ಚಿಪ್ಕೊ ಚಳುವಳಿ

ಚಿಪ್ಕೊ ಚಳುವಳಿ ೧೯೭೦ರಲ್ಲಿ ನೆಡೆಯಿತು

ಚಿಪ್ಕೋ ಚಳುವಳಿ ಅಥವಾ ಚಿಪ್ಕೋ ಆಂದೋಲನ ಎಂಬುದು ಮಹಾತ್ಮ ಗಾಂಧಿಯವರ ಮೂಲಮಂತ್ರಗಳಾದ ಸತ್ಯಾಗ್ರಹ ಮತ್ತು ಅಹಿಂಸೆಗಳ ಮೂಲಕ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಮರ ಕಡಿಯುವುದರ ಬಗ್ಗೆ ಅಸಹಕಾರ ತೋರಿಸಿದ ಪ್ರಮುಖ ಚಳುವಳಿಯಾಗಿದೆ.[೧] ಚಿಪ್ಕೋ ಚಳುವಳಿಯು ಮೊದಲಿಗೆ ೧೯೭೦ರಲ್ಲಿ ಉತ್ತರಖಂಡದ ಗರ್ವಾಲಹಿಮಾಲಯ ಹಾಗೂ ಉತ್ತರಪ್ರದೇಶದಲ್ಲಿ ಅತಿಯಾಗಿ ನಡೆಯುತ್ತಿದ್ದ ಅರಣ್ಯನಾಶದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಆರಂಭವಾಯಿತು. ಮಾರ್ಚ್ ೨೬ ೧೯೭೪ರಲ್ಲಿ ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಯ ರೇನಿಹಳ್ಳಿ ಮತ್ತು ಹೇಮ ವಾಲ್ಘಂಟೆಯಲ್ಲಿ ಕೆಲವು ಮಹಿಳೆಯರು ಭಯಬೀತರಾಗಿ ತಮ್ಮ ಕಾಡಿನ ಸಾಂಪ್ರದಾಯಿಕ ಹಕ್ಕನ್ನು ವಾಪಸ್ಸು ಪಡೆಯುವ ಸಲುವಾಗಿ ಇವರು ಮರಕಡಿಯುವುದನ್ನು ವಿರೋಧಿಸಿ ಹೋರಾಟ ನಡೆಸಿದರು. ಈ ಘಟನೆಯನ್ನು ಈ ಚಳುವಳಿಯ ಪ್ರಮುಖ ಘಟನೆ ಎನ್ನಬಹುದು. ಏಕೆಂದರೆ ಈ ಹೋರಾಟ ಇಂತಹ ನೂರಾರು ಘಟನೆಗಳಿಗೆ ಸ್ಪೂರ್ತಿಯಾಯಿತು ಮತ್ತು ಇದು ಪ್ರಖ್ಯಾತ ಉತ್ತರಖಂಡದಾದ್ಯಂತ ಹಬ್ಬಿತು. ನಂತರ ೧೯೮೦ರ ವೇಳೆಗೆ ಈ ಚಳುವಳಿ ಇಡೀ ಭಾರತದಾದ್ಯಂತ ವ್ಯಾಪಿಸಿತು ಮತ್ತು ಬಿಂದ್ಯಾ ಮತ್ತು ಪಶ್ಚಿಮ ಘಟ್ಟಗಳಲ್ಲಿ ಅತೀ ಹೇರಳವಾಗಿ ನಡೆಯುತ್ತಿದ್ದ ಅರಣ್ಯ ನಾಶಕ್ಕೆ ಪೂರ್ಣವಿರಾಮ ನೀಡಲು ಈ ಘಟನೆ ಸಹಾಯಕವಾಯಿತು. ಈಗ ಈ ಘಟನೆ ಗರ್ವಾಲದ ಚಿಪ್ಕೋ ಚಳುವಳಿಗೆ ಮುನ್ಸೂಚನೆ ಹಾಗೂ ಸ್ಪೂರ್ತಿಯ ಸೆಲೆಯಾಗಿ ಕಾಣುತ್ತಿದೆ. ಇದರ ಪ್ರಮುಖ ನಾಯಕರು ಸುಂದರ್ ಲಾಲ್ ಬಹುಗುಣ ಆಗಿದ್ದರು.

೨೦೦೪ ರ ಚಿಪ್ಕೊ ಚಳುವಳಿಯಲ್ಲಿ ಭಾಗವಹಿಸಿದ ಕೆಲ ಮಹಿಳೆಯರು

ಇತಿಹಾಸ ಬದಲಾಯಿಸಿ

ಚಿಪ್ಕೋ ಚಳುವಳಿಯ ಕಾಡಿನ ರಕ್ಷಣೆಗಾಗಿ ನಡೆದ ಹೋರಾಟ ಎನ್ನುವುದಕ್ಕಿಂತಲ್ಲೂ ಅಲ್ಲಿನ ಜನರ ಜೇವನೋಪಾಯದ ರಕ್ಚಣೆಗಾಗಿ ನಡೆದ ಹೋರಾಟ ಎಂಬುದು ಹೆಚ್ಚಿನ ಪರಿಸರವಾದಿಗಳ ಮಾಪನದಿಂದ ತಿಳಿದು ಬಂದಿದೆ. ಅಲ್ಲದೇ ಈ ಚಳುವಳಿ ಪ್ರಪಂಚದಾದ್ಯಂತ ಒಂದು ಅಹಿಂಸಾತ್ಮಕ ಚಳುವಳಿಯೆಂಬ ನಿದರ್ಶನಕ್ಕೆ ಪಾತ್ರವಾಯಿತು. ಯಾವುದೇ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಈ ಪರಿಸರ ಚಳುವಳಿ ನಡೆಸುವುದು ಕಷ್ಟ ಎನ್ನುವ ಸಂದರ್ಭದಲ್ಲಿ ಇದು ಜನ್ಮತಾಳಿತು. ಈ ಅಹಿಂಸಾತ್ಮಕ ಚಳುವಳಿಯ ಯಶಸ್ವಿಗೆ ಬಹಳ ಪರಿಸರವಾದಿಗಳ ಗಮನಕ್ಕೆ ಬಂದಾಗ ಅದರಿಂದ ಸ್ಪೂರ್ತಿಗೊಂಡ ಇವರು ಬಿರುಸಾಗಿ ಸಾಗುತ್ತಿದ್ದ ಅರಣ್ಯ ನಾಶವನ್ನು ತಡೆದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪರಿಸರ ನಮ್ಮ ಜೇವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ನಿರೂಪಿಸಿದರು. ಈ ಮೇಲಿನ ಎಲ್ಲಾ ಸಂಗತಿಗಳು ಭಾರತದ ನಾಗರಿಕ ಸಮಾಜವನ್ನು ಬಡಿದೆಬ್ಬಿಸಿದೆ. ಇದಾದ ೨೫ ವರ್ಷಗಳ ಬಳಿಕ "ಇಂಡಿಯಾ ಟುಡೇ" ಚಿಪ್ಕೋ ಚಳುವಳಿಯ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸುಮಾರು ನೂರಾರು ಜನ ಭಾರತವನ್ನು ಮಾದರಿಯಾಗಿಸಿದರೆಂದು ಪ್ರಕಟಿಸಿತ್ತು. ಅದರೆ ಇತ್ತೀಚಿಗೆ ಇದು ಪರಿಸರ ಸಮಾಜ ಎನ್ನುವುದಕ್ಕಿಂತಲೂ ಸ್ತ್ರೀ ಪರಿಸರವಾದ ಎಂದು ಚಾಲ್ತಿಯಲ್ಲಿದೆ. ಈ ಚಳುವಳಿಯ ಬೆನ್ನೆಲುಬು ಕೇವಲ ಹೆಂಗಸರು ಮಾತ್ರವೇ ಅಲ್ಲ ಏಕೆಂದರೆ ಈ ಚಳುವಳಿಯ ಹೆಚ್ಚಿನ ನಾಯಕರು ಗಂಡಸರೇ ಆಗಿದ್ದಾರೆ. ಆದರೂ ಹೆಂಗಸರು ಇದರ ಮುಖ್ಯ ಮೂಲಾಧಾರಸ್ತಂಭ ಏಕೆಂದರೆ ಅತಿಯಾದ ಅರಣ್ಯನಾಶದಿಂದ ಅಡುಗೆಗೆ ಸೌದೆಯ ಅಭಾವ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಮತ್ತು ನೀರಾವರಿಗೆ ಹಾಗೂ ಕುಡಿಯುವ ನೀರಿನ ಕೊರತೆ, ಇಂತಹ ಸಮಸ್ಯೆಗಳಿಂದ ಪ್ರಭಾವಿತಗೊಂಡು ಈ ಚಳುವಳಿಯಲ್ಲಿ ಧೈರ್ಯವಾಗಿ ಮೊದಲು ದುಮ್ಮುಕಿದವರು ಹೆಂಗಸರು. ಹಾಗಾಗಿ ಹೆಂಗಸರು ಸಹಾ ಈ ಚಳುವಳಿಯ ಮೂಲಾಧರವೆಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ವರ್ಷಗಳು ಉರುಳಿದಂತೆ ಚಿಪ್ಕೋ ಚಳಿವಳಿಯ ಅಡಿಯಲ್ಲಿ ಗಿಡನೆಡುವ ಮರಬೆಳೆಸುವ ಕಾರ್ಯಗಳು ನಡೆದವು. ಚಿಪ್ಕೋ ಚಳುವಳಿಯ ವಕ್ತಾರರು ಕಾಡು ಬೆಳೆಸುವುದರಲ್ಲಿ ಮೊದಲಿಗರೆನ್ನಿಸಿದರು. ೧೯೮೭ರಲ್ಲಿ ಈ ಚಳುವಳಿಯು ಜೀವನಾಧಾರದ (Right Lively hood Award) ಹಕ್ಕು ಎಂಬ ಗೌರವಕ್ಕೆ ಪಾತ್ರವಾಯಿತು.[೨]

ಉಗಮ (ಮೂಲ) ಬದಲಾಯಿಸಿ

  • "ಮಾತು ಹಮ್ರು, ಪಾನಿ ಹಮ್ರು, ಹಮ್ರು ಹೈ ಛಾನ್ ಯಿ ಬೌನ್ ಬಿ......ಪಿತ್ರೊನ್
  • ನಾ ಲಗಾಯಿ ಚೊಉನ್, ಹಮುನಹಿ ತಾ ಚನ್ ಬಿ."
  • "ಮಣ್ಣು ನಮಗಾಗಿ, ನೀರು ನಮಗಾಗಿ, ನಾವು ಕಾಡಿಗಾಗಿ, ನಮ್ಮ ಪೂರ್ವಿಕರು ಇದನ್ನು ಬೆಳೆಸಿದರು. ಅದನ್ನು ಕಾಪಾಡುವುದು ನಮ್ಮ ಕರ್ತವ್ಯ." (ಹಳೆಯ ಚಿಪ್ಕೋ ಹಾಡು (ಗರ್ವಾಲಿ ಭಾಷೆ)

ಶ್ರಮಿಕ ವರ್ಗದ ಸಮಸ್ಯೆಗಳು ಬದಲಾಯಿಸಿ

ಭಾರತದಲ್ಲಿ ವಿನಾಶಕ ರೀತಿಯಲ್ಲಿ ಹೆಚ್ಚುತ್ತಿದ್ದ ಅರಣ್ಯನಾಶ ಸೌದೆಗಾಗಿ ಕಟ್ಟಿಗೆಗಳನ್ನು ಮತ್ತು ಮೇವು ಸಂಗ್ರಹಿಸುತ್ತಿದ್ದ ಶ್ರಮಿಕ ವರ್ಗದ ಜನರಿಗೆ ಅಪಾಯ ತಂದೊಡ್ಡಿತು. ಅಷ್ಟೆ ಅಲ್ಲದೆ ಮಣ್ಣಿನ ಸವಕಳಿ ಮತ್ತು ಗುಡ್ಡ ಪ್ರದೇಶದಲ್ಲಿ ನೀರಿನ ಮೂಲಗಳು ಬತ್ತಿಹೋಗುವುದು ಮುಂತಾದ ಸಮಸ್ಯೆ ಗಳಿಗೆ ಇದು ಕಾರಣವಾಯಿತು. ಇದಾದ ತರುವಾಯ ಈ ಪ್ರದೇಶಗಳಲ್ಲಿನ ಜನರು ಮೇವಿನ ಅಭಾವದಿಂದಾದ ಜಾನುವಾರುಗಳನ್ನು ಸಾಕುವುದನ್ನೇ ಬಿಡಬೇಕಾಯಿತು. ಅರಣ್ಯ ರಕ್ಷಣೆಗೆಂದೆ ರೂಪಿಸಿದ ಕಾಯ್ದೆಗಳಾದ ಅಂದರೆ ೧೯೭೨ರಲ್ಲಿ ರೂಪುಗೊಂಡ ಭಾರತ ಅರಣ್ಯ ಕಾಯ್ದೆಯಿಂದ ಈ ಬಿಕ್ಕಟ್ಟು ಇನ್ನೂ ಅಧಿಕವಾಯಿತು. ಈ ಕಾಯ್ದೆಯ ಪ್ರತಿಫಲವಾಗಿ ಕಡಿಮೆ ಉಳುಮೆ ಭೂಮಿ ಹೊಂದಿದ್ದ ಹಾಗೂ ನೈಸರ್ಗಿಕ ಸಂಪತ್ತಿದ್ದರೂ ತುಂಬಾ ಬಡವರಾಗಿದ್ದ ಅಧಿಕ ಸಂಖ್ಯೆಯಲ್ಲಿದ್ದ ಜನರನ್ನು ಕಾಡಿನ ಪ್ರವೇಶ ಮಾಡುವುದನ್ನು ನಿರ್ಬಂಧಿಸಲಾಯಿತು. ಇದರ ಪರಿಣಾಮವಾಗಿ ಇಂತಹ ಕೆಳಮಟ್ಟದ ಆರ್ಥಿಕ ಪರಿಸ್ಥಿತಿ ಹೊಂದಿದ್ದ ಈ ಜನರು ೧೯೬೦ರಲ್ಲಿ ತಮ್ಮ ಜೀವನೋಪಾಯಕ್ಕೆ ಕೆಲಸಗಳನ್ನು ಹರಸಿ ಮೈದಾನ ಪ್ರದೇಶಗಳನ್ನು ಹುಡುಕಿಕೊಂಡು ಕಡಿಮೆ ಜನರಿರುವ ಪ್ರದೇಶಗಳಿಗೆ ಸ್ಥಳಾಂತರಗೊಂಡರು. ಕ್ರಮೇಣ ಅಲ್ಲಿಯ ಜನರು ತಮ್ಮ ಜೀವನಾಧಾರವಾಗಿದ್ದ ಕಾಡಿಂದ ತಮ್ಮನ್ನು ಕಸಿದು ಕೊಂಡಿದ್ದರ ಈ ಪರಿಸರ ಬಿಕ್ಕಟ್ಟಿನಿಂದ ಜಾಗೃತಗೊಂಡರು. ಇದರ ಪರಿಣಾಮವಾಗಿ ೧೯೬೪ರಲ್ಲಿ ದಾಶೋಲಿ ಗ್ರಾಮ ಸ್ವರಾಜ್ಯ ಸಂಘ (DGSS) "ದಾಸೋಲಿ ಸೋಸೈಟಿ ಫಾರ್ ವಿಲೇಜ್ ಸೇಲ್ಪ್ ರೂಲ್" ಎಂಬ ಸಂಫವು ಗಾಂಧಿ ಸಮಾಜ ಸೇವಕರಾದ ಚಂಡೀಪ್ರಸಾದ್ (ಗೋಪೇಶ್ವರ್), ಜಯಪ್ರಕಾಶ್ ನಾರಾಯಣ್ ಮತ್ತು ಸರ್ವೋದಯ ಚಳುವಳಿಯಿಂದ ಸ್ಪೂರ್ತಿಗೊಂಡು ಗುಡಿ ಕೈಗಾರಿಕೆಯಲ್ಲಿ ಕಾಡಿನ ಸಂಪತ್ತನ್ನು ಬಳಸಬಹುದೆಂಬ ಗುರಿಯೊಂದಿಗೆ ಸ್ಥಾಪಿಸಿದರು. ಇದರ ಪ್ರಥಮ ಕಾರ್ಯವೆಂದರೆ ಗೋಪೇಶ್ವರದ ಸ್ಥಳೀಯರಿಗೆ ಉಳುಮೆ ಭೂಮಿ ಒದಗಿಸಿಕೊಟ್ಟಿದ್ದು. ನಂತರ ೧೯೮೦ರಲ್ಲಿ ದಾಸೋಲಿ ಗ್ರಾಮ ಸ್ವರಾಜ್ಯ ಸಂಘ (DGSS ) ದಾಸೋಲಿ ಗ್ರಾಮ್ ಸ್ವರಾಜ್ ಮಂಡಲಿ (DGSM) ಎಂದು ಮರು ನಾಮಕರಣಗೊಂಡಿತು. ಇದಲ್ಲದೆ ಅವರು ಇನ್ನೊಂದು ವಿಷಮ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭ ಒದಗಿತ್ತು. ಅದೆನೆಂದರೆ ವಸಾಹತು ಕಾಲದಿಂದ ರೂಢಿಯಲ್ಲಿದ್ದ ಅರಣ್ಯ ನಿಯಮಗಳು ಮತ್ತು ಕಂಟ್ರಾಕ್ಟರ್ ಪದ್ಧತಿಗಳು ಈ ಅರಣ್ಯ ನಿಯಮದ ಪ್ರಕಾರ ಅಲ್ಲಿನ ಕಾಡನ್ನು ಭಾಗಗಳಾಗಿ ವಿಭಾಗಿಸಿ ದೊಡ್ಡ-ದೊಡ್ಡ ಕಂಟ್ರಾಕ್ಟರ್ ಗಳಿಗೆ ಗುತ್ತಿಗೆ ನೀಡಲಾಗಿತ್ತು. ಅಗಾಗಿ ಮೈದಾನ ಪ್ರದೇಶಕಗಳಲ್ಲಿ ತುಂಬಾ ಕೆಳ ದರ್ಜೆಯ ಕೆಲಸಗಳಾದ ಬಂಡೆ ಒಡೆಯುವುದು, ಮನೆಗೆಲಸ, ಮುಂತಾದವುಗಳನ್ನು ಬಿಟ್ಟು ಕೌಶಲ್ಯವೊಂದಿದ್ದ ಕಾರ್ಮಿಕರು ಈ ದೊಡ್ಡ ಪ್ರದೇಶಳಲ್ಲಿ ಬಂದರು. ಮತ್ತೊಂದು ರೀತಿಯಲ್ಲಿ ಮೊದಲೇ ತಮ್ಮ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದ ಗುಡ್ಡಗಾಡ್ಡು ಜನರ ಜೊತೆಗೆ ಹೊರಗಿನ ಪ್ರದೇಶಗಳಿಂದ ಜನರು ಹರಿದು ಬಂದಿದ್ದು ಪರಿಸರ ಸಮನತೋಲನ ವಿಷಯಕ್ಕೆ ಕುಂದುತರುವ ಕೆಲಸವಾಗಿತ್ತು. ಹೀಗೆ ತೀವ್ರವಾಗಿ ಹೆಚ್ಚುತಿದ್ದ ಅರಣ್ಯನಾಶ ಪರಿಸರ ಅಸಮತೋಲನಕ್ಕೆ ಕಾರಣವಾಗಿರುತ್ತದೆಂಬ ಜಾಗೃತ ಭಾವನೆಯನ್ನು ಗರ್ವಾಲ ಜನತೆಯ ಮನದಲ್ಲಿ ಮೂಡಿಸಿತ್ತು. ಇದೇ ರೀತಿ ಮರಗಳನ್ನು ಕಡಿಯುತ್ತಿದ್ದರ ಪರಿಣಾಮ ವಾಗಿ ಜುಲೈ ೧೯೭೦ರಲ್ಲಿ ಅಲಕಾನಂದ ನದಿ ಪ್ರವಾಹವು ಬದ್ರಿನಾಥ ಬಳಿ ಇರುವ ಹನುಮನ ಚಟ್ಟಿಯಿಂದ ಹರಿದ್ವಾರದವರೆಗೆ ಸುಮಾರು ೩೫೦ ಕಿ.ಮೀ. ಸೇರಿದಂತೆ ಹಲವು ಹಳ್ಳಿಗಳು ಸೇತುವೆ ರಸ್ತೆಗಳು ನಾಶವಾದವು. ಈ ಘಟನೆ ನಡೆದಿದ್ದರಿಂದ ಮತ್ತು ಹೆಚ್ಚುತ್ತಿದ್ದ ಯಾಂತ್ರಿಕ ಕಾರ್ಯಗಳಿಂದ ಈ ಪ್ರದೇಶಗಳಲ್ಲಿ ಭೂ ಕುಸಿತ ಸರ್ವೇ ಸಾಮಾನ್ಯವಾಯಿತು.

ಸಂಘಟನೆ ಬದಲಾಯಿಸಿ

  • ಹಳ್ಳಿಯ ಜನರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಹೆಂಗಸರು ಸ್ವತಃ ತಾವೇ ಚಿಕ್ಕ-ಚಿಕ್ಕ ಗುಂಪುಗಳಾಗಿ ತಮ್ಮನ್ನು ಸಂಘಟಿಸಿಕೊಂಡು ಅವರಲ್ಲಿ ಭಯ ಹುಟ್ಟಿಸಿದ ಆರ್ಥಿಕ ವ್ಯವಾಹರಕ್ಕಾಗಿ ಮರಗಳನ್ನು ಕಡಿದು ತಮ್ಮ ಜೀವನಾಧಾರಕ್ಕೆ ಕೊಡಲಿ ಪೆಟ್ಟು ನೀಡಿದ್ದ ಕಾರ್ಯಾಚರಣೆಯ ವಿರುದ್ಧ ತಿರುಗಿ ಬೀಳಲು ಸಿದ್ಧರಾದರು. ಇದರ ಪರಿಣಾಮವಾಗಿ ೧೯೭೧ ಅಕ್ಟೋಬರ್ ರಂದು ಸಂಘದ ಜನರೆಲ್ಲಾ ಸೇರಿ ಅರಣ್ಯ ಇಲಾಖೆಯ ಈ ನಿಯಮಗಳ ವಿರುದ್ಧ ಗೋಪೇಶ್ವರದಲ್ಲಿ ಹೋರಾಟ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜಾಥಾ, ಸಮ್ಮೇಳನಗಳು ೧೯೭೨ ರಲ್ಲಿ ನಡೆದವು. ಆದರೆ ಅವುಗಳು ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ.
  • ಮೊದಲ ಹೋರಾಟ ನಡೆದ ಸಂದರ್ಭವೆಂದರೆ ಡಿ.ಜಿ.ಎಸ್.ಎಸ್.(DGSS) ಸಂಘ ಅರಣ್ಯ ಇಲಾಖೆಗೆ ತಮ್ಮ ಕೃಷಿ ಉಪಯೋಗಕ್ಕಾಗಿ ಹತ್ತು ಒಣಗಿದ ಮರಗಳನ್ನು ವಾರ್ಷಿಕವಾಗಿ ನೀಡಲು ಮನವಿ ಮಾಡಿಕೊಂಡಿತ್ತು. ಅದರೆ ಅರಣ್ಯ ಇಲಾಖೆಯು ಇದನ್ನು ತಿರಸ್ಕರಿಸಿ ಆಟದ ಸಾಮಾಗ್ರಿ ತಯಾರಿಸುವ ಸೈಮನ್ ಕಂಪನಿಗೆ ಸುಮಾರು ೩೦೦ ಮರಗಳನ್ನು ಟೆನ್ನಿಸ್ ಬ್ಯಾಟ್ ತಯಾರಿಕೆಗೆ ಗುತ್ತಿಗೆ ನೀಡಿತು (೧೯೭೩). ನಂತರ ಇದಾದ ಎರಡು ವಾರಗಳ ಬಳಿಕ ಲಂಬರ್ಮನ್ ಗಳು ಗೋಪೇಶ್ವರಕ್ಕೆ ಬಂದರು. ಇವರನ್ನು ಎದುರಿಸುವ ಸಲುವಾಗಿ ಏಪ್ರಿಲ್ ೨೪ರಂದು (೧೯೭೩) ನೂರಾರು ಹಳ್ಳಿ ಜನ ಮತ್ತು ಸಂಘದ ಸದಸ್ಯರು ಡ್ರಮ್ ಗಳನ್ನು ಬಾರಿಸುತ್ತಾ ಘೋಷಣೆಗಳನ್ನು ಕೂಗುತ್ತಾ ಕಂಟ್ರಾಕ್ಟರ್ಸ್ ಗಳನ್ನು, ಲಂಬರ್ಮನ್ ಗಳನ್ನು ಎದುರಿಸಿ ಓಡಿಸಿದರು.
  • ಆ ನಂತರ ಈ ಕಂಟ್ರಾಕ್ಟ್ ಅನ್ನು ತಕ್ಷಣವೇ ವಜಾ ಮಾಡಿ ಸರ್ಕಾರ ಸಂಘದ ಪರವಾಗಿ ತೀರ್ಪು ನೀಡಿತ್ತು ಈ ಘಟನೆಯ ಪ್ರತಿಫಲವಾಗಿ ಸಂಘದ ಜನರು ವಾರ್ಷಿಕವಾಗಿ ಮೂರು ಮರಗಳನ್ನು ತಮ್ಮ ಕೃಷಿ ಕಾರ್ಯಗಳಿಗೆ ಬಳಸಲು ಅನುಮತಿ ನೀಡಲಾಯಿತು ಮತ್ತು ವ್ಯವಾಹರಕ್ಕಾಗಿ ಮರಗಳನ್ನು ಮಾರುವ ಇಂತಹ ಅರಣ್ಯ ನಿಯಮಗಳ ಬಗ್ಗೆ ಹೆಚ್ಚು ನಿಗ ಇಡಲು ಆರಂಭಿಸಿತು. ಈ ಸಂಘ ಮರಗಳನ್ನು ಅಪ್ಪಿಕೊಳ್ಳುವುದು ಅಥವಾ ಚಿಪ್ಕೋ ಎಂಬ ಅಹಿಂಸಾತ್ಮಕ ಹೋರಾಟದ ಮೂಲಕ ಮರಗಳ ರಕ್ಷಣೆಗೆ ಪಣ ತೊಟ್ಟಿತ್ತು. ಆದರೆ ಮತ್ತೊಂದು ಅನ್ಯಾಯದ ಸಂಗತಿಯೆಂದರೆ ಈ ಹೋರಾಟಕ್ಕೆ ಕಾರಣವಾಗಿದ್ದ ಅದೇ ಕಂಪನಿಗೆ ಗೋಪೇಶ್ವರದಿಂದ ಸುಮಾರು ೮೦ ಕಿ,ಮೀ. ದೂರದಲ್ಲಿರುವ ಘಟ ಎಂಬ ಕಾಡಿನಿಂದ ಬಹಳಷ್ಟು ಮರಗಳನ್ನು ಗುತ್ತಿಗೆಗೆ ನೀಡಲಾಗಿತ್ತು.
  • ಗೋಪೇಶ್ವರದ್ದಲ್ಲಿ ನಡೆದ ವಿರೋಧದಿಂದ ಪ್ರೇರಣೆ ಪಡೆದಿದ್ದ ಇಲ್ಲಿನ ಜನರಿಂದ ಮತ್ತೇ ಅದೇ ರೀತಿಯ ವಿರೋಧವನ್ನು ಸ್ವಲ್ಪ ದಿನಗಳ ನಂತರ ಈ ಕಂಪನಿ ಎದುರಿಸಬೇಕಾಯಿತು. ಈ ಘಟನೆ ನಡೆದ ನಂತರ ಇದರಿಂದ ಜಾಗೃತಗೊಂಡ ಘಟ ಮತ್ತು ತಾರ್ಸಲಿ ಕಾಡಿಗೆ ಸಮೀಪವಿರುವ ಜನರು ಮತ್ತೇ ಕಂಟ್ರಾಕ್ಟರ್ಸ್ ಬರುವವರೆಗೆ ಅಂದರೆ, ಡಿಸೆಂಬರ್ ವರೆಗೂ ಮರಗಳ ಮೇಲೆ ಗಮನವಿಟ್ಟು ಅವರಿಂದ ಮರಗಳನ್ನು ರಕ್ಷಿಸಿದರು. ಲಂಬರ್ಮನ್ ಗಳು ಕಡಿದಿರುವ ಐದು ಮರಗಳನ್ನು ಬಿಟ್ಟು ಓಡಿಹೋದರು.
  • ತರುವಾಯ ಒಂದು ಪ್ರಮುಖವಾದ ಘಟನೆ ಕೆಲವೇ ತಿಂಗಳ ನಂತರ ಜರುಗಿತ್ತು ಅದೆನೆಂದರೆ, ಸರ್ಕಾರ ಜನವರಿ ೧೯೭೪ರಂದು ರೇನಿ(ಣಿ)ಹಳ್ಳಿಯ ಬಳಿ ಇರುವ ಅಲಕಾನಂದ ನದಿಯ ದಂಡೆಯ ಮೇಲಿದ ಸುಮಾರು ೨೫೦೦ ಮರ ಗಳನ್ನು ಹರಾಜು ಮಾಡಿತು. ಆಗ ಭಟ್ ಎಂಬುವವರು ರೇನಿ(ಣಿ)ಯ ಜನರನ್ನು ಪ್ರೇರೆಪಿಸಿ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಇದರ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದರು. ಕೆಲವೇ ಕೆಲವು ವಾರಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಭೆಗಳು ಸಮ್ಮೇಳನಗಳು ರೇನಿ(ಣಿ)ಹಳ್ಳಿಯಲ್ಲಿ ನಡೆಯತೊಡಗಿದವು.
  • ಮಾಚ್ ೨೬ ೧೯೭೪ ರಂದು ಗುತ್ತಿಗೆದಾರರು ರೇಣೀ ಹಳ್ಳಿಗೆ ಮರ ಕಡಿಯಲು ಬಂದಾಗ ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರ ಮನಸ್ಸನ್ನು ಬದಲಾಯಿಸಲು ಪರಿಹಾರವಾಗಿ ಪ್ರತಿಫಲ ಜಾಗವನ್ನು ಕೇಳಲು ಕಾರ್ಮಿಕರು ಮನೆಗೆ ಹಿಂತಿರುಗಬೇಕಾದರೆ ರೇನಿ ಹಳ್ಳಿಹವರು ಡಿ.ಜಿ.ಸ್.ಸ್. ಕಾರ್ಯಕರ್ತರು ಚಮೊಲಿ ಹಳ್ಳಿಯಲ್ಲಿಮರದ ದಿಮ್ಮಿಗಳ್ಳನ್ನು ತುಂಬಿದ ಗಾಡಿಯ ಹತ್ತಿರ ಬಂದು ಮರಕಡಿಯುವವರ ವಿರುದ್ದ ವಾಗ್ವಾದಕ್ಕಿಳಿದರು.ಆಗ ಅಲ್ಲಿನ ಸ್ಥಳೀಯ ಹುಡುಗಿ ಅವರನ್ನು ನೋಡಿ ರೇಣಿ ಹಳ್ಳಿಯ 'ಮಹಿಳಾ ಮಂಗಳ ದಳ' ದ ನಾಯಕಿಯಾದ ಗೌರಿ ದೇವಿಗೆ ವಿಷಯವನ್ನು ಮುಟ್ಟಿಸಿದಳು. ಆಗ ಗೌರಿ ದೇವಿ ಆ ಊರಿನ ೨೭ ಜನ ಮಹಿಳೆಯರೊಂದಿಗೆ ಆ ಜಾಗಕ್ಕೆ ಬಂದು ಮರ ಕಡಿಯುವುದನ್ನು ವಿರೋಧಿಸಿದರು.
  • ಯಾವಾಗ ಎಲ್ಲಾ ಮಾತು ಕಥೆಗಳು ವಿಫಲವಾದವೂ ಮತ್ತು ಮರ ಕಡಿಯುವವರು ಕಿರುಚಲು ಮತ್ತು ಮಹಿಳೆಯರನ್ನು ದುರುಪಯೋಗ ಪಡಿಸಿ ಕೊಳ್ಳಲು ಮತ್ತು ಬಂದೂಕಿನೊಂದಿಗೆ ಹೆದರಿಸಲು ಆರಂಭಿಸಿದಾಗ ಅವರು ಸಹಾಯಕ್ಕಾಗಿ ಹಾಗೂ ಮರ ಕಡಿಯುವುದನ್ನು ತಪ್ಪ್ಪಿಸಲು ಮರಗಳ್ಳನ್ನು ಅಪ್ಪಿಕೊಂಡರು. ಇದು ಹೀಗೆ ಬಹಳ ಘಂಟೆಗಳವರೆಗೆ ಮುಂದುವರೆಯಿತು. ಆ ಮಹಿಳೆಯರು ಇಡೀ ರಾತ್ರಿ ತಮ್ಮ ಮರಗಳನ್ನು ಮರ ಕಡಿಯದಂತೆ ಎಚ್ಚರಿಕೆಯಿಂದ ನೋಡಿಕೊಂಡರು. ಹಾಗಾಗಿ ಕೆಲವು ಗುತ್ತಿಗೆದಾರರು ತಮ್ಮ ಪಟ್ಟು ಸಡಿಲಿಸಿ ಹಳ್ಳಿಯನ್ನು ತೊರೆದರು.
  • ಮರುದಿನ ಅವರು ಹಿಂತಿರುಗಿದಾಗ ಈ ಚಳುವಳಿಯ ಸುದ್ದಿ ನೆರೆಹೊರೆಯ ಹಳ್ಳಿಗಳಾದ ಲಾತಾ, ಹೆನ್ವ್ವಾಲ್ಗಟಿ ಇನ್ನುಳಿದ ಹಳ್ಳಿಗಳೀಗು ತಲುಪಿ ಇನ್ನು ಹೆಚ್ಚಿನ ಜನರು ಚಳುವಳಿಯಲ್ಲಿ ಭಾಗವಹಿಸಿದರು. ಕೊನೆಗೆ ನಾಲ್ಕೈದು ದಿನಗಳಲ್ಲಿ ಸಿಂಮಾಡ್ಸ್ ಕOಪನಿಯ ಗುತ್ತಿಗೆದಾರರು ಹಳ್ಳಿಯನ್ನು ತೊರೆದರು.

ಪರಿಣಾಮಗಳು ಬದಲಾಯಿಸಿ

  • ಈ ಸುದ್ದಿ ಬಹುಬೇಗನೆ ರಾಜ್ಯದ ಮುಖ್ಯಮಂತ್ರಿಯಾದ ಹೇಮವಟಿ ನಂದನ್ ಬಹುಗುಣ ಅವರಿಗೆ ತಲುಪಿತು. ಅವರು ಈ ವಿಷಯಕ್ಕಾಗಿ ಒಂದು ಸಮಿತಿಯನ್ನು ಸಹ ರಚಿಸಿದರು.ಅದು ಹಳ್ಳಿಯವರಿಗೆ ಅನುಕೂಲಕರವಾದ ತೀರ್ಪನ್ನು ನೀಡಿತು. ಇದು ಈ ಪ್ರದೇಶ ಮತ್ತು ದೇಶದ ಎಲ್ಲಾ ಕಡೆ ಆರ್ಥಿಕ ಬೆಳವಣಿಗೆಯ ಇತಿಹಾಸದಲ್ಲಿ ಒಂದು ಮುಖ್ಯವಾದ ಅಂಶವಾಯಿತು.
  • ಈ ಹೋರಾಟ ಬಹುಬೇಗನೆ ಎಲ್ಲಾ ಸ್ಥಳಗಳಿಗೂ ಹರಡಿತು ಮತ್ತು ಸ್ವಯಂಪ್ರೆರಿತವಾದಂತಹ ಅನೇಕ ಸ್ಥಳೀಯ ಸಮುದಾಯದವರು ಮತ್ತು ಮರದ ವ್ಯಾಪಾರಿಗಳಿಗೆ ಅನೇಕ ಸ್ತಳಗಳಲಿ ವಾಗ್ವಾದನಡೆಯಿತು.. ಜೊತೆಗೆ ಮಹಿಳೆಯರು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಬೆಟ್ಟ-ಗುಡ್ಡಗಳಲ್ಲಿ ಹಿಂಸಾತ್ಮಾಕ ಕೃತ್ಯಗಳನ್ನು ಆರಂಭಿಸಿದರು. ಈ ಚಳುವಳಿಯು ತನ್ನ ನಾಯಕರ ನೇತೃತ್ವದಲ್ಲಿ ಬೃಹಾದಾಕಾರವನ್ನು ಪಡೆಯಿತು.
  • ಚಿಪ್ಕೊ ಚಳುವಳಿಯ ಹೆಸರು ತನ್ನ ಚಟುವಟಿಕೆಯೊಂದಿಗೆ ಅಂಟಿಕೊಂಡಿತು. ಇತಿಹಾಸಕಾರರ ಪ್ರಕಾರ' ಚಿಪ್ಕೊ' ಪದ ಮೊದಲು ಭಟ್ ಎನ್ನುವವರಿಂದ ಬಳಸಲ್ಪಟ್ಟಿತ್ತು. ಈ ಪದದ ಮೂಲ' ಅಂಗಲ್ವಾಲ್ತಾ' ಆಗಿದ್ದು ಗರ್ವಾಲಿ ಭಾಷೆಯಲ್ಲಿದ್ದೆ. ಈ ಪದದ ಅರ್ಥ ಅಪ್ಪಿಕೋ ಅಥವಾ ತಬ್ಬಿಕೋ ಎಂದಾಗಿದೆ. ನಂತರ ಇದನ್ನು ಹಿಂದಿ ಭಾಷೆಗೆ ಎರವಲು ಪಡೆದುಕೊಳ್ಳಲಾಗಿದ್ದು ಚಿಪ್ಕೋ ಎಂಬ ಹೆಸರನ್ನು ಪಡೆಯಿತು. ಚಿಪ್ಕೋ' ಎಂದರೆ ಹಿಂದಿಯಲ್ಲಿ 'ಕಡ್ಡಿ' ಎಂಬ ಅರ್ಥವನ್ನು ಕೊಡುತ್ತದೆ.
  • ಅನಂತರದ ಐದು ವರ್ಷಗಳಲ್ಲಿ ಈ ಚಳುವಳಿ ದೇಶದ ಎಲ್ಲಾ ಜಿಲ್ಲೆಗಳಿಗೂ ತಲುಪಿತು. ಮತ್ತೆ ಹತ್ತು ವರ್ಷದೊಳಗಾಗಿ ಉತ್ತರಾಖಂಡದ ಹಿಮಾಲಯದವರೆಗೂ ಹಬ್ಬಿತು. ಈ ಚಳುವಳಿಯಿಂದಾಗಿ ದೇಶದ ಅತಿ ದೊಡ್ಡ ಸಮಸ್ಯೆಗಳಾದ ಪರಿಸರ ಮತ್ತು ಆರ್ಥಿಕ ಸಮಸ್ಯೆಗಳು ಪ್ರಚಲಿತ ಗೊಂಡವು. ರೇಣೀ ಹಳ್ಳಿಯವರ ಬೇಡಿಕೆ ಏನೆಂದರೆ ಮರ ಕಡಿಯುವ ಅವಕಾಶವನ್ನು ಹೊರಗಿನವರಿಗೆ ನೀಡುವಂತಿರಲಿಲ್ಲ ಮತ್ತು ಅಲ್ಲಿನ ಸ್ಥಳೀಯರು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ,ನೀರು ಕಾಡಿನ ಮೇಲೆ ವಿಶೇಷ ಅಧಿಕಾರವನ್ನು ಹೊಂದಿರುವರು. ಅವರು ಬಯಸುವುದೆ ನೆಂದರೆ ಸರ್ಕಾರವು ಸಣ್ಣ ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ಕಚ್ಚಾವಸ್ತುಗಳ್ಳನ್ನು ಪೂರೈಸಿದಾಗ ಯಾವುದೆ ಪ್ರಾಣಿ ಸಸ್ಯ ಸಂಕುಲಕ್ಕೆ ತೊಂದರೆ ಆಗದೆ ದೇಶದ ನಿಶ್ಚಿತ ಅಭಿವೃದ್ಧಿ ಸಾದ್ಯವಾಗುತ್ತದೆ.
  • ಈ ಚಳುವಳಿಯಿಂದಾಗಿ ಆರ್ಥಿಕ ವಿಷಯಗಳಾದ ಭೂ ರಹಿತ ಅರಣ್ಯ ಕಾರ್ಮಿಕರು ಮತ್ತು ಅವರಿಗೆ ನಿಶ್ಚಿತ ಸಂಬಳ ಕೊಡಬೇಕೆಂಬ ವಿಶಯಗಳು ಪ್ರಚಲಿತಗೊಂಡವು. ಒಟ್ಟಾರೆಯಾಗಿ ಚಿಪ್ಕೊ ಚಳುವಳಿಯು ಪರಿಸರದ ಅವನತಿಗೆ ಎಲ್ಲರು ಕಾರಣರಾಗಿದ್ದಾರೆ ಎಂಬುದನ್ನು ತೋರಿಸಿತು ಮತ್ತು ಅದು ಶ್ರೀಮಂತರ ಜೀವನದ ಚಟುವಟಿಕಯಾದರೆ ಬಡವರ ಜೀವದ ಪ್ರಶ್ನೆಯಾಗಿದೆ ಎಂಬುದನ್ನು ಚಿಪ್ಕೋ ಚಳುವಳಿಯು ಪರಿಶೀಲಿಸಿತು.
  • ಅನೇಕ ಪಂಡಿತರು ಚಿಪ್ಕೋ ಚಳುವಳಿಯ ಪರಿಣಾಮಗಳಾನ್ನು ಅಧ್ಯಯನ ಮಾಡಿದರು. ೧೯೭೭ ರಲ್ಲಿ ಮತ್ತೊಂದು ಪ್ರದೇಶದಲ್ಲಿ ಮಹಿಳೆಯರು ಅಲ್ಲಿರುವ ಮರಗಳಿಗೆ ಪವಿತ್ರವಾದ ದಾರಗಳನ್ನು ಕಟ್ಟುವ ಮೂಲಕ ಅವುಗಳನ್ನು ಹಿಂದೂ ಸಂಪ್ರದಾಯಕ್ಕೆ ಸೇರಿಸಿದರು ಇದು ಅಣ್ಣ-ತಂಗಿ ಭಾಂಧವ್ಯವನ್ನು ತೋರಿಸುತ್ತದೆ.
  • 'ಚಿಪ್ಕೋ ಚಳುವಳಿ' ಯಲ್ಲಿ ಮಹಿಳೆಯರ ಭಾಗವಹಿಸುವಿಕೆಯೆನ್ನುವುದು ಹೊಸಬಗೆಯ ಚಳುವಳಿಯಾಯಿತು. ಕಾಡಿನ ಗುತ್ತಿಗೆದಾರರು ಆ ಸ್ಥಳದ ಗಂಡಸರಿಗೆ ಪೂರೈಸುವ ಹಾಲ್ಕೊಹಾಲ್ ಪ್ರಮಾಣವನ್ನು ದುಪ್ಪಟ್ಟಗೊಳಿಸಿದರು. ಆಗ ಮಹಿಳೆಯರು ಹಾಲ್ಕೋಹಾಲ್ ಹವ್ಯಾಸದ ವಿರುದ್ದ ಚಳುವಳಿಯನ್ನು ನಡೆಸಿದರು ಮತ್ತು ಇನ್ನುಳಿದ ಸಾಮಾಜಿಕ ವಿಶಯಗಳ ಮೇಲೆ ಬೆಳಕನ್ನು ಚೆಲ್ಲಲು ಚಳುವಳಿಯನ್ನು ವಿಸ್ತಾರಗೊಳಿಸಿದರು.
  • ೧೯೮೦ ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರು ಹಿಮಾಲಯದ ಸುತ್ತ-ಮುತ್ತಲ ಪ್ರದೇಶಗಳಲ್ಲಿ ಪುನಃ ಹಸಿರು ಮರುಕಳಿಸುವವರೆಗೆ ೧೫ ವರ್ಷಗಳ ಕಾಲ ಮರ ಕಡಿಯುವುದನ್ನು ನಿಷೇಧಿಸುವುದರೊಂದಿಗೆ' ಚಿಪ್ಕೊ' ಚಳುವಳಿ ವಿಜಯಿಯನ್ನು ಪಡೆಯಿತು.
  • ಈ ಚಳುವಳಿಯಾದ ಪ್ರಮುಖ ನಾಯಕರಾದ ' ಸುಂದರ್ ಲಾಲ್ ಬಹುಗುಣ್' ರವರು ೧೯೮೧-೮೩ ರಲ್ಲಿ ಹಿಮಾಲಯದ ಪ್ರದೇಶಗಳಿಗೆ ಪಾದಯಾತ್ರೆ ಯನ್ನು ಕೈಗೊಂಡು ಈ ಚಳುವಳಿಯ ಸಂದೇಶವನ್ನು ಅಲ್ಲಿಗು ತಲುಪಿಸಿದರು ಹಾಗಾಗಿ ಅಲ್ಲಿನ ಮಹಿಳೆಯರು ಸಹ ಚಳುವಳಿಗೆ ಸಹಕಾರವನ್ನು ನೀಡಿದರು.ಮತ್ತು ಜೊತೆಗೆ ಅಲ್ಲಿನ ಸ್ಥಳೀಯರಿಗೆ ಕಡಿಮೆ ಧರದಲ್ಲಿ ಮೇವನ್ನು ಉತ್ಫಾದಿಸಲು ವ್ಯವಸ್ಥೆಯನ್ನು ಮಾಡಿದರು. ಅವರು ಮೇವು ಸಂಗ್ರಹಣೆಗಾಗಿ ಭೂಮಿಯ ಪಾಳಿಯ ಯೋಜನೆಗೆ ಸೇರಿಕೊಂಡರು ಮತ್ತು ಕಡಿಮೆ ಉತ್ಪಾದನೆ ಕೊಡುವ ಭೂಮಿಯಲ್ಲಿ ಮರ-ಗಿಡಗಳುನ್ನು ನೆಡಲು ಸಹಾಯ ಮಾಡಿದರು. ಅವರು ಆಯ್ಕೆ ಮಾಡಿ ಕೊಂಡಂತಹ ಯಾವುದೇ ಜಾತಿಯ ಸಸ್ಯಗಳನ್ನು ಸಂಗ್ರಹಿಸುವ ಮತ್ತು ಬೆಳುಸುವ ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿದರು

ಭಾಗವಹಿಸಿದವರು ಬದಲಾಯಿಸಿ

೧೯೭೪ರಲ್ಲಿ ರೆಣೀಹಳ್ಳಿಯಲ್ಲಿ ನಡೆದ ಚಳುವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೇಯರು ಜೆನ್ವಾಡಸನ್ನು ಬಿಟ್ಟು ೩೦ ವರ್ಷಗಳ ನಂತರ ಹೊಸದಾಗಿ ಸೇರಿದರು. ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದುದ್ದು ಚಿಪ್ಕೋ ಚಳುವಳಿಯ ಪ್ರಮುಖ ಲಕ್ಷಣವಾಗಿದೆ.

  • ಆಗ್ರೆರಿಯನ್ ಎಕಾನಮಿ ಎನ್ನುವುದು ಉತ್ತಾರಾಖಂಡದ ಬೆನ್ನುಮೂಳೆ ಇದ್ದ ಹಾಗೆ ಮತ್ತು ಅಲ್ಲಿನ ಮಹಿಳೆಯರ ಮೇಲೆ ಪರಿಸರದ ಅವನತಿ ಮತ್ತು ಮರ ಕಡಿಯುವುದು ಅಗಾಧವಾದ ಪರಿಣಾಮವನ್ನು ಬೀರಿದ್ದರಿಂದ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಭಗವಹಿಸಿದ್ದರು ಎಂದು ಹೇಳಲಾಗಿದೆ. ಇದು ಎಷ್ಟರ ಮಟ್ಟಿಗೆ ಚಳುವಳಿಯಲ್ಲಿ ಭಾಗವಹಿಸಿದ್ದವರ ಮೇಲೆ ಪರಿಣಾಮ ಬೀರಿತು ಎನ್ನುವುದು ಇಂದಿಗೂ ಸಹ ವಾದ-ವಿವಾದದಲ್ಲಿದೆ.
  • ಆದಾಗ್ಯು, ಚಳುವಳಿಯಲ್ಲಿ ಮಹಿಳೆಯರು ಮತ್ತು ಪುರುಷರಿಬ್ಬರೂ ಪರಿಗಣಿಸಬಲ್ಲ ಪಾತ್ರವನ್ನು ನಿರ್ವಹಿಸಿದರು. ಅದರಲ್ಲಿ ಪ್ರಮುಖರೆಂದರೆ- ಗೌರಿದೇವಿ, ಸುದೇಶದೇವಿ, ಬಚ್ನಿದೇವಿ, ಚಂಡಿ ಪ್ರಸಾದ್ ಭಟ್, ಸುಂದರ್ಲಾಲ್ ಬಹುಗುಣ, ಗೋವಿಂದಸಿಂಗ್ ರಾವತ್, ಧೂಮ್ ಸಿಂಗ್ ನೇಗಿ, ಮತ್ತು ಚಿಪ್ಕೋಚಳುವಳಿಯ ಕವಿಯಾದ ಘನಶಾಮ್ ರಾವೊರಿ, ಅವರು ಅನೇಕ ಪರಿಸರ ಗೀತೆಗಳನ್ನು ರಚಿಸುವ ಮೂಲಕ ಹಿಮಾಲಯದ ಜನರಲ್ಲಿ ಪರಿಸರ ಪ್ರಜ್ನೆಯನ್ನು ಮೂಡಿಸಿದರು. ಇದನ್ನು ಹೊರತು ಪದಿಸಿ ೧೯೮೨ರಲ್ಲಿ ಚಂಡಿ ಪ್ರಸಾದ್ ಭಟರು 'ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ'ಯನ್ನು ಮತ್ತು ೨೦೦೯ರಲ್ಲಿ ಸುಂದರ್ ಲಾಲ್ ಬಹುಗುಣರವರು 'ಪದ್ಮ ವಿಭೂಷಣ 'ಪ್ರಶಸ್ತಿಯನ್ನು ಪಡೆದರು.

ನಂತರದ ಪರಿಣಾಮಕಾರಿ ಘಟನೆಗಳು ಬದಲಾಯಿಸಿ

  • ೧೯೮೦ರಲ್ಲಿ ತೆಹ್ರಿ ಜಿಲ್ಲೆಯಲ್ಲಿ ಚಿಪ್ಕೋಚಳುವಳಿಯ ಕಾರ್ಯಕರ್ತರು 'ಡೂನ್ವ್ಯಾಲಿ'ಯಲ್ಲಿಯಲಿರುವ ಸುಣ್ಣದಕಲ್ಲು ಗಣಿಯನ್ನು ರಕ್ಷಿಸಿದರು. ಈ ಚಳುವಳಿ ಡೆಹ್ರಾಡೂನ್ ಜಿಲ್ಲೆಯವರೆಗೂ ಹಬ್ಬಿತು ,ಅದು ಈಗಾಗಲೆ ವನಸ್ಪತಿ ಮತ್ತು ಪ್ರಾಣಿ ಸಂಕುಲದ ನಾಶದಿಂದಾಗಿ ಕಾಡಿನ ಅವನತಿ ಉಂಟಾಗಿತ್ತು.
  • ಚಿಪ್ಕೋ ಚಳೂವಳಿಯಿಂದಾಗಿ ಕೆಲವೊಂದು ವರ್ಷಗಳ ನಂತರ ಅಲ್ಲಿ ಕಲ್ಲು ಗಣಿಗಾರಿಕೆ ನಿಂತು ಹೋಯಿತು.
  • ೧೯೮೦ರಲ್ಲಿ ಚಿಪ್ಕೋ ಚಳುವಳಿಯ ಕಾರ್ಯಕಾರ್ತರಾದ ಸುಂದರ್ ಲಾಲ್ ಬಹುಗುಣರವರು 'ತೆಹ್ರಿ' ಡ್ಯಾಮ್ ಕಟ್ಟುವುದನ್ನು ವಿರೋಧಿಸಿ 'ಭಗೀರಥಿ' ನದಿಯನ್ನು ಕಾಪಾಡಿದರು. ಇದಾದ ನಂತರ ಸಸ್ಯಗಳ ಮಡಿಗಳ್ಳಾನ್ನು ಕಾಪಾಡಲು 'ಬೀಚ್ ಬಚಾವೊ' ಆಂದೋಲನವನ್ನು ಆರಂಭಿಸಿದರು ಅದು ಇಂದಿಗೂ ಮುಂದುವರಿಯುತ್ತಿದೆ.
  • ಇದಾದ ನಂತರ ಯು,ನ್.ಇ.ಪಿ ಪ್ರಕಟಿಸಿದಂತೆ ಚಿಪ್ಕೊ ಚಳುವಳಿಯ ಕಾರ್ಯಕರ್ತರು ಸಾಮಾಜಿಕ- ಆರ್ಥಿಕ ಬದಲಾವಣೆ ತರುವಲ್ಲಿ ಮತ್ತು ಕಾಡಿನ ಭೂಮಿಯನ್ನು ನಗರ ಕೇಂದ್ರಿತ ವಸ್ತುಗಳನ್ನು ಉತ್ಪಾದಿಸಲು ಹಂಬಲಿಸುವ ಅಧಿಕಾರಶಾಹಿ ಕೈಗಳಿಂದ ತಮ್ಮ ಕಾದಿನ ಸಂಪನ್ಮೂಲಗಳ ಮೇಲೆ ಅಧಿಕಾರ ಸಾಧಿಸುವಲ್ಲಿ ವಿಜಯರಾದರು ಎಂದು ಹೇಳಿದೆ.
  • ಈ ಚಳುವಳಿಯು ಸಾಮಾಜಿಕ- ಪರಿಸರಾತ್ಮಾಕ ಚಳುವಳಿಯಾಗಿದ್ದು ಇನ್ನುಳೀದ ಕಾಡಿನ ಪ್ರದೇಶಗಳದ ಹಿಮಾಚಲ ಪ್ರದೇಶ,ರಾಜಸ್ಥಾನ, ಬಿಹಾರದಲ್ಲಿ ಹೆಸರಾಗಿದೆ.
  • ಪಶ್ಚಿಮದ ಕಣಿವೆ ಮತ್ತು ವಿಂಧ್ಯ ಪರ್ವತಗಳಲ್ಲಿ ನಡೆದ ಮರ ಕಡಿಯುವುದನ್ನು ವಿರೋಧಿಸಿ ಕರ್ನಾಟಕಾದಲ್ಲಿ ನಡೆದ 'ಅಪ್ಪಿಕೋ 'ಚಳುವಳಿಗೆ[೧೯೮೩] ಸ್ಪೂರ್ತಿಯಾಗಿದೆ. ಇದು'ಕುಮ್ಹಾನ್' ಸ್ಥಳ ಅಪ್ಪಿಕೋ ಚಳುವಳಿಯ ಮೂಲವಾಗಿದ್ದು ಇದು ೨೦೦೦ನೇ ಇಸವಿಯಲ್ಲಿ ಯಶಸ್ವಿಯನ್ನು ಪಡೆಯಿತು.
  • ಇತ್ತೀಚಿನ ದಿನಗಳಲ್ಲಿ ಈ ಚಳುವಳಿಯು ಕೇವಲ ಸ್ಪೂರ್ತಿಯನ್ನು ನೀಡದೆ ಜೊತೆಗೆ ಕಾರ್ಯರೂಪದ ಯೋಜನೆಗಳಾದ ನೀರಿನ ನಿರ್ವಹಣೆ, ಇಂಧನ ರಕ್ಷಣೆ, ಅರಣ್ಯಿಕರಣ ಮತ್ತು ಇವುಗಳ ಮರುಬಳಕೆ ಯೋಜನಗಳಿಗೆ ಸ್ಪೂರ್ತಿಯನ್ನು ನೀಡಿದೆ. ಇದರ ಜೊತೆಗೆ ಪಂಡಿತರಿಗೆ ಹಿಮಾಲಯ ಮತ್ತು ಭಾರತದ ಪರಿಸರದ ಅವನತಿ ಮತ್ತು ರಕ್ಷಣೆಯ ವಿಧಾನಗಳನ್ನು ಅಧ್ಯಯನ ಮಾಡಲು ಪ್ರೋತ್ಸಾಹವನ್ನು ನೀಡಿದೆ.
  • ಮಾರ್ಚ್ ೨೬, ೨೦೦೪ರಂದು ರೇಣಿ, ಲಾತಾ ,ಮತ್ತು ಉಳಿದ ಹಳ್ಳಿಗಳದ ನಿತಿ ಕಣಿವೆಯಲ್ಲಿ ಚಿಪ್ಕೋ ವಳುವಳಿಯ ೩೦ ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಅಲ್ಲಿ ಚಿಪ್ಕೊ ಚಳುವಳಿಯಲ್ಲಿ ಭಾಗವಹಿಸಿದ್ದವರೆಲ್ಲಾ ಒಟ್ಟುಗೂಡಿದರು.
  • ಈ ಚಳುವಳಿಯ ಸಮಾರಂಭ ಲಾತಾ ಹಳ್ಳಿಯಲ್ಲಿ ಆರಂಭವಾಯಿತು. ಅದು ಚಿಫ್ಕೊ ಚಳುವಳಿಯ ನಾಯಕಿಯಾದ ಗೌರಿದೇವಿಯವರ ಊರಾಗಿತ್ತು ಮತ್ತು ಚಿಪ್ಕೋ ಚಳೂವಳಿಯ ನಾಯಕರಾದ ಗೋವಿಂದ್ ಸೀಂಗ್ ರಾವತ್ನ ಹೆಂಡತಿಯಾದ ಪುಷ್ಪದೇವಿ ,ಹೆನ್ವಾಲ್ ಘಟಿಯ ಚಿಪ್ಕೋ ನಾಯಕ ರಾದ ಧೂಮ್ ಸಿಂಗ್ ನೇಗಿ, ತೆಹರಿ ಗರ್ಹ್ವಾಲ್ ಮುಂತಾದವರು ಭಾಗವಹಿಸಿದ್ದರು. ಈ ಮೆರವಣಿಗೇ ೧೯೭೪,ಮಾರ್ಚಿ೨೪ ರಲ್ಲಿ ಚಿಪ್ಕೋ ಘಟನೆ ನಡೆದಿದ್ದ ರೇಣಿ ಹಳ್ಳಿಯ ಹತ್ತಿರ ಮುಂದುವರೆಯಿತು.. ಇದು ದೇಶದಲ್ಲಿ ಈಗಿನ ಪರಿಸ್ಥಿತಿಯನ್ನು ಅಭಿವೃದ್ದಿ ಪಡಿಸಿಕೊಳ್ಳಲು ಆರಂಭದ ಗುರುತಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. Robbins, Paul (2004). Hijacking Chipko Political ecology: a critical introduction. Wiley-Blackwell. p. 194. ISBN 1-4051-0266-7. {{cite book}}: More than one of |pages= and |page= specified (help)
  2. Chipko Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. Right Livelihood Award Official website.