ಪರಕ್ರಾಮ್ಯ ಸಂಲೇಖಗಳು

ಬ್ಯಾಂಕ್ ವ್ಯವಹಾರಗಳಲ್ಲಿ ಚೆಕ್ಕುಗಳು, ಹುಂಡಿಗಳು ಮತ್ತು ವಚನಪತ್ರಗಳು ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಯಾಕೆಂದರೆ ಈ ಮೂರು ಸಂಲೇಖಗಳು ಹಣವನ್ನು ಸೃಷ್ಟಿಸುತ್ತವೆ. ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಹಣದ ಅವಶ್ಯಕತೆ ಇರುತ್ತದೆ. ಆಗ ಚೆಕ್ಕು, ಹುಂಡಿ, ವಚನಪತ್ರಗಳ ಮೂಲಕ ಸಾಲಪಡೆಯುತ್ತಾರೆ. ಪ್ರತಿಯೊಬ್ಬರೂ ತಮ್ಮ ಬಳಿ ನಗದು ಹಣವನ್ನಿಟ್ಟುಕೊಂಡು, ಪದಾರ್ಥಗಳನ್ನು ಕೊಂಡಾಗ ಹಣವನ್ನಿತ್ತರೆ ಬ್ಯಾಂಕುಗಳ ಅವಶ್ಯಕತೆ ಇರುವುದಿಲ್ಲ. ಆದರೆ, ಹಾಗೆ ಎಲ್ಲರೂ ಯಾವಾಗಲೂ ನಗದು ಹಣವನ್ನಿಟ್ಟು ಕೊಂಡು ತಿರುಗಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹಣದ ಅಥವಾ ಸಾಲದ ಅವಶ್ಯಕತೆಗೆ ಎಲ್ಲರೂ ಬ್ಯಾಂಕುಗಳನ್ನು ಅವಲಂಬಿಸಬೇಕಾಗುತ್ತದೆ.

ಬ್ಯಾಂಕು

‍‍

ಹುಂಡಿಗಳು ಬದಲಾಯಿಸಿ

ಇಂಗ್ಲೆಂಡಿನಲ್ಲಿ ಹನ್ನೆರಡನೇ ಶತಮಾನದಲ್ಲಿ ವ್ಯವಹಾರ ಸಾಗಿಸಲು ಹುಂಡಿಗಳು ಬಳಕೆಗೆ ಬಂದವು. ಆಗಿನ್ನೂ ಬ್ಯಾಂಕುಗಳ ಸ್ಥಾಪನೆ ಆಗಿರಲಿಲ್ಲ. ವ್ಯಾಪಾರಿಗಳು ತಮ್ಮ ತಮ್ಮ ನಡುವೆ ಇಂತಹ ವಿನಿಮಯ ಪತ್ರಗಳನ್ನು ಬರೆದುಕೊಂಡು ಸಾಲಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಈ ಹುಂಡಿಗಳ ನಂತರ ವಚನ ಪತ್ರಗಳನ್ನು ಬರೆದು ಸಾಲಗಳನ್ನು ತೆಗೆದುಕೊಳ್ಳುತ್ತಿದ್ದರು. ಕೊನೆಗೆ ಬ್ಯಾಂಕ್ ಚೆಕ್ಕುಗಳು ಬಳಕೆಗೆ ಬಂದವು. ಒಬ್ಬ ನಿಶ್ಚಿತ ವ್ಯಕ್ತಿಗೆ ಅಥವಾ ಅವನ ಆದೇಶಕ್ಕೆ ಅಥವಾ ಸಂಲೇಖ ವಾಹಕನಿಗೆ ಒಂದು ನಿಶ್ಚಿತ ಮೊಬಲಗಳನ್ನು ಕೊಡಬೇಕೆಂದು ಉದ್ದೇಶಿಸಿ, ಸಂಲೇಖವನ್ನು ರಚಿಸಿದ ವ್ಯಕ್ತಿಯ ಕರಾರುರಹಿತ ಆದೇಶವನ್ನು ಒಳಗೊಂಡಿರುವ ಪತ್ರವೇ ಹುಂಡಿ.

ಹುಂಡಿಯಲ್ಲಿ ಮೂವರು ವ್ಯಕ್ತಿಗಳು ಅಥವಾ ಮೂರು ಪಕ್ಷಗಳು ಮುಖ್ಯವಾಗಿ ಬೇಕು. ಒಬ್ಬರು ಹುಂಡಿಯನ್ನು ರಚಿಸುವ ರಚಕ ಎಂದರೆ ಹಣ ಕೊಡಲು ಆದೇಶಿಸುವವನು, ಇನ್ನೊಬ್ಬರು ಹಣವನ್ನು ಪಡೆಯುವ ಪ್ರಾಪ್ತಿಕರ್ತ ಎಂದರೆ ಹಣ ಪಡೆಯುವವನು, ಮೂರನೆಯವರು ಅಂತಿಮವಾಗಿ ಹಣವನ್ನು ಸಂದಾಯ ಮಾಡಲು ಒಪ್ಪುವ ಸ್ವೀಕರ್ತ. ನಮ್ಮ ದೇಶದಲ್ಲಿ ಮೊದಲು ಹುಂಡಿ, ವಚನ ಪತ್ರ ಮತ್ತು ಚೆಕ್ಕುಗಳನ್ನು ವಿಧಿ ವಿಧಾನಗಳಿಗೆ ಒಳಪಡಿಸುವ ಒಂದು ಕಾನೂನು ಇರಲಿಲ್ಲ. ವ್ಯಾಜ್ಯಗಳು ಎದ್ದಾಗ, ನ್ಯಾಯಾಲಯಗಳು ಕಾಲಕಾಲಕ್ಕೆ ಕೊಡುತ್ತಿದ್ದ ತೀರ್ಪುಗಳೇ ಈ ಸಂಲೇಖಗಳನ್ನು ನಿಯಂತ್ರಿಸುವ ಸಂಪ್ರದಾಯವಾಗಿತ್ತು. ನಮ್ಮ ದೇಶದ ನ್ಯಾಯಪದ್ಧತಿಯನ್ನು ಅನುಸರಿಸುತ್ತಿದ್ದುದರಿಂದ ಹೆಚ್ಚು ಕಡಿಮೆ ಇಂಗ್ಲೆಂಡಿನ ಕಾನೂನುಗಳಾಗಿದ್ದವು. ಮುಂದೆ ೧೮೮೧ರಲ್ಲಿ ನಮ್ಮ ಸರ್ಕಾರವು ಒಂದು ವಿಸ್ತೃತ ಕಾನೂನನ್ನು ರಚಿಸಿ 'ಪರಾಕ್ರಮ್ಯ ಸಂಲೇಖಗಳ ಅಧಿನಿಯಮ ೧೮೮೧' ಎಂಬ ಅಧಿನಿಯಮವನ್ನು ಜಾರಿಗೆ ತಂದಿತು. ಮರುವರುಷ 'ಹುಂಡಿಗಳ ಅಧಿನಿಯಮ - ೧೮೮೨' ರಚಿಸಿ ಹುಂಡಿಗಳನ್ನು ನಿಯಂತ್ರಿಸಲು ಅನುಕೂಲವಾಗುವ ಶಾಸನವನ್ನು ಅನುಷ್ಠಾನಗೊಳಿಸಿದರು. ಇಂದಿನವರೆಗೂ ಅಲ್ಪಸ್ವಲ್ಪ ಬದಲಾವಣೆಗಳಾದರೂ ಈ ಎರಡೂ ಕಾನೂನುಗಳು ಅಸ್ತಿತ್ವದಲ್ಲಿವೆ. ೧೯೫೭ರಲ್ಲಿ ಹುಂಡಿ ಕಾನೂನು ರಚಿಸಿದ್ದಾರೆ.

 
ಎಸ್.ಬಿ.ಐ ಬ್ಯಾಂಕ್

ಹುಂಡಿಗಳಲ್ಲಿ ಎರಡು ವಿಧ. ಒಂದು ದೇಶೀಯ ಹುಂಡಿ ಎಂದರೆ ಈ ದೇಶದಲ್ಲಿಯೇ ರಚಿಸಿ, ಈ ದೇಶದಲ್ಲಿಯೇ ಹಣ ಪಡೆಯುವ ವಿನಿಮಯ ಪತ್ರ. ಇನ್ನೊಂದು ವಿದೇಶಿ ಹುಂಡಿ ಎಂದರೆ ಈ ದೇಶದಲ್ಲಿ ರಚಿಸಿ ಬೇರೆ ದೇಶದಲ್ಲಿ ಹಣವನ್ನು ಪಡೆಯುವುದು ಅಥವಾ ಬೇರೆ ದೇಶದಲ್ಲಿ ರಚಿಸಿದ ಹುಂಡಿಯನ್ನು ಈ ದೇಶದಲ್ಲಿ ಪಾವತಿ ಮಾಡುವುದು. ದೇಶೀಯ ಹುಂಡಿಯನ್ನು ಒಂದೇ ಪ್ರತಿಯಲ್ಲಿ ಬರೆದರೆ, ವಿದೇಶೀ ಹುಂಡಿಗಳನ್ನು ಎರಡು ಅಥವಾ ಮೂರು ಪ್ರತಿಗಳಲ್ಲಿ ಸಿದ್ದಪಡಿಸಿ ಅವುಗಳ ಮೇಲೆ ಒಂದು, ಎರಡು,ಮೂರು ಎಂದು ಅಂಕಿಗಳನ್ನು ಬರೆಯುತ್ತಾರೆ. ಹುಂಡಿಗಳು ವಿದೇಶವನ್ನು ತಲುಪಬೇಕಾಗಿದ್ದರಿಂದ ಅವು ಅಂಚೆಯಲ್ಲಿ ಕಳೆದುಹೋಗುವ ಅಥವಾ ವಿಲಂಬವಾಗಿ ಮುಟ್ಟುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸ್ವೀಕರ್ತನು ಯಾವುದೇ ಪ್ರತಿಯನ್ನು ಸ್ವೀಕರಿಸಿದರೂ ಆ ಹುಂಡಿಯ ಹಣವನ್ನು ಪಾವತಿ ಮಾಡಲು ಬದ್ಧನಾಗುತ್ತಾನೆ.

 
ಭಾರತೀಯ ಸ್ಟ್ಯಾಂಪ್‌ಗಳು

ಹುಂಡಿಗಳಲ್ಲಿ ಶುದ್ಧ ಹುಂಡಿ ಮತ್ತು ದಸ್ತಾವೇಜು ಹುಂಡಿ ಎಂದು ಎರಡು ವಿಧಗಳಿವೆ. ಪದಾರ್ಥಗಳನ್ನು ಕಳಿಸಿದ ಬಗ್ಗೆ ರೈಲ್ವೇ ಇಲಾಖೆ ನೀಡುವ ರಸೀದಿ ಅಥವಾ ಸಾರಿಗೆ ಕಂಪನಿಗಳು ಪದಾರ್ಥಗಳನ್ನು ಕಳಿಸಲು ಒಪ್ಪಿಕೊಂಡ ರಸೀದಿ ಅಥವಾ ಪದಾರ್ಥಗಳನ್ನು ರಫ್ತು ಮಾಡಿದಾಗ ಹಡಗಿನವರು ನೀಡುವ ಭರಾವಣೆ ಪತ್ರ ಲಗತ್ತಿಸಿರುತ್ತಾರೆ. ಹುಂಡಿಯೊಂದಿಗೆ ಪದಾರ್ಥಗಳನ್ನು ಕಳುಹಿಸಿದ ಬಗ್ಗೆ ಈ ರಸೀದಿ ಕಳಿಸಿದರೆ ಅಂಥ ಹುಂಡಿಯನ್ನು ದಸ್ತಾವೇಜು ಹುಂಡಿ ಎನ್ನುತ್ತಾರೆ. ಇಂಥ ದಾಖಲೆಗಳಿಲ್ಲದ ಹುಂಡಿಯನ್ನು ಶುದ್ಧಹುಂಡಿ ಎನ್ನುತ್ತಾರೆ. ಸ್ವೀಕರ್ತನು ಒಂದೊಂದು ಸಲ ಸರಕು ಕಳುಹಿಸಿದ ವ್ಯಾಪಾರಿಗೆ ಕೆಲವು ನಿಬಂಧನೆ ಹಾಕುತ್ತಾನೆ. ಹುಂಡಿಯನ್ನು ನೋಡಿ ಸ್ವೀಕರಿಸಿದೊಡನೆ ಪಾವತಿ ಮಾಡು ಎಂಬುದು ಒಂದು ವಿಧವಾದರೆ, ಒಂದು ನಿರ್ದಿಷ್ಟ ಅವಧಿಯ ನಂತರ ಹಣವನ್ನು ಸಂದಾಯ ಮಾಡು ಎಂಬುದು ಇನ್ನೊಂದು ವಿಧ. ಇವನ್ನೇ ತಗಾದೆ ಹುಂಡಿ ಅಥವಾ ವಾಯಿದೆ ಹುಂಡಿ ಎನ್ನುವರು.

 
ಅಂಚೆ ಕಛೇರಿ

ಚೆಕ್ಕುಗಳು ಬದಲಾಯಿಸಿ

ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಅಥವಾ ಅವನಿಂದ ಅದೀಶಿತನಾದವನಿಗೆ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಕೇಳಿದ ಕೂಡಲೇ ಕೊಡಬೇಕು ಎಂದು ಒಂದು ನಿರ್ದಿಷ್ಟ ಬ್ಯಾಂಕಿಗೆ ಬರೆದ ಪತ್ರವೇ ಚೆಕ್ ಎಂದೆನಿಸುತ್ತದೆ. ಈ ಚೆಕ್ಕುಗಳನ್ನು ಸಾಮಾನ್ಯವಾಗಿ ಬ್ಯಾಂಕಿನವರೇ ಮುದ್ರಿಸಿ ಗ್ರಾಹಕರಿಗೆ ಕೊಡುತ್ತಾರೆ. ಗ್ರಾಹಕರು ಈ ಚೆಕ್ಕುಗಳಿಂದಲೇ ಹಣವನ್ನು ಪಡೆಯಬೇಕು. ಚೆಕ್ಕು ಹಣ ವಿನಿಮಯದ ಪತ್ರವಾಗಿದೆ. ಚೆಕ್ಕುಗಳಂತೂ ಮುದ್ರಣಗೊಂಡೇ ಇರುತ್ತವೆ. ಅವುಗಳಲ್ಲಿ ಪ್ರಾಪ್ತಿಕರ್ತನ ಹೆಸರು, ದಿನಾಂಕ, ಮೊತ್ತವನ್ನು ಸಾಮಾನ್ಯವಾಗಿ ಮಸಿಯಲ್ಲಿ ಬರೆದಿರಬೇಕು ಅಥವಾ ಮುದ್ರಿಸಿರಬೇಕು. ಪಾವತಿಯಾದ ಚೆಕ್ಕನ್ನು ಬ್ಯಾಂಕಿನಲ್ಲಿ ಕೆಲ ವರುಷ ಇರಿಸಿಕೊಳ್ಳಬೇಕಾಗುತ್ತದೆ. ಬ್ಯಾಂಕಿನ ಮತ್ತು ಗ್ರಾಹಕನ ಮಧ್ಯೆ ವ್ಯಾಜ್ಯವೆದ್ದರೆ, ಬ್ಯಾಂಕು ತಾನು ಸರಿಯಾದ ವ್ಯಕ್ತಿಗೆ ಹಣವನ್ನು ನೀಡಿದ್ದೇನೆ ಎಂದು ಗ್ರಾಹಕನಿತ್ತ ಚೆಕ್ಕನ್ನು ಪುರಾವೆ ಎಂದು ತೋರಿಸಬೇಕಾಗುತ್ತದೆ.

ಬ್ಯಾಂಕಿನವರು ಗ್ರಾಹಕನ ಹಣಕಾಸಿನ ವ್ಯವಹಾರ ನೋಡಿ ಹತ್ತೋ, ಇಪ್ಪತ್ತೋ, ಐವತ್ತೋ, ನೂರೋ ಚೆಕ್ಕುಗಳ ಒಂದು ಪುಸ್ತಕವನ್ನು ಗ್ರಾಹಕನಿಗೆ ಕೊಡುತ್ತಾರೆ. ಗ್ರಾಹಕನು ತನಗಿಂತ ಬಹುತೇಕ ಚೆಕ್ಕುಗಳನ್ನು ಬಳಸಿದ ಮೇಲೆ ಮತ್ತೆ ಬ್ಯಾಂಕಿನವರಿಗೆ ಲಿಖಿತದಲ್ಲಿ ಇನ್ನೊಂದು ಚೆಕ್ ಬುಕ್ಕನ್ನು ಕೇಳಬಹುದು.

 
ಚೆಕ್

ರಚಕ - ಪ್ರಾಪ್ತಿಕರ್ತ - ಅಗ್ನಾಪಿತ ಬದಲಾಯಿಸಿ

ಕರ್ತನು ಯಾವ ಬ್ಯಾಂಕ್ ಶಾಖೆಯಲ್ಲಿ ಖಾತೆಯನ್ನು ಹೊಂದಿರುತ್ತಾನೋ ಆ ಖಾತೆಯ ಮೇಲೆಯೇ ಅವನು ಚೆಕ್ಕನ್ನು ಕೊಡಬೇಕು ಎಂಬುದು ನಿಯಮ. ಈಚಿನವರೆಗೆ ಖಾತೆಹೊಂದಿದ ಶಾಖೆಯಲ್ಲಿಯೇ ಅವನು ಹಣವನ್ನು ಪಾವತಿ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಈಗ ಕೋರ್ ಬ್ಯಾಂಕಿಂಗ್ ವ್ಯವಸ್ಠೆ ಅಳವಡಿಸಿಕೊಂಡಿರುವ ಬ್ಯಾಂಕುಗಳಲ್ಲಿ ಆ ಬ್ಯಾಂಕಿನ ಯಾವ ಶಾಖೆಯಲ್ಲಾದರೂ ಹಣ ಪಾವತಿ ಮಾಡುವ ಸೌಲಭ್ಯವುಂಟು. ಚೆಕ್ಕನ್ನಂತೂ ತಾನು ಯಾವ ಶಾಖೆಯಲ್ಲಿ ಖಾತೆ ಹೊಂದಿದ್ದಾನೋ ಆ ಶಾಖೆಯ ಮೇಲೆ ಬರೆದಿರಬೇಕು.

ಚೆಕ್ಕುಗಳಲ್ಲಿ ಸಾಮಾನ್ಯವಾಗಿ ರಚಕನು, ಪ್ರಾಪ್ತಿಕರ್ತನಿಗೆ ಇಂತಿಷ್ಟು ಹಣವನ್ನಿಯಬೇಕು ಎಂದು ತಾನು ಖಾತೆ ಹೊಂದಿದ ಬ್ಯಾಂಕಿಗೆ, ಆಗ್ನಾಪಿಸುತ್ತಾನೆ. ಇಲ್ಲಿ ಬ್ಯಾಂಕು ಆಗ್ನಾಪಿತ ಬ್ಯಾಂಕ್ ಆಗುತ್ತದೆ. ಹೀಗೆ ಮೂರು ವ್ಯಕ್ತಿಗಳು ಈ ಚೆಕ್ಕಿಗೆ ಸಂಬಂಧಿಸಿರುತ್ತಾರೆ. ಆದರೆ ರಚಕನಿಗೆ ತಾನೇ ಹಣವನ್ನು ಪಡೆದುಕೊಳ್ಳಬೇಕೆನಿಸಿದಾಗ ತಾನೇ ರಚಕನೂ ಆಗುತ್ತಾನೆ ಮತ್ತು ಪ್ರಾಪ್ತಿಕರ್ತನೂ ಆಗುತ್ತಾನೆ. ಆಗ ರಚಕನು ಚೆಕ್ಕಿನಲ್ಲಿ ಪ್ರಾಪ್ತಿಕರ್ತನ ಹೆಸರನ್ನು ಬರೆಯಬೇಕಾದ ಜಾಗದಲ್ಲಿ ’ನನಗಾಗಿ’ ಎಂದು ಬರೆದು ಚೆಕ್ಕನ್ನು ಆಗ್ನಾಪಿತ ಬ್ಯಾಂಕಿಗೆ ನೀಡಿ ಹಣವನ್ನು ಪಡೆಯಬಹುದು. ’ನನಗೆ ಅಥವಾ ಆದೇಶಿತರಿಗೆ’, ಎಂದು ಚೆಕ್ಕನ್ನು ಬರೆದು ಚೆಕ್ಕಿನ ಹಿಂದೆ ರಚಕನು ತನ್ನ ಸಹಿಮಾಡಿ ಕೊಟ್ಟರೆ ಅಂಥ ಚೆಕ್ಕನ್ನು ಇತರರಿಗೆ ಪಾವತಿ ಮಾಡುವುದು ಸುಲಭವಾಗುತ್ತದೆ.

ತೀರುವೆ ಮನೆ ಬದಲಾಯಿಸಿ

ಒಬ್ಬಗ್ರಾಹಕನು ತನ್ನೂರಿನ ಹತ್ತೆಂಟು ಬ್ಯಾಂಕುಗಳ ಮೇಲೆ ಬರೆದಿರುವ ಚೆಕ್ಕುಗಳನ್ನು ತನ್ನ ಖಾತೆಗೆ ಜಮಾ ಮಾಡಲು ತಂದರೆ ಈ ಚೆಕ್ಕುಗಳನ್ನು ಆಯಾ ಬ್ಯಾಂಕುಗಳಿಗೆ ಹೋಗಿ ಹಣವನ್ನು ಪಡೆಯಬೇಕಾಗುವುದು. ಇದನ್ನು ತಪ್ಪಿಸಲು ದೊಡ್ಡ ದೊಡ್ಡ ನಗರಗಳಲ್ಲಿ ಕ್ಲಿಯರಿಂಗ್ ಹೌಸ್ ಅಥವಾ ತೀರುವೆ ಮನೆ ಅನ್ನುವ ಒಂದು ಸ್ಥಾನದಲ್ಲಿ ಕುಳಿತು, ಆಯಾ ಬ್ಯಾಂಕಿನ ಪ್ರತಿನಿಧಿಗಳು ತಮ್ಮಲ್ಲಿ ಬೇರೆ ಬ್ಯಾಂಕುಗಳ ಮೇಲಿದ್ದ ಚೆಕ್ಕುಗಳನ್ನು ಆಯಾ ಬ್ಯಾಂಕಿನ ಪ್ರತಿನಿಧಿಗಳಿಗೆ ಕೊಟ್ಟು, ತಮ್ಮ ಮೇಲೆ ಬರೆದ ಚೆಕ್ಕುಗಳನ್ನು ತೆಗೆದುಕೊಂಡು ಹೋಗುತ್ತಾರೆ.

ವಚನ ಪತ್ರಗಳು ಬದಲಾಯಿಸಿ

ಹುಂಡಿಯಂತೆ ಈ ಪ್ರಮಾಣ ಪತ್ರ ಕೂಡ ಹಣವನ್ನು ಅಲ್ಪಾವಧಿಗೆ ಸಾಲ ಪಡೆಯುವ ಒಂದು ವಿಧಾನ. ಪರಾಕ್ರಮ್ಯ ಸಂಲೇಖಗಳ ಅಧಿನಿಯಮ - ೧೮೮೧ರ ೪ನೇ ಪ್ರಕರಣದಂತೆ, ಸಾಲಗಾರನು ಯಾವ ಷರತ್ತುಗಳನ್ನೂ ವಿಧಿಸದೆ, ಒಂದು ವಿಶಿಷ್ಟ ಮೊತ್ತವನ್ನು ಸಾಲಿಗನಿಗೆ ಅಥವಾ ಸಾಲಿಗನು ಸೂಚಿಸುವ ಬೇರಾವ ವ್ಯಕ್ತಿಗೆ ಆ ಹಣವನ್ನೀಯುವೆನು ಎಂದು ವಾಗ್ದಾನ ಮಾಡಿದ ಪತ್ರವೇ ವಚನ ಪತ್ರ. ವಚನ ಪತ್ರದಲ್ಲಿ ರಚಕನೆಂದರೆ ಸಾಲ ಪಡೆಯುವ ವ್ಯಕ್ತಿ ಅಥವಾ ಸಾಲಗಾರ. ವಾಗ್ದಾನದಂತೆ ಹಣ ಪಡೆಯುವ ಇನ್ನೊಬ್ಬನು ಪ್ರಾಪ್ತಿಕರ್ತ ಅಥವಾ ಸಾಲಿಗ. ಆದರೆ ಹುಂಡಿಯಲ್ಲಿ ಹುಂಡಿಯನ್ನು ಸ್ವೀಕರಿಸುವ ಮೂರನೇ ವ್ಯಕ್ತಿಯೊಬ್ಬ ಇರುತ್ತಾನೆ. ಆದರೆ ಇಲ್ಲಿ ಇಲ್ಲ. ವಚನ ಪತ್ರವು ಲಿಖಿತ ರೂಪದಲ್ಲಿದ್ದು ಇದರಲ್ಲಿ ಯಾವ ಷರತ್ತು ಇಲ್ಲದೆ ವಾಗ್ದಾನವಿರುತ್ತದೆ.

ವಚನ ಪತ್ರಗಳು ಅತ್ಯಂತ ಸ್ಪಷ್ಟವಾಗಿರಬೇಕು. ವಚನ ಪತ್ರಗಳನ್ನು ಒಂದೇ ವ್ಯಕ್ತಿ ಬರೆದುಕೊಡಬಹುದು ಅಥವಾ ಸಂಯುಕ್ತವಾಗಿ ಇಬ್ಬರು ಅಥವಾ ಮೂವರು ಕೂಡಿ ಬರೆದುಕೊಡಬಹುದು. ಜಂಟಿಯಾಗಿ ಬರೆದುಕೊಟ್ಟ ವಚನ ಪತ್ರಕ್ಕೆ ಎಲ್ಲರೂ ಸಾಲಕ್ಕೆ ಹೊಣೆಗಾರರಾಗುತ್ತಾರೆ. ಹುಂಡಿ ಮತ್ತು ಪ್ರಮಾಣ ಪತ್ರಗಳಲ್ಲಿ ಕಂಡು ಬರುವ ಮುಖ್ಯ ವ್ಯತ್ಯಾಸವೆಂದರೆ ಹುಂಡಿಯಲ್ಲಿ ಹಣಕೊಡಲು ಆಗ್ನೆ ಇರುತ್ತದೆ. ಆದರೆ ವಚನಪತ್ರದ ಹಿಂದೆ ಬರೆದುಕೊಟ್ಟರೆ ಅದು ವರ್ಗಾಯಿಸಿದಂತಾಗುತ್ತದೆ.

ಇವುಗಳನ್ನು ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ