ಪಂಚಮವೇದ (ಚಲನಚಿತ್ರ)
1990ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ
ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಪಿ. ಎಚ್. ವಿಶ್ವನಾಥ್ ಬರೆದು ನಿರ್ದೇಶಿಸಿದ್ದಾರೆ. ಇದು ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರವಾಗಿದೆ. ಸಂಭಾಷಣೆಗಳನ್ನು ಟಿ.ಎನ್. ಸೀತಾರಾಮ್ ಬರೆದಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ರಮೇಶ್ ಅರವಿಂದ್, ಸುಧಾರಾಣಿ ಮತ್ತು ರಾಮಕೃಷ್ಣ ಇದ್ದಾರೆ. ಈ ಚಿತ್ರದ ಸಂಗೀತವನ್ನು ಸಂಗೀತರಾಜ ಸಂಯೋಜಿಸಿದ್ದಾರೆ. ಈ ಚಲನಚಿತ್ರವು 1989-90ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.ಈ ಚಲನಚಿತ್ರವನ್ನು 1997ರಲ್ಲಿ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಲಾಯಿತು.
ಪಂಚಮವೇದ (ಚಲನಚಿತ್ರ) | |
---|---|
ಪಂಚಮ ವೇದ | |
ನಿರ್ದೇಶನ | ಪಿ. ಎಚ್.ವಿಶ್ವನಾಥ್ |
ನಿರ್ಮಾಪಕ | ಪಿ.ಆರ್.ಪ್ರಭಾಕರ್ ಡಿ ರಾಜ್ಕುಮಾರ್ |
ಚಿತ್ರಕಥೆ | ಪಿ ಎಚ್ ವಿಶ್ವನಾಥ್ |
ಕಥೆ | ಪಿ. ಎಚ್. ವಿಶ್ವನಾಥ್. |
ಸಂಭಾಷಣೆ | ಟಿ. ಎನ್. ಸೀತಾರಾಂ. |
ಪಾತ್ರವರ್ಗ | ರಮೇಶ್, ರಾಮಕೃಷ್ಣ ಸುಧಾರಾಣಿ, ಕೃಷ್ಣೇಗೌಡ ಕಾಶಿ, ಮಲ್ಲಿ ಕಾರ್ಜುನ್, ಸುಜಾತ |
ಸಂಗೀತ | ಸಂಗೀತ ರಾಜ |
ಛಾಯಾಗ್ರಹಣ | ಆರ್.ಮಂಜುನಾಥ್ |
ಸಂಕಲನ | ಸುರೇಶ್ ಅರಸ್. |
ಬಿಡುಗಡೆಯಾಗಿದ್ದು | ೧೯೯೦ |
ಪ್ರಶಸ್ತಿಗಳು | ಮೂರು ರಾಜ್ಯ ಪ್ರಶಸ್ತಿಗಳು. ಸಂಕಲನ, ಸಂಭಾಷಣೆ, ಉತ್ತಮ ನಟಿ. |
ನೃತ್ಯ | ಅಶೋಕ್, ಪೊನ್ನಿ. |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸತ್ಯ ಸಾಯಿ ಕಂಬೈನ್ಸ್ |
ಸಾಹಿತ್ಯ | ದೊಡ್ಡರಂಗೇ ಗೌಡ, ಎಂ. ಎನ್. ವ್ಯಾಸರಾವ್. |
ಹಿನ್ನೆಲೆ ಗಾಯನ | ಜೇಸುದಾಸ್. ಚಿತ್ರಾ. |
ಪಾತ್ರವರ್ಗ
ಬದಲಾಯಿಸಿಚಿತ್ರಸಂಗೀತ
ಬದಲಾಯಿಸಿಈ ಚಿತ್ರದ ಸಂಗೀತವನ್ನು ಸಂಗೀತರಾಜ ಸಂಯೋಜಿಸಿದ್ದಾರೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಆಸೆ ಹೊಳೆಯೆ ಉಕ್ಕಿ ಹರಿದೈತೆ" | ದೊಡ್ಡರಂಗೇಗೌಡ | ಕೆ. ಎಸ್. ಚಿತ್ರಾ | |
2. | "ನೀ ತಂದ ಪ್ರೀತಿ" | ಎಂ. ಎನ್. ವ್ಯಾಸರಾವ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ ಎಸ್ ಚಿತ್ರಾ | |
3. | "ಆಸೆ ಹೊಳೆಯೆ ಬತ್ತಿ ಹೋಗೈತೆ" | ದೊಡ್ಡರಂಗೇಗೌಡ | ಕೆ.ಜೆ.ಯೇಸುದಾಸ್ |