ಎನ್.ಎಸ್.ಸುಬ್ಬರಾವ್

ರಾಜಕಾರ್ಯ ಪ್ರವೀಣ ಎನ್.ಎಸ್.ಸುಬ್ಬರಾವ್ ಇವರು ನಂಜನಗೂಡಿನಲ್ಲಿ ೧೮೮೫ರಲ್ಲಿ ಜನಿಸಿದರು. ಎನ್.ಎಸ್.ಸುಬ್ಬರಾಯರು ಶಿಕ್ಷಕರೂ, ಶಿಕ್ಷಣ ತಜ್ಞರೂ, ಅರ್ಥಶಾಸ್ತ್ರ ವಿಶಾರದರೂ ಆಗಿದ್ದರು. ಇವರು ೧೯೩೫ರಲ್ಲಿ ಮುಂಬಯಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಎನ್.ಎಸ್.ಸುಬ್ಬರಾವ್ ೧೯೪೩ರಲ್ಲಿ ನಿಧನರಾದರು.