ಅವಿನಾಶ್ ಕಾಮತ್
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಜನನ, ವಿದ್ಯಾಭ್ಯಾಸ, ಕುಟುಂಬಸಂಪಾದಿಸಿ
ಅವಿನಾಶ್ ಕಾಮತ್ ಅವರು ಏಪ್ರಿಲ್ ೨೬, ೧೯೭೭ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಹಿಂದುಸ್ಥಾನಿ ಗಾಯಕ ಎಮ್. ಎಸ್. ಕಾಮತ್ ಮತ್ತು ತಾಯಿ ಪದ್ಮಾ ಕಾಮತ್. ಕಾಮತರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಮತ್ತು ಉನ್ನತ ಶಿಕ್ಷಣ ಮುಂಬೈನಲ್ಲಾಯಿತು. ನಾಲ್ಕನೇ ತರಗತಿಯಲ್ಲಿದ್ದಾಗಲೇ ಅಭಿನಯಕ್ಕಾಗಿ ರಾಜ್ಯಮಟ್ಟದ ಪ್ರಥಮ ಬಹುಮಾನ ಪಡೆದವರು. ಆಕಾಶವಾಣಿಯ ಬಾಲಕಲಾವಿದರೂ ಆಗಿದ್ದರು. ೧೯೯೮ರಲ್ಲಿ ಮುಂಬೈನ ಕನ್ನಡ ರಂಗಭೂಮಿಯ ನಿರ್ದೇಶಕರಾದ ಭರತ್ ಕುಮಾರ್ ಪೊಲಿಪು ಅವರ ನಿರ್ದೇಶನದಲ್ಲಿ, ಶ್ರೀರಂಗರು ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸಿದರು.
ಅಭಿನಯಿಸಿದ ನಾಟಕಗಳುಸಂಪಾದಿಸಿ
- ಗುಮ್ಮನೆಲ್ಲಿಹ ತೋರಮ್ಮ (ರಚನೆ: ಶ್ರೀರಂಗ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಕೈಗೆ ಬಂದ ತುತ್ತು (ರಚನೆ ಮತ್ತು ನಿರ್ದೇಶನ: ಬಾಲಕೃಷ್ಣ ನಿಡ್ವಣ್ಣಾಯ)
- ಗೌರಿ (ರಚನೆ ಮತ್ತು ನಿರ್ದೇಶನ: ವಸಂತ ಹೆರಳೆ)
- ಆಷಾಢದ ಒಂದು ದಿನ ( ರಚನೆ: ಹಿಂದಿ ಮೂಲ-ಮೋಹನ್ ರಾಕೇಶ್, ಕನ್ನಡಕ್ಕೆ- ಸಿದ್ಧಲಿಂಗ ಪಟ್ಟಣಶೆಟ್ಟಿ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ರಾವಿ ನದಿ ದಂಡೆಯಲ್ಲಿ (ರಚನೆ:ಮೂಲ-ಅಸ್ಘರ್ ವಜಾಹತ್, ಕನ್ನಡಕ್ಕೆ- ಡಾ.ತಿಪ್ಪೇಸ್ವಾಮಿ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ನಟ ಸಾಮ್ರಾಟ (ರಚನೆ: ಮರಾಠಿ ಮೂಲ-ವಿ.ವ.ಶಿರ್ವಡ್ಕರ್, ಕನ್ನಡಕ್ಕೆ- ಕೆ.ಜೆ.ರಾವ್, ನಿರ್ದೇಶನ: ಗುಣಪಾಲ ಉಡುಪಿ)
- ಆಟ (ರಚನೆ ಮತ್ತು ನಿರ್ದೇಶನ: ಅವಿನಾಶ್ ಕಾಮತ್)
- ಶಾಂಡಿಲ್ಯ ಪ್ರಹಸನ (ರಚನೆ: ಕನ್ನಡಕ್ಕೆ- ಕೆ.ವಿ.ಸುಬ್ಬಣ್ಣ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಪುಷ್ಪರಾಣಿ (ರಚನೆ: ಚಂದ್ರಶೇಖರ ಕಂಬಾರ, ನಿರ್ದೇಶನ: ಜಯಲಕ್ಷ್ಮೀ ಪಾಟೀಲ್)
- ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ (ರಚನೆ: ಶ್ರೀರಂಗ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಅಂಬೆ (ರಚನೆ: ಕನ್ನಡಕ್ಕೆ- ಸರಜೂ ಕಾಟ್ಕರ್, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಮೃಗತೃಷ್ಣ (ರಚನೆ:ವಸುಮತಿ ಉಡುಪ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಮಣ್ಣದ ಲೆಪ್ಪು (ತುಳು ನಾಟಕ) (ರಚನೆ: ಮೂಲ-ವಸುಮತಿ ಉಡುಪ, ತುಳುವಿಗೆ- ಶಿಮುಂಜೆ ಪರಾರಿ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಒರಿ ಮಾಸ್ಟ್ರೆನ ಕತೆ (ತುಳು ನಾಟಕ) (ಹಿಂದಿ ಮೂಲ: ಡಾ. ಶಂಕರ್ ಶೇಷ್, ತುಳುವಿಗೆ- ಗಂಗಾಧರ ಫಣಿಯೂರು, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಇನ್ನೊಬ್ಬ ದ್ರೋಣಾಚಾರ್ಯ (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಆರ್.ಲಕ್ಷ್ಮೀನಾರಾಯಣ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಮಾಯಾವಿ ಸರೋವರ (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಮೈ.ಶ್ರೀ. ನಟರಾಜ್, ನಿರ್ದೇಶನ: ಅಹಲ್ಯ ಬಲ್ಲಾಳ್)
- ಆಟಿ ತಿಂಗೊಲ್ದ ಒಂಜಿ ದಿನ (ಹಿಂದಿ ಮೂಲ: ಮೋಹನ್ ರಾಕೇಶ್, ಕನ್ನಡಕ್ಕೆ - ಸಿದ್ದಲಿಂಗ ಪಟ್ಟಣಶೆಟ್ಟಿ, ತುಳುವಿಗೆ - ಭರತ್ ಕುಮಾರ್ ಪೊಲಿಪು, ನಿರ್ದೇಶನ: ಭರತ್ ಕುಮಾರ್ ಪೊಲಿಪು)
ಪ್ರಶಸ್ತಿ-ಪುರಸ್ಕಾರಸಂಪಾದಿಸಿ
- ಮಾಟುಂಗ ಕರ್ನಾಟಕ ಸಂಘ ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕುವೆಂಪು ನಾಟಕ ಸ್ಪರ್ಧೆ’ - ‘ಆಟ’ ನಾಟಕಕ್ಕೆ ಅತ್ಯುತ್ತಮ ನಟ ಪ್ರಶಸ್ತಿ
- 'ಸ್ನೇಹ ಸಂಬಂಧ ಪತ್ರಿಕೆ'ಯು ಆಯೋಜಿಸುವ ರಾಷ್ಟ್ರ ಮಟ್ಟದ ಸಾಹಿತ್ಯಸ್ಪರ್ಧೆಯ ನಾಟಕ ವಿಭಾಗ - ‘ಅತ್ಯುತ್ತಮ ನಾಟಕ ಪ್ರಥಮ’ ಪ್ರಶಸ್ತಿ
- ೨೦೧೧ರ ಡಿಸೆಂಬರ್ನಲ್ಲಿ ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆ - ’ಒರಿ ಮಾಸ್ಟ್ರೆನ ಕತೆ’ ನಾಟಕದ ಸಂಗೀತಕ್ಕೆ ಮೂರನೇ ಅತ್ಯುತ್ತಮ ಸಂಗೀತ ಪ್ರಶಸ್ತಿ
ಚಿತ್ರಗಳುಸಂಪಾದಿಸಿ
- Gummanellihatoramma1.JPG