ಸಾಹಿತ್ಯ ಮತ್ತು ಸಂಗೀತ-ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಸಾಹಿತ್ಯ ಮತ್ತು ಸಂಗೀತ ಮಾನವನಿಗೆ ಎರಡು ಕಣ್ಣುಗಳಿರುವಂತೆ.ಒಂದಕ್ಕೊಂದು ಪೂರಕ ಮತ್ತು ಪ್ರೇರಕ. ಇಂದಿನ ಬದುಕು ಬಹು ತಾಪದಿಂದ ತಲ್ಲಣಿಸುತ್ತಿದೆ. ವ್ಯಕ್ತಿಯ ಸದ್ಗುಣಗಳಾದ ಸರಳತೆ, ಸಜ್ಜನಿಕೆ, ಶ್ರದ್ದೆ, ನೀತಿ, ಶಾಂತಿ, ಶಿಸ್ತು, ಪ್ರೀತಿ, ದಯೆ,ಸಹನೆ ಮೊದಲಾದವುಗಳು ಮಲೀನಗೊಳ್ಳುತ್ತಿವೆ. ಇವುಗಳನ್ನು ಪರಿಶುದ್ದಗೊಳಿಸಲು ಸಾಹಿತ್ಯ ಮತ್ತು ಸಂಗೀತ ದಿವ್ಯ ಸಾದನಗಳಾಗಿವೆ.