ಮಂಡ್ಯ
ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯವು ಮೈಸೂರು ಮತ್ತು ಬೆಂಗಳೂರು ನಗರಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ.
ಮಂಡ್ಯ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಮಂಡ್ಯ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
17.03 km² - 678 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೧೩೧೨೧೧ - /ಚದರ ಕಿ.ಮಿ. |
Deputy Commissioner | ಡಾ. ಎಂ. ವಿ. ವೆಂಕಟೇಶ್ |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 571401 - +08232 - KA 11 |
ಅಂತರ್ಜಾಲ ತಾಣ: www.mandya.nic.in/ |
ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮(೮೮೭೩೦೭ ಪುರುಷರು, ೮೭೪೪೧೧ ಮಹಿಳೆಯರು). ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿ ವಿಸ್ತರಿಸಿದೆ.
ಜಿಲ್ಲೆಯ ಸಂಕ್ಷಿಪ್ತ ಪರಿಚಯಸಂಪಾದಿಸಿ
ಮಂಡ್ಯ ಜಿಲ್ಲೆಯು 1939ರಲ್ಲಿ ರೂಪುಗೊಂಡಿತು. ಪ್ರಸ್ತುತ ಉತ್ತರಕ್ಕೆ ಹಾಸನ ಮತ್ತು ತುಮಕೂರು ಜಿಲ್ಲೆಗಳಿಂದ, ಪೂರ್ವಕ್ಕೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಿಂದ ಮತ್ತು ಪಶ್ಚಿಮದಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಸುತ್ತುವರಿದಿದೆ. ಮಂಡ್ಯ ಜಿಲ್ಲೆ 7 ತಾಲ್ಲೂಕುಗಳನ್ನು ಒಳಗೊಂಡಿದೆ.
ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶವು 4,98,244 ಹೆಕ್ಟೇರ್ ಆಗಿದೆ. ಅದರಲ್ಲಿ 2,53,067 ಹೆಕ್ಟೇರ್ಗಳು ಬಿತ್ತನೆಯ ಪ್ರದೇಶವನ್ನು ರೂಪಿಸುತ್ತವೆ. ಜಿಲ್ಲೆಯ ಒಟ್ಟು ಭೂ ಪ್ರದೇಶದ ಅರ್ಧಕ್ಕಿಂತಲೂ ಹೆಚ್ಚು ಕೃಷಿಗೆ ಬಳಕೆಯಾಗುತ್ತಿದೆ. 94,779 ಹೆಕ್ಟೇರ್ ಭೂಮಿ ನೀರಾವರಿಗೊಳಪಟ್ಟಿದೆ. 19.25 ಲಕ್ಷದ ಒಟ್ಟು ಜನಸಂಖ್ಯೆಯೊಂದಿಗೆ ಸುಮಾರು 5 ಲಕ್ಷ ಜನರನ್ನು ಕೃಷಿ ವಲಯದಲ್ಲಿ ಕೆಲಸಕ್ಕೆ ತೊಡಗಿದ್ದಾರೆ.
ಉನ್ನತ ಶಿಕ್ಷಣಸಂಪಾದಿಸಿ
- ಮಂಡ್ಯ ವಿಶ್ವವಿದ್ಯಾಲಯ (ಸ್ವಾಯತ್ತ)
- ಸರ್ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ತೂಬಿನಕೆರೆ - ಮೈಸೂರು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ
- ಪಿ. ಇ. ಎಸ್. ಶಿಕ್ಷಣ ಸಂಸ್ಥೆಗಳು:
- ಪದವಿ ಕಾಲೇಜು
- ಇಂಜಿನಿಯರಿಂಗ್ ಕಾಲೇಜು
- ಶಂಕರಗೌಡ ಬಿ. ಎಡ್. ಕಾಲೇಜು
- ಎಂ. ಕಾಂ. ಮತ್ತು ಎಂ. ಬಿ. ಎ. ಕಾಲೇಜು
- ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) - ಮಂಡ್ಯ ವೈದ್ಯಕೀಯ ಕಾಲೇಜು
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಉನ್ನತ ಕೇಂದ್ರ - ಹೊಳಲು ಸರ್ಕಲ್
ಪ್ರೇಕ್ಷಣೀಯ ಸ್ಥಳಗಳುಸಂಪಾದಿಸಿ
- ಟಿಪ್ಪೂ ಅರಮನೆ, ಕೋಟೆಗಳು, ದೇವಸ್ಥಾನಗಳು, ಸಂಗಮ
- ರಂಗನತಿಟ್ಟು
- ಕರಿಘಟ್ಟ
- ಕುಂತಿಬೆಟ್ಟ
- ಮೇಲುಕೋಟೆ
- ಕೊಕ್ಕರೆ ಬೆಳ್ಳೂರು
- ಆದಿ ಚುಂಚನಗಿರಿ
- ಸೋಮನಳ್ಳಮ್ಮ ದೇವಸ್ಥಾನ
- ಹನುಮಂತನಗರ ಆತ್ಮಲಿಂಗೇಶ್ವರ ದೇವಸ್ಥಾನ
- ಹೊಸಹೊಳಲು ದೇವಸ್ಥಾನ
- ಸೋಮನಾಥಪುರ
- ಶಿವನ ಸಮುದ್ರ ಜಲಪಾತ (ಗಗನ ಚುಕ್ಕಿ ಮತ್ತು ಭರಚುಕ್ಕಿ)
- ಮುತ್ತತ್ತಿ
- ಭೀಮೇಶ್ವರಿ
- ಶಿವಪುರದ ಸತ್ಯಗ್ರಹ ಸೌಧ, ಮದ್ದೂರು
- ಕೆರೆ ತೊಣ್ಣೂರು
- ಕೆರಗೋಡು ಪಂಚಲಿಂಗೇಶ್ವರ ದೇವಸ್ಥಾನ
- ಬಸರಾಳು ಮಾಧವರಾಯ ದೇವಸ್ಥಾನ
- ವೈದ್ಯನಾಥೇಶ್ವರ ದೇವಾಲಯ, ವೈದ್ಯನಾಥಪುರ
- ದೇವರ ಮನೆ ಮೂಡಿಗೆರೆ, ಕಾಲಭೈರವೇಶ್ವರ
- ನಂಬಿನಾಯಕನಹಳ್ಳಿ ಪಟ್ಟಲದಮ್ಮನ ದೇವಾಲಯ
- ವರಹನಾಥ ಕಲ್ಲಹಳ್ಳಿ ಲಕ್ಶ್ಮೀ ಭೂವರಹನಾಥ ಸ್ವಾಮಿ ದೇವಸ್ಥಾನ ಕೃಷ್ಣರಾಜಪೇಟೆ
- ಹೇಮಗಿರಿ ಜಲಪಾತ
- ಮಂಡ್ಯ ಕೊಪ್ಪಲು - ಕಾವೇರಿ ಬೋರೇದೇವರ ದೇವಸ್ಥಾನ
- ಕುರುಬರ ಬಸ್ತಿ - ೧೯ ಅಡಿಯ ಜೈನ ಮಂದಿರ ಬಾಹುಬಲಿ ವಿಗ್ರಹ, ಕೃಷ್ಣರಾಜಪೇಟೆ.
ತಾಲ್ಲೂಕುಗಳುಸಂಪಾದಿಸಿ
ಪ್ರಮುಖ ವ್ಯಕ್ತಿಗಳುಸಂಪಾದಿಸಿ
- ಸಿಂಗರಾರ್ಯ - ಕನ್ನಡದ ಮೊದಲ ನಾಟಕಕಾರ
- ಬಿ.ಎಂ.ಶ್ರೀಕಂಠಯ್ಯ - ಕವಿ
- ತ್ರಿವೇಣಿ - ಕಾದಂಬರಿಗಾರ್ತಿ
- ಮಂಡ್ಯ ರಮೇಶ್ - ಚಿತ್ರ ನಟ
- ಎ.ಎನ್.ಮೂತಿ೯ರಾವ್ - ಸಾಹಿತಿ
- ಕೆ.ಎಸ್.ನರಸಿಂಹಸ್ವಾಮಿ - ಕವಿ
- ಅರ್ಚಕ ಬಿ.ರಂಗಸ್ವಾಮಿ -ಜಾನಪದ ವಿದ್ವಾಂಸ
- ಕೆ. ವಿ. ಶಂಕರಗೌಡ - ಮಾಜಿ ಸಂಸದ, ಮಾಜಿ ಶಿಕ್ಷಣ ಸಚಿವ, ಲೇಖಕ, ಶಿಕ್ಷಣತಜ್ಞ
- ಜಿ. ಮಾದೇಗೌಡ - ಮಾಜಿ ಸಂಸದ
- ಬಿ.ಎಸ್.ಯಡಿಯೂರಪ್ಪ - ಮುಖ್ಯಮಂತ್ರಿ ಕರ್ನಾಟಕ ಸರ್ಕಾರ
- ಪು.ತಿ.ನರಸಿಂಹಾಚಾರ್ - ಕವಿ
- ಸುಜನಾ - ವಿಮರ್ಶಕ, ಕವಿ
- ಪ್ರೇಂ - ಚಿತ್ರ ನಿರ್ದೇಶಕ
- ಕೇಸರಿ ಹರವು - ಚಿತ್ರ ನಿರ್ದೇಶಕ
- ಹರವು ದೇವೇಗೌಡ - ಪತ್ರಕರ್ತ, ಬರಹಗಾರ, ಸಾಂಸ್ಕೃತಿಕ ಸಂಘಟಕ
- ನಾಗತಿಹಳ್ಳಿ ಚಂದ್ರಶೇಖರ್ - ಚಿತ್ರ ನಿರ್ದೇಶಕ, ಬರಹಗಾರ
- ಬೆಸಗರಹಳ್ಳಿ ರಾಮಣ್ಣ - ಸಾಹಿತಿ
- ಹಂಸಲೇಖ - ಚಲನಚಿತ್ರ ಸಂಗೀತ ನಿರ್ದೇಶಕ
- ಜಯಲಲಿತಾ - ಮಾಜಿ ಮುಖ್ಯಮಂತ್ರಿ, ತಮಿಳುನಾಡು
- ಜಯಲಕ್ಷ್ಮಿ ಸೀತಾಪುರ - ಲೇಖಕಿ, ಜಾನಪದ ತಜ್ಞೆ
- ಆರ್ಯಾಂಬ ಪಟ್ಟಾಭಿ - ಕಾದಂಬರಿಗಾರ್ತಿ
- ರೂಪ ಅಯ್ಯರ್ - ನಟಿ, ನಿದೇ೯ಶಕಿ
- ಅಜು೯ನ್ - ಚಿತ್ರ ನಿರ್ದೇಶಕ
- ಜೋಸೈಮನ್ - ಚಲನಚಿತ್ರ ನಿರ್ದೇಶಕ
- ಅ.ರಾ.ಮಿತ್ರ- ಹಾಸ್ಯ ಬರಹಗಾರ
- ಸಂದೇಶ್ ನಾಗರಾಜು - ಚಿತ್ರ ನಿರ್ಮಾಪಕ, ರಾಜಕಾರಣಿ
- ಕೆ. ಎಸ್. ಎಲ್. ಸ್ವಾಮಿ - ನಟ, ನಿರ್ದೇಶಕ, ನಿರ್ಮಾಪಕ, ಗಾಯಕ
- ಎಚ್. ಎಲ್. ಎನ್. ಸಿಂಹ - ರಂಗಕರ್ಮಿ, ಚಲನಚಿತ್ರ ನಿರ್ದೇಶಕ
- ಚಂದಗಾಲು ಬೋರಪ್ಪ - ಜನಪದ, ತತ್ತ್ವಪದ ಗಾಯಕ
- ರವಿಶಂಕರ್ - ಚಿತ್ರ ನಟ
- ಸತೀಶ್ ನೀನಾಸಂ - ಚಿತ್ರ ನಟ
- ರತ್ನಜ - ಚಿತ್ರ ನಿರ್ದೇಶಕ
- ಅಂಬರೀಷ್ - ಚಲನಚಿತ್ರ ನಟ, ಮಾಜಿ ಶಾಸಕ, ಸಂಸದ ಮತ್ತು ಸಚಿವ
- ಎಂ. ಶ್ರೀನಿವಾಸ್ - ಶಾಸಕರು
ಹೊಳೆ/ನದಿಗಳುಸಂಪಾದಿಸಿ
ಕೃಷಿಸಂಪಾದಿಸಿ
ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ. ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಕಬ್ಬು, ಬತ್ತ, ರಾಗಿ, ತೆಂಗು, ಅವರೆ, ಅಲಸಂದೆ, ಹುಚ್ಚೆಳ್ಳು, ವಾಣಿಜ್ಯ ಬೆಳೆ ರೇಷ್ಮೆ, ಮುಂತಾದವು. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯ "ಸಕ್ಕರೆಯ ಜಿಲ್ಲೆ ", "ಮಧುರ ಮಂಡ್ಯ" ಎನಿಸಿಕೊಂಡಿದೆ.
ಬಾಹ್ಯ ಅಂತರಜಾಲ ತಾಣಗಳುಸಂಪಾದಿಸಿ
ವಿಕಿಮೀಡಿಯ ಕಣಜದಲ್ಲಿ Mandya ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
ವಿಕಿಮೀಡಿಯ ಕಣಜದಲ್ಲಿ Mandya district ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |