ಸಂಸ್ಕೃತ ಮಹಾಕಾವ್ಯ ಮಹಾಭಾರತದಲ್ಲಿ ವಿದರ್ಭ ರಾಜ್ಯವು ಯಾದವ (ಭೋಜ ಯಾದವರು) ರಾಜರಿಂದ ಆಳಲ್ಪಟ್ಟ ಹಲವು ರಾಜ್ಯಗಳಲ್ಲೊಂದು. ಮಹಾಕಾವ್ಯದ ಭೌಗೋಳಿಕ ಕ್ಷಿತಿಜದಲ್ಲಿ ಅದು ವಿಂಧ್ಯ ಶ್ರೇಣಿಯ ದಕ್ಷಿಣಕ್ಕೆ, ಇಂದಿನ ಮಧ್ಯ ಭಾರತದ ವಿದರ್ಭ ಎಂದು ಈಗಲೂ ಕರೆಯಲ್ಪಡುವ ಪ್ರದೇಶದಲ್ಲಿ ದಕ್ಷಿಣತಮದ ರಾಜ್ಯವಾಗಿದೆ. ನಳನ ಹೆಂಡತಿ ದಮಯಂತಿಯು ವಿದರ್ಭದ ರಾಜಕುಮಾರಿಯಾಗಿದ್ದಳು.