ಹೆಚ್. ಎಲ್. ದತ್ತು
ಹೆಚ್ ಎಲ್ ದತ್ತು ಭಾರತದ ಪೂರ್ವ ಮುಖ್ಯ ನ್ಯಾಯಮೂರ್ತಿ. ಹುಟ್ಟಿದ್ದು ೩ ಡಿಸೆಂಬರ್ ೧೯೫೦ ರಂದು. ಬಳ್ಳಾರಿ ಜಿಲ್ಲೆಯ ಹಂದ್ಯಾಲ ಗ್ರಾಮದಲ್ಲಿ ಜನನ. ದತ್ತು ಬೆಂಗಳೂರು ಬಾರ್ ಕೌನ್ಸಿಲ್ ನಲ್ಲಿ ಅಕ್ಟೋಬರ್ ೨೩,೧೯೭೫ ರಂದು ವಕೀಲರಾಗಿ ನೊಂದಾಯಿಸಿಕೊಂಡರು.
ನ್ಯಾಯಮೂರ್ತಿ ಹಂದ್ಯಾಲ ಲಕ್ಷ್ಮಿನಾರಾಯಣ ದತ್ತು | |
---|---|
![]() | |
೪೨ನೆಯ ಭಾರತದ ಮುಖ್ಯ ನ್ಯಾಯಾಧೀಶರು
| |
ಅಧಿಕಾರ ಅವಧಿ ೨೮ ಸೆಪ್ಟೆಂಬರ್ ೨೦೧೪ – ೨ ಡಿಸೆಂಬರ್ ೨೦೧೫ | |
Appointed by | ಪ್ರಣಬ್ ಮುಖರ್ಜಿ |
ಪೂರ್ವಾಧಿಕಾರಿ | ರಾಜೇಂದ್ರಮಲ್ ಲೋಧಾ |
ಉತ್ತರಾಧಿಕಾರಿ | ಟಿ. ಎಸ್. ಠಾಕೂರ್ |
ನ್ಯಾಯಮೂರ್ತಿ, ಭಾರತದ ಸರ್ವೋಚ್ಛ ನ್ಯಾಯಾಲಯ
| |
ಅಧಿಕಾರ ಅವಧಿ ೧೭ ಡಿಸೆಂಬರ್ ೨೦೦೮ – ೨೮ ಸೆಪ್ಟೆಂಬರ್ ೨೦೧೪ | |
ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ
| |
ಅಧಿಕಾರ ಅವಧಿ ೧೮ ಡಿಸೆಂಬರ್ ೧೯೯೫ – ೧೨ ಫೆಬ್ರುವರಿ ೨೦೦೭ | |
ಛತ್ತೀಸ್ಗಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
| |
ಅಧಿಕಾರ ಅವಧಿ ೧೨ ಫೆಬ್ರುವರಿ ೨೦೦೭ – ೧೮ ಮೇ ೨೦೦೭ | |
ಕೇರಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
| |
ಅಧಿಕಾರ ಅವಧಿ ೧೮ ಮೇ ೨೦೦೭ – ೧೭ ಡಿಸೆಂಬರ್ ೨೦೦೮ | |
ವೈಯಕ್ತಿಕ ಮಾಹಿತಿ | |
ಜನನ | ಚಿಕ್ಕ ಪಟ್ಟಣಗೆರೆ, ಚಿಕ್ಕಮಗಳೂರು, ಮೈಸೂರು ರಾಜ್ಯ, ಭಾರತ | ೩ ಡಿಸೆಂಬರ್ ೧೯೫೦
ಜನ್ಮಸ್ಥಳಸಂಪಾದಿಸಿ
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಪಟ್ಟಣಗೆರೆ ಎಂಬ ಒಂದು ಸಣ್ಣ ಹಳ್ಳಿಯಲ್ಲಿ ಜಸ್ಟೀಸ್ ದತ್ತು ಜನಿಸಿದರು. ಕಡೂರು, ತರೀಕೆರೆ, ಬೀರೂರುಗಳಲ್ಲಿ ತಮ್ಮ ಆರಂಭಿಕ ಶಿಕ್ಷಣ ಮಾಡಿದರು, ಉನ್ನತ ಶಿಕ್ಷಣಕ್ಕೆ ಬೆಂಗಳೂರು ಹೋದರು. ಅವರ ತಂದೆ ಎಚ್. ಎಲ್. .ನಾರಾಯಣಸ್ವಾಮಿ ಒಬ್ಬ ಇಂಗ್ಲೀಷ್ ಶಿಕ್ಷಕರಾಗಿದ್ದರು. ಅವರು ಬೆಂಗಳೂರಿನಲ್ಲಿ ತಮ್ಮ ಬಿಎಸ್ಸಿ- ಎಲ್ಎಲ್ಬಿಯನ್ನು ಪೂರ್ಣಗೊಳಿಸಿದರು 1975 ರಿಂದ ವಕೀಲಿ ವೃತ್ತಿ ಆರಂಭಿಸಿದರು -ಅವರು ನಾಗರಿಕ, ಕ್ರಿಮಿನಲ್, ತೆರಿಗೆ ಮತ್ತು ಸಾಂವಿಧಾನಿಕ ಪ್ರಕರಣಗಳು ಮತ್ತು ಎಲ್ಲಾ ರೀತಿಯ ವಿಷಯಗಳ ನಿರ್ವಹಣೆ ಮಾಡಿದರು [೧]
ವಕೀಲರಾಗಿಸಂಪಾದಿಸಿ
- ೧೯೭೫-೮೩ ನಾಗರಿಕ ಕಾಯ್ದೆ, ಅಪರಾಧ, ಸಾಂವಿಧಾನಿಕ ಮತ್ತು ತೆರಿಗೆ ವಿಷಯಗಳಲ್ಲಿ ವಕೀಲಿ ವೃತ್ತಿ.
- ೧೯೮೩-೯೦ ಕರ್ನಾಟಕ ರಾಜ್ಯ ಮಾರಾಟ ತೆರಿಗೆ ಇಲಾಖೆಯ ಕಾನೂನು ಸಲಹೆಗಾರ
- ೧೯೯೦-೯೩ ಸರ್ಕಾರಿ ವಕೀಲ, ಕಾನೂನು ಇಲಾಖೆ
- ೧೯೯೨-೯೩ ಕಾನೂನು ಸಲಹೆಗಾರ, ಆದಾಯ ತೆರಿಗೆ ಇಲಾಖೆ
- ೧೯೯೩-೯೫ ಹಿರಿಯ ಕಾನೂನು ಸಲಹೆಗಾರ, ಆದಾಯ ತೆರಿಗೆ ಇಲಾಖೆ
ಮುಂದೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ನ್ಯಾ.ಎಸ್. ರಾಜೇಂದ್ರ ಬಾಬುರನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ.
ನ್ಯಾಯಮೂರ್ತಿಯಾಗಿಸಂಪಾದಿಸಿ
- ೧೮ ಡಿಸೆಂಬರ್ ೧೯೯೫-೧೧ ಫ಼ೆಬ್ರವರಿ ೨೦೦೭ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ
- ೧೨ ಫ಼ೆಬ್ರವರಿ ೨೦೦೭ - ೧೭ ಮೇ ೨೦೦೭ ಮುಖ್ಯ ನ್ಯಾಯಮೂರ್ತಿ, ಛತ್ತೀಸ್ ಗಢ ಉಚ್ಚ ನ್ಯಾಯಾಲಯ
- ೧೮ ಮೇ ೨೦೦೭- ೧೬ ಡಿಸೆಂಬರ್ ೨೦೦೮ ಮುಖ್ಯ ನ್ಯಾಯಮೂರ್ತಿ, ಕೇರಳ ಉಚ್ಚ ನ್ಯಾಯಾಲಯ
- ೧೭ ಡಿಸೆಂಬರ್ ೨೦೦೮ - ೨೭ ಸೆಪ್ಟಂಬರ್ ೨೦೧೪ ನ್ಯಾಯಮೂರ್ತಿ, ಭಾರತದ ಸರ್ವೋಚ್ಛ ನ್ಯಾಯಾಲಯ
- ೨೮ ಸೆಪ್ಟಂಬರ್ ೨೦೧೪ - *(೨ ಡಿಸೆಂಬರ್ ೨೦೧೫) , ೪೨ನೇ ಮುಖ್ಯ ನ್ಯಾಯಮೂರ್ತಿ,ಭಾರತದ ಸರ್ವೋಚ್ಛ ನ್ಯಾಯಾಲಯ
[೨]
ಭಾರತದ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಯ ಸ್ಥಾನ ಬಲದಿಂದ ದತ್ತು ಅವರು, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಜನರಲ್ ಕೌನ್ಸಿಲ್ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ದತ್ತು ೧೫ ತಿಂಗಳ ದೀರ್ಘಕಾಲ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿರುತ್ತಾರೆ.
ವ್ಯಕ್ತಿತ್ವಸಂಪಾದಿಸಿ
ದತ್ತು ಬೆಂಗಳೂರು ರೋಟರಿ ಕ್ಲಬ್ ನ ಸದಸ್ಯರು. ಕರ್ನಾಟಕ ಸಂಗೀತ ಕೇಳುವುದು ಅವರ ಪ್ರಿಯ ಹವ್ಯಾಸ .[೩]
ಉಲ್ಲೇಖಗಳುಸಂಪಾದಿಸಿ
- ↑ http://indianexpress.com/article/india/india-others/next-chief-justice-a-court-employee-who-guards-his-personal-space/99/
- ↑ http://supremecourtofindia.nic.in/judges/sjud/hldattu.htm
- ↑ http://www.newindianexpress.com/nation/Justice-H-L-Dattu-Sworn-in-as-Chief-Justice-of-India/2014/09/28/article2453479.ece
ಬಾಹ್ಯ ಕೊಂಡಿಗಳುಸಂಪಾದಿಸಿ
- ೨ಜಿ ಹಗರಣದ ಅಪರಾಧಿಗಳಿಗೆ, ೨೦೧೨ರಲ್ಲಿ ಜಾಮೀನು ಮಂಜೂರು ಮಾಡಿದ್ದು ಸುದ್ದಿಗೆ ಗ್ರಾಸವಾಯಿತು. ಆರ್ಟಿಕಲ್ ೨೧ರ ಪ್ರಕಾರ ವಿಚಾರಣಾಧೀನ ಅಪರಾಧಿಗಳು ಜೈಲಿನಲ್ಲಿ ಜಾಮೀನು ಸಿಗದೇ ಇರುವುದು ತಪ್ಪು ಎಂಬುದು ದತ್ತುರ ತೀರ್ಪಾಗಿತ್ತು.
- ೧೯೯೭ರ ದಿಲ್ಲಿ ಬಾಂಬ್ ಸ್ಫೋಟದ ಆರೋಪಿ ಪಾಕಿಸ್ತಾನ ಮೂಲದ ಮೊಹಮ್ಮದ್ ಹುಸೇನ್ ಉರುಫ಼್ ಜ಼ುಲ್ಫ಼ಿಕರ್ ಅಲಿಯ ಮರಣ ದಂಡನೆಯನ್ನು ೨೦೧೨ರ ಸೆಪ್ಟಂಬರ್ ನಲ್ಲಿ ರದ್ದುಗೊಳಿಸಿ, ಮರು ವಿಚಾರಣೆಗೆ ಆದೇಶಿಸಿದ್ದೂ ಕೂಡ ಚರ್ಚಾಸ್ಪದವಾದ ತೀರ್ಪು.