ಆಷಾಢ ಏಕಾದಶಿ
ಶಯನಿ ಏಕಾದಶಿ , ಮಹಾ ಏಕಾದಶಿ , ಪ್ರಥಮ ಏಕಾದಶಿ, ಪದ್ಮ ಏಕಾದಶಿ, ದೇವಶಯನಿ ಏಕಾದಶಿ, ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುವ ಈ ದಿನವು ಹಿಂದೂ ತಿಂಗಳು ಆಷಾಢ (ಜೂನ್ - ಜುಲೈ) ಶುಕ್ಲ ಪಕ್ಷದ ಹನ್ನೊಂದನೇ ದಿನ (ಏಕಾದಶಿ) ಆದ್ದರಿಂದ. ಇದನ್ನು ಆಷಾಢ ಏಕಾದಶಿ[೧] ಅಥವಾ ಆಷಾಢಿ ಎಂದೂ ಕರೆಯಲಾಗುತ್ತದೆ. ಇದನ್ನು ತೆಲುಗು ಭಾಷೆಯಲ್ಲಿ ತೊಲಿ ಏಕಾದಶಿ ಎಂದು ಕರೆಯುತ್ತಾರೆ. ಈ ಪವಿತ್ರ ದಿನವು ಹಿಂದೂ ಸ್ಥಿತಿಕರ್ತ ದೇವರು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಇವರ ಪೂಜೆ ಮಾಡಲಾಗುತ್ತದೆ, ಇಡೀ ರಾತ್ರಿಯನ್ನು ಪ್ರಾರ್ಥನೆ, ಭಜನೆಗಳಲ್ಲಿ ಕಳೆಯುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ದ ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಇದು ಯಾವುದಾದರು ಆಹಾರಪದಾರ್ಥವನ್ನು ಬಿಡುವ ಬಗ್ಗೆ ಮತ್ತು ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವ ಬಗ್ಗೆ ಇರುತ್ತದೆ.[೨] ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆಗೆ ಈದಿನ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ.[೩] ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ. ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ. ಈ ಹೊತ್ತಿಗೆ ಮಳೆಗಾಲ ಇರುತ್ತದೆ. ಹೀಗಾಗಿ, ಶಯನಿ ಏಕಾದಶಿಯು ಚಾತುರ್ಮಾಸದ ಆರಂಭ. ಭಕ್ತರು ವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು ಈ ದಿನ ಆರಂಭಿಸುತ್ತರೆ.[೪] ಈ ದಿನ ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ ಕೆಲವು ಅಹಾರಪದಾರ್ಥಗಳನ್ನು ಸೇವಿಸುವದಿಲ್ಲ.
ಮಹತ್ವ
ಬದಲಾಯಿಸಿಭವಿಷ್ಯೋತ್ತರಪುರಾಣ ಗ್ರಂಥದಲ್ಲಿ ದೇವ ಕೃಷ್ಣ ನು ಈ ದಿನದ ಮಹತ್ವವನ್ನು ಯುಧಿಷ್ಠಿರನಿಗೆ, ಸೃಷ್ಟಿಕರ್ತ-ದೇವರ ಬ್ರಹ್ಮನು ತನ್ನ ಮಗ ನಾರದನಿಗೆ ಹೇಳಿದಂತೆ, ವಿವರಿಸಿದ್ದಾನೆ.
ಪಂಢರಪುರ ಯಾತ್ರೆ
ಬದಲಾಯಿಸಿಈ ದಿನ ಭಕ್ತರ ಯಾತ್ರೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಪಂಢರಪುರದಲ್ಲಿ ಕೊನೆಗೊಳ್ಳುತ್ತದೆ. ಪಂಢರಪುರವು ವಿಷ್ಣುವಿನ ಸ್ಥಳೀಯ ರೂಪವಾದ ವಿಠ್ಠಲನ ಆರಾಧನೆಯ ಕೇಂದ್ರವಾಗಿದ್ದು ಚಂದ್ರಭಾಗಾ ನದಿಯ ದಂಡೆಯಮೇಲಿದೆ. ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ದಿನ ಇಲ್ಲಿಗೆ ಬರುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ 'ಧರ್ಮಗ್ರಂಥ', ಆಷಾಢ ಏಕಾದಶಿ
- ↑ Bhargava, Gopal K; S. C. Bhatt. Land and people of Indian states and union territories. Vol. 8. p. 506.
- ↑ Fasts and Festivals of India (2002) By Manish Verma.
- ↑ Shayana Ekadashi Archived 2009-03-04 ವೇಬ್ಯಾಕ್ ಮೆಷಿನ್ ನಲ್ಲಿ. ISKCON