ವೈದಿಕ ಸಂಸ್ಕೃತಸ್ವರಘಾತ, ಅಥವಾ ಸಂಕ್ಷಿಪ್ತತೆಗಾಗಿ ವೈದಿಕ ಸ್ವರಘಾತವನ್ನು ಸಂಸ್ಕೃತ ವ್ಯಾಕರಣಕಾರರು ಸಾಂಪ್ರದಾಯಿಕವಾಗಿ ಮೂರು ಗುಣಮಟ್ಟಗಳಾಗಿ ವಿಭಜಿಸುತ್ತಾರೆ, ಉದಾತ್ತ (ತೀಕ್ಷ್ಣ ಉಚ್ಚಾರಣೆ, ಸ್ವರದ ಮೇಲ್ಮಟ್ಟ), ಅನುದಾತ್ತ (ತಗ್ಗು ಉಚ್ಚಾರಣೆ, ಸ್ವರದ ಕೆಳಮಟ್ಟ) ಮತ್ತು ಸ್ವರಿತ (ಸ್ವರದ ಇಳಿಯಿತ್ತಿರುವ ಮಟ್ಟ).

ವೈದಿಕ ಸಂಸ್ಕೃತದಲ್ಲಿ ಬಹುತೇಕ ಶಬ್ದಗಳು ಒಂದು ಒತ್ತಿರುವ ಅಕ್ಷರವನ್ನು ಹೊಂದಿರುತ್ತವೆ, ಮತ್ತು ಇದನ್ನು ಸಾಂಪ್ರದಾಯಿಕವಾಗಿ ಉದಾತ್ತ ಎಂದು ಕರೆಯಲಾಗುತ್ತದೆ ಮತ್ತು ಪ್ರತಿಲಿಪಿಯಲ್ಲಿ ತೀಕ್ಷ್ಣ ಚಿಹ್ನೆಯೊಂದಿಗೆ (◌́) ಬರೆಯಲಾಗುತ್ತದೆ. ಮರುಪಡೆದ ಶಬ್ದಗಳಲ್ಲಿ ಆ ಸ್ವರಘಾತದ ಸ್ಥಾನ ಸಾಮಾನ್ಯವಾಗಿ ಪೂರ್ವ ಇಂಡೋ-ಯೂರೋಪಿಯನ್ ಘಾತದ ಸ್ಥಾನವನ್ನು ಪ್ರತಿಬಿಂಬಿಸುತ್ತದೆ, ಇದರರ್ಥ ಅದು ಮುಕ್ತವಾಗಿತ್ತು ಮತ್ತು ಹಾಗಾಗಿ ಶಬ್ದದ ಆಕಾರದಿಂದ ಉಚ್ಚಾರಣೆಯನ್ನು ಊಹಿಸಲಾಗುತ್ತಿರಲಿಲ್ಲ. ಕೆಲವು ಶಬ್ದಗಳು ಒತ್ತಿರುವ ಅಕ್ಷರವನ್ನು ಹೊಂದಿರುವುದಿಲ್ಲ, ಮತ್ತು ಕೇವಲ ಒತ್ತಿರದ ಅಕ್ಷರಗಳನ್ನು ಒಳಗೊಂಡಿರುತ್ತವೆ.

ಒತ್ತಿರದ ಅಕ್ಷರಗಳನ್ನು ಅನುದಾತ್ತ ಎಂದು ಕರೆಯಲಾಗುತ್ತದೆ ಮತ್ತು ಪ್ರತಿಲಿಪಿಯಲ್ಲಿ ಚಿಹ್ನೆ ಹೊಂದಿರುವುದಿಲ್ಲ. ಉಚ್ಚಾರಣಾ ದೃಷ್ಟಿಯಿಂದ, ಒತ್ತಿರುವ ಋಗ್ವೇದಿಕ ಅಕ್ಷರ ಮೇಲ್ ಸ್ವರಮಟ್ಟವಾಗಿ (ಉಬ್ಬಿನ ಬದಲು) ಎತ್ತರದ ಲಕ್ಷಣ ಹೊಂದಿತ್ತು, ಮತ್ತು ತಕ್ಷಣವೇ ಮುಂದಿನ ಅಕ್ಷರದಲ್ಲಿ ಇಳಿಯುತ್ತಿತ್ತು. ಮುಂದಿನ ಅಕ್ಷರದಲ್ಲಿನ ಇಳಿ ಮಟ್ಟವನ್ನು ಸ್ವರಿತ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಋಗ್ವೇದದ ಮೊದಲ ಪಾದದಲ್ಲಿ[೧]

ಅಗ್ನಿಮ್ ಈಳೆ ಪುರೋಹಿತಮ್
"ಅಗ್ನಿ ನಾನು ಪುರೋಹಿತನನ್ನು ಕೊಂಡಾಡುತ್ತೇನೆ."

ಲಿಪ್ಯಂತರದ ಅರ್ಥ ಎಂಟು ಅಕ್ಷರಗಳು ಕೆಳಗಿನ ಸ್ವರಭಾರವನ್ನು ಹೊಂದಿವೆ

ಅ-ಉ-ಸ-ಅ-ಅ-ಉ-ಸ-ಅ (ಅ=ಅನುದಾತ್ತ, ಉ=ಉದಾತ್ತ, ಸ=ಸ್ವರಿತ),

ಅಥವಾ ಸಾಂಕೇತಿಕವಾಗಿ,

_¯\__¯\_

ಈಳೆ ಸೀಮಿತ ಕ್ರಿಯಾಪದ ಮತ್ತು ಹಾಗಾಗಿ ಉದಾತ್ತ ಹೊಂದಿಲ್ಲ, ಆದರೆ ಅದರ ಮೊದಲ ಅಕ್ಷರ ಸ್ವರಿತ ಏಕೆಂದರೆ ಹಿಂದಿನ ಅಕ್ಷರ ಉದಾತ್ತವಾಗಿತ್ತು. ವೈದಿಕ ಛಂದ ವೈದಿಕ ಸ್ವರಘಾತವನ್ನು ಅವಲಂಬಿಸಿಲ್ಲ ಮತ್ತು ಪ್ರತ್ಯೇಕವಾಗಿ ಅಕ್ಷರ ಭಾರದಿಂದ ನಿರ್ಧಾರಿತವಾಗುತ್ತದೆ, ಮತ್ತು ಹಾಗಾಗಿ ಛಂದದ ದೃಷ್ಟಿಯಿಂದ, ಪಾದವನ್ನು ಕೆಳಗಿನಂತೆ ಓದಬಹುದು

-.--.-.x

ಉಲ್ಲೇಖಗಳು ಬದಲಾಯಿಸಿ