ಈ ಸಂಜೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ


ಈ ಸಂಜೆ - ಒರಟ ಐ ಲವ್ ಯೂ ಖ್ಯಾತಿಯ ಶ್ರೀ ಬರೆದು ನಿರ್ದೇಶಿಸಿದ 2011 ರ ಕನ್ನಡ ಭಾಷೆಯ ಪ್ರಣಯ ಚಿತ್ರ . ಇದರಲ್ಲಿ ಹೊಸಬರಾದ ಆರ್ಯ ಮತ್ತು ಸಂಜನಾ ಕಾಣಿಸಿಕೊಂಡಿದ್ದಾರೆ. ಜೈ ಶಿವ ಸಂಗೀತ ಸಂಯೋಜಿಸಿದ್ದು, ಶಂಕರ್ ಅವರ ಛಾಯಾಗ್ರಹಣವಿದೆ.

ಈ ಸಂಜೆ
ನಿರ್ದೇಶನಶ್ರೀ
ನಿರ್ಮಾಪಕಆರ್. ಬಾಲಾಜಿ ಸಿಂಗ್
ಎಲ್. ಮಂಜುನಾಥ್
ಎನ್. ಸುರೇಶ್
ಶಂಕರ್ ರೆಡ್ಡಿ
ಪಿ. ಸುರೇಶ್ ಹಂದೆ
ಲೇಖಕಶ್ರೀ
ಪಾತ್ರವರ್ಗಆರ್ಯ
ಸಂಜನಾ
ರಂಗಾಯಣ ರಘು
ಸಂಗೀತಜೈ ಶಿವ
ಛಾಯಾಗ್ರಹಣಶಂಕರ್
ಸಂಕಲನಕೆ. ಗಿರೀಶ್ ಕುಮಾರ್
ಸ್ಟುಡಿಯೋಶ್ರೀ ಸುಮುಖ ಆರ್ಟ್ಸ್ ಕ್ರಿಯೇಶನ್ಸ್
ಬಿಡುಗಡೆಯಾಗಿದ್ದು೨೮-ಜನವರಿ-೨೦೧೧
ಅವಧಿ134 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಚಿತ್ರವು 28 ಜನವರಿ 2011 ರಂದು ವಿಮರ್ಶಕರಿಂದ ನಕಾರಾತ್ಮಕ ವಿಮರ್ಶೆಗಳಿಗೆ ಬಿಡುಗಡೆಯಾಯಿತು.

ಕಥಾವಸ್ತು ಬದಲಾಯಿಸಿ

ಸಂಜನಾ ಈ ಸಂಜೆಯಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಅಲ್ಲಿ ಮೊದಲಾರ್ಧವು ಸ್ವಲ್ಪ ಗ್ರಾಮೀಣ ಹಿನ್ನೆಲೆಯನ್ನು ಹೊಂದಿದ್ದರೆ, ದ್ವಿತೀಯಾರ್ಧವು ನಗರ ಜೀವನವನ್ನು ಹಿನ್ನೆಲೆಯಾಗಿ ಹೊಂದಿದೆ. ನಟ ಸುದೀಪ್ ಅವರ ಸೋದರಳಿಯ ಆರ್ಯ ಅವರು ಪದಾರ್ಪಣೆ ಮಾಡಿದ್ದಾರೆ.

ಪಾತ್ರವರ್ಗ ಬದಲಾಯಿಸಿ

ಧ್ವನಿಮುದ್ರಿಕೆ ಬದಲಾಯಿಸಿ

ಜೈ ಶಿವ, (ಜೆ. ಶಿವಕುಮಾರ್) ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. 16 ನೇ ವಯಸ್ಸಿನಲ್ಲಿ, ಸಂಗೀತ ಸಂಯೋಜಿಸಲು ಪ್ರಾರಂಭಿಸಿದ ಅವರ 21 ನೇ ವಯಸ್ಸಿನಲ್ಲಿ ಈ ಚಿತ್ರದ ಮೂಲಕ ತಮ್ಮ ಮೊದಲ ಬ್ರೆಕ್ ಅನ್ನು ಪಡೆದರು. ಚಿತ್ರವು ಏಳು ಹಾಡುಗಳನ್ನು ಒಳಗೊಂಡಿದ್ದು ಅವನ್ನು ಹೃದಯ ಶಿವ ಮತ್ತು ಹೇಮಂತ್ ದಾಸ್ ಬರೆದಿದ್ದಾರೆ.

ಜನಪ್ರಿಯ ಗಾಯಕರಾದ ಹೇಮಂತ್, ರಾಜೇಶ್ ಕೃಷ್ಣನ್, ಟಿಪ್ಪು, ಉದಿತ್ ನಾರಾಯಣ್, ಅನುರಾಧ ಶ್ರೀರಾಮ್, ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ, ಶಂಕರ್ ಮಹದೇವನ್ ಮತ್ತು ಜೈ ಶಿವ ಹಾಡುಗಳನ್ನು ಹಾಡಿದರು.

ಹಾಡ್ಶುಗಳ ಪಟ್ಟಿ ಬದಲಾಯಿಸಿ

ಹಾಡು ಗಾಯಕ ಸಾಹಿತ್ಯ
"ಅಬ್ಬಬ್ಬಾ" ಹೇಮಂತ್ ಕುಮಾರ್ ಹೃದಯ ಶಿವ
"ಹಂಗಂತೀಯ" ಉದಿತ್ ನಾರಾಯಣ್, ಅನುರಾಧ ಶ್ರೀರಾಮ್ ರಾಮ್
"ಬಿಡೆ ಬಿಡೆ" ಟಿಪ್ಪು, ರಘು ಶ್ರೀ
"ಬಿಟ್ಯಾಕೋಡ್" ರಾಜೇಶ್ ಕೃಷ್ಣನ್ ಶ್ರೀ
"ನೀ ಹೇಳು ಹೊತ್ತು" ಜೈ ಶಿವ ರಾಮ್
"ಏನೋ ಒಂಥರಾ" ಎಸ್ಪಿ ಬಾಲಸುಬ್ರಹ್ಮಣ್ಯಂ, ಕೆಎಸ್ ಚಿತ್ರಾ ಹೇಮಂತ್ ದಾಸ್
"ಹೃದಯಾನ ಕೇಳು" ಶಂಕರ್ ಮಹದೇವನ್ ಶ್ರೀನಿವಾಸ

ಉಲ್ಲೇಖಗಳು ಬದಲಾಯಿಸಿ