ಟಿ.ಎನ್.ಸೀತಾರಾಂ
ಭಾರತೀಯ ಸಿನೆಮಾ ನಿರ್ದೇಶಕ
ಟಿ ಎನ್ ಸೀತಾರಾಂ [೧] ಎಂದು ಪ್ರಸಿದ್ಧರಾಗಿರುವ ಬಹುಮುಖ ವ್ಯಕ್ತಿತ್ವದ ಕಲಾವಿದನ ಮನೆಯ ಹೆಸರು ತಳಗವಾರ ನಾರಾಯಣರಾವ್ ಸೀತಾರಾಂ ಎಂದು. (ಡಿಸೆಂಬರ್, ೦೬, ೧೯೪೮) ಇವರ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರ. ಸಮಾಜವಾದಿ ಸಿದ್ದಾಂತದಲ್ಲಿ ನಂಬಿಕೆ ಇರಿಸಿದ್ದರು. ಇವರು ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರ ನಿರ್ದೇಶನದ ಕಿರುತೆರೆ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ ಕನ್ನಡಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು.

ಇವರ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ: ಮತದಾನ
ಟಿ.ಎನ್. ಸೀತಾರಾಂ ಅವರು ಲಂಕೇಶ್ ಪತ್ರಿಕೆ ವಾರಪತ್ರಿಕೆಯಲ್ಲಿ ಬರಹಗಾರರಾಗಿದ್ದರು. ನಮ್ಮೊಳಗೊಬ್ಬ ನಾಜೂಕಯ್ಯ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

ಚಲನಚಿತ್ರಗಳು
ಬದಲಾಯಿಸಿ- ಕ್ರೌರ್ಯ (ಕಥೆ, ಚಿತ್ರಕಥೆ)
- ಧರಣಿಮಂಡಲ ಮಧ್ಯದೊಳಗೆ (ಅಭಿನಯ)
- ಮತದಾನ (೨೦೦೧) (ನಿರ್ದೇಶನ)
- ಮೀರಾ ಮಾಧವ ರಾಘವ (೨೦೦೭) (ನಿರ್ದೇಶನ)
- ಪಲ್ಲವಿ(ನಾಯಕ ನಟನಾಗಿ)
- ಕಾಫಿ ತೋಟ (ನಿರ್ದೇಶನ)
ಕಿರುತೆರೆ ಧಾರಾವಾಹಿಗಳು
ಬದಲಾಯಿಸಿನಾಟಕಗಳು
ಬದಲಾಯಿಸಿ- ನಮ್ಮೊಳಗೊಬ್ಬ ನಾಜೂಕಯ್ಯ
- ಬದುಕ ಮನ್ನಿಸು ಪ್ರಭುವೇ
- ಆಸ್ಫೋಟ
ಪ್ರಶಸ್ತಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- ಟಿ.ಎನ್.ಸೀತಾರಾಂ ಅವರೊಡನೆ ಸಂಪದ ತಂಡದ ಸಂವಾದ (ಪೋಡ್ಕಾಸ್ಟ್) Archived 2006-09-25 ವೇಬ್ಯಾಕ್ ಮೆಷಿನ್ ನಲ್ಲಿ.