ನನ್ನ ಹೆಸರು ಪವಿತ್ರ. ಮೂಲತಃ ಕುಂದಾಪುರದ ಬಿದ್ಕಲ್ಕಟ್ಟೆಯವಳಾದ ನಾನು ಕಳೆದ ೩ ವರ್ಷಗಳಿಂದ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಇದೀಗಷ್ಟೇ ಸ್ನಾತಕೋತ್ತರ ವ್ಯಾಸಂಗದಲ್ಲಿ ಪತ್ರಿಕೋದ್ಯಮ ಆಯ್ದುಕೊಂಡಿದ್ದು ಮಾಧ್ಯಮ ಕ್ಷೇತ್ರದಲ್ಲಿ ಅಗಾಧ ಧನಾತ್ಮಕ ಕೃಷಿ ಮಾಡಬೇಕೆಂಬುದು ನನ್ನ ಉದ್ದೇಶ. ಭಾಷಣ ಮಾಡುವುದು ನನ್ನ ಹವ್ಯಾಸ. ಇದುವರೆಗೂ ನೂರಕ್ಕೂ ಅಧಿಕ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವವಿದೆ.