ಎಲೆತೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೧೯ ನೇ ಸಾಲು:
ವೀಳ್ಯದೆಲೆಯನ್ನು ಭಾರತ ದೇಶದ ಎಲ್ಲ ಪ್ರಾಂತ್ಯಗಳಲ್ಲೂ ಕರ್ನಾಟಕ ರಾಜ್ಯದ ಮೈದಾನ ಪ್ರದೇಶಗಳಲ್ಲಿ ವಿಶೇಷವಾಗಿಯೂ ಬೆಳೆಸುತ್ತಾರೆ. ಬೆಂಗಳೂರು, ಚಿತ್ರದುರ್ಗ ಮೈಸೂರು, ಮಂಡ್ಯ, ಹಾಸನ, ಧಾರವಾಡ ಮುಂತಾದ ಜಿಲ್ಲೆಗಳ ಎಲೆ ಹೆಸರು ಪಡೆದಿದೆ. ಇತರ ಜಿಲ್ಲೆಗಳಲ್ಲಿ ಇದರ ವ್ಯವಸಾಯ ಗಣನೀಯ ಪ್ರಮಾಣದಲ್ಲಿಲ್ಲ.
ನೆಲದಲ್ಲಿ ತೇವಾಂಶವಿದ್ದು ಹವೆ ಶುಷ್ಕವಾಗಿರುವಲ್ಲಿ ಎಲೆ ಸೊಗಸಾಗಿ ಬೆಳೆಯುತ್ತದೆ. 45-90
ಆಳವಾದ ಜೌಗಿಲ್ಲದ ಕಪ್ಪು ಮಣ್ಣು ಎಲೆಯ ತೋಟಮಾಡಲು ಉತ್ಕೃಷ್ಟವಾದ್ದು. ದೀರ್ಘ ಕಾಲದ ಬೆಳೆಯಾದ್ದರಿಂದ ಹೆಚ್ಚು ಫಲವತ್ತಾದ ಮಣ್ಣುಬೇಕು. ಸಸ್ಯಗಳಿಂದ ಕೊಳೆತು ಹೆಚ್ಚು ಫಲವತ್ತಾಗಿರುವ ಕೆಂಪು ಗೋಡು ಭೂಮಿ ಚೆನ್ನಾಗಿ ಫಸಲನ್ನು ಕೊಡುತ್ತದೆ. 6-7ರವರೆಗೆ ಪಿ.ಎಚ್.ಉಳ್ಳ ಮಣ್ಣು ಸರಿಹೊಂದುತ್ತದೆ. ಮಣ್ಣಿಗೆ ತೇವಾಂಶವನ್ನು ಚೆನ್ನಾಗಿ ತಡೆದು ಇಟ್ಟುಕೊಳ್ಳುವ ಶಕ್ತಿ ಇರಬೇಕು. ನೀರು ಹೆಚ್ಚು ಬೇಕಿದ್ದರೂ ಬುಡದಲ್ಲಿ ನಿಲ್ಲಬಾರದು, ಬಿದ್ದ ನೀರು ಬಸಿದು ಹೋಗಲು ಅನುಕೂಲವಾಗುವಂತೆ ಇಂಗು ಕಾಲುವೆಗಳನ್ನು ತೆಗೆಯಬೇಕು.
ಬಳ್ಳಿಯನ್ನು ಹಂಬುಗಳಿಂದ ವೃದ್ಧಿ ಮಾಡುತ್ತಾರೆ. ಸಾಮಾನ್ಯವಾಗಿ ಮುಂಗಾರು ಮಳೆಯ ಮಧ್ಯದಲ್ಲಿ ಹಂಬು ನೆಡುವುದು ವಾಡಿಕೆ. ಸು. 1ವರ್ಷ ವಯಸ್ಸಾಗಿದ್ದು ಚೆನ್ನಾಗಿ ಬಲಿತಿರುವ ಹಂಬುಗಳನ್ನು ಸು.
ವೀಳ್ಯದೆಲೆಯ ಹಂಬುಗಳಲ್ಲಿರುವ ಜಾತಿಗಳನ್ನು ಇದುವರೆಗೆ ವೈಜ್ಞಾನಿಕ ರೀತಿಯಿಂದ ವಿಂಗಡಿಸಿಲ್ಲ. ಎಲೆಯ ರುಚಿ, ವಾಸನೆ, ಕಟುತ್ವ, ಗಾತ್ರ ಇವುಗಳ ಮೇಲೆ ಕರಿಎಲೆ, ನಾಗವಲ್ಲಿ ಎಲೆ, ಅಂಬಾಡಿ ಎಲೆ, ಮದ್ರಾಸು ಎಲೆ, ಕಣಿಗೆ ಎಲೆ-ಎಂದು ಸ್ಥೂಲವಾಗಿ ವಿಂಗಡಿಸಲಾಗಿದೆ.
೩೨ ನೇ ಸಾಲು:
ವೀಳ್ಯದೆಲೆಯ ಹಂಬನ್ನು ಬೆಳೆಸುವ ಮೊದಲು ಭೂಮಿಯನ್ನು ಚೆನ್ನಾಗಿ ಹದಮಾಡಬೇಕು. ಬೇಸಗೆ ಬರುವ ಮೊದಲೆ ನೆಲವನ್ನು ಆಳವಾಗಿ ಅಗೆದು ಬಿಸಿಲಿನ ತಾಪಕ್ಕೆ ಬಿಡಬೇಕು. ಮುಂಗಾರು ಮಳೆಯ ಪ್ರಾರಂಭದಲ್ಲಿ ಹೆಂಟೆಗಳನ್ನು ಚೆನ್ನಾಗಿ ಪುಡಿ ಮಾಡಿ ಮಟ್ಟಸಮಾಡಬೇಕು. ಗರಿಕೆ, ಕೆಳೆ, ಕಲ್ಲು ಇತ್ಯಾದಿಗಳನ್ನು ತೆಗೆದುಹಾಕಿ ಶುದ್ಧಮಾಡಬೇಕು. ಭದ್ರವಾದ ಬೇಲಿಯನ್ನು ಸಿದ್ಧ ಮಾಡಬೇಕು. ನೀರಾವರಿಗೋಸ್ಕರ ಬಾವಿ ಮತ್ತು ಕಾಲುವೆಗಳನ್ನು ಮಾಡಬೇಕು. ತೋಟದ ಸುತ್ತಲೂ ಗಾಳಿತಡೆಯನ್ನು ನಿರ್ಮಿಸಬೇಕು.
ಮೊದಲು ಹಂಬುಗಳನ್ನು ಹಬ್ಬಿಸಲು ಅಗಸೆ, [[ಬೂರುಗ]], ನುಗ್ಗೆ, ಪಾರಿಜಾತ ಮುಂತಾದ ಬೀಜಗಳನ್ನು ಸಾಲುಗಳಲ್ಲಿ
ಅನಂತರವೂ ಕಾಲಕ್ಕೆ ಸರಿಯಾಗಿ ನೀರು ಹಾಯಿಸುವುದು ಮುಖ್ಯ. ಕಳೆ ಕಿತ್ತು ಸ್ವಚ್ಚ ಮಾಡುವುದರಿಂದ ತೋಟಕ್ಕೆ ರೋಗಗಳು ಹರಡುವ ಸಂಭವ ಕಡಿಮೆಯಾಗುತ್ತದೆ. ತುಂಬ ನೆರಳು ಕಟ್ಟಿರುವಲ್ಲಿ ಹೆಚ್ಚಿನ ರೆಂಬೆಗಳನ್ನು ಕತ್ತರಿಸಿ ಹಾಕಬೇಕು. ಉತ್ತಮ ಫಸಲನ್ನು ಪಡೆಯಲು ಪ್ರತಿ ಎರಡು ತಿಂಗಳಿಗೊಮ್ಮೆ ಪಾತಿ ಒಂದಕ್ಕೆ
ಸಾಮಾನ್ಯವಾಗಿ ಎಲೆ ಬಳ್ಳಿಯನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಾರೆ.
ಎಲೆ ಎರಡು ತಿಂಗಳಿಗೆ ಒಂದಾವರ್ತಿ ಕುಯ್ಲಿಗೆ ಬರುತ್ತದೆ. ಹದವಾದ ಎಲೆಗಳನ್ನು ಮಾತ್ರ ಚಾಕುವಿನಿಂದ ಕುಯ್ದು ಜೋಡಿಸಿ ಕಟ್ಟುಗಳಾಗಿ ಕಟ್ಟುತ್ತಾರೆ. ಹೆಬ್ಬೆರಳಿನ ತುದಿಗೆ ಲೋಹದ ಉಗುರನ್ನು ಹಾಕಿಕೊಂಡು ಎಲೆಗಳನ್ನು ಚಿವುಟಿ ತೆಗೆಯುವುದೂ ಉಂಟು. ಇಂಥ ಲೋಹದ ಉಗುರನ್ನು ಎಲೆಯುಗುರು ಎನ್ನುತ್ತಾರೆ. ನೇರ ಉಗುರುಗಳಿಂದಲೇ ಚಿವುಟಿದರೆ ಬಳ್ಳಿಗೆ ನಂಜಾಗುತ್ತದೆ. ಎಲೆ ಬಿಡಿಸುವವರನ್ನು ಉಗುರರು ಎಂದೇ ಕರೆಯುತ್ತಾರೆ. ಚೆನ್ನಾಗಿ ಬೇಸಾಯ ಮಾಡಿದ ತೋಟ ವರ್ಷಕ್ಕೆ ಎಕರೆ ಒಂದಕ್ಕೆ ಸುಮಾರು ಎರಡು ಲಕ್ಷ ಎಲೆಗಳನ್ನು ಕೊಡುತ್ತದೆ. ಆಗಾಗ ನೆಲಕ್ಕೆ ಊರುತ್ತಿದ್ದರೆ ಚೆನ್ನಾಗಿ ಬೆಳೆದ ಹಂಬು ಅರವತ್ತು ವರ್ಷ ಫಲಕೊಡುತ್ತದೆಂದು ಬೇಸಾಯಗಾರರ ಅಭಿಪ್ರಾಯ.
|