ಭಾರತವು 1947ರಲ್ಲಿ ಸ್ವತಂತ್ರ ರಾಷ್ಟ್ರವಾದ ನಂತರ ಅದರ ನೆರೆಹೊರೆಯ ಸಾರ್ವಭೌಮ ರಾಷ್ಟ್ರಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಚೀನಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನಗಳೊಂದಿಗೆ ಅಂತರರಾಷ್ಟ್ರೀಯ ಭೂ ಗಡಿಗಳನ್ನು ಹೊಂದಿದೆ. ಕಾಶ್ಮೀರ ವಿವಾದದ ಪರಿಣಾಮ ಪಾಕಿಸ್ತಾನದೊಂದಿಗೆ ಗಡಿ ನಿಯಂತ್ರಣ ನಿಯಂತ್ರಣ (ಎಲ್ಒಸಿ) ರೇಖೆಯನ್ನು ಹೊಂದಿದೆ. ಈ ಎಲ್ಲಾ ಗಡಿ ಮತ್ತು ನಿಯಂತ್ರಣ (ಎಲ್ಒಸಿ) ರೇಖೆಯ ರಕ್ಷಣೆಯ ಹೊಣೆಯನ್ನೂ ಹೊಂದಿದೆ.
ಅದಲ್ಲದೆ ಭಾರತವು ಏಳು ದೇಶಗಳಾದ ಕಡಲ ಗಡಿ- ಬಾಂಗ್ಲಾದೇಶ; ಇಂಡೋನೇಷ್ಯಾ ಮ್ಯಾನ್ಮಾರ್; ಪಾಕಿಸ್ತಾನ; ಥೈಲ್ಯಾಂಡ್; ಶ್ರೀಲಂಕಾ; ಮಾಲ್ಡೀವ್ಸ್,
ಇವುಗಳೊಂದಿಗೆ ಕಡಲ ಗಡಿ ಪ್ರದೇಆಶವನ್ನೂ ಹೊಂದಿದೆ.[೧]
ಭಾರತದ ಕಡಲ ಗಡಿಗಳು ಸಮುದ್ರ ಕಾನೂನಿನ ಕುರಿತ ವಿಶ್ವಸಂಸ್ಥೆಯ ಸಮಾವೇಶದಿಂದ ಗುರುತಿಸಲ್ಪಟ್ಟ ಕಡಲ ಗಡಿಯಾಗಿದ್ದು, ಪ್ರಾದೇಶಿಕ ನೀರು, ಸಮೀಪ ವಲಯಗಳು ಮತ್ತು ವಿಶೇಷ ಆರ್ಥಿಕ ವಲಯಗಳ ಗಡಿಗಳನ್ನು ಒಳಗೊಂಡಿರುತ್ತದೆ. 12 ನಾಟಿಕಲ್-ಮೈಲಿ (22 ಕಿಮೀ; 14 ಮೈಲಿ) ಪ್ರಾದೇಶಿಕ ಕಡಲ ವಲಯ ಮತ್ತು 200-ನಾಟಿಕಲ್-ಮೈಲಿ (370 ಕಿಮೀ; 230 ಮೈಲಿ) ವಿಶೇಷ ಆರ್ಥಿಕ ವಲಯವನ್ನು ಹೊಂದಿರುವ ಭಾರತವು 7,000 ಕಿಲೋಮೀಟರ್ (4,300 ಮೈಲಿ) ಗಿಂತ ಹೆಚ್ಚು ಕಡಲ ಗಡಿಯನ್ನು ಹೊಂದಿದ್ದು, ಏಳು ರಾಷ್ಟ್ರಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ.[೩]
ಭಾರತವು ಗಡಿಗಳಲ್ಲಿ ಹಲವಾರು ವಿವಾದಿತ ಪ್ರದೇಶಗಳನ್ನು ಹೊಂದಿದೆ. ಪ್ರಾದೇಶಿಕ ವಿವಾದವೆಂದರೆ ಎರಡು ಅಥವಾ ಹೆಚ್ಚಿನ ರಾಜ್ಯಗಳ ನಡುವೆ ಇರುವ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳುವುದು ಅಥವಾ ನಿಯಂತ್ರಿಸುವುದು. ಅಥವಾ ಹೊಸ ರಾಜ್ಯವೊಂದು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅಥವಾ ನಿಯಂತ್ರಿಸುವುದು ಮತ್ತು ಹಿಂದಿನ ರಾಜ್ಯಕ್ಕೆ ಸೇರಿದ ಭೂಮಿಯನ್ನು ವಶಪಡಿಸಿಕೊಂಡ ನಂತರ ಅಧಿಕಾರವನ್ನು ವಿಸ್ತರಿಸುವುದು.
ಭಾರತವು ತನ್ನ ನೆರೆಹೊರೆಯ ಮೂರು ದೇಶಗಳಾದ ಚೀನಾ, ಪಾಕಿಸ್ತಾನ ಮತ್ತು ನೇಪಾಳಗಳೊಂದಿಗೆ ಪ್ರಾದೇಶಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತವು ಭೂತಾನ್ನೊಂದಿಗಿನ ತನ್ನ ಗುರುತಿಸದ ಗಡಿಯನ್ನು ಪರಿಹರಿಸಿಕೊಂಡಿದೆ, ಇದರಲ್ಲಿ ಇನ್ನೂ ಅನೇಕ ಬಗೆಹರಿಯದ ಸಮಸ್ಯೆಗಳು ಸೇರಿವೆ ಭಾರತ ಬಾಂಗ್ಲಾದೇಶ ಮತ್ತು ಶ್ರೀಲಂಕಾದೊಂದಿಗಿನ ತನ್ನ ಗಡಿ ವಿವಾದಗಳನ್ನು ಬಗೆಹರಿಸಿಕೊಂಡಿದೆ. ಚೀನಾ ಗಣರಾಜ್ಯ (ತೈವಾನ್- ದ್ವೀಪ ರಾಜ್ಯ) ಜೊತೆ ಒಪ್ಪಂದ ಬಾಕಿ ಉಳಿದಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಕಮ್ಯುನಿಸ್ಟ್ ಚೈನಾ- ಪಿಆರ್ಸಿ) ಅಥವಾ ಅದರ ಗಡಿ ಒಪ್ಪಂದಗಳು ಅಥವಾ ಇತರ ಯಾವುದೇ ದೇಶಗಳೊಂದಿಗೆ ಒಪ್ಪಂದಗಳು[೫][೬]
ಚೀನಾ ಜತೆಗಿನ ಭಾರತದ ಗಡಿ ವಿವಾದ 1914ರಷ್ಟು ಹಳೆಯದು. ಗಡಿ ತಕರಾರಿನ ಕಾರಣಕ್ಕಾಗಿಯೇ 1962ರಲ್ಲಿ ಯುದ್ಧ ನಡೆದಿತ್ತು. ಬಳಿಕ, ಮೂರು ಒಪ್ಪಂದಗಳು ಆಗಿದ್ದರೂ ಗಡಿ ಸಮಸ್ಯೆ ಬಗೆಹರಿದಿಲ್ಲ. ಭಾರತದ ಅರುಣಾಚಲ ಪ್ರದೇಶವು ತನ್ನದೆಂದು ಈಗಲೂ ಚೀನಾ ಪ್ರತಿಪಾದಿಸುತ್ತಲೇ ಇದೆ. ಚೀನಾ ಜತೆ ಭಾರತವು ಹಂಚಿಕೊಂಡಿರುವ ಗಡಿ ಅಂತಿಮವಾಗಿಲ್ಲ. ಈ ವಿವಾದ ಇನ್ನೂ ಜೀವಂತವಾಗಿದೆ. 'ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು’ ಎಂದು ಎರಡೂ ದೇಶಗಳು ಒಪ್ಪಿವೆ
ಲಡಾಖ್ನ ಒಂದು ಭಾಗವನ್ನು ಚೀನಾ ಅತಿಕ್ರಮಿಸಿಕೊಂಡಿದೆ. ನಿರ್ಜನವಾಗಿದ್ದ ಈ ಪ್ರದೇಶದಲ್ಲಿ ಭಾರತದ ಸೇನೆಯ ನಿಯೋಜನೆ ಆಗಿರಲಿಲ್ಲ. ಹೀಗಾಗಿ ಚೀನಾ ಅತಿಕ್ರಮಣ ಮಾಡಿಕೊಂಡು, ರಸ್ತೆ ನಿರ್ಮಿಸಿದ್ದು ಭಾರತೀಯ ಸೇನೆಯ ಅರಿವಿಗೆ ಬರುವಷ್ಟರಲ್ಲಿ ಅನೇಕ ವರ್ಷಗಳೇ ಕಳೆದಿತ್ತು. ಇದು ಬೆಳಕಿಗೆ ಬಂದ ನಂತರ , ಬಾರತವು ಅಲ್ಲಿ ಥಾಣೆ ಸ್ಥಾಪಿಸಿ, ಸೇ ಪ್ಯಾಂಗ್ಯಾಂಗ್ ಸರೋವರದ ದಕ್ಷಿಣ ದಂಡೆಯವರೆಗಿನ ಪ್ರದೇಶವು ಭಾರತದ ಸೇನೆಯ ಹಿಡಿತದಲ್ಲಿದೆ. ಸರೋವರದ ಉತ್ತರದ ದಂಡೆಯ ಆಚೆಗಿನ ಪ್ರದೇಶವು ಚೀನಾ ಸೇನೆಯ ಹಿಡಿತದಲ್ಲಿದೆ. ಸರೋವರದ ದಂಡೆಯವರೆಗೆ ಚೀನಾ ಸುಸಜ್ಜಿತ ರಸ್ತೆ ನಿರ್ಮಿಸಿಕೊಂಡಿದೆ. ಭಾರತವು ಇಲ್ಲಿ ಗಡಿಠಾಣೆ ನಿರ್ಮಿಸಿದೆ.
2017ರ ಜೂನ್ನಲ್ಲಿ ಚೀನಾ ಸೈನಿಕರು ಭೂತಾನ್ನ ದೋಕಲಾ ಪ್ರದೇಶವನ್ನು ಅತಿಕ್ರಮಿಸಿ ರಸ್ತೆ ಮತ್ತು ಗಡಿ ಠಾಣೆಯನ್ನು ನಿರ್ಮಿಸಲು ಮುಂದಾದರು. ಬಾರತದ ಸೈನಿಕರು ಈ ಪ್ರದೇಶವನ್ನು ಪ್ರವೇಶಿಸಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದರು.
ಈ ಎಲ್ಲಾ ಗಡಿ ಪ್ರದೇಶದಲ್ಲಿ ಸೇನೆಯ ಓಡಾಟಕ್ಕೆ ಅನುಕೂಲವಾಗುವಂತೆ ಸರ್ವಋತು ರಸ್ತೆ ನಿರ್ಮಿಸಲು ಕೇಂದ್ರ ಸರ್ಕಾರವು 1997ರಲ್ಲಿ ಚೀನಾ ಅಧ್ಯಯನ ರಸ್ತೆಗಳು (ಚೀನಾ ಸ್ಟಡಿ ಗ್ರೂಪ್ ರೋಡ್ಸ್–ಸಿಎಸ್ಜಿ ರೋಡ್ಸ್) ಯೋಜನೆ ನಿರ್ಮಿಸಿದೆ. ಇದಕ್ಕಾಗಿ ಪ್ರತಿ ವರ್ಷ ಬಜೆಟ್ನಲ್ಲಿ ಅನುದಾನ ಮೀಸಲಿರಿಸಲಾಗುತ್ತದೆ. ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಈವರೆಗೆ ಪೂರ್ಣಗೊಂಡಿಲ್ಲ. ಆದರೆ ಈಗ ಅದರ ಕಾಮಗಾರಿಗೆ ಸರ್ಕಾರ ಕಡಿಮೆ ಹಣ ನೀಡಿದೆ.
ಕಾರಾಕೋರಂ ಪ್ರದೇಶವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗ. ಚೀನಾ ಮತ್ತು ಪಾಕಿಸ್ತಾನದ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 1963ರಲ್ಲಿ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡವು. ಈ ಒಪ್ಪಂದದ ಭಾಗವಾಗಿ ಕಾರಾಕೋರಂ ಪ್ರದೇಶವನ್ನು ಪಾಕಿಸ್ತಾನವು ಚೀನಾಕ್ಕೆ ಬಿಟ್ಟುಕೊಟ್ಟಿತು. ಈ ಒಪ್ಪಂದದ ನಂತರ ಪಾಕಿಸ್ತಾನ–ಚೀನಾ ಸಂಬಂಧ ಗಟ್ಟಿಗೊಂಡಿತು.
ಜಮ್ಮು–ಕಾಶ್ಮೀರ ವಿಭಜನೆಯ ಬಳಿಕ ಭಾರತ ಬಿಡುಗಡೆ ಮಾಡಿರುವ ದೇಶದ ಹೊಸ ನಕ್ಷೆಯು ನೇಪಾಳದ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತದ ನಕ್ಷೆಯೊಳಗೆ ಸೇರಿಕೊಂಡಿರುವ ‘ಕಾಲಾಪಾನಿ’ ಮತ್ತು ‘ಲಿಪುಲೇಕ್’ ಪ್ರದೇಶಗಳು ತನಗೆ ಸೇರಿದ್ದು ಎಂಬುದು ನೇಪಾಳದ ವಾದ. ನೇಪಾಳದ ವಾದವನ್ನು ಭಾರತವು ಪುರಸ್ಕರಿಸಿಲ್ಲ. ಬದಲಿಗೆ, ‘ಹೊಸ ನಕ್ಷೆಯು ಭಾರತದ ಸಾರ್ವಭೌಮ ಪ್ರದೇಶವನ್ನು ನಿಖರವಾಗಿ ಗುರುತಿಸಿದೆ’ ಎಂದು ಹೇಳಿದೆ. ಭಾರತ–ನೇಪಾಳ ಗಡಿ ವಿವಾದಕ್ಕೆ ನೀರೆರೆಯುವ ಕೆಲಸವನ್ನು ಚೀನಾ ಮಾಡುತ್ತಿದೆ ಎಂಬ ಆರೋಪವಿದೆ.
ಭಾರತ ಮತ್ತು ಚೀನಾ ನಡುವಣ ಅಂತರರಾಷ್ಟ್ರೀಯ ಗಡಿರೇಖೆಯನ್ನು ‘ಮೆಕ್ಮೊಹನ್ ಲೈನ್’ ಎನ್ನಲಾಗುತ್ತದೆ. 1914ರಲ್ಲಿ ಬ್ರಿಟಿಷ್ ಸರ್ಕಾರ ಮತ್ತು ಟಿಬೆಟ್ ನಡುವಣ ಒಪ್ಪಂದದ ಮೂಲಕ ಈ ಗಡಿರೇಖೆಯನ್ನು ಗುರುತಿಸಲಾಗಿತ್ತು. ಆದರೆ ಈ ಗಡಿರೇಖೆಯನ್ನು ಚೀನಾ ಒಪ್ಪಿಕೊಂಡಿಲ್ಲ. ‘ಟಿಬೆಟ್ ಪ್ರದೇಶವು ಚೀನಾದ ಭಾಗ. ಹೀಗಾಗಿ ಗಡಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಟಿಬೆಟ್ಗೆ ಇಲ್ಲ- ಹೀಗಾಗಿ ಮೆಕ್ಮೊಹನ್ ಲೈನ್ ಅನ್ನು ಗಡಿ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂಬುದು ಚೀನಾದ ಪ್ರತಿಪಾದನೆ. ಈ ಉದ್ದೇಶದಿಂದಲೇ 1962ರಲ್ಲಿ ಚೀನಾ ಯುದ್ಧ ಆರಂಭಿಸಿತು. ಕದನ ವಿರಾಮ ಘೋಷಣೆಯಾದ ನಂತರ ಗಡಿಯನ್ನು ‘ಕದನ ವಿರಾಮ ಗಡಿ’ ಎಂದು ಘೋಷಿಸಲಾಯಿತು. 1993ರ ದ್ವಿಪಕ್ಷೀಯ ಒಪ್ಪಂದದಲ್ಲಿ ಇದನ್ನು ವಾಸ್ತವ ಗಡಿ ರೇಖೆ (ಲೈನ್ ಆಫ್ ಆಕ್ಯುಯಲ್ ಕಂಟ್ರೋಲ್–ಎಲ್ಎಸಿ) ಎಂದು ಘೋಷಿಸಲಾಯಿತು. ಎರಡೂ ದೇಶಗಳು ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಒಪ್ಪಿಕೊಂಡಿವೆ.[೭]
1913–14ರಲ್ಲಿ, ಬ್ರಿಟನ್, ಚೀನಾ ಮತ್ತು ಟಿಬೆಟ್ನ ಪ್ರತಿನಿಧಿಗಳು ಭಾರತದ ಸಿಮ್ಲಾದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡರು ಮತ್ತು ಟಿಬೆಟ್ನ ಸ್ಥಿತಿ ಮತ್ತು ಗಡಿಗಳಿಗೆ ಸಂಬಂಧಿಸಿದ ಒಪ್ಪಂದವನ್ನು ರೂಪಿಸಿದರು. ಪೂರ್ವ ವಲಯಕ್ಕೆ ಟಿಬೆಟ್ ಮತ್ತು ಭಾರತದ ನಡುವಿನ ಉದ್ದೇಶಿತ ಗಡಿಯಾದ ಮೆಕ್ ಮಹೊನ್ ರೇಖೆಯನ್ನು ಬ್ರಿಟಿಷ್ ಸಮಾಲೋಚಕ ಹೆನ್ರಿ ಮೆಕ್ ಮಹೊನ್ ಅವರು ಒಪ್ಪಂದಕ್ಕೆ ಜೋಡಿಸಲಾದ ನಕ್ಷೆಯಲ್ಲಿ ಚಿತ್ರಿಸಿದ್ದಾರೆ. ಮೂವರೂ ಪ್ರತಿನಿಧಿಗಳು ಒಪ್ಪಂದವನ್ನು ಪ್ರಾರಂಭಿಸಿದರು, ಆದರೆ ಬೀಜಿಂಗ್ ಶೀಘ್ರದಲ್ಲೇ ಉದ್ದೇಶಿತ ಸಿನೋ-ಟಿಬೆಟ್ ಗಡಿಯನ್ನು ಆಕ್ಷೇಪಿಸಿತು ಮತ್ತು ಒಪ್ಪಂದವನ್ನು ನಿರಾಕರಿಸಿತು, ಅಂತಿಮ, ಹೆಚ್ಚು ವಿವರವಾದ ನಕ್ಷೆಗೆ ಸಹಿ ಹಾಕಲು ನಿರಾಕರಿಸಿತು.[೮]