ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೬ ನೇ ಸಾಲು:
:ಮಧ್ಯಾಹ್ನ ಚೈತ್ಯಾಲಯಕ್ಕೆ ಹೊದಿಸಿದ ಮುಖವಸ್ತ್ರ ಉದ್ಘಾಟನೆ ನಡೆದ ಬಳಿಕ ನಾಂದಿಮಂಗಲ ಪೂಜೆ, ವಾಸ್ತು­ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ಗ್ರಾಮ ಬಲಿವಿಧಾನ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣ ಮೊದಲಾವು ಕ್ರಮವಾಗಿ ನಡೆದವು. ಬೆಟ್ಟದ ಎಡಭಾಗದಲ್ಲಿರುವ ಯಜ್ಞಶಾಲೆಯಲ್ಲಿ ಸ್ಥಾಪಿಸಲಾದ ಶ್ರೀಪೀಠದಲ್ಲಿರುವ ದೇವರ ಮೂರ್ತಿಗೆ, ಯಕ್ಷ ಪೀಠದಲ್ಲಿರುವ ಸರ್ವಾಹ್ಣ ಯಕ್ಷಮೂರ್ತಿಗೆ, ನಾಂದಿಪೀಠದಲ್ಲಿ ಸ್ಥಾಪಿಸಲಾದ ೯ ಕಲಶಗಳಿಗೆ, ಪಾಂಡುಕ ಶಿಲೆಯಲ್ಲಿರುವ ಜಿನಬಿಂಬಕ್ಕೆ ಅಭಿಷೇಕ ನಡೆದವು.
 
:ಅಂಕುರಾರ್ಪಣ ವಿಧಿಯಂತೆ ಕಡಲೆ, ಹೆಸರು, ಹುರುಳಿ, ತೊಗರಿ, ಗೋಧಿ, ಭತ್ತ ಹಾಗೂ ಅವರೆ ಮುಂತಾದ ೯ಬಗೆಯ ಧಾನ್ಯಗಳನ್ನು ಮೊಳಕೆಗೆ ಹಾಕಲಾಯಿತು. ತೀರ್ಥಂಕರ ಕುಂಡ, ಮುನಿ ಕುಂಡ, ಗಣಧರ ಕುಂಡ ಹಾಗೂ ಪಾಂಡುಕ ಶಿಲೆಗಳಲ್ಲಿ ಪೂಜಾವಿಧಿ ನಡೆದವು. ಸಮಸ್ತ ಭಕ್ತಜನರ ಸಂಭ್ರಮದ ಭಾಗವಹಿಸುವಿಕೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಪ್ರತಿಷ್ಠಾ ಪುರೋಹಿತ ಹಿರಿಯಂಗಡಿಯ ನಾಗಕುಮಾರ ಇಂದ್ರ ಅವರ ನೇತೃತ್ವದಲ್ಲಿ ಆರಂಭಗೊಂಡವು. ಪ್ರಧಾನ ಪುರೋಹಿತರ ಜೊತೆಗೆ ಬೆಟ್ಟದ ಪುರೋಹಿತ ನಾಗರಾಜ ಇಂದ್ರ ಹಾಗೂ ಇತರ ೨೧ ಮಂದಿ ಇಂದ್ರರು ಪೂಜಾ ವಿಧಾನಗಳಲ್ಲಿ ಭಾಗವಹಿಸಿದರು.<sup>[೧]</sup>
 
==ಸಂಸ್ಕೃತಿ==
"https://kn.wikipedia.org/wiki/ಕಾರ್ಕಳ" ಇಂದ ಪಡೆಯಲ್ಪಟ್ಟಿದೆ