ಮೊಹರೆ ಹನುಮಂತರಾವ್

ಮೊಹರೆ ಹನುಮಂತರಾಯರು ೧೮೯೨ ರ ನವೆಂಬರ ೧೨ರಂದು ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಜನಿಸಿದರು. ವಿಜಾಪುರದಲ್ಲಿಯೇ ಶಿಕ್ಷಣ ಪೂರೈಸಿದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೇಲುವಾಸ ಅನುಭವಿಸಿದರು. ವಿಜಾಪುರದಲ್ಲಿ ಪ್ರಕಟವಾಗುತ್ತಿದ್ದ "ಕರ್ನಾಟಕ ವೈಭವ" ವಾರಪತ್ರಿಕೆಯ ಉಪಸಂಪಾದಕ ಹಾಗು ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಬಳಿಕ, ೧೯೩೪ರಲ್ಲಿ , ಆಗ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಹಾಗು ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.ಕರ್ಣಾಟಕ ಸರ್ಕಾರವು ಮೊಹರೆ ಹನುಮನ್ಥರಾಯ ಪ್ರಶಸ್ಥಿ‍ಯನ್ನು ೨೦೧೨-೨೦೧೩ ಸಾಲಿನಲ್ಲಿ ಘೋಷಿಸಿದರು. ಕೆಲ ಕಾಲಾನಂತರ ಕರ್ಮವೀರ ವಾರಪತ್ರಿಕೆಯೂ ಸಹ ಪ್ರಾರಂಭವಾಯಿತು.೧೯೫೬ ಸಪ್ಟಂಬರದಲ್ಲಿ ಕನ್ನಡದ ಪ್ರಥಮ ಡೈಜೆಸ್ಟ ಕಸ್ತೂರಿ ಮಾಸಿಕವನ್ನು ಲೋಕಶಿಕ್ಷಣ ಟ್ರಸ್ಟ ಪರವಾಗಿ ಪ್ರಾರಂಭಿಸಿದರು.೧೯೫೮ರಲ್ಲಿ ಮೊಹರೆ ಹನುಮಂತರಾಯರು ನಿವೃತ್ತರಾದರು. ಮೊಹರೆ ಹನುಮಂತರಾಯರು ೧೯೬೦ ಜುಲೈ ೨೭ರಂದು ನಿಧನರಾದರು.

ಮೋಹರೆ ಅವರು

ಮೊಹರೆ ಅವರು ಅಸ್ಪೃಶ್ಯತೆ ಯನ್ನು ವಿರೋಧಿಸಿದರು, ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದರು ದೇಶ ಸೇವಕರಾದ ಮೊಹರೆ ಹನುಮಂತರಯರು ಪತ್ರಿಕಾ ಜಗತ್ತಿಗೊಂದು ಬೆಳಕು