ನಾನು ಸಚ್ಚಿದಾನಂದ ಆಚಾರ್ಯ ಎನ್ ಪ್ರಸ್ತುತ ಎಸ್.ಡಿ.ಎಂ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದೇನೆ. ವಿಜ್ಞಾನ ವಿಷಯದಲ್ಲಿ ಪದವಿ ಮುಗಿಸಿದ ನಾನು, ಇದು ನನ್ನ ಸರಿಯಾದ ಕಾರ್ಯಕ್ಷೇತ್ರವಲ್ಲ ಎಂದು ನೋಟ ಬದಲಿಸಿದ್ದೇನೆ. ಅರ್ಥಾತ್ ಈಗ ನನ್ನ ಅಂತರಂಗದ ಧ್ವನಿಯಲ್ಲಿ ದಾರಿ ಹುಡುಕಿದ್ದೇನೆ. ಬರೆವಣಿಗೆಯಲ್ಲಿ ಉದ್ಯಮಕ್ಕಿಂತ ಮಿಗಿಲಾಗಿ ಸೇವೆಯನ್ನು ಹುಡುಕುವುದು ನನ್ನ ಜೀವನದ ಹಾದಿ. ರಾಜಕೀಯ, ಪ್ರಾಕೃತಿಕ ಪರಿಸರ, ಜನಪರ ಪತ್ರಿಕೋದ್ಯಮ ನನ್ನ ಆಸಕ್ತಿಗಳು. ಬರೆವಣಿಗೆಯ ಶೈಲಿಗಿಂತ, ಬರೆಯುವ ವಿಷಯ ಮುಖ್ಯ ಎಂದು ನಂಬಿರುವವನು. ಬರೆವಣಿಗೆಯ ಕೌಶಲ್ಯ ‘ಕೆಲವರ’ ಅಭಿವೃದ್ಧಿಯ ಬದಲು ‘ಹಲವರ’ ಕ್ಷೇಮಾಭಿವೃದ್ಧಿಗೆ ಉಪಯೋಗವಾದರೆ ಒಳಿತು ಎಂಬುದು ನನ್ನ ಅಭಿಪ್ರಾಯ. ತೆರೆದ ಮನಸ್ಸು ನನ್ನ ಶಕ್ತಿ. ಬರೆವಣಿಗೆಯ ಬಾಲ್ಯ ಈಗಿನ್ನೂ ಆರಂಭವಾಗಿದೆ. ಬೀಳುತ್ತಿದ್ದೇನೆ; ಎದ್ದು ನಿಲ್ಲುವ ದಾರಿಯಲ್ಲಿ.