ಎಲೆತೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧೯ ನೇ ಸಾಲು:
ವೀಳ್ಯದೆಲೆಯನ್ನು ಭಾರತ ದೇಶದ ಎಲ್ಲ ಪ್ರಾಂತ್ಯಗಳಲ್ಲೂ ಕರ್ನಾಟಕ ರಾಜ್ಯದ ಮೈದಾನ ಪ್ರದೇಶಗಳಲ್ಲಿ ವಿಶೇಷವಾಗಿಯೂ ಬೆಳೆಸುತ್ತಾರೆ. ಬೆಂಗಳೂರು, ಚಿತ್ರದುರ್ಗ ಮೈಸೂರು, ಮಂಡ್ಯ, ಹಾಸನ, ಧಾರವಾಡ ಮುಂತಾದ ಜಿಲ್ಲೆಗಳ ಎಲೆ ಹೆಸರು ಪಡೆದಿದೆ. ಇತರ ಜಿಲ್ಲೆಗಳಲ್ಲಿ ಇದರ ವ್ಯವಸಾಯ ಗಣನೀಯ ಪ್ರಮಾಣದಲ್ಲಿಲ್ಲ.
 
ನೆಲದಲ್ಲಿ ತೇವಾಂಶವಿದ್ದು ಹವೆ ಶುಷ್ಕವಾಗಿರುವಲ್ಲಿ ಎಲೆ ಸೊಗಸಾಗಿ ಬೆಳೆಯುತ್ತದೆ. 45-90 ಸೆಂಮೀಸೆಂ.ಮೀ. ಅಂಗುಲದಿಂದ ಮೂವತ್ತು ಅಂಗುಲ ಮಳೆ ಬೀಳುವ ಪ್ರದೇಶಗಳು ಎಲೆಯ ಬೇಸಾಯಕ್ಕೆ ಉತ್ತಮ. ಸಾಮಾನ್ಯವಾಗಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೀರಾವರಿ ಅನುಕೂಲ ಇರಬೇಕು. ಇದು ಒಣಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದಾದರೂ ಭೂಮಿಯಲ್ಲಿ ತೇವಾಂಶ ಚೆನ್ನಾಗಿರಬೇಕು. ಸೂರ್ಯನ ತಾಪವನ್ನು ಇದು ತಡೆಯುವುದಿಲ್ಲ. ಆದ್ದರಿಂದ ನೆರಳು ಅತ್ಯಾವಶ್ಯಕ. ಇದು ಬಳ್ಳಿಯಾಗಿರುವುದರಿಂದ ಹಬ್ಬುವುದಕ್ಕೆಂದು ನೆಟ್ಟ ಮರಗಳು ನೆರಳನ್ನು ಒದಗಿಸುತ್ತವೆ. 150-250 ಸೆಂ. ಉಷ್ಣತೆ ಇದಕ್ಕೆ ಸರಿಯಾದುದು. ಅಲ್ಲದೆ ಎಲೆ ವ್ಯವಸಾಯ ಬಹು ನಾಜೂಕಿನ ಕೆಲಸ. ನೆಲ, ನೀರು, ಬಿಸಿಲು, ಗೊಬ್ಬರ, ಕಟಾವು-ಇತ್ಯಾದಿಯಾಗಿ ಎಲ್ಲ ಅಂಶಗಳಲ್ಲೂ ಬಹು ಎಚ್ಚರಿಕೆಯಿಂದಿರಬೇಕಾಗುತ್ತದೆ.
 
ಆಳವಾದ ಜೌಗಿಲ್ಲದ ಕಪ್ಪು ಮಣ್ಣು ಎಲೆಯ ತೋಟಮಾಡಲು ಉತ್ಕೃಷ್ಟವಾದ್ದು. ದೀರ್ಘ ಕಾಲದ ಬೆಳೆಯಾದ್ದರಿಂದ ಹೆಚ್ಚು ಫಲವತ್ತಾದ ಮಣ್ಣುಬೇಕು. ಸಸ್ಯಗಳಿಂದ ಕೊಳೆತು ಹೆಚ್ಚು ಫಲವತ್ತಾಗಿರುವ ಕೆಂಪು ಗೋಡು ಭೂಮಿ ಚೆನ್ನಾಗಿ ಫಸಲನ್ನು ಕೊಡುತ್ತದೆ. 6-7ರವರೆಗೆ ಪಿ.ಎಚ್.ಉಳ್ಳ ಮಣ್ಣು ಸರಿಹೊಂದುತ್ತದೆ. ಮಣ್ಣಿಗೆ ತೇವಾಂಶವನ್ನು ಚೆನ್ನಾಗಿ ತಡೆದು ಇಟ್ಟುಕೊಳ್ಳುವ ಶಕ್ತಿ ಇರಬೇಕು. ನೀರು ಹೆಚ್ಚು ಬೇಕಿದ್ದರೂ ಬುಡದಲ್ಲಿ ನಿಲ್ಲಬಾರದು, ಬಿದ್ದ ನೀರು ಬಸಿದು ಹೋಗಲು ಅನುಕೂಲವಾಗುವಂತೆ ಇಂಗು ಕಾಲುವೆಗಳನ್ನು ತೆಗೆಯಬೇಕು.
 
ಬಳ್ಳಿಯನ್ನು ಹಂಬುಗಳಿಂದ ವೃದ್ಧಿ ಮಾಡುತ್ತಾರೆ. ಸಾಮಾನ್ಯವಾಗಿ ಮುಂಗಾರು ಮಳೆಯ ಮಧ್ಯದಲ್ಲಿ ಹಂಬು ನೆಡುವುದು ವಾಡಿಕೆ. ಸು. 1ವರ್ಷ ವಯಸ್ಸಾಗಿದ್ದು ಚೆನ್ನಾಗಿ ಬಲಿತಿರುವ ಹಂಬುಗಳನ್ನು ಸು. 1ಮೀ1 ಮೀ. ಉದ್ದ ಗೆಣ್ಣುಗಳು ಬರುವಂತೆ ಕತ್ತರಿಸಿಕೊಂಡು ನೆಡಬೇಕು.
 
ವೀಳ್ಯದೆಲೆಯ ಹಂಬುಗಳಲ್ಲಿರುವ ಜಾತಿಗಳನ್ನು ಇದುವರೆಗೆ ವೈಜ್ಞಾನಿಕ ರೀತಿಯಿಂದ ವಿಂಗಡಿಸಿಲ್ಲ. ಎಲೆಯ ರುಚಿ, ವಾಸನೆ, ಕಟುತ್ವ, ಗಾತ್ರ ಇವುಗಳ ಮೇಲೆ ಕರಿಎಲೆ, ನಾಗವಲ್ಲಿ ಎಲೆ, ಅಂಬಾಡಿ ಎಲೆ, ಮದ್ರಾಸು ಎಲೆ, ಕಣಿಗೆ ಎಲೆ-ಎಂದು ಸ್ಥೂಲವಾಗಿ ವಿಂಗಡಿಸಲಾಗಿದೆ.
೩೨ ನೇ ಸಾಲು:
 
ವೀಳ್ಯದೆಲೆಯ ಹಂಬನ್ನು ಬೆಳೆಸುವ ಮೊದಲು ಭೂಮಿಯನ್ನು ಚೆನ್ನಾಗಿ ಹದಮಾಡಬೇಕು. ಬೇಸಗೆ ಬರುವ ಮೊದಲೆ ನೆಲವನ್ನು ಆಳವಾಗಿ ಅಗೆದು ಬಿಸಿಲಿನ ತಾಪಕ್ಕೆ ಬಿಡಬೇಕು. ಮುಂಗಾರು ಮಳೆಯ ಪ್ರಾರಂಭದಲ್ಲಿ ಹೆಂಟೆಗಳನ್ನು ಚೆನ್ನಾಗಿ ಪುಡಿ ಮಾಡಿ ಮಟ್ಟಸಮಾಡಬೇಕು. ಗರಿಕೆ, ಕೆಳೆ, ಕಲ್ಲು ಇತ್ಯಾದಿಗಳನ್ನು ತೆಗೆದುಹಾಕಿ ಶುದ್ಧಮಾಡಬೇಕು. ಭದ್ರವಾದ ಬೇಲಿಯನ್ನು ಸಿದ್ಧ ಮಾಡಬೇಕು. ನೀರಾವರಿಗೋಸ್ಕರ ಬಾವಿ ಮತ್ತು ಕಾಲುವೆಗಳನ್ನು ಮಾಡಬೇಕು. ತೋಟದ ಸುತ್ತಲೂ ಗಾಳಿತಡೆಯನ್ನು ನಿರ್ಮಿಸಬೇಕು.
ಮೊದಲು ಹಂಬುಗಳನ್ನು ಹಬ್ಬಿಸಲು ಅಗಸೆ, [[ಬೂರುಗ]], ನುಗ್ಗೆ, ಪಾರಿಜಾತ ಮುಂತಾದ ಬೀಜಗಳನ್ನು ಸಾಲುಗಳಲ್ಲಿ ನೆಡುವುದರಿಮದನೆಡುವುದರಿಂದ ಬೇಸಾಯ ಪ್ರಾರಂಭವಾಗುತ್ತದೆ. ಬೀಜಗಳನ್ನು ಬಿತ್ತನೆ ಮಾಡುವುದಕ್ಕೆ ಮುಂಚೆ ಅನುಕೂಲತೆಗೆ ತಕ್ಕ ಹಾಗೆ 1ಮೀ1 ಮೀ. ಅಗಲದ ಉದ್ದನೆಯ ಪಾತಿಗಳನ್ನು ಮಾಡಬೇಕು. ಪ್ರತಿ ಎರಡು ಪಾತಿಗಳಿಗೆ ನಡುವೆ 1.3ಮೀ3 ಮೀ ಅಗಲವಿರುವ ಚೌಗು ಕಾಲುವೆಗಳನ್ನು ನಾಲ್ಕು ಮೀ ಉದ್ದಕ್ಕೂ ಮಾಡಬೇಕು. ಅನಂತರ ಅಂತರದಲ್ಲಿ ಸಾಲುಗಳಾಗಿ ನೆರಳಿನ ಮರಗಳನ್ನು ಎಬ್ಬಿಸಬೇಕು. ಅಗಸೆ, ಬೂರುಗ, ನುಗ್ಗೆ, ಪಾರಿಚಾತ, ಹಾಲಿವಾಣ ಇವು ಒಳ್ಳೆಯ ನೆರಳು ಕೊಡುವ ಮರಗಳು. ಅನೇಕ ವೇಳೆ ಬೆಳೆದ ಅಡಕೆ ಮತ್ತು ತೆಂಗುಗಳಿಗೂ ಬಳ್ಳಿಯನ್ನು ಹಬ್ಬಿಸುವುದುಂಟು. ಎರಡು ಅಥವಾ ಮೂರು ತಿಂಗಳಲ್ಲಿ ನೆರಳು ಗಿಡಗಳು 1.3-1.6ಮೀ6 ಮೀ. ಎತ್ತರಕ್ಕೆ ಬೆಳೆಯುತ್ತವೆ. ಇವುಗಳ ಮಧ್ಯದಲ್ಲಿನ ಪಾತಿಯಲ್ಲಿ ಆಗಸ್ಟ್‌ ತಿಂಗಳಲ್ಲಿ ಹಂಬುಗಳ ತುಂಡುಗಳನ್ನು ನೆಡುವುದು ವಾಡಿಕೆ. ಸಾಲಿನಲ್ಲಿ ಒತ್ತಾಗಿರುವ ಸಸಿಗಳನ್ನು ಕಿತ್ತುಹಾಕಬೇಕು. ಅಂಟುಗಳು ಚಿಗುರುವವರೆಗೆ ನೀರು ಹೊತ್ತು ಹಾಕುವುದು ಅಗತ್ಯ. ಸರಿಯಾದ ನೆರಳನ್ನೂ ಒದಗಿಸಬೇಕು.
 
ಅನಂತರವೂ ಕಾಲಕ್ಕೆ ಸರಿಯಾಗಿ ನೀರು ಹಾಯಿಸುವುದು ಮುಖ್ಯ. ಕಳೆ ಕಿತ್ತು ಸ್ವಚ್ಚ ಮಾಡುವುದರಿಂದ ತೋಟಕ್ಕೆ ರೋಗಗಳು ಹರಡುವ ಸಂಭವ ಕಡಿಮೆಯಾಗುತ್ತದೆ. ತುಂಬ ನೆರಳು ಕಟ್ಟಿರುವಲ್ಲಿ ಹೆಚ್ಚಿನ ರೆಂಬೆಗಳನ್ನು ಕತ್ತರಿಸಿ ಹಾಕಬೇಕು. ಉತ್ತಮ ಫಸಲನ್ನು ಪಡೆಯಲು ಪ್ರತಿ ಎರಡು ತಿಂಗಳಿಗೊಮ್ಮೆ ಪಾತಿ ಒಂದಕ್ಕೆ 10ಕಿಗ್ರಾಂನಷ್ಟು10 ಕಿ.ಗ್ರಾಂ.ನಷ್ಟು ಚೆನ್ನಾಗಿ ಕೊಳೆತ ಗೊಬ್ಬರವನ್ನು ಹಾಕಬೇಕು. ವರ್ಷಕ್ಕೊಂದುಸಾರಿವರ್ಷಕ್ಕೊಂದು ಸಾರಿ ಹೆಚ್ಚು ಬೆಳೆದಿರುವ ಹಂಬುಗಳನ್ನು ಸುತ್ತಿ ಪಕ್ಕದ ಪಾತಿಗಳಿಗೆ ಬದಲಾಯಿಸಬೇಕು. ಸುತ್ತಿದ ಹಂಬುಗಳನ್ನು ಪಾತಿಯಲ್ಲಿಟ್ಟು ಸರಿಯಾಗಿ ನಿಲ್ಲುವಂತೆ ಮಣ್ಣು ಉಂಡೆಗಳನ್ನು ಇಡಬೇಕು. ಅನಂತರ ಅವು ಬೆಳೆದಂತೆಲ್ಲ ಆಶ್ರಯದ ಮರಗಳಿಗೆ ಕಟ್ಟಬೇಕು. ಹಂಬು ಇಳಿಸುವಾಗ ಅದರ ಪಕ್ಕದ ರೆಂಬೆಗಳನ್ನು ಕತ್ತರಿಸಿ ಹಾಕಬೇಕು.
 
ಸಾಮಾನ್ಯವಾಗಿ ಎಲೆ ಬಳ್ಳಿಯನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಾರೆ. ಔಗುಜೌಗು ಕಾಲುವೆ ಮತ್ತು ದೊಡ್ಡ ಅಥವಾ ಮುಖ್ಯ ಕಾಲುವೆಗಳ ನಡುವೆ ಹಂಬು ನೆಡುತ್ತಾರೆ. ಪರಂಗಿಯನ್ನು ಕೂಡ ಇದೇ ರೀತಿ ಬೆಳೆಸಬಹುದು. ನೆರಳು ಮತ್ತು ಆಶ್ರಯಕ್ಕಾಗಿ ನೆಟ್ಟ ನುಗ್ಗೆ ಅಥವಾ ಅಗಸೆ ಮರಗಳು ಫಲವನ್ನು ಕೊಡುವುದರಿಂದ ಅವನ್ನು ಸಹ ಮಿಶ್ರಬೆಳೆ ಎಂದೇ ಕರೆಯಬಹುದು. ಎಲೆ ಹಂಬು ನೆಟ್ಟ ಹೊಸದರಲ್ಲಿ ಸೌತೆ, ಹುರುಳಿ ಮುಂತಾದುವನ್ನು ಬೆಳೆಯಬಹುದು. ಅದರ ಹಂಬು ದೊಡ್ಡದಾದಮೇಲೆ ಬಾಳೆ, ಪರಂಗಿ ಮತ್ತು ಅಡಕೆಯನ್ನು ಬಿಟ್ಟು ಮತ್ತೆ ಯಾವ ಮಿಶ್ರ ಬೆಳೆಯನ್ನು ತೆಗೆಯಲು ಸಾಧ್ಯವಿಲ್ಲ.
ಎಲೆ ಎರಡು ತಿಂಗಳಿಗೆ ಒಂದಾವರ್ತಿ ಕುಯ್ಲಿಗೆ ಬರುತ್ತದೆ. ಹದವಾದ ಎಲೆಗಳನ್ನು ಮಾತ್ರ ಚಾಕುವಿನಿಂದ ಕುಯ್ದು ಜೋಡಿಸಿ ಕಟ್ಟುಗಳಾಗಿ ಕಟ್ಟುತ್ತಾರೆ. ಹೆಬ್ಬೆರಳಿನ ತುದಿಗೆ ಲೋಹದ ಉಗುರನ್ನು ಹಾಕಿಕೊಂಡು ಎಲೆಗಳನ್ನು ಚಿವುಟಿ ತೆಗೆಯುವುದೂ ಉಂಟು. ಇಂಥ ಲೋಹದ ಉಗುರನ್ನು ಎಲೆಯುಗುರು ಎನ್ನುತ್ತಾರೆ. ನೇರ ಉಗುರುಗಳಿಂದಲೇ ಚಿವುಟಿದರೆ ಬಳ್ಳಿಗೆ ನಂಜಾಗುತ್ತದೆ. ಎಲೆ ಬಿಡಿಸುವವರನ್ನು ಉಗುರರು ಎಂದೇ ಕರೆಯುತ್ತಾರೆ. ಚೆನ್ನಾಗಿ ಬೇಸಾಯ ಮಾಡಿದ ತೋಟ ವರ್ಷಕ್ಕೆ ಎಕರೆ ಒಂದಕ್ಕೆ ಸುಮಾರು ಎರಡು ಲಕ್ಷ ಎಲೆಗಳನ್ನು ಕೊಡುತ್ತದೆ. ಆಗಾಗ ನೆಲಕ್ಕೆ ಊರುತ್ತಿದ್ದರೆ ಚೆನ್ನಾಗಿ ಬೆಳೆದ ಹಂಬು ಅರವತ್ತು ವರ್ಷ ಫಲಕೊಡುತ್ತದೆಂದು ಬೇಸಾಯಗಾರರ ಅಭಿಪ್ರಾಯ.
 
"https://kn.wikipedia.org/wiki/ಎಲೆತೋಟ" ಇಂದ ಪಡೆಯಲ್ಪಟ್ಟಿದೆ