ಸರೋಜಿನಿ ಚವಲಾರ ಇವರು ೧೯೪೫ ಸಪ್ಟಂಬರ ೨೧ರಂದು ರುದ್ರಾಪುರದಲ್ಲಿ ಜನಿಸಿದರು. ೧೯೬೫ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಕಲಾವಿಭಾಗದಲ್ಲಿ ಪದವಿಯನ್ನು ಹಾಗು ೧೯೬೮ರಲ್ಲಿ ಧಾರವಾಡಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಹುಬ್ಬಳ್ಳಿಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾದರು. ೧೯೮೨ರಲ್ಲಿ ಪಿಎಚ್. ಡಿ ಪದವಿ ಸಂಪಾದಿಸಿದರು.ಅದೇ ಕಾಲೇಜಿನಲ್ಲಿ ೧೯೭೬ರಿಂದ ಪ್ರವಾಚಕಿ ಹಾಗೂ ೧೯೮೪ರಿಂದ ಪ್ರಾಧ್ಯಾಪಕಿಯಾಗಿದ್ದಾರೆ.

ಸಾಂಸ್ಕೃತಿಕ ಸಾಧನೆ ಬದಲಾಯಿಸಿ

ಸರೋಜಿನಿ ಚವಲಾರರು ೧೯೮೩ರಲ್ಲಿ ‘ಸ್ಪಂದನ’ ಎನ್ನುವ ಸಾಂಸ್ಕೃತಿಕ ಆಂದೋಲನವನ್ನು ಪ್ರಾರಂಭಿಸಿ, ತನ್ಮೂಲಕ ವಿಚಾರ ಸಂಕಿರಣ, ಸಾಹಿತ್ಯಕ ಕಮ್ಮಟ ಮೊದಲಾದವುಗಳನ್ನು ಆಯೋಜಿಸಿದರು.

೧೯೮೫ರಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘವನ್ನು ಸ್ಥಾಪಿಸಿದರು. ೧೯೯೩ರಲ್ಲಿ ಅಲಹಾಬಾದದ ‘ಭಾಷಾ ಸಂಗಮ’ದ ಕರ್ನಾಟಕ ಶಾಖೆಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದರು.

ಸಾಹಿತ್ಯ ಬದಲಾಯಿಸಿ

ಕವನ ಸಂಕಲನ ಬದಲಾಯಿಸಿ

  • ಸಸ್ಯ ಶ್ಯಾಮಲೆ!
  • ರಕ್ತಬೀಜಾಸುರರ ನಡುವೆ

ವೈಚಾರಿಕ ಬದಲಾಯಿಸಿ

  • ಪಾಶ್ಚಾತ್ಯ ವಿಮರ್ಶೆಯ ರೂಪುರೇಷೆಗಳು
  • ಪಾಶ್ಚಾತ್ಯ ಕಾವ್ಯಾವಲೋಕನ
  • ಸಮಾಹಿತ (ಲೇಖನ ಸಂಕಲನ)
  • ಪಾಶ್ಚಾತ್ಯ ಸಾಹಿತ್ಯ ಮಾರ್ಗ
  • ಅಂತರ್ಜಾತಿ ವಿವಾಹ
  • ಸನೂತನ
  • ಸನಾತನ
  • ಪುರುಷ ಕಾದಂಬರಿಕಾರರಲ್ಲಿ ಶೋಷಿತ ಮಹಿಳಾ ಪಾತ್ರಗಳು
  • ಆಧುನಿಕ ಕನ್ನಡ ಕಾವ್ಯಗಳಲ್ಲಿ ಮೂಡಿರುವ ಶಿಶು ಗೀತೆಗಳು
  • ಅಂತರಜಾತೀಯ ವಿವಾಹಗಳು ಎದುರಿಸುವ ಆಹ್ವಾನ ಮತ್ತು ಇತರ ಲೇಖನಗಳು
  • ವಿಧಿ-ಆಸೆ-ಎರಡು ಹಿಡಿ ಮಣ್ಣು


ಪರಿಚಯ/ ಚರಿತ್ರೆ ಬದಲಾಯಿಸಿ

  • ಕ್ರಿಯಾಶೀಲ ಶಿವಶರಣಿಯರು
  • ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು
  • ಜಯದೇವಿ ತಾಯಿಯವರು
  • ಜಯದೇವಿ ತಾಯಿ ಲಿಗಾಡೆ:ಬದುಕು ಬರಹಗಳ ಸಮಗ್ರ ಅಧ್ಯಯನ
  • ಸಮರ ಸಮೀರ
  • ಕುಂಬಾರ ಗುಂಡಯ್ಯ
  • ಸಾಹಿತ್ಯಶ್ರೀ

ಸಂಪಾದನೆ ಬದಲಾಯಿಸಿ

  • ನೀಲಮ್ಮನ ವಚನಗಳು
  • ಚಿರ ಚೇತನ
  • ದಿಗ್ವಿಜಯ

ರೇಡಿಯೊ ರೂಪಕ ಬದಲಾಯಿಸಿ

  • ಸಮ್ಮುಖ

ಇತರ ಬದಲಾಯಿಸಿ

  • ಬೈಲಹೊಂಗಲ ತಾಲೂಕು ದರ್ಶನ

ಸನ್ಮಾನ ಬದಲಾಯಿಸಿ

ಸರೋಜಿನಿ ಚವಲಾರ ಇವರು ಕರ್ನಾಟಕ ರಾಜ್ಯ ಸಮಾಜಕಲ್ಯಾಣ ಸಲಹಾ ಮಂಡಳಿಯ ಸ್ವದಸ್ಯರಾಗಿ ನಾಮಕರಣಗೊಂಡು ಸೇವೆ ಸಲ್ಲಿಸಿದ್ದಾರೆ.


ಸರೋಜಿನಿ ಚವಲಾರ ಇವರ ಕವನ ಸಂಕಲನ "ರಕ್ತಬೀಜಾಸುರರ ನಡುವೆ" ಈ ಕೃತಿಗೆ ೨೦೦೬ ಅಕ್ಟೋಬರದಲ್ಲಿ ಅಮರಾವತಿ(ಮಹಾರಾಷ್ಟ್ರ)ಯಲ್ಲಿ ನಡೆದ ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಲಾಗಿದೆ.


ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದವರು ಇವರಿಗೆ "ಸುವರ್ಣ ಕರ್ನಾಟಕ ಕನ್ನಡಿಗ" ಪ್ರಶಸ್ತಿಯನ್ನು ಕಾಸರಗೋಡಿನಲ್ಲಿ ಡಿಸೆಂಬರ ೨೦೦೬ರಲ್ಲಿ ಜರುಗಿದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನಿಸಿದ್ದಾರೆ.