ಜಿಮ್ಮಿ ಜಾರ್ಜ್

ಭಾರತೀಯ ವಾಲಿಬಾಲ್ ಆಟಗಾರ
(ಸದಸ್ಯ:169meghana/WEP 2018-19 ಇಂದ ಪುನರ್ನಿರ್ದೇಶಿತ)

ಜಿಮ್ಮಿ ಜಾರ್ಜ್ (೮ ಮಾರ್ಚ್ ೧೯೯೫) ಸಾರ್ವಕಾಲಿಕ ಶ್ರೇಷ್ಠ ವಾಲಿಬಾಲ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಭಾರತದ ಪುರುಷರ ರಾಷ್ಟ್ರೀಯ ವಾಲಿಬಾಲ್ ತಂಡದ ಸದಸ್ಯರಾಗಿದ್ದಾರೆ.[೧] ಅವರು ಇಟಲಿಯಲ್ಲಿ ವೃತ್ತಿಪರ ಮತ್ತು ವಾಲಿಬಾಲ್ ನಲ್ಲಿ ಆಡಿದ ಮೊದಲ ಭಾರತೀಯ ವಾಲಿಬಾಲ್ ಆಟಗಾರ.[೨]ತಾಂತ್ರಿಕ ಪರಿಪೂರ್ಣತೆಗಾಗಿ ಕಣ್ಣನ್ನು ಹೊಂದಿರುವ ಅತ್ಯುತ್ತಮ ಆಟಗಾರ, ಜಿಮ್ಮಿ ವೃತ್ತಿಪರರಾಗಲು ಭಾರತದ ಮೊದಲ ಆಟಗಾರ.[೩]

ಜಿಮ್ಮಿ ಜಾರ್ಜ್
Personal information
ಪೂರ್ಣ ಹೆಸರು ಜಿಮ್ಮಿ ಜಾರ್ಜ್
ಜನನ (1955-03-08) ೮ ಮಾರ್ಚ್ ೧೯೫೫ (ವಯಸ್ಸು ೬೯)
ಪೆರವುರ್, ಕಣ್ಣೂರು,ಕೇರಳ,ಭಾರತ

ಬಾಲ್ಯ ಬದಲಾಯಿಸಿ

ಜಿಮ್ಮಿ ಜಾರ್ಜ್ ಅವರು ಮಾರ್ಚ್ ೮, ೧೯೫೫ರಲ್ಲಿ ಕೇರಳಕಣ್ಣೂರು ಜಿಲ್ಲೆಯ ಪೆರವೂರ್ ಸಮೀಪದ ತೊಂಡಿಯಲ್ ರಲ್ಲಿರುವ ಪ್ರಸಿದ್ದ ಕುಡಕ್ಕಚಿರ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಜಾರ್ಜ್ ಜೋಸೆಫ್ ಮತ್ತು ತಾಯಿ ಮೇರಿ ಜಾರ್ಜ್.

ವೃತ್ತಿಜೀವನ ಬದಲಾಯಿಸಿ

ಅವರು ತಮ್ಮ ತಂದೆಯಿಂದ ವಾಲಿಬಾಲ್ ಆಡಲು ಕಲಿತರು.ಜಿಮ್ಮಿ ಅವರ ತಂದೆ ಮಾಜಿ ವಿಶ್ವವಿದ್ಯಾಲಯದ ಮಟ್ಟದ ವಾಲಿಬಾಲ್ ಆಟಗಾರ. ಜಿಮ್ಮಿ ಮತ್ತು ಅವರ ಏಳು ಸಹೋದರರು ಒಮ್ಮೆ ತಂಡವಾಗಿ ಆಡಿದ್ದಾರೆ. ಅವರ ಹಿರಿಯ ಸಹೋದರ ಜೋಸ್ ಮತ್ತು ಅವರು ತಕ್ಷಣ ರಾಷ್ಟ್ರೀಯ ಮಟ್ಟದಲ್ಲಿ ಆಡಲು ಹೋದರು. ಜಿಮ್ಮಿ ಅತ್ಯುತ್ತಮ ಈಜುಗಾರರಾಗಿದ್ದರು. ಅವರು ವಾಲಿಬಾಲ್ ಆಟದಲ್ಲಿ ತೊಡಗಿದ್ದ ಕಾರಣದಿಂದಾಗಿ ಈಜನ್ನು ಮತ್ತಷ್ಟು ಮುಂದುವರಿಸಲು ಸಾಧ್ಯವಾಗಲಿಲ್ಲ.

 

ಅವರು ಪೆರವೂರ್ನ ಸೇಂಟ್ ಜೋಸೆಫ್ಸ್ ಹೈ ಸ್ಕೂಲ್ ಗಾಗಿ ಆಡಿದ್ದರು. ೧೯೭೦ರಲ್ಲಿ, ಜಿಮ್ಮಿ ಕ್ಯಾಲಿಕಟ್ ವಾಲಿಬಾಲ್ ತಂಡದಲ್ಲಿ ಸದಸ್ಯರಾದರು. ೧೯೭೩ರಲ್ಲಿ ಅವರು ಪಾಲಾದ ಸೇಂಟ್ ಥಾಮಸ್ ಕಾಲೇಜಿಗೆ ಸೇರಿದರು. ಜಿಮ್ಮಿ ಕೇರಳ ವಿಶ್ವವಿದ್ಯಾನಿಲಯವನ್ನು ೧೯೭೩ ರಿಂದ ೧೯೭೬ ರವರೆಗೆ ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ. ಕೇರಳ ತಂಡವು ಈ ನಾಲ್ಕು ವರ್ಷಗಳಲ್ಲಿ ಆಲ್ ಇಂಡಿಯಾ ಇಂಟರ್- ಯೂನಿವರ್ಸಿಟಿ ಚಾಂಪಿಯನ್ಷಿಪ್ ಅನ್ನು ಗೆದ್ದುಕೊಂಡರು. ಅವರು ೧೯೭೩ರಲ್ಲಿ ತಂಡದ ನಾಯಕರಾಗಿ, ಅವರು ಕೇರಳ ರಾಜ್ಯವನ್ನು ಒಂಬತ್ತು ಬಾರಿ ಪ್ರತಿನಿಧಿಸಿದ್ದಾರೆ. ೧೯೭೬ರಲ್ಲಿ, ಜಿಮ್ಮಿ ಅವರು ವೈದ್ಯಕೀಯ ಕಾಲೇಜನ್ನು ಕೇರಳ ಪೊಲೀಸರಿಗೆ ಸೇರ್ಪಡೆ ಮಾಡಿದರು. ಅಲ್ಲಿ ಅವರು ತಮ್ಮ ಸಾವಿನವರೆಗೂ ಪೊಲೀಸ್ ತಂಡದ ಸದಸ್ಯರಾಗಿದ್ದರು. ಅವರು ೧೯೭೯ರಲ್ಲಿ ಕೇರಳ ಪೊಲೀಸರಿಂದ ರಜೆ ತೆಗೆದುಕೊಂಡು ಅಬುಧಾಬಿ ಸ್ಪೋರ್ಟ್ಸ್ ಕ್ಲಬ್ಗಾಗಿ ಪರ್ಷಿಯನ್ ಗಲ್ಪ್ ಗೆ ತೆರಳಿದರು. ೧೯೮೨ರಲ್ಲಿ ಅವರು ಇಟಲಿಯ ಟ್ರೆವಿಸೊದಲ್ಲಿ ಕೊಲೆಟೊ ಕ್ಲಬ್ಗೆ ಸೇರಲು ಅಬುಧಾಬಿಯನ್ನು ತೊರೆದರು ಮತ್ತು ಅಲ್ಲಿ ಒಂದು ಋತುವಿಗಾಗಿ ಆಡಿದರು. ಅವರು ನಂತರ ಸಿಸ್ಟಮ್ ಇಂಪಿಯಾನಿಗೆ ಬದಲಾಯಿಸಿ ಮತ್ತು ೧೯೮೩-೧೯೮೪ರಲ್ಲಿ ಅವರಿಗೆ ಆಡಿದರು. ಭಾರತಕ್ಕೆ ಹಿಂದಿರುಗಿದ ಅವರು ಪುನಃ ಕೇರಳ ಪೊಲೀಸರೊಂದಿಗೆ ಸೇರಿಕೊಂಡರು. ಆರ್ರಿಟಲ್ ತಂಡಕ್ಕಾಗಿ ಆಡಲು ಅವರು ಮತ್ತೆ ಇಟಲಿಗೆ ಮರಳಿದರು. ಬ್ರೆಸ್ಸಿಯಾದಲ್ಲಿನ ಮಾಂಟ್ಚಿಯಾರಿಯಲ್ಲಿ ಯೂರೋಸ್ಟೈಲ್ - ಯುರೋಸ್ಲ್ಬಾ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ಆ ಕಾಲದ ಸಮಯದಲ್ಲಿ ಅವರು ಮರಣ ಹೊಂದಿದರು.

ಅವರು ಸೌದಿ ಅರೇಬಿಯನ್ ೧೯೮೫ರಲ್ಲಿ ಆಡಿದ ಭಾರತೀಯ ತಂಡದ ನಾಯಕರಾಗಿದ್ದರು.ಭಾರತ ತಂಡವು ೧೯೮೬ರಲ್ಲಿ ಹೈದರಾಬಾದ್ನಲ್ಲಿ ಗೋಲ್ಡ್ ಕಪ್ ಅಂತರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜಯ ಸಾಧೀಸಿತು.

ಪ್ರಶಸ್ತಿಗಳು ಬದಲಾಯಿಸಿ

ಜಿಮ್ಮಿ ಅವರು ತೆಹ್ರಾನ್ (೧೯೭೪), ಬ್ಯಾಂಕಾಕ್ (೧೯೭೮) ಮತ್ತು ಸಿಯೋಲ್ನಲ್ಲಿ (೧೯೮೬) ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ರಾಷ್ಟ್ರೀಯ ವಾಲಿಬಾಲ್ ತಂಡಕ್ಕಾಗಿ ಆಡಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೋಟ್ಟಿದ್ದಾರೆ. ೨೧ನೇ ವಯಸ್ಸಿನಲ್ಲಿ, ಅರ್ಜುನ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ವಾಲಿಬಾಲ್ ಆಟಗಾರ ಜಿಮ್ಮಿ ಜಾರ್ಜ್. ಅವರಿಗೆ ೧೯೭೫ರಲ್ಲಿ ಜಿ.ವಿ.ರಾಜಾ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ೧೯೭೬ರಲ್ಲಿ ಕೇರಳದ ಅತ್ಯುತ್ತಮ ಕ್ರೀಡಾಪಟುಕ್ಕಾಗಿ ಮನೋರಮಾ ಪ್ರಶಸ್ತಿಯನ್ನು ಗೆದ್ದುಕೊಂಡರು. ೧೯೮೨-೧೯೮೪ ಮತ್ತು ೧೯೮೫-೧೯೮೭ರ ನಡುವೆ ಇಟಲಿಯಲ್ಲಿ ವೃತ್ತಿಪರನಾಗಿ ಆಡಿದ ಅವರು, ತನ್ನ ಅವಿಭಾಜ್ಯ ವಿಶ್ವದಲ್ಲಿ ಅತ್ಯುತ್ತಮ ಆಕ್ರಮಣಕಾರರೆಂದು ಪರಿಗಣಿಸಲ್ಪಟ್ಟರು. ೨೦೦೦ರಲ್ಲಿ ಮಲಾಯಲ ಮನೋರಮಾ ಎಂಬ ಮಲಯಾಳಂ ಭಾಷೆಯ ಪತ್ರಿಕೆಯು, ೨೦ನೇ ಶತಮಾನದ ಕೇರಳದ ಅತ್ಯುತ್ತಮ ಕ್ರೀಡಾಪಟು ಎಂದು ಗೌರವಿಸಿತು.

ನಿಧನ ಬದಲಾಯಿಸಿ

ಜಿಮ್ಮಿ ೩೨ನೇ ವಯಸ್ಸಿನಲ್ಲಿ, ನವೆಂಬರ್ ೩೦, ೧೯೮೭ರಂದು ಇಟಲಿಯಲ್ಲಿ ನಡೆದ ಕಾರ್ ಅಪಘಾತದಲ್ಲಿ ಮರಣ ಹೊಂದಿದರು. ಅವರ ಅಂತ್ಯಕ್ರಿಯೆ ಸಮಾರಂಭವು ಪೆರವುರಿನ ಜನರಿಗೆ ಮರೆಯಲಾಗದ ದಿನವಾಗಿತ್ತು. ಕಣ್ಣೂರು ಜಿಲ್ಲೆಯ ವಿವಿಧ ಭಾಗಗಳಿಂದ ಮತ್ತು ಕೇರಳದ ರಾಜ್ಯದಿಂದ ಸಾವಿರಾರು ಜನರು ಈ ಕಾರ್ಯಕ್ರಮಕ್ಕೆ ಹಾಜರಾಗಲು ಪೆರವುರ್ಗೆ ತಲುಪಿದರು. ಅವರ ದೇಹ ಈಗ ಸೇಂಟ್ ಜೋಸೆಫ್ಸ್ ಚರ್ಚ್, ತೊಂಡಿಯೆಲ್, ಪೆರವರೂರಿನ ಸ್ಮಶಾನದಲ್ಲಿದೆ. ಅವರ ಮರಣದ ನಂತರ, ಜಿಮ್ಮಿ ಜಾರ್ಜ್ ಫೌಂಡೇಶನ್ ಅನ್ನು ಸ್ಥಾಪಿಸಲಾಯಿತು. ಉತ್ತರ ಅಮೇರಿಕಾದ ಕೇರಳ ವಾಲಿಬಾಲ್ ಲೀಗ್ 'ಜಿಮ್ಮಿ ಜಾರ್ಜ್ ಸೂಪರ್ ಟ್ರೋಫಿ ವಾಲಿಬಾಲ್ ಪಂದ್ಯಾವಳಿ'ಯನ್ನು ಆಯೋಜಿಸುತ್ತದೆ. ಜಿಮ್ಮಿರವರ ಮರಣದ ಸಮಯದಲ್ಲಿ ಅವರ ಪತ್ನಿ ಲವ್ಲಿಯವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಅವರ ಮಗ ಜೋಸೆಫ್ ಫೆಬ್ರವರಿ ೧೯೮೮ರಲ್ಲಿ ಜನಿಸಿದರು. ಜಿಮ್ಮಿಯವರ ತಂದೆ ಜಾರ್ಜ್ ಜೋಸೆಫ್ ೨೦೧೭ರ ಆಗಸ್ಟ್ ೧೬ರಂದು ನಿಧನರಾದರು.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2018-09-04. Retrieved 2018-10-28.
  2. https://web.archive.org/web/20080514040141/http://sportal.nic.in/legenddetails.asp?sno=667&moduleid=&maincatid=59&subid=0&comid=55
  3. https://web.archive.org/web/20080514040141/http://sportal.nic.in/legenddetails.asp?sno=667&moduleid=&maincatid=59&subid=0&comid=55