ಚಂದ್ರಕಾಂತ ಕುಸನೂರ

ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ರಂಗಕರ್ಮಿಗಳು.ಇವರು ೧೯೩೧ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನಿಸಿದರು. ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ.ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.ಕಲಬುರ್ಗಿಯಲ್ಲಿ "ರಂಗ ಮಾಧ್ಯಮ"ಎಂಬ ನಾಟಕ ಸಂಸ್ಥೆಯ ಸ್ಥಾಪಕರು‌.ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದರು.

ಕೃತಿಗಳು ಬದಲಾಯಿಸಿ

ನಾಟಕ ಬದಲಾಯಿಸಿ

  1. ಆನಿ ಬಂತಾನಿ.
  2. ರಿಹರ್ಸಲ್.
  3. ರತ್ತೋ ರತ್ತೋ ರಾಯನ ಮಗಳೇ.
  4. ದಿಂಡಿ.
  5. ವಿದೂಷಕ.
  6. ಹಳ್ಳಾ ಕೊಳ್ಳಾ ನೀರು.

ಕಾವ್ಯ ಬದಲಾಯಿಸಿ

  • ನಂದಿಕೋಲು

ಕಾದಂಬರಿ ಬದಲಾಯಿಸಿ

  • ಮಾಲತಿ ಮತ್ತು ನಾನು.
  • ಯಾತನಾ ಶಿಬಿರ.
  • ಗೋಹರಜಾನ್.
  • ಕೆರೂರು ನಾಮ.
  • ಚರ್ಚ್ ಗೇಟ್.

ಹಿಂದಿಗೆ ಅನುವಾದ ಬದಲಾಯಿಸಿ

ಪುರಸ್ಕಾರ ಬದಲಾಯಿಸಿ

  • ೧೯೭೫ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.
  • ೧೯೯೨ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗಿದೆ.
  • ೨೦೦೬ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ.

2013ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ