ರಾಜಪ್ಪ ದಳವಾಯಿ

ಭಾರತೀಯ ಲೇಖಕ, ಸಂಪಾದಕ
(ಡಾ. ರಾಜಪ್ಪ ದಳವಾಯಿ ಇಂದ ಪುನರ್ನಿರ್ದೇಶಿತ)

ಡಾ .ರಾಜಪ್ಪ ದಳವಾಯಿ - ಚಿಕ್ಕಮಗಳೂರು ಜಿಲ್ಲೆ, ಅಜ್ಜಂಪುರ ತಾಲ್ಲೂಕಿನ ಅನುವನಹಳ್ಳಿಯಲ್ಲಿ 1962 ಜನನ. ಇವರು ಅನುವನಹಳ್ಳಿ, ಶಿವನಿ, ಕೊಡಗನೂರು, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ಮೈಸೂರು, ದೆಹಲಿಯಲ್ಲಿ ವ್ಯಾಸಂಗ ಮಾಡಿ ಕನ್ನಡ ಅಧ್ಯಾಪಕರಾಗಿ ತಾವರೆಕೆರೆ (ಶಿರಾ ತಾಲ್ಲೂಕು), ಶಿಕಾರಿಪುರ, ಶಿವಮೊಗ್ಗ ಅಜ್ಜಂಪುರ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು, ಕಲಬುರಗಿ, ಬೆಳಗಾವಿ, ಕೋಲಾರಗಳಲ್ಲಿ ಕೆಲಸ ಮಾಡಿದ್ದಾರೆ. ಪಿ.ಯು, ಪದವಿ ಹಾಗೂ ಸ್ನಾತಕೋತ್ತರರಿಗೆ ಪಾಠ ಹೇಳಿದ್ದಾರೆ. (ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.)

ಶಿಕ್ಷಣ ಬದಲಾಯಿಸಿ

ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ. ಎ. ಪದವಿ, ಜಾನಪದದಲ್ಲಿ ಪಿಜಿ ಡಿಪ್ಲೊಮಾ, ಯುಜಿಸಿ ಫೆಲೊ ಆಗಿ 'ಸ್ವಾತಂತ್ರ್ಯ ಪೂವ౯ ಕನ್ನಡ ಕಾದಂಬರಿಗಳಲ್ಲಿ ಚಾರಿತ್ರಿಕ ಅಂಶಗಳು' ಎಂಬ ವಿಷಯದಲ್ಲಿ ಪಿಎಚ್.ಡಿ, ಗಾಗಿ ಸಂಶೋಧನೆ (ಅಪೂಣ౯) 'ಗಿರೀಶ್ ಕಾನಾ౯ಡರ ನಾಟಕಗಳಲ್ಲಿ ಪುರಾಣ, ಚಾರಿತ್ರಿಕ ವಾಸ್ತವ' ವಿಷಯದ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂ.ಫಿಲ್, ಪದವಿ. 'ಕನ್ನಡದಲ್ಲಿ ಸಂಸ್ಕೃತಿ ನಿವ౯ಚನ' ವಿಷಯದ ಸಂಶೋಧನೆಗೆ ಬೆಂಗಳೂರು ವಿಶ್ವವಿದ್ಯಾಲಯ ದಿಂದ ಪಿಎಚ್.ಡಿ ಪದವಿ, 'ಕವಿರಾಜ ಮಾಗ౯:ಬಹುಶಿಸ್ತೀಯ ಅಧ್ಯಯನ' ವಿಷಯದ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದಿಂದ ಡಿ.ಲಿಟ್., ಪದವಿ ಪಡೆದಿದ್ದಾರೆ.

ಕೃತಿಗಳು ಬದಲಾಯಿಸಿ

  • ಸುಯೋಧನ.
  • ಒಂದು ಬೊಗಸೆ ನೀರು.
  • 'ಕುಲಂ
  • 'ದಾರಾಶಿಕೊ
  • 'ಜೇಡರ ದಾಸಿಮಯ್ಯ
  • 'ಕಳಚಿದ ಕೊಂಡಿಗಳು
  • 'ಯಲುರಾಜನ ಮಡದಿ
  • 'ಮಠದೊಳಗಣ ಬೆಕ್ಕು
  • ,ಐಸಿಸ

ನಾಟಕಗಳು ಬದಲಾಯಿಸಿ

  1. ಡೋಲಿ ಮತ್ತಿತರ ನಾಟಕಗಳು
  2. ಸುಯೋಧನ
  3. ಬೀದಿನಾಟಕಗಳು
  4. ತಂಬೂರಿ
  5. ಒಂದು ಬೊಗಸೆ ನೀರು
  6. ದಳವಾಯಿ ಡಜನ್ ನಾಟಕಗಳು

ಕವನ ಸಂಕಲನಗಳು ಬದಲಾಯಿಸಿ

  1. ಸಗಟು ಕವಿಯ ಚಿಲ್ಲರೆ ಪದ್ಯಗಳು
  2. ರಕ್ತದ ಬಣ್ಣ ಕಪ್ಪು
  3. ಜಲರೂಪಿ ನಗು

ಕಥಾ ಸಂಕಲನಗಳು ಬದಲಾಯಿಸಿ

  1. ಕಪ್ಪು ದಾರಿಯ ಕೆಂಪು ಚಿತ್ರ
  2. ಚಲನ

ಸಾಹಿತ್ಯ ವಿಮಶೆ౯ ಬದಲಾಯಿಸಿ

  1. ಸುಯೋಧನ
  2. ಓದು ಬರಹ

ಸಂಪಾದನೆ ಬದಲಾಯಿಸಿ

  • ಕನ್ನಡ ಸಾಹಿತ್ಯ ಕೋಶ
  • ನೆನಪುಗಳು ಸಾಯುವುದಿಲ್ಲ
  • ಏಳೂರು ದೇವರ ಕಾಳಗ (ಜನಪದ ಕಾವ್ಯ)
  • ಕನ್ನಡ ಸಾಹಿತ್ಯ ಪುನಮ౯ನನ 05
  • ಕನ್ನಡ ಸಾಹಿತ್ಯ ಪುನಮ౯ನನ 06
  • ವ್ಯೋಮಾ ವ್ಯೋಮ ಮಹಾಕಾವ್ಯ (ವಿಮಶೆ౯)
  • ನಾದದ ನದಿ
  • ಕನ್ನಡ ಸಾಹಿತ್ಯ ಕೋಶ ಪರಿಷ್ಕೃತ
  • ತೊಗಲು ಬೊಂಬೆಯಾಟ (ಜಾನಪದ)
  • ಆಧುನಿಕ ಕನ್ನಡ ಸಾಹಿತ್ಯ (ಸಾಹಿತ್ಯ ವಿಮಶೆ౯)
  • ಕದಿರು (ಸಂಕೀಣ౯ ಬರಹಗಳು)
  • ಸಿನಿಮಾ ಮೀಮಾಂಸೆ (ಸಿನಿಮಾ ಅಧ್ಯಯನ)

ಪ್ರಶಸ್ತಿ ಬದಲಾಯಿಸಿ

  1. ಕುವೆಂಪು ಶ್ರೀ ಪ್ರಶಸ್ತಿ - 2004
  2. ಕನಾ౯ಟಕ ನಾಟಕ ಅಕಾಡಮಿ ಸುವಣ౯ ಪ್ರಶಸ್ತಿ - 2011
  3. ಡಾ. ನಲ್ಲೂರು ಪ್ರಸಾದ್ ಪ್ರಶಸ್ತಿ - 2013
  4. ಕಿ. ರಂ. ಪುರಸ್ಕಾರ - 2017
  5. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಮಗಳೂರು - 2003
  6. ರಂಗಜಂಗಮ ಪ್ರಶಸ್ತಿ - 2012
  7. ಇಸ್ಮಾಯಿಲ್ ಗೋನಾಳ್ ಪ್ರಶಸ್ತಿ - 2018
  8. ಸಾಹಿತ್ಯ ಶ್ರೀ ಪ್ರಶಸ್ತಿ - 2020

ಚಲನಚಿತ್ರ ಬದಲಾಯಿಸಿ

'ಕರಡಿಪುರ' ಚಲನಚಿತ್ರಕ್ಕೆ ಕಲಾನಿದೇ౯ಶನ, 'ಹಗಲು ವೇಷ' ದಲ್ಲಿ ನಟ. 'ನಾನು ಗಾಂಧಿ' ಚಿತ್ರದ ಸಂಭಾಷಣೆಗಾರ, 'ಚರಂತಿ' ಚಿತ್ರದ ಸ್ಕ್ರಿಪ್ಟ್ ರೈಟರ್, ನಟ, 'ಕನ್ನಡಾಭರಣ ಪಿ. ಕಾಳಿಂಗರಾವ್ ' ಚಿತ್ರಕ್ಕೆ ಸಂಶೋಧಕ ಹಾಗೂ ಸ್ಕ್ರಿಪ್ಟ್ ರೈಟರ್, ನಿದೇ౯ಶಕನಾಗಿ, 'ಗಾಂಧಿ ಮತ್ತೆ ಹುಟ್ಟಿದ್ರೆ' (ಕಿರುಚಿತ್ರ 1998), 'ಇಸ್ಮಾಯಿಲ್ ಗೋನಾಳ್' (ಸಾಕ್ಷ್ಯಚಿತ್ರ 2016) 'ಕದ್ದವರ್ ಯಾರಣ್ಣ ಬೀಜಗಳ' (ಕಿರುಚಿತ್ರ 2018).

ಉಲ್ಲೇಖ ಬದಲಾಯಿಸಿ

ಚಿಲುಮೆ

http://chilume.com/?author=16


https://www.prajavani.net/authors/%E0%B2%AA%E0%B3%8D%E0%B2%B0%E0%B3%8A-%E0%B2%B0%E0%B2%BE%E0%B2%9C%E0%B2%AA%E0%B3%8D%E0%B2%AA-%E0%B2%A6%E0%B2%B3%E0%B2%B5%E0%B2%BE%E0%B2%AF%E0%B2%BF[ಶಾಶ್ವತವಾಗಿ ಮಡಿದ ಕೊಂಡಿ]

http://m.varthabharati.in/article/2017_02_08/60860

https://m.dailyhunt.in/news/india/kannada/varthabharathi-epaper-varthabh/raajappa+dalavaayi+avara+dhaaraashikho+naataka+pradarshana+raddu-newsid-63632352 https://m.varthabharati.in › article ಬಂಡಾಯವೆಂಬುದು ಮಾನವೀಯ ಸ್ಪಂದನವೇ ಹೊರತು ಅಪಾಯಕಾರಿ ಅಲ್ಲ: ಡಾ.ರಾಜಪ್ಪ ... https://kannada.oneindia.com › videos ಚಿಕ್ಕಮಗಳೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ರಾಜಪ್ಪ ದಳವಾಯಿ ... https://www.sapnaonline.com › ... by Rajappa Dalavayi, Vidyanidhi Prakashana - SapnaOnline