ಟೆಂಪ್ಲೇಟು:Infobox Christian leader ಟೆಂಪ್ಲೇಟು:Infobox bishopstyles ಬರ್ನಾಡ್ ಬ್ಲೇಸಿಯಸ್ ಮೊರಾಸ್ (ಜನನ ೧೦ ಆಗಸ್ಟ್ ೧೯೪೧) ಅವರು ಭಾರತದೇಶದ ರೋಮನ್ ಕಥೋಲಿಕ ಚರ್ಚ್ ಇವುಗಳ ಕ್ರೈಸ್ತಮತದ ಮಠಾಧಿಪತಿಆಗಿದ್ದು, ಪ್ರಸ್ತುತ ಮಹಾಧರ್ಮಾಧ್ಯಕ್ಷರು ಬೆಂಗಳೂರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ರಾಜ್ಯದ ಮಂಗಳೂರು ನಗರದ ಕುಪ್ಪೆಪದವು ಎಂಬಲ್ಲಿ ಹುಟ್ಟಿದ ಅವರು ದೀಕ್ಷೆಯನ್ನು ಪಛರೋಹಿತ್ಯವನ್ನು ೬ ಡಿಸೆಂಬರ್ ೧೯೬೭ರಲ್ಲಿ ಪಡೆದರು. ಅವರ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಾಗಿ ಆರೋಗ್ಯ ಸಂಬಂಧಿ ಸೇವೆಗಳಲ್ಲಿ ತೊಡಗಿಕೊಂಡಿದ್ದರು.

೩೦ ನವೆಂಬರ್ ೧೯೯೬ರಲ್ಲಿ ಮೊರಾಸ್ ಅವರು ಬೆಳಗಾಂ ಪ್ರದೇಶಕ್ಕೆಪೋಪ್ ದ್ವಿತೀಯ ಜೋನ್ ಪೌಲ್ ಅವರಿಂದ ಬಿಷಪ್ ಆಗಿ ನೆಮಕಗೊಂಡರು. ಅವರನ್ನು ೨೫ ಫೆಭ್ರುವರಿ ೧೯೯೭ರಲ್ಲಿ ಕಾರ್ಡಿನಲ್ ಸಿಮೊನ್ ಪಿಮೆಂಟ ಅವರು ಪವಿತ್ರೀಕರಿಸಿ ಬಿಷಪರಾದ ಅಲೋಷಿಯಸ್ ಡಿ'ಸೋಜಾ ಮತ್ತು ಇಗ್ನೇಷಿಯಸ್ ಪಿಂಟೊ ಅವರ ಸಹಾಯಕ ಬಿಷಪ್ರಾಗಿ ನಿಯೋಜಿಸಿದರು. ಬಿಷಪ್ ತಮ್ಮ ಗುರಿಯನ್ನು ಮಾತೆ ಮರಿಯಮ್ನನವರ ಮೇಲಿನ ವಿಶ್ವಾಸ ಮತ್ತು ನಂಬಿಕೆ ಮೇರಿಎಂದು ಸಾರಿದರು."

ಮೊರಾಸ್ ಅವರನ್ನುನಂತರ ಮಹಾಧರ್ಮಾಧ್ಯಕ್ಷರು ಬೆಂಗಳೂರು ಆಗಿ ೨೨ ಜುಲೈ ೨೦೦೪ರಲ್ಲಿ ನೇಮಿಸಿದ್ದು, ಅದೇ ವರ್ಷದ ಸೆಪ್ಟೆಂಬರ್ ತಿಂಗಳಿನ ೧೭ನೇ ದಿನಾಂಕದಂದು ಅವರನ್ನು ನಿಯೋಜಿಸಲಾಯಿತು. ನಿಯೋಜನಾ ಕಾರ್ಯದಲ್ಲಿ ಮೂರಕ್ಕಿಂತ ಹೆಚ್ಚು ಕಾರ್ಡಿನಲ್ಗಳು ಭಾಗವಹಿಸಿದ್ದು, ಕಥೋಲಿಕ ಕನ್ನಡಿಗರಿಗೆ ಅವರದೇ ಸಮುದಾಯದ ವ್ಯಕ್ತಿಯನ್ನು ಬಿಷಪ್ ಆಗಿ ನೇಮಿಸುವಂತೆ ಒತ್ತಾಯ ಹೇರಿದ್ದರಿಂದ, ತಮ್ಮದೇ ಸಮಯದಾಯದ ಗಲಭೆಯನ್ನು ಹತ್ತಿಕ್ಕಿಲು ಸಂಪೂರ್ಣ ಭದ್ರತೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, .[೧]

ಹದಿನಾರನೇ ಪೋಪ್ ಬೆನೆಡಿಕ್ಟ್ ಅವರು [[[ಮಹಾನಗರದ ಬಿಷಪ್|ಮಹಾನಗರದ ಮಹಾಧರ್ಮಾದ್ಯಕ್ಷರು]] ಅವರಿಗೆ ನೀಡುವ ಉಣ್ಣೆ ಚರ್ಮದ ಮೇಲಿನ ಮಡಿಕೆಗಳನ್ನು ಇವರಿಗಾಗಿ ೨೯ ಜೂನ್ ೨೦೦೫ರಲ್ಲಿ ಮೀಸಲಿಟ್ಟಿದ್ದರು. ಡಾನ್ ಬ್ರೌನ್ ಕೃತಿಯನ್ನಾಧರಿಸಿ ಹೊಮ್ಮಿದ ದಿ ಡಾ ವಿಂಚಿ ಕೋಡ್ ಚಿತ್ರವನ್ನು ೨೦೦೬ರಲ್ಲಿ "ಅನೈತಿಕ" ಹಾಗೂ "ಕುಟಿಲ" ಎಂದು ಟೀಕಿಸಿದರು.[೨] ಅವರು ಕ್ರೈಸ್ತರಿಗೆ ಚಲನಚಿತ್ರ ಚಲಚಿತ್ರ ಆವೃತ್ತಿಯನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದಲ್ಲದೇ, ಆದರ ಮುಖಾಂತರ [[ ಕೇಂದ್ರ ಚಲನಚಿತ್ರಗಳ [ಪ್ರಮಾಣೀಕರಣ ಮಂಡಳಿ|ಭಾರತೀಯ ಚಲನಚಿತ್ರ ಮಂಡಳಿ]]ಯು ಇದನ್ನು ದೇಶದಿಂದಲೇ ಬಹಿಷ್ರರಿಸುವಂತೆ ಮಾಡಿದರು.

ಮಹಾಧರ್ಮಾಧ್ಯಕ್ಷ್ಯರಾದ ಮೊರಾಸ್ ಅವರು ಧರ್ಮೀಯ ಆರೋಗ್ಯ ಆಯೋಗದ ಕಥೋಲಿಕ ಬಿಷಪರ, ಭಾರತೀಯ ಸಮಾವೇಶದ ಆಧ‍್ಯಕ್ಷರಾಗಿದ್ದು ಅಲ್ಲದೇ ಭಾರತೀಯ ಕಥೋಲಿಕ ಆರೋಗ್ಯ ಸಂಸ್ಥೆಗಳು ಇದರ ಮುಖ್ಯ ಚರ್ಚಾ ಸಲಹೆಗಾರರಾಗಿದ್ದಾರೆ.

ಮೊರಾಸ್ ಅವರು ಭಾರತೀಯ ಮಿಷನರಿ ಗುರು ವಂ.ರಫಾಯೆಲ್ ಕುರಿಯನ್ ಅವರ ಕಥೆಯನ್ನಾಧರಿಸಿದ ಭಾರತೀಯ ಧರ್ಮಗುರು ಎಂಬ ೨೦೧೫ರಲ್ಲಿ ತೆರೆಕಂಡ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿರುತ್ತಾರೆ.

ಮುಂದೆ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. UCAN. Bangalore Archbishop Installed Without Incident Amid Enhanced Security Archived 28 October 2007 ವೇಬ್ಯಾಕ್ ಮೆಷಿನ್ ನಲ್ಲಿ. 20 September 2004
  2. Catholic Online. Catholic bishops, groups warn of ‘Da Vinci Code’ assault on beliefs, see it as teaching moment Archived 29 September 2007 ವೇಬ್ಯಾಕ್ ಮೆಷಿನ್ ನಲ್ಲಿ. 17 May 2006

ಬಾಹ್ಯ ಕೊಂಡಿಗಳುs ಬದಲಾಯಿಸಿ

Catholic Church titles
ಪೂರ್ವಾಧಿಕಾರಿ
Ignatius Paul Pinto
Archbishop of Bangalore
2004–present
Incumbent

[ವರ್ಗ:ಕರ್ನಾಟಕದ ಜನರು]]