ಕಣಚೂರು :

ಕಣಚೂರು :

ಕಣಚೂರು ಎಂಬ ಗ್ರಾಮವು , ಹಂತೂರು ಅಂಚೆ , ಗೋಣಿಬೀಡು ಹೋಬಳಿ ,ಮೂಡಿಗೆರೆ ತಾಲ್ಲೂಕು ,ಚಿಕ್ಕಮಗಳೂರು ಜಿಲ್ಲೆಯಲ್ಲಿದೆ .

ಊರಿಗೆ ಹೆಸರು ಬರಲು ಕಾರಣ ಹಾಗೂ ಊರಿನ ಇತಿಹಾಸ: ಕಣಚೂರು ಎಂಬ ಹೆಸರು ಈ ಊರಿಗೆ ಬರಲು ಕಾರಣ “ ಕಣ್ಮ ಮಹಾ ಋಷಿ ತಪಸ್ಸು ಮಾಡಿದ ಸ್ಥಳ ” ಈ ಕಾರಣದಿಂದ ಕಣಚೂರು ಎಂಬ ಹೆಸರು ಈ ಊರಿಗೆ ಬಂದಿದೆ. ಹಾಗೇ ಕಣ್ಮ ಋಷಿ ತಪಸ್ಸು ಮಾಡಿರುವ ಸ್ಥಳದಲ್ಲಿ ಸಪ್ತ ಗುಡಿಗಳು ( ಏಳು ಸಣ್ಣ ಗುಡಿಗಳು ) ಇವೆ.

ಈ ಊರಿನಲ್ಲಿ  ಹೊಯ್ಸಳ ಕಾಲದಲ್ಲಿ ಶಿಲೆಯಲ್ಲಿ ಕೆತ್ತಿದ ಶಾಸನ ಕಲ್ಲು ಗಳಿವೆ , ಮಾಸ್ತಿ ಕಲ್ಲು ವೀರಕಲ್ಲು ಗಳಿವೇ.

ವರ್ಷಕ್ಕೊಮ್ಮೆ ನಡೆಯುವಂತಹ ಸುಗ್ಗಿ ಉತ್ಸವ ದಲ್ಲಿ ದೇವರನ್ನ(ದಾಳಮ್ಮ, ಕುಮಾರಸ್ವಾಮಿ)ಯನ್ನು ಉಯ್ಯಾಲೆ ತೊಟ್ಟಿಲು ಮೇಲೆ ಕೂರಿಸಿ ಉಯ್ಯಾಲೆ ಪದ, ಜಾನಪದ ಹಾಡುಗಳು ಹಾಡುತ್ತಾರೆ.

ದೇವಾಲಯಗಳು : ರಾಮೇಶ್ವರ ದೇವಸ್ಥಾನ  ,ಕಲ್ಲೇಶ್ವರ  ದೇವಸ್ಥಾನ , ಮಾಳಮ್ಮ ದೇವಸ್ಥಾನ ಹಾಗೂ ದುರ್ಗಪರಮೇಶ್ವರಿ ದೇವಾಲಯಗಳಿವೆ.

ಕೃಷಿ :  • ಈ ಊರಿನಲ್ಲಿ ಕಾಫಿ ಬೆಳೆಯುತ್ತಾರೆ ಕಾಫಿಯಲ್ಲಿ ರೊಬಸ್ಟಾ ,ಅರೇಬಿಕಾ, ಕಾವೇರಿ ಹೇಮಾವತಿ ಮತ್ತು ಚಂದ್ರಗಿರಿ ಈ ಬಗೆಯ ಕಾಫಿ ಬೆಳೆಯುತ್ತಾರೆ .

ಕಾಳು ಮೆಣಸು ಬೆಳೆಯುತ್ತಾರೆ

ಅಡಿಕೆ ಬೆಳೆಯುತ್ತಾರೆ,ಅಡಿಕೆಯಲ್ಲಿ ಮಂಗಳ ಮತ್ತು ನಾಟಿ  ಬಗೆಯ ಅಡಿಕೆ ಬೆಳೆಯುತ್ತಾರೆ.

ಭತ್ತ ಬೆಳಯುತ್ತಾರೆ ಭತ್ತ ದಲ್ಲಿ ತುಂಗಾ ಭತ್ತ ,ರಾಜಮುಡಿ, ಬಾಂಗ್ಲಾ ಭತ್ತ ,ದಪ್ಪ ಭತ್ತ , ಕೆಂಪು ಭತ್ತ ಬೆಳಯುತ್ತಾರೆ.

ತರಕಾರಿ ಬೀನ್ಸ್, ಸೌತೆಕಾಯಿ, ಆಲ್ಸೊಂಡೆ ಕಾಯಿ, ತೊಂಡೆಕಾಯಿ, ಹೀರೆಕಾಯಿ, ಆಗಲಕಾಯಿ, ಹಸಿರು ಮೆಣಸಿನ ಕಾಯಿಯನ್ನು ಬೆಳೆಯುತ್ತಾರೆ.



ಹೋಬಳಿಗಳು ಬದಲಾಯಿಸಿ

‍ ( ಬಿಳಗುಳ: ಇದು ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ. ಮೂಡಿಗೆರೆ ಪಟ್ಟಣದಿಂದ ೧ ಕಿ.ಮೀ.) ಇಲ್ಲಿ ಮೀನುಗಾರಿಕೆ ಇಲಾಖೆ ಇದೆ.

ಇತಿಹಾಸ ಸ್ಥಳಗಳು ಬದಲಾಯಿಸಿ

  • ದೇವವೃಂದ
  • ಜಾವಳಿ -ಹೇಮವತಿ ನದಿ ಉಗಮ ಸ್ಥಳ ಹಾಗೂ ಗಣಪತಿ ದೇವಾಲಯ.
  • ಸೊಮನಕಾಡು - ಅಣ್ಣಪ್ಪ ಸ್ವಾಮಿ ದೇವಾಲಯ.
  • ದೇವರ ಮನೆ - ಇದು‌ ಮೂಡಿಗೆರೆ ತಾಲೂಕಿನ ಬಣಕಲ್ ಬಳಿಯಿದೆ.

ಅಂಗಡಿ:-ಹೊಯ್ಸಳರ ಉಗಮಸ್ಥಾನ, ಜನ್ನಾಪುರದಿಂದ 7ಕಿಮಿ ದೂರದಲ್ಲಿದೆ ದೇವವೃಂದ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿಯಂದು ಜಾತ್ರಾ ಮಹೋತ್ಸವ ನಡೆಯುತ್ತದೆ.

ಪ್ರವಾಸಿ ತಾಣ  ಬದಲಾಯಿಸಿ

  1. ದೇವರ ಮನೆ ಸುಮಾರು ಮೂಡಿಗೆರೆಯಿಂದ  ೨೦ ಕಿ.ಮೀ ದೂರದಲ್ಲಿರುವ ದೇವರಮನೆ ಪ್ರಕೃತಿಯ ತಾಣವಾಗಿದೆ. ಇಲ್ಲಿ ಕಾಲಭೈರವೇಶ್ವರ ದೇವರ ಸನ್ನಿಧಿ ಪ್ರಸಿದ್ಧಿಯಾಗಿದೆ.
  2. ಶ್ರೃಂಗೇರಿ
  3. ಹೊರನಾಾಡು
  4. ಮಲಯಮಾರುತ
  5. ಎತ್ತಿನ ಭುಜ ಚಾರ್ಮಾಡಿ ಘಾಟ್ ಅನೇಕ ಪಶ್ಚಿಮ ಘಟ್ಟಗಳ ಜಾಗಗಳಲ್ಲಿ ಒಂದು. ಎತ್ತಿನ ಭುಜವು 1300 ಮೀ (4,265 ಅಡಿ) ಎತ್ತರದಲ್ಲಿರುವ ಚಾರ್ಮಾಡಿ ಶ್ರೇಣಿಯ ಒಂದು ಭಾಗವಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿದೆ.

ಶಾಲೆಗಳು ಮತ್ತು ಕಾಲೇಜುಗಳು ಬದಲಾಯಿಸಿ