ನನ್ನ ಕುಟುಂಬ ಮತ್ತು ಶಾಲಾ ದಿನಗಳು ಬದಲಾಯಿಸಿ

ನನ್ನ ಹೆಸರು ದಿವ್ಯ.ಎಸ್ ನಾನು ಕ್ರಿಸ್ತನ ವಿಶ್ವವಿದ್ಯಾಲಯದಲ್ಲಿ ಓದುದಿದ್ದೆನೆ.ನನ್ನ ಕುಟುಂಬ ಒಂದು ಸಣ್ಣ ಕುಟುಂಬ, ನನ್ನ

 
ದಿವ್ಯ ಎಸ್
ಧಾರ್ಮಿಕ ಗುರು ಸುಬ್ರಮಣಿ ಮತ್ತು ತಾಯಿಯ ಹೆಸರು ಕಲ್ಪನ , ನನ್ನ ಸಹೊದರಿಯ ಹೆಸರು ಲಿಷಾ .ಎಸ್. ನಾನು ಜನಿಸಿದ್ದು ಚೆನೈನಲ್ಲಿ  ಆದರೆ ವಾಸಿಸುತ್ತಇರುವುದು  ಬೆಂಗಳೂರು ಮಹಾನಗರದಲ್ಲಿ .

ನಾನು ಸೇಕ್ರೆಡ್ ಹಾರ್ಟ್ ಗರ್ಲ್ಸ್ ಶಾಲೆಯಿಂದ ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಾಡಿದಿನಿ ಅದೇ ಸಂಸ್ಥೆಯಲ್ಲಿ ಮತ್ತು ನಾನು ಪಿ.ಯು.ಸಿ ಪೂರ್ಣಗೊಳಿಸಿದಿನಿ.ನಾನು ಅತ್ಯಂತ ಸಕ್ರಿಯ ಹುಡುಗಿ ನಾನು ನನ್ನ ಸುತ್ತ ಎನೇನು ನಡೆಯುತ್ತಿದೆ, ಎಲ್ಲ ವಿಷಯಗಳನ್ನು ಕಲಿಯೂವ ಉತ್ಸಾಹ ನನ್ನದು.ನಾನು ಅನೇಕ ಘಟನೆಗಳು ಭಗವಹಿಸಿ ಮತ್ತು ಕೆಲವು ಬಹುಮಾನಗಳನ್ನು ಸಾಧಿಸಿದೆ.ನನ್ನ ಶಾಲಾದಿನಗಳು ಬಹಳ ಸಂತೋಷದ ಕ್ಷಣಗಳು ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ,ಯಾವುದೇ ಉದ್ವಿಗ್ನತೆ ಇಲ್ಲದೆ ನಾವು ಯಾವುದೇ ನೋವು ಇಲ್ಲದೆ ಬೆಳೆದೆವು.ನಾನು ಹುಡುಗಿಯರ ಶಾಲೆಯಲ್ಲಿ ಅಧ್ಯಯನ ಮಡಿದೆ.ನನ್ನ ಗೆಳತಿಯರ ಜೋತೆ ಇದ್ದಗ ನನು ಅನೆಕ ತುಂಟತನ ಮಡಿದ್ದಿನಿ.ಆ ತುಂಟತನ ಇಂದು ನೆನದರು ಹೆಚ್ಚು ಸಂತೋಷ.

ನಾನು ಹತ್ತನೇ ತರಗತಿಗೆ ಬಂದಾಗ ನಾವು ಊಟಿಗೆ ಶಾಲೆಯಿಂದ ಪ್ರವಾಸಕ್ಕೆ ಹೋದೆವು, ಬಹಳ ಸೌಂದರ್ಯ ಸ್ಥಾನ ತಂಪಾದ ವಾಸಸ್ಥಾನ , ನಾವು ಊಟಿಯಲ್ಲಿ ಅನೇಕ ಸ್ಥಳಗಳನ್ನು ಭೇಟಿ ಮಾಡಿದೆವು, ಊಟಿಯ ನಂತರ ನಾವು ಮಹಾಬಲಿಪುರಂಗೆ ಹೋದೆವು

ಮಹಾಬಲಿಪುರಂನ ಕೆಲವು ಇತಿಹಾಸವನ್ನು ಸಹಾ ತಿಳಿದೆವು .ಮಹಾಬಲಿಪುರಂನ ಸ್ಮಾರಕಗಳ ಸಮೂಹವು ಭಾರತದ ತಮಿಳು ನಾಡು ರಾಜ್ಯದ ಕೋರಮಂಡಲ್ ಕರಾವಳಿಯಲ್ಲಿ ಚೆನ್ನೈ ನಗರದಿಂದ ೬೫ ಕಿ.ಮೀ. ದಕ್ಷಿಣದಲ್ಲಿದೆ. ಪಲ್ಲವ ಅರಸರಿಂದ ಪ್ರತಿಷ್ಠಾಪಿಸಲ್ಪಟ್ಟ ಇವುಗಳ ಕಾಲ ೭ರಿಂದ ೮ನೆಯ ಶತಮಾನ. ಮುಖ್ಯವಾಗಿ ಶಿವನನ್ನು ಸ್ತುತಿಸುವ ಶಿಲ್ಪಗಳನ್ನು ಒಳಗೊಂಡ ಇಲ್ಲಿನ ದೇವಾಲಯಗಳು, ಮಂಟಪಗಳು ಮತ್ತು ರಥಗಳಿಗೆ ಮಹಾಬಲಿಪುರಂ ಹೆಸರಾಗಿವೆ. ಇಲ್ಲಿ ಹೆಚ್ಚಿನ ಗುಡಿಗಳನ್ನು ರಥದ ಆಕಾರದಲ್ಲಿ ನಿರ್ಮಿಸಲಾಗಿದೆ.

ನನ್ನ ಆದರ್ಶ ವ್ಯಕ್ತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಬದಲಾಯಿಸಿ

ನನಗೆ ಅಬ್ದುಲ್ ಕಲಾಂ ಎಂದರೆ ಬಹಳ ಗೌರವ  'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಇನ್ನು ನೆನಪು ಮಾತ್ರ. ರಾಷ್ಟ್ರಪತಿಯಾದರೂ ಜನಸಾಮಾನ್ಯರ ಜೊತೆ ಬೆರೆತು, ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ ಅಬ್ದುಲ್ ಕಲಾಂ ಅವರ ಸರಳ ಬದುಕು ಹಲವಾರು ಎಲ್ಲರಿಗೂ ಮಾದರಿ. [ಡಾ.ಕಲಾಂ ಸ್ಫೂರ್ತಿ ತುಂಬುವ ಹೇಳಿಕೆಗಳು]ಜು.1980ರಲ್ಲಿ ಭಾರತದ ಮೊದಲ ಉಪಗ್ರಹ ರೋಹಿಣಿಯನ್ನು ಕಕ್ಷೆ ಸೇರಿದಾದ ಅದರ ಹಿಂದೆ ಅಬ್ದುಲ್ ಕಲಾಂ ಅವರ ಶ್ರಮವಿತ್ತು. ಇಸ್ರೋದ ಪಿಎಸ್‌ಎಲ್‌ವಿ ಕಾರ್ಯಯೋಜನೆಯ ರೂವಾರಿ ಕಲಾಂ. ಡಿಆರ್‌ಡಿಒದಲ್ಲಿ ಸ್ವದೇಶೀ ತಂತ್ರಜ್ಞಾನದ ಕ್ಷಿಪಣಿ ತಯಾರಿಸುವ ತಂಡದ ಮುಖ್ಯಸ್ಥರಾಗಿದ್ದರು. [ಕಲಾಂ ಆಶಯದಂತೆ ಸರ್ಕಾರಿ ರಜೆ ಇಲ್ಲ] ಅಬ್ದುಲ್ ಕಲಾಂ 1992ರಿಂದ 1999ರ ವರೆಗೆ ರಕ್ಷಣಾ ಸಚಿವರ ಸಲಹೆಗಾರರಾಗಿದ್ದರು. ಅಣುಶಕ್ತಿ ಆಯೋಗದ ಸಹಭಾಗಿತ್ವದಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಯ ನೇತೃತ್ವ ವಹಿಸಿದ್ದರು. ಹಗುರ ಯುದ್ಧ ವಿಮಾನಗಳ ನಿರ್ಮಾಣ ಯೋಜನೆಗೂ ಕಲಾಂ ಅವರ ಕೊಡುಗೆ ಅಪಾರವಾಗಿದೆ.

ಡಾ|| ಎ.ಪಿ.ಜೆ ಅಬ್ದುಲ್ ಕಲಾಂನವರ ಸಾದನೆಗಳು ಬದಲಾಯಿಸಿ

ಅಬ್ದುಲ್ ಕಲಾಂ ಭಾರತದ 11ನೇ ರಾಷ್ಟ್ರಪತಿಯಾಗಿ ಜುಲೈ 22, 2002ರಂದು ಆಯ್ಕೆಯಾದರು. ಲೇಖಕರಾಗಿದ್ದ ಕಲಾಂ ಅವರು 'ವಿಂಗ್ಸ್ ಆಫ್ ಫೈರ್' ಸೇರಿದಂತೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಜೀವನದ ಬಗ್ಗೆ ಅಬ್ದುಲ್ ಕಲಾಂ ಅವರು ಹೇಳಿದ ಮಾತುಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿ ತುಂಬುತ್ತಿವೆ. ಕಲಾಂ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ 1981ರಲ್ಲಿ ಪದ್ಮಭೂಷಣ, 1990ರಲ್ಲಿ ಪದ್ಮ ವಿಭೂಷಣ, 1997ರಲ್ಲಿ ದೇಶದ ಅತ್ಯುನ್ನುತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಸುಮಾರು ಮೂವತ್ತು ವಿಶ್ವವಿದ್ಯಾಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ.

ನನ್ನ ಜೀವನದಲ್ಲಿ ನನ್ನ ತಾಯಿಯ ಪಾತ್ರ ಬದಲಾಯಿಸಿ

ಅಮ್ಮಂದಿರ ಪ್ರಪಂಚವೇ ಅಂಥಹದು. ತನ್ನ ಮಕ್ಕಳು, ಗಂಡ ಇವೇ ಅವಳಿಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರ ಬರುವ ಅವಕಾಶ ಇದ್ದರೂ ಆಕೆಗೆ ಅದರಲ್ಲೇ ಸಂತೋಷವಿದೆ. ತೃಪ್ತಿಯಿದೆ. ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಅಮ್ಮನ ವಾತ್ಸಲ್ಯ, ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. "ತಾಯಿಗಿಂತ ಬಂಧುವಿಲ್ಲ. ಉಪ್ಪಿಗಿಂತಾ ರುಚಿ ಇಲ್ಲ" ಹೌದು... ಗಾದೆಗಳೆಲ್ಲಾ ಅನುಭವದ ಮಾತುಗಳೇ. ಈ ಗಾದೆ ಎಷ್ಟು ಅರ್ಥಬದ್ಧವಾಗಿ ತಾಯಿಯ ಪ್ರಾಮುಖ್ಯತೆಯನ್ನು ಹೇಳುತ್ತಿದೆ. ತಾಯಿಯೇ ಮಕ್ಕಳ ಪಾಲಿಗೆ ಅಪರಂಜಿ ಮನಸಿನ ಸಂಬಂಧಿ. ತಾಯಿಯೇ ಜೀವಂತ ದೇವತೆ. ಮಕ್ಕಳನ್ನು ಹೆತ್ತು ಹೊತ್ತು ಒಂದು ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವಾದದ್ದು. ತಾಯಿಯೇ ಮಕ್ಕಳ ಒಳ್ಳೆಯ ಭವಿಷ್ಯ ನಿರ್ಮಿಸುವ ಶಿಲ್ಪಿಯಾಗಿರುತ್ತಾಳೆ ಎಂಬುದೆಲ್ಲ ಸರ್ವಕಾಲಿಕ ಸತ್ಯ. ಇದು ಯಾವ ಕಾಲಕ್ಕೂ ಬದಲಾಗಲೂ ಸಾಧ್ಯವೇ ಇಲ್ಲ.

ನಾನು ಬೆಳಗ್ಗೆ ಏಳುವದು ದಿನಾಲೂ ತಡವಾಗುತ್ತದೆ. ಕಾಲೇಜಿಗೆ ಹೋಗಬೇಕು ,ಬೇಗ ಏಳೋಕೆ ಆಗಲ್ಲಾ ಎನ್ನುವ ಅಮ್ಮನ ಮಂತ್ರಾಕ್ಷತೆ ದಿನವೂ ತಪ್ಪದೇ ಸಿಗುತ್ತದೆ. ಒಂದು ದಿನ ಕಾಲೇಜಿಗೆ ಹೊರಡುವದು ಸ್ವಲ್ಪ ತಡವಾಗಿತ್ತು. ಅಮ್ಮನು ನನ್ನ ಹಿಂದೆ ಗೇಟ್ ತನಕ ಬಂದಳು. ಅಮ್ಮ ನೀನೇಕೆ ಬಂದೆ? ನನ್ನ ಹಿಂದೆ ಎಂದು ಕೇಳಿದೆ. ನಿನಗೆ ಲೇಟ್ ಆಗುತ್ತದೆಯಲ್ಲಾ ಅದಕ್ಕೆ ನೀನು ಗಾಡಿ ತೆಗೆದುಕೊಂಡು ಬರುವಷ್ಟರಲ್ಲಿ ನಾನು ಗೇಟ್ ತೆಗೆಯಲು ಬಂದೆ ಎಂದು ಹೇಳಿದಳು. ಅಮ್ಮಾ ನೀನು ನನ್ನ ಸೇವಕಿಯಲ್ಲ. ಇನ್ನು ಮುಂದೆ ಈತರ ಮಾಡಬೇಡ ಎಂದು ಹೇಳಿದೆ. ನನಗೆ ಅಮ್ಮನ ನೋಡಿ ಪಾಪ ಎನಿಸಿತ್ತು. ತಾಯಿ ಮಕ್ಕಳ ವಿಷಯದಲ್ಲಿ ಎಷ್ಟು ಮುಗ್ಧಳಾಗುತ್ತಾಳೆ. ನನಗೆ ಲೇಟ್ ಆಗುತ್ತಿದೆ ಎಂದು ಎನಿಸಿ ಅವಳ ಕೆಲಸವನ್ನು ಬಿಟ್ಟು ನನಗೆ ಗೇಟ್ ತೆಗೆಯಲು ಸಹಿತ ಬಂದಳು. ಏನು ಅರಿಯದ ಕಂದಮ್ಮನ ಭಾವ ಅವಳಲ್ಲಿ ಕಾಣುತ್ತಿತ್ತು.ಹೀಗೆ ಅನೇಕ ವಿಷಯಗಳನ್ನು ನನ್ನ ತಾಯಿಯ ಬಗ್ಗೆ ಹೆಳಬಹುದು

ಸ್ನೇಹದ ಬಗ್ಗೆ ನನ್ನ ಅಭಿಪ್ರಾಯ ಬದಲಾಯಿಸಿ

ಸ್ನೇಹ ಎರಡು ಅಥವಾ ಹೆಚ್ಚು ಜನರ ನಡುವೆ ಪರಸ್ಪರ ಪ್ರೀತಿ ಸಂಬಂಧ.. ಸ್ನೇಹವು ಸಮಾಜಶಾಸ್ತ್ರ, ಸಾಮಾಜಿಕ ಮನೋವಿಜ್ಞಾನ, ಮಾನವಶಾಸ್ತ್ರ, ಮತ್ತು ತತ್ವಶಾಸ್ತ್ರ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಲಾಗಿದೆ. ಸ್ನೇಹದ ವಿವಿಧ ಶೈಕ್ಷಣಿಕ ಸಿದ್ಧಾಂತಗಳು ಸಾಮಾಜಿಕ ವಿನಿಮಯ ಸಿದ್ಧಾಂತ, ಇಕ್ವಿಟಿ ಸಿದ್ಧಾಂತ, ಸಂಬಂಧಿತ ತತ್ತ್ವಜಿಜ್ಞಾಸೆಗಳು, ಮತ್ತು ಬಾಂಧವ್ಯ ಶೈಲಿಗಳು ಸೇರಿದಂತೆ ಪ್ರಸ್ತಾಪಿಸಲಾಗಿದೆ. ಒಂದು ವಿಶ್ವ ಹ್ಯಾಪಿನೆಸ್ ಡೇಟಾಬೇಸ್ ಅಧ್ಯಯನ ಪ್ರಕಾರ ನಿಕಟ ಸ್ನೇಹ ಜನರಿಗೆ ಸಂತೋಷ ಕೊಡುತ್ತದೆ.

ಸ್ನೇಹ ಸ್ಥಳದಿಂದ ಸ್ಥಳಕ್ಕೆಹಲವು ರೂಪಗಳಲ್ಲಿ, ಬದಲಾಗಬಹುದು ಸ್ನೇಹ , ಕೆಲವು ಗುಣಲಕ್ಷಣಗಳನ್ನು ಸ್ನೇಹದ ಅನೇಕ ರೀತಿಯ ಇರುತ್ತವೆ. ಅಂತಹ ಗುಣಲಕ್ಷಣಗಳನ್ನು ಪ್ರೀತಿ, ಸಹಾನುಭೂತಿ, ಅನುಭೂತಿ, ಪ್ರಾಮಾಣಿಕತೆ, ಪರೋಪಕಾರ ಬುದ್ಧಿ, ಪರಸ್ಪರ ಸಾಮರಸ್ಯ ಮತ್ತು ಸಹಾನುಭೂತಿ, ಪರಸ್ಪರರ ಕಂಪನಿ ಸಂತೋಷಕ್ಕಾಗಿ, ಟ್ರಸ್ಟ್, ಮತ್ತು, ತನ್ನನ್ನೇ ಎಂದು ಒಬ್ಬರ ಭಾವನೆಗಳನ್ನು ವ್ಯಕ್ತಪಡಿಸಲು, ಮತ್ತು ಸ್ನೇಹಿತರ ತೀರ್ಪು ಭಯವಿಲ್ಲದೇ ತಪ್ಪುಗಳನ್ನು ತಿದ್ದುವ ಸಾಮರ್ಥ್ಯ ಇದೆ.

 This user is a member of WikiProject Education in India



ಉಪಪುಟಗಳು ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Divyalisha