ಗಂಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೪ ನೇ ಸಾಲು:
 
==ಸ್ಕಂಧ ಪುರಾಣದ ಹಿನ್ನೆಲೆಯಲ್ಲಿ ಗಂಗೆ==
ಗಂಗಾಮಾತೆ ಶಿವನ ಪತ್ನಿ. ತನ್ನ ಜಟೆಯಲ್ಲಿ ಶಿವ ಆಕೆಗೆ ಸ್ಥಾನ ನೀಡಿದ್ದಾನೆ. ಆಕೆಯನ್ನು ಭೂಮಿಗೆ ತರಲು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ- ಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆ. ಇಕ್ವಾಕು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧವೆಂಬ ಯಜ್ಙಕ್ಕಾಗಿ ಕುದುರೆಯನ್ನು ಬಿಟ್ಟಿದ್ದ. ಅಶ್ವಮೇಧ ಯಜ್ಞ ಮುಗಿದರೆ, ಇಂದ್ರ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ ಆಶ್ರಮದಲ್ಲಿ ಕಟ್ಟಿದ್ದ. (ಪಶ್ಚಿಮ ಬಂಗಾಳದಲ್ಲಿನ -ಸಮುದ್ರ ತೀರ) ಕುದುರೆಗಾಗಿ ಅಲ್ಲಿಗೆ ಬಂದ ಸಗರರಾಜ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು. ಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು. ಈ ಸಂಧರ್ಭದಲ್ಲಿ ಭಗೀರಥ ಗಂಗೆಯನ್ನು ಭೂಮಿಗೆ ತಂದು ಸಗರರಾಜನ ೬೦೦೦೦ ಪುತ್ರರಿಗೆ ಶಾಪ ವಿಮೋಚನೆ ಮಾಡಿದನೆಂದು ಹೇಳಲಾಗಿದೆ.<ref>ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್</ref>
 
==ಕೇದಾರನಾಥ==
"https://kn.wikipedia.org/wiki/ಗಂಗಾ" ಇಂದ ಪಡೆಯಲ್ಪಟ್ಟಿದೆ