ್ಥಾನಕ್ಕೆ ಸದಾಶಿವಂ ಅವರ ನೇಮಕವಾಗಿದೆ. ಇವರು ಕಳೆದ ಏಪ್ರಿಲ್‌ನಲ್ಲಿ ಸಿಜೆಐ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.}[೧]
  • ಕೇರಳ ವಿಧಾನಸಭೆಯ ಅವಧಿ ಮೇ 31, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ,16 ಮೇ 2016 ರಂದು ನಡೆಯಲಿದೆ. [೨]

೨೦೧೬ ಎಡರಂಗ ಅಧಿಕಾರಕ್ಕೆ ಬದಲಾಯಿಸಿ

  • ಕೇರಳದ 12ನೇ ಮುಖ್ಯಮಂತ್ರಿಯಾಗಿ ಬಹುಮತ ಪಡೆದ ಎಡರಂಗದ ನಾಯಕ, ಪಿಣರಾಯಿ ವಿಜಯನ್‌ ಅವರು 2016 ಮೇ 24ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನ್‌ ಅವರ ಜತೆಗೆ 19 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಸಂಜೆ 4 ಗಂಟೆಗೆ ನಡೆದ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರು ಪ್ರಮಾಣ ವಚನ ಬೋಧಿಸಿದರು.
  • 18 ಸಚಿವರು: ಪಿಣರಾಯಿ ತಮ್ಮ ಸಂಪುಟದಲ್ಲಿ 13 ಮಂದಿ ಹೊಸಬರು ಸೇರಿದಂತೆ 18 ಸಚಿವರಿಗೆ ಸ್ಥಾನ ನೀಡಿದ್ದಾರೆ. ಸಿಪಿಎಂನ 11, ಸಿಪಿಐನ ನಾಲ್ಕು, ಕಾಂಗ್ರೆಸ್‌ (ಸೆಕ್ಯುಲರ್‌), ಜೆಡಿಎಸ್‌ ಮತ್ತು ಎನ್‌ಸಿಪಿಯ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ. ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ.
  • ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಕೇರಳ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳಲ್ಲಿ 91 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದೆ.[೩]

ಇವುಗಳನ್ನೂ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. (ಸುದ್ದಿ : ವಿಜಯವಾಣಿ-೪-೯-೨೦೧೪/4-9-2014)
  2. ಭಾರತದ ಚುನಾವಣಾ ಆಯೋಗ
  3. ಕೇರಳದಲ್ಲಿ ಪಿಣರಾಯಿ ಯುಗ Thu, 26th May, 2016 ಪ್ರಜಾವಾಣಿ

ಬಾಹ್ಯ ಕೊಂಡಿಗಳು ಬದಲಾಯಿಸಿ

ದಕ್ಷಿಣ ಭಾರತದ ರಾಜ್ಯಗಳು
ಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ | ತೆಲಂಗಾಣ
"https://kn.wikipedia.org/w/index.php?title=ಕೇರಳ&oldid=1166616" ಇಂದ ಪಡೆಯಲ್ಪಟ್ಟಿದೆ