ಹಿಂದೂ ಸಂಪ್ರದಾಯದಲ್ಲಿ ತ್ರಿವೇಣಿ ಸಂಗಮವು ಮೂರು ನದಿಗಳ ಸಂಗಮ. ಹಿಂದೂಗಳಿಗೆ ಸಂಗಮದ ಬಿಂದು ಒಂದು ಪವಿತ್ರ ಸ್ಥಳವಾಗಿದೆ. ಇಲ್ಲಿನ ಒಂದು ಸ್ನಾನ ಒಬ್ಬರ ಎಲ್ಲ ಪಾಪಗಳನ್ನು ತೊಳೆದುಹಾಕುತ್ತದೆಂದು ಮತ್ತು ಒಬ್ಬರನ್ನು ಪುನರ್ಜನ್ಮದ ಚಕ್ರದಿಂದ ಮುಕ್ತಗೊಳಿಸುತ್ತದೆಂದು ಹೇಳಲಾಗಿದೆ. ಅಲ್ಲಾಹಾಬಾದ್‍ನ ತ್ರಿವೇಣಿ ಸಂಗಮ, ಭಾಗಮಂಡಲ, ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದ ಕೆಲವು ಉದಾಹರಣೆಗಳು.

ಗಂಗಾ ಮತ್ತು ಯಮುನಾ ನದಿಗಳ ಸಂಗಮ