ಮಾಧವನ್ ಚಂದ್ರದತ್ತನ್

ಭಾರತೀಯ ಬಾಹ್ಯಾಕಾಶ ವಿಜ್ಞಾನಿ

ಮಾಧವನ್ ಚಂದ್ರದತ್ತನ್ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ವಿಕ್ರಮ್ ಸಾರಾಭಾಯಿ ಬಾಹ್ಯಕಾಶ ಕೇಂದ್ರದ ಮಾಜಿ ನಿರ್ದೇಶಕರು.[೧]ಇವರಿಗೆ 2014ರಲ್ಲಿ ಭಾರತ ಸರ್ಕಾರವು ವಿಜ್ಞಾನ ಕ್ಷೇತ್ರಕ್ಕಾಗಿ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ.

ಮಾಧವನ್ ಚಂದ್ರದತ್ತನ್
ಜನನವರ್ಕಲಾ, ಕೇರಳ, ಭಾರತ
ರಾಷ್ಟ್ರೀಯತೆಭಾರತೀಯ
ಸಂಸ್ಥೆಗಳುಇಸ್ರೋ
ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ
ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
ಅಭ್ಯಸಿಸಿದ ವಿದ್ಯಾಪೀಠಬಿರ್ಲಾ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್, ತ್ರಿಶೂರ್
ಶ್ರೀ ನಾರಾಯಣ ಕಾಲೇಜ್, ವರ್ಕಲಾ.
ಪ್ರಸಿದ್ಧಿಗೆ ಕಾರಣಭಾರತೀಯ ಬಾಹ್ಯಕಾಶ ಪ್ರೊಗ್ರಾಮ್
ಚಂದ್ರಯಾನ-೧
ಮಾರ್ಸ್ ಆರ್ಬಿಟರ್ ಮಿಷನ್
ಗಮನಾರ್ಹ ಪ್ರಶಸ್ತಿಗಳುಪದ್ಮಶ್ರೀ (2014)

ಜನನ ಬದಲಾಯಿಸಿ

ಮಾಧವನ್ ಚಂದ್ರದತ್ತನ್ ಕೇರಳದ ವರ್ಕಲಾದಲ್ಲಿ ಜನಿಸಿದರು. ತಂದೆ ಮಾಧವನ್, ತಾಯಿ ವಾಸುಮತಿ. 1971ರಲ್ಲಿ ತ್ರಿಶೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ರಾಸಾಯನಿಕ ಎಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದರು.[೨] ನಂತರ ಬಿರ್ಲಾ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತರ ಪದವಿಯನ್ನು ಪಡೆದರು.

ಆರಂಭಿಕ ಜೀವನ ಬದಲಾಯಿಸಿ

ಎಂ.ಸಿ.ದತ್ತನ್ ರವರು 1972ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನೆ ಕೇಂದ್ರದಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ಎಸ್. ಎಲ್. ವಿ-೩ ಯೋಜನೆಗಾಗಿ ಕೆಲಸವನ್ನು ಮಾಡಿದರು. 2008ರಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ನಿರ್ದೇಶಕರಾಗಿ ನೇಮಕಗೊಂಡರು ಮತ್ತು 2013ರಲ್ಲಿ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್[೩] ನ ನಿರ್ದೇಶಕರಾಗಿ ಆಯ್ಕೆಗೊಂಡರು. 2014ರಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾದರು. ಅಲ್ಲದೆ ಚಂದ್ರಯಾನ-೧ ಯೋಜನೆಯ ಉಡಾವಣೆ ಮಂಡಳಿಯ ಮುಖ್ಯಸ್ಥರಾಗಿದ್ದರು. ಮೇ 2016ರಲ್ಲಿ ಕೇರಳ ಸರ್ಕಾರವು ಎಂ. ಸಿ. ದತ್ತನ್ ರವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ವೈಜ್ಞಾನಿಕ ಸಲಹೆಗಾರನಾಗಿ ನೇಮಿಸಿತು.[೪]

ಗೌರವಗಳು ಬದಲಾಯಿಸಿ

  1. ಪರ್ಫಾರ್ಮೆನ್ಸ್ ಎಕ್ಸಲೆನ್ಸ್ ಅವಾರ್ಡ್ (2009)
  2. ಅತ್ಯುತ್ತಮ ರಾಸಾಯನಿಕ ಎಂಜಿನಿಯರ್ ಪ್ರಶಸ್ತಿ (2009)
  3. ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ (2014)[೫]

ಉಲ್ಲೇಖಗಳು ಬದಲಾಯಿಸಿ

  1. "Chandradathan". www.vssc.gov.in. Archived from the original on 22 ಜುಲೈ 2019. Retrieved 29 December 2019.
  2. "Veterans who like poetry and books". www.telegraphindia.com. Retrieved 29 December 2019. {{cite news}}: Cite has empty unknown parameter: |1= (help)
  3. "Shri M. Chandradathan". www.lpsc.gov.in. Retrieved 29 December 2019.
  4. Jun 4, Laxmi Prasanna. "VSSC former director MC Dathan to be scientific advisor to Kerala CM | Thiruvananthapuram News - Times of India". The Times of India. Retrieved 29 December 2019. {{cite news}}: Cite has empty unknown parameters: |1= and |2= (help)CS1 maint: numeric names: authors list (link)
  5. "Madhavan Chandradathan". Edubilla.com. Retrieved 29 December 2019. {{cite news}}: Cite has empty unknown parameter: |1= (help)