ಅಚ್ಯುತರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
ಚುNo edit summary
 
೧ ನೇ ಸಾಲು:
'''ಅಚ್ಯುತರಾಯ''' (೧೫೩೦-೧೫೪೨) ಸುಪ್ರಸಿದ್ಧ [[ಕೃಷ್ಣದೇವರಾಯ]]ನ ಮರಣಾನಂತರ [[ವಿಜಯನಗರ]] ಸಾಮ್ರಾಜ್ಯವನ್ನಾಳಿದ ದೊರೆ. ಕೃಷ್ಣದೇವರಾಯನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮಧುರೆಯ ಮಂಡಲಾಧಿಪತಿ ದಂಗೆಯೆದ್ದು ಸ್ವತಂತ್ರನಾಗಲು ಯತ್ನಿಸಿದ್ದ. ಅಚ್ಯುತರಾಯನು ಸಿಂಹಾಸನಕ್ಕೆ ಬಂದಕೂಡಲೆ ಅವನನ್ನು ಅಡಗಿಸಿ, ಅವನಿಗೆ ಸಹಾಯ ನೀಡಿದ್ದ [[ತಿರುವಾಂಕೂರು]] ದೊರೆಯನ್ನು ದಂಡಿಸಿದ. ಅನಂತರ ವಿಷಯಲೋಲುಪನಾಗಿ ಆಡಳಿತಕ್ಕೆ ಗಮನ ಕೊಡಲಿಲ್ಲ. ರಾಜ್ಯಭಾರ ಸಂಬಂಧಿಗಳಾಗಿದ್ದ ತಿರುಮಲ ಸಹೋದರರ ಕೈಸೇರಿತು. ಅವರ ಉತ್ಕರ್ಷ, ದರ್ಪಗಳನ್ನು ಸೈರಿಸದೆ [[ಅರವೀಡು]] ಮನೆತನಕ್ಕೆ ಸೇರಿದ ಮಂಡಾಲಾಧಿಪತಿಗಳು ವಿರೋಧಪಕ್ಷವನ್ನು ಕಟ್ಟಿದರು. ಅತ್ತ [[ವಿಜಯಪುರ|ಬಿಜಾಪುರ]]ದ ಸುಲ್ತಾನ ದಂಡೆತ್ತಿಬಂದು ನಾಗಲಾಪುರವನ್ನು (ಈಗಿನ [[ಹೊಸಪೇಟೆ]]) ವಶಪಡಿಸಿಕೊಂಡು ವಿಜಯನಗರಕ್ಕೆ ಮುತ್ತಿಗೆ ಹಾಕಿದ ಅವನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಕೃಷ್ಣದೇವರಾಯ ಅಷ್ಟೊಂದು ಸಾಹಸ ದಕ್ಷತೆಗಳಿಂದ ಕಟ್ಟಿದ್ದ ಸಾಮ್ರಾಜ್ಯದ ಬಿಗಿ ಸಡಿಲವಾಯಿತು. ಮುಂದೆ ಬಂದ [[ರಕ್ಕಸತಂಗಡಿ]] ಅನಾಹುತಕ್ಕೆ ಮಂಡಲಾಧಿಪತಿಗಳ ಈ ವೈಮನಸ್ಯ ನಾಂದಿಯಾಯಿತು.
[[ಚಿತ್ರ:Shiva_temple_(1539_AD)_at_Timmalapura.jpg|right|thumb|ಅಚ್ಯುತರಾಯನ ಆಳ್ವಿಕೆಯಲ್ಲಿ ಕ್ರಿ.ಶ. ೧೫೩೯ ರಲ್ಲಿ [[ತಿಮ್ಮಲಾಪುರ]]]ದಲ್ಲಿ ನಿರ್ಮಾಣವಾದ ಶಿವದೇವಾಲಯ ]]
[[ಚಿತ್ರ:Kannada_inscription_of_1539_AD_at_Shiva_temple_in_Timmalapura.jpg|right|thumb|[[ತಿಮ್ಮಲಾಪುರ]]ದ ಶಿವಮಂದಿರದಲ್ಲಿರುವ ಕ್ರಿ.ಶ ೧೫೩೯ ರ ಅಚ್ಯುತರಾಯನ ಕನ್ನಡ ಶಾಸನ ]]
[[ಚಿತ್ರ:Kannada_inscription_of_Achuta_Raya_(1536_AD)_at_Vitthala_temple_in_Hampi.JPG|left|thumb|ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ ]]
"https://kn.wikipedia.org/wiki/ಅಚ್ಯುತರಾಯ" ಇಂದ ಪಡೆಯಲ್ಪಟ್ಟಿದೆ