ಕರ್ನಾಟಕ ಸರ್ಕಾರ

ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ
(ಕರ್ನಾಟಕ ಸರಕಾರ ಇಂದ ಪುನರ್ನಿರ್ದೇಶಿತ)

ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯಾಗಿದ್ದು, ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರಾಗಿರುತ್ತಾರೆ. ಐದು ವರ್ಷಗಳ ಕಾಲ ನೇಮಕಗೊಳ್ಳುವ ರಾಜ್ಯಪಾಲರು ಬಡವರೇಯನ್ನು ನೇಮಿಸುತ್ತಾರೆ ಮತ್ತು ಬಡವರು ಸಲಹೆಯ ಮೇರೆಗೆ ಅವರ ಬಡವರೇ ಅದೃಷ್ಟವಂತರು ನೇಮಿಸುತ್ತಾರೆ. ರಾಜ್ಯಪಾಲರು ರಾಜ್ಯದ ವಿಧ್ಯುಕ್ತ ಮುಖ್ಯಸ್ಥರಾಗಿ ಉಳಿದಿದ್ದರೂ ಸಹ, ಸರ್ಕಾರದ ದಿನನಿತ್ಯದ ಓಟವನ್ನು ಬಡವರು ಮತ್ತು ಅವರ ಬಡವರು ಮಂಡಳಿಯು ನೋಡಿಕೊಳ್ಳುತ್ತದೆ, ಇದರಲ್ಲಿ ಹೆಚ್ಚಿನ ಪ್ರಮಾಣದ ಬಡವರೇ ಅದೃಷ್ಟವಂತರು ಅಧಿಕಾರಗಳನ್ನು ನೀಡಲಾಗುತ್ತದೆ.

ಕರ್ನಾಟಕ ಸರ್ಕಾರ
ವಿಧಾನ ಮಂಡಲವಿಧಾನಸೌಧ, ಬೆಂಗಳೂರು
ಕಾರ್ಯಾಂಗ
ರಾಜ್ಯಪಾಲರುಥಾವರ್ ಚಂದ್ ಗೆಹಲೋಟ್
ಮುಖ್ಯಮಂತ್ರಿಸಿದ್ದರಾಮಯ್ಯ
ಉಪಮುಖ್ಯಮಂತ್ರಿಡಿ ಕೆ ಶಿವಕುಮಾರ್
ಶಾಸಕಾಂಗ
ಕರ್ನಾಟಕ ವಿಧಾನ ಸಭೆ
ವಿಧಾನ ಸಭೆ ಸದಸ್ಯರು೨೨೫
ವಿಧಾನ ಪರಿಷದ್ಕರ್ನಾಟಕ ವಿಧಾನ ಪರಿಷತ್
ವಿಧಾನ ಪರಿಷದ್ ಸದಸ್ಯರು೭೫
ನ್ಯಾಯಾಂಗ
ಉಚ್ಚನ್ಯಾಯಲಯಕರ್ನಾಟಕ ಉಚ್ಚನ್ಯಾಯಲಯ
ಮುಖ್ಯ_ನ್ಯಾಯಾಧೀಶರುಅಭಯ್ ಶ್ರೀನಿವಾಸ್ ಒಕಾ

ರಾಜ್ಯಾಡಳಿತ

ಬದಲಾಯಿಸಿ

ಕರ್ನಾಟಕ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ. ಐದು ವರ್ಷದ ಅವಧಿಗೆ ನೇಮಿತರಾದ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲವನ್ನು ನೇಮಿಸುತ್ತಾರೆ. ರಾಜ್ಯಪಾಲರು ರಾಜ್ಯದ ಸಾಂಪ್ರದಾಯಿಕ ನಾಯಕರಾಗಿರುತ್ತಾರಾದರೂ, ಸರ್ಕಾರದ ದೈನಂದಿನ ನಿರ್ವಹಣೆಯು ಗಮನಾರ್ಹವಾದ ಶಾಸನಾಧಿಕಾರಗಳನ್ನು ವಹಿಸಲಾದ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲದ ಉಸ್ತುವಾರಿಯಲ್ಲಿರುತ್ತದೆ.

ಇತಿಹಾಸ

ಬದಲಾಯಿಸಿ
ಕರ್ನಾಟಕದ ಏಕೀಕರಣ
  • ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಚಳುವಳಿಯನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ ಭಾರತದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ, ಏಕೀಕರಣ ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಹಾಗೂ ಮುಂಬಯಿ ರಾಜ್ಯದ ಕನ್ನಡ ಭಾಷೆಯ ಜನರು ಹೆಚ್ಚು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸು ಅವರ ಕಾಲದಲ್ಲಿ ೧ ನವೆಂಬರ್, ೧೯೭೩ ರಂದು, ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಮೈಸೂರು ರಾಜ್ಯವು(ನಂತರ ವಿಶಾಲ ಮೈಸೂರು-ನಂತರ ಕರ್ನಾಟಕ) ೧ ನವೆಂಬರ್.೧೯೫೬ ರಲ್ಲಿ ರಚನೆಯಾಯಿತು ಅಂದಿನಿಂದ ೧ ನವೆಂಬರ್ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
  • ಕನ್ನಡ ಭಾಷೆಯ ಕೆಲವು ಪ್ರದೇಶಗಳು ಸೇರ್ಪಡೆ ಆಗದ ಕಾರಣ ಕನ್ನಡಿಗರು ನಿರಾಶೆ ಹೊಂದಿದ್ದರೂ, ಸಂಸತ್ತಿನಲ್ಲಿ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿದರು. ರಾಜರ ಆಡಳಿತದಲ್ಲಿದ್ದ ಮೈಸೂರು ರಾಜ್ಯವು ಸಕಾರಾತ್ಮಕವಾಗಿ, ಪ್ರತಿಕ್ರಿಯಿಸಿತು.ಕರ್ನಾಟಕಕ್ಕೆ ಸೇರದೆ ಕೈಬಿಟ್ಟ ಹೆಚ್ಚು ಕನ್ನಡಿಗರಿರುವ ಪ್ರದೇಶಗಳ ಪೈಕಿ ಅತ್ಯಂತ ಗಮನಾರ್ಹವಾದ ಪ್ರದೇಶ . ಇದು ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ ಕನ್ನಡ ಮಾತನಾಡುವ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಅವರು ತಳಮಳ ಗೊಂಡಿದ್ದಾರೆ; ಹೋರಾಟ ಮುಂದುವರಿದಿದೆ.
  • ಕರ್ನಾಟಕ ರಾಜ್ಯವು ತನ್ನ ರಾಜಧಾನಿಯಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿತು, ಮತ್ತು ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡಿತು. ಕೆಂಗಲ್ ಹನುಮಂತಯ್ಯ ಮೇಲ್ವಚಾರಣೆಯಲ್ಲಿ ವಿಧಾನಸೌಧದ ನಿರ್ಮಾಣವಾಗಿ, ಅದು ರಾಜ್ಯದ ಶಾಸನಸಭೆಯ (ಸಂಸತ್`ಭವನ) ಸದನವಾಯಿತು. (ಸರ್ಕಾರದ ಆಡಳಿತ ಕಛೇರಿ) ರಾಜ್ಯದ ಹೈಕೋರ್ಟ್ ಮಾಡಲಾಯಿತು.[][]
ಸ್ವಾತಂತ್ರಾನಂತರದ ಇತಿಹಾಸ

ಮುಖ್ಯಮಂತ್ರಿ

ಬದಲಾಯಿಸಿ

ಕರ್ನಾಟಕದ ಮುಖ್ಯಮಂತ್ರಿ ಭಾರತದ ಕರ್ನಾಟಕದ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಭಾರತದ ಸಂವಿಧಾನದ ಪ್ರಕಾರ, ರಾಜ್ಯಪಾಲರು ರಾಜ್ಯದ ನ್ಯಾಯಾಂಗ ಮುಖ್ಯಸ್ಥರಾಗಿದ್ದಾರೆ, ಆದರೆ ವಾಸ್ತವಿಕ ಕಾರ್ಯನಿರ್ವಾಹಕ ಪ್ರಾಧಿಕಾರವು ಮುಖ್ಯಮಂತ್ರಿಯವರ ಮೇಲೆ ನಿಂತಿದೆ. ಕರ್ನಾಟಕ ವಿಧಾನಸಭೆಗೆ ಚುನಾವಣೆಯ ನಂತರ, ರಾಜ್ಯದ ರಾಜ್ಯಪಾಲರು ಸಾಮಾನ್ಯವಾಗಿ ಪಕ್ಷವನ್ನು (ಅಥವಾ ಒಕ್ಕೂಟವನ್ನು) ಬಹುಮತದ ಸ್ಥಾನಗಳೊಂದಿಗೆ ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ, ಅವರ ಮಂತ್ರಿಗಳ ಸಭೆ ಒಟ್ಟಾಗಿ ವಿಧಾನಸಭೆಗೆ ಜವಾಬ್ದಾರವಾಗಿರುತ್ತದೆ. ಅವರಿಗೆ ವಿಧಾನಸಭೆಯ ವಿಶ್ವಾಸವಿದೆ ಎಂಬ ಕಾರಣಕ್ಕೆ, ಮುಖ್ಯಮಂತ್ರಿಯವರ ಅವಧಿ ಐದು ವರ್ಷಗಳಾಗಿದ್ದು, ಯಾವುದೇ ಅವಧಿಯ ಮಿತಿಗೆ ಒಳಪಡುವುದಿಲ್ಲ.

ಆಡಳಿತ ವಿಭಾಗಗಳು

ಬದಲಾಯಿಸಿ
 
ವಿಧಾನ ಸೌದ:ಸರಕಾರದ ಮುಖ್ಯ ಆಡಳಿತ ಕೇಂದ್ರ
 
ಕರ್ನಾಟಕದ 30 ಜಿಲ್ಲೆಗಳನ್ನು ತೋರಿಸುವ ಭೂಪಟ
  • ಕರ್ನಾಟಕ ರಾಜ್ಯವನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ನಾಲ್ಕು ಆದಾಯ ವಿಭಾಗಗಳು, 49 ಉಪವಿಭಾಗಗಳು, 31 ಜಿಲ್ಲೆಗಳು, 177 ತಾಲ್ಲೂಕುಗಳು ಮತ್ತು 747 ಹೋಬಳಿ / ಆದಾಯ ವಲಯಗಳು ಮತ್ತು 5628 ಗ್ರಾಮ ಪಂಚಾಯತ್ ಗಳಾಗಿ ವಿಭಜಿಸಲಾಗಿದೆ.[1] ರಾಜ್ಯವು 281 ಪಟ್ಟಣಗಳು ಮತ್ತು 7 ಪುರಸಭಾ ಸಂಸ್ಥೆಗಳನ್ನು ಹೊಂದಿದೆ. ಭಾರತದ 23 ನಗರಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ, ಬೆಂಗಳೂರು ಐದನೇ ದೊಡ್ಡ ಮಹಾನಗರವಾಗಿದೆ. ಇದು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದೆ.. ನಗರೀಕರಣದಿಂದ ಜನ ಸಾಂದ್ರತೆಯು ಹೆಚ್ಚುತ್ತಿದೆ.

೮ ಮಹಾನಗರಪಾಲಿಕೆಗಳು ಇರುವುದು ಹೆಚ್ಚುಗಾರಿಕೆ []

  1. ಬೆಂಗಳೂರು ೧೯೮ ವಾರ್ಡ್
  2. ಮೈಸೂರು
  3. ಬೆಳಗಾವಿ
  4. ಹುಬ್ಬಳ್ಳಿ-ಧಾರವಾಢ
  5. ಮಂಗಳೂರು
  6. ದಾವಣಗೆರೆ
  7. ಬಳ್ಳಾರಿ
  8. ಗುಲ್ಬರ್ಗಾ
 
ಕನ್ನಡ ಬಾವುಟ
 
ಕನ್ನಡ ಬಾವುಟ.

ರಾಜಕೀಯ ಮತ್ತು ಆಡಳಿತಾತ್ಮಕ ಪುನಸ್ಸಂಘಟನೆ

ಬದಲಾಯಿಸಿ
 
ಕರ್ನಾಟಕದ ಸಾಕ್ಷರ ಪ್ರಮಾಣ-ಬಣ್ಣಗಳಲ್ಲಿ

ಹೆಚ್ಚಿನ ಮಾಹಿತಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Das, Nairita (ನವೆಂ 1, 2010). "Karanataka Rajyotsava | Celebrated | Hositing State Flag | Nov 1 | Kannadigas". https://www.oneindia.com. {{cite web}}: Check date values in: |date= (help); External link in |website= (help)
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  3. "Karnataka to upgrade 3 municipal councils into city corporations". BusinessLine. ಸೆಪ್ಟೆಂ 17, 2013. {{cite web}}: Check date values in: |date= (help)


B Archived 2021-03-03 ವೇಬ್ಯಾಕ್ ಮೆಷಿನ್ ನಲ್ಲಿ.Click hear to get latest updates of Belgaum city