ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜು. ಇದನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠವು 1980 ರಲ್ಲಿ ಸ್ಥಾಪಿಸಿತು. ಆರಂಭದಲ್ಲಿ ಈ ಕಾಲೇಜು ಮೈಸೂರು ವಿಶ್ವವಿದ್ಯಾಲಯದ ಅಡಿಯಲ್ಲಿತ್ತು. ನ೦ತರ ೧೯೯೧ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಅಡಿಯಲ್ಲಿತ್ತು. ಪ್ರಸ್ತುತ ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಡಾ.ಸಿ ಕೆ ಸುಬ್ಬರಾಯ ಈಗಿನ ಪ್ರಾಂಶುಪಾಲರು.
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ | |
---|---|
ಧ್ಯೇಯ | ಜ್ಞಾನವೇ ಶಕ್ತಿ |
ಸ್ಥಾಪನೆ | 1980 |
ಪ್ರಕಾರ | ಖಾಸಗಿ |
ಸ್ಥಳ | ಚಿಕ್ಕಮಗಳೂರು, ಕರ್ನಾಟಕ, ಭಾರತ 13°20′28.9″N 75°47′48.4″E / 13.341361°N 75.796778°E |
ಆವರಣ | 57 acres (0.2 km2) |
ಅಂತರಜಾಲ ತಾಣ | aitckm.in |


ದ್ಯೇಯ
ಬದಲಾಯಿಸಿತಂತ್ರಜ್ಞಾನದ ಮೂಲಕ ಸಮೃದ್ಧಿ
ಪ್ರಖ್ಯಾತ ಹಳೆಯ ವಿದ್ಯಾರ್ಥಿಗಳು
ಬದಲಾಯಿಸಿಇದು ಎಂಜಿನಿಯರಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಹೆಸರು ಮಾಡಿದಂತಹ ಹಳೆಯ ವಿದ್ಯಾರ್ಥಿಗಳ ಪಟ್ಟಿಯಾಗಿದೆ:
- ಅಶ್ವಿನ್ ಕಾರ್ತಿಕ್ [೧] Archived 2018-02-27 ವೇಬ್ಯಾಕ್ ಮೆಷಿನ್ ನಲ್ಲಿ. [೨] Archived 2016-08-14 ವೇಬ್ಯಾಕ್ ಮೆಷಿನ್ ನಲ್ಲಿ., ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ಇಂದ ಬಳಲುತ್ತಿದ್ದ ಇವರು, ಪಾರ್ಶ್ವವಾಯುವಿನಿ೦ದ ಅಂಗಾಂಗಗಳ ಸ್ವಾಧೀನ ಕಳೆದುಕೊಂಡ ಇವರು, ಕಂಪ್ಯೂಟರ್ ಸೈನ್ಸ್ ನಲ್ಲಿಎಂಜಿನಿಯರಿಂಗ್ ಪದವಿ ಪಡೆದ ಭಾರತದ ಮೊದಲ ವಿದ್ಯಾರ್ಥಿ. ಅವರ ಸ್ನೇಹಿತ, ಭರತ್, ಅಶ್ವಿನ್ ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು.