ಮದನ್ ಕಾರ್ಕಿ ವೈರಮುತ್ತು ಓರ್ವ ಭಾರತೀಯ ಗೀತರಚನೆಕಾರ, ಚಿತ್ರಕಥೆಗಾರ, ಸಂಶೋಧನಾ ಸಹಾಯಕ, ಸಾಫ್ಟ್ವೇರ್ ಎಂಜಿನಿಯರ್ ಮತ್ತು ಉದ್ಯಮಿ. ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಕಾರ್ಕಿ ತಮ್ಮ ವೃತ್ತಿಜೀವನವನ್ನು ಗಿಂಡಿಯ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪ್ರಾರಂಭಿಸಿದರು. ಅವರು ತಮಿಳು ಚಲನಚಿತ್ರೋದ್ಯಮದಲ್ಲಿ ತೊಡಗಿದ ಕೂಡಲೇ, ಗೀತರಚನೆಕಾರ ಮತ್ತು ಸಂಭಾಷಣೆ ಬರಹಗಾರರಾಗಿ ಕೆಲಸ ಮಾಡಿದರು. ಅವರು 2013 ರ ಆರಂಭದಲ್ಲಿ ತಮ್ಮ ಬೋಧನಾ ವೃತ್ತಿಗೆ ರಾಜೀನಾಮೆ ನೀಡಿದರು ಮತ್ತು ಚಲನಚಿತ್ರ ಉದ್ಯಮದಲ್ಲಿ ಪೂರ್ಣ ಸಮಯ ಕೆಲಸ ಮಾಡಲು ಪ್ರಾರಂಭಿಸಿದರು. ಹಾಗೆಯೇ ಶೈಕ್ಷಣಿಕ ಸಂಶೋಧನಾ ಸಂಸ್ಥೆ ಕಾರ್ಕಿ ರಿಸರ್ಚ್ ಫೌಂಡೇಶನ್ (ಕಾ ರಿ ಫೊ) ಯನ್ನು ಪ್ರಾರಂಭಿಸಿದರು, ಇದು ಪ್ರಾಥಮಿಕವಾಗಿ ಭಾಷಾ ಕಂಪ್ಯೂಟಿಂಗ್ ಮತ್ತು ಭಾಷಾ ಸಾಕ್ಷರತೆಯನ್ನು ಕೇಂದ್ರೀಕರಿಸುತ್ತದೆ. ಮಕ್ಕಳಲ್ಲಿ ಕಲಿಕೆಯನ್ನು ಪ್ರಚೋದಿಸಲು ವಿನ್ಯಾಸಗೊಳಿಸಲಾದ ಶೈಕ್ಷಣಿಕ ಆಟಗಳು ಮತ್ತು ಕಥೆ ಪುಸ್ತಕಗಳನ್ನು ಅಭಿವೃದ್ಧಿಪಡಿಸುವ ಮೆಲ್ಲಿನಮ್ ಎಜುಕೇಷನ್ ಅನ್ನು ಅವರು ಸ್ಥಾಪಿಸಿದರು ಮತ್ತು ಸ್ವತಂತ್ರ ಸಂಗೀತವನ್ನು ಪ್ರೋತ್ಸಾಹಿಸುವ ಮತ್ತು ಸಂಗೀತದ ಧ್ವನಿಮುದ್ರಿಕೆಗಳಿಗಾಗಿ ವಿತರಕರಾಗಿ ಕಾರ್ಯನಿರ್ವಹಿಸುವ ಡೂಪಾಡೂ, ಆನ್ಲೈನ್ ಸಂಗೀತ ವೇದಿಕೆಯನ್ನೂ ಅವರು ಸ್ಥಾಪಿಸಿದರು.

ಮದನ್ ಕಾರ್ಕಿ
ಜನನ
ಮದನ್ ಕಾರ್ಕಿ ವೈರಮುತ್ತು

೧೯೮೦-೦೩-೧೦
ರಾಷ್ಟ್ರೀಯತೆಭಾರತೀಯರು
ರಾಷ್ಟ್ರೀಯತೆಭಾರತ
ಹಳೆ ವಿದ್ಯಾರ್ಥಿ
  • ಕಾಲೇಜ್ ಆಫ್ ಎಂಜಿನಿಯರಿಂಗ್, ಗಿಂಡಿಯ
  • ಕ್ವಿನ್ಸ್ಲ್ಯಾಂಡ್ ವಿಶ್ವವಿದ್ಯಾಲಯ
ಉದ್ಯೋಗಗೀತಕಾರ, ಸಾಫ್ಟ್ವೇರ್ ಇಂಜಿನಿಯರ್, ಪ್ರೊಫೆಸರ್
ಜೀವನ ಸಂಗಾತಿನಂದಿನಿ ಕಾರ್ಕಿ
ಮಕ್ಕಳುಹೈಕು
ಪೋಷಕರುವೈರಮುತ್ತು
ಪೋನ್ಮನಿ
ನೆಂಟರುಕಬಿಲನ್ ವೈರಮುತ್ತು (ಸಹೋದರ)

ಪ್ರಾರ೦ಭಿಕ ಜೀವನ ಬದಲಾಯಿಸಿ

ಕಾರ್ಕಿ ಅವರು ಏಳು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೀತರಚನಾಕಾರ ವೈರಮುತ್ತು ಮತ್ತು ಪೊನ್ಮಣಿ ಎಂಬ ತಮಿಳು ವಿದ್ವಾಂಸೆ ಮತ್ತು ಮೀನಾಕ್ಷಿ ಕಾಲೇಜ್ ಫಾರ್ ವುಮೆನ್ನ ಪ್ರಾಧ್ಯಾಪಕಿಯ ಹಿರಿಯ ಪುತ್ರರಾಗಿದ್ದಾರೆ. ಅವರ ಕಿರಿಯ ಸಹೋದರ ಕಬಿಲನ್ ಕಾದಂಬರಿಕಾರರಾಗಿದ್ದಾರೆ ಮತ್ತು ತಮಿಳು ಚಲನಚಿತ್ರಗಳ ಗೀತರಚನೆಕಾರ ಮತ್ತು ಸಂಭಾಷಣೆ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಶಿಕ್ಷಣ ಬದಲಾಯಿಸಿ

ಅವರು ಚೆನ್ನೈನಲ್ಲಿ ಬೆಳೆದರು ಮತ್ತು ಕೊಡಂಬಾಕಂನ ಲೋಯಲಾ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರೆೇ ಹೇಳಿದಂತೆ ಅವರು ಉತ್ತಮ ವಿದ್ಯಾರ್ಥಿಯಾಗಿರಲಿಲ್ಲ. ಮುಖ್ಯವಾಗಿ ತಮಿಳು ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಶ್ರೇಷ್ಠರಾಗಿದ್ದರು. ಪ್ರೌಢಶಾಲೆಯಲ್ಲಿ ಅವರು ಕಂಪ್ಯೂಟರ್ ವಿಜ್ಞಾನದಲ್ಲಿ ಆಸಕ್ತಿಯನ್ನು ಪಡೆದರು. ಅಣ್ಣಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಗಿಂಡಿಯ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ (CEG) ಅವರು ಪ್ರವೇಶ ಪಡೆದರು. ಅವರು 1997 ರಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪದವಿಪೂರ್ವ ಶಿಕ್ಷಣವನ್ನು ಪ್ರಾರಂಭಿಸಿದರು.

CEG ಯಲ್ಲಿದ್ದಾಗ, ಅವರ ಅಂತಿಮ ವರ್ಷದ ಯೋಜನೆಯ ಭಾಗವಾಗಿ, ಕಾರ್ಕಿ ಪ್ರೊಫೆಸರ್ T.V. ಗೀತಾರವರ ಮೇಲ್ವಿಚಾರಣೆಯಲ್ಲಿ ತಮಿಳು ಧ್ವನಿ ಎಂಜಿನ್ ಎಂಬ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದರು. ತಮಿಳು ಭಾಷೆಯ ಭಾಷಣ ಎಂಜಿನ್ಗೆ ಪಠ್ಯ ರಚಿಸುವುದು ಯೋಜನೆಯ ಉದ್ದೇಶವಾಗಿತ್ತು. ಯೋಜನೆಯ ಕುರಿತಾದ ಸಂಶೋಧನಾ ಪತ್ರಿಕೆಯು ಅಧಿಕೃತವಾಗಿ ಕೌಲಾಲಂಪುರ್, ಮಲೇಶಿಯಾದ ತಮಿಳು ಅಂತರ್ಜಾಲ ಸಮ್ಮೇಳನದಲ್ಲಿ ಆಯ್ಕೆಯಾಯಿತು.

ಅವರ ಶಿಕ್ಷಣಾವಧಿಯ ಇತರ ಯೋಜನೆಗಳು ಸೃಜನಶೀಲತೆ, ಇನ್ನೋವೇಶನ್ ಮತ್ತು ಹೊಸ ಉತ್ಪನ್ನ ಅಭಿವೃದ್ಧಿ (ಇಂಡಿಯನ್ ಫೋನಿಟಿಕ್ಸ್ಗೆ ಸಂಬಂಧಿಸಿದಂತೆ ಉಚ್ಚಾರಣೆಗೊಳ್ಳುವಂತಹ ಯಾದೃಚ್ಛಿಕ ಹೆಸರುಗಳನ್ನು ಉತ್ಪಾದಿಸುವ ಉದ್ದೇಶ) ಮತ್ತು ಕಂಪೈಲರ್ ಡಿಸೈನ್ಗಳಲ್ಲಿನ ತನ್ನ ಕೋರ್ಸ್ನ ಭಾಗವಾಗಿರುವ ಹೆಸರು ಜನರೇಟರ್ ಮೊದಲಾದವುಗಳು. ಪದಗಳ ಮತ್ತು ವ್ಯಾಕರಣದ ನಿಯಮಗಳ ಸರಿಯಾದ ವಿವರಣೆಯ ಮತ್ತು ವ್ಯಾಖ್ಯಾನದ ಗುರಿಯೊಂದಿಗೆ ಪ್ರೋಗ್ರಾಮಿಂಗ್ ಭಾಷೆಯನ್ನು ಕಲ್ಪಿಸಲಾಗಿತ್ತು.

ಚೆನ್ನೈ ಕವಿಗಳಿಗಾಗಿ ಅವರು ತಮಿಳು ಪದಗಳ ನಿರ್ವಹಣೆಗಾಗಿ ಕಾಗುಣಿತ ಪರೀಕ್ಷಕ ವನ್ನು ಸೃಷ್ಟಿಸಿದರು. ಈ ಯೋಜನೆಯು ನೈಸರ್ಗಿಕ ಭಾಷಾ ಸಂಸ್ಕರಣಾ ಘಟಕಗಳನ್ನು ಒಳಗೊಂಡಿರುತ್ತದೆ, ಇದು ತಮಿಳು ಭಾಷೆಯ ರೂಪವಿಜ್ಞಾನದ ವಿಶ್ಲೇಷಕದ ಭಾಗವಾಗಿ ನಿರ್ಮಿಸಲಾದ ಮೂಲ ಶಬ್ದಕೋಶವನ್ನು ಆಧರಿಸಿದೆ. ಅದರ ಮೂಲ ಉದ್ದೇಶ ಪದಗಳ ಸರಿಯಾದ ರೂಪವಾಗಿದೆ.

2001 ರಲ್ಲಿ ಅವರ ಪದವಿ ಪೂರ್ಣಗೊಂಡ ನಂತರ, ಕಾರ್ಕಿ ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು 2003 ರಲ್ಲಿ ಪ್ರಾರಂಭಿಸಿದರು. ಆ ನಿರ್ದಿಷ್ಟ ಅವಧಿಯಲ್ಲಿ ಅವರು ಗಣನೆಯ ಸಿದ್ಧಾಂತ ಮತ್ತು ಬಲವಾದ ಗಣಿತಶಾಸ್ತ್ರದ ಆಧಾರದ ಮೇಲೆ ಯೋಜನೆಯನ್ನು ಅಭಿವೃದ್ಧಿಪಡಿಸಿದರು (ಡಾ. ಜಾರ್ಜ್ ಹವಾಸ್ನ ಮೇಲ್ವಿಚಾರಣೆಯಲ್ಲಿ). ಯಾವುದೇ ರೀತಿಯ ಮ್ಯಾಟ್ರಿಕ್ಸ್ ಸ್ವರೂಪವನ್ನು 'ಹೆರ್ಮಿಟ್ ಸಾಧಾರಣ ರೂಪ' ಎಂಬ ಪ್ರಮಾಣಿತ ಸ್ವರೂಪಕ್ಕೆ ತಗ್ಗಿಸುವ ಅಸ್ತಿತ್ವದಲ್ಲಿರುವ ಕ್ರಮಾವಳಿಯನ್ನು ವಿಶ್ಲೇಷಿಸುವ ಗುರಿಯನ್ನು ಇದು ಹೊಂದಿದೆ, ಇದು ಯುನಿಟ್ ಮೇಲಿನ ತ್ರಿಕೋನ ಮಾದ್ರಿಕೆಯಾಗಿದೆ.

ಈ ಕೋರ್ಸ್ನಲ್ಲಿ ಅವರ ಕೆಲವು ಇತರ ಯೋಜನೆಗಳು ಸೇರಿವೆ: ಡಿಸ್ಸಿಪ್ಲಿನ್ಡ್ ಸಾಫ್ಟ್ವೇರ್ ಪ್ರೊಸೆಸರ್ ಪ್ರಾಜೆಕ್ಟ್ (ಅವರ ಉದ್ದೇಶ ವೈಯಕ್ತಿಕ ತಂತ್ರಾಂಶ ಪ್ರಕ್ರಿಯೆ ಎಂದು ಕರೆಯಲಾಗುವ ವ್ಯಕ್ತಿಗಳಿಗೆ ಸಾಫ್ಟ್ವೇರ್ ಅಭಿವೃದ್ಧಿ ಪ್ರಕ್ರಿಯೆಯನ್ನು ಪರಿಚಯಿಸುವುದು ಮತ್ತು ಅಭ್ಯಾಸ ಮಾಡುವುದು), ಆನ್-ಲೈನ್ ಆರ್ಟ್ ಸ್ಟೋರ್ ವೆಬ್ಸೈಟ್ (ಇದರಲ್ಲಿ ವೆಬ್ಸೈಟ್ ರಚನೆ ಇಂಟರ್ನೆಟ್ ಮೂಲಕ ವರ್ಣಚಿತ್ರಗಳನ್ನು ವಹಿಸುತ್ತದೆ) ಮತ್ತು ಪಠ್ಯ ಆಧಾರಿತ ಧ್ವನಿ ಚಾಟ್ (ಇದಕ್ಕಾಗಿ ಪ್ರಾಕ್ಸಿ ಧ್ವನಿ ಚಾಟ್ ಸಿಸ್ಟಮ್ ಅನ್ನು ವಿಷುಯಲ್ ಬೇಸಿಕ್ನಲ್ಲಿ ವಿನ್ಯಾಸಗೊಳಿಸಲಾಗಿತ್ತು ಮತ್ತು ಅಭಿವೃದ್ಧಿಪಡಿಸಲಾಗಿದೆ, ಅದು ಪ್ರಮುಖ ಕಂಪ್ಯೂಟಿಂಗ್ ಅಂಶಗಳನ್ನು ಸಂಯೋಜಿಸಿತು).

ಅವರ ಶಿಕ್ಷಣದ ಜೊತೆಗೆ, ಕಾರ್ಕಿ ವಿಶ್ವವಿದ್ಯಾನಿಲಯದಲ್ಲಿ ಅಕಾಡೆಮಿಕ್ ಬೋಧಕರಾಗಿ ಸೇವೆ ಸಲ್ಲಿಸಿದರು. ರಿಲೇಶನಲ್ ಡಾಟಾಬೇಸ್ ಸಿಸ್ಟಮ್ಸ್ ಮತ್ತು ಪ್ರೊಗ್ರಾಮಿಂಗ್ ಭಾಷೆಗಳಂತಹ ವಿಷಯಗಳ ಮೇಲೆ ಅವರು ಕ್ಲಾಸ್ ರೂಮ್ ಟ್ಯುಟೋರಿಯಲ್ ಮತ್ತು ಪ್ರಯೋಗಾಲಯ ಅವಧಿಗಳನ್ನು ನಡೆಸಿದರು.

ಮಾಹಿತಿ ತಂತ್ರಜ್ಞಾನದ ಕುರಿತಾದ ಅವರ ಪಿಎಚ್ ಡಿ ಕಾರ್ಯಕ್ರಮದ ಭಾಗವಾಗಿ, ಅವರು ವಿಭಿನ್ನ ಸ್ವರಶಾಸ್ತ್ರವನ್ನು ಪರೀಕ್ಷಿಸಲು ಸೆನ್ಸ್ (ಸಿಮ್ಯುಲೇಟೆಡ್ ಎನ್ವಿರಾನ್ಮೆಂಟ್ ಆಫ್ ನೆಟ್ವರ್ಕ್ಡ್ ಸೆನ್ಸರ್ ಎಕ್ಸ್ಪರಿಮೆಂಟ್ಸ್) ಎಂಬ ಜಾವಾ ಆಧಾರಿತ ಸಿಮ್ಯುಲೇಶನ್ ವೇದಿಕೆಯನ್ನು ಅಭಿವೃದ್ಧಿಪಡಿಸಿದರು. ಡಾ. ಮಾರಿಯಾ ಓರ್ಲೋವ್ಸ್ಕಾ ಮತ್ತು ಡಾ.ಶಾಝಿಯ ಸಾದಿಕ್ ಮಾರ್ಗದರ್ಶನದಲ್ಲಿ ಈ ಯೋಜನೆಯು ನಡೆಯಿತು. ಅವರ ಸಂಶೋಧನಾ ಪ್ರಬಂಧವು "ನಿಸ್ತಂತು ಸಂವೇದಕ ಜಾಲಗಳಲ್ಲಿ ಪ್ರಶ್ನಾವಳಿಯ ಪ್ರಸರಣಕ್ಕಾಗಿ ಡಿಸೈನ್ ಪರಿಗಣನೆಗಳು" ಎಂಬ ಶೀರ್ಷಿಕೆಯನ್ನು ಹೊಂದಿದೆ.

ಬೋಧನಾ ವೃತ್ತಿ ಬದಲಾಯಿಸಿ

ತಮ್ಮ ಸ್ನಾತಕೋತ್ತರ ಪದವಿ ಮುಗಿದ ನಂತರ ಭಾರತಕ್ಕೆ ಮರಳಿದ ಕಾರ್ಕಿ ಡಿಸೆಂಬರ್ 2007 ರಲ್ಲಿ CEG ಅಣ್ಣಾ ವಿಶ್ವವಿದ್ಯಾನಿಲಯಕ್ಕೆ ಮರಳಿದರು. ಅವರು ಮುಂದಿನ ಆರು ತಿಂಗಳು ಹಿರಿಯ ಸಂಶೋಧನಾ ಫೆಲೋ ಆಗಿದ್ದರು, ಸಂಶೋಧನಾ ಯೋಜನೆಗಳನ್ನು ನಿರ್ವಹಿಸುತ್ತಿದ್ದರು ಮತ್ತು ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಬಹು ವಿದ್ಯಾರ್ಥಿ ಯೋಜನೆಗಳನ್ನು ನಿರ್ವಹಿಸುತ್ತಿದ್ದರು. ಅದರ ಜೊತೆಗೆ ಅವರು ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಪ್ರಯೋಗಾಲಯ ತರಬೇತಿಯನ್ನು ನಿಭಾಯಿಸಿದರು. ಅವರು ಜುಲೈ 2008 ಮತ್ತು ಜುಲೈ 2009 ರ ನಡುವೆ ಪ್ರಾಜೆಕ್ಟ್ ಸೈಂಟಿಸ್ಟ್ ಆಗಿ ಸೇವೆ ಸಲ್ಲಿಸಿದರು. ME & MBA ವಿದ್ಯಾರ್ಥಿಗಳ ಸಂಶೋಧನಾ ಗುಂಪುಗಳ ನಿರ್ವಹಣಾ ಯೋಜನೆಗಳನ್ನೂ ಸಹ ಅವರು ಮೇಲ್ವಿಚಾರಣೆ ನಡೆಸಿದರು.

ಆಗಸ್ಟ್ 2009 ರಿಂದ ಆರಂಭಗೊಂಡು ಅವರು ಸಹಾಯಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಅನುಸರಿಸಿದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು ಮತ್ತು ವಿಶ್ವವಿದ್ಯಾನಿಲಯದಲ್ಲಿ ತಮಿಳು ಕಂಪ್ಯೂಟಿಂಗ್ ಲ್ಯಾಬ್ ಅನ್ನು ಸಂಘಟಿಸಿದರು. ಅವರು ಅನಿವಾಸಿ ಭಾರತೀಯ ಮತ್ತು ವಿದೇಶಿ ರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಹಾಗೆಯೇ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಅಸೋಸಿಯೇಷನ್ ಸಿಬ್ಬಂದಿ ಖಜಾಂಚಿಯಾಗಿ ಸೇವೆ ಸಲ್ಲಿಸಿದರು. ಅವರು ಕಲಿಸಿದ ಕೆಲ ವಿಷಯಗಳು ಸುಧಾರಿತ ಡೇಟಾಬೇಸ್ಗಳು, ಇಂಜಿನಿಯರ್ ಗಳಿಗೆ ನೀತಿ ಶಾಸ್ತ್ರ, ಪ್ರೊಗ್ರಾಮಿಂಗ್ ಭಾಷೆಗಳ ಪ್ರಿನ್ಸಿಪಲ್ಸ್, ಎನ್ವಿರಾನ್ಮೆಂಟಲ್ ಸೈನ್ಸ್ ಮತ್ತು ತಮಿಳು ಕಂಪ್ಯೂಟಿಂಗ್ (ಪಿಎಚ್ಡಿ ವಿದ್ಯಾರ್ಥಿಗಳಿಗೆ).

ಕುಟುಂಬ ಮತ್ತು ವೈಯಕ್ತಿಕ ಜೀವನ ಬದಲಾಯಿಸಿ

ಕಾರ್ಕಿ 2008 ರ ಜೂನ್ 22 ರಂದು ಅಣ್ಣಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿನಿ ನಂದಿನಿ ಈಶ್ವರಮೂರ್ತಿಯವರನ್ನು ಮದುವೆಯಾದರು. ನಂದಿನಿ ಕಾರ್ಕಿ ಈಗ ತಮಿಳು ಚಲನಚಿತ್ರೋದ್ಯಮದಲ್ಲಿ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಉಪಶೀರ್ಷಿಕೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ 2009 ರಂದು ಜನಿಸಿದ ಹೈಕು ಕಾರ್ಕಿ ಎಂಬ ಪುತ್ರನಿದ್ದಾ ನೆ.

ಚಲನಚಿತ್ರ ವೃತ್ತಿಜೀವನ ಬದಲಾಯಿಸಿ

ಪ್ರಥಮ ಪ್ರವೇಶ ಬದಲಾಯಿಸಿ

ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಅವರ ಬೋಧನೆಯ ವೇಳೆಯಲ್ಲಿ, ಕಾರ್ಕಿ ಅವರು ತಮಿಳು ಚಲನಚಿತ್ರೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ನಿರ್ದೇಶಕ ಶಂಕರ್ ಅವರ ವೈಜ್ಞಾನಿಕ-ಕಾಲ್ಪನಿಕ ಚಿತ್ರ ಎಂದಿರನ್ (2010) ನ ಮೂಲಕ. ಕಾರ್ಕಿ ಅವರು 2008 ರಲ್ಲಿ ತಾವು ಬರೆದ ಕೆಲವು ಹಾಡುಗಳೊಂದಿಗೆ ನಿರ್ದೇಶಕರನ್ನು ಸಂಪರ್ಕಿಸಿದ್ದರು. ಅವರನ್ನು ಚಿತ್ರದ ಸಂಭಾಷಣೆಗೆ ಸಹಾಯ ಮಾಡಲು, ವಿಶೇಷವಾಗಿ ತಾಂತ್ರಿಕ ಪರಿಭಾಷೆಯಲ್ಲಿ ಸಹಾಯ ಮಾಡಲು ನಿರ್ದೇಶಕರು ಮಂಡಳಿಯಲ್ಲಿ ಕರೆತಂದರು. ಚಿತ್ರದ ಪ್ರತಿಯೊಂದು ದೃಶ್ಯಕ್ಕೂ ಮೂರು ಸಂಭಾಷಣೆಗಳನ್ನು ಬರೆದಿದ್ದಾರೆ ಎಂದು ಅವರು ಹೇಳಿದರು - ಒಬ್ಬರು ಶಂಕರ್, ಒಬ್ಬರು ಕಾರ್ಕಿಯವರು, ಮತ್ತೊಬ್ಬರು ಸುಜಾತ ರಂಗರಾಜನ್ ಅವರು. ಸುಜಾತ ಚಿತ್ರನಿರ್ಮಾಣದ ಪ್ರಾರಂಭಿಕ ಹಂತದಲ್ಲೇ ಅಕಸ್ಮಾತ್ ವಿಧಿವಶರಾದರು. ಶಂಕರ್ ಎಲ್ಲಾ ಮೂರು ಕರಡುಗಳನ್ನು ಓದಿ ನೋಡಿ ಅತ್ಯುತ್ತಮವಾದವುಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ಕ್ಲೈಮಾಕ್ಸ್ ಬಹುರೂಪಗಳನ್ನು ಹೊಂದಿರದ ಏಕೈಕ ಭಾಗವಾಗಿತ್ತು ಯಾಕೆಂದರೆ ಅದನ್ನು ಕಾರ್ಕಿ ಅವರೇ ಬರೆದಿದ್ದರು.

ಸಂಭಾಷಣೆಯ ಜೊತೆಗೆ, ಕಾರ್ಕಿ ಚಲನಚಿತ್ರಕ್ಕಾಗಿ 2 ಹಾಡುಗಳನ್ನು ಬರೆದಿದ್ದಾರೆ. “ಇರುಮ್ಬಿಲ ಒರು ಹೃದಯಂ” ಅವರ ಚಿತ್ರರಂಗದ ವೃತ್ತಿಯ ಮೊದಲ ಹಾಡು. ಅದನ್ನು ಎ. ಆರ್. ರಹಮಾನ್‌ ಅವರು ಸಂಗೀತ ನಿರ್ದೇಶಿಸಿದರು. "ಬೂಮ್ ಬೂಮ್ ರೋಬೋ ಡಾ" ಈ ಚಿತ್ರಕ್ಕಾಗಿ ಅವರು ಬರೆದ ಇನ್ನೊಂದು ಹಾಡು. ಆದರೆ ಕಂಡೇನ್ ಕಾದಲೈ (2009) ಚಿತ್ರಕ್ಕಾಗಿ ಅವರು ಬರೆದ “ಓಡೋಡಿ ಪೊರೆನ್” ಎಂಬ ಹಾಡು ಅವರ ಮೊದಲು ಬಿಡುಗಡೆಯಾದ ಹಾಡಾಗಿದೆ. ಎಂದಿರನ್ ಚಿತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು 2011 ರಲ್ಲಿ ವಿಜಯ್ ಅವಾರ್ಡ್ಸ್ನ ವರ್ಷದ ಅತ್ಯುತ್ತಮ ಹುಡುಕಾಟವಾಗಿ ಆಯ್ಕೆ ಮಾಡಲಾಯಿತು.

ಸಾಹಿತ್ಯ ರಚನೆಕಾರ ಬದಲಾಯಿಸಿ

ಎಂದಿರನ್ ಚಿತ್ರದ ನಂತರ ಕಾರ್ಕಿ ತಮಿಳು ಚಲನಚಿತ್ರೋದ್ಯಮದಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ಸಾಹಿತ್ಯ ರಚನೆಕಾರರಲ್ಲಿ ಒಬ್ಬರಾದರು. A.R. ರಹಮಾನ್, ಹ್ಯಾರಿಸ್ ಜಯರಾಜ್, D. ಇಮ್ಮನ್, [[ಎಂ ಎಂ ಕೀರವಾಣಿ |M.M. ಕೀರವಾನಿ]], ಯುವನ್ ಶಂಕರ್ ರಾಜ, ಎಸ್.ಥಾಮನ್, ಸಂಜಯ್ ಲೀಲಾ ಭಾನ್ಸಾಲಿ, ಅನಿರುದ್ ರವಿಚಂದರ್ ಮತ್ತುಸ್ಯಾಮ್ ಸಿ.ಎಸ್. ಮೊದಲಾದವರೊಂದಿಗೆ ಅವರು ಕೆಲಸ ಮಾಡಿದರು. ತಮ್ಮ ಮಾತೃಭಾಷೆಯಾದ ತಮಿಳಿನ ಜೊತೆಗೆ ಅವರು ಬಹು ಭಾಷೆಗಳಲ್ಲಿ ಹಾಡುಗಳನ್ನು ಬರೆಯುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವುಗಳಲ್ಲಿ ಕೆಲವು “ಅಸ್ಕುಲಸ್ಕಾ” (ನಂಬನ್), "ದ ರೈಸ್ ಆಫ್ ಡಾಮೊ" (7 ಆಮ್ ಅರಿವುಮ್), “ಕಂಟಿನ್ಯೂಯಾ” (ನೂತ್ರಿಎಂಬದು). “ಅಸ್ಕುಲಸ್ಕಾ” 16 ಭಾಷೆಗಳಿಗೆ ಅನುವಾದವಾಗಿದೆ. “ದ ರೈಸ್ ಆಫ್ ಡಾಮೊ”ವನ್ನು ಮ್ಯಾಂಡರಿನ್ ನಲ್ಲಿ ಬರೆಯಲಾಗಿತ್ತು. “ಕಂಟಿನ್ಯೂಯಾವ”ನ್ನು ಪೋರ್ಚುಗೀಸ್ ನಲ್ಲಿ ಬರೆಯಲಾಗಿತ್ತು. ದೈನಂದಿನ ಬಳಕೆಯಲ್ಲಿ ಸಾಮಾನ್ಯವಾಗಿ ಬಳಸಲಾಗದ ಅಸಾಮಾನ್ಯ ತಮಿಳು ಪದಗಳನ್ನು ಅವರು ಸಾಮಾನ್ಯವಾಗಿ ಬಳಸುತ್ತಾರೆ. ಉದಾಹರಣೆಗೆ “ಕುವಿಯಾಮಿಲ್ಲ ಕಾಚಿ ಪೈಲೈ” (ಕೋ), “ಪನಿಕೂಜ್ಹ್” ಇತ್ಯಾದಿ. ಅವರು ವಿನೋದನ್ ಚಿತ್ರಕ್ಕಾಗಿ ತಮಿಳು ಸಿನೆಮಾದಲ್ಲಿ ಮೊದಲ ಪಾಲಿಂಡ್ರೋಮ್ ಹಾಡನ್ನು ಬರೆದರು. 2018 ರ ಅಂತ್ಯದ ವೇಳೆಗೆ ಅವರು 600ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ.

ಕಾರ್ಕಿಯವರ ಅತೀ ಪ್ರಸಿದ್ಧವಾದ ಹಾಡುಗಳಲ್ಲಿ “ಇರಂಬಿಲೆ ಒರು ಇದಯಮ್” (ಎಂದಿರನ್), “ಎನ್ನಮೋ ಎದೋ” (ಕೋ), “ನೀ ಕೂರಿನಾಲ್” (ನೂತ್ರಿಎಂಬದು), “ಅಸ್ಕುಲಸ್ಕಾ”(ನಂಬನ್), “ಗೂಗಲ್ ಗೂಗಲ್” (ತುಫಾಕಿ), “ಎಲೈ ಕೀಚಾನ್” (ಕಾದಲ್), “ಒಸಕ್ಕ” (ವಣಕ್ಕಂ ಚೆನ್ನೈ), “ಸೆಲ್ಫಿ ಪುಳ್ಳ” (ಕತ್ತಿ), “ಪೂಕ್ಕಳೇ ಸತ್ತ್ರು ಒಯಿವೆಡುಂಗಳ್” (), “ಮೆಯ್ ನಿಗರ” (24), “ಅಳಗಿಯೇ” (ಕಾಟ್ರು ವೆಳಿಯಿಡೈ), “ಎಂದಿರ ಲೋಕತ್ತು ಸುಂದರಿಯೇ” (2.0), “ಕುರುಂಬ” (ಟಿಕ್ ಟಿಕ್ ಟಿಕ್).

ಸಂಭಾಷಣೆ ಬರಹಗಾರ ಬದಲಾಯಿಸಿ

ಎಂದಿರನ್ನ ಯಶಸ್ಸಿನ ನೆರಳಿಗೆ ಕಾರ್ಕಿಯವರು ನಿರ್ದೇಶಕ ಶಂಕರ್ ಜೊತೆಗೂಡಿ ನಂಬನ್ ಚಿತ್ರಕ್ಕಾಗಿ ಸಂಭಾಷಣೆಯನ್ನು ಬರೆದರು. ಅದರಲ್ಲಿ ಅವರು ಹಿಂದಿ ಬ್ಲಾಕ್ ಬಸ್ಟರ್ ಚಿತ್ರವಾದ ೩ ಈಡಿಯಟ್ಸ್ನ ರೂಪಾಂತರವನ್ನು ಮಾಡಿ ಕಾಲೇಜು ಜೀವನವನ್ನು ವಿಭಿನ್ನ ರೀತಿಯಲ್ಲಿ ತೋರಿಸಲು ಸಂಭಾಷಣೆಯನ್ನು ವ್ಯತ್ಯಾಸವಾಗಿ ಬರೆದರು. ಅವರು ಭಾರತದಲ್ಲಿ ಮಾಡಿದ ಅತ್ಯಂತ ದುಬಾರಿ ಚಲನಚಿತ್ರವಾದ 2.0 ರೊಂದಿಗೆ (ಎಂದಿರನ್ನ ಉತ್ತರಭಾಗ) ಶಂಕರ್ ಅವರೊಂದಿಗೆ ತಾಂತ್ರಿಕ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದರು.

ಕಾರ್ಕಿ ತೆಲುಗು-ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಯಶಸ್ವೀ ಸಹಯೋಗಕ್ಕಾಗಿಯೂ ಸಹ ಹೆಸರುವಾಸಿಯಾಗಿದ್ದಾರೆ. ಅವರ ಮಹತ್ವದ ಕೃತಿ ಎರಡು ಭಾಗದ ಬಾಹುಬಲಿ. [[ಬಾಹುಬಲಿ 2:ದ ಕನ್‍ಕ್ಲೂಝ಼ನ್ |ಎರಡನೆಯ ಭಾಗವು]] ಸಾರ್ವಕಾಲಿಕ ಅತ್ಯಂತ ಲಾಭದಾಯಕ ದಕ್ಷಿಣ ಭಾರತೀಯ ಚಲನಚಿತ್ರವಾಗಿದ್ದು. ಸಂಭಾಷಣೆ ಬರಹಗಾರ ರಾಗಿ ಅವರ ಇತರ ಗಮನಾರ್ಹ ಯೋಜನೆಗಳೆಂದರೆ ಗೋಕುಲ್ ಅವರ ಇದುಕ್ಕುತಾನೇ ಆಸೆ ಪಟ್ಟೈ, ವೆಂಕಟ್ ಪ್ರಭು ಅವರ ಮಸ್ಸುಎಂಗೆ ರಾ ಮಶಿಲಾಮಣಿ, ಮತ್ತು ನಾಗ್ ಅಶ್ವಿನ್ ಅವರ ಮಹಾನತಿ (ದಕ್ಷಿಣ ಭಾರತೀಯ ಚಲನಚಿತ್ರ ನಟಿ ಸಾವಿತ್ರಿ ಅವರ ಜೀವನಚರಿತ್ರೆ).

ಭಾಷಾಶಾಸ್ತ್ರಜ್ಞ ಬದಲಾಯಿಸಿ

ಬಾಹುಬಲಿ ಚಿತ್ರಕ್ಕೋಸ್ಕರ ಕಾರ್ಕಿ ಕಿಲ್ಕಿಎಂಬ ಭಾಷೆಯೊಂದನ್ನು ಸೃಷ್ಟಿಸಿದರು. ಚಿತ್ರದಲ್ಲಿ ಅದು “ಕಲಕೇಯ” ಎಂಬ ಜನಾಂಗ ಮಾತನಾಡುವ ಭಾಷೆಯಾಗಿದೆ. ಆಸ್ಟ್ರೇಲಿಯಾದಲ್ಲಿ ತಾತ್ಕಾಲಿಕ ಶಿಶುಪಾಲಕರಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಕಾರ್ಕಿ ಅವರು ಕ್ಲಿಕ್ ಎಂಬ ಭಾಷೆಯನ್ನು ಸೃಷ್ಠಿಸಿದ್ದರು, ಅದೂ ಮಕ್ಕಳ ಜೊತೆಗೂಡಿ. ಭಯಭೀತಿಯನ್ನು ಉಂಟುಮಾಡುವ ಭಾಷೆಯೊಂದನ್ನು ಬಯಸಿ ನಿರ್ದೇಶಕ ರಾಜಮೌಳಿ ಅವರು ಕಾರ್ಕಿಯನ್ನು ಸಮೀಪಿಸಿದಾಗ ಕಾರ್ಕಿ ತಮ್ಮದೇ ಆದ ಭಾಷೆಯೊಂದನ್ನು ಸೃಷ್ಟಿಸಲು ಮುಂದಾದರು. "ಕ್ಲಿಕ್" ಅನ್ನು ಮೂಲವಾಗಿ ಬಳಸಿ ಮೂಲವಾಗಿ ಬಳಸಿ ರಚಿಸಿದರು. 'Tch' ಮತ್ತು 'tsk' ನಂತಹ ಮೌಖಿಕ ಉದ್ಗಾರಗಳನ್ನು ಕ್ಲಿಕ್ ಭಾಷೆಯಲ್ಲಿ ಆಶ್ವರ್ಯಸೂಚಕಗಳಾಗಿ ಮತ್ತು ಬಹುವಚನ ರೂಪಿಗಳಾಗಿ ಬಳಸಲಾಯಿತು. ವಿರುದ್ಧ ಪದಗಳಿಗೆ ಭಾಷಾ ಧ್ವನಿಯಲ್ಲಿ ಪದಗಳನ್ನು ಹಿಂದು ಮುಂದು ಮಾಡಿ ಬಳಸಲಾಯಿತು. ಉದಾಹರಣೆಗೆ “ನಾನು” ಎಂಬುದಕ್ಕೆ “ಮಿನ್”, “ನೀನು” ಎಂಬುದಕ್ಕೆ “ನಿಮ್.” ಆ ಭಾಷೆಯಲ್ಲಿ ಮಾತು ಪಶ್ಚಾತ್ತಾಪದ ಪದಗಳನ್ನು ಹೊಂದಿಲ್ಲ, ಏಕೆಂದರೆ ಚಲನಚಿತ್ರದಲ್ಲಿ ಮಾತನಾಡುವ ಪಾತ್ರಗಳು ಆ ಗುಣವನ್ನು ಪ್ರದರ್ಶಿಸುವುದಿಲ್ಲ.

ದುಬಾರಿ ಬಂಡವಾಳದ ಪ್ರಸಿದ್ಧ ಚಿತ್ರಗಳು ಬದಲಾಯಿಸಿ

ಅವರ ಚಿತ್ರರಂಗದ ವೃತ್ತಿಜೀವನದ ಮೊದಲ ದಶಕದಲ್ಲಿ ಗೀತ ರಚನೆಕಾರ ಮತ್ತು ಸಂಭಾಷಣಾ ಬರಹಗಾರನಾಗಿ, ಕಾರ್ಕಿ ಆಧುನಿಕ ಭಾರತೀಯ ಸಿನಿಮಾದಲ್ಲಿ ಅತಿದೊಡ್ಡ ಬ್ಲಾಕ್ ಬಸ್ಟರ್ ಗಳ ಭಾಗವಾಗಿದ್ದಾರೆ. ಅವುಗಳು ಎಂದಿರನ್ (2010), ಕೋ (2011), ನಾನ್ ಏ (2012), ತುಪ್ಪಾಕಿ (2012), ಕತ್ತಿ (2014), (2015), ಬಾಜಿರಾವ್ ಮಸ್ತಾನಿ (2015), ಬಾಹುಬಲಿ ಸರಣಿ (2015, 2017), ನಡಿಗೈಯರ್ ತಿಲಕಂ (2018), ಪದ್ಮಾವತ್ (2018), 2.0 (2018).

ಇತರ ವೃತ್ತಿಗಳು ಬದಲಾಯಿಸಿ

ಕಾರ್ಕಿ ರಿಸರ್ಚ್ ಫೌಂಡೇಶನ್ ಬದಲಾಯಿಸಿ

2013 ರಲ್ಲಿ ಅಣ್ಣಾವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ಕೊಟ್ಟ ಕಾರ್ಕಿ ತಮ್ಮ ಪತ್ನಿ ನಂದಿನಿ ಕಾರ್ಕಿ ಜೊತೆಗೂಡಿ ಕಾರ್ಕಿ ರಿಸರ್ಚ್ ಫೌಂಡೇಶನ್ ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯು ಭಾಷಾ ಕಂಪ್ಯೂಟಿಂಗ್ ಮತ್ತು ಭಾಷಾ ಸಾಕ್ಷರತೆ ಯನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿದೆ. ಅವರು ಸಂಸ್ಥೆಯ ಸಂಶೋಧನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾರೆ.

ಕಾ. ರಿ. ಫೊ. (ಕಾರ್ಕಿ ರಿಸರ್ಚ್ ಫೌಂಡೇಶನ್) ದಲ್ಲಿ ಮಾಡಲ್ಪಟ್ಟ ಯೋಜನೆಗಳಲ್ಲಿ ಕೆಲವು ಇವೇ ಮೊದಲಾದವುಗಳು “ಚೊಲ್” (ಆನ್ ಲೈನ್ ತಮಿಳ್-ಇಂಗ್ಲಿಷ್-ತಮಿಳ್ ಡಿಕ್ಷನರಿ), “ಪಿರಿಪೊರಿ” (ತಮಿಳಿನ ರೂಪವಿಜ್ಞಾನದ ವಿಶ್ಲೇಷಕ ಮತ್ತು ಸಂಯುಕ್ತ ಶಬ್ದ ಛೇದಕ), “ಒಲಿಂಗೊ” (ಲಿಪ್ಯಂತರಣ ಸಾಧನ), “ಪೇರಿ” (ಒಂದು ಹೆಸರು ಉತ್ಪಾದಕ ಸುಮಾರು 9 ಕೋಟಿ ಪುರುಷ / ಸ್ತ್ರೀ ಹೆಸರುಗಳನ್ನು ತಮಿಳು ಫೋನಿಟಿಕ್ಸ್), “ಎಮೊನಿ” (ಪ್ರಾಸ ಸಂಯೋಜಕ), “ಕುರಳ್” (ಒಂದು ತಿರುಕ್ಕುರಳ್ ಪೋರ್ಟಲ್), “ಎಣ್” (ಸಂಖ್ಯಾ-ಪಠ್ಯ ಪರಿವರ್ತಕ), “ಪಾಡಲ್” (ಹಾಡುಗಳನ್ನು ಸಂಶೋಧಿಸಲು ಮತ್ತು ಬ್ರೌಸ್ ಮಾಡಲು ತಮಿಳು ಸಾಹಿತ್ಯ ಪೋರ್ಟಲ್) ಮತ್ತು “ಆಡುಗಲಂ” (ಪದಗಳನ್ನುಪಯೋಗಿಸಿ ಆಟಗಳಿಗೆ ಒಂದು ಪೋರ್ಟಲ್).

ಮೆಲ್ಲಿನಂ ಎಜುಕೇಶನ್ ಬದಲಾಯಿಸಿ

ನವೆಂಬರ್ 2008 ರಲ್ಲಿ, ಕಾರ್ಕಿ ಮೆಲ್ಲಿನಮ್ ಶಿಕ್ಷಣವನ್ನು ಸ್ಥಾಪಿಸಿದರು ಮತ್ತು ಅದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಯು ಪುಸ್ತಕಗಳು ಮತ್ತು ಆಟಗಳಂತಹ ಮಕ್ಕಳ ಶೈಕ್ಷಣಿಕ ಪರಿಕರಗಳ ವಿಷಯ ಸೃಷ್ಟಿಗೆ ಪರಿಣತಿ ನೀಡುತ್ತದೆ, ಇದು ತಮಿಳು ಭಾಷೆಯನ್ನು ಪರಿಚಯಿಸಲು ಮತ್ತು ತಮಿಳು ಸಾಹಿತ್ಯದಲ್ಲಿ ವಿಜ್ಞಾನ ಮತ್ತು ನಾವೀನ್ಯತೆಗಳನ್ನು ಅನ್ವೇಷಿಸಲು ಮಕ್ಕಳಿಗೆ ಆಸಕ್ತಿಯನ್ನು ಹುಟ್ಟುಹಾಕುವ ಉದ್ದೇಶ ಹೊಂದಿದೆ.

ಅವರ ಉತ್ಪನ್ನಗಳನ್ನು “ಐಪಾಟಿ” ಎಂಬ ಹೆಸರಿನಲ್ಲಿ ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವುಗಳು ಹಾಡು ಪುಸ್ತಕಗಳು, ಕಥೆಗಳು, ಪದ ಆಟಗಳು ಮತ್ತು ಮಕ್ಕಳಿಗೆ ವಾಕ್ಯ ಆಟಗಳಾಗಿವೆ. ಆಟಿಕೆಗಳು ಮತ್ತು ವಿದ್ಯುನ್ಮಾನ ಆಟಗಳು ಅದರಲ್ಲಿನ ಕೆಲವು ಯೋಜನೆಗಳು.

ಇಂಡೀ/ದೇಶೀ ಸಂಗೀತಕ್ಕೆ ಕೊಡುಗೆ ಬದಲಾಯಿಸಿ

ಡೂ ಪಾ ಡೂ ಬದಲಾಯಿಸಿ

ಏಪ್ರಿಲ್ 2016 ರಲ್ಲಿ, ಕಾರ್ಕಿ ಸ್ವತಂತ್ರ ಮತ್ತು ಚಲನಚಿತ್ರೇತರ ಸಂಗೀತವನ್ನು ಉತ್ತೇಜಿಸಲು ತಮ್ಮ ಸ್ನೇಹಿತ ಕೌನ್ತೆಯಾ ಅವರೊಂದಿಗೆ ಆನ್ಲೈನ್ ಮ್ಯೂಸಿಕ್ ವೇದಿಕೆಯಾದ ಡೂ ಪಾ ಡೂ ಅನ್ನು ಬಿಡುಗಡೆ ಮಾಡಿದರು. ಅವರ ಉದ್ದೇಶವು ಚಲನಚಿತ್ರಕ್ಕಾಗಿಯೇ ರಚಿಸದ ಹಾಡಿನ ಸಂಗ್ರಹ ಮಾಡುವುದೂ ಅಂತಹ ಹಾಡುಗಳನ್ನುನಿರ್ಮಾಪಕರು ಮತ್ತು ನಿರ್ದೇಶಕರಿಗೆ ಒದಗಿಸುವುದೂ ಆಗಿದೆ. ನಿರ್ಮಾಪಕರು ಹಾಗೂ ನಿರ್ದೇಶಕರು ತಮಗೆ ಇಷ್ಟವಾದ ಹಾಡುಗಳನ್ನು ಡೂ ಪಾ ಡೂ ವಿನಿಂದ ಆಯ್ದುಕೊಳ್ಳಬಹುದು. ಸ್ವತಂತ್ರ ಸಂಗೀತಕ್ಕಾಗಿ ಲೇಬಲ್ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಡೂ ಪಾ ಡೂ ತಮಿಳು ಚಲನಚಿತ್ರಗಳಿಗೆ ಧ್ವನಿಪಥಗಳಿಗೆ ವಿತರಕನ ಸೇವೆ ಯನ್ನೂ ಸಲ್ಲಿಸುತ್ತದೆ.

ಈ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲ ಹಾಡನ್ನು ರಚಿಸಿದವರು ಎಂ.ಎಸ್. ವಿಶ್ವನಾಥನ್. ತಮಿಳು ಚಲನಚಿತ್ರೋದ್ಯಮದ 60 ಕ್ಕೂ ಹೆಚ್ಚು ಉನ್ನತ ಸಂಯೋಜಕರು ಈ ವೇದಿಕೆಗಾಗಿ ವಿಷಯವನ್ನು ಒದಗಿಸುವ ಸಲುವಾಗಿ ಸನ್ನದ್ಧರಾದರು. ಈ ವೇದಿಕೆಯ ಮೂಲ ಉದ್ದೇಶ ದಿನಕ್ಕೊಂದು ಹಾಡನ್ನು ಬಿಡುಗಡೆ ಗೊಳಿಸುವುದಾಗಿತ್ತು.

ಕಾರ್ಕಿ ಬಿಗ್ ಎಫ್ ಎಂ 92.7 ರೇಡಿಯೊ ಸ್ಟೇಷನ್ ನಲ್ಲಿ ಪ್ರದರ್ಶನವಾದ ಬಿಗ್ ಡೂ ಪಾ ಡೂಗಾಗಿ ರೇಡಿಯೊ ಜಾಕಿಯಾಗಿ ಸೇವೆ ಸಲ್ಲಿಸಿದರು, ಇದು ಪ್ರತೀ ಶನಿವಾರ 6 ರಿಂದ 9 ರವರೆಗೆ ಪ್ರಸಾರವಾಯಿತು.

ಡೂ ಪಾ ಡೂ ವಿನ ನಿರ್ದೇಶಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕಾರ್ಕಿ ವೈಯಕ್ತಿಕವಾಗಿ ವೇದಿಕೆಗಾಗಿ ಹಲವಾರು ಹಾಡುಗಳನ್ನು ಬರೆದಿದ್ದಾರೆ. ಸಂಗೀತದ ಉದ್ಯಮದಲ್ಲಿ ಶ್ರೀನಿವಾಸ್, ಕಾರ್ತಿಕ್, ಅನಿಲ್ ಶ್ರೀನಿವಾಸನ್, ರಿಜ್ವಾನ್, ಕಾರ್ತಿಕೇಯ ಮೂರ್ತಿ, ವಿಜಯ್ ಪ್ರಕಾಶ್, ಆಂಡ್ರಿಯಾ ಜೆರೆಮಿಯಾ, ಅಜ್ ಅಲಿಮಿರ್ಜಾಕ್ ಮತ್ತು ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರೊಂದಿಗೆ ಕಾರ್ಕಿ ಕಾರ್ಯ ನಿರ್ವಹಿಸಿದರು. ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಕಾರ್ಕಿ ಬರೆದ 3 ಹಾಡುಗಳಿಗೆ ಸಂಗೀತ ವೀಡಿಯೋಗಳನ್ನು ನಿರ್ದೇಶಿಸಿದರು. ಅವುಗಳಲ್ಲಿ ನಟಿಯರಾದ ಟೋವಿನೋ ಥಾಮಸ್, ದಿವಾಧಧರ್ನಿ, ಐಶ್ವರ್ಯಾ ರಾಜೇಶ್ ಮತ್ತು ಅಥರ್ವಾ ಇದ್ದಾರೆ. ಕಾರ್ಕಿ ಬರೆದಿರುವ ಕೆಲವು ಪ್ರಮುಖ ದೇಶೀ ಗೀತೆಗಳು “ಉಲವಿರವು”, “ಕೂವಾ”, “ಬೋಧಾಯಿ ಕೊಧೈ”, “ಯಾವುಂ ಇನಿಡೆ”, “ದೋ ಒರು ಅರೈಯಿಲ್”, “ಕಾದಲ್ ತೋಜ್ಹಿ” ಮತ್ತು “ಪೆರಿಯಾರ್ ಕುತ್ತು”.

ಅನಿಲ್ ಮತ್ತು ಕಾರ್ಕಿ ಅವರೊಂದಿಗೆ ಭಾನುವಾರ ಬದಲಾಯಿಸಿ

ಕಾರ್ಕಿ ಅವರು ಪಿಯಾನೋವಾದಕ ಅನಿಲ್ ಶ್ರೀನಿವಾಸನ್ ಅವರೊಂದಿಗೆ ಸಂಗೀತ ರಿಯಾಲಿಟಿ ಟಾಕ್ ಶೋ ಒಂದನ್ನು zee ತಮಿಳ್ ಟಿ. ವಿ. ಯಲ್ಲಿ ನಡೆಸಿಕೊಟ್ಟರು. ಕಾರ್ಕಿ ಅದರಲ್ಲಿ ಸಹ ನಿರೂಪಕರಾಗಿ ಸೇವೆ ಸಲ್ಲಿಸಿದರು. ಈ ಕಾರ್ಯಕ್ರಮ ಡಿಸೆಂಬರ್ 2017 ಮತ್ತು ಏಪ್ರಿಲ್ 2018 ರ ನಡುವೆ 13 ಸಂಚಿಕೆಗಳಾಗಿ ಝೀ ತಮಿಳು ಎಚ್ಡಿಯಲ್ಲಿ ಪ್ರಸಾರವಾಯಿತು. ಈ ಕಾರ್ಯಕ್ರಮವು ಸಂಗೀತ ಕ್ಷೇತ್ರದೊಳಗಿನ ಮನರಂಜನಾ ಉದ್ಯಮದ ಇತರ ಭಾಗಗಳು, ಸಂಗೀತ ಸಂಯೋಜನೆ ಮತ್ತು ಪ್ರದರ್ಶನಗಳನ್ನು ಪ್ರದರ್ಶಿಸುತ್ತದೆ. ಪ್ರದರ್ಶನದಲ್ಲಿ ಭಾಗಿಯಾದ ಕೆಲವು ಪ್ರಮುಖ ಅತಿಥಿಗಳು ಮತ್ತು ಸಂಯೋಜಕರು ಈ ಕೆಳಗಿನವರು - ಸೀನ್ ರೊಲ್ಡನ್, ಜಿ.ವಿ. ಪ್ರಕಾಶ್ ಕುಮಾರ್, ಶ್ರೀನಿವಾಸ್, ನಿರ್ದೇಶಕರಾದ ವೆಂಕಟ್ ಪ್ರಭು, ವಸಂತ್, ಗೌತಮ್ ಮೆನನ್, ರಾಜೀವ್ ಮೆನನ್, ನಟರಾದ ಸಿದ್ದಾರ್ಥ್, ಆರ್.ಜೆ ಬಾಲಾಜಿ ಮತ್ತು ಕುಶ್ಬೂ, ಗಾಯಕರಾದ ಕಾರ್ತಿಕ್, ಆಂಡ್ರಿಯಾ ಜೆರೇಮಿಯಾ, ಗಾನ ಬಾಲಾ ಮತ್ತು ಸೈನ್ಧವಿ.

ಆಸಕ್ತಿಗಳು ಬದಲಾಯಿಸಿ

ಬಾಲ್ಯದಿಂದಲೂ ಕಾರ್ಕಿ ಅವರು ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ಅವರ ಚಿಕ್ಕ ವಯಸ್ಸಿನಿಂದಲೂ ಅವರು ಸೆರೆಹಿಡಿದ ಚಿತ್ರಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. YouTube ಮೂಲಕ ಛಾಯಾಗ್ರಹಣದ ಸೂಕ್ಷ್ಮ ವಿಷಯಗಳನ್ನು ಅವರು ಕಲಿತರು. ಅವರು ವಿಶೇಷವಾಗಿ ಯಾದೃಚ್ಛಿಕ ಭಾವನೆಗಳ ಸೀದಾ ಕ್ಷಣಗಳನ್ನು ಸೆರೆಹಿಡಿಯುವಲ್ಲಿ ಪರಿಣತಿ ಹೊಂದಿದ್ದಾರೆ. ಮಕ್ಕಳನ್ನು ಛಾಯಾಗ್ರಹಣದ ತನ್ನ ನೆಚ್ಚಿನ ವಿಷಯಗಳೆಂದು ಅವರು ಪರಿಗಣಿಸುತ್ತಾರೆ. ಅವರು ಪ್ರಯಾಣದ ಬಗ್ಗೆ ವಿಶೇಷ ಉತ್ಸಾಹವನ್ನು ಹೊಂದಿದ್ದಾರೆ. ಪ್ರತೀ ವರ್ಷ ಅವರು 3 ಯಾತ್ರೆಗಳನ್ನು ಕೈಗೊಳ್ಳುತ್ತಾರೆ - ಅವುಗಳಲ್ಲಿ ಒಂದು ಭಾರತದ ಹೊರಗೆ, ಒಂದು ಭಾರತದೊಳಗೆ ತಮಿಳ್ನಾಡಿನ ಹೊರಗೆ ಮತ್ತಿನ್ನೊಂದು ತಮಿಳ್ನಾಡಿನ ಒಳಗೆ. ಅವರು 2018 ರಲ್ಲಿ ಅಂಟಾರ್ಟಿಕಾದ ಪ್ರವಾಸ ಸೇರಿದಂತೆ ಎಲ್ಲಾ 7 ಖಂಡಗಳಿಗೆ ಪ್ರಯಾಣಿಸಿದ್ದಾರೆ. ಅವರ ಇತರ ಮನರಂಜನಾ ಚಟುವಟಿಕೆಗಳು ಅಡುಗೆ, ಜಾವಾ ಕೋಡಿಂಗ್ ಮತ್ತು ಬ್ಯಾಡ್ಮಿಂಟನ್. ಅವರು ಸಾಹಿತ್ಯದಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಮಾಡಿದ್ದಾರೆ. ಮಾತ್ರವಲ್ಲ ತಮಿಳು, ಪತ್ರಿಕೆಗಳ ಪ್ರಕಾಶನದಲ್ಲೂ ಹೆಚ್ಚಿನ ಸಂಶೋಧನೆಯನ್ನು ಮಾಡಿದ್ದಾರೆ.

ಬಾಹ್ಯ ಕೊಂಡಿಗಳು ಬದಲಾಯಿಸಿ