ಯು.ಎಸ್.ಶ‍್ರೀಧರ್ ಆರಾಧ್ಯ :

    ಕೊಡಗಿನ ಮಾದಾಪುರುವ ಶ‍್ರೀಮತಿ ಡಿ.ಚೆನ್ನಮ್ಮ ಪದವಿ ಪೂ‍ರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿರುವ ಯು.ಎಸ್.ಶ‍್ರೀಧರ್ ಆರಾಧ್ಯರು ೧೯.೪.೧೯೫೩ರಲ್ಲಿ ಶೀವಮೊಗ್ಗ ಜಿಲ್ಲೆಯ ಉರಗಡೂರು ಎಂಬಲ್ಲಿ ಜನಿಸಿದರು.  ಇವರ ತಂದೆ ಯು.ಸೂರಪ್ಪಾರಾಧ್ಯ ಮತ್ತು ತಾಯಿ ಶ್ರೀಮತಿ ಲಕ್ಷ್ಮಿ ದೇವಮ್ಮ ವಿದ್ಯಾ‍ರ್ಥಿ ದೆಸೆಯಲ್ಲಿ ಹೊಸ್ಕೆರೆ ಶಿವಸ್ವಾಮಿ ಕೊ.ವಾ.ನಾಗಭೂಷಣ ಮತ್ತು ಹೆಚ.ಎಸ್.ಕೈಲಾಸ ಲಿಂಗಮ್ಮ ಜೊತೆ ಸೇರಿ ಮುಂಗಾರು ಎಂಬ ಹೆಸರಿನ ಸಂಯುಕ್ತ ಕವನ ಸಂಕಲನ ಪ್ರಕಟಿಸಿದ್ದರು.  ಇವರು ಹಲವಾರು ಬಿಡಿ ಕವನಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಇವರು ಉತ್ತಮ ವಿಮರ್ಶಕರು,ಸಂಶೋಧಕರು ಹೌದು.  ಇವರು 'ಸುವರ್ಣ' ಕಾವ್ಯ ಸಂಕಲನ ಬರೆದಿದ್ದಾರೆ.