ಅಣಕು ರಾಮನಾಥ್
ಈ ಲೇಖನವು ಅಪೂರ್ಣವಾಗಿದೆ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಅಣಕು ರಾಮನಾಥ್ (24 ಏಪ್ರಿಲ್ 1962 -) ಎಂಬ ಕಾವ್ಯನಾಮದಿಂದ ಜನಪ್ರಿಯವಾಗಿರುವ ನರಸಿಂಹಮೂರ್ತಿ ರಾಮನಾಥ್ ಒಬ್ಬ ಹಿರಿಯ ಲೇಖಕ, ಹಾಸ್ಯಗಾರ, ಅಂಕಣಕಾರ ಪತ್ರಕರ್ತ, ವಿಮರ್ಶಕ, ಪ್ರಕಾಶಕ ಮತ್ತು ಅನುವಾದಕರಾಗಿ ಮುಖ್ಯವಾಗಿ ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಪ್ರಕಾಶನ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸುಧಾ, ವಿಜಯ ಕರ್ನಾಟಕ ಮತ್ತು ಅಪರಂಜಿ ಸೇರಿದಂತೆ ಹಲವಾರು ಪ್ರಮುಖ ಕನ್ನಡ ದೈನಿಕ, ಸಾಪ್ತಾಹಿಕ, ಮತ್ತು ಮಾಸಿಕ ಪತ್ರಿಕೆಗಳಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕನ್ನಡದಲ್ಲಿ ವಿಡಂಬನೆ, ಲಲಿತ ಪ್ರಬಂಧಗಳು, ಹಾಸ್ಯ ಅಂಕಣಗಳು ಮತ್ತು ಸಣ್ಣ ಕಥೆಗಳಲ್ಲದೇ ಅನೇಕ ಕಾದಂಬರಿಯೇತರ ಸಾಹಿತ್ಯದ ಪುಸ್ತಕಗಳನ್ನೂ ಬರೆದಿದ್ದಾರೆ.ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2020ರ ಪುರಸ್ಕೃತರಾಗಿದ್ದಾರೆ. ಅದೇ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಅಣಕು ರಾಮನಾಥ್ | |
---|---|
ಜನನ | ಬೆಂಗಳೂರು, ಬೆಂಗಳೂರು ನಗರ ಜಿಲ್ಲೆ, ಕರ್ನಾಟಕ, ಭಾರತ | ೨೪ ಏಪ್ರಿಲ್ ೧೯೬೨
ಕಾವ್ಯನಾಮ | ಅಣಕು ರಾಮನಾಥ್ |
ವೃತ್ತಿ | ಹಾಸ್ಯ ಸಾಹಿತಿಗಳು, ಕಥೆಗಾರರು, ಅನುವಾದಕರು, ಪ್ರಕಾಶಕರು, ಮತ್ತು ವಿಮರ್ಶಕರು |
ರಾಷ್ಟ್ರೀಯತೆ | ಭಾರತ |
ಪ್ರಕಾರ/ಶೈಲಿ | ಹಾಸ್ಯ ಸಾಹಿತ್ಯ, ಲಲಿತ ಪ್ರಬಂಧ, ಕಾದಂಬರಿಯೇತರ ಸಾಹಿತ್ಯ |
ವಿಷಯ | ಕನ್ನಡ |
ಸಾಹಿತ್ಯ ಚಳುವಳಿ | ಕನ್ನಡ ಪ್ರಗತಿಶೀಲ ಸಾಹಿತ್ಯ |
ಜನನ, ಜೀವನ ಬದಲಾಯಿಸಿ
ಸಾಹಿತ್ಯ ಬದಲಾಯಿಸಿ
ಇವರ ಕೃತಿಗಳನ್ನು ತೇಜು ಪಬ್ಲಿಕೇಶನ್ಸ್, ನ್ಯೂ ವೇವ್ ಬುಕ್ಸ್ ಮತ್ತು ಶ್ರೀನಿವಾಸ ಪ್ರಕಾಶನದಡಿಯಲ್ಲಿ ಸ್ವತಃ ತಾವೇ ಪ್ರಕಟಿಸಿದ್ದಾರೆ