ಶಕುನಿ ಮಹಾಭಾರತದ ಬಹಳ ಪ್ರಮುಖ ಪಾತ್ರ. ಶಕುನಿಯು ಕೌರವರ ಸೋದರಮಾವ, ಅಂದರೆ ಗಾಂಧಾರಿಯ ೧೦೦ ಮಂದಿ ಅಣ್ಣಂದಿರಲ್ಲಿ ಕೊನೆಯವನು. ಮಹಾಭಾರತದ ಯುದ್ದಕ್ಕೆ ಮತ್ತು ಕೌರವರ ನಾಶಕ್ಕೆ ಈ ಶಕುನಿಯೇ ಕಾರಣ. ದುರ್ಯೋಧನನು ಚಿಕ್ಕವನಿದ್ದಾಗ ತಮ್ಮಗಳ ಪ್ರೀತಿಯ ತಂಗಿ 'ಗಾಂಧಾರಿ'ಯನ್ನು ನೋಡಲು ೧೦೦ ಸಹೋದರರು ಹಸ್ತಿನಾವತಿಗೆ ಬರುತ್ತಾರೆ. ಹಾಗೆ ಬರುವಾಗ ದಾರಿಯಲ್ಲಿ ಒಂದು ಗರಿಕೆಯ ಹುಲ್ಲು ಎಡವಿ ಶಕುನಿಯ ಸಹೋದರರಲ್ಲೊಬ್ಬ ಕೆಳಗೆ ಬೀಳುತ್ತಾನೆ, ಸಿಟ್ಟಿಗೆದ್ದ ಆ ಸಹೋದರರು ಆ ಗರಿಕೆಯ ಮೂಲ ಬೇರನ್ನು ಹುಡುಕಿ ಅಗೆದು ತೆಗೆದು ಸುಟ್ಟು ಹಾಕುತ್ತಾರೆ. ಇದನ್ನು ಕಂಡ ದುರ್ಯೊಧನನು, ಇವರನ್ನು ಬಿಟ್ಟರೆ ತನಗೂ ತೊಂದರೆ ತಪ್ಪಿದ್ದಲ್ಲ ಎಂದೆಣಿಸಿ ಆ ೧೦೦ ಮಂದಿಯನ್ನು ಕಾರಗೃಹಕ್ಕೆ ತಳ್ಳಿ, ಅವರೆಲ್ಲರಿಂದ ಕೇವಲ ಒಂದು ಹಿಡಿ ಅನ್ನ ನೀಡುತ್ತಿರುತ್ತಾನೆ. ಇದರಿಂದ ಕೋಪಗೊಂಡ ಆ ಸಹೋದರರು ಆ ಒಂದು ಹಿಡಿ ಅನ್ನವನ್ನು ಬಹಳ ಬುದ್ದಿವಂತನಾದ ತಮ್ಮ ಕಿರಿಯ ಸಹೋದರ ಶಕುನಿಗೆ ನೀಡಿ ಕೌರವರ ವಿರುದ್ದ ಸೇಡು, ಪ್ರತೀಕಾರ ತೀರಿಸಿಕೊಳ್ಳುವಂತೆ ಮಾತು ತೆಗೆದುಕೊಂಡು ಅವರೆಲ್ಲರು ಸಾಯುತ್ತಾರೆ. ನಂತರ ಶಕುನಿಯು ಕೌರವರ ಪಕ್ಷ ಸೇರಿ ಅವರ ನಾಶಕ್ಕೆ ಕಾರಣನಾಗುವುದಲ್ಲದೆ ಮಹಾಭಾರತ ಯುದ್ದದಲ್ಲಿ ತಾನು ಸಹ ಸಹದೇವನಿಂದ ಹತನಾಗಿ ಸಾಯುತ್ತಾನೆ.

ಚಿತ್ರ:Shakuni is master of Dice Game.jpg
Shakuni is master of Dice Game
ಶಕುನಿ
ಚಿತ್ರ:Shakuni Mahabharata.jpg
Shakuni as represented in Kathakali Dance Form
ಗಾಂಧಾರದ( ಈಗಿನ ಅಫ್‍ಘಾನಿಸ್ತಾನ} ರಾಜ
ಆಳ್ವಿಕೆ ಮಹಾಭಾರತದ ಕಾಲ
ಪೂರ್ವಾಧಿಕಾರಿ ರಾಜ ಸುಭಲ
ಉತ್ತರಾಧಿಕಾರಿ ಶಕುನಿಯ ಮಗ
ಸಂತಾನ
ಉಲೂಕ ಮತ್ತು ವೃಕಾಸುರ.
ಮನೆತನ ಸೂರ್ಯ ವಂಶ
ತಂದೆ ರಾಜ ಸುಭಲ
ತಾಯಿ ರಾಣಿ ಸುಧರ್ಮ
ಜನನ ಗಂಧಾರ
ಮರಣ ಕುರುಕ್ಷೇತ್ರ
ಧರ್ಮ ಹಿಂದೂ ಧರ್ಮ
ಶಕುನಿ
"https://kn.wikipedia.org/w/index.php?title=ಶಕುನಿ&oldid=578814" ಇಂದ ಪಡೆಯಲ್ಪಟ್ಟಿದೆ