ಅರಕಲಗೂಡು
ಇದು ಹಾಸನ ಜಿಲ್ಲೆಯ ಒಂದು ತಾಲೂಕು ಹಾಗೂ ತಾಲೂಕು ಕೇಂದ್ರ. ಹಾಸನ, ಆಲೂರು,ಹಾಗೂ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೋಕುಗಳನ್ನು ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೋಕುಗಳಿಂದ ಸುತ್ತುವರೆದಿದೆ. ಅರಕಲಗೂಡು ಅರೆಮಲೆನಾಡು ಪ್ರದೇಶ. ಅ.ನ.ಕೃ. ಹುಟ್ಟಿದ ಸ್ಟಳ. ಕಾವೇರಿ ತೀರದಲ್ಲಿರುವ ರಾಮನಾಥಪುರದ ಸುಬ್ರಮಣ್ಯ ದೇವಸ್ಟಾನ ಪ್ರಸಿದ್ಡ ದೇವಸ್ಟಾನ. ಭತ್ತ, ತೆಂಗು, ಅಡಿಕೆ, ತಂಬಾಕು, ಆಲೂಗಡ್ಡೆ ಪ್ರಮುಖ ಬೆಳೆ. ಮುಂದುವರೆಯದ ಆದರೆ ಹಿಂದುಳಿಯದ ಪ್ರದೇಶ. ಅರಕಲಗೂಡಿಗೆ ಈ ಹೆಸರು ಬರಲು ಗೌತಮ ಋಷಿ ಕಾರಣ ಎ౦ದು ಹೇಳಲಾಗುತ್ತದೆ. ಹಿಂದೆ ಗೌತಮ ಋಷಿಯು ಸೂರ್ಯ ದೇವರನ್ನು ಪೂಜಿಸಲು ಅರ್ಕೇಶ್ವರ ಪ್ರತಿಮೆಯನ್ನು ಇ ಊರಿನಲ್ಲಿ ಸ್ಥಾಪಿಸಿದನು. ಇದರ ನಿಜವಾದ ಹೆಸರು ಅರ್ಕಪುರಿ ಎಂದಿತ್ತು.ನಂತರ ಇದು ಅರಕಲಗೂಡು ಎಂದು ಬದಲಾಗಿದೆ ಎನ್ನಲಾಗುತ್ತದೆ. ಅರಕಲಗೂಡನ್ನು ಐಗೂರಿನ ಪಾಳೆಯಗಾರ ಕ್ರಿಷ್ಣಪ್ಪ ನಾಯಕನು ಕ್ರಿ.ಶ.೧೨೬೮ ರಲ್ಲಿ ಬೆಳಕಿಗೆ ತಂದನು. ಅರಕಲಗೂಡು ತಾಲೂಕು ರಾಮನಾಥಪುರವು ಸುಬ್ರಹ್ಮಣ್ಯ ಸ್ವಾಮಿಯ ಹಾಗೂ ಹೊಯ್ಸಳರ ಕಾಲದ ರಾಮೇಶ್ವರ ದೇವಸ್ಥಾನ ಹೊಂದಿದ್ದು ದಕ್ಷಿಣ ಕಾಶಿ ಎಂದೂ ಪ್ರಸಿದ್ಧವಾಗಿದೆ. ಅದೆ ರಾಮನಾಥಪುರದಲ್ಲಿ ತಂಬಾಕು ಮಂಡಳಿಯ ಮಾರುಕಟ್ಟೆಯಿದ್ದು ಬೃಹತ್ ವಹಿವಾಟು ನಡೆಸುತ್ತಾ ತಂಬಾಕು ಬೆಳೆಗಾರರಿಗೆ ವರದಾನವಾಗಿದೆ.
ಅರಕಲಗೂಡು
ಅರಕಲಗೂಡು | |
---|---|
ಪುರಸಭ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಹಾಸನ |
Elevation | ೯೧೬ m (೩,೦೦೫ ft) |
Population (2001) | |
• Total | ೧೫,೧೮೪ |
Languages | |
• Official | Kannada |
Time zone | UTC+5:30 (IST) |
ಪ್ರಮುಖ ಸ್ಥಳಗಳುಸಂಪಾದಿಸಿ
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ದೊಡ್ಡಮ್ಮ ತಾಯಿಯ ದೇವಾಲಯವಿದೆ.
ಅರಕಲಗೂಡಿಗೆ ಹೊಂದಿಕೊಂಡಂತೆಯೆ ಇರುವ ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದ್ದು ನೀರಾವರಿಗೆ ಇಂಬು ನೀಡಲಾಗಿದೆ.
ಕೊಣನೂರಿನಲ್ಲಿರುವ ತೂಗು ಸೇತುವೆ ಹಾಸನ ಜಿಲ್ಲೆಯ ರಾಮನಾಥಪುರದಿಂದ ಐದು ಕಿ.ಮೀ ದೂರದಲ್ಲಿದೆ. ಕೊಣನೂರಿನಿಂದ ಕಟ್ಟೇಪುರ ಗ್ರಾಮಕ್ಕೆ ಜನರು ಸುಲಭವಾಗಿ ಸಂಚರಿಸಲು ಅನುಕೂಲವಾಗುವಂತೆ ಕಾವೇರಿ ನದಿಗೆ ಅಡ್ಡಲಾಗಿ ಇದನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಐತಿಹಾಸಿಕ ಪ್ರಾಮುಖ್ಯತೆಯ ಅನೇಕ ದೇವಾಲಯಗಳು ಗ್ರಾಮದಲ್ಲಿವೆ.
ಬಾಹ್ಯ ಕೊಂಡಿಗಳುಸಂಪಾದಿಸಿ
೧.ಹಾಸನ ಇತಿಹಾಸ ೨.ಹೊಯ್ಸಳ ಟೂರಿಸಮ್ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.