ನಮಸ್ಕಾರ Vasavi vasudevi


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Palagiri (talk) ೧೩:೦೪, ೨೧ ಜನವರಿ ೨೦೧೫ (UTC)

ಕಲೆ ಸಂಸ್ಕೃತಿ ಸಾಹಿತ್ಯವನ್ನು ಒಳಗೊಂಡ ಚಿಕ್ಕಮಗಳೂರು ಬದಲಾಯಿಸಿ

                                 ಕಲೆ ಸಂಸ್ಕೃತಿ ಸಾಹಿತ್ಯವನ್ನು ಒಳಗೊಂಡ ಚಿಕ್ಕಮಗಳೂರು

ಚಿಕ್ಕ ಮಗಳೂರು ನೋಡಲು ಬಹಳ ಸುಂದರವಾದ ಪ್ರದೇಶವಾಗಿದೆ. ಅಲ್ಲಿನ ಜನರು ಮಾತಾಡುವುದು ಒರಟಾದರು ಮನಸ್ಸು ತುಂಬಾ ಮೃದುವಾಗಿರುತ್ತದೆ. ಅಲ್ಲಿನ ವಾತಾವರಣಾನ್ನು ನೋಡಲು ಎರಡು ಕಣ್ಣು ಸಾಲದು. ಯಾವಾಗಲೂ ಮೋಡ ಆವೃತ ಪ್ರದೇಶವಾಗಿದೆ. ಅಲ್ಲಿನ ಜನರು ಹೆಚ್ಚಾಗಿ ಕಾಫಿಯನ್ನು ಬೆಳೆಯುತ್ತಾರೆ. ಅಲ್ಲಿನ ಪ್ರದೇಶಕ್ಕೆ ಆ ಬೆಳೆಯು ಚೆನ್ನಾಗಿ ಬರುತ್ತದೆ. ಪ್ರಸಿದ್ಧ ಪ್ರವೇಶ ತಾಣವೆಂದರೆ ಕುದುರೆಮುಖ ರಂಗನತಿಟ್ಟು ಮುಂತಾದವುಗಳನ್ನು ನಾವು ಕಾಣಬಹುದು. ಅಲ್ಲಿನ ಮೋಡ ನಿರ್ಮಿತ ಪ್ರದೇಶವನ್ನು ನೋಡಲು ಎರಡು ಕಣ್ಣು ಸಾಲದು. ಅಲ್ಲಿನ ಜನರು ಕೊಡುವ ಉಪಚಾರ ಆತಿಥ್ಯವನ್ನು ಕಂಡರೆ ಹಿಂತಿರುಗಿ ಬರುವ ಮನಸ್ಸೇ ಬರುವುದಿಲ್ಲ. ಇಲ್ಲಿನ ಹಕ್ಕಿಯ ಹಾಡಿಗೆ ಜೊತೆಗೂಡುವ ಕೆಮ್ಮಣ್ಣು ಗುಂಡಿಯ ಮಾರ್ಗದ ಅಬ್ಬೆ ಜಲಪಾತ ಹಾಗೂ ಮಾಣಿಕ್ಯಧಾರಾ ಜಲಪಾತಗಳು ರುದ್ರ ರಮಣಿಯ. ದಕ್ಷಿಣ ಭಾರತದಲ್ಲಿ ಎತ್ತರವಾದ ಶಿಖರ ಎಂಬ ಕೀರ್ತಿಗೆ ಪಾತ್ರವಾಗಿರುವ ಮುಳ್ಳಿಯ್ಯನಗಿರಿ ಚಾರಣ ಹವ್ಯಾಸಕ್ಕೆ ಉತ್ತಮ ಸ್ಥಳವಾಗಿದೆ. ದತ್ತಾತ್ರೇಯ ಪೀಠ(ಬಾಬಾ ಬುಡನ್ ಗಿರಿ) ಎಂಬ ಸ್ಥಳವು ದೇಶದ ನಾನಾ ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಅಪ್ರತಿಮ ಕನ್ನಡ ಸಾಹಿತ್ಯದ ಕವಿ ಪೂರ್ಣ ಚಂದ್ರ ತೇಜಸ್ವಿಯವರ ಮನೆಯು ಸಹ ಇಲ್ಲೆಯಾಗಿದೆ.

ಶಿಕ್ಷಣ ಬದಲಾಯಿಸಿ

ವಿದ್ಯೆಯು ಮಾನವನ ಮುಖ್ಯ ಅಂಗವಾಗಿದೆ. ಈಗಿನ ಕಾಲದಲ್ಲಿ ವಿದ್ಯೆ ಇಲ್ಲದೆ ಏನು ಮಾಡಲಾಗುವುದಿಲ್ಲ. ವಿದ್ಯೆ ಎಂದರೆ ಬರೀ ಪುಸ್ತಕದ ಬದನೆಕಾಯಿಯಲ್ಲ. ಹಿರಿಯ ಕಿರಿಯರಿಗೆ ಗೌರವದಿಂದ ಮಾತನಾಡಿಸುವುದು, ಶಿಸ್ತಿನಿಂದ ಇರುವುದು, ಬರೀ ಪಾಸ್ ಆಗುವ ಒಂಏ ರೀತಿಯಿಂದ ಹಗಲು ರಾತ್ರಿ ನಿದ್ದೆ ಬಿಟ್ಟು ಓದಿ ಅದನ್ನು ಬರೆದು ಬಂದ ನಂತರ ಓದಿದನ್ನು ಬರೆಯುವುದು, ಅದು ಸುಮ್ಮನೆ ವ್ಯರ್ಥ. ನೀನು ಪರೀಕ್ಷೆಯಲ್ಲಿ ನೂರಕ್ಕೆ ನೂರು ತೆಗೆದು ಜೀವನವನ್ನು ಹೇಗೆ ನಡೆಸಬೇಕೆಂದು ಗೊತ್ತಿಲ್ಲದಿದ್ದರೆ ಅಷ್ಟು ಅಂಕಗಳು ವ್ಯರ್ಥ. ಕೇವಲ ಪುಸ್ತಕಕ್ಕೆ ಅಂಟಿಕೊಳ್ಳದೆ, ಎಲ್ಲಾ ರೀತಿಯ ವಿಷಯಗಳನ್ನು ಗಳಿಸಲು ಪ್ರಯತ್ನಿಸಬೇಕು. ಶಿಕ್ಷಣವು ನಮಗೆ ಹೇಗೆ ಇರಬೆಕು, ಹೇಗೆ ಬಾಳಬೆಕು, ಎಂದು ಕಲಿಸಿಕೊಡುತ್ತದೆ. ಪುಸ್ತಕವನ್ನು ಬರೀ ಪರೀಕ್ಷೆಗೆ ಎಂದು ಓದದೆ ಅದನ್ನು ಓದಿ ಅರ್ಥ ಮಾಡಿಕೊಂಡು ಅದನ್ನು ಜೀವನದಲ್ಲಿ ಬಳಸಿಕೊಳ್ಳಬೇಕು. ನಮಗೆ ಶಿಕ್ಷಕರೇ ನಮ್ಮ ಪಾಲಿನ ದೇವರಾಗಿರುತ್ತಾರೆ. ಅವರನ್ನು ಮೊದಲು ಗೌರವಿಸಬೇಕು. ಯಾವುದೇ ಒಂದು ದೊಡ್ಡ ಸಾಧನೆಯನ್ನು ಮಾಡಿದರೆ ಅದರ ಹಿಂದೆ ಶಿಕ್ಷಕರ ಶ್ರಮ ಇದ್ದೇ ಇರುತ್ತದೆ. ಇಂದು ಭಯೋತ್ಪಾದಕರು ಭ್ರಷ್ಟಾಚಾರಿಗಳು ದುಷ್ಕ್ರತ್ಯಗಳನ್ನು ಮಾಡುವವರು ಶಿಕ್ಷೇತರೇ ಆಗಿದ್ದಾರೆ. ಇದಕ್ಕೆ ಮೂಲ ಕಾರಣ ಅವರಿಗೆ ಜೀವನ ಮೌಲ್ಯಗಳನ್ನು ಕಲಿಸದೇ ಇರುವುದು. ಶಿಕ್ಷಣದ ಜೊತೆ ಆಟ ಜೀವನದ ಮೌಲ್ಯಗಳ ಬಗ್ಗೆ ಮತ್ತು ಶಿಸ್ತಿನ ಬಗ್ಗೆ ಹೇಳಿಕೊಡಬೇಕು ಹಾಗಾದರೆ ಮಾತ್ರ ಪ್ರಗತಿಯ ಹಾದಿ ಹಿಡಿಯಬಹುದು.