ಉಪಯುಕ್ತತಾವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: ಉಪಯುಕ್ತತಾವಾದ: ಯಾವ ಕಾರ್ಯದಿಂದ ಗರಿಷ್ಠ ಸಂಖ್ಯೆಯ ಜನಕ್ಕೆ ಗರಿಷ್ಠ ಕ್ಷೇಮ... |
ಕೊಂಡಿ ಸೇರ್ಪಡೆ |
||
೧ ನೇ ಸಾಲು:
ಉಪಯುಕ್ತತಾವಾದ: ಯಾವ ಕಾರ್ಯದಿಂದ ಗರಿಷ್ಠ ಸಂಖ್ಯೆಯ ಜನಕ್ಕೆ ಗರಿಷ್ಠ ಕ್ಷೇಮ ಲಭಿಸುವುದೋ ಅಂಥ ಕಾರ್ಯವೇ ಸೂಕ್ತ ಕಾರ್ಯ ಎಂಬ ನೀತಿಸೂತ್ರ (ಯುಟಿಲಿಟೇರಿಯನಿಸಂ). ಪ್ರಯೋಜಕತೆಯೇ ಧರ್ಮಕ್ಕೆ ನಿರ್ಣಾಯಕ-ಎಂಬ ಈ ವಾದ ಪಾಶ್ಚಾತ್ಯ ರಾಜಕೀಯ ನೈತಿಕ
ಉಪಯುಕ್ತತಾವಾದವನ್ನು ಮೊಟ್ಟಮೊದಲಿಗೆ ಮಂಡಿಸಿದ ರಿಚರ್ಡ್ ಕಂಬರ್ಲ್ಯಾಂಡ್ (1670). ಪರಮಸುಖ ಸಾಧನೆಯೇ ಮೂಲಭೂತ ನೀತಿಸೂತ್ರವೆಂದು ಆತ ಪ್ರತಿಪಾದಿಸಿದ. ಈ ಸೂತ್ರ ದೈವದತ್ತ: ಇದು ದೇವರ ಮೂಲ ನಿಯವi.
೯ ನೇ ಸಾಲು:
ಒಳಿತು-ಕೆಡಕುಗಳ ಭಾವನಾತ್ಮಕ ವಿವೇಚನೆ ನಡೆಸಿದ್ದ ಬೆಂಥಾಮ್, ಮಿಲ್ಗಳ ವಾದವನ್ನು ಸಂಪೂರ್ಣ ತಳ್ಳಿ ಹಾಕಿ ಅದಕ್ಕೆ ಬೇರೆ ರೂಪು ಕೊಟ್ಟವನು ಹೆನ್ರಿ ಸಿಜ್ವಿಕ್ (1874), ಗರಿಷ್ಠ ಕ್ಷೇಮಸೂತ್ರ ರಚಯಕನೀತನೇ. ಇದೊಂದೇ ಈತನ ದೃಷ್ಟಿಯಲ್ಲಿ ಮೂಲಭೂತ ನೀತಿಸೂತ್ರ .ಸುಖಪ್ರಾಪ್ತಿಯೊಂದೇ ಸಾಧನೀಯವೆಂಬ ಸೂತ್ರವನ್ನು ಜಿ.ಇ. ಮೂರನೂ (1903) ತಳ್ಳಿ ಹಾಕಿದ. ಜ್ಞಾನ, ರಸಾಭಿಜ್ಞತೆ, ಪ್ರೀತಿ, ಸ್ನೇಹ-ಇವೆಲ್ಲವೂ ಪರಮ ಪುರುಷಾರ್ಥಗಳೇ ಎಂದು ಈತ ಬರೆದ. ಗರಿಷ್ಠ ಸಂಖ್ಯೆಯ ಗರಿಷ್ಠ ಕ್ಷೇಮ-ಎಂಬ ಸೂತ್ರವನ್ನೂ ಈತ ಮುಂದೆ (1912) ಸಮರ್ಥಿಸಿದ. ಆದ್ದರಿಂದ ಈತನ ಉಪಯುಕ್ತತಾವಾದ ವನ್ನು ಆದರ್ಶ ಉಪಯುಕ್ತತಾವಾದವೆಂದು ಕರೆಯಲಾಗಿದೆ. ಸೌಖ್ಯ ಪುರುಷಾರ್ಥೀ ಉಪಯುಕ್ತತಾವಾದಕ್ಕಿಂತ ಇದು ಭಿನ್ನ, ಒಂದು ಕೆಲಸ ಒಳ್ಳೆಯದೇ, ಕೆಟ್ಟದ್ದೇ ಎಂಬುದನ್ನು ಪರಿಗಣಿಸಬೇಕು-ಎಂದು ಈತ ವಾದಿಸಿದ್ದಾನೆ. ಆದ್ದರಿಂದ ಈತನ ದೃಷ್ಟಿಯಲ್ಲಿ ಉದ್ದೇಶಗಳು ಕೇವಲ ಗುರಿಸಾಧಕಗಳಲ್ಲ. ಹೀಗೆ ಉಪಯುಕ್ತತಾವಾದದ ಹಲವಾರು ಲೇಖಕರು ಎರಡು ವಿರುದ್ಧ ನಿಲವುಗಳ ನಡುವೆ ಸಾಮರಸ್ಯ ತರಲು ಯತ್ನಿಸಿರುವುದು ಕಂಡುಬರುತ್ತದೆ. ಸ್ವಂತ ಸುಖವೇ ಅನ್ವೇಷಣಾರ್ಹವೆಂಬುದು ಒಂದು ನಿಲವು. ಮಾನವಹಿತವೇ ಅಂತಿಮ ಲಕ್ಷ್ಯವೆನ್ನುವುದಾದರೆ ಸ್ವಂತಸುಖವೇ ಏಕೈಕ ಲಕ್ಷ್ಯವೆಂಬುದು ಸರಿಯಲ್ಲ-ಎಂಬುದು ಇನ್ನೊಂದು ನಿಲವು. ಈ ವಿರುದ್ಧ ನಿಲವುಗಳ ಸಾಮರಸ್ಯ ಯತ್ನದಿಂದಾಗಿಯೇ ಈ ವಾದ ಅನೇಕರ ಆಸಕ್ತಿ ಕೆರಳಿಸಿದೆ.
ಒಟ್ಟಿನಲ್ಲಿ ಹೆಚ್ಚು ಜನರಿಗೆ ಹೆಚ್ಚು ಸುಖವನ್ನೊದಗಿಸುವುದೇ ಉಪಯುಕ್ತತಾವಾದದ ಒರೆಗಲ್ಲು.
ಈ ರೀತಿಯಾಗಿ ಉಪಯುಕ್ತತಾವಾದಿಗಳು ವ್ಯಕ್ತಿಯ ಸುಖ ಸಂತೋಷ ಸ್ವಾತಂತ್ರ್ಯಗಳಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟರು; ಅನ್ಯಾಯ ಅನೀತಿ ಪ್ರಜಾಪೀಡೆಗಳಲ್ಲಿ ಪರ್ಯವಸಾನವಾಗುವ ಕ್ರೂರ ಶಾಸನಗಳಿಗೆ ಅವರು ಯಾವಾಗಲೂ ವಿರುದ್ಧ. ಯಾವ ಕಾಯಿದೆಯನ್ನೇ ಆಗಲಿ, ಯಾವ ರಾಜಕೀಯ ಸಂಸ್ಥೆಯನ್ನೇ ಆಗಲಿ ಅವು ಇರುವ ಹಾಗೆಯೇ ಒಪ್ಪಲು ಅವರು ತಯಾರಿಲ್ಲ. ಆದರೆ ಸಮಾಜದ ಕಲ್ಯಾಣಕ್ಕಾಗಿ ಅವುಗಳನ್ನು ಬದಲಾಯಿಸಲು ಅವರು ಬದ್ಧಕಂಕಣರು. ಯಾವ ರಾಜಕೀಯ ಸಂಸ್ಥೆಯನ್ನಾದರೂ ಅದು ಎಷ್ಟೇ ಶತಮಾನಗಳಿಂ ದಿರಲಿ, ಅದರ ಯೋಗ್ಯತೆಯನ್ನು ಅದರ ಉಪಯುಕ್ತತೆಯಿಂದಲ್ಲದೆ ಮತ್ತಾವುದರಿಂದಲೂ ನಿರ್ಧರಿಸಲಾಗದು, ಜನಕ್ಕೆ ಉಪಯೋಗವಿಲ್ಲದ ಸಂಸ್ಥೆ ಅಥವಾ ವ್ಯವಸ್ಥೆಯನ್ನು ಅದು ಎಷ್ಟೇ ಶತಮಾನಗಳಿಂದಿದ್ದರೂ ಬದಲಾಯಿಸಬೇಕು. ಈ ರೀತಿ ದೇಶದ ಮತ್ತು ಸರ್ಕಾರದ ಎಲ್ಲ ಕೆಲಸಕಾರ್ಯಗಳನ್ನೂ ಈವಾದ ಉಪಯುಕ್ತತೆಯ ದೃಷ್ಟಿಯಿಂದಲೇ ನೋಡುತ್ತದೆ. ಒಟ್ಟಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧಿಸಿ ಜನಜೀವನವನ್ನು ಉತ್ತಮಪಡಿಸು ವುದೇ ಉಪಯುಕ್ತತಾವಾದದ ಪರಮಗುರಿ.
|