ಕತಾರ್ಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಕತಾರ್ಸಿಸ್''' : ಭೇದಿ, ವಿರೇಚನೆ ಎಂಬ ಅರ್ಥವನ್ನುಳ್ಳ ಈ ಪ್ರಾಚೀನ [[ಗ್ರೀಕ್]] ಪದ ವೈದ್ಯಕ್ಕೆ ಸೇರಿದುದು. ತತ್ತ್ವಜ್ಞರು ಕ್ರಮೇಣ ಇದನ್ನು ಕೆಲವು ಕಲೆಗಳು ಉಂಟುಮಾಡುವ ಪರಿಣಾಮಕ್ಕೆ ಅನ್ವಯಿಸಿದರು.
 
==ಗ್ರೀಕ್ ರುದ್ರನಾಟಕಗಳಲ್ಲಿ==
ರುದ್ರನಾಟಕದ (ಗಂಭೀರ ನಾಟಕ) ಮೇಲೆ [[ಪ್ಲೇಟೊ]] ಮಹಾಶಯನಿಗೆ ವಿಶೇಷ ಆಗ್ರಹ. ಅದರಿಂದ ಆಗುವ ಕೇಡನ್ನು ಆತ ಹೀಗೆ ಬಣ್ಣಿಸಿದ: ನಾಟಕಶಾಲೆಯಲ್ಲಿ[[ನಾಟಕ]][[ಶಾಲೆ]]ಯಲ್ಲಿ ಅದನ್ನು ವೀಕ್ಷಿಸುತ್ತ ನೋಟಕರು ತಮ್ಮ ಮರುಕವನ್ನು ತಡೆದಿಡಲಾರದೆ ಎಲ್ಲರೆದುರಿಗೂ ಗಟ್ಟಿಯಾಗಿ ರೋದಿಸುತ್ತಾರೆ. ಆ ವರ್ತನೆಯಿಂದ ಅವರ ದಾಢರ್ಯ್‌ಕ್ಕೂ ಸಂಯಮಕ್ಕೂ ಹಾನಿ, ಅವರ ಪೌರುಷಕ್ಕೇ ಅಪಾಯ. ಆದ್ದರಿಂದ ಆದರ್ಶ ಗಣರಾಜ್ಯದಿಂದ ನಾಟಕಕರ್ತರನ್ನು ಗಡೀಪಾರು ಮಾಡತಕ್ಕದ್ದು.
 
ಪ್ಲೇಟೊವಿನ ಆಕ್ಷೇಪಕ್ಕೆ ಸೂಕ್ತ ಸಮಾಧಾನವನ್ನಿತ್ತು ರುದ್ರನಾಟಕವನ್ನು [[ಅರಿಸ್ಟಾಟಲ್]] ಸಮರ್ಥಿಸಿದ. ಅವನ ವಿವರಣೆಯಂತೆ ರುದ್ರನಾಟಕ ಮೂರು ತೆರದಲ್ಲಿ ಪ್ರಯೋಜಕ. ಆದರೆ ಅವನ ಅಭಿಪ್ರಾಯಗಳು ವಿಶದವಾಗಿ ಪೋಷಿತವಾಗಿಲ್ಲ. ತನ್ನ ಪಾಲಿಟಿಕ್ಸ್‌ ಗ್ರಂಥದಲ್ಲಿ ಆತ ಸಂಗೀತ ಒದಗಿಸಿಕೊಡುವ ವಿರೇಚನವನ್ನು ಪ್ರಾಸಂಗಿಕವಾಗಿ ನಮೂದಿಸಿ, ಮುಂದೆ ಅದನ್ನು ತನ್ನ ಪೊಯಟಿಕ್ಸ್‌ನಲ್ಲಿ ಬಿಡಿಸಿ ಬಿಡಿಸಿ ತಿಳಿಯಪಡಿಸುವುದಾಗಿ ಭರವಸೆ ಕೊಟ್ಟ. ನಮಗೆ ಉಪಲಬ್ಧವಾಗಿರುವ ಪೊಯಟಿಕ್ಸ್‌ನ ಒಂದನೆಯ ಭಾಗದಲ್ಲಾದರೂ ಗಂಭೀರ ನಾಟಕದ ಕಾರ್ಯವನ್ನು ಹೇಳುವ ಸಂದರ್ಭದಲ್ಲಿ ಭಯ ಮರುಕಗಳ ಮೂಲಕ ಆ ಭಾವಗಳ ವಿರೇಚನವನ್ನು ಅದು ಎಸಗುತ್ತದೆ ಎಂಬ ಒಂದೇ ಒಂದು ಸಂದಿಗ್ಧ ವಾಕ್ಯವಿದೆ. ಮತ್ತಾವ ಕಡೆಯಲ್ಲೂ ಕತಾರ್ಸಿಸ್ ಪದದ ಯಾವ ವಿವರಣೆಯೂ ಸಿಕ್ಕುವುದಿಲ್ಲ. ಅವನ ನಿಜವಾದ ಅಭಿಪ್ರಾಯ ಏನಾಗಿತ್ತೆಂಬುದನ್ನು ನಿರ್ದಿಷ್ಟವಾಗಿ ತಿಳಿಯುವಂತಿಲ್ಲ. ಪಾಶ್ಚಾತ್ಯ ಪಂಡಿತರು ಅದಕ್ಕೆ ಅರವತ್ತು ವಿಧದ ಅರ್ಥಗಳನ್ನು ಊಹಿಸಿದ್ದಾರಂತೆ; ಹೀಗಿದ್ದರೂ ಅರಿಸ್ಟಾಟಲನ ಇಂಗಿತ ಏನಾಗಿದ್ದಿರಬಹುದೆಂದು ಹೆಚ್ಚು ಕಡಿಮೆ ಮನವೊಪ್ಪುವಂತೆ ಗೊತ್ತುಹಿಡಿಯಲು ಅವಕಾಶ ಇಲ್ಲದಿಲ್ಲ.
೧೪ ನೇ ಸಾಲು:
ಹರ್ಷನಾಟಕವೂ ನಗುವಿನ ಮೂಲಕ ಇದೇ ರೀತಿ ಭಾವಶುದ್ಧಿಯನ್ನು ದೊರಕಿಸುತ್ತದೆ ಯೆಂದು ಪ್ರಾಯಶಃ ಅರಿಸ್ಟಾಟಲನ ಅಭಿಮತವಾಗಿತ್ತು. ಆದರೆ ಹರ್ಷನಾಟಕವನ್ನು ಕುರಿತ ಅವನ ಲೇಖನ ಕಣ್ಮರೆಯಾಗಿದೆಯಾಗಿ ಖಚಿತವಾಗಿ ಏನನ್ನೂ ಹೇಳುವಂತಿಲ್ಲ. ಕತಾರ್ಸಿಸ್ ತತ್ತ್ವ ಅರಿಸ್ಟಾಟಲನ ಬಗೆಗೇ ರುದ್ರನಾಟಕದ ಬಗೆಗೇ ಮಿತಿಗೊಂಡಿಲ್ಲ. ಪಾಶ್ಚಾತ್ಯ ಕಲಾಮೀಮಾಂಸೆಯಲ್ಲಿ ಅದಕ್ಕೆ ಹೆಚ್ಚಿನ ವ್ಯಾಪ್ತಿ ಲಭಿಸಿದೆ. ಲಲಿತ ಕಲೆಯ ಸ್ವರೂಪದ ಮೇಲೆ ಕತಾರ್ಸಿಸ್ ಬೆಳಕು ಚೆಲ್ಲುತ್ತದೆಯೇ ಇದೊಂದು ಗಹನ ಪ್ರಶ್ನೆ. ಇಲ್ಲವೆಂದು ಅನೇಕರ ವಾದ. ಕಲೆಗೋಸ್ಕರ ಕಲೆ ಇರುವುದರಿಂದ ಅದಕ್ಕೆ ಪ್ರತ್ಯೇಕ ಉದ್ದೇಶವನ್ನು ಆರೋಪಿಸುವುದು ತಪ್ಪು. ನಾಟಕ ಒಂದು ವಿನೋದ ಅಷ್ಟೇ. ವಿನೋದ ಮುಖ್ಯವಲ್ಲ. ಅದರಿಂದ ಉಂಟಾಗಬಹುದಾದ ಭಾವಶುದ್ಧಿ ಇತ್ಯಾದಿಗಳು ಕೇವಲ ಗೌಣ-ಎಂದವರ ವಾದ.
 
ಅರಿಸ್ಟಾಟಲ್ ಟ್ರ್ಯಾಜಿಡಿಯು ಭಯ ಇತ್ಯಾದಿಗಳನ್ನು ಪ್ರಚೋದಿಸಿ ಅವುಗಳ ಕೆತಾರ್ಸಿಸ್ಅನ್ನು ಸಾಧಿಸುತ್ತದೆ ಎಂದ. ಟ್ರ್ಯಾಜೆಡಿಯ ಕ್ರಿಯೆಯನ್ನು ವೀಕ್ಷಿಸಿ ಪ್ರೇಕ್ಷಕರು ಖಿನ್ನವಾಗುವುದಿಲ್ಲ, ಉದ್ವೇಗಗೊಳ್ಳುವುದಿಲ್ಲ, ಒಂದು ರೀತಿಯ ಬಿಡುಗಡೆಯನ್ನು ಅನುಭವಿಸುತ್ತಾರೆ ಎಂದು ಪ್ರತಿಪಾದಿಸಿದ. ಅನಾರೋಗ್ಯಕರವಾಗಬಹುದಾದ ಭಾವಗಳು ನಾಟಕದ ನಾಯಕನ ಬಗೆಗೆ ಸಹಾನುಭೂತಿಯಿಂದ ಬಹಿರ್ಮುಖಿಯಾಗುತ್ತವೆ, ಹೀಗೆ ಮಾನಸಿಕ ಸಾಮರಸ್ಯವಾಗುತ್ತದೆ ಎಂದು ಅರಿಸ್ಟಾಟಲನ ವಿವರಣೆ ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ಇದರಿಂದ ಬದುಕಿನ ನೋವಿನ ಮೇಲೆ ಪ್ರೇಕ್ಷಕನ ಮನಸ್ಸು ಪ್ರಭುತ್ವವನ್ನು ಸಾಧಿಸುತ್ತದೆ, ಟ್ರ್ಯಾಜಿಡಿಯು ಮನುಷ್ಯನ[[ಮನುಷ್ಯ]]ನ ನೈತಿಕ ಸ್ವಭಾವವನ್ನು ದುರ್ಬಲಗೊಳಿಸುವುದಿಲ್ಲ, ಇನ್ನೂ ಬಲಗೊಳಿಸುತ್ತದೆ ಎಂದು ವಿಮರ್ಶಕರು ವಿವರಿಸಿದ್ದಾರೆ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಕತಾರ್ಸಿಸ್" ಇಂದ ಪಡೆಯಲ್ಪಟ್ಟಿದೆ