ಸುರುಳಿ ಸುಗಂಧಿ


 ಸುರುಳಿ ಸುಗಂಧಿಯನ್ನು ಆಂಗ್ಲ ಭಾಷೆಯಲ್ಲಿ 'ವೈಟ್ ಜಿಂಜರ್ ಲಿಲ್ಲಿ', ಹಿಂದಿಯಲ್ಲಿ 'ದೊಲನ್ ಚಂಪಾ', ಮರಾಠಿಯಲ್ಲಿ 'ಸೊಂಟಕ್ಕ' ಮತ್ತು ಮಲಯಾಳಂನಲ್ಲಿ 'ಕಲ್ಯಾಣ ಸೌಗಂತಿಕಂ' ಎಂದು ಕರೆಯಲಾಗುತ್ತದೆ. ಸುರುಳಿ ಸುಗಂಧಿ ಕ್ಯೂಬ ದೇಶದ ರಾಷ್ಟ್ರೀಯ ಹೂವು. ಅಲ್ಲಿ ಈ ಹೂವನ್ನು 'ಮರಿಪೊಸ' ಅಂದರೆ ಚಿಟ್ಟೆ ಎಂದೂ ಕರೆಯಲಾಗುತ್ತದೆ, ಇದಕ್ಕೆ ಕಾರಣ ಅದರ ಆಕಾರ. ಸುರುಳಿ ಸುಗಂಧಿ ವರ್ಷಪೂರ್ತಿ ಹೂ ಬಿಡುವ ಗಿಡ. ಇದು ಮೂಲತಃ ನೇಪಾಳ ಮತ್ತು ಭಾರತದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತದೆ. ಇದನ್ನು ಮೊದಲು ಪರಿಚಯ ಮಾಡಿದ್ದು ಬ್ರೆಜ಼ಿಲ್ ದಾಸ್ಯ ಪದ್ಧತಿಯ ಕಾಲದಲ್ಲಿ, ಈ ಹೂವಿನ ಎಲೆಗಳನ್ನು ಹಾಸಿಗೆಯ ಹಾಗೆ ಬಳಸುತ್ತಿದ್ದರು ಮತ್ತು ಈಗ ಅದನ್ನು ಆಕ್ರಮಣಶೀಲ ಗಿಡವೆಂದೇ ಪರಿಗಣಿಸಲಾಗಿದೆ. ಸ್ಪ್ಯಾನಿಷ್ನ ವಸಾಹತು ಕಾಲದಲ್ಲಿ ಮಹಿಳೆಯರು ಈ ಹೂವನ್ನು ಮುಡಿದುಕೊಂಡು ತಮ್ಮನ್ನು ತಾವು ಸಿಂಗರಿಸಿಕೊಳ್ಳುತ್ತಿದ್ದರು. ಇದರ ಹೂಗೊಂಚಲಿನ ವಿಭಿನ್ನವಾದ ಸಂಕೀರ್ಣ ರಚನೆಯಿಂದ, ತಮ್ಮ ಸ್ವಾತಂತ್ರ್ಯಕ್ಕೆ ಕಾರಣವಾದ ಗುಪ್ತ ಮತ್ತು ಮಹತ್ವ ಸಂದೇಶಗಳನ್ನು ಮಹಿಳೆಯರು ಈ ಹೂವಿನಲ್ಲಿ ಅಡಗಿಸಿಕೊಂಡು ರವಾನಿಸುತ್ತಿದ್ದರು.

ವೈಜ್ಙಾನಿಕ ವರ್ಗೀಕರಣ ಬದಲಾಯಿಸಿ

ಸುರುಳಿ ಸುಗಂಧಿಯ ವೈಜ್ಙಾನಿಕ ವರ್ಗೀಕರಣ:- 
 ವಂಶ-ಪ್ಲಾನ್ಟೇ 
 ವರ್ಗ- ಜ಼ಿಂಜಿಬೆರಲೆಸ್
 ಸಸ್ಯವರ್ಗ-ಜ಼ಿಂಗಿಬರಸಿಯೆ 
 ತಳಿ-ಹೆಡಿಚಿಯಂ
 ಜಾತಿ- ಹೆಚ್.ಕೊರೊನರಿಯಂ 
 ದ್ವಿಪದಿ-ಹೆಡಿಚಿಯಂ ಕೊರೊನರಿಯಂ 

ಗಿಡದ ವಿವರಣೆ ಬದಲಾಯಿಸಿ

ಈ ಹೂವಿನ ಗಿಡದ ಆಕಾರದ ಬಗ್ಗೆ ಹೇಳುವುದಾದರೆ, ಇದರ ಎಲೆಗಳು ಚೂಪಾಗಿ ಮತ್ತು ಭರ್ಜಿ ಆಕಾರದಿಂದ ಕೂಡಿದೆ. ಎಲೆಗಳ ಬಣ್ಣ ಹಸಿರು. ಉದ್ದ ಸುಮಾರು ೮ ರಿಂದ ೨೪ ಸೆಮೀ ಮತ್ತು ೨ ರಿಂದ ೫ ಸೆಮೀ ಅಗಲ. ಅದಲ್ಲದೆ ಎಲೆಗಳು ಎರಡು ಶ್ರೇಣಿಗಳಲ್ಲಿ ಜೊಡಿಸಲಾಗಿದೆ. ಹೂವಿನ ಬಣ್ಣ- ಬಿಳಿ/ಬಿಳುಪು. ಗಿಡದ ಎತ್ತರ- ೫೦ ರಿಂದ ೧೦೦ ಸೆಮೀ. ಗಿಡದ ಸುತ್ತಳತೆ- ೫೦ ರಿಂದ ೧೦೦ ಸೆಮೀ. ಅದಲ್ಲದೆ ಎಲೆಗಳು ಎರಡು ಶ್ರೇಣಿಗಳಲ್ಲಿ ಜೋಡಿಸಲಾಗಿದೆ. ಹೂ ಬಿಡುವ ಕಾಲ- ನಡುಬೇಸಿಗೆಯಿಂದ ಶರತ್ಕಾಲದವರೆಗೆ. ಈ ಹೂವುಗಳ ಅಳತೆ ೬ ರಿಂದ ೧೨ ಸೆಮೀ. ಈ ಮೇಲೆ ವಿವರಿಸಿದ ಆಕಾರದಿಂದ ಸುರುಳಿ ಸುಗಂಧಿ ಹೂ ನೋಡಲು "ಚಿಟ್ಟೆ"ಯಂತೆ ಕಾಣುತ್ತದೆ. ಈ ಹೂವುಗಳು ಹೊಳೆಯುವ ಕೆಂಪು ಬಣ್ಣದ ಬೀಜಗಳನ್ನು ಕೊಡುತ್ತವೆ.ಈ ಹೂವು ಯುಗ್ಮರೂಪಿ, ಉಭಯಲಿಂಗ ಸ್ವರೂಪದ,ಮಕರಂದ ಭರಿತವಾದ ಮತ್ತು ರಾತ್ರಿಚಟುವಟಿಕೆಯನ್ನು ತೋರುವಂತಹದ್ದು.ಇವು ಸ್ವಯಂ ಹೊಂದಬಲ್ಲ ಜಾತಿಗಳು. ಈ ಹೂವು ಸಾಮಾನ್ಯವಾಗಿ ಸಂಜೆ ಹೊತ್ತು ಅರಳುತ್ತದೆ. ಹೂವಿನ ಜೀವಿತಾವಧಿ ಕೇವಲ ಒಂದು ದಿನ. ಈ ಸುನಾಸನೆಯುಕ್ತ ಗಿಡವು ಶುಂಠಿ ಸಸ್ಯವರ್ಗಕ್ಕೆ ಸೇರುತ್ತದೆ. ಈ ಗಿಡದ ರೆಂಬೆಗಳು ಗುಂಪಿನ ಆಕಾರದಲ್ಲಿರುತ್ತವೆ ಹಾಗೂ ಅವು ಮೇಲ್ಮುಖವಾಗಿ ಬೆಳೆಯುತ್ತದೆ. ಎಲೆಯ ಕಾಂಡ ೩-೪ ಅಡಿ ಉದ್ದವಿರುತ್ತದೆ ಹಾಗೂ ಹೂವುಗಳು ಈ ಕಾಂಡದ ಕೊನೆಯಿಂದ ಗೊಂಚಲಾಗಿ ಹುಟ್ಟುತ್ತದೆ. ಇದನ್ನು ಬೆಳೆಯಲು ಬೇಕಾದ ಅವಶ್ಯಕ ಅಂಶಗಳು:-

  • ಈ ಗಿಡಕ್ಕೆ ಆಳವಾದ ಫಲವತ್ತಾದ ಮಣ್ಣು ಅಗತ್ಯ.
  • ಹೂವು ಬಿಡುವ ಕಾಲದಲ್ಲಿ ವಾತಾವರಣವು ಶೀತಲ ಹಾಗೂ ತೇವಾಂಶದಿಂದ ಕೂಡಿರಬೇಕು.
  • ಏಪ್ರಿಲ್-ನವೆಂಬರ್ ವರೆಗೆ ನೀರಿನ ಅಗತ್ಯ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ ಈ ಗಿಡವನ್ನು ನೀರುತುಂಬಿದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
  • ಹೂ ಬಿಟ್ಟ ತದನಂತರ, ಹೂವಿನ ಕಾಂಡವನ್ನು ಕತ್ತರಿಸಬೇಕು. ಇದರಿಂದ ಗಿಡದ ಬೆಳೆವಣಿಗೆ ವೃದ್ಧಿಯಾಗುತ್ತದೆ.
  • ಈ ಹೂವಿಗೆ ಭಾಗಶ:ಸೂರ್ಯನ ಬೆಳಕು ಸೂಕ್ತವಾದುದು.
  • ವಾರಕ್ಕೊಮ್ಮೆ ಈ ಗಿಡಕ್ಕೆ ಸಮತೂಕದ ಗೊಬ್ಬರವನ್ನು ಹಾಕಿ ಫಲವತ್ತಾಗಿರಿಸಬೇಕು.ಅಲ್ಲದೆ ಈ ಹೂವಿನ ಗಿಡವನ್ನು ವರ್ಷಕ್ಕೊಮ್ಮೆ ವಿಭಜಿಸಬೇಕು, ಕಾರಣ ಇದು ಬಹಳ ವೇಗವಾಗಿ ಬೆಳೆಯುವಂತಹದ್ದು.

ವಿಶೇಷತೆಗಳು ಬದಲಾಯಿಸಿ

ಇದು ದೇಶೀಯ ತಳಿ. ಸುವಾಸನೆಯುಕ್ತ ಪುಷ್ಪ ಮತ್ತು ಎಲೆ. ಪುಷ್ಪ ಮತ್ತು ಎಲೆಗಳನ್ನು ಪೂಜೆಗೆ ಬಳಸಲಾಗುತ್ತದೆ.

ಬೀಜ ಮೊಳಕೆಯೊಡೆಯುವಿಕೆ ಬದಲಾಯಿಸಿ

ಈ ಹೂವು ಹೊಳೆಯುವ ಕೆಂಪು ಬೀಜಗಳನ್ನು ಕೊಡುತ್ತದೆ. ಬೀಜಗಳನ್ನು ೩ ರಿಂದ ೪ ವಾರದವರೆಗೆ ೭೦ ರಿಂದ ೭೫ ಡಿಗರಿ ಫ್ಯಾರನ್ಹೀಟ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕು ಹಾಗೂ ತೊಗಟೆ ಮೃದುವಾಗಲು ಬಿಸಿ ನೀರಿನಲ್ಲಿ ೨ ತಾಸು ನೆನೆಸಿ ಇಡಬೇಕು. ಅರ್ಧ ಇಂಚು ಮಿಶ್ರಗೊಬ್ಬರದಲ್ಲಿ ನೆಡಬೇಕು. ಗೊಬ್ಬರವನ್ನು ತೇವವಾದ, ಪ್ರಕಾಶವಾದ, ಅಚಲವಾದ ತಾಪಮಾನ ಅಂದರೆ ೬೮ ರಿಂದ ೭೭ ಡಿಗರಿ ಫ್ಯಾರನ್ಹೀಟ್‍ನಲ್ಲಿ ಇಡಬೇಕು. ಬೀಜಗಳು ೨ ರಿಂದ ೬ ವಾರದ ಒಳಗೆ ಮೊಳಕೆಯೊಡೆಯಬೇಕು.

 

ಉಪಯೋಗಗಳು ಬದಲಾಯಿಸಿ

  • ಮೊಟ್ಟಮೊದಲನೆಯದಾಗಿ ಇದನ್ನು ಸಾಮಾನ್ಯವಾದ ನೆಗಡಿ, ಕೆಮ್ಮು ಹಾಗೂ ಗಾಯಗಳಿಗೆ ಉಪಾಯುಕ್ತವಾದುದು. ಈ ಗಿಡದ ಬೇರು ಕಾಂಡದಿಂದ ಉಪಯುಕ್ತ ಎಣ್ಣೆಯನ್ನು ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಸುಗಂಧ ದ್ರವ್ಯ ಹಾಗೂ ಔಷಧಗಳಲ್ಲಿ ಹೇರಳವಾಗಿ ಬಳಸಲಾಗುತ್ತದೆ.
  • ತಲೆನೋವು ಹಾಗೂ ಉರಿಯೂತದಿಂದ ಉಂಟಾಗುವ ನೋವನ್ನು ನಿವಾರಿಸಲು ಉಪಯೋಗಿಸಲಾಗುತ್ತದೆ.
  • ಈ ಗಿಡದ ಬೇರುಗಳನ್ನು ಕ್ಷಾಮ ಆಹಾರವಾಗಿ ಸೇವಿಸಲಾಗುತ್ತದೆ.
  • ಗಲೋದ್ರೇಕ, ಸಕ್ಕರೆ ಕಾಯಿಲೆಗಳನ್ನು ನಿವಾರಿಸಲು ಬಳಸಲಾಗುತ್ತದೆ.
  • ಇದರ ಬೇರುಕಾಂಡವನ್ನು ಜ್ವರ ಶಾಮಕವಾಗಿ ಉಪಯೋಗಿಸಲಾಗುತ್ತದೆ.
  • ಭಾರತದಲ್ಲಿ ಇದರ ಸಾರವನ್ನು(ಗುಲ್ಬಕವಾಲಿ ಆರ್ಕ್) ಕಣ್ಣಿನ ಬಲವರ್ಧಕವಾಗಿ - ಕಣ್ಣಿನ ಪೊರೆಯನ್ನು ನಿವಾರಿಸಲು ಬಳಸಲಾಗುತ್ತದೆ.
  • ಇದನ್ನು ಉದ್ರೇಕಕಾರಿಯಾಗಿ ಬಳಸಲಾಗುತ್ತದೆ .
  • ಬೇಯಿಸಿದ ಎಲೆಗಳನ್ನು ನೋಯುತ್ತಿರುವ ಕೀಲುಗಳಿಗೆ (ಸಂಧಿವಾತ) ಹಚ್ಚಲಾಗುತ್ತದೆ.
  • ಅದಲ್ಲದೆ ಇದನ್ನು ಉತ್ಕರ್ಷಣ ನಿರೋಧಕವಾಗಿಯೂ ಬಳಸುತ್ತಾರೆ.
  • ಈ ಗಿಡದ ಸಾರವು ಆಂಟಿಮೈಕ್ರೊಬಿಯಲ್ ಚಟುವಟಿಕೆಯನ್ನು ಎಲ್ಲ ರೀತಿಯ ಆಹಾರ ಸೂಕ್ಷ್ಮಜೀವಿಗಳ ವಿರುದ್ಧ ಹಾಜರಿಪಡಿಸುತ್ತದೆ.
  • ಇದರ ಎಣ್ಣೆಯನ್ನು ಪರ್ಯಾಯವಾಗಿ ಪೂರಕ ರಕ್ತಸಾರ ಚಿಕಿತ್ಸೆಗೆ ಬಳಸಲಾಗುತ್ತದೆ.
  • ಈ ಹೂವಿನ ಸಾರವು ಅನುಕೂಲಕರವಾದ ಗುರುತು ಶಾಯಿಯಾಗಿ ಉಪಯೋಗಿಸುತ್ತಾರೆ.

ಅನಾನುಕೂಲಗಳು ಬದಲಾಯಿಸಿ

ಈ ಹೂವು ಪರಿಸರದ ಮೇಲೆ ಬಲವಾದ ಪರಿಣಾಮ ಬೀರುತ್ತದೆ. ಅವುಯಾವುವೆಂದರೆ- ಸುರುಳಿ ಸುಗಂಧಿಯು ತೇವವಾದ ಪ್ರದೇಶಗಳಲ್ಲಿ ವ್ಯಾಪಕವಾದ ಕುರುಚಲು ಗಿಡಗಳಾಗಿ ಬೆಳೆದು ಅಲ್ಲಿನ ಸ್ಥಳಿಯ ಪಂಗಡದ ಪುನರುಪ್ಪಾದನೆಯನ್ನು ದಮನಮಾಡುತ್ತದೆ.ಅದಲ್ಲದೆ ಇದು ಬಾಳೆಹಣ್ಣು ಮತ್ತು ಕೊಕೊವ ಗಿಡಗಳಿಗೆ ಕಳೆಯಾಗಿ ತಲೆಯತ್ತುತ್ತದೆ. ಈ ಹೂವನ್ನು ದಕ್ಷಿಣ ಆಫ಼್ರೀಕಾದಲ್ಲಿನ ಹಾನಿಕಾರಕ ಕಳೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಉಲ್ಲೇಖನಗಳು ಬದಲಾಯಿಸಿ