ಬ್ಞಾಕೆ ಬಿಹಾರಿ ದೇವಾಲಯ

ಶ್ರೀ ಬ್ಞಾಕೆ ಬಿಹಾರಿ ಮಂದಿರವು ಭಾರತದ ಉತ್ತರ ಪ್ರದೇಶ ರಾಜ್ಯದ ಮಥುರಾ ಜಿಲ್ಲೆಯಲ್ಲಿನ ಪವಿತ್ರ ನಗರವಾದ ವೃಂದಾವನದಲ್ಲಿ ಶ್ರೀಕೃಷ್ಣನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ . ಇದು ಶ್ರೀ ರಾಧಾ ವಲ್ಲಭ ದೇವಸ್ಥಾನದ ಬಳಿ ಸ್ಥಿತವಾಗಿದೆ. ಬ್ಞಾಕೆ ಬಿಹಾರಿ ಜಿ ಯನ್ನು ಮೂಲತಃ ನಿಧಿವನದಲ್ಲಿ ಪೂಜಿಸಲಾಗುತ್ತಿತ್ತು. ಬ್ಞಾಕೆ ಎಂದರೆ "ಮೂರು ಸ್ಥಳಗಳಲ್ಲಿ ಬಾಗಿರುವ" ಮತ್ತು ಬಿಹಾರಿ ಎಂದರೆ "ಆನಂದಿಸುವವನು"

ಬ್ಞಾಕೆ ಬಿಹಾರಿ ದೇವಾಲಯದ ಮುಖ್ಯ ದ್ವಾರ

ಶ್ರೀಕೃಷ್ಣನ ವಿಗ್ರಹವು ತ್ರಿಭಂಗ ಭಂಗಿಯಲ್ಲಿ ನಿಂತಿದೆ. ಸ್ವಾಮಿ ಹರಿದಾಸರು ಮೂಲತಃ ಈ ಭಕ್ತಿ ಮೂರ್ತಿಯನ್ನು ಕುಂಜ್-ಬಿಹಾರಿ ಎಂಬ ಹೆಸರಿನಡಿ ಪೂಜಿಸುತ್ತಿದ್ದರು ("ವೃಂದಾವನದ ತೋಪುಗಳಲ್ಲಿ (ಕುಂಜ್) ಆನಂದಿಸುವವನು").

ಬ್ಞಾಕೆ ಬಿಹಾರಿ ದೇವಾಲಯವನ್ನು ಸ್ವಾಮಿ ಹರಿದಾಸರು (ದ್ವಾಪರಯುಗದಲ್ಲಿ ಲಲಿತಾ ಸಖಿ) ಸ್ಥಾಪಿಸಿದರು.[೧] ಇವರು ಪ್ರಸಿದ್ಧ ಗಾಯಕ ತಾನ್ಸೇನ್‌ನ ಗುರುಗಳು. ಪದವನ್ನು ಹಾಡಿದಾಗ ಸ್ವರ್ಗದ ದಂಪತಿಗಳಾದ ಶ್ಯಾಮಾ-ಶ್ಯಾಮ್ (ರಾಧಾ ಕೃಷ್ಣ) ಅವರ ಮತ್ತು ಅವರ ಭಕ್ತರ ಮುಂದೆ ಕಾಣಿಸಿಕೊಂಡರು. ಶ್ರೀ ಸ್ವಾಮಿ ಜಿ ಅವರ ಕೋರಿಕೆಯ ಮೇರೆಗೆ ದಂಪತಿಗಳು ಒಂದಾಗಿ ವಿಲೀನಗೊಂಡು ಬ್ಞಾಕೆ ಬಿಹಾರಿ ವಿಗ್ರಹವು ಅಲ್ಲಿ ಕಾಣಿಸಿಕೊಂಡಿತು (ದೇವಾಲಯದಲ್ಲಿ ಕಂಡುಬರುವುದು ಇದೇ ವಿಗ್ರಹ). ವಿಗ್ರಹವನ್ನು ನಿಧಿವನದಲ್ಲಿ ಸ್ಥಾಪಿಸಲಾಯಿತು.

Devotees taking darshan at Banke Bihari Mandir in Vrindavan
ವೃಂದಾವನದ ಬ್ಞಾಕೆ ಬಿಹಾರಿ ಮಂದಿರದಲ್ಲಿ ದರ್ಶನ ಪಡೆಯುತ್ತಿರುವ ಭಕ್ತರು

ಛಾಯಾಂಕಣ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

ಹೊರಗಿನ ಕೊಂಡಿಗಳು ಬದಲಾಯಿಸಿ