ಡಾ. ಸುನಿತಾ ಶೆಟ್ಟಿ, ಮುಂಬಯಿ ಮಹಾನಗರದ ಸಂಸ್ಕೃತಿ ವಲಯದ ಅಭಿವ್ಯಕ್ತಿಗಳಾದ, ಭಾಷೆ, ಸಂಗೀತ,ನಾಟಕ,ಸಾಹಿತ್ಯ ಸಮ್ಮೇಳನಗಳು, ಮೊದಲಾದವುಗಳಲ್ಲಿ ಅತ್ಯಂತ ಸಕ್ರಿಯರಾಗಿ ಭಾಗವಹಿಸುವುದಲ್ಲದೆ ಪ್ರೋತ್ಸಾಹಕೊಡಲು ಸದಾ ನಿರತರಾಗಿರುವ ವ್ಯಕ್ತಿಗಳಲ್ಲೊಬ್ಬರು. ಅವರು ಕನ್ನಡ, ತುಳು ಕನ್ನಡಿಗರಿಗೆ ಪರಿಚಿತರು.[೧]

ಡಾ.ಸುನಿತಾ ಶೆಟ್ಟಿ
Born
ಸುನಿತಾ

(೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ತಂದೆ, ಕೂಕ್ರ ಡಿ.ಶೆಟ್ಟಿ,ಹಾಗೂ ತಾಯಿ ಸುಂದರಿ ಶೆಟ್ಟಿಯವರು.
Nationalityಭಾರತೀಯರು
Educationಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜ್, ಎಂ.ಎ; ಮುಂಬಯಿ ವಿಶ್ವವಿದ್ಯಾಲಯ, ಪಿ.ಎಚ್.ಡಿ.ಪದವಿ.
Occupation(s)ನಿವೃತ್ತ ಪ್ರಾಧ್ಯಾಪಕಿ,ಮತ್ತು ಸಮಾಜಸೇವಕಿ,
Known forಸೃಜನ ಮಹಿಳಾ ಬರಹಗಾರ್ತಿಯರ ಬಳಗಕ್ಕೆ ಮಾರ್ಗದರ್ಶಿ ಹಾಗೂ ಸಂಚಾಲಕಿ

ಜನನ, ಬಾಲ್ಯ, ವಿದ್ಯಾಭ್ಯಾಸ, ವೃತ್ತಿ ಬದಲಾಯಿಸಿ

ಸುನಿತಾ ಶೆಟ್ಟಿಯವರು, (೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ತಾಯಿಗಳು, ಕೂಕ್ರ ಡಿ.ಶೆಟ್ಟಿ,ಹಾಗೂ ಸುಂದರಿ ಶೆಟ್ಟಿಯವರು. ಪ್ರಾಥಮಿಕ ಶಿಕ್ಷಣ ಕಳವಾರಿನಲ್ಲಿ, ಮನೆಹತ್ತಿರದ ಶಾಲೆಯಲ್ಲಿ, (೧ರಿಂದ ೫ ನೆಯ ಇಯತ್ತೆವರೆಗೆ) ನಡೆಯಿತು. ಮಾಧ್ಯಮಿಕ ಶಾಲೆ. ಕಳವಾರಿನ ಚರ್ಚ್ ಶಾಲೆಯಲ್ಲಿ (೬ರಿಂದ ೮ನೆಯ ಇಯತ್ತೆ) ಪ್ರೌಢಶಾಲೆ ವಿದ್ಯಾದಾಯಿನಿ ಹೈಸ್ಕೂಲ್ ಸೂರಾತ್ಕಲ್, (೯ ರಿಂದ ೧೧ ನೇ ಇಯತ್ತೆವರೆಗೆ) ಇಂಟರ್ ಮೀಡಿಯೆಟ್ ಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜ್, ಎಂ.ಎ. ಮುಂಬಯಿ ವಿಶ್ವವಿದ್ಯಾಲಯ, ಪಿ.ಎಚ್.ಡಿ.ಪದವಿ.

ವಿವಾಹ ಬದಲಾಯಿಸಿ

ಸುನಿತಾರವರು, ಮಹಾಬಲಶೆಟ್ಟಿಯವರ ಜೊತೆ ವಿವಾಹವಾದರು. ಅಧ್ಯಾಪತಕಿಯಾಗಿ, ಕೋಟೆಕಾರಿನ ಆನಂದಾಶ್ರಮ ಹೈಸ್ಕೂಲ್,ದಲ್ಲಿ ಕೆಲವು ತಿಂಗಳೂ,ಮುಂಬಯಿನ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ, ೧೯೬೬ ರ ವರೆಗೆ, ಕನ್ನಡ ಪ್ರಾಧ್ಯಾಪಕಿ, ಖಲ್ಸಾ ಕಾಲೇಜ್, ಮುಂಬಯಿ. ೧೯೬೬ರ ರಿಂದ [೨] ಕಾಲೇಜಿನಲ್ಲಿ ಕೆಲಸಮಾಡುತ್ತಿದ್ದ ಸಮಯದಲ್ಲೇ ಸಾಹಿತ್ಯಿಕ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಕನ್ನಡ ಹಾಗು ತುಳು ಭಾಷೆಯಲ್ಲಿ ಒಳ್ಳೆಯ ಲೇಖಕಿಯಾಗಿ ಜನಪ್ರಿಯತೆಗಳಿಸಿದ್ದರು. ಆವರು ಪ್ರಕಟಿಸಿದ ಕವನ ಸಂಕಲನಗಳು :

  1. ಪಿಂಗಾರ,
  2. ಸಂಕ್ರಾಂತಿ,
  3. ನಾಗಸಂಪಿಗೆ,

ಕವನ ಸಂಕಲನಗಳು ತುಳು ಸಂಸ್ಕೃತಿಯ ಪರಿಚಯವನ್ನು ಮಾಡುವಲ್ಲಿ ಯಶಸ್ವಿಯಾಗಿರುವುದಲ್ಲದೆ, ತುಳುನಾಡಿನ ಮಹಿಳೆಯರ ಭಾವನೆಗಳಿಗೆ ನೇರವಾಗಿ ಸ್ಪಂದಿಸಿವೆ. ಸುನಿತಾರವರು, ಮುಂಬಯಿ ವಿಶ್ವವಿದ್ಯಾಲಯದಿಂದ 'ಡಾಕ್ಟರೇಟ್ ಪದವಿ' ಗಳಿಸಿದರು. ಅವರು ತೆಗೆದುಕೊಂಡ ವಿಷಯ, 'ವಿಮೆನ್ ಇನ್ ದ ನಾವೆಲ್ಸ್ ಆಫ್ ಡಾ ಶಿವರಾಮ ಕಾರಂತ'[೩]

ಸೃಜನಾ ಬರಹಗಾರ್ತಿಯರ ಬಳಗದಲ್ಲಿ ಬದಲಾಯಿಸಿ

ಡಾ.ಸುನಿತಾ ಶೆಟ್ಟಿಯವರು, ಮುಂಬಯಿನಗರದ ಬರಹಗಾರ್ತಿಯರ ಬಳಗದ ಮಾರ್ಗದರ್ಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. [೪]

ಪ್ರಶಸ್ತಿಗಳು ಬದಲಾಯಿಸಿ

  1. ೧೯೯೬-೯೭ ರ ಸಾಲಿನ, ಕರ್ನಾಟಕ ತುಳು ಅಕ್ಯಾಡೆಮಿ ಪ್ರಶಸ್ತಿ.
  2. ೨೦೧೮ ರ ಸಾಲಿನ 'ಯು.ಎ.ಇ ಬಂಟ್ಸ್ ನ ಪ್ರತಿಷ್ಠಿತ ಬಂಟ್ ವಿಭೂಷಣ ಪ್ರಶಸ್ತಿ' ಪ್ರದಾನ ಮಾಡಲಾಯಿತು. [೫]
  3. ಡಾ. ಸುನೀತಾ ಎಂ.ಶೆಟ್ಟಿಯವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. [೬]

ಉಲ್ಲೇಖಗಳು ಬದಲಾಯಿಸಿ

  1. http://www.daijiworld.com/news/news_disp.asp?n_id=114590[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2014-04-08. Retrieved 2014-04-01.
  3. ಡಾ.ಸುನೀತಾ ಶೆಟ್ಟಿ ಅನುವಾದಿತ 'ಪೊಣ್ಣ ಉಡಲ್ ಬೆಂಗ್ ದ ಕಡಲ್',ಕೃತಿಬಿಡುಗಡೆ,ಕಡಿವಾಣವಿಲ್ಲದ ಸ್ವಾತಂತ್ರ್ಯ ಸರ್ವರಿಗೂ ಸರಿಸಮಾನವಾಗಿರಬೇಕು ಶ್ರೇಣಿಶ್ಯಾಮ ಭಟ್ (ಚಿತ್ರವರದಿ : ರೋನ್ಸ್ ಬಂಟ್ವಾಳ್)
  4. ೧೫, ಮೇ, ೨೦೧೬, ಪುಟ.೧೩, ಕರ್ನಾಟಕ ಮಲ್ಲ, ದಿನಪತ್ರಿಕೆಯಲ್ಲಿ ಸೃಜನಾದ ಚೈತ್ರಯಾತ್ರೆ 'ಕವಿ ಶೈಲ'ಕ್ಕೆ, ಎಂಬ ಶೀರ್ಷಿಕೆಯ ಬರಹದಲ್ಲಿ ಸೃಜನಾ ಮಹಿಳೆಯರ ಗುಂಪು, ರಾಷ್ಟ್ರಕವಿ ಕುವೆಂಪುರವರ ಕವಿಶೈಲಕ್ಕೆ ಭೇಟಿನೀಡಿದ ವಿವರಗಳನ್ನು ತಮ್ಮ ಬರಹದಲ್ಲಿ ಸುದೀರ್ಘವಾಗಿ ದಾಖಲಿಸಿದ್ದಾರೆ[ಶಾಶ್ವತವಾಗಿ ಮಡಿದ ಕೊಂಡಿ]
  5. ಯು.ಎ.ಇ ಬಂಟ್ಸ್ ನ ಪ್ರತಿಷ್ಠಿತ ಬಂಟ್ ವಿಭೂಷಣ ಪ್ರಶಸ್ತಿ' ಪ್ರದಾನಮಾಡಲಾಯಿತು
  6. "ಚಂದ್ರಶೇಖರ ಪಾಲೆತ್ತಾಡಿ, ಡಾ.ಸುನೀತಾ ಎಮ್.ಶೆಟ್ಟಿ, ಡಾ.ಸುರೇಶ್ ರಾವ್, ಸಹಿತ ೬೬ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ, ಕರ್ನಾಟಕ ಮಲ್ಲ, ೦೨,೧೧,೨೦೨೧". Archived from the original on 2021-11-14. Retrieved 2021-11-14.

ಬಾಹ್ಯಸಂಪರ್ಕಗಳು ಬದಲಾಯಿಸಿ