ಧೀರಶಂಕರಾಭರಣ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
Compositions | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಖಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಧೀರಶಂಕರಾಭರಣ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೨೯ನೇ ರಾಗ. ಈ ರಾಗವು ಶಂಕರಾಭರಣ ಎಂದು ಜನಬಳಕೆಯಲ್ಲಿದೆ. ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ 'ಧೀರ' ಎಂಬ ಮುಂಪ್ರತ್ಯಯವನ್ನು ಸೇರಿಸಿ ಧೀರಶಂಕರಾಭರಣ ಎಂಬ ಹೆಸರನ್ನು ಬಳಸುತ್ತಾರೆ. ಶಂಕರಾಭರಣ ರಾಗವು ಕರುಣಾ ರಸ ಭಕ್ತಿ ಪ್ರಧಾನ ರಾಗ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಬಿಲಾವಲ್ ರಾಗಕ್ಕೆ ಸಮಾನವಾಗಿದೆ.
ರಾಗ ಲಕ್ಷಣ ಮತ್ತು ಸ್ವರೂಪಸಂಪಾದಿಸಿ
ಜಂಟೀಸ್ವರ ಪ್ರಯೋಗಗಳು, ದಾಟುಸ್ವರ ಪ್ರಯೋಗಗಳು ಈ ರಾಗದಲ್ಲಿ ವಿಶೇಷವಾಗಿ ಕಂಡು ಬರುತ್ತವೆ. ಸರ್ವಕಾಲಿಕರಾಗ, ತ್ರಿಸ್ಥಾಯಿಯಲ್ಲಿ ಹಾಡಬಹುದು. ಸರ್ವಸ್ವರ ಮೂರ್ಛನಕಾರಕ ರಾಗ. ರಚನೆಗಳನ್ನು ಷಡ್ಜ, ಗಾಂಧಾರ, ಮಧ್ಯಮ ಮತ್ತು ತಾರಷಡ್ಜಗಳಲ್ಲಿ ಪ್ರಾರಂಭಿಸಬಹುದು.
ಈ ರಾಗದ ಆರೋಹಣ ಮತ್ತು ಅವರೋಹಣದ ಸ್ವರಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೩ ಮ೧ ಪ ದ೨ ನಿ೩ ಸ'
ಅವರೋಹಣ ಸ' ನಿ೩ ದ೨ ಪ ಮ೧ ಗ೩ ರಿ೨ ಸ
ಜನ್ಯ ರಾಗಗಳುಸಂಪಾದಿಸಿ
ಈ ರಾಗದಲ್ಲಿ ಅತ್ಯಂತ ಜನಪ್ರಿಯ ರಾಗಗಳಾದ ಆರಭಿ, ಅಠಾಣ, ಬಿಲಹರಿ, ಹಂಸಧ್ವನಿ, ಶುದ್ಧ ಸಾವೇರಿ ಮತ್ತು ದೇವಗಾಂಧಾರಿ ಜನ್ಯವಾಗಿವೆ.
ಜನಪ್ರಿಯ ರಚನೆಗಳುಸಂಪಾದಿಸಿ
ಈ ರಾಗದಲ್ಲಿರುವ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ಸ್ವರರಾಗಸುಧಾ | ತ್ಯಾಗರಾಜರು | ||
ಕೃತಿ | ಅಕ್ಷಯಲಿಂಗವಿಭೋ | ಮುತ್ತುಸ್ವಾಮಿ ದೀಕ್ಷಿತರು | ||
ಕೃತಿ | ಮನಸು ಸ್ವಾಧೀನ | ತ್ಯಾಗರಾಜರು | ||
ಕೃತಿ | ಪೋಗದಿರೆಲೋ ರಂಗ | ಪುರಂದರದಾಸರು |
ಉಲ್ಲೇಖಗಳುಸಂಪಾದಿಸಿ
1) ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ.